Tag: priyanka chopra

  • ಮದುವೆಗೆ ಸಜ್ಜಾದ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ

    ಮದುವೆಗೆ ಸಜ್ಜಾದ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ

    ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineti Chopra) ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಅವರ ಸಹೋದರ ಸಂಬಂಧಿ ಮೀರಾ ಚೋಪ್ರಾ (Meera Chopra) ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ನಟಿಯ ಡೇಟ್ ಫಿಕ್ಸ್ ಆಗಿದೆ.

    ಪ್ರಿಯಾಂಕಾ ಚೋಪ್ರಾ(Priyanka Chopra), ಪರಿಣಿತಿ ಚೋಪ್ರಾ ಸಹೋದರ ಸಂಬಂಧಿ ಮೀರಾ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆ (Wedding) ಪ್ಲ್ಯಾನ್ ಬಗ್ಗೆ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಟೇರ ರಿಲೀಸ್ ದಿನವೇ ರಮ್ಯಾ ನಿರ್ಮಾಣದ ಸಿನಿಮಾ ಒಟಿಟಿಗೆ

    ಹೌದು.. ನಾನು ಮದುವೆ (Wedding) ಆಗುತ್ತಿದ್ದೇನೆ. 2024ರ ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ. ಈಗಾಗಲೇ ನಮ್ಮ ಕುಟುಂಬದ ಸದಸ್ಯರು ಮದುವೆಗೆ ತಯಾರಿ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ. ಮದುವೆಗೆ 150 ಜನರಿಗೆ ಕರೆಯಲು ಚಿಂತನೆ ಮಾಡಿದ್ದೇವೆ ಎಂದು ಮೀರಾ ತಿಳಿಸಿದ್ದಾರೆ.‌ ಆದರೆ ಹುಡುಗ ಯಾರು ಎಂಬುದನ್ನ ನಟಿ ರಿವೀಲ್‌ ಮಾಡಿಲ್ಲ.

    ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಬಳಿಕ ಮುಂಬೈನಲ್ಲಿ ಸ್ನೇಹಿತರಿಗೆ ಆಪ್ತರಿಗಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ:ಕಾಟೇರ ರಿಲೀಸ್ ದಿನವೇ ರಮ್ಯಾ ನಿರ್ಮಾಣದ ಸಿನಿಮಾ ಒಟಿಟಿಗೆ

    ಇನ್ನೂ ಕನ್ನಡದ ಸ್ಟಾರ್ ನಟ ದರ್ಶನ್ (Darshan) ನಟಿಸಿರುವ ‘ಅರ್ಜುನ್’ (Arjun) ಸಿನಿಮಾದಲ್ಲಿ ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು. ಇದೀಗ ಸೌತ್- ಬಾಲಿವುಡ್ ಚಿತ್ರಗಳಲ್ಲಿ ಮೀರಾ ಆ್ಯಕ್ಟೀವ್ ಆಗಿದ್ದಾರೆ.

  • ಗ್ಲೋಬಲ್ ಸ್ಟಾರ್ ಆಗಲು ಭಾರತ ಬಿಡಬೇಕಾ? ಪ್ರಿಯಾಂಕಾಗೆ ದೀಪಿಕಾ ಟಾಂಗ್

    ಗ್ಲೋಬಲ್ ಸ್ಟಾರ್ ಆಗಲು ಭಾರತ ಬಿಡಬೇಕಾ? ಪ್ರಿಯಾಂಕಾಗೆ ದೀಪಿಕಾ ಟಾಂಗ್

    ನ್ನಡದ ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್‌ನಲ್ಲಿ (Bollywood) ನಂಬರ್ ಒನ್ ನಟಿಯಾಗಿ ಮಿಂಚ್ತಿದ್ದಾರೆ. ಹೀಗಿರುವಾಗ ಭಾರತ ಬಿಟ್ಟು ವಿದೇಶದಲ್ಲಿ ಸೆಟಲ್ ಆಗಿ ಹಾಲಿವುಡ್‌ನಲ್ಲಿ ಮಿಂಚ್ತಿರುವ ಪ್ರಿಯಾಂಕಾ ಚೋಪ್ರಾಗೆ (Priyanka Chopra) ದೀಪಿಕಾ ಟಾಂಗ್ ಕೊಟ್ಟಿದ್ದಾರೆ. ಗೋಬ್ಲಲ್ ಸ್ಟಾರ್ ಆಗಲು ಭಾರತ ಬಿಟ್ಟು ಹೋಗಬೇಕು ಎಂದೇನೂ ಇಲ್ಲ ಅಂತ ಪ್ರಿಯಾಂಕಾಗೆ ದೀಪಿಕಾ ಮಾತಿನ ಚಾಟಿ ಬೀಸಿದ್ದಾರೆ.

    ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ, ವೃತ್ತಿಯಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸಲು ಹಾಲಿವುಡ್ ಸೇರಿದಂತೆ ಬೇರೆ-ಬೇರೆ ಸಿನಿಮಾ ರಂಗಗಳಿಗೆ ಹೋಗುವ ಪ್ರಯತ್ನ ಮಾಡುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ ಪಡುಕೋಣೆ, ಗ್ಲೋಬಲ್ ಸ್ಟಾರ್ ಆಗಲು ಭಾರತವನ್ನು ಬಿಟ್ಟು ಹೋಗಬೇಕು ಎಂದೇನೂ ಇಲ್ಲ ಎಂದಿದ್ದಾರೆ. ಇದನ್ನೂಓದಿ:ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ಕಂಪು- ನಟಿಯರ ಮಾತಿಗೆ ಕನ್ನಡಿಗರು ಫಿದಾ

    ಈ ಮೂಲಕ ಗ್ಲೋಬಲ್ ಸ್ಟಾರ್ ಎನಿಸಿಕೊಳ್ಳಲು ಭಾರತ ಬಿಟ್ಟು ಹೋದ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ನೀಡಿದ್ದಾರೆ. ವಿಶ್ವಮಟ್ಟದಲ್ಲಿ ಗುರುತು ಮೂಡಿಸಲು ನಾನೇಕೆ ನನ್ನ ಲಗೇಜು ಎತ್ತಿಕೊಂಡು ದೇಶ ಬಿಟ್ಟು ಹೊರಡಬೇಕು. ನನಗೆ ಮಾಡೆಲಿಂಗ್ ಸಮಯದಲ್ಲೇ ಹಾಲಿವುಡ್‌ನಿಂದ ಆಫರ್ಸ್ ಬಂದಿತ್ತು ಎಂದು ನಟಿ ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ.

    ಕನ್ನಡದ ‘ಐಶ್ವರ್ಯ’ (Aishwarya) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ಚಿತ್ರರಂಗವನ್ನ ಆಳುತ್ತಿದ್ದಾರೆ. ಪಠಾಣ್, ಜವಾನ್ ಸಕ್ಸಸ್ ನಂತರ ದೀಪಿಕಾಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

  • ಪರಿಣಿತಿ ಮದುವೆಗೆ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದೇಕೆ? ಮಧು ಚೋಪ್ರಾ ಸ್ಪಷ್ಟನೆ

    ಪರಿಣಿತಿ ಮದುವೆಗೆ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದೇಕೆ? ಮಧು ಚೋಪ್ರಾ ಸ್ಪಷ್ಟನೆ

    ಬಾಲಿವುಡ್ ನಟಿ ಪರಿಣಿತಿ ಚೋಪ್ರಾ(Parineeti Chopra)- ರಾಘವ್ ಚಡ್ಡಾ (Raghav Chadha) ಸೆ.24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹೋದರಿ ಮದುವೆಗೆ ಪ್ರಿಯಾಂಕಾ ಚೋಪ್ರಾ ಗೈರಾಗಿರೋದು ಹೈಲೆಟ್ ಆಗಿದೆ. ಯಾಕೆ ಮದುವೆ ಸಮಾರಂಭದಲ್ಲಿ ನಟಿ ಭಾಗಿಯಾಗಿಲ್ಲ ಎಂಬುದನ್ನ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಸ್ಪಷ್ಟನೆ ನೀಡಿದ್ದಾರೆ.

    ಪರಿಣಿತಿ-ರಾಘವ್ ಎಂಗೇಜ್‌ಮೆಂಟ್‌ನಲ್ಲಿ ಪ್ರಿಯಾಂಕಾ (Priyanka Chopra) ಭಾಗಿಯಾಗಿ ಶುಭಕೋರಿದ್ದರು. ಇದೀಗ ಮದುವೆಗೂ ಬರುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಪ್ರಿಯಾಂಕಾ ಗೈರು ಹಾಜರಿ ಫ್ಯಾನ್ಸ್ ನಿರಾಸೆಯುಂಟು ಮಾಡಿದೆ. ಮದುವೆಯ ಬಳಿಕ ಪಾಪರಾಜಿಗಳ ಪ್ರಶ್ನೆಗೆ ಮಧು ಚೋಪ್ರಾ (Madhu Chopra) ಉತ್ತರಿಸಿದ್ದಾರೆ. ಕೆಲಸದ ಕಮೀಟ್‌ಮೆಂಟ್‌ನಿಂದ ಮಗಳು ಪ್ರಿಯಾಂಕಾ ಮತ್ತು ಅಳಿಯ ನಿಕ್ ಜೋನಸ್ ಬಂದಿಲ್ಲ ಎಂದು ಹೇಳಿದ್ದಾರೆ.

    ವಧು ಪರಿಣಿತಿ ಹೇಗೆ ಕಾಣಿಸುತ್ತಿದ್ದರು ಮತ್ತು ಮದುವೆ ಹೇಗೆ ನಡೆಯಿತು ಎಂಬ ಪ್ರಶ್ನೆಗೂ ರಿಯಾಕ್ಟ್ ಮಾಡಿದ್ದಾರೆ. ಪರಿಣಿತಿ ಮದುವೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ಚೆನ್ನಾಗಿ ನಡೆಯಿತು ಎಂದು ಮಧು ಚೋಪ್ರಾ ಸಂತಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ

    ಪರಿಣಿತಿ ಮದುವೆ ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ನವಜೋಡಿಗೆ ಪ್ರಿಯಾಂಕಾ ಚೋಪ್ರಾ ಶುಭಕೋರಿದ್ದಾರೆ. ರಾಘವ್‌ಗೆ ಚೋಪ್ರಾ ಕುಟುಂಬಕ್ಕೆ ಸ್ವಾಗತ ಎಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರಿಣಿತಿ ಚೋಪ್ರಾ ಮದುವೆಗಾಗಿ ಅಮೆರಿಕಾದಿಂದ ಬಂದಿಳಿದ ಪ್ರಿಯಾಂಕಾ

    ಪರಿಣಿತಿ ಚೋಪ್ರಾ ಮದುವೆಗಾಗಿ ಅಮೆರಿಕಾದಿಂದ ಬಂದಿಳಿದ ಪ್ರಿಯಾಂಕಾ

    ದು ರಾಜಸ್ತಾನದ ಉದಯಪುರದಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಸಂಸದ ರಾಘವ್ ಚಡ್ಡಾ (Raghav Chadha) ಅವರ ವಿವಾಹ ನಡೆಯುತ್ತಿದೆ. ವಿವಾಹ ಮಹೋತ್ಸವದಲ್ಲಿ ಭಾಗಿಯಾಗುವುದಕ್ಕಾಗಿಯೇ ಪರಿಣಿತಿ ಅವರ ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಮೆರಿಕಾದಿಂದ ಬಂದಿಳಿಸಿದ್ದಾರೆ. ಜೊತೆಗೆ ಮಗಳನ್ನೂ ಕರೆತಂದಿದ್ದಾರೆ. ಆದರೆ, ಪತಿಗೆ ಪೂ‍ರ್ವ ನಿಯೋಜಿತ ಕಾರ್ಯಕ್ರಮ ಫಿಕ್ಸ್ ಆಗಿರುವುದರಿಂದ ನಿಕ್ ಗೈರಾಗಿದ್ದಾರೆ.

    ಈಗಾಗಲೇ ಮುಂಬೈನ ಪರಿಣಿತಿ ಮನೆಯು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜೊತೆಗೆ ಮದುವೆ ಆಗಲಿರುವ ಉದಯಪುರದ ಲೀಲಾ ಪ್ಯಾಲೇಸ್ ಕೂಡ ಸಜ್ಜಾಗುತ್ತಿದೆ. ಸೆ.23 ಮತ್ತು 24 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ವಿವಾಹ ನಡೆಯಲಿದೆ. ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ನೇರವಾಗಿ ಇಳಿದ ನಟ ಅಭಿಷೇಕ್ ಅಂಬರೀಶ್

    ರಾಘವ್- ಪರಿಣಿತಿ ಸೆ.24ರಂದು ಉದಯಪುರದಲ್ಲಿ (Udaipur) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆ.22ರಿಂದ ಪ್ರಾರಂಭವಾಗಲಿದ್ದು, ಸೆ.24ರವರೆಗೆ ನಡೆಯಲಿದೆ. ಮದುವೆಯ ಕುರಿತು ಸಂಪೂರ್ಣ ವಿವರ ಈ ಕಾರ್ಡ್‍ನಲ್ಲಿದೆ. ಸೆ.30ರಂದು ಚಂಡೀಗಢದ ತಾಜ್ ಹೋಟೆಲ್‍ನಲ್ಲಿ ಆರತಕ್ಷತೆ ನಡೆಯಲಿದೆ.

     

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್- ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಇತರ ರಾಜಕೀಯ ನಾಯಕರು ಉದಯಪುರಕ್ಕೆ ಬರಲಿದ್ದಾರೆ. ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಮದುವೆ ನಡೆಯುವ ಲೀಲಾ ಪ್ಯಾಲೇಸ್ ಬಳಿ ಇರುವ ಐಷಾರಾಮಿ ಹೋಟೆಲ್‍ಗಳನ್ನು ಕಾಯ್ದಿರಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಪ್ರಿಯಾಂಕಾ ಚೋಪ್ರಾ ಸಹೋದರಿಗೆ ಚುಂಬಿಸಿದ ನಿರ್ದೇಶಕ

    ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಪ್ರಿಯಾಂಕಾ ಚೋಪ್ರಾ ಸಹೋದರಿಗೆ ಚುಂಬಿಸಿದ ನಿರ್ದೇಶಕ

    ಕೆಲವು ಬಾರಿ ಹೀರೋಯಿನ್‌ಗಳ(Actress) ಜೊತೆ ಅಭಿಮಾನಿಗಳು ಅನುಚಿತ ವರ್ತನೆ ಮಾಡುವುದುಂಟು. ಆದರೆ ನಿರ್ದೇಶಕರು ಕೂಡ ಅದೇ ರೀತಿ ವರ್ತಿಸಿದರೆ ಹೇಗೆ? ಅಂಥದೊಂದು ಘಟನೆ ಇದೀಗ ನಡೆದಿದೆ. ಸಿನಿಮಾ ಪ್ರಚಾರ ಕಾರ್ಯದಲ್ಲಿ ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಮನ್ನಾರಾ ಚೋಪ್ರಾಗೆ (Mannara Chopra) ನಿರ್ದೇಶಕ ರವಿ ಕುಮಾರ್ (Ravikumar) ಕಿಸ್ ಮಾಡಿದ್ದಾರೆ. ನಿರ್ದೇಶಕನ ನಡೆಗೆ ನೆಟ್ಟಿಗರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

    ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ತಮ್ಮ ಮುಂಬರುವ ಸಿನಿಮಾ ‘ತಿರಗಬಡರ ಸಾಮಿ’ ಚಿತ್ರದ ಪ್ರಚಾರಕ್ಕೆ ನಟಿ ಮನ್ನಾರ ಅವರ ಜೊತೆಗೆ ಬಂದಿದ್ದರು. ಈ ವೇಳೆ ಕ್ಯಾಮೆರಾಗಳ ಎದುರು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಸಹೋದರ ಸಂಬಂಧಿ ನಟಿ ಮನ್ನಾರಾ ಅವರನ್ನು ನಿರ್ದೇಶಕ ಚುಂಬಿಸಿದ್ದಾರೆ. ಇದಕ್ಕೆ ಹಲವರು ನಿರ್ದೇಶಕನಿಗೆ ಸರಿಯಾಗಿ ಉಗಿದಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ನಟಿ ಮನ್ನಾರ ಅವರು ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ಅವರ ಜೊತೆಗೆ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದಾರೆ. ಈ ವೇಳೆ ನಿರ್ದೇಶಕ ಆಕೆಯ ಭುಜದ ಸುತ್ತ ಕೈ ಹಾಕಿದ್ದರು. ಇದೇ ವೇಳೆ ಆಕೆಯನ್ನು ಎಳೆದು ಚುಂಬಿಸಿದ್ದಾರೆ. ಇದನ್ನೂ ಓದಿ:ಕುಡಿತದ ಚಟದಿಂದ ಮದುವೆ ಮುರಿದೋಯ್ತು, ಮಗಳು ಕೈ ತಪ್ಪಿ ಹೋದಳು- ನಟಿ ಊರ್ವಶಿ

    ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ನಟಿ ಮನ್ನಾರ ಆಶ್ಚರ್ಯದಿಂದ ನಿಂತಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹಲವರು ಹಂಚಿಕೊಂಡಿದ್ದು, ವೈರಲ್ ಆಗಿತ್ತು. ನಿರ್ದೇಶಕನ ನಡವಳಿಕೆಗೆ ಅನೇಕರು ದೂಷಿಸಿದ್ದಾರೆ.

    ನಟಿ ಮನ್ನಾರಾ ಚೋಪ್ರಾ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು 9 ವರ್ಷಗಳಾಗಿದೆ. ನಟಿಯ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿಲ್ಲ. ‘ತಿರಗಬಡರ ಸಾಮಿ’ ಚಿತ್ರದಿಂದ ನಟಿಗೆ ಯಶಸ್ಸು ಸಿಗುತ್ತಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಿಯಾಂಕಾ ಚೋಪ್ರಾ ಕೈಬಿಟ್ಟ ಚಿತ್ರದಲ್ಲಿ ನಟಿಸಲು ನೋ ಎಂದ ಅನುಷ್ಕಾ ಶರ್ಮಾ

    ಪ್ರಿಯಾಂಕಾ ಚೋಪ್ರಾ ಕೈಬಿಟ್ಟ ಚಿತ್ರದಲ್ಲಿ ನಟಿಸಲು ನೋ ಎಂದ ಅನುಷ್ಕಾ ಶರ್ಮಾ

    ಬಾಲಿವುಡ್ ಹೀರೋ ಫರ್ಹಾನ್ ಅಖ್ತರ್ (Farhan Akhtar) ಅವರು ನಟನೆ- ನಿರ್ದೇಶನ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರ ಮುಂಬರುವ ನಿರ್ದೇಶನದ ಸಿನಿಮಾ ‘ಜೀ ಲೇ ಜರಾ’ (Jee Le Zara) ಚಿತ್ರಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟಗಳು ಎದುರಾಗಿತ್ತಿದೆ. ಫರ್ಹಾನ್ ನಿರ್ದೇಶನದ ಜೀ ಲೇ ಜರಾ ಸಿನಿಮಾ ಪ್ರಿಯಾಂಕಾ ಚೋಪ್ರಾ ಹೊರನಡೆದಿದ್ದಾರೆ. ಪಿಗ್ಗಿ ರಿಜೆಕ್ಟ್ ಮಾಡಿದ ಸಿನಿಮಾ ನಟಿಸಲು ಅನುಷ್ಕಾ ಶಮಾ ನೋ ಎಂದಿದ್ದಾರೆ.

    ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ವೈವಾಹಿಕ ಜೀವನ, ಹಾಲಿವುಡ್ ಸಿನಿಮಾ ಅಂತಾ ಅಮೆರಿಕದಲ್ಲೇ ಸೆಟಲ್ ಆಗಿದ್ದಾರೆ. ಕೊರೊನಾಗೂ ಮುನ್ನ ಒಪ್ಪಿಕೊಂಡಿದ್ದ ಫರ್ಹಾನ್ ಅಖ್ತರ್ ಸಿನಿಮಾದಿಂದ ಈಗ ಹೊರ ನಡೆದಿದ್ದಾರೆ. ಸಿಟಾಡೆಲ್ ಸಕ್ಸಸ್ ಬಳಿಕ ಹಾಲಿವುಡ್ ಸಿಟಾಡೆಲ್ 2ಗೆ ತಯಾರಿ ನಡೆಯುತ್ತಿದೆ. ಸಿಟಾಡೆಲ್ 2 ಮತ್ತು ‘ಜೀ ಲೇ ಜರಾ’ ಸಿನಿಮಾ ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ಬಾಲಿವುಡ್ ಚಿತ್ರದಿಂದ ಪ್ರಿಯಾಂಕಾ ಹೊರಬಂದಿದ್ದಾರೆ. ಜೀ ಲೇ ಜರಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿತ್ತು. ಆಲಿಯಾ ಭಟ್ (Alia Bhatt), ಕತ್ರಿಕಾ ಕೈಫ್ (Katrina Kaif) ಮತ್ತು ಪ್ರಿಯಾಂಕಾ ಫೈನಲ್ ಆಗಿದ್ರು. ಈಗ ಪ್ರಿಯಾಂಕಾ ರೋಲ್‌ಗೆ ಸೂಕ್ತ ನಟಿಯ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ

    ಈ ಬಂಪಲ್ ಆಫರ್ ಅನುಷ್ಕಾಗೆ ಅರಸಿ ಬಂದಿದೆ. ಆದರೆ ಅವರು ನೋ ಎಂದಿದ್ದಾರೆ. ಅನುಷ್ಕಾ ಶರ್ಮಾ (Anushka Sharma) ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರುತ್ತಿಲ್ಲ. ವೃತ್ತಿಜೀವನ ಮತ್ತು ಕುಟುಂಬಕ್ಕೆ ಅವರು ಸಮಯ ಹೊಂದಿಸುತ್ತಿದ್ದಾರೆ. ಹೆಣ್ಣು ಮಗುವಿನ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಕೆಲವು ಜಾಹೀರಾತುಗಳಲ್ಲೂ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಜೀ ಲೇ ಜರಾ ಸಿನಿಮಾಗೆ ಕಾಲ್‌ಶೀಟ್ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಅದನ್ನು ಹೊರತುಪಡಿಸಿದರೆ ಈ ಆಫರ್ ತಿರಸ್ಕರಿಸಲು ಬೇರೆ ಯಾವುದೇ ಕಾರಣ ಇಲ್ಲ ಎಂದು ಹೇಳಲಾಗುತ್ತಿದೆ.

    ಪ್ರಿಯಾಂಕಾ ಚೋಪ್ರಾ ಅವರು ‘ಜೀ ಲೇ ಜರಾ’ ಸಿನಿಮಾದಿಂದ ಹೊರನಡೆದಿದ್ದಕಾಗಿ ನಿರ್ದೇಶಕ ಫರ್ಹಾನ್ ಅಖ್ತರ್ ಅವರಿಗೆ ತಲೆಬಿಸಿ ಶುರುವಾಗಿದೆ. ಪ್ರಿಯಾಂಕಾ ಚೋಪ್ರಾ ಬದಲಿಗೆ ಬೇರೆ ಯಾವ ನಟಿಯನ್ನು ಆಯ್ಕೆ ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ ಆಗಿದೆ. ಇದೇ ರೀತಿ ವಿಳಂಬವಾದರೆ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಈ ಸಿನಿಮಾದಿಂದ ಹೊರನಡೆಯಬಹುದು. ಆಗ ಫರ್ಹಾನ್ ಅಖ್ತರ್ ಅವರು ಸಂಪೂರ್ಣವಾಗಿ ಈ ಸಿನಿಮಾವನ್ನು ಕೈ ಬಿಡಬೇಕಾಗುತ್ತದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಬಾಲಿವುಡ್‌ನ (Bollywood) ನಯಾ ಜೋಡಿ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ (Parineethi Chopra) ಇತ್ತೀಚಿಗೆ ಅದ್ದೂರಿಯಾಗಿ ಎಂಗೇಜ್‌ಮೆಂಟ್ ಆಗಿದ್ದರು. ನಿಶ್ಚಿತಾರ್ಥದ ಬೆನ್ನಲ್ಲೇ ಈ ಪ್ರೇಮ ಪಕ್ಷಿಗಳು ಕೈ ಕೈ ಹಿಡಿದು ಓಡಾಡಲು ಆರಂಭಿಸಿದ್ರು. ಇದೀಗ ಈ ಜೋಡಿ ಜೊತೆಯಾಗಿ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ಕೃಷ್ಣಂ ಪ್ರಣಯ ಸಖಿ’ಯಾಗಿ ಲವರ್‌ ಬಾಯ್‌ ಲುಕ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಎಂಟ್ರಿ

    ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜೊತೆ ಪರಿಣಿತಿ ಚೋಪ್ರಾ ಪ್ರೀತಿಸಿ ಇದೀಗ ಹೊಸ ಕಾಲಿಡಲು ಸಜ್ಜಾಗುತ್ತಿದ್ದಾರೆ. ಮೇ 13ರಂದು ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಸದ್ಯದಲ್ಲೇ ಹಸೆಮಣೆಗೆ (Wedding) ಏರಲಿದ್ದಾರೆ. ಈ ಬೆನ್ನಲ್ಲೇ ಅಮೃತಸರ ಗೋಲ್ಡನ್ ಟೆಂಪಲ್ (Golden Temple) ಭೇಟಿ ನೀಡಿ, ಅಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮದುವೆಗೂ ಮೊದಲು ಪರಿಣಿತಿ ಮತ್ತು ರಾಘವ್ ಚಡ್ಡಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ಪರಿಣೀತಿ ಮತ್ತು ರಾಘವ್ ಇಬ್ಬರೂ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ. ದೇವಸ್ಥಾನದಲ್ಲಿ ಪಾತ್ರೆ ತೊಳೆಯುವ ಸೇವೆ ಸಲ್ಲಿಸಿದ್ದಾರೆ. ಭಕ್ತರ ಜೊತೆ ಸೇರಿ ರಾಘವ್ ಮತ್ತು ಪರಿಣಿತಿ ಕೂಡ ಪಾತ್ರ ತೊಳೆಯುತ್ತಿದ್ದಾರೆ. ಇಬ್ಬರೂ ಬಿಳಿ ಬಣ್ಣದ ಬಟ್ಟೆ ಧರಿಸಿದ್ದಾರೆ. ಇಬ್ಬರ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ನೆಟ್ಟಿಗರು ರಾಘವ್ ಮತ್ತು ಪರಿಣಿತಿ ಜೋಡಿಯನ್ನು ಹೊಗಳುತ್ತಿದ್ದಾರೆ. ಡೌನ್ ಟು ಅರ್ಥ್ ಜೋಡಿ ಎಂದು ಹೇಳುತ್ತಿದ್ದಾರೆ. ಇನ್ನು ಅನೇಕರು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಅವಳ ಒಳಉಡುಪು ನೋಡಬೇಕು ಎಂದ ನಿರ್ದೇಶಕನ ವಿರುದ್ಧ ಕಿಡಿಕಾರಿದ ಪ್ರಿಯಾಂಕಾ ಚೋಪ್ರಾ

    ನಾನು ಅವಳ ಒಳಉಡುಪು ನೋಡಬೇಕು ಎಂದ ನಿರ್ದೇಶಕನ ವಿರುದ್ಧ ಕಿಡಿಕಾರಿದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್‌ನಲ್ಲಿ (Hollywood) ಸೆಟಲ್ ಆಗಿದ್ದಾರೆ. ಅಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ನಟಿ ಬ್ಯುಸಿಯಾಗಿದ್ದಾರೆ. ಇದೀಗ ‘ಸಿಟಾಡೆಲ್’ (Citadel) ನಟಿ ತಮ್ಮ ವೃತ್ತಿಜೀವನದ ಆರಂಭದ ದಿನಗಳ ಬಗ್ಗೆ ಸ್ಮರಿಸಿದ್ದಾರೆ. ನಿರ್ದೇಶಕರೊಬ್ಬರು ಶೂಟಿಂಗ್ ಸೆಟ್‌ಗಳಲ್ಲಿ ತನಗೆ ಮುಜುಗರ ತರಿಸುವಂತೆ ಮಾಡಿದರು ಎಂದು ಹೇಳಿಕೊಂಡಿದ್ದಾರೆ. ತಾವು ಎದುರಿಸಿದ ಅವಮಾನದ ಬಗ್ಗೆ ನಟಿ ಮಾತನಾಡಿದ್ದಾರೆ.

    ಹಿಂದಿ ಸಿನಿಮಾರಂಗದಲ್ಲಿ ತನ್ನ ಪ್ರತಿಭೆ ಮತ್ತು ಸಕ್ಸಸ್‌ನಿಂದ ಸ್ಟಾರ್ ನಟಿಯಾಗಿ ಮೆರೆದ ನಾಯಕಿ ಪ್ರಿಯಾಂಕಾ ಚೋಪ್ರಾ ಅವರು ಪೀಕ್‌ನಲ್ಲಿರುವಾಗಲೇ ನಿಕ್ ಜೊತೆ ಹೊಸ ಬಾಳಿಗೆ ಕಾಲಿಟ್ಟರು. ಈಗ ಹಾಲಿವುಡ್‌ನಲ್ಲಿ ನಟಿ ಗುರುತಿಸಿಕೊಳ್ತಿದ್ದಾರೆ. ಅವರು ಮೊದಲು ಬಾಲಿವುಡ್‌ಗೆ ಕಾಲಿಟ್ಟಾಗ ಹೇಗಿತ್ತು. ಅವಕಾಶಗಳನ್ನ ಕೊಡುವ ನೆಪದಲ್ಲಿ ನಿರ್ದೇಶಕರು ಹೇಗೆ ರಿಯಾಕ್ಟ್ ಮಾಡ್ತಿದ್ರು.? ಯಾಕೆ ಆ ಸಿನಿಮಾ ಚಾನ್ಸ್ ಮಿಸ್ ಆಯ್ತು ಎಂದು ನಟಿ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಕೆಲ ದೃಶ್ಯವನ್ನು ಚಿತ್ರೀಕರಿಸುವಾಗ ನಿರ್ದೇಶಕರು ಅವರ ಒಳಉಡುಪುಗಳನ್ನು (Underwear) ನೋಡಲು ಬಯಸಿದ್ದರಂತೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಇದು 2002 ಅಥವಾ 2003 ಆಗಿರಬಹುದು. ನಾನು ರಹಸ್ಯವಾಗಿರುವ ಪಾತ್ರವೊಂದನ್ನು ಮಾಡುತ್ತಿದ್ದೆ. ನಾನು ಹುಡುಗನನ್ನು ಮೋಹಿಸುವ ಪಾತ್ರವಿತ್ತು. ನೀವು ಒಂದು ತುಂಡು ಬಟ್ಟೆಯನ್ನು ಒಂದು ಸಮಯದಲ್ಲಿ ತೆಗೆಯಬೇಕು. ನಾನು ಲೇಯರ್ ಅಪ್ ಮಾಡಲು ಬಯಸುತ್ತೇನೆ. ನಾನು ಅವಳ ಒಳ ಉಡುಪುಗಳನ್ನು ನೋಡಬೇಕು. ಇಲ್ಲದಿದ್ದರೆ ಈ ಸಿನಿಮಾ ನೋಡಲು ಜನ ಏಕೆ ಬರುತ್ತಾರೆ? ಅಂತ ಅವರು ಹೇಳಿದರು ಎಂದು ಪ್ರಿಯಾಂಕಾ ಚೋಪ್ರಾ ನೆನಪಿಸಿಕೊಂಡರು.

    ಅವರು ನನಗೆ ಹೇಳಲಿಲ್ಲ. ಅದನ್ನು ನನ್ನ ಮುಂದೆ ಇದ್ದ ಸ್ಟೈಲಿಸ್ಟ್‌ಗೆ ಹೇಳಿದರು. ಅದೊಂದು ಮುಜುಗರದ ಕ್ಷಣ. ನನ್ನನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಹೊರತಾಗಿ ಬೇರೇನೂ ಅಲ್ಲಿರಲಿಲ್ಲ. ನನ್ನ ಕಲೆ ಮುಖ್ಯವಲ್ಲ, ನಾನು ಏನು ಕೊಡುಗೆ ನೀಡುತ್ತೇನೆ ಎಂಬುದು ಮುಖ್ಯವಲ್ಲ ಎಂಬ ಭಾವನೆ ಬಂದಿತು. ಎರಡು ದಿನಗಳ ನಂತರ ಚಿತ್ರದಿಂದ ಹೊರನಡೆಯಬೇಕಾಯಿತು ಎಂದು ಪ್ರಿಯಾಂಕಾ ಮಾತನಾಡಿದ್ದಾರೆ.

  • ಪ್ರಶಾಂತ್ ನೀಲ್ ಚಿತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

    ಪ್ರಶಾಂತ್ ನೀಲ್ ಚಿತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

    ನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ಸಿನಿಮಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸಲಿದ್ದಾರೆ ಎನ್ನುವ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಈ ಸಿನಿಮಾ ಸೆಟ್ಟೇರಲು ಇನ್ನೂ ಹಲವು ತಿಂಗಳು ಬಾಕಿ ಇರುವಾಗಲೇ ಚಿತ್ರದ ಬಗ್ಗೆ ಒಂದಿಲ್ಲೊಂದು ಸುದ್ದಿಗಳು ಹರಿದಾಡುತ್ತಲೇ ಇವೆ. ಇದೀಗ ಹೊಸ ಸೇರ್ಪಡೆ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವುದು.

    ಜ್ಯೂನಿಯರ್ ಎನ್.ಟಿ.ಆರ್ (Jr. NTR) ನಾಯಕನಾಗಿ ನಟಿಸಲಿರುವ ಈ ಸಿನಿಮಾ ಯಾವಾಗಿಂದ ಶುರುವಾಗಲಿದೆ ಎನ್ನುವ ಮಾಹಿತಿಯನ್ನು ಮಾತ್ರ ಅವರು ನೀಡಿರಲಿಲ್ಲ. ಮೊನ್ನೆಯಷ್ಟೇ ಜ್ಯೂನಿಯರ್ ಹುಟ್ಟು ಹಬ್ಬಕ್ಕಾಗಿ (Birthday) ಶೂಟಿಂಗ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    ಜ್ಯೂನಿಯರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ, ಮಾರ್ಚ್ 2024 ರಿಂದ ಚಿತ್ರೀಕರಣ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಜ್ಯೂನಿಯರ್ ಹುಟ್ಟುಹಬ್ಬಕ್ಕಾಗಿ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ದಿನಾಂಕ ಸಮೇತ ಕೆಲವು ವಿವರಗಳನ್ನೂ ನೀಡಲಾಗಿದೆ.

     

    ಜ್ಯೂನಿಯರ್ ಸಿನಿಮಾ ಮುಗಿದ ನಂತರ ಶ್ರೀಮುರಳಿಗಾಗಿ ಪ್ರಶಾಂತ್ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ, ಕೆಜಿಎಫ್ 3 ಸಿನಿಮಾ ಕುರಿತು ಪ್ರಸ್ತಾಪವಾಗಿತ್ತು. ಇವೆರಡೂ ಬಿಟ್ಟು ಅಚ್ಚರಿಯ ಸಿನಿಮಾವೊಂದು ಪ್ರವೇಶ ಪಡೆದಿದೆ. ನಿರ್ಮಾಪಕ ದಿಲ್ ರಾಜು ಸಿನಿಮಾ ಮಾಡುವ ಕುರಿತು ಹೇಳಿಕೊಂಡಿದ್ದಾರೆ. ಆದರೆ, ಆ ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

  • ಸಿನಿಮಾ ಚಾನ್ಸ್‌ಗಾಗಿ ಒಳ ಉಡುಪು ತೆಗೆಯಲು ಹೇಳಿದ್ದ ಆ ನಿರ್ದೇಶಕ- ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ

    ಸಿನಿಮಾ ಚಾನ್ಸ್‌ಗಾಗಿ ಒಳ ಉಡುಪು ತೆಗೆಯಲು ಹೇಳಿದ್ದ ಆ ನಿರ್ದೇಶಕ- ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ

    ಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಇದೀಗ ಹಾಲಿವುಡ್ (Hollywood) ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಾವು ಮೊದಲು ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗ ಪ್ರಿಯಾಂಕಾ ಎದುರಿಸಿದ ಸಂಕಷ್ಟದ ಬಗ್ಗೆ ಅವರು ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಹಿಂದಿ ನಿರ್ದೇಶಕನ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಅವರು ಚಿತ್ರರಂಗದಲ್ಲಿ ಯಾರು ಗಾಡ್‌ಫಾದರ್ ಇಲ್ಲದೇ ಬೆಳೆದವರು. ಬಾಲಿವುಡ್ (Bollywood) ರಂಗದಲ್ಲಿ ನಾಯಕಿಯಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಂಡು, ಬೇಡಿಕೆ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಹಾಲಿವುಡ್‌ನಲ್ಲಿ ನಟಿ ಸದ್ದು ಮಾಡ್ತಿದ್ದಾರೆ. ಬಾಲಿವುಡ್‌ಗೆ ಮರಳುವ ಯಾವುದೇ ಯೋಚನೆ ಅವರಿಗಿಲ್ಲ. ಹಿಂದಿ ಸಿನಿಮಾ ಮಾಡುವಾಗ ತಮ್ಮ ಹಳೆಯ ದಿನಗಳನ್ನ ನಟಿ ಬಿಚ್ಚಿಟ್ಟಿದ್ದಾರೆ. ನಿರ್ದೇಶಕರೊಬ್ಬರು ಒಳ ಉಡುಪನ್ನ ಕಳಚಬೇಕು ಎಂದು ಹೇಳಿದ್ದನ್ನ ನಟಿ ಹಂಚಿಕೊಂಡಿದ್ದಾರೆ.

    ನನ್ನ ಕೆರಿಯರ್ ಕಟ್ಟಿಕೊಳ್ಳಲು ಆಗಷ್ಟೇ ನಾನು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೆ. ನಾನೊಂದು ಸಿನಿಮಾ ಒಪ್ಪಿಕೊಂಡಿದ್ದೆ. ಆ ಚಿತ್ರದಲ್ಲಿ ನಾನು ಡ್ಯಾನ್ಸ್ ಮಾಡಬೇಕಿತ್ತು. ಆಗ ನಿರ್ದೇಶಕರು, ನೀವು ನೃತ್ಯ ಮಾಡುತ್ತ ನಿಮ್ಮ ಉಳ ಉಡುಪಗಳನ್ನೆಲ್ಲ ಕಳಚಬೇಕು ಎಂದು ಹೇಳಿದರು. ನನಗೆ ತುಂಬ ಕೋಪ ಬಂತು. ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಆದರೆ ಒಪ್ಪಲಿಲ್ಲ. ಮರುದಿನವೇ ಆ ಸಿನಿಮಾದಿಂದ ನಾನು ಹೊರನಡೆದೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ ಎಂದು ಆ ಕರಾಳ ದಿನವನ್ನ ಪ್ರಿಯಾಂಕಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ರಸ್ತೆ ಅಪಘಾತ : ಕಿರುತೆರೆ ಖ್ಯಾತ ನಟಿ ವೈಭವಿ ಉಪಾಧ್ಯಾಯ ದುರ್ಮರಣ

    ಶೂಟಿಂಗ್ ಸೆಟ್‌ನಲ್ಲಿ ನನ್ನ ಒಳ ಉಡುಪು ಬಿಚ್ಚಲು ಹೇಳಿದ ನಿರ್ದೇಶಕನಿಗೆ ನಾನೇನೂ ಹೇಳಲಿಲ್ಲ. ಅವನ ವಿರುದ್ಧ ಮಾತನಾಡಲಿಲ್ಲ. ಆತನ ವಿರುದ್ಧ ಪ್ರತಿಭಟಿಸಲು ನನಗೆ ಭಯವಿತ್ತು. ಈ ಬಗ್ಗೆ ಬೇಸರವಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಅಂದು ಸುಮ್ಮನೆ ಆ ಸಿನಿ ನಿರ್ಮಾಪಕನ ಕಚೇರಿಯಿಂದ ಹೊರಟೆ. ನಿಜಕ್ಕೂ ದಿಗ್ಭ್ರಮೆಯಾಗಿತ್ತು. ಆದರೆ ಈಗಲೂ ಅನ್ನಿಸುತ್ತದೆ, ನಾನು ಅಂದು ಆ ವ್ಯಕ್ತಿಯನ್ನು ಎದುರಿಸಬೇಕಿತ್ತು. ನೀವು ಹೇಳುತ್ತಿರುವುದು ತಪ್ಪು ಎಂದು ಅವರಿಗೆ ಕಠಿಣವಾಗಿ ಹೇಳಬೇಕಿತ್ತು. ಅಂದು ನನಗೆ ಮೌನವಾಗಿ ಇಲ್ಲಿಂದ ದೂರ ನಡೆಯುವುದೇ ಉತ್ತಮ ಎನ್ನಿಸಿಬಿಟ್ಟಿತ್ತು. ಅದು ನಾನು ಮಾಡಿದ ದೊಡ್ಡ ತಪ್ಪು ಎಂದು ನಟಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಆ ನಿರ್ದೇಶಕ ಯಾರು ಎಂಬುದನ್ನ ನಟಿ ರಿವೀಲ್‌ ಮಾಡಿಲ್ಲ.