Tag: priyamani

  • ನನ್ನ ಮಕ್ಕಳು ಭಯೋತ್ಪಾದಕರಾಗುತ್ತಾರೆ ಅಂತ ಟೀಕಿಸಿದ್ದರು – ಟ್ರೋಲಿಗರಿಗೆ ಪ್ರಿಯಾಮಣಿ ತಿರುಗೇಟು

    ನನ್ನ ಮಕ್ಕಳು ಭಯೋತ್ಪಾದಕರಾಗುತ್ತಾರೆ ಅಂತ ಟೀಕಿಸಿದ್ದರು – ಟ್ರೋಲಿಗರಿಗೆ ಪ್ರಿಯಾಮಣಿ ತಿರುಗೇಟು

    ಕನ್ನಡದ ರಾಮ್, ಅಣ್ಣಾ ಬಾಂಡ್ (Annabond) ಸಿನಿಮಾಗಳ ನಟಿ ಪ್ರಿಯಾಮಣಿ (Priyamani) ಅವರು ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಅನ್ಯಧರ್ಮದವನ ಜೊತೆ ಮದುವೆಯಾಗಿದ್ದಕ್ಕೆ (Wedding) ನಟಿ ಎದುರಿದ ಟ್ರೋಲ್, ಕಾಮೆಂಟ್‌ಗಳ ಬಗ್ಗೆ ಮೌನ ಮುರಿದ್ದಾರೆ. ತಮಗೆ ಹುಟ್ಟುವ ಮಕ್ಕಳು ಮುಂದೊಂದು ದಿನ ಭಯೋತ್ಪಾದಕರಾಗುತ್ತಾರೆ ಎಂದು ಟೀಕಿಸಿದವರಿಗೆ ನಟಿ ತಕ್ಕ ಉತ್ತರ ಕೊಟ್ಟಿದ್ದಾರೆ.

    ನನಗೂ ಮತ್ತು ಮುಸ್ತಫಾಗೂ ಹುಟ್ಟುವ ಮಕ್ಕಳು ಭಯೋತ್ಪಾದಕರು ಆಗುತ್ತಾರೆ ಎಂದು ಕೆಲವರು ಹೇಳಿದ್ದರು. ಟ್ರೋಲ್ ಮಾಡಿದ್ದರು ಎಂದು ಪ್ರಿಯಾಮಣಿ ಹೇಳಿದ್ದಾರೆ. ಮದುವೆಯಾಗುತ್ತಿರುವ ಬಗ್ಗೆ ಘೋಷಣೆಯಾದ ದಿನದಿಂದ ಈ ದ್ವೇಷ ಅಭಿಯಾನವು ಮದುವೆಯ ನಂತರವೂ ಮುಂದುವರೆಯಿತು ಎಂದು ನಟಿ ಹೇಳಿದ್ದಾರೆ. ನನ್ನ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸುವ ರೀತಿಯಲ್ಲಿ ಈ ಸೈಬರ್ ದಾಳಿ ಮುಂದುವರೆದಿದೆ ಎಂದು ಪ್ರಿಯಾಮಣಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ಅನ್ಯಧರ್ಮದವನ ಜೊತೆಗಿನ ಮದುವೆಯಾಗಿದ್ದಕ್ಕೆ ಮತ್ತೆ ಧರ್ಮದ ಕುರಿತು ಟೀಕಿಸಿದವರಿಗೆ ʻನಾನು ಹುಟ್ಟು ಹಿಂದೂʼ ಎಂದು ಖಡಕ್‌ ಆಗಿ ಉತ್ತರಿಸಿದ್ದಾರೆ. ಕೆಟ್ಟ ಟ್ರೋಲ್‌ಗಳ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ವರುಣ್ ಧವನ್ ನಟನೆಯ ‘ಬೇಬಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್?

    ಅಂದಹಾಗೆ, ಮುಂಬೈ ಮೂಲದ ಮುಸ್ತಫಾ ರಾಜ್ ಅವರನ್ನು 2017ರಲ್ಲಿ ಪ್ರಿಯಾಮಣಿ ಮದುವೆಯಾದರು. ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯ ಮುದ್ರೆ ಒತ್ತಿದ್ದರು.

  • Thalapathy 69: ವಿಜಯ್‌ ಜೊತೆ ಕನ್ನಡದ ನಟಿ ಪ್ರಿಯಾಮಣಿ ಹೊಸ ಸಿನಿಮಾ

    Thalapathy 69: ವಿಜಯ್‌ ಜೊತೆ ಕನ್ನಡದ ನಟಿ ಪ್ರಿಯಾಮಣಿ ಹೊಸ ಸಿನಿಮಾ

    ಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ (Priyamani) ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಜವಾನ್’ (Jawan) ಸಿನಿಮಾದ ಸಕ್ಸಸ್ ನಂತರ ನಟಿಯ ಬೇಡಿಕೆ ಹೆಚ್ಚಾಗಿದೆ. ಇದೀಗ ವಿಜಯ್ ನಟನೆಯ ಕೊನೆಯ ಸಿನಿಮಾದಲ್ಲಿ ಪ್ರಿಯಾಮಣಿ ಕೂಡ ನಟಿಸುತ್ತಿದ್ದಾರೆ. ನಟಿ ಕೂಡ ಚಿತ್ರತಂಡ ಸೇರ್ಪಡೆಯಾಗಿರುವ ಬಗ್ಗೆ ತಂಡ ಅಧಿಕೃತ ಘೋಷಣೆ ಮಾಡಿದೆ.

    ಇದೇ ಮೊದಲ ಬಾರಿಗೆ ನಟಿ ಪ್ರಿಯಾಮಣಿ ಅವರು ವಿಜಯ್ ದಳಪತಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ರಿವೀಲ್ ಮಾಡಿಲ್ಲ. ಆದರೆ ಪವರ್‌ಫುಲ್ ಪಾತ್ರದಲ್ಲಿ‌ ನಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪೂಜಾ ಹೆಗ್ಡೆ (Pooja Hegde), ಮಮಿತಾ ಬೈಜು (Mamitha Baiju), ಪ್ರಕಾಶ್ ರಾಜ್ ಚಿತ್ರತಂಡ ಸೇರಿಕೊಂಡ ಬೆನ್ನಲ್ಲೇ ಪ್ರಿಯಾಮಣಿ ಕೂಡ ‘ದಳಪತಿ 69’ ತಂಡ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ‘ಮಧ್ಯಂತರ’ ಕಿರುಚಿತ್ರಕ್ಕೆ ಜಯಮಾಲಾ ಮೆಚ್ಚುಗೆ

     

    View this post on Instagram

     

    A post shared by KVN Productions (@kvn.productions)

    ಇನ್ನೂ ಇತ್ತೀಚಿನ ದಿನಗಳಲ್ಲಿ ಅವರಿಗೆ ಬಾಲಿವುಡ್‌ನಿಂದ ಉತ್ತಮ ಅವಕಾಶಗಳು ಸಿಗುತ್ತಿವೆ. ಪ್ರಿಯಾಮಣಿ ನಟಿಸಿರುವ ಜವಾನ್, ಆರ್ಟಿಕಲ್ 370, ಮೈದಾನ್ ಚಿತ್ರಗಳು ಸಕ್ಸಸ್ ಕಂಡಿವೆ. ತೆಲುಗು, ತಮಿಳು, ಹಿಂದಿಯಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

    ಅಂದಹಾಗೆ, ಸ್ಯಾಂಡಲ್‌ವುಡ್‌ನಲ್ಲಿ ರಾಮ್, ಅಣ್ಣಾಬಾಂಡ್, ಚಾರುಲತಾ, ಅಂಬರೀಶ, ಕಲ್ಪನಾ 2 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  • ನನಗೆ ಬೆಂಬಲವಾಗಿ ಪತಿ ಬಂಡೆಗಲ್ಲಿನಂತೆ ನಿಂತಿದ್ದರು- ಟ್ರೋಲ್ ಬಗ್ಗೆ ಪ್ರಿಯಾಮಣಿ ಮಾತು

    ನನಗೆ ಬೆಂಬಲವಾಗಿ ಪತಿ ಬಂಡೆಗಲ್ಲಿನಂತೆ ನಿಂತಿದ್ದರು- ಟ್ರೋಲ್ ಬಗ್ಗೆ ಪ್ರಿಯಾಮಣಿ ಮಾತು

    ನ್ನಡತಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅರ್ಟಿಕಲ್ 370, ಮೈದಾನ್ ಸಿನಿಮಾದ ಸಕ್ಸಸ್ ನಂತರ ಇದೀಗ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ನಟಿ ಮಾತನಾಡಿದ್ದಾರೆ. ಟ್ರೋಲಿಂಗ್ ಮತ್ತು ನೆಗೆಟಿವ್ ಕಾಮೆಂಟ್‌ಗಳಿಂದ ಆದ ಪರಿಣಾಮದ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ಮೌನ ಮುರಿದಿದ್ದಾರೆ.

    ಜನರ ಕಾಮೆಂಟ್‌ಗಳು ಕೇವಲ ನನಗೆ ಮಾತ್ರವಲ್ಲದೆ, ನನ್ನ ಕುಟುಂಬದ ಮೇಲೂ, ವಿಶೇಷವಾಗಿ ನನ್ನ ತಂದೆ, ತಾಯಿಯ ಮೇಲೆ ತುಂಬಾ ಪರಿಣಾಮ ಬೀರಿತ್ತು. ಆಗ ನಮಗಾಗಿದ್ದ ನೋವು ವಿವರಿಸಲು ಅಸಾಧ್ಯ ಎಂದು ಪ್ರಿಯಾಮಣಿ ಬೇಸರ ತೊಡಿಕೊಂಡಿದ್ದಾರೆ. ಆಗ ನನ್ನ ಪತಿ ನನ್ನ ಪರವಾಗಿ ಬಂಡೆಗಲ್ಲಿನಂತೆ ನಿಂತಿದ್ದರು. ಏನು ಬೇಕಾದರೂ ಆಗಲಿ, ಅವೆಲ್ಲವೂ ಮೊದಲು ನನಗೆ ಬರುವಂತೆ ನೋಡಿಕೊಳ್ಳುತ್ತೇನೆ. ಅದೆಂಥ ಸಂದರ್ಭದಲ್ಲೂ ನನ್ನ ಕೈ ಹಿಡಿದುಕೋ ಮತ್ತು ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆಯಾಗಿರು ಎಂದು ಪತಿ ಹೇಳಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗಿನ ‘ಕಣ್ಣಪ್ಪ’ ಚಿತ್ರತಂಡ ಸೇರಿಕೊಂಡ ಅಕ್ಷಯ್ ಕುಮಾರ್

    ಮದುವೆಗೂ ಮುನ್ನವೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೆವು. ಈ ಬಗ್ಗೆ ಮುಸ್ತಫಾ ಜೊತೆ ಚರ್ಚಿಸಿದಾಗ, ನನ್ನೊಂದಿಗೆ ನಿಲ್ಲು ಮತ್ತು ನನ್ನನ್ನು ನಂಬು ಎಂದಷ್ಟೇ ಹೇಳಿದ್ದರು. ಆಗಲೇ ನಾವಿಬ್ಬರು ಕಷ್ಟಗಳ ಹಾದಿಯಲ್ಲಿ ಜೊತೆಯಾಗಿಯೇ ಸಾಗುವ ಮತ್ತು ಮುಂಬರುವ ಬಿರುಗಾಳಿಯನ್ನು ಧೈರ್ಯದಿಂದ ಎದುರಿಸುವ ನಿರ್ಧಾರ ಮಾಡಿದೆವು ಎಂದು ವಿವರಿಸಿದ್ದಾರೆ ಪ್ರಿಯಾಮಣಿ.

    ಈ ರೀತಿ ಟ್ರೋಲ್ಸ್, ಟೀಕೆ ಕೇಳಿ ಬಂದಾಗ ನಾನು ಮುಂಬೈನಲ್ಲಿ ಇರಲಿಲ್ಲ. ಪತಿ ಜೊತೆ ಬೆಂಗಳೂರಿನಲ್ಲಿದ್ದೆ. ಆದರೆ ಎಲ್ಲವನ್ನು ನಿಭಾಯಿಸಿದೆವು. ನಮ್ಮ ಕುಟುಂಬದವರಿಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಹೇಳಿದ್ದೇವು. ದಿನದ ಕೊನೆಗೆ ಉಳಿಯುವುದು ನಾವೇ ಎಂದು ಹೇಳಿ ಸಮಾಧಾನ ಮಾಡಿದ್ದೆ. ಅವರ ಆಶೀರ್ವಾದ ಮತ್ತು ಪ್ರಾರ್ಥನೆಯೇ ನಮಗೆ ಶ್ರೀರಕ್ಷೆ ಎಂದು ಪ್ರಿಯಾಮಣಿ ಮಾತನಾಡಿದ್ದಾರೆ.

    2017ರಲಿ ಮುಸ್ತಫಾ ರಾಜ್ (Mustafa Raj) ಜೊತೆ ಪ್ರಿಯಾಮಣಿ ಮದುವೆಯಾಗಿದ್ದಾರೆ. ನಟಿಯ ಸಿನಿಮಾ ಕೆರಿಯರ್‌ಗೆ ಮುಸ್ತಫಾ ರಾಜ್ ಬೆಂಬಲವಾಗಿ ನಿಂತಿದ್ದಾರೆ. ಅಂದಹಾಗೆ, ರಾಮ್, ಅಣ್ಣಾಬಾಂಡ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ನಟಿಗೆ ಭಾರೀ ಬೇಡಿಕೆ ಇದೆ.

  • ಸೀರೆಯಲ್ಲಿ ಸಖತ್ತಾಗಿ ಕಂಡ ನಟಿ ಪ್ರಿಯಾಮಣಿ

    ಸೀರೆಯಲ್ಲಿ ಸಖತ್ತಾಗಿ ಕಂಡ ನಟಿ ಪ್ರಿಯಾಮಣಿ

    ಬೆಂಗಳೂರಿನ ಬೆಡಗಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ‘ಜವಾನ್’ (Jawan) ಸಕ್ಸಸ್ ನಂತರ ಕನ್ನಡದ ಹುಡುಗಿಗೆ ಬಿಟೌನ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ಹಾಗಾಗಿ ಹೊಸ  ಹೊಸ ಫೋಟೋ ಶೂಟ್ ಗಳಲ್ಲಿ ಅವರು ಭಾಗಿ ಆಗುತ್ತಲೇ ಇದ್ದಾರೆ. ನಿನ್ನೆಯಷ್ಟೇ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ರವಿಕೆ ರಹಿತ ಸೀರೆ (saree) ತೊಟ್ಟು ಸಖತ್ತಾಗಿಯೇ ಪೋಸ್ ನೀಡಿದ್ದಾರೆ. ಆ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪ್ರಿಯಾಮಣಿ ಪ್ರತಿಭಾವಂತ ನಟಿ. ಯಾವುದೇ ಅಡ್ಡದಾರಿ ತುಳಿಯದೇ ತಮ್ಮ ಬದುಕನ್ನು ಕಟ್ಟಿಕೊಂಡವರು. ಹಾಗಾಗಿ ಯಾವುದಕ್ಕೂ ಮುಲಾಜು ನೋಡದೇ ನೇರವಾಗಿ ಹೇಳುತ್ತಾರೆ. ಇತ್ತೀಚೆಗಷ್ಟೇ ಅವರು ಬಾಲಿವುಡ್‌ನ ಕರಾಳ ಸತ್ಯವನ್ನು ರವೀಲ್ ಮಾಡಿದ್ದರು. ಪಬ್ಲಿಸಿಟಿಗಾಗಿ ಸೆಲೆಬ್ರಿಟಿಗಳು ಏನೆಲ್ಲ ಮಾಡುತ್ತಾರೆ ಎಂಬುದನ್ನು ಬಹಿರಂಗ ಪಡಿಸಿದ್ದರು. ಬಾಲಿವುಡ್ ಸೆಲೆಬ್ರೆಟಿಗಳು ಜಿಮ್‌ಗೆ ಹೋಗಲಿ, ಸಲೂನ್‌ಗೆ ಹೋಗಲಿ, ಮನೆ, ಪಾರ್ಟಿ, ವಿಮಾನ ನಿಲ್ದಾಣಕ್ಕೆ ಹೋದ್ರು ಪಾಪರಾಜಿಗಳು ಮುತ್ತಿಕೊಳ್ತಾರೆ. ಹೇಗೆ ಬರ್ತಾರೆ ಇವರೆಲ್ಲಾ ಅಂತ ಅನೇಕರು ಯೋಚಿಸುತ್ತಾರೆ. ಇದಕ್ಕೆಲ್ಲಾ ಈಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದರು.

    ಟಿವಿ ಸಂದರ್ಶನವೊಂದರಲ್ಲಿ ಮಾತಾಡಿದ ಪ್ರಿಯಾಮಣಿ, ಸೆಲೆಬ್ರಿಟಿಗಳು ಒಂದು ರೀತಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರ ಎಂದಿದ್ದಾರೆ. ಸೆಲೆಬ್ರೆಟಿಗಳು ಸೂಟ್‌ನಲ್ಲಿ ಇರೋದು, ಸಲೂನ್‌ಗೆ ಹೋದಾಗಲೂ ಪಾಪರಾಜಿಗಳ ಕ್ಯಾಮೆರಾಗೆ ಸಿಗ್ತಾರೆ. ಪಾಪರಾಜಿಗಳೇ ಅವರ ಹಿಂದೆ ಓಡಾಡ್ತಿರುತ್ತಾರೆ ಎಂದು ಜನಸಾಮಾನ್ಯರು ಊಹಿಸಿರುತ್ತಾರೆ. ಆದರೆ ಅಸಲಿ ಸಂಗತಿಯೇ ಬೇರೇ ಇದೆ ಎಂದಿದ್ದರು. ಪ್ರಚಾರಕ್ಕಾಗಿ ಪಿಆರ್‌ಗಳ ಮೂಲಕ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ. ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ-ವಿಡಿಯೋ ತೆಗೆದು ಪ್ರಚಾರ ಮಾಡೋದು ಅಂತ ನಟಿ ಪ್ರಿಯಾಮಣಿ ಹೇಳಿದ್ದರು. ಪ್ರಿಯಾಮಣಿ ಹೇಳಿಕೆ ಈಗ ಸಖತ್ ಸದ್ದು ಮಾಡುತ್ತಿದೆ. ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

    ನೇರವಂತಿಕೆಯ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲೂ ಅವರು ತೊಡಗಿದ್ದಾರೆ. ಮೊನ್ನೆಯಷ್ಟೇ ದೇವಸ್ಥಾನವೊಂದಕ್ಕೆ ಮೆಕ್ಯಾನಿಕಲ್ ಆನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಪ್ರಿಯಾಮಣಿ. ನಟಿಯ ನಡೆಗೆ ಅಭಿಮಾನಿಗಳು ಶ್ಲಾಘಿಸಿದ್ದಾರೆ

    ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಆನೆಯನ್ನು ಗಿಫ್ಟ್ ಆಗಿ ಪ್ರಿಯಾಮಣಿ ನೀಡಿದ್ದಾರೆ. ಇದರ ಗಾತ್ರ ಮತ್ತು ಎತ್ತರ ನಿಜವಾದ ಆನೆಯನ್ನು ಮೀರಿಸುವಂತಿದೆ. ಇದನ್ನು ನೋಡಿ ಗ್ರಾಮಸ್ಥರು ಬೆರಗಾಗಿದ್ದಾರೆ.

     

    ಪ್ರಿಯಾಮಣಿ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ ಮೆಕ್ಯಾನಿಕಲ್ ಆನೆಯು 3 ಮೀಟರ್ ಎತ್ತರ ಮತ್ತು 800 ಕೆಜಿ ತೂಕವಿದೆ. ರೋಬೋ ಆನೆಯನ್ನು ದೇಶದಾದ್ಯಂತ ತೆಗೆದುಕೊಂಡು ಹೋಗಲು ಅನುಮತಿ ಕೂಡ ನೀಡುತ್ತಾರೆ ಎಂದು ದೇವಾಲಯದ ಅಧಿಕಾರಿಗಳು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

  • ದೇವಸ್ಥಾನಕ್ಕೆ ಮೆಕ್ಯಾನಿಕಲ್ ಆನೆ ಉಡುಗೊರೆ ನೀಡಿದ ಪ್ರಿಯಾಮಣಿ

    ದೇವಸ್ಥಾನಕ್ಕೆ ಮೆಕ್ಯಾನಿಕಲ್ ಆನೆ ಉಡುಗೊರೆ ನೀಡಿದ ಪ್ರಿಯಾಮಣಿ

    ನ್ನಡತಿ, ಬಹುಭಾಷಾ ನಟಿ ಪ್ರಿಯಾಮಣಿ (Priyamani) ಅವರು ದೇವಸ್ಥಾನವೊಂದಕ್ಕೆ ಮೆಕ್ಯಾನಿಕಲ್ ಆನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟಿಯ ನಡೆಗೆ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಇದನ್ನೂ ಓದಿ:ಇಬ್ಬರು ನಟರ ಜೊತೆ ‘ಅನಿಮಲ್‌’ ನಟಿ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಆನೆಯನ್ನು ಗಿಫ್ಟ್ ಆಗಿ ಪ್ರಿಯಾಮಣಿ ನೀಡಿದ್ದಾರೆ. ಇದರ ಗಾತ್ರ ಮತ್ತು ಎತ್ತರ ನಿಜವಾದ ಆನೆಯನ್ನು ಮೀರಿಸುವಂತಿದೆ. ಇದನ್ನು ನೋಡಿ ಗ್ರಾಮಸ್ಥರು ಬೆರಗಾಗಿದ್ದಾರೆ.

    ಪ್ರಿಯಾಮಣಿ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ ಮೆಕ್ಯಾನಿಕಲ್ ಆನೆಯು 3 ಮೀಟರ್ ಎತ್ತರ ಮತ್ತು 800 ಕೆಜಿ ತೂಕವಿದೆ. ರೋಬೋ ಆನೆಯನ್ನು ದೇಶದಾದ್ಯಂತ ತೆಗೆದುಕೊಂಡು ಹೋಗಲು ಅನುಮತಿ ಕೂಡ ನೀಡುತ್ತಾರೆ ಎಂದು ದೇವಾಲಯದ ಅಧಿಕಾರಿಗಳು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

    ‘ಆರ್ಟಿಕಲ್ 370’ (Article 370) ಚಿತ್ರದ ಸಕ್ಸಸ್ ನಂತರ ಕನ್ನಡ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಪ್ರಿಯಾಮಣಿ ಬ್ಯುಸಿಯಾಗಿದ್ದಾರೆ.

  • ದುಡ್ಡು ಕೊಟ್ರೆ ಮಾತ್ರ ಬರುತ್ತಾರೆ- ಬಿಟೌನ್ ಬಗ್ಗೆ ಪ್ರಿಯಾಮಣಿ ಶಾಕಿಂಗ್ ಹೇಳಿಕೆ

    ದುಡ್ಡು ಕೊಟ್ರೆ ಮಾತ್ರ ಬರುತ್ತಾರೆ- ಬಿಟೌನ್ ಬಗ್ಗೆ ಪ್ರಿಯಾಮಣಿ ಶಾಕಿಂಗ್ ಹೇಳಿಕೆ

    ಬೆಂಗಳೂರಿನ ಬೆಡಗಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ‘ಜವಾನ್’ (Jawan) ಸಕ್ಸಸ್ ನಂತರ ಕನ್ನಡದ ಹುಡುಗಿಗೆ ಬಿಟೌನ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ಇದೀಗ ಬಾಲಿವುಡ್‌ನ ಕರಾಳ ಸತ್ಯವನ್ನು ನಟಿ ರಿವೀಲ್ ಮಾಡಿದ್ದಾರೆ. ಪಬ್ಲಿಸಿಟಿಗಾಗಿ ಸೆಲೆಬ್ರಿಟಿಗಳು ಏನೆಲ್ಲ ಮಾಡುತ್ತಾರೆ.

    ಬಾಲಿವುಡ್ ಸೆಲೆಬ್ರೆಟಿಗಳು ಜಿಮ್‌ಗೆ ಹೋಗಲಿ, ಸಲೂನ್‌ಗೆ ಹೋಗಲಿ, ಮನೆ, ಪಾರ್ಟಿ, ವಿಮಾನ ನಿಲ್ದಾಣಕ್ಕೆ ಹೋದ್ರು ಪಾಪರಾಜಿಗಳು ಮುತ್ತಿಕೊಳ್ತಾರೆ. ಹೇಗೆ ಬರ್ತಾರೆ ಇವರೆಲ್ಲಾ ಅಂತ ಅನೇಕರು ಯೋಚಿಸುತ್ತಾರೆ. ಇದಕ್ಕೆಲ್ಲಾ ಈಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಆಮೀರ್ ಖಾನ್ ಮಗನ ಜೊತೆ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ

    ಟಿವಿ ಸಂದರ್ಶನವೊಂದರಲ್ಲಿ ಮಾತಾಡಿದ ಪ್ರಿಯಾಮಣಿ, ಸೆಲೆಬ್ರಿಟಿಗಳು ಒಂದು ರೀತಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರ ಎಂದಿದ್ದಾರೆ. ಸೆಲೆಬ್ರೆಟಿಗಳು ಸೂಟ್‌ನಲ್ಲಿ ಇರೋದು, ಸಲೂನ್‌ಗೆ ಹೋದಾಗಲೂ ಪಾಪರಾಜಿಗಳ ಕ್ಯಾಮೆರಾಗೆ ಸಿಗ್ತಾರೆ. ಪಾಪರಾಜಿಗಳೇ ಅವರ ಹಿಂದೆ ಓಡಾಡ್ತಿರುತ್ತಾರೆ ಎಂದು ಜನಸಾಮಾನ್ಯರು ಊಹಿಸಿರುತ್ತಾರೆ. ಆದರೆ ಅಸಲಿ ಸಂಗತಿಯೇ ಬೇರೇ ಇದೆ ಎಂದಿದ್ದಾರೆ.

    ಪ್ರಚಾರಕ್ಕಾಗಿ ಪಿಆರ್‌ಗಳ ಮೂಲಕ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ. ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ-ವಿಡಿಯೋ ತೆಗೆದು ಪ್ರಚಾರ ಮಾಡೋದು ಅಂತ ನಟಿ ಪ್ರಿಯಾಮಣಿ ಹೇಳಿದ್ದಾರೆ. ಪ್ರಿಯಾಮಣಿ ಹೇಳಿಕೆ ಈಗ ಸಖತ್ ಸದ್ದು ಮಾಡುತ್ತಿದೆ. ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

    ‘ಜವಾನ್’ ಬಳಿಕ ‘ಆರ್ಟಿಕಲ್ 370’ (Article 370) ಚಿತ್ರದಲ್ಲಿ ಪ್ರಿಯಾಮಣಿ ಯಾಮಿ ಗೌತಮಿ (Yami Gouthami) ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಮಣಿ ನಟನೆಗೆ ಮೆಚ್ಚುಗೆ ಸಿಕ್ಕಿದೆ.

  • ಮೊದಲ ದಿನವೇ ‘ಆರ್ಟಿಕಲ್ 370’ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್

    ಮೊದಲ ದಿನವೇ ‘ಆರ್ಟಿಕಲ್ 370’ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್

    ಬಾಲಿವುಡ್ ನ ನಿರೀಕ್ಷಿತ ಸಿನಿಮಾ ಆರ್ಟಿಕಲ್ 370 (Article 370) ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇವಲ ನೋಡುಗರು ಮಾತ್ರವಲ್ಲ, ವಿಮರ್ಶಕರೂ ಕೂಡ ಸಿನಿಮಾದ ಬಗ್ಗೆ ಹೊಗಳಿ ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಚಿತ್ರವನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ಸಕಾರಾತ್ಮಕವಾಗಿಯೇ ಕೇಳಿ ಬರುತ್ತಿದೆ.

    ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು. ಕಾಶ್ಮೀರದಲ್ಲಿ ನಡೆದ ಕಾರ್ಯಮಕ್ರದಲ್ಲಿ ಮೋದಿ, ‘ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತೆಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದರು.

    ಮೋದಿಯ ಈ ಭಾಷಣವನ್ನು ಕೇಳಿರುವ ಆರ್ಟಿಕಲ್ 370 ಸಿನಿಮಾದ ನಾಯಕಿ ಯಾಮಿನಿ ಗೌತಮ್ (Yamini Gautam), ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಈ ನೈಜ ಕಥೆಯನ್ನು ನಿಮಗೆ ಮತ್ತು ಎಲ್ಲರಿಗೂ ಒಪ್ಪುವಂತೆ ಸಿನಿಮಾ ಮಾಡಿದ್ದೇವೆ ಎನ್ನುವ ಭರವಸೆಯನ್ನು ನಾನು ಮತ್ತು ನನ್ನ ತಂಡ ನೀಡಲಿದೆ ಎಂದು ಯಾಮಿನಿ ಪ್ರತಿಕ್ರಿಯೆ ನೀಡಿದ್ದರು.

    ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ಹೆಸರಾಂತ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ‘ಆರ್ಟಿಕಲ್ 370’ (Article 370)ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೈಲರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪಾತ್ರಗಳು ಇವೆ. ರಿಲೀಸ್ ಆದ ಟ್ರೈಲರ್ (Trailer)ನಲ್ಲಿ ‘ಪೂರಾ ಕಾ ಪೂರಾ ಕಾಶ್ಮೀರ್ (Kashmir), ಭಾರತ್ ದೇಶ್ ಕಾ ಹಿಸ್ಸಾ ಥಾ. ಹೇ ಔರ್ ರೆಹೇಗಾ’ ಎನ್ನುವ ಮಾತು ಮತ್ತೆ ಮತ್ತೆ ಪ್ರೇರೇಪಿಸುತ್ತಿದೆ. ಅಂದಹಾಗೆ ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಫೆಬ್ರವರಿ 23 ರಂದು ಈ ಸಿನಿಮಾ ತೆರೆಗೆ ಬರಲಿದ್ದು, ಯಾಮಿ ಗೌತಮ್ ಖಡಕ್ ಎನ್.ಐ.ಎ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

     

    ಟ್ರೈಲರ್ ನಲ್ಲಿ ಕಾಶ್ಮೀರ ಭಯೋತ್ಪಾದನೆ, ಸೇನಾಧಿಕಾರಿಗಳ ಹೋರಾಟ, ಆರ್ಟಿಕಲ್ 370 ತೆಗೆದರೆ ಏನೆಲ್ಲ ಆಗಲಿದೆ ಎನ್ನುವ ಚರ್ಚೆ. ಭಯೋತ್ಪಾದಕರ ಕುತಂತ್ರ ಹೀಗೆ ಸಾಕಷ್ಟು ವಿಷಯಗಳನ್ನು 2 ನಿಮಿಷ 40 ಸೆಕೆಂಡ್ ನ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಶಾಶ್ವತ್ ಸಚ್ ದೇವ್ ಅವರ ಹಿನ್ನೆಲೆ ಸಂಗೀತ ಸೂಪರ್.

  • ‘Devara’ ಚಿತ್ರದ ಅಪ್‌ಡೇಟ್- ಜ್ಯೂ.ಎನ್‌ಟಿಆರ್‌ಗೆ ತಾಯಿಯಾಗಿ ನಟಿಸುತ್ತಾರಾ ಪ್ರಿಯಾಮಣಿ?

    ‘Devara’ ಚಿತ್ರದ ಅಪ್‌ಡೇಟ್- ಜ್ಯೂ.ಎನ್‌ಟಿಆರ್‌ಗೆ ತಾಯಿಯಾಗಿ ನಟಿಸುತ್ತಾರಾ ಪ್ರಿಯಾಮಣಿ?

    ಟಾಲಿವುಡ್ ಬಹುನಿರೀಕ್ಷಿತ ‘ದೇವರ’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಆರ್‌ಆರ್‌ಆರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ (Jr.ntr) ದೇವರ ಚಿತ್ರದ ಮೂಲಕ ಸೌಂಡ್ ಮಾಡ್ತಿದ್ದಾರೆ. ಈ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅಂದು ತಾರಕ್‌ಗೆ ನಾಯಕಿಯಾಗಿದ್ದ ಪ್ರಿಯಾಮಣಿ (Priyamani) ಈಗ ತಾಯಿ ಪಾತ್ರದಲ್ಲಿ ನಟಿಸಲು ಓಕೆ ಎಂದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

    ಬಹುಭಾಷಾ ನಟಿಯಾಗಿ ಪ್ರಿಯಾಮಣಿಗೆ (Priyamani) ಇಂದಿಗೂ ಡಿಮ್ಯಾಂಡ್ ಇದೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ ‘ದೇವರ’ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್-ಪ್ರಿಯಾಮಣಿ ತಾಯಿ ಮತ್ತು ಮಗನಾಗಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಮಂತಾ ಔಟ್‌, ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್‌ ಚಾನ್ಸ್

    ಕೊರಟಾಲ ಶಿವ-ಜ್ಯೂ.ಎನ್‌ಟಿಆರ್ ಕಾಂಬೋದಲ್ಲಿ ‘ದೇವರ’ (Devara) ಸಿನಿಮಾ ಮೂಡಿ ಬರುತ್ತಿದೆ. ಜ್ಯೂ.ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಂಗ್ ಹೀರೋಗೆ ಜಾನ್ವಿ ಕಪೂರ್ (Janhavi Kapoor) ನಾಯಕಿಯಾಗಿದ್ದಾರೆ. ಪ್ರಿಯಾಮಣಿ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಜ್ಯೂ.ಎನ್‌ಟಿಆರ್ ತಾಯಿಯ ಪಾತ್ರ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಎಂಬುದನ್ನ ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ.

    ‘ದೇವರ’ ಚಿತ್ರದ ಬಳಿಕ ಪ್ರಶಾಂತ್ ನೀಲ್ (Prashanth Neel) ಜೊತೆ ಜ್ಯೂ.ಎನ್‌ಟಿಆರ್ ಕೈಜೋಡಿಸಿದ್ದಾರೆ. ದೇವರ ಸಿನಿಮಾ ರಿಲೀಸ್ ಬಳಿಕ ಕೆಜಿಎಫ್ ನಿರ್ದೇಶಕನ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಂಟಿ ಎಂದು ಕರೆದಿದ್ದಕ್ಕೆ ಪ್ರಿಯಾಮಣಿ ಕೊಟ್ರು ಖಡಕ್ ಉತ್ತರ

    ಆಂಟಿ ಎಂದು ಕರೆದಿದ್ದಕ್ಕೆ ಪ್ರಿಯಾಮಣಿ ಕೊಟ್ರು ಖಡಕ್ ಉತ್ತರ

    ಪ್ರಿಯಾಮಣಿ (Priyamani) ಯಾರಿಗೆ ಗೊತ್ತಿಲ್ಲ. ಮದುವೆಯಾದರೂ (Wedding) ಅದೇ ಗ್ಲಾಮರ್ ಉಳಿಸಿಕೊಂಡಿದ್ದಾರೆ. ಜವಾನ್‌ನಲ್ಲಿ (Jawan) ಶಾರುಖ್ ಜೊತೆ ಮಿಂಚಿದ ಮೇಲೆ ಇನ್ನಷ್ಟು ಜೋಶ್ ಬಂದಿದೆ. ಈ ಹೊತ್ತಲ್ಲೇ ಪ್ರಿಯಾಮಣಿಯನ್ನು ಯಾರೋ ಆಂಟಿ ಎಂದಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಮಲಯಾಳಿ ಕುಟ್ಟಿ ಕೊಟ್ಟ ಖಡಕ್ ಉತ್ತರ ಏನು ಗೊತ್ತೆ? ಇದನ್ನೂ ಓದಿ:Bigg Boss Kannada 10: ಊರ ಹಬ್ಬಕ್ಕೆ ರೆಡಿಯಾದ ಕಿಚ್ಚ ಸುದೀಪ್

    ಪ್ರಿಯಾಮಣಿ ಮೊದಲ ಚಿತ್ರಕ್ಕೆ ಶ್ರೇಷ್ಟ ನಟಿ ರಾಷ್ಟ್ರ ಪ್ರಶಸ್ತಿ (National Award) ಪಡೆದ ಹುಡುಗಿ. ಆಮೇಲೆ ಪಂಚಭಾಷೆಗಳಲ್ಲಿ ಮಿಂಚಿದರು. ಅಭಿನಯಕ್ಕೂ ಸೈ-ಗ್ಲಾಮರ್‌ಗೂ ಜೈ ಎಂದರು. ಅದೇ ಪ್ರಿಯಾಮಣಿ ಡಿವೋರ್ಸಿಯನ್ನು (Divorce) ಮದುವೆಯಾದರು. ಆಗ ವಿವಾದ ಎದ್ದಿತ್ತು. ಇದೀಗ ಜವಾನ್‌ನಲ್ಲಿ ಕಿಂಗ್‌ಖಾನ್ ಜೊತೆ ಹಬ್ಬ ಮಾಡಿದ್ದಾರೆ. ಯಾರೋ ಒಬ್ಬ ಇಂಥ ಪ್ರಿಯಾಗೆ ಆಂಟಿ ಎನ್ನಬೇಕಾ? ಯಾರಿಗೆ ತಾನೇ ಪಿತ್ತ ನೆತ್ತಿಗೇರಲ್ಲ? ಪ್ರಿಯಾಮಣಿ ಕೊಟ್ಟಿದ್ದು ಉತ್ತರ ಅಲ್ಲ.ಜ್ವಾಲಾಮುಖಿ ಸೂಪು.

    ಏಯ್ ನಂಗ್ಯಾರೊ ಆಂಟಿ ಅನ್ನೋರು? ನಂಗಿನ್ನೂ 38 ವರ್ಷ. ಹಾಗಿದ್ರೂ ಹಾಟ್ ಹಾಟ್ ಆಗಿದ್ದೀನಿ ಬಾಯ್ ಮುಚ್ಕೊಳ್ಳಿ ಪ್ರಿಯಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಬ್ಬಾಶ್ ಎಂದಿದ್ದಾರೆ. ಮೂವತ್ತೆಂಟು ವಯಸ್ಸು ಆದ್ರೂ ಕಮ್ಮಿ ಇಲ್ಲ ತೇಜಸ್ಸು. ನೀನೇ ನಮ್ಮ ಕಲ್ಲಂಗಡಿ ಜ್ಯೂಸು ಹೀಗೆ ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿಲ್ಲ ನಗಿಸಿದ್ದಾರೆ. ಪ್ರಿಯಾ ಮಣಿಯಂತೆ ವಯಸ್ಸನ್ನು ಹೇಳುವ ನಾ ಆಂಟಿ ಅಲ್ರಪ್ಪಾ ಎನ್ನುವ ಗತ್ತು ಯಾರಿಗಿದೆ?

    ಸದ್ಯ ‘ಜವಾನ್’ (Jawan) ಸಿನಿಮಾದಲ್ಲಿ ಶಾರುಖ್ (Sharukh Khan) ಜೊತೆ ಪ್ರಿಯಾಮಣಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋಹನ್ ಲಾಲ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾಮಣಿ

    ಮೋಹನ್ ಲಾಲ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾಮಣಿ

    ನ್ನಡದ ಹೆಸರಾಂತ ನಟಿ ಪ್ರಿಯಾಮಣಿ (Priyamani) ನಟನೆಯ ಜವಾನ್ ಸಿನಿಮಾದ ಭಾರೀ ಗೆಲುವು ಹಲವರಿಗೆ ಅದೃಷ್ಟವನ್ನು ತಂದಿದೆ. ಜವಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ಪ್ರಿಯಾಮಣಿ ಇದೀಗ ಮತ್ತೋರ್ವ ಸ್ಟಾರ್ ನಟನ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಮಲಯಾಳಂನ ಹೆಸರಾಂತ ನಟ ಮೋಹನ್ ಲಾಲ್ (Mohan Lal) ನಟನೆಯ ‘ನೇರು’ (Neru) ಸಿನಿಮಾಗೆ ಪ್ರಿಯಾಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಈ ಮಾಹಿತಿಯನ್ನು ಸ್ವತಃ ಪ್ರಿಯಾಮಣಿ ಅವರೇ ಹಂಚಿಕೊಂಡಿದ್ದು, ನೇರು ಸಿನಿಮಾದ ಶೂಟಿಂಗ್ ನಲ್ಲೂ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಹೇಳಿಕೊಂಡಿದ್ದರೂ, ಪಾತ್ರದ ಹಿನ್ನೆಲೆಯನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಆದರೆ, ಹೆಮ್ಮೆಯಿಂದ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

    ಜವಾನ್ ಸಿನಿಮಾದಲ್ಲಿ ಪ್ರಿಯಾಮಣಿ ಅವರ ಪಾತ್ರ ತುಂಬಾ ಹೊತ್ತು ಪರದೆಯ ಮೇಲೆ ಬಾರದೇ ಇದ್ದರೂ, ಅದೊಂದು ವಿಭಿನ್ನ ಮತ್ತು ವಿಶೇಷ ಪಾತ್ರವಾಗಿತ್ತು. ಹಾಗಾಗಿ ಪ್ರಿಯಾಮಣಿ ಪಾತ್ರ ಜನರ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಇದೀಗ ಮತ್ತೆ ಸ್ಟಾರ್ ನಟನ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

     

    ಈ ಸಿನಿಮಾವನ್ನು ಜೀತು ಜೋಸೆಫ್ (Jeetu Joseph) ನಿರ್ದೇಶನ ಮಾಡುತ್ತಿದ್ದು, ಮೋಹನ್ ಲಾಲ್ ನಟನೆಯ ದೃಶ್ಯಂ ಸಿನಿಮಾಗೆ ಇವರೇ ನಿರ್ದೇಶಕರು. ದೃಶ್ಯಂ, ದೃಶ್ಯಂ2 ಯಶಸ್ಸಿನ ನಂತರ ಮತ್ತೆ ಮೋಹನ್ ಲಾಲ್ ಜೊತೆ ಜೀತು ಕೈ ಜೋಡಿಸಿದ್ದಾರೆ. ಹೀಗಾಗಿ ನೇರು ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಕತೆಯನ್ನು ಹೇಳಲಿದ್ದಾರಂತೆ ಜೀತು ಜೋಸೆಫ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]