Tag: Private Loan Clear

  • ಕೈಸಾಲ ಕೊಟ್ಟವರಿಗೆ ಕೈಮುಗಿದು, ಎಲ್ಲಾ ಆಗೋಯ್ತು ಇನ್ನೇನೂ ಕೇಳ್ಬೇಡಿ ಅಂದುಬಿಡಿ: ಡಿಸಿಎಂ ಪರಮೇಶ್ವರ್

    ಕೈಸಾಲ ಕೊಟ್ಟವರಿಗೆ ಕೈಮುಗಿದು, ಎಲ್ಲಾ ಆಗೋಯ್ತು ಇನ್ನೇನೂ ಕೇಳ್ಬೇಡಿ ಅಂದುಬಿಡಿ: ಡಿಸಿಎಂ ಪರಮೇಶ್ವರ್

    ತುಮಕೂರು: ಕೈಸಾಲ ಕೊಟ್ಟಿರುವವರಿಗೆ ಕೈಮುಗಿದು, ಎಲ್ಲಾ ಆಗಿ ಹೋಯಿತು, ಇನ್ನೇನೂ ನಮ್ಮ ಹತ್ತಿರ ಕೇಳ ಬೇಡಿ ಅಂಥ ಹೇಳಿಬಿಡಿ ಎಂದು ರೈತರಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಖಾಸಗಿ ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದಾರೆ.

    ಕೊರಟಗೆರೆಯ ಕ್ಯಾಮೇನಹಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಒಕ್ಕೂಟದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ರೈತರ ಪರವಾಗಿ ನಿಲ್ಲಬೇಕೆಂದು 49 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ಮನ್ನಾ ಮಾಡಿದ್ದರೂ ಸಹ ಬಹಳ ದೊಡ್ಡ ದೊಡ್ಡ ಟೀಕೆಗಳನ್ನು ಮಾಡಿದ್ದಾರೆ. ಅವುಗಳಿಗೆ ಉತ್ತರಿಸುವ ಅವಶ್ಯಕತೆಯೂ ಇಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಶ್ನೆಯೂ ಅಲ್ಲ. ಕೇವಲ ರೈತರ ಕಷ್ಟಕ್ಕೆ ನೆರವಾಗಿದ್ದೇವೆ ಎನ್ನುವುದು ಮುಖ್ಯವೆಂದು ತಿಳಿಸಿದ್ದಾರೆ.

    ರೈತರಿಗಾಗಿ ನಮ್ಮ ಅನವಶ್ಯಕತ ಖರ್ಚುಗಳನ್ನು ನಿಲ್ಲಿಸಿದ್ದೇವೆ. ಇಂದಿನಿಂದ ಸಾಲಮನ್ನಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದರ ಜೊತೆಗೆ ಬ್ಯಾಂಕ್ ಸಾಲ ಹಾಗೂ ಕೈಸಾಲ ಮನ್ನಾಗೂ ಕಾಯ್ದೆ ರೂಪಿಸಿದ್ದೇವೆ. ಈಗಾಗಲೇ ಕ್ಯಾಬಿನೆಟ್‍ನಲ್ಲಿಯೂ ಋಣಮುಕ್ತ ಕಾಯ್ದೆಯನ್ನು ಮಂಜೂರು ಮಾಡಲಾಗಿದೆ. ಕೈಸಾಲ ಪಡೆದ ರೈತರು ಸಾಲ ಕೊಟ್ಟಿರುವವರಿಗೆ ಕೈ ಮುಗಿದು, ಸ್ವಾಮಿ ಎಲ್ಲಾ ಆಗಿ ಹೋಯಿತು. ಇನ್ನೇನೂ ನಮ್ಮ ಹತ್ರ ಕೇಳಬೇಡಿ ಅಂತ ಹೇಳಿಬಿಡಿ ಎಂದು ರೈತರ ಪರವಾಗಿ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತರ ಖಾಸಗಿ ಸಾಲವೂ ಮನ್ನಾ- ಯಾರದ್ದು ಆಗುತ್ತೆ? ಯಾರದ್ದು ಆಗಲ್ಲ?

    ರೈತರ ಖಾಸಗಿ ಸಾಲವೂ ಮನ್ನಾ- ಯಾರದ್ದು ಆಗುತ್ತೆ? ಯಾರದ್ದು ಆಗಲ್ಲ?

    ಬೆಂಗಳೂರು: ರೈತರ ರಾಷ್ಟ್ರೀಕೃತ ಹಾಗೂ ಪ್ರಾದೇಶಿಕ ಬ್ಯಾಂಕುಗಳ ಸಾಲಮನ್ನಾ ಮಾಡಿದ ಬಳಿಕ ರೈತರ ಖಾಸಗಿ ಸಾಲವನ್ನೂ ಸಹ ಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.

    ಹೌದು. ಸಿಎಂ ಕುಮಾರಸ್ವಾಮಿಯವರು ಸಹಕಾರಿ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಜೊತೆಗೆ ಹೊಸ ಅಸ್ತ್ರ ಪ್ರಯೋಗಿಸಿದ್ದು, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಖಾಸಗಿ ಸಾಲಮನ್ನಾ ಮಾಡುವ ಕುರಿತು ತೀರ್ಮಾನ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಖಾಸಗಿ ಸಾಲಮನ್ನಾಕ್ಕೆ ರಾಷ್ಟ್ರಪತಿಗಳ ಅಂಕಿತ ಹಾಕುವುದು ಅನಿವಾರ್ಯವಾಗಿದೆ ಎಂದು ತಿಳಿದು ಬಂದಿದೆ.

    ಈ ಮೂಲಕ ಜಾಸ್ತಿ ದಿನ ಸರ್ಕಾರ ಉಳಿಯಲ್ಲ ಅನ್ನೋ ವಿರೋಧಿಗಳ ಹೇಳಿಕೆಗೆ ಬಹುದೊಡ್ಡ ಶಾಕ್ ನೀಡಿದ್ದು, ಮತ್ತೆ ಸಿಎಂ ಆಗುತ್ತೇನೆಂಬ ಸಿದ್ದರಾಮಯ್ಯನವರ ಆಸೆಯ ಬೆನ್ನಲ್ಲೇ ಬೃಹತ್ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಸಿಎಂ ಕುಮಾರಸ್ವಾಮಿ ಮುಂದಾಗುವುದರ ಮೂಲಕ ಮಿತ್ರಪಕ್ಷ ಕಾಂಗ್ರೆಸ್ ಗೆ ಶಾಕ್ ನೀಡಿ, ಸರ್ಕಾರ ಅಸ್ಥಿರಗೊಳಿಸುವ ವಿರೋಧಿಗಳ ಯತ್ನಕ್ಕೆ ಭಾರೀ ಹಿನ್ನಡೆಯಾಗುವಂತೆ ಮಾಡಿದ್ದಾರೆ ಎನ್ನಲಾಗಿದೆ.

    ಯಾರದ್ದೆಲ್ಲಾ ಸಾಲಮನ್ನಾ ಆಗುತ್ತೇ?
    * ಖಾಸಗಿ ಲೇವಾದೇವಿಗಾರರು, ಹಣಕಾಸು ಸಂಸ್ಥೆಗಳು ಹಾಗೂ ಗಿರವಿದಾರರಿಂದ ಪಡೆದ ಸಾಲ.
    * ಚರಾಸ್ಥಿ ಅಡಮಾನ ಇಟ್ಟುಕೊಂಡು ಸಾಲ ನೀಡಿದವರ ಸಾಲ.
    * ಅಡಮಾನ ಇಟ್ಟ ಸ್ಥಿರಾಸ್ತಿ ಬಿಡುಗಡೆಗೆ ಅವಕಾಶ.
    * 2 ಹೆಕ್ಟೇರ್ ಒಣಭೂಮಿ ಹೊಂದಿರುವ ರೈತರು.
    * ಒಂದೂವರೆ ಎಕರೆ ಮಳೆ ಆಧಾರಿತ ಕೃಷಿ ಭೂಮಿ ಹೊಂದಿರುವ ರೈತರು.
    * ಅರ್ಧ ಎಕರೆ ನೀರಾವರಿ ಜಮೀನು ಹೊಂದಿರುವ ರೈತರಿಗೆ ಲಾಭ.
    * ಸಣ್ಣ ರೈತ, ಭೂ ರಹಿತ ಕೃಷಿ ಕಾರ್ಮಿಕರ ಆದಾಯ 1.25 ಲಕ್ಷ ಆದಾಯ ಮೀರದೇ ಇರುವವರು.

    ಯಾರ ಸಾಲಮನ್ನಾ ಇಲ್ಲ?
    * ಭೂಕಂದಾಯ ವಸೂಲಾತಿಗೆ ಉಳಿಸಿಕೊಂಡಿರುವವರ ಬಾಕಿ.
    * ಯಾವುದೇ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಯ ಪ್ರಾಧಿಕಾರ ಪಡೆದುಕೊಂಡಿರು ಸಾಲ.
    * ತೆರಿಗೆ ಅಥವಾ ರಾಜಸ್ವ ಬಾಕಿಯಿಂದ ಉಳಿಸಿಕೊಂಡಿರುವ ಸಾಲ.
    * ಕೇಂದ್ರ, ರಾಜ್ಯ, ಸ್ಥಳೀಯ ಸಂಸ್ಥೆಗಳ ಬಾಕಿಗೆ ಅನ್ವಯವಾಗಲ್ಲ.
    * ಕೂಲಿ, ಸಂಭಾವನೆ, ವೇತನ ಬಾಕಿಗೆ ಅನ್ವಯವಾಗಲ್ಲ.
    * ಸರ್ಕಾರಿ ಕಂಪೆನಿ ಸಾಲ.
    * ಭಾರತೀಯ ಜೀವ ವಿಮಾ ನಿಗಮ (ಎಲ್‍ಐಸಿ).
    * ರಾಜ್ಯ ಸಹಕಾರ ಸಂಘಗಳ ಅಡಿ ನೋಂದಣಿಯಾದ ಸಂಘಗಳು.
    * ಒಪ್ಪಂದ, ಬಳಕೆ, ಡಿಕ್ರಿ, ಆದೇಶ ಇದ್ದರೆ ಅನ್ವಯವಾಗಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv