Tag: prime minister modi

  • ಅಕ್ರಮ ನಗದು ಬದಲಾವಣೆಯ ವಿರುದ್ಧ ಮೋದಿ ಸರ್ಕಾರದಿಂದ ಮತ್ತೊಂದು ಅಸ್ತ್ರ!

    ಅಕ್ರಮ ನಗದು ಬದಲಾವಣೆಯ ವಿರುದ್ಧ ಮೋದಿ ಸರ್ಕಾರದಿಂದ ಮತ್ತೊಂದು ಅಸ್ತ್ರ!

    ನವದೆಹಲಿ: ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುವವರ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಬ್ಯಾಂಕ್ ನಗದು ವಹಿವಾಟು ನಡೆಸುವ ವೇಳೆ ಅಸಲಿ ದಾಖಲೆಗಳನ್ನು ತೋರಿಸುವುದು ಕಡ್ಡಾಯ ಎಂಬ ನಿಯಮವನ್ನು ಅಕ್ರಮ ನಗದು ಚಲಾವಣೆ ತಡೆ ಕಾಯ್ದೆ ನಿಯಮ 9ರ (ಪಿಎಂಎಲ್‍ಎ) ಅಡಿಯಲ್ಲಿ ಜಾರಿಗೆ ತರಲಾಗಿದೆ.

    ಬ್ಯಾಂಕ್ ವ್ಯವಹಾರದ ವೇಳೆ 50 ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುವವರು ಇನ್ನು ಕಡ್ಡಾಯವಾಗಿ ಅಸಲಿ ದಾಖಲೆಗಳನ್ನು ತೋರಿಸಬೇಕಾಗಿದ್ದು, ಬ್ಯಾಂಕ್ ಸಿಬ್ಬಂದಿ ದಾಖಲೆಗಳಲ್ಲಿನ ಮಾಹಿತಿಯನ್ನು ನಮೂದಿಸಿಕೊಳ್ಳಬೇಕಿದೆ. ಅಲ್ಲದೇ ಈ ಅಗತ್ಯ ಬಿದ್ದಲ್ಲಿ ಈ ಮಾಹಿತಿಯನ್ನು ಭಾರತದ ಆರ್ಥಿಕ ಗುಪ್ತಚರ ಘಟಕ(ಎಫ್‍ಐಯು-ಐಎನ್‍ಡಿ) ಕ್ಕೆ ಸಲ್ಲಿಸಬೇಕು ಎಂಬ ನಿಯಮವನ್ನು ಹಣಕಾಸು ಸಚಿವಾಲಯ ಜಾರಿಗೆ ತಂದಿದೆ.

    ಕೇವಲ ಬ್ಯಾಂಕ್ ಮಾತ್ರವಲ್ಲದೇ ಹಣಕಾಸು ವ್ಯವಹಾರ ನಡೆಸುವ ಎಲ್ಲಾ ಸಂಸ್ಥೆಗಳು ಈ ನಿಯಮವನ್ನು ಪಾಲಿಸಬೇಕಾಗಿದ್ದು, ನಗದು ವರ್ಗಾವಣೆ ಮಾಡುವವರು ಹಣವನ್ನು ಯಾರು, ಯಾರಿಗೆ, ಯಾತಕ್ಕಾಗಿ, ಎಷ್ಟು ಎಂಬ ಮಾಹಿತಿಯನ್ನು ದಾಖಲಿಸಿಕೊಳ್ಳಬೇಕಿದೆ.

    ಈ ಹಿಂದೆ ಬ್ಯಾಂಕ್ ಅಕೌಂಟ್‍ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತಂದಿತ್ತು. ಅಲ್ಲದೇ 50 ರೂ. ಸಾವಿರಕ್ಕಿಂತ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡಬೇಕಾದರೆ ಪಾನ್(ಪಾರ್ಮನೆಂಟ್ ಅಕೌಂಟ್ ನಂಬರ್) ನಂಬರ್ ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿತ್ತು.

    ಇದೀಗ ಆಧಾರ್, ಪಾನ್ ನಂಬರ್‍ನ ಮೂಲ ದಾಖಲಾತಿಗಳಲ್ಲಿ ವಿಳಾಸವನ್ನು ನವೀಕರಿಸಿದ್ದಾರೆ. ಅಂತಹ ಸಂದರ್ಭದಲ್ಲಿ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್, ಪೋಸ್ಟ್ ಪೈಡ್ ಮೊಬೈಲ್ ಫೋನ್ ಮಾಹಿತಿ, ಗ್ಯಾಸ್ ಬಿಲ್, ಟ್ಯಾಕ್ಸ್ ಬಿಲ್, ಸರ್ಕಾರಿ ಅಧಿಕಾರಿಗಳ ಪಿಂಚಣಿ ಆದೇಶ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಈ ದಾಖಲೆಗಳು 2 ತಿಂಗಳಿಗಿಂತ ಹಳೆಯ ದಾಖಲೆಗಳಾಗಿರಬಾರದು ಎಂಬ ನಿಯಮವನ್ನು ವಿಧಿಸಲಾಗಿದೆ.

    ಇದನ್ನೂ ಓದಿ: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ-ಆರ್‍ಬಿಐ ಸ್ಪಷ್ಟನೆ

  • ಪಕ್ಷಾಂತರಿಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ ಮಲ್ಲಿಕಾರ್ಜುನ ಖರ್ಗೆ!

    ಪಕ್ಷಾಂತರಿಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ ಮಲ್ಲಿಕಾರ್ಜುನ ಖರ್ಗೆ!

    ಬೆಂಗಳೂರು: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿಗೆ ಇರುವ ಯಾರು ಬೇಕಾದರೂ ಪಕ್ಷಕ್ಕೆ ಸೇರಬಹುದು, ಆದರೇ ಪಕ್ಷಕ್ಕ ಸೇರ್ಪಡೆ ಮಾಡಿಕೊಳ್ಳುವ ಅಂತಿಮ ನಿರ್ಧಾರದಲ್ಲಿ ಹೈಕಮಾಂಡ್ ಅನುಮತಿ ಕಡ್ಡಾಯ ಎಂದು ಲೋಕಸಭಾ ಸಂಸದೀಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

    ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷದಿಂದ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಆದರೆ ಪಕ್ಷಕ್ಕೆ ಬಂದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಮುಖಂಡರು ಬಿಜೆಪಿ ಗೆ ಹೋಗ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹೇಳ್ತಾರೆ. ಯಾರು, ಯಾಕೆ, ಯಾವಾಗ ಹೋಗ್ತಾರೆ ಅನ್ನೋದನ್ನ ನೋಡೋಣ ಎಂದು ಹೇಳಿದರು.

    ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಖರ್ಗೆ, ಕೇದಾರನಾಥ್ ಪ್ರಕೃತಿ ವಿಕೋಪದ ವೇಳೆ ಅಂದಿನ ಯುಪಿಎ ಕೇಂದ್ರ ಸರ್ಕಾರ ಏನು ಮಾಡಲಿಲ್ಲ ಅಂತಾ ಪ್ರಧಾನಿ ಮೋದಿ ಹೇಳಿರೋದು ಸರಿಯಲ್ಲ. ಅಂದು ನಾನು ರೈಲ್ವೇ ಮಂತ್ರಿಯಾಗಿದ್ದೆ. ಮೋದಿ ಗುಜರಾತ್ ಸಿಎಂ ಆಗಿ ಗುಜರಾತ್ ಜನತೆಗೆ ಅಲ್ಲಿ ತೊಂದರೆಯಾಗಿದೆ ಅಂದಾಗ ನಾನೇ ಎರಡು ರೈಲು ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟೆ ಅಂತ ಸ್ಪಷ್ಟಪಡಿಸಿದ್ರು.

    ಹಿಮಾಚಲ ಪ್ರದೇಶ ರಾಜ್ಯದ ಚುನಾವಣೆ ಘೋಷಣೆ ಮಾಡುತ್ತೀರಿ. ಆದ್ರೆ ಗುಜರಾತ್ ಚುನಾವಣೆ ದಿನಾಂಕವನ್ನು ಮಾತ್ರ ಘೋಷಣೆ ಮಾಡಲ್ಲ ಯಾಕೆ ಅಂತ ಪ್ರಶ್ನೆ ಮಾಡಿದ ಖರ್ಗೆ ಮೋದಿ ಕೇವಲ ಸುಳ್ಳು ಹೇಳುತ್ತಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆ ಕೊಟ್ಟಿದ್ದಾಯ್ತು. ಸಂಸತ್ತಿನಲ್ಲಿ ಜಿಎಸ್‍ಟಿ ಕಡಿಮೆ ಮಾಡಲಿಕ್ಕೆ ಒತ್ತಾಯ ಮಾಡಿದರೂ ಮಾಡಲಿಲ್ಲ. ಈಗ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಜಿಎಸ್‍ಟಿ ಕಡಿಮೆ ಮಾಡಲು ಮೋದಿ ಹೊರಟಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

     

  • ಪ್ರತಿ ಜಿಲ್ಲೆಯಲ್ಲಿ ಒಂದು ಆಯುರ್ವೇದ ಆಸ್ಪತ್ರೆ  ಸ್ಥಾಪನೆ: ಮೋದಿ

    ಪ್ರತಿ ಜಿಲ್ಲೆಯಲ್ಲಿ ಒಂದು ಆಯುರ್ವೇದ ಆಸ್ಪತ್ರೆ ಸ್ಥಾಪನೆ: ಮೋದಿ

    ನವದೆಹಲಿ: ದೇಶದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ದೇಶದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಆಯುರ್ವೇದವು ಪುರಾತನ ಭಾರತೀಯ ಸಂಸ್ಕತಿಯ ಕೊಡುಗೆಯಾಗಿದ್ದು, ಮತ್ತೆ ಪ್ರಕೃತಿ ಚಿಕಿತ್ಸೆಯ ಕಡೆಗೆ ಸಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಯುರ್ವೇದ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

    ಖಾಸಗಿ ಸಂಸ್ಥೆಗಳು ಸಹ ಈ ಯೋಜನೆಯಲ್ಲಿ ಭಾಗವಹಿಸುವ ಅಗತ್ಯವಿದ್ದು, ಆಯುರ್ವೇದ ಮಹತ್ವವನ್ನು ಸಾರುವ ದೃಷ್ಟಿಯಿಂದ ತಮ್ಮ ಬದ್ಧತೆಯನ್ನು ತೋರ್ಪಡಿಸುವ ಅಗತ್ಯವಿದೆ ಎಂದರು.

    ದೇಶದಲ್ಲಿ ಕಳೆದ 30 ವರ್ಷಗಳಿಂದ ಐಟಿ ಕ್ರಾಂತಿಯನ್ನು ಕಂಡಿದ್ದೇವೆ. ಪ್ರಸ್ತುತ ಆಯುರ್ವೇದ ಅಡಿಯಲ್ಲಿ ಆರೋಗ್ಯ ಜಾಗೃತಿ ಕುರಿತ ಕ್ರಾಂತಿ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ದೇಶಾದ್ಯಂತ ಪ್ರತಿ ಜಿಲ್ಲೆಗೂ ಒಂದು ಆಯುರ್ವೇದ ಕೇಂದ್ರವನ್ನು ಸ್ಥಾಪಿಸಲು ಸಿದ್ಧವಿದೆ. ಈ ಕುರಿತು ಆಯುಷ್ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

    ಪ್ರಪಂಚದಾದ್ಯಂತ ಎಲ್ಲರಿಗೂ ಆರೋಗ್ಯದ ಕುರಿತ ಜಾಗೃತಿ ಹೆಚ್ಚಳವಾಗುತ್ತಿದ್ದು, ಆಯುರ್ವೇದ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಲು ಉತ್ತಮ ಸಮಯವಿದು. ಮುಂದೆ ಆಯುರ್ವೇದ ವಿದ್ಯಾರ್ಥಿಗಳಿಗೆ ಈ ಕುರಿತು ಉತ್ತಮ ಪಠ್ಯವನ್ನು ಸಿದ್ಧಪಡಿಸಲಾಗುವುದು. ಅಲ್ಲದೇ ವಿಶ್ವ ವಿದ್ಯಾಲಯಗಳಲ್ಲಿ ಹೆಚ್ಚಿನ ಸೀಟುಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

    ಆಯುಷ್ ಮತ್ತು ಕೃಷಿ ಇಲಾಖೆಯ ರೈತರಿಗೆ ಔಷಧಿಯ ಸಸಿಗಳ ಬಗ್ಗೆ ಮಾಹಿತಿ ನೀಡಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಆರ್ಯುವೇದ ಸಸಿಗಳನ್ನು ಬೆಳೆಯುವುದರ ಮೂಲಕ ರೈತರ ಆದಾಯವು ಹೆಚ್ಚಾಗುತ್ತದೆ. 2022ರ ವೇಳೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗುವ ಸಮಯದಲ್ಲಿ ರೈತರ ಆದಾಯ ದ್ವಿಗುಣವಾಗಲು ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು, ಇದರಲ್ಲಿ ಇದು ಒಂದು ಎಂದು ಮೋದಿ ಹೇಳಿದರು.

  • ಬಿಜೆಪಿ ಕಾರ್ಯಕರ್ತರ ಪಕ್ಷ, ವಂಶಾಡಳಿತ ಪಕ್ಷವಲ್ಲ: ಪ್ರಧಾನಿ ಮೋದಿ

    ಬಿಜೆಪಿ ಕಾರ್ಯಕರ್ತರ ಪಕ್ಷ, ವಂಶಾಡಳಿತ ಪಕ್ಷವಲ್ಲ: ಪ್ರಧಾನಿ ಮೋದಿ

    ಗಾಂಧಿನಗರ: ಕಾಂಗ್ರೆಸ್ ಪಕ್ಷವು ವಂಶಾಡಳಿತ ಪಕ್ಷವಾಗಿದ್ದು, ನಮ್ಮ ಪಕ್ಷವು ಕಾರ್ಯಕರ್ತರ ಪಕ್ಷವಾಗಿದೆ. ಉತ್ತರ ಪ್ರದೇಶದ ಚುನಾವಣೆಯ ಗೆಲುವು ಪಕ್ಷದ ಗೆಲುವಾಗಿದ್ದು ಅಮಿತ್ ಶಾ ಅಥವಾ ಮೋದಿಯ ಗೆಲುವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಗುಜರಾತ್ ರಾಜ್ಯದ ಚುನಾವಣೆಗೆ ಪೂರ್ವ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಗಾಂಧಿನಗರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ರ್ಯಲಿಯನ್ನು ಉದ್ದೇಶಿ ಪ್ರಧಾನಿ ಮೋದಿ ಮಾತನಾಡಿದರು.

    ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧಿ ಪಕ್ಷಗಳಿಗೆ ನಡುಕ ಉಂಟಾಗಿದ್ದು, ಸುಳ್ಳು ಹೇಳಿಕೆಗಳನ್ನು ನೀಡುತ್ತಿವೆ. ದೇಶದಲ್ಲಿ ಜಾರಿಗೆ ತಂದಿರುವ ಜಿಎಸ್‍ಟಿ ನಿರ್ಧಾರ ಕೇವಲ ಪ್ರಧಾನಿ ಮಂತ್ರಿ ಮೋದಿ ಒಬ್ಬರ ನಿರ್ಧಾರವಲ್ಲ. ಇದರಲ್ಲಿ ಪ್ರಮುಖ 30 ಪಕ್ಷಗಳು ತಮ್ಮ ಒಮ್ಮತ ಅಭಿಪ್ರಾಯವನ್ನು ಸೂಚಿಸಿವೆ. ಇದರಲ್ಲಿ ಕಾಂಗ್ರೆಸ್ ಪಕ್ಷವು ಸೇರಿದೆ. ಆದರೆ ಇಂದು ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು‌ ದೂರಿದರು.

    ಜಿಎಸ್‍ಟಿ ಜಾರಿಗೆ ತಂದಿರುವುದರಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಅಲ್ಲದೇ ಪ್ರಮುಖವಾಗಿ ಜಿಡಿಪಿ ಬೆಳವಣಿಗೆ ದರ 5.7%,ಕ್ಕೆ ಇಳಿದಿದೆ. ಉತ್ತಮ ಆರ್ಥಿಕ ಪ್ರಗತಿಗೆ ಬೇಕಾದ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದ ಸಂದರ್ಭದಲ್ಲಿ ಈ ರೀತಿ ಆಗುವುದು ಸಾಮಾನ್ಯ. ದೊಡ್ಡ ಪ್ರಮಾಣದ ನೋವಿಗಿಂತ ಸಣ್ಣ ಪ್ರಮಾಣದ ನೋವು ಉತ್ತಮ ಅಲ್ಲವೇ ಎಂದು ಪ್ರಶ್ನಿಸಿದರು.

    ಜಿಎಸ್‍ಟಿ ಜಾರಿಗೆ ತಂದ ನಂತರ ನಮ್ಮ ಸರ್ಕಾರವು ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಹಲವು ಸುಧಾರಣೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

     

     

  • ಸಿಎಂ ನಿತೀಶ್ ಕುಮಾರ್‍ರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಸಿಎಂ ನಿತೀಶ್ ಕುಮಾರ್‍ರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಪಾಟ್ನಾ: ಬಿಹಾರದ ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಸಿಎಂ ನೀತಿಶ್ ಕುಮಾರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಹಾಡಿ ಹೊಗಳಿದ್ದಾರೆ.

    ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಂಡ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ಇಂದು ಮುಂಜಾನೆ ಪ್ರಧಾನಿ ಮೋದಿಯವರನ್ನು ಸ್ವತಃ ನಿತೀಶ್ ಕುಮಾರ್ ಅವರೇ ಕೆಂಪು ಗುಲಾಬಿಯನ್ನು ನೀಡಿ ಸ್ವಾಗತಿಸಿದರು.

    ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪಟ್ನಾ ವಿವಿ ಉತ್ತಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಿದ್ದು. ಉತ್ತಮ ನಾಗರಿಕರನ್ನು ದೇಶಕ್ಕೆ ನೀಡುತ್ತಿದೆ. ವಿವಿಯಲ್ಲಿ ಮತ್ತಷ್ಟು ಹೊಸ ಅವಿಷ್ಕಾರಗಳನ್ನು ಕೈಗೊಳ್ಳ ಬೇಕಿದೆ ಎಂಬ ಸಲಹೆಯನ್ನು ನೀಡಿದರು. ನಂತರ ಪಟ್ನಾ ವಿವಿಯನ್ನು ಕೇಂದ್ರಿಯ ವಿಶ್ವವಿದ್ಯಾಲಯವಾಗಿ ಘೋಷಣೆ ಮಾಡಿರುವ ಕುರಿತು ಮಾಹಿತಿ ನೀಡಿದರು.

    ಸಿಎಂ ನೀತಿಸ್ ಕುಮಾರ್ ರಾಜ್ಯದ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳ ಕುರಿತು ಪ್ರಸ್ಥಾಪಿಸಿದ ಅವರು 2022ರ 75 ನೇ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ದೇಶದ ಅಭಿವೃದ್ಧಿ ಹೊಂದಿರುವ ರಾಜ್ಯವಾಗಿ ಬಿಹಾರ ರೂಪುಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ವಿಶ್ವವಿದ್ಯಾಲಯ ಶತಮಾನೋತ್ಸವ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿಯವರು ಬಿಹಾರದಲ್ಲಿ 5 ಸಾವಿರ ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಗಂಗಾ ಶುದ್ಧಿಕರಣ ಯೋಜನೆಯ ಅಡಿಯಲ್ಲಿ ಗಂಗಾ ನದಿಗೆ 1,200 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಮಾಡುವ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ವಿವಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರಿಗೂ ಆಹ್ವಾನ ನೀಡಲಾಗಿದ್ದರೂ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇನ್ನು ಶತೃಘ್ನ ಸಿನ್ಹಾ ತಮಗೆ ಯಾವುದೇ ಆಹ್ವಾನವನ್ನು ನೀಡಿರಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ವಿವಿ ಉಪಕುಲಪತಿ ರಾಸ್ ಬಿಹಾರಿ ಬೋಸ್ ಆಹ್ವಾನ ಪತ್ರಿಕೆಗಳ ಮುದ್ರಣಾ ತಡವಾಗಿರುವುದರಿಂದ ಈ ರೀತಿಯ ಗೊಂದಲ ಉಂಟಾಗಿದೆ. ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಹಾಗೂ ಯಶವಂತ್ ಸಿನ್ಹಾ ಅವರಿಗೂ ಆಹ್ವಾವನ್ನು ನೀಡಲಾಗಿದೆ ಎಂದು ಸ್ವಷ್ಟೀಕರಣ ನೀಡಿದರು. ವಿವಿಯ ಶತಮಾನೋತ್ಸವನ್ನು ಡಿಸೆಂಬರ್ 10 ರಂದು ವಿಜೃಂಭಣೆಯಿಂದ ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವಿವಿಯ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಆಹ್ವಾನಿಸುವುದಾಗಿ ತಿಳಿಸಿದರು.

    ಈ ಕಾರ್ಯಕ್ರಮದ ಬಳಿಕ ನರೇಂದ್ರ ಮೋದಿ ಅವರು ಹೊಸದಾಗಿ ನಿರ್ಮಾಣ ಮಾಡಿರುವ ಮ್ಯೂಸಿಯಂಗೆ ಭೇಟಿ ನೀಡಿದರು.

     

     

     

     

     

     

     

     

     

     

     

  • ಫಿಫಾ ವಿಶ್ವಕಪ್-ಭಾರತ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ ಮತ್ತು ಸಚಿನ್

    ಫಿಫಾ ವಿಶ್ವಕಪ್-ಭಾರತ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ ಮತ್ತು ಸಚಿನ್

    ನವದೆಹಲಿ: ಫುಟ್‍ಬಾಲ್ ಯು- 17 ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸುವ ಭಾರತದ ತಂಡದ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಭಾರತ ತಂಡಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ.

    ಭಾರತವು ಈ ಬಾರಿಯ ಫಿಫಾ ಯು-17 ಫುಟ್‍ಬಾಲ್ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಿದ್ದು. ತವರು ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ತಂಡ ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸುತ್ತಿದೆ.

    ವಿಶ್ವಕಪ್‍ನಲ್ಲಿ ಭಾಗವಹಿಸುತ್ತಿರುವ ಆಟಗಾರರಿಗೆ ಶುಭಕೋರುವ ವಿಡಿಯೋ ಒಂದನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    ಭಾರತದ ಕ್ರಿಕೆಟ್ ತಂಡದಲ್ಲಿದ್ದ ಸಂದರ್ಭದಲ್ಲಿ ಯುವ ಆಟಗಾರರಿಗೆ ಸ್ಫೂರ್ತಿ ತುಂಬುತ್ತಿದ್ದ ಸಚಿನ್ ನಿವೃತ್ತಿಯ ನಂತರವು ಯುವ ಆಟಗಾರರಿಗೆ ಬೆಂಬಲವಾಗಿ ನಿಂತಿದ್ದಾರೆ. ಶುಕ್ರವಾರದಿಂದ ಭಾರತದಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಈ ಸಮಯ ಎಲ್ಲರಿಗೂ ಮುಖ್ಯವಾದದ್ದು. ಟೂರ್ನಿಗೆ ಅಭಿಮಾನಿಗಳಿಂದ ಲಭಿಸಿರುವ ಬೆಂಬಲ ಅಭೂತ ಪೂರ್ವವಾಗಿದ್ದು, ಹೆಚ್ಚು ಸಂತೋಷ ಉಂಟಾಗಿದೆ. ಆದರೆ ಭಾರತದ ತಂಡದ ಆಟಗಾರರಿಗೆ ಇದು ಉತ್ತಮ ಅವಕಾಶವಾಗಿದ್ದು, ಆಟಗಾರರು ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ ಎಂದು ತಿಳಿಸಿದ್ದಾರೆ.

    ಭಾರತ ತಂಡದ ಆಟಗಾರರ ಮೇಲೆ ನನಗೆ ಸಂಪೂರ್ಣ ಭರವಸೆ ಇದ್ದು, ಉತ್ತಮ ಪ್ರದರ್ಶನವನ್ನು ನೀಡುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ವಿಶ್ವಕಪ್ ಟೂರ್ನಿಯಲ್ಲಿ ಭಾರತವು ತನ್ನ ಮೊದಲ ಪಂದ್ಯವನ್ನು ಶುಕ್ರವಾರ ನವದೆಹಲಿಯ ನೆಹರೂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿದೆ.

  • ಒಂದು ದೇಶ, ಒಂದೇ ಚುನಾವಣೆ ನಡೆಸಲು ಸಿದ್ಧ: ಚುನಾವಣಾ ಆಯೋಗ

    ಒಂದು ದೇಶ, ಒಂದೇ ಚುನಾವಣೆ ನಡೆಸಲು ಸಿದ್ಧ: ಚುನಾವಣಾ ಆಯೋಗ

    ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ 2018ರ ನವೆಂಬರ್ – ಡಿಸೆಂಬರ್ ಒಳಗಡೆ ಲೋಕಸಭಾ ಮತ್ತು ರಾಜ್ಯಗಳ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

    2018ರಲ್ಲಿ ರಾಜ್ಯಗಳ ವಿಧಾನಸಭಾ ಹಾಗೂ ಸಂಸತ್ತಿನ ಲೋಕಸಭಾ ಚುನಾವಣೆಯನ್ನು ಏಕಕಾಲದಲ್ಲಿ ನಡೆದಲು ನಾವು ಸಿದ್ಧರಿದ್ದೇವೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

    ಏಕಕಾಲದಲ್ಲಿ ಕೇಂದ್ರ ಲೋಕ ಸಭಾ ಚುನಾವಣೆಗಳು ಹಾಗೂ ರಾಜ್ಯ ವಿಧಾನ ಸಭಾ ಚುನಾವಣೆಗಳನ್ನು 2018 ರ ನವೆಂಬರ್- ಡಿಸೆಂಬರ್ ವೇಳೆ ನಡೆಸಲು ನಾವು ಸಿದ್ಧರಿದ್ದೇವೆ. ಈ ನಿರ್ಧಾರವನ್ನು ಅನುಷ್ಠಾನಕ್ಕೆ ತರಲು ಸರ್ಕಾರಗಳು ಕಾನೂನು ತಿದ್ದುಪಡಿ ಮಾಡವೇಕು ಎಂದು ಆಯೋಗದ ಆಯುಕ್ತ ಓಪಿ ರಾವತ್ ಹೇಳಿದ್ದಾರೆ.

    ಒಂದೇ ಬಾರಿಗೆ ಚುನಾವಣೆ ನಡೆಸಲು ಮತಯಂತ್ರಗಳ ಅಗತ್ಯವಿದ್ದು, ಕೇಂದ್ರ ಸರ್ಕಾರ ಮತ ಯಂತ್ರ ಖರೀದಿಗೆ ಅನುದಾನ ನೀಡಿದ ಹಿನ್ನೆಲೆಯಲ್ಲಿ 40 ಲಕ್ಷ ವಿದ್ಯುನ್ಮಾನ ಮತಯಂತ್ರ ಖರೀದಿಗೆ ಬೇಡಿಕೆ ಇಟ್ಟಿದ್ದೇವೆ ಎಂದು ಅವರು ತಿಳಿಸಿದರು.

    ನಿಗದಿ ಪ್ರಕಾರ 2019ರ ಲೋಕ ಸಭಾ ಚುನಾವಣೆ ಏಪ್ರಿಲ್ ನಲ್ಲಿ ನಡೆಯಬೇಕು. ಒಂದು ವೇಳೆ ಎಲ್ಲ ರಾಜಕೀಯ ಪಕ್ಷಗಳು ಆಯೋಗದ ನಿರ್ಧಾರಕ್ಕೆ ಒಪ್ಪಿಗೆ ನೀಡಿದರೆ 2018ರಲ್ಲಿ ನಡೆಯಬಹುದಾಗಿದೆ.

    ಈ ಹಿಂದೆ ಒಂದೇ ದೇಶ, ಒಂದೇ ಚುನಾವಣೆಯನ್ನು ಜಾರಿಗೆ ತರಬೇಕು. ಇದರಿಂದಾಗಿ ಪಕ್ಷದ ನಾಯಕರು ಚುನಾವಣೆಗೆ ಖರ್ಚು ಮಾಡುವ ಹಣವನ್ನು ಉಳಿಸಬಹುದು ಎಂದು ಹೇಳಿದ್ದರು. ಈ ಸಂಬಂಧ ಕಳೆದ ವರ್ಷ ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮುಂದೆ ಎರಡೂ ಚುನಾವಣೆಯನ್ನು ಒಟ್ಟಿಗೆ ನಡೆಸಲು ಸಾಧ್ಯವೇ ಎಂದು ಕೇಳಿಕೊಂಡಿತ್ತು.

    ಏಕಕಾಲಕ್ಕೇ ಯಾಕೆ ನಡೆಯಬೇಕು?
    ಒಂದು ಚುನಾವಣೆಯ ನೀತಿ ಸಂಹಿತೆ ಘೋಷಣೆಯಾದ ಬಳಿಕ ಆಡಳಿತ ಯಂತ್ರ ಸ್ಥಗಿತಗೊಳ್ಳುತ್ತದೆ. ಸರ್ಕಾರದ ಮಂತ್ರಿಗಳು ಚುನಾವಣೆಯಲ್ಲಿ ಬಿಸಿಯಾಗಿರುತ್ತಾರೆ. ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ಯಾವುದೇ ಯೋಜನೆ, ದೊಡ್ಡ ನಿರ್ಧಾರವನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಏಕಕಾಲದಲ್ಲೇ ಚುನಾವಣೆ ನಡೆದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.

    ಉತ್ತರ ಪ್ರದೇಶ ಚುನಾವಣೆಯಲ್ಲಿ ವಿದ್ಯುನ್ಮಾನ ಯಂತ್ರವನ್ನು ಹ್ಯಾಕ್ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿತ್ತು. ಹೀಗಾಗಿ ಇನ್ನು ಮುಂದೆ ಈ ರೀತಿಯ ಆರೋಪ ಕೇಳಿ ಬಾರದೇ ಇರಲು ಮತ ಹಾಕಿದ ಬಳಿಕ ಮತದಾರ ನಾನು ಯಾವ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ತಿಳಿಯಲು ಮತ ಮುದ್ರಣವಾಗಿ ಬರುವಂತಹ ವ್ಯವಸ್ಥೆಯನ್ನು ಚುನಾವಣಾ ಆಯೋಗ ಅಳವಡಿಸಿದೆ. ಮುದ್ರಣವಾದ ಚೀಟಿಯನ್ನು ಮತದಾರ ನೋಡಿ ನಾನು ಹಾಕಿದ ಮತ ಸರಿಯಾಗಿದೆಯೇ ಎಂದು ತಿಳಿದು ಆ ಪೇಪರ್ ಅನ್ನು ಮುಂದುಗಡೆ ಇರುವ ಬಾಕ್ಸ್ ಗೆ ಹಾಕಬೇಕಾಗುತ್ತದೆ.

  • ಶೀಘ್ರವೇ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಯಶವಂತ್ ಸಿನ್ಹಾ

    ಶೀಘ್ರವೇ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಯಶವಂತ್ ಸಿನ್ಹಾ

    ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಶೀಘ್ರದಲ್ಲಿಯೇ ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

    ಬಿಜೆಪಿಯ ವಿರುದ್ಧ ಟೀಕೆಯ ಸಂದರ್ಭದಲ್ಲಿ ಸಿನ್ಹಾ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು 1 ವರ್ಷದ ಹಿಂದೆಯೇ ನಾನು ಸಮಯವನ್ನು ಕೇಳಿದ್ದೆ, ಆದರೆ ಇದೂವರೆಗೂ ನನಗೆ ಭೇಟಿಯಾಗಲು ಸಮಯವನ್ನು ನೀಡಿಲ್ಲ ಎಂದು ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಹಾಗೂ ಸಿನ್ಹಾ ಅವರ ಭೇಟಿ ಹೆಚ್ಚು ಕುತೂಹಲಕಾರಿಯಾಗಿದೆ.

    ಆಕ್ಟೋಬರ್ 14 ರಂದು ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಯ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮಕ್ಕೆ ಸಿನ್ಹಾ ಅವರಿಗೂ ಆಹ್ವಾನವನ್ನು ನೀಡಲಾಗಿದೆ ಎಂದು ಪಾಟ್ನಾ ವಿವಿಯ ಉಪಕುಲಪತಿಗಳಾದ ರಾಸ್ ಬಿಹಾರಿ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಅಂದಹಾಗೇ ಸಿನ್ಹಾರವರು ಇದೇ ವಿವಿಯಿಂದ ತಮ್ಮ ರಾಜ್ಯಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದು, ಬೋಧಕರಾಗಿಯು ಸೇವೆಸಲ್ಲಿದ್ದರು.

    ಈ ಕಾರ್ಯಕ್ರಮದಲ್ಲಿ ಸಿನ್ಹಾ ಭಾಗವಹಿಸುತ್ತಾರ ಅಥವಾ ಇಲ್ಲವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಮೋದಿ ಸರ್ಕಾರವನ್ನು ಟೀಕಿಸಿದ್ರೂ ಯಶವಂತ್ ಸಿನ್ಹಾ ವಿರುದ್ಧ ಶಿಸ್ತು ಕ್ರಮ ಇಲ್ವಂತೆ ಯಾಕೆ? 

    ಕಳೆದ ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಸಿನ್ಹಾ ಹಲವು ಆರೋಪಗಳನ್ನು ಮಾಡಿದ್ದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಹಣಕಾಸು ಸಚಿವರು ತಮ್ಮ ಕಾರ್ಯವನ್ನು ಉತ್ತಮವಾಗಿ ನಡೆಸುವಲ್ಲಿ ವಿಫಲರಾಗಿದ್ದಾರೆ. ಭಾರತ ಅರ್ಥಿಕ ವ್ಯವಸ್ಥೆ ಒತ್ತಡಕ್ಕೆ ಸಿಲುಕಿದ್ದು ಆಪಾರ ನಷ್ಟದಲ್ಲಿದೆ ಎಂದು ವಿಶ್ಲೇಷಿಸಿದ್ದರು.

    ಅಲ್ಲದೇ ಮೋದಿ ತಮ್ಮ ಸಚಿವ ಸಂಪುಟ ಸೇರ್ಪಡೆಗೆ ಸಚಿವರ ಗರಿಷ್ಠ ವಯೋಮಿತಿಯನ್ನು 75ಕ್ಕೆ ಸೀಮಿತಗೊಳಿಸಿದ್ದಕ್ಕೆ , ಈಗಿನ ಸರ್ಕಾರ 75 ದಾಟಿದವರನ್ನು “ಬ್ರೇನ್ ಡೆಡ್ ಎಂದು ಡಿಕ್ಲೇರ್ ಮಾಡಿದೆ”. ಅಲ್ಲದೇ ಹಲವು ಹಿರಿಯ ಬಿಜೆಪಿ ನಾಯಕರನ್ನು ಮೂಲೆ ಗುಂಪು ಮಾಡಿ `ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎನ್ನುವ ಎಂದು ಲೇವಡಿ ಮಾಡಿದ್ದರು.

    ಇದನ್ನೂ ಓದಿ: ಒಂದು ಬಾರಿಯಾದ್ರೂ ದೇಶದ ಜನತೆಗೆ ಮೋದಿ ಉತ್ತರಿಸಲಿ: ಶತೃಘ್ನ ಸಿನ್ಹಾ

     

  • ಪ್ರಧಾನಿ ಮೊರೆ ಹೋದ ಗ್ಯಾಂಗ್‍ರೇಪ್ ಅಪ್ರಾಪ್ತೆ

    ಪ್ರಧಾನಿ ಮೊರೆ ಹೋದ ಗ್ಯಾಂಗ್‍ರೇಪ್ ಅಪ್ರಾಪ್ತೆ

    ಸೋನಿಪತ್: ಶಾಲಾ ಬಾಲಕಿಯೊಬ್ಬಳು ತನ್ನ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯವನ್ನು ವಿವರಿಸಿ, ತನ್ನನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾಳೆ.

    ನನ್ನ ಮೇಲೆ ಇಬ್ಬರು ಶಾಲಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಮಾಡುವ ಮೊದಲು ಬಲವಂತವಾಗಿ ಬ್ಲೂ ಫಿಲ್ಮ್ ತೋರಿಸಿರುವುದಾಗಿ ಅಪ್ರಾಪ್ತೆ ಪತ್ರದಲ್ಲಿ ತಿಳಿಸಿದ್ದಾಳೆ.

    ಅತ್ಯಾಚಾರಿಗಳನ್ನು ಕರಾಂಬೀರ್ ಮತ್ತು ಸುಖ್ಬೀರ್ ಎಂದು ಗುರುತಿಸಲಾಗಿದ್ದು. ಇವರು ಶಾಲೆಯ ಭೋದನೇತರ ಸಿಬ್ಬಂದಿ ಎಂದು ತಿಳಿದುಬಂದಿದೆ ಎಂದು ಹರಿಯಾಣದ ಪೊಲೀಸ್ ಅಧಿಕಾರಿ ಮುಖೇಶ್ ಜಾಖಡ್ ತಿಳಿಸಿದ್ದಾರೆ.

    ಬಾಲಕಿಯು ಮೋದಿಯವರಿಗೆ ಇ-ಮೇಲ್ ಮಾಡುವ ಮೂಲಕ ತನ್ನ ಮೇಲೆ ಅತ್ಯಾಚಾರ ಮಾಡಿದವರ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಮೇಲ್ ಆಧಾರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ಮುಖೇಶ್ ಹೇಳಿದರು. ಅಲ್ಲದೆ ಶಾಲೆಯ ಇತರೆ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರ ಎಂದು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದರು.

    ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಪೋಷಕರು ಶಾಲೆಗೆ ಈ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ ಹಾಗೂ ದೂರನ್ನು ದಾಖಲಿಸಿಲ್ಲ. ನಾವು ದೂರನ್ನು ನೀಡಲು ತಿಳಿಸಿದ್ದೇವೆ ಎಂದರು.

    ಶಾಲೆಯ ಆಡಳಿತ ಮಂಡಳಿ ಈ ಪ್ರಕರಣವನ್ನು ನಿರಾಕರಿಸಿದೆ. ಮೂಲಗಳ ಪ್ರಕಾರ, ಬಾಲಕಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಅವರಿಗೂ ಇ-ಮೇಲ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

  • ಸದ್ದಿಲ್ಲದೇ ಉಡುಪಿಗೆ ಬಂದು ಹೋದ್ರು ಪ್ರಧಾನಿ ಮೋದಿ!

    ಸದ್ದಿಲ್ಲದೇ ಉಡುಪಿಗೆ ಬಂದು ಹೋದ್ರು ಪ್ರಧಾನಿ ಮೋದಿ!

    ಉಡುಪಿ: ಇಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮುಗಿದು ಎರಡು ದಿನ ಕಳೆದಿದೆ. ಆದರೆ ಇದೀಗ ಅಷ್ಟಮಿ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದರು ಅನ್ನೋ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ರಥಬೀದಿಯಲ್ಲಿ ಮೋದಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಯಾವುದೇ ಸೆಕ್ಯೂರಿಟಿ ಇಲ್ಲದೆ, ಸುದ್ದಿಯೇ ಇಲ್ಲದೆ ಮೋದಿ ಬಂದು ಹೋದ್ರಾ ಅಂತ ಟೆನ್ಶನ್ ಮಾಡಿಕೊಳ್ಳಬೇಡಿ. ಉಡುಪಿಗೆ ಬಂದಿರೋದು ಪ್ರಧಾನಿ ಮೋದಿಯಲ್ಲ. ಬದಲಾಗಿ ಥೇಟ್ ಮೋದಿಯನ್ನೇ ಹೋಲುವ ಒಬ್ಬ ವ್ಯಕ್ತಿ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿರುವುದನ್ನು ಕಾರ್ಯಕ್ರಮಕ್ಕೆ ಬಂದವರು ಸೆರೆ ಹಿಡಿದಿದ್ದಾರೆ.

    ಹಿರಿಯಡ್ಕದ ಸದಾನಂದ ನಾಯಕ್ ಪ್ರಧಾನಿ ಮೋದಿ ಅವರನ್ನು ಹೋಲುತ್ತಾರೆ. ಮುಖ, ಗಡ್ಡ ಮತ್ತು ವಾಕಿಂಗ್ ಸ್ಟೈಲ್ ಎಲ್ಲವೂ ಥೇಟ್ ಮೋದಿ ಅವರಂತೆಯೇ. ನೀವು ಮೋದಿಯಂತೆಯೇ ಕಾಣುತ್ತಿರಾ ಜುಬ್ಬ ಹಾಕ್ಕೊಳ್ಳಿ ಅಂತ ಎಲ್ಲರೂ ಸಜೇಶನ್ ಮಾಡಿದ್ದರು. ಹೀಗಾಗಿ ಸದಾನಂದ ಕಾಮತ್ ಅದೇ ಸ್ಟೈಲಲ್ಲಿ ಉಡುಪಿ ಕೃಷ್ಣಜನ್ಮಾಷ್ಟಮಿಗೆ ಹೋಗಿದ್ದರು. ಇದೀಗ ಆ ವೀಡಿಯೋ ಫೇಸ್ ಬುಕ್ ಮತ್ತು ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ.

    ಹಿರಿಯಡ್ಕದ ಸದಾನಂದ ನಾಯಕ್ ಅಡುಗೆ ಕೆಲಸಕ್ಕೆ ಹೋಗುತ್ತಾರೆ. ಅಡುಗೆ ಕಾರ್ಯಕ್ರಮಗಳಿಗೆ ಹೋದಲ್ಲಿ ಜನ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಾರೆ. ಇಂದು ಪ್ರಧಾನಿ ಮೋದಿ ಬರ್ತ್‍ಡೇ ಆಗಿರೋದ್ರಿಂದ ಈ ವೀಡಿಯೋ ಎಲ್ಲರ ಮೊಬೈಲ್‍ನಲ್ಲಿ ಹರಿದಾಡುತ್ತಿದೆ.

    https://www.youtube.com/watch?v=Fs____nayD0&feature=youtu.be