Tag: prime minister modi

  • ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

    ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

    – ಇದು ಮೋದಿ ಸರ್ಕಾರದ ಯೋಜನೆ

    ಮೈಸೂರು: ದಶಪಥದ ರಸ್ತೆ ಮೈಸೂರಿಗಾಗಿ ಇರೋದರಿಂದ ನಾನು ಹೆಚ್ಚು ಆಸಕ್ತಿ ತೆಗೆದುಕೊಂಡಿದ್ದೇನೆ ಎಂದು ಹೇಳುವ ಮೂಲಕ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

    ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂಬ ಸುಮಲತಾ ಅಂಬರೀಶ್ ಹೇಳಿಕೆಗೆ ಮೈಸೂರಿನಲ್ಲಿ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಯಾರಿಗೆ ಕಾಮಗಾರಿ ಬಗ್ಗೆ ಅನುಮಾನ ಇದೆಯೋ ಅಂತಹವರು ತಜ್ಞರನ್ನು ಕರೆದುಕೊಂಡು ಬಂದು ಪರಿಶೀಲನೆ ಮಾಡಿಸಿಕೊಳ್ಳಿ ಎಂದರು.

    ಇದು ಮೋದಿ ಸರ್ಕಾರದ ಯೋಜನೆ:
    ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ಮೂರು ಸಂಸದರಿಗೆ ಸೇರುತ್ತದೆ ಎಂಬ ಹೇಳಿಕೆಗೂ ಸ್ಪಷ್ಟೀಕರಣ ರೂಪದ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಂದಿರುವುದು ಮೈಸೂರಿಗೋಸ್ಕರ ಮಾತ್ರ. ಮೈಸೂರು ಡೆಸ್ಟಿನೇಷನ್ ಎಂಬ ಕಾರಣಕ್ಕಾಗಿ ನಾನು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಮಂಡ್ಯದ ಮೇಲೆ ಹೋಗುತ್ತೆ ಅಂತಾ ಮಂಡ್ಯದವರು, ರಾಮನಗರದ ಮೇಲೆ ಹೋಗುತ್ತೆ ಅಂತಾ ರಾಮನಗರದವರು. ಈ ಕಾಮಗಾರಿ ನನ್ನದು ಅಂತಾ ಹೇಳಿಕೊಂಡರೇ ಅದಕ್ಕೆ ಅರ್ಥ ಇದೆಯಾ? ಎಂದು ಪ್ರಶ್ನಿಸಿದ ಅವರು ಇದು ಮೋದಿ ಸರ್ಕಾರದ ಯೋಜನೆ. ಈ ಯೋಜನೆಗೆ ಕಾಂಗ್ರೆಸ್ ನವರಿಂದ ಬಿಡಿಗಾಸು ಕೂಡ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ

    ತಿರಸ್ಕೃತರಾದವರ ಮಾತಿಗೆ ಅರ್ಥವಿಲ್ಲ:
    ಸಿದ್ದರಾಮಯ್ಯ ಅವರ ಹೇಳಿಕೆಗೂ ಅರ್ಥವಿಲ್ಲ. ಪದೇ ಪದೇ ಜನರಿಂದ ತಿರಸ್ಕೃತರಾದವರ ಮಾತಿಗೆ ಅರ್ಥವಿಲ್ಲ ಎಂದರು. ಸುಮಲತಾ ಅವರು ಈ ಯೋಜನೆಯ ಕಾಮಗಾರಿ ನನ್ನ ರಸ್ತೆ ಮೇಲೆ ಹೋಗುತ್ತದೆ ಎಂದರೆ ಏನು ಮಾಡಲು ಆಗಲ್ಲ. ಅವರಿಗೆ ಅವಶ್ಯಕತೆ ಇದ್ದರೆ ಮಂಡ್ಯದವರು ಮಂಡ್ಯದವರಗೆ, ರಾಮನಗರದವರು ರಾಮನಗರದವರೆಗೂ ಕಾಮಗಾರಿ ತರಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಟಿ20 ವರ್ಲ್ಡ್ ಕಪ್ – ಅಕ್ಟೋಬರ್ 24ರಂದು ಭಾರತ Vs ಪಾಕಿಸ್ತಾನ

    ಈಗ ಕೆಲವರಿಗೆ ಅರ್ಥವಾಗಿದೆ:
    ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ವಿಚಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು ಭಾರತೀಯರಿಗೆ ಸಿಎಎ ಕಾಯ್ದೆಯನ್ನು ಏಕೆ ಜಾರಿಗೆ ತರಲಾಯಿತು ಎಂಬುದು ಈಗ ಅರ್ಥವಾಗಬೇಕು. ಮೋದಿಯವರು ಪರಿಸ್ಥಿತಿಯನ್ನು ಮೊದಲೇ ಅರ್ಥ ಮಾಡಿಕೊಂಡು ಸಿಎಎ ಕಾಯ್ದೆಯನ್ನು ಜಾರಿಗೊಳಿಸಿದರು. ಪ್ರತಿಯೊಬ್ಬ ಭಾರತೀಯರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

    ಇವತ್ತು ಅಫ್ಘಾನಿಸ್ತಾನದ ಸುತ್ತಮುತ್ತ ಹಲವಾರು ಮುಸ್ಲಿಂ ರಾಷ್ಟ್ರಗಳಿದ್ದರೂ ಅವರನ್ನು ಕರೆಸಿಕೊಳ್ಳುತ್ತಿಲ್ಲ. ಷರಿಯಾ, ತಾಲಿಬಾನ್ ಮಾನವ ವಿರೋಧಿಯೆಂಬುದು ಇದೀಗ ಸಾಬೀತಾಗಿದೆ. ಕೇವಲ ಅಫ್ಘಾನಿಸ್ತಾನದ ಮನಃಸ್ಥಿತಿಯ ಜನರಿಲ್ಲ, ಭಾರತದಲ್ಲೂ ಅದೇ ಮನಃಸ್ಥಿತಿಯ ಜನರಿದ್ದಾರೆ. ಸಿಎಎ ಜಾರಿಗೆ ತಂದದ್ದು ಅಫ್ಘಾನಿಸ್ತಾನದ ಕಾರಣಕ್ಕಾಗಿ ಮಾತ್ರವಲ್ಲ. ಇತರ ಕಡೆಗಳಲ್ಲಿ ಈ ರೀತಿಯ ಅನಾಹುತಗಳಾಗಬಹುದು. ಎಲ್ಲರೂ ಸೇರಿ ಇದನ್ನು ಎದುರಿಸಬೇಕಾಗಿದೆ. ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆ ಮುಸ್ಲಿಂ ರಾಷ್ಟ್ರಗಳಿಗೂ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

  • ಮೋದಿ ಸರ್ಕಾರದಿಂದ ‘ಸಾಲ’ ರೂಪದ ಸಹಾಯ

    ಮೋದಿ ಸರ್ಕಾರದಿಂದ ‘ಸಾಲ’ ರೂಪದ ಸಹಾಯ

    ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಮೌಲ್ಯದ ಪ್ಯಾಕೆಜ್ ಘೋಷಣೆ ಮಾಡಿದ್ದಾರೆ. ಭಾರತದ ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಕೇಂದ್ರ ಸರ್ಕಾರ ಸಾಲ ಯೋಜನೆಯನ್ನು ಘೋಷಿಸಿದೆ ಎಂದು ತಿಳಿಸಿದ್ದಾರೆ.

    ಇದರ ಜೊತೆಯಲ್ಲಿಯೇ ಆರೋಗ್ಯ ವಲಯಕ್ಕೆ 50 ಸಾವಿರ ಕೋಟಿ ರೂಪಾಯಿ ಸಾಲ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಈ ಅನುದಾನವನ್ನ ನಾನ್ ಮೆಟ್ರೋ ಮೆಡಿಕಲ್ ಮೂಲಸೌಕರ್ಯಗಳಿಗೆ ಬಳಕೆಗೆ ಮೀಸಲಿಡಲಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಹಲವು ವಲಯಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಕೇಂದ್ರ ಸಹಾಯಕ್ಕೆ ಮುಂದಾಗಬೇಕೆಂದು ಉದ್ಯಮಗಳ ಒತ್ತಾಯಿಸಿದ್ದರು. ಸರ್ಕಾರ ಸಹ ಸಹಾಯ ನೀಡುವ ಕುರಿತು ಈ ಹಿಂದೆ ಸುಳಿವು ನೀಡಿತ್ತು.

    ವಿತ್ತ ಸಚಿವರ ಘೋಷಣೆಗಳು
    1. ಎಕನಾಮಿಕ್ ರಿಲೀಫ್
    * ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ವಲಯಗಳಿಗೆ 1.1 ಲಕ್ಷ ಕೋಟಿ ರೂ.ಯ ಲೋನ್ ಗ್ಯಾರಂಟಿ ಸ್ಕೀಮ್
    * ಆರೋಗ್ಯ ವಲಯಕ್ಕೆ 50 ಸಾವಿರ ಕೋಟಿ ರೂ.
    * ಇತರೆ ವಲಯಗಳು 60 ಸಾವಿರ ಕೋಟಿ ರೂ.
    * ಆರೋಗ್ಯ ವಲಯದಲ್ಲಿ ನೀಡಲಾಗುವ ಸಾಲದ ಮೇಲಿನ ವಾರ್ಷಿಕ ಬಡ್ಡಿ ಶೇ.7.95
    * ಇನ್ನುಳಿದ ವಲಯಗಳಿಗೆ ನೀಡಲಾಗುವ ಸಾಲದ ಮೇಲಿನ ವಾರ್ಷಿಕ ಬಡ್ಡಿ ಶೇ.8.25

    2. ಎಮೆರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‍ಜಿಎಸ್)
    * ಇಸಿಎಲ್‍ಜಿಎಸ್ ನಲ್ಲಿ 1.5 ಲಕ್ಷ ಕೋಟಿ ಹೆಚ್ಚುವರಿಯಾಗಿ ನೀಡಲಾಗುವುದು.
    * ಪ್ರಥಮವಾಗಿ ಈ ಯೋಜನೆಯಲ್ಲಿ 3 ಲಕ್ಷ ಕೋಟಿ ರೂ. ಘೋಷಿಸಲಾಗಿತ್ತು. ಇಲ್ಲಿಯವರೆಗೆ ಒಟ್ಟು 4.5 ಲಕ್ಷ ರೂ. ಆಗಿದೆ.
    * ಈ ಯೋಜನೆಯಲ್ಲಿ ಭಾಗಿಯಾದ ಎಲ್ಲ ವಲಯಗಳಿಗೆ ಇದರ ಲಾಭ ಸಿಕ್ಕಿದೆ.

    3. ಕ್ರೆಡಿಟ್ ಗ್ಯಾರಂಟಿ ಸ್ಕೀಮ್
    * ಸಣ್ಣ ವ್ಯಾಪಾರಿಗಳು- ವೈಯಕ್ತಿಯ ಎನ್‍ಬಿಎಫ್‍ಸಿ, ಮೈಕ್ರೋ ಫೈನಾನ್ಸ್ ಇನ್‍ಸ್ಟಿಟ್ಯೂಟ್ ಗಳು 1.25 ಲಕ್ಷ ರೂ.ವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ.
    * ಈ ಸಾಲದ ಮೇಲೆ ಎಂಸಿಎಲ್‍ಆರ್ ಅನ್ವಯ ಬ್ಯಾಂಕುಗಳು ಶೇ.2ರಷ್ಟು ಬಡ್ಡಿ ವಿಧಿಸಲಿವೆ. ಈ ಸಾಲದ ಅವಧಿ ಮೂರು ವರ್ಷ ಇರಲಿದ್ದು, ಸರ್ಕಾರವೇ ಗ್ಯಾರಂಟಿ ನೀಡಲಿದೆ.
    * ಹೊಸ ಸಾಲಗಳ ವಿತರಣೆ ಈ ಯೋಜನೆಯ ಮುಖ್ಯ ಉದ್ದೇಶ.
    * 89 ದಿನಗಳ ಡಿಫಾಲ್ಟರ್ ಸೇರಿದಂತೆ ಎಲ್ಲ ಜನರು ಈ ಯೋಜನೆಯಲ್ಲಿ ಸಾಲ ಪಡೆಯಬಹುದಾಗಿದೆ. ಈ ಯೋಜನೆಯಿಂದ ಅಂದಾಜು 25 ಲಕ್ಷ ಜನರಿಗೆ ಲಾಭ ಸಿಗಲಿದೆ.
    * ಅಂದಾಜು 7,500 ಕೋಟಿ ರೂ. ಈ ಯೋಜನೆಯಲ್ಲಿ ಹಣ ಮೀಸಲಿರಲಿದ್ದು, ಮಾರ್ಚ್ 31,2022ರವರೆಗೆ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

    4. ರಿಜಿಸ್ಟರ್ ಗೈಡ್/ಟ್ರಾವೆಲ್ ಟೂರಿಸಂ ಮಧ್ಯಸ್ಥಗಾರರಿಗೆ ಆರ್ಥಿಕ ಸಹಾಯ
    * ಕೋವಿಡ್ ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ನೋಂದಾಯಿತ ಟೂರಿಸ್ಟ್ ಗೈಡ್ ಮತ್ತು ಟ್ರಾವೆಲ್ ಟೂರಿಸಂನ ಮಧ್ಯಸ್ಥಗಾರರು (ಏಜೆಂಟ್) ಆರ್ಥಿಕ ನೆರವು ದೊರಕಲಿದೆ.
    * ಈ ವಿಭಾಗದಲ್ಲಿ ನೋಂದಾಯಿತ ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷ ರೂ.ವರೆಗೂ ಮತ್ತು ಟೂರಿಸ್ಟ್ ಏಜೆನ್ಸಿಗಳಿಗೆ 10 ಲಕ್ಷ ರೂ. ವರೆಗೂ ಸಾಲ ಸಿಗಲಿದೆ.
    * ಈ ಸಾಲಕ್ಕೆ ಶೇ.100ರಷ್ಟು ಗ್ಯಾರಂಟಿ ನೀಡಲಾಗವುದು. ಜೊತೆಗೆ ಸಾಲಕ್ಕೆ ಯಾವುದೇ ಪ್ರೊಸೆಸಿಂಗ್ ಚಾರ್ಜ್ ಅನ್ವಯ ಆಗಲ್ಲ.

    5. ಮೊದಲ 5 ಲಕ್ಷ ವಿದೇಶಿ ಪ್ರವಾಸಿಗರ ಉಚಿತ ಟೂರಿಸ್ಟ್ ವೀಸಾ
    * ಈ ಸ್ಕೀಮ್ ಮಾರ್ಚ್ 31, 2022ರವರೆಗೆ ಇರಲಿದ್ದು, ಹಣಕಾಸು ಸಚಿವಾಲಯದಿಂದ 100 ಕೋಟಿ ಸಹಾಯ ನೀಡಲಾಗುತ್ತದೆ.
    * ಓರ್ವ ಪ್ರವಾಸಿಗೆ ಒಂದು ಬಾರಿ ಮಾತ್ರ ಈ ಸ್ಕೀಮ್ ಲಾಭ ಸಿಗಲಿದೆ.
    * ವಿದೇಶಿ ಪ್ರವಾಸಿಗರಿಗೆ ಯೋಜನೆಯ ಲಾಭ ಸಿಗುತ್ತಿದ್ದಂತೆ, ಈ ಸ್ಕೀಮ್ ಲಾಭ ಆರಂಭವಾಗುತ್ತದೆ.
    * 2019ರಲ್ಲಿ 1.93 ಕೋಟಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ.

    6. ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆ
    * ಈ ಯೋಜನೆಯನ್ನ ಕೇಂದ್ರ 2019ರಲ್ಲಿಯೇ ಜಾರಿಗೆ ತಂದಿತ್ತು. ಈ ಯೋಜನೆಯ ಅವಧಿಯನ್ನ 31 ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ.
    * ಈಗಾಗಲೇ 21.42 ಲಕ್ಷ ಜನರು ಈ ಯೋಜನೆಯ ಲಾಭ ಪಡೆದುಕೊಂಡಿದ್ದು, 902 ಕೋಟಿ ರೂ. ಖರ್ಚು ಮಾಡಲಾಗಿದೆ.
    * 15 ಸಾವಿರಕ್ಕೂ ಕಡಿಮೆ ವೇತನ ಪಡೆಯುವ ಕೆಲಸಗಾರರಿಗೆ ಮತ್ತು ಕಂಪನಿಗಳಿಗೆ ಸರ್ಕಾರ ಪಿಎಫ್ ಪಾವತಿಸುತ್ತದೆ.
    * ಸರ್ಕಾರ ಈ ಯೋಜನೆಯಲ್ಲಿ 22,810 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಿದ್ದು, ಇದರಿಂದ 58.50 ಲಕ್ಷ ಜನರಿಗೆ ಲಾಭ ಸಿಗಲಿದೆ.
    * ಸರ್ಕಾರ ನೌಕರರು-ಕಂಪನಿಗೆ ಶೇ.12-ಶೇ.12 ಪಿಎಫ್ ನೀಡುತ್ತಿದೆ.

    7. ಕೃಷಿಗೆ ಸಂಬಂಧಿಸಿದ ಸಬ್ಸಿಡಿ
    * ಸರ್ಕಾರ ಕೃಷಿಗೆ ಹೆಚ್ಚುವರಿಯಾಗಿ 14,775 ಕೋಟಿ ನೆರವು ನೀಡಿದೆ. ಇದರಲ್ಲಿ 9,125 ಕೋಟಿ ರೂ. ಸಬ್ಸಿಡಿಯನ್ನು ಡಿಎಪಿ ರಸಗೊಬ್ಬರ ಮೇಲೆ ನೀಡಲಾಗುವುದು.
    * 5,650 ಕೋಟಿ ಸಬ್ಸಿಡಿಯನ್ನು ಎನ್‍ಪಿಕೆ ಮೇಲೆ ನೀಡಲಾಗುತ್ತದೆ.
    * ರಬಿ ಸೀಸನ್ 2020-21ರಲ್ಲಿ 432.48 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಲಾಗಿತ್ತು.
    * ಇಲ್ಲಿಯವರೆಗೆ ರೈತರಿಗೆ 85,413 ಕೋಟಿ ರೂ. ನೇರವಾಗಿ ನೀಡಲಾಗಿದೆ.

    8. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ:
    * ಕೋವಿಡ್ ಮೊದಲೆ ಅಲೆಯಲ್ಲಿ ಬಡವರ ನೆರವಿಗಾಗಿ ಕೇಂದ್ರ ಮಾರ್ಚ್ 26,2020ರಂದು ಈ ಯೋಜನೆಯನ್ನ ಘೋಷಿಸಿತ್ತು. ಆರಂಭದಲ್ಲಿ ಏಪ್ರಿಲ್ ನಿಂದ ಜೂನ್ 2020ರವರೆಗೆ ಈ ಯೋಜನೆಯಡಿ ಪಡಿತರ ವಿತರಣೆ ಮಾಡಲಾಗಿತ್ತು. ನಂತರ ನವೆಂಬರ್ 2020ರವರೆಗೂ ವಿಸ್ತರಿಸಲಾಗಿತ್ತು.
    * 2020-21ರಲ್ಲಿ ಈ ಯೋಜನೆಗೆ 1,33,972 ಕೋಟಿ ರೂ. ವ್ಯಯ ಮಾಡಲಾಗಿತ್ತು.
    * ಮೇ 2021ರಲ್ಲಿ ಮತ್ತೆ ಯೋಜನೆ ಆರಂಭಿಸಿದ್ದು, ನವೆಂಬರ್ ವರೆಗೂ ಉಚಿತ ಪಡಿತರ ಸಿಗಲಿದೆ. ಈ ವರ್ಷವೂ 93,869 ಕೋಟಿ ಖರ್ಚು ಮಾಡಲು ಸರ್ಕಾರ ಮುಂದಾಗಿದೆ. 2020 ಮತ್ತು 2021ರಲ್ಲಿ ಒಟ್ಟು ಈ ಯೋಜನೆಗೆ 2,27,841 ಕೋಟಿ ರೂ. ಖರ್ಚು ಆಗಲಿದೆ.

    9. 23,220 ಕೋಟಿ ರೂ. ಪಬ್ಲಿಕ್ ಹೆಲ್ತ್
    * ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಹಣ ಬಳಕೆಯಾಗಲಿದೆ. ಈ ಅನುದಾನದಲ್ಲಿ ಐಸಿಯು ಬೆಡ್, ವೆಂಟಿಲೇಟರ್ ಬೆಡ್, ಅಂಬುಲೆನ್ಸ್ ಸೇರಿದಂತೆ ಇನ್ನಿತರ ಸೌಕರ್ಯ ಹೆಚ್ಚಳ.
    * ಕೇಂದ್ರ, ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ
    * ಟೆಸ್ಟಿಂಗ್ ಹೆಚ್ಚಳ, ಸಪ್ರೋಟಿವ್ ಡಯಾಗ್ನೊಸ್ಟಿಕ್ ಮತ್ತು ಟೆಲಿಕನ್ಸಲ್ಟೇಶನ್ ಸೌಕರ್ಯ ಹೆಚ್ಚಳ ಈ ಅನುದಾನದ ಬಳಕೆ
    * 31 ಮಾರ್ಚ್ 2022ರವರೆಗೆ ಈ ಅನುದಾನದ ಬಳಕೆಗೆ ಕಾಲಾವಕಾಶ ನೀಡಲಾಗಿದೆ. ಕಳೆದ ವರ್ಷ ಈ ಸ್ಕೀಂನಲ್ಲಿ 15 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿತ್ತು.

    10. ಇತರೆ ಘೋಷಣೆಗಳು
    * ಅಪೌಷ್ಠಿಕತೆ ಮುಕ್ತಿ ಮತ್ತು ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರದ ಉತ್ತೇಜನಕ್ಕಾಗಿ ವಿಶೇಷ ತಳಿಯ ಸಸಿ, ಬೀಜಗಳನ್ನು ಒದಗಿಸುವುದು. ಐಸಿಆರ್ ಜೈವಿಕ ಬಲವರ್ಧಿತ ಬೆಳೆ ಪ್ರಬೇಧಗಳ ಅಭಿವೃದ್ಧಿಪಡಿಸುವಿಕೆ.
    * ಈಶಾನ್ಯ ಭಾರತದ ರೈತರಿಗಾಗಿ ಸಂಘಟನೆ ರಚನೆ. 1982ರಲ್ಲಿ ಸಂಘಟನೆ ರಚನೆ ಮಾಡಲಾಗಿದೆ. ಇದುವರೆಗೂ 75 ರೈತ ಸಂಘಟನೆಗಳು ಇದರೊಂದಿಗೆ ಸೇರ್ಪಡೆಯಾಗಿವೆ.
    * ಈ ಸಂಘಟನೆಗಳು ರೈತರಿಗೆ ಮಧ್ಯವರ್ತಿಗಳನ್ನು ದೂರವಿರಿಸಿ ಅವರ ಆದಾಯವನ್ನ ಶೇ.10 ರಿಂದ 15ರಷ್ಟು ಹೆಚ್ಚಿಸಲು ಸಹಾಯಕಾರಿ ಆಗಲಿವೆ.

  • ಆರ್ಟಿಕಲ್ 370 ರದ್ದು ಬಳಿಕ ಮೊದಲ ಬಾರಿಗೆ ಜಮ್ಮು, ಕಾಶ್ಮೀರ ನಾಯಕರೊಂದಿಗೆ ಮೋದಿ ಸಭೆ

    ಆರ್ಟಿಕಲ್ 370 ರದ್ದು ಬಳಿಕ ಮೊದಲ ಬಾರಿಗೆ ಜಮ್ಮು, ಕಾಶ್ಮೀರ ನಾಯಕರೊಂದಿಗೆ ಮೋದಿ ಸಭೆ

    – ಜಮ್ಮು, ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಚಿಂತನೆ!

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ನ್ನು ಕೇಂದ್ರ ರದ್ದು ಮಾಡಿದ ಬಳಿಕ ಕಣಿವೆ ನಾಡಿನ ರಾಜಕೀಯ ಪ್ರಮುಖರ ಜೊತೆ ಪ್ರಧಾನಿ ನರೇಂದ್ರ ಮೋದಿ ಮೊದಲ ಸಭೆ ನಡೆಸಿದರು. ಸುಮಾರು ಮೂರುವರೆ ಗಂಟೆಗಳ ಕಾಲ ಸಭೆ ನಡೆದಿದ್ದು, ಜಮ್ಮು, ಕಾಶ್ಮೀರ ನಾಯಕರು ತಮ್ಮ ಅಭಿಪ್ರಾಯಗಳನ್ನು ಪ್ರಧಾನಿಗಳ ಮುಂದೆ ಇರಿಸಿದ್ದಾರೆ.

    ರಾಜ್ಯ ಸ್ಥಾನಮಾನ ಶೀಘ್ರ ಸಿಗಲಿ:
    ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್, ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನ ಶೀಘ್ರ ಸಿಗಲಿ. ವಿಧಾನಸಭಾ ಚುನಾವಣೆ ಬಳಿಕ ಈ ಪ್ರಕ್ರಿಯೆ ಬೇಗ ನಡೆಯಲಿ. ಜೊತೆಗೆ ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತಂದು ಪುರ್ನವಸತಿಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು. ಇದೇ ವೇಳೆ ಮಾತನಾಡಿದ ಮುಜಫ್ಪರ್ ಹುಸೈನ್ ಬೇಗ್, ಆರ್ಟಿಕಲ್ 370 ರದ್ದು ನಿರ್ಧಾರ ವಿಧಾನಭೆ ಮೂಲಕ ನಡೆಯಬೇಕಿದೆ. ಜಮ್ಮು, ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಕುರಿತು ಪ್ರಧಾನಿಗಳು ಸ್ಪಷ್ಟವಾಗಿ ಹೇಳಿಲ್ಲ ಎಂದರು.

    ಜಮ್ಮು, ಕಾಶ್ಮೀರ ನಾಯಕರ ಜೊತೆಗಿನ ಸಭೆ ಬಳಿಕ ಮಾತನಾಡಿದ ಬಿಜೆಪಿ ನಾಯಕ ಕವಿಂದರ್ ಗುಪ್ತಾ, ಎಲ್ಲ ರಾಜಕೀಯ ನಾಯಕರು ತಮ್ಮ ಪ್ರಸ್ತಾಪ ಮತ್ತು ಅಭಿಪ್ರಾಯವನ್ನ ಸರ್ಕಾರದ ಮುಂದೆ ಇರಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಪ್ರಕ್ರಿಯೆಗಳು ನಡೆಯುವ ಸಾಧ್ಯತೆಗಳಿವೆ. ಗಡಿ ನಿರ್ಣಯದ ಬಳಿಕ ಕ್ಷೇತ್ರಗಳನ್ನ ಗುರುತಿಸಲಾಗುವುದು. ಮತ್ತೊಮ್ಮೆ ಜಮ್ಮು, ಕಾಶ್ಮೀರದಲ್ಲಿ ವಿಧಾನಸಭೆ ರಚನೆಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: 370ನೇ ವಿಧಿ ರದ್ದು : ಇದು ಯಾವ ರೀತಿಯ ಅರ್ಜಿ – ಅರ್ಜಿದಾರರಿಗೆ ಸುಪ್ರೀಂ ತರಾಟೆ

    ಆರ್ಟಿಕಲ್ 370 ವಿಷಯ ಚರ್ಚೆಗೆ ತಂದ ಮುಫ್ತಿ:
    ಸಭೆಯಲ್ಲಿ ಪಿಡಿಪಿ ಅಧ್ಯಕ್ಷೆ 370 ರದ್ದುಗೊಳಿಸುವ ವಿಷಯವನ್ನು ಚರ್ಚೆಗೆ ತಂದರು. ನೀವು ಆರ್ಟಿಕಲ್ 370 ರದ್ದುಗೊಳಿಸುವ ಮುನ್ನು ಜಮ್ಮು, ಕಾಶ್ಮೀರ ವಿಧಾನಸಭೆಯನ್ನು ಕರೆದು ನಿರ್ಧಾರ ಪ್ರಕಟಿಸಬೇಕಿತ್ತು. ಈ ರೀತಿ ಕಾನೂನು ಪಾಲಿಸದೇ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಹಕ್ಕು ಯಾರಿಗೂ ಇಲ್ಲ. ಸಾಂವಿಧಾನಿಕ ಮತ್ತು ಕಾನೂನು ರೀತಿಯಲ್ಲಿ ಆರ್ಟಿಕಲ್ 370 ಪುನಃಸ್ಥಾಪಿಸಲು ಬಯುಸುತ್ತೇವೆ ಎಂದು ಹೇಳಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಮೋದಿಗೆ ದೇಶದ ಆರ್ಥಿಕತೆಗಿಂತ 370ರ ಬಗ್ಗೆಯೇ ಹೆಚ್ಚು ನಂಬಿಕೆ: ಎಚ್‍ಡಿಡಿ ಟಾಂಗ್

    ಉಮರ್ ಅಬ್ದುಲ್ಲಾ ಆಕ್ರೋಶ:
    ಸಭೆಯಲ್ಲಿ ಮಾಜಿ ಸಿಎಂ ಉಮರ್ ಅಬ್ದುಲ್ಲಾ ಆಕ್ರೋಶವಾಗಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್ 8, 2019ರಂದು ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿರೋದನ್ನು ನಾವು ವಿರೋಧಿಸುತ್ತೇವೆ. ಕೇಂದ್ರದ ಈ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ. ಆರ್ಟಿಕಲ್ 370ರ ಸಂಬಂಧ ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ. ಇದನ್ನೂ ಓದಿ: 370ನೇ ವಿಧಿ ರದ್ದು ಭಾರತದ ಆರ್ಥಿಕ ಅಭಿವೃದ್ಧಿಗೆ ನಾಂದಿ: ಅಮೆರಿಕ ಸಂಸದ

    ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವ ಚಿಂತನೆ ನಡೆಸಿದ್ದ ಕೇಂದ್ರ ಸರ್ಕಾರ, ಇಂದು ಕಣಿವೆ ನಾಡಿನ ರಾಜಕೀಯ ಪ್ರಮುಖರ ಜೊತೆ ಸಭೆ ನಡೆಸಿತು. ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬೀ ಆಜಾದ್, ಮಾಜಿ ಸಿಎಂಗಳಾದ ಫರೂಖ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಯೂಸೂಫ್ ತರಿಗಾಮಿ, ರವೀಂದ್ರ ರೈನಾ, ನಿರ್ಮಲ್ ಸಿಂಗ್ ಸೇರಿ ಹಲವು ನಾಯಕರು ಪಾಲ್ಗೊಂಡಿದ್ರು. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ರು. ಇದನ್ನೂ ಓದಿ: ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಚಾರ ಅಂತ ಒಪ್ಕೊಂಡ ಪಾಕ್

  • ಸಿದ್ದರಾಮಯ್ಯಗೆ ಬುದ್ಧಿ ಇಲ್ಲ, ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿರಲು ವಿಫಲ: ಈಶ್ವರಪ್ಪ

    ಸಿದ್ದರಾಮಯ್ಯಗೆ ಬುದ್ಧಿ ಇಲ್ಲ, ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿರಲು ವಿಫಲ: ಈಶ್ವರಪ್ಪ

    ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬುದ್ಧಿಯೇ ಇಲ್ಲ. ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ ಇರಲು ಸಹ ವಿಫಲವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು ನಮ್ಮ ವಿರುದ್ದ ಆರೋಪ ಮಾಡಲು ಸಹ ಕಾಂಗ್ರೆಸ್ ವಿಫಲವಾಗಿದೆ. ಕೋವಿಡ್‍ಗೆ ದೇಶದಲ್ಲಿ ಲಸಿಕೆ ಬಂದ ಆರಂಭದಲ್ಲಿ ಲಸಿಕೆ ತೆಗೆದುಕೊಳ್ಳಬೇಡಿ ಎಂದು ಇಡೀ ದೇಶದಲ್ಲಿ ಅಪಪ್ರಚಾರ ಮಾಡಿದವರೇ ಕಾಂಗ್ರೆಸ್ಸಿಗರು. ಆದರೆ ಈಗ ಲಸಿಕೆ ಪಡೆದುಕೊಳ್ಳಲು ಅವರೇ ಕ್ಯೂನಲ್ಲಿ ನಿಂತಿದ್ದಾರೆ. ಜೊತೆಗೆ ಲಸಿಕೆ ಸಿಗುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಕಿಡಿಕಾರಿದ್ದಾರೆ. ಇದನ್ನೂ ಓದಿ: 100 ನಾಟೌಟ್, ಕಾಂಗ್ರೆಸ್ ಪ್ರತಿಭಟನೆ – ಸಿದ್ದರಾಮಯ್ಯ, ಡಿಕೆಶಿ ವಶಕ್ಕೆ

    ಇಡೀ ಪ್ರಪಂಚದಲ್ಲಿ ಆಗದಿರುವ ಒಳ್ಳೆಯ ಕೆಲಸವನ್ನು ನಮ್ಮ ದೇಶದಲ್ಲಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಇಡೀ ದೇಶದ ಜನರಿಗೆ ಲಸಿಕೆ ಪಡೆದುಕೊಳ್ಳಿ ಎಂದು ಮೋದಿಯವರು ಮನವಿ ಮಾಡಿದರೆ, ಕಾಂಗ್ರೆಸ್ ನಾಯಕರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ದೇಶದಲ್ಲಿ ಸಾರಿದರು. ಮೋದಿ ಹಾಗೂ ಬಿಜೆಪಿ ಲಸಿಕೆ ಎಂದು ದಿಕ್ಕು ತಪ್ಪಿಸುವ ಕೆಲಸ ಮಾಡಿದರು ಎಂದು ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯಿದ್ದಾರೆ. ಇದನ್ನೂ ಓದಿ: ಜಮೀರ್ ಅಹ್ಮದ್ ವಿರುದ್ಧ ಸವಿತಾ ಸಮಾಜ ಆಕ್ರೋಶ

  • ಜೂನ್ 21ರಿಂದ ಕೇಂದ್ರದಿಂದ ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

    ಜೂನ್ 21ರಿಂದ ಕೇಂದ್ರದಿಂದ ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

    – ದೀಪಾವಳಿವರೆಗೂ ಉಚಿತ ಪಡಿತರ

    ನವದೆಹಲಿ: ಜೂನ್ 21ರಿಂದ ಕೇಂದ್ರದಿಂದಲೇ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಇದೇ ವೇಳೆ ದೀಪಾವಳಿವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದರು.

    ಮೋದಿ ಭಾಷಣದಲ್ಲಿ ಹೇಳಿದ್ದೇನು?: ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದೆ. ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ ನಿರ್ಮಾಣವಾಗಿದೆ. ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಉತ್ಪನ್ನಗಳಿಗಾಗಿ ಯುದ್ಧನೋಪಾದಿಯಲ್ಲಿ ಕೆಲಸ ಮಾಡಲಾಯ್ತು. ವಿಶ್ವದ ಯಾವುದೇ ಭಾಗದಲ್ಲಿ ಲಭ್ಯವಿರುವ ಔಷಧಗಳನ್ನು ತರಲಾಯ್ತು. ಈ ಹೋರಾಟದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ.

    ಕೊರೊನಾ ವಿರುದ್ಧ ಹೋರಾಟದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಲಸಿಕೆ ಈ ಮಹಾಮಾರಿಗೆ ಸಂಜೀವಿನಿ. ವಿಶ್ವದಲ್ಲಿ ಲಸಿಕೆ ಉತ್ಪಾದಿಸುವ ಕಂಪನಿಗಳು ಕಡಿಮೆ ಸಂಖ್ಯೆಯಲ್ಲಿವೆ. ಲಸಿಕೆಗೆ ಇಡೀ ವಿಶ್ವದಲ್ಲಿ ಬೇಡಿಕೆ ಹೆಚ್ಚಿವೆ. ಈ ಹಿಂದೆ ವ್ಯಾಕ್ಸಿನ್ ಗಾಗಿ ದಶಕಗಳವರೆಗೂ ಕಾಯಬೇಕಿತ್ತು. ವಿದೇಶದಲ್ಲಿ ಲಸಿಕೆ ಸಿಕ್ಕರೂ ನಮಗೆ ಸಿಗುತ್ತಿರಲಿಲ್ಲ. ಆದ್ರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಲಸಿಕೆ ಹಂಚಿಕೆಯಲ್ಲಿ ಭಾರತ ಮುಂದಿದೆ.

    ಮಿಷನ್ ಇಂದ್ರ ಧನುಷ್ ಯೋಜನೆ ಮೂಲಕ ಲಸಿಕೆ ನೀಡಲಾಗುತ್ತಿದೆ. ನಮಗೆ ಬಡ ಮಕ್ಕಳ ಬಗ್ಗೆ ಚಿಂತೆ ಇತ್ತು. ದೇಶದ ವಿಜ್ಞಾನಿಗಳು ಒಂದೇ ವರ್ಷದಲ್ಲಿ ಎರಡು ಲಸಿಕೆ ತಯಾರಿಸುವ ಮೂಲಕ ವಿದೇಶಗಳಿಗಿಂತ ಹಿಂದೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ರು. ಲಸಿಕೆಯ ನೀತಿ ಸ್ಪಷ್ಟವಾಗಿದ್ದು, ಇದುವರೆಗೂ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕೊರೊನಾ ಎರಡನೇ ಅಲೆಗೂ ಮುನ್ನವೇ ಭಾರತದಲ್ಲಿ ಲಸಿಕಾಕರಣ ಆರಂಭವಾಗಿತ್ತು.

    ಲಸಿಕೆ ಸಂಶೋಧನೆಯ ಎಲ್ಲ ಹೆಜ್ಜೆಯಲ್ಲೂ ಸರ್ಕಾರ ಜೊತೆಯಾಗಿತ್ತು. ದೇಶದಲ್ಲಿ ಏಳು ಕಂಪನಿಗಳು ವಿಭಿನ್ನ ಲಸಿಕೆ ತಯಾರಿಕೆಗೆ ಮುಂದಾಗಿದೆ. ಮೂರು ಲಸಿಕೆಗಳ ಟ್ರಯಲ್ ಸಹ ನಡೆಸಲಾಗುತ್ತಿದೆ. ಮಕ್ಕಳಿಗೆ ಕೊರೊನಾಂತಕ ಹಿನ್ನೆಲೆ ಎರಡು ವ್ಯಾಕ್ಸಿನ್ ಗಳ ಟ್ರಯಲ್ ನಡೆಯುತ್ತಿದೆ.

    ಲಸಿಕೆ ತಯಾರಿಸಿದ ಬಳಿಕವೂ ಕಡಿಮೆ ದೇಶಗಳಲ್ಲಿ ಲಸಿಕಾಕರಣ ಆರಂಭವಾಯ್ತು. ಮೊದಲಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಯ್ತು. ಎರಡನೇ ಅಲೆ ಆರಂಭಕ್ಕೂ ಮುನ್ನ ನಮ್ಮ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಹಾಗಾಗಿ ಆರೋಗ್ಯ ಸಿಬ್ಬಂದಿ ಸೋಂಕಿತರ ಆರೈಕೆಯಲ್ಲಿ ತೊಡಗಿಕೊಂಡರು.

    ಜನವರಿ 16ರಿಂದ ಏಪ್ರಿಲ್ ಅಂತ್ಯದವರೆಗೆ ಲಸಿಕಾಕರಣ ಕೇಂದ್ರದ ಕಣ್ಗಾವಲಿನಲ್ಲಿಯೇ ನಡೆಯಿತು. ಆದ್ರೆ ಲಸಿಕೆ ಸಂಬಂಧ ಟೀಕೆಗಳು ಕೇಳಿ ಬಂದಿದ್ದವು. ದೇಶದ ಒಂದು ವರ್ಗದ ಬಗ್ಗೆ ಲಸಿಕೆ ಬಗ್ಗೆ ಕ್ಯಾಂಪೇನ್ ಸಹ ನಡೆಸಿದವು. ಕೇಂದ್ರ ಲಸಿಕೆ ನೀಡುವ ಕಾರ್ಯಕ್ರಮವನ್ನ ಕೇಂದ್ರಿಕರಣ ಮಾಡಿಕೊಳ್ಳುತ್ತಿದೆ ಎಂದು ಹಲವು ರಾಜ್ಯ ಸರ್ಕಾರಗಳು ಆರೋಪಿಸಿದವು. ಹಾಗಾಗಿ ಅವರಿಗೂ ಶೇ.50ರಷ್ಟು ಜವಾಬ್ದಾರಿಯನ್ನ ನೀಡಲಾಯ್ತು. ಮೇನಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೆಲ ರಾಜ್ಯಗಳು ಮೊದಲಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ಹೇಳಲಾರಂಭಿಸಿದವು. ಹಾಗಾಗಿ ಲಸಿಕೆಯ ಪೂರ್ಣ ಹಂಚಿಕೆಯನ್ನ ಕೇಂದ್ರವೇ ತೆಗೆದುಕೊಳ್ಳಲಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಭಾರತ ಸರ್ಕಾರ ಕೊರೊನಾ ಲಸಿಕೆ ನೀಡಲಿದೆ.

    ಭಾರತ ಸರ್ಕಾರವೇ ಕೊರೊನಾ ಲಸಿಕೆ ಖರೀದಿಸಿ, ರಾಜ್ಯಗಳಿಗೆ ನೀಡಲಾಗುತ್ತದೆ. ಲಸಿಕೆಗಾಗಿ ರಾಜ್ಯಗಳು ಹಣ ನೀಡುವಂತಿಲ್ಲ. ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಪ್ರಕಟಿಸಲಾಗುವುದು.

    ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಖರೀದಿ ನಿಯಮದಲ್ಲಿ ಬದಲಾವಣೆ ಇಲ್ಲ. ಖಾಸಗಿ ಆಸ್ಪತ್ರೆಗಳು 125 ರೂ.ಗಿಂತ ಹೆಚ್ಚಿನ ಸರ್ವಿಸ್ ಚಾರ್ಜ್ ಪಡೆಯುವಂತಿಲ್ಲ. ಕೋವಿನ್ ಆ್ಯಪ್ ಬಗ್ಗೆ ವಿಶ್ವದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅವರೂ ಸಹ ನಮ್ಮ ಮಾದರಿಯಲ್ಲಿಯೇ ಲಸಿಕೆ ವಿತರಣೆ ಮಾಡಲು ಮುಂದಾಗಿವೆ ಎಂದು ತಿಳಿಸಿದರು.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಎಂಟು ತಿಂಗಳು ಉಚಿತವಾಗಿ ನೀಡಲಾಗಿತ್ತು. ಕೊರೊನಾ ಎರಡನೇ ಅಲೆ ಆರಂಭದಲ್ಲಿ ಏಪ್ರಿಲ್ ಮತ್ತು ಮೇನಲ್ಲಿ ಉಚಿತ ಪಡಿತರ ನೀಡಲಾಗಿತ್ತು. ಈಗ ಈ ಯೋಜನೆಯಲ್ಲಿ ದೀಪಾವಳಿವರೆಗೂ ಅಂದ್ರೆ ನವೆಂಬರ್ ವರೆಗೂ ಉಚಿತ ಪಡಿತರ ಲಭ್ಯವಾಗಲಿದೆ.

    ಕೊರೊನಾಗೆ ಸಂಬಂಧಿಸಿದಂತೆ ಕೆಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಹಾಗಾಗಿ ಜನತೆ ಎಚ್ಚರದಿಂದ ಇರಬೇಕು. ಕೊರೊನಾ ಸಂಖ್ಯೆ ಇಳಿಕೆಯಾದ್ರೂ ಎಚ್ಚರಿಕೆಯಿಂದ ಇರಬೇಕು ಎಂದು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡರು.

  • ಮುಂದುವರಿದ ಸಂಘರ್ಷ – ಸಿಎಂ ಮಮತಾ ಬ್ಯಾನರ್ಜಿ 9 ಪ್ರಶ್ನೆಗಳಿಗೆ ಕೇಂದ್ರದ ಉತ್ತರ

    ಮುಂದುವರಿದ ಸಂಘರ್ಷ – ಸಿಎಂ ಮಮತಾ ಬ್ಯಾನರ್ಜಿ 9 ಪ್ರಶ್ನೆಗಳಿಗೆ ಕೇಂದ್ರದ ಉತ್ತರ

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೇಂದ್ರದ ನಡುವಿನ ಸಂಘರ್ಷ ಮುಂದುವರಿದಿದೆ. ಇದೀಗ ಮಮತಾ ಬ್ಯಾನರ್ಜಿ ಅವರ ಒಂಬತ್ತು ಪ್ರಶ್ನೆಗಳಿಗೆ ಕೇಂದ್ರ ಉತ್ತರ ನೀಡಿದೆ.

    ಯಾಸ್ ಸೈಕ್ಲೋನ್ ಗೆ ಸಂಬಂಧಿಸಿದ ಪ್ರಧಾನಿಗಳ ನೇತೃತ್ವದ ಸಭೆಗೆ ಮಮತಾ ಬ್ಯಾನರ್ಜಿ 30 ನಿಮಿಷ ತಡವಾಗಿ ಬಂದಿದ್ದರು. ಈ ವಿಷಯವಾಗಿ ಬಿಜೆಪಿ ಮತ್ತು ಟಿಎಂಸಿ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ಈ ಕುರಿತು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, ಕೇಂದ್ರದ ಮುಂದೆ ಹಲವು ಪ್ರಶ್ನೆಗಳನ್ನಿರಿಸಿದ್ದರು. ಈಗ ಕೇಂದ್ರ ಪ್ರತಿ ಪ್ರಶ್ನೆಗೆ ಉತ್ತರ ನೀಡುವ ಮೂಲಕ ತಿರುಗೇಟು ನೀಡಿದೆ.

    1. ಮಮತಾ ಬ್ಯಾನರ್ಜಿ: ಪ್ರಧಾನಮಂತ್ರಿಗಳ ಕಾರ್ಯಕ್ರಮದ ಬಗ್ಗೆ ನನಗೆ ತಡವಾಗಿ ಮಾಹಿತಿ ಲಭ್ಯವಾಯ್ತು. ಹಾಗಾಗಿ ಪ್ರಧಾನಿಗಳ ಕಾರ್ಯಕ್ರಮಕ್ಕನುಗುಣವಾಗಿ ನನ್ನ ಶೆಡ್ಯೂಲ್ ಅವಧಿಯನ್ನ ಕಡಿತ ಮಾಡಿಕೊಂಡೆ.
    ಕೇಂದ್ರದ ಉತ್ತರ: ಪ್ರಧಾನಿಗಳ ಪ್ರವಾಸ ಚಂಡಮಾರುತದ ಹಾನಿಯ ಕುರಿತಾಗಿತ್ತು. ಸೈಕ್ಲೋನ್ ಕುರಿತ ಸಭೆಗಳ ಸಮಯ ಮೊದಲೇ ಹೇಗೆ ನಿಗದಿ ಮಾಡಲಾಗುತ್ತೆ. ಅಂಫಾನ್ ವೇಳೆಯೂ ಇದೇ ರೀತಿ ಟೈಮ್ ಲೈನ್ ಫಾಲೋ ಮಾಡಲಾಗಿತ್ತು. ಓಡಿಶಾ ಮತ್ತು ಬಂಗಾಲಕ್ಕೆ ಸಮಯದ ಮಾಹಿತಿ ನೀಡಲಾಗಿತ್ತು. ಓಡಿಶಾ ಅಚ್ಚುಕಟ್ಟಾಗಿ ತಯಾರಿ ನಡೆಸಿತ್ತು. ಅಲ್ಲಿ ಮೊದಲೇ ಸೈಕ್ಲೋನ್ ಅಪ್ಪಳಿಸಿತ್ತು.

    2. ಮಮತಾ ಬ್ಯಾನರ್ಜಿ: ನಾನು ಪ್ರಧಾನಿಗಳಿಗಾಗಿ ವೇಟ್ ಮಾಡಿದ್ದೇನೆ.
    ಕೇಂದ್ರದ ಉತ್ತರ: ಕುಲೈಕೂಂಡಾಗೆ ಪ್ರಧಾನಿಗಳು ಮಧ್ಯಾಹ್ನ 1.59 ನಿಮಿಷಕ್ಕೆ ಆಗಮಿಸಿದರು. ಆದ್ರೆ ಮಮತಾ ಬ್ಯಾನರ್ಜಿ ತಲುಪಿದ್ದು 2 ಗಂಟೆ 10 ನಿಮಿಷಕ್ಕೆ. ಇಲ್ಲಿ ಯಾರು, ಯಾರಿಗೆ ಕಾದಿದ್ದಾರೆ ಅನ್ನೋದು ತಿಳಿಯುತ್ತೆ. ಲ್ಯಾಂಡಿಂಗ್ ಬಳಿಕ 25 ನಿಮಿಷ ಬಳಿಕ ಪ್ರಧಾನಿಗಳನ್ನ ಭೇಟಿ, ಸಭೆಯಲ್ಲಿದ್ದು ಹೊರಟರು.

    3. ಮಮತಾ ಬ್ಯಾನರ್ಜಿ: ನನ್ನ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದವು. ಪ್ರತಿಬಾರಿಗೂ ಮುಖ್ಯಮಂತ್ರಿಗಳೇ ಪ್ರಧಾನಿಗಳನ್ನ ಸ್ವಾಗತ ಮಾಡಬೇಕು ಅಂತೇನಿಲ್ಲ. ನಮಗೂ ನಮ್ಮದೇ ಕಾರ್ಯಕ್ರಮಗಳಿರುತ್ತವೆ.
    ಕೇಂದ್ರದ ಉತ್ತರ: ಸಭೆಯಲ್ಲಿ ಭಾಗಿಯಾಗೋದರ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದರು. ಆದ್ರೆ ಸಭೆಯಲ್ಲಿ ವಿಪಕ್ಷ ನಾಯಕ ಭಾಗಿಯಾಗಿದ್ದಕ್ಕೆ ಹಿಂದಿರುಗಿದರು. ಕಾರ್ಯಕ್ರಮದಿಂದ ಹೊರ ಬರಲು ಇದೇ ಪ್ರಮುಖ ಕಾರಣ.

    4. ಮಮತಾ ಬ್ಯಾನರ್ಜಿ: ಸಾಗರದಲ್ಲಿ ಪಿಎಂ ಹೆಲಿಕಾಪ್ಟರ್ ಲ್ಯಾಂಡ್ ಮುನ್ನ 20 ನಿಮಿಷ ಕಾಯಬೇಕಾಗಿ ಬಂತು
    ಕೇಂದ್ರದ ಉತ್ತರ: ಪ್ರಧಾನಿಗಳು ಆಗಮನ ವೇಳೆ ಈ ರೀತಿಯ ಭದ್ರತಾ ವ್ಯವಸ್ಥೆ ಇರುತ್ತೆ. ಪಿಎಂ ಭದ್ರತೆ ಎಸ್‍ಪಿಜಿ ನಿಯಂತ್ರಣದಲ್ಲಿದ್ದು, ಅದು ಅವರ ವೃತ್ತಿ.

    5. ಮಮತಾ ಬ್ಯಾನರ್ಜಿ: ಮುಖ್ಯ ಕಾರ್ಯದರ್ಶಿ ಕುರಿತ ಆದೇಶ ಆಶ್ಚರ್ಯವನ್ನುಂಟು ಮಾಡಿತು. ಇಲ್ಲಿ ರಾಜ್ಯ ಸರ್ಕಾರದ ಸಲಹೆ ಪಡೆಯಲಿಲ್ಲ. ಇದು ಸಂವಿಧಾನದ ಉಲ್ಲಂಘನೆ
    ಕೇಂದ್ರದ ಉತ್ತರ: ಆದೇಶ ಸರಿಯಾಗಿ ಮತ್ತು ಕಾನೂನುಬದ್ಧವಾಗಿದೆ. ಚೀಫ್ ಸೆಕ್ರೆಟರಿ ಆಲ್ ಇಂಡಿಯಾ ಕೆಡರ್ ಆಫಿಸರ್. ಅವರು ತಮ್ಮ ಸಂವಿಧಾನಿಕ ಕರ್ತವ್ಯದ ಪಾಲನೆ ಮಾಡಿಲ್ಲ. ಪ್ರಧಾನಿಗಳಿಗೆ ಸಭೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಸಭೆಯಲ್ಲಿ ಬಂಗಾಳ ಸರ್ಕಾರದ ಯಾವುದೇ ಪ್ರತಿನಿಧಿಗಳು ಭಾಗಿಯಾಗಿರಲಿಲ್ಲ. ಚೀಫ್ ಸೆಕ್ರಟರಿ ಅವರ ನಿವೃತ್ತಿ ಮಮತಾ ಬ್ಯಾನರ್ಜಿ ಹಿಡಿತದಲ್ಲಿದ್ದರು ಎಂಬುವುದು ತಿಳಿಯುತ್ತೆ.

    6. ಮಮತಾ ಬ್ಯಾನರ್ಜಿ: ಚೀಫ್ ಸೆಕ್ರೆಟರಿ ಅವರ ಸೇವಾವಧಿಯನ್ನ ವಿಸ್ತರಿಸಲಾಗಿತ್ತು. ಆದ್ರೆ ರಾಜತಾಂತ್ರಿಕ ಒಪ್ಪಿಗೆ ಪಡೆಯಲಾಗಿತ್ತು. ಈ ಅನುಮತಿ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
    ಕೇಂದ್ರದ ಉತ್ತರ: ಕೇಂದ್ರ ರಾಜ್ಯ ಸರ್ಕಾರದ ಜೊತೆಯಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

    7. ಮಮತಾ ಬ್ಯಾನರ್ಜಿ: ಪಿಎಂ-ಸಿಎಂ ಸಭೆಗೆ ಓರ್ವ ಸ್ಥಳೀಯ ಶಾಸಕ ಭಾಗಿಯಾಗಿದ್ದರು. ಆದ್ರೆ ಕೇಂದ್ರ ಸಚಿವರು ಅಥವಾ ರಾಜ್ಯಪಾಲರ ಭಾಗಿಯಾಗಲು ಆಕ್ಷೇಪ ವ್ಯಕ್ತವಾಗಿತ್ತು.
    ಕೇಂದ್ರದ ಉತ್ತರ: ಸಭೆಯಲ್ಲಿ ಭಾಗಿಯಾದ್ದು ವಿರೋಧ ಪಕ್ಷದ ನಾಯಕ. ಜೊತೆಗೆ ಅವರ ಕ್ಷೇತ್ರವೂ ಯಾಸ್ ನಿಂದ ಹಾನಿಗೆ ಒಳಗಾಗಿತ್ತು. ಈ ರೀತಿ ಹಲವು ಸಂದರ್ಭಗಳಲ್ಲಿ ನಡೆದಿದ್ದು, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಅನೇಕ ಪಕ್ಷದ ನಾಯಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮುಂದೊಂದಿನ ಭಾರತಕ್ಕೂ ಮೋದಿ ಹೆಸರಿಡಬಹುದು: ಮಮತಾ ಬ್ಯಾನರ್ಜಿ

    8. ಮಮತಾ ಬ್ಯಾನರ್ಜಿ: ಮೀಟಿಂಗ್ ಮೊದಲೇ ಚೀಫ್ ಸೆಕ್ರಟರಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಆದ್ರೆ ಆ ಕಡೆಯಿಂದ ನಮಗೆ ಯಾವುದೇ ಉತ್ತರ ಸಿಗಲಿಲ್ಲ.
    ಕೇಂದ್ರದ ಉತ್ತರ: ವಿಪಕ್ಷ ನಾಯಕ ಭಾಗಿಯಾದ ಕಾರಣಕ್ಕೆ ಮಮತಾ ಬ್ಯಾನರ್ಜಿ ಸಭೆಯನ್ನ ಬಹಿಷ್ಕರಿಸಿದ್ರು. ಆದ್ರೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಪರಿಶೀಲನೆ ಬಳಿಕ ಪ್ರಧಾನಿಗಳು ಮುಖ್ಯಮಂತ್ರಿಗಳನ್ನ ಭೇಟಿಯಾಗಬೇಕಿತ್ತು. ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿಗಾಗಿ ದೀದಿ V/s ಮೋದಿ – ಮತ್ತೆ ಕೇಂದ್ರದ ವಿರುದ್ಧ ಸಿಡಿದ ಮಮತಾ ಬ್ಯಾನರ್ಜಿ

    9. ಮಮತಾ ಬ್ಯಾನರ್ಜಿ: ಚೀಫ್ ಸೆಕ್ರಟರಿ ಜೊತೆಯಲ್ಲಿ ಸಭೆಗೆ ಬಂದೆ. ವರದಿಯನ್ನ ನೀಡಿ ಪ್ರಧಾನಿಗಳ ಬಳಿಯೇ ಅನುಮತಿ ಪಡೆದು ದೀಧಾನತ್ತ ಪ್ರಯಾಣ ಬೆಳೆಸಿದೆ.
    ಕೇಂದ್ರದ ಉತ್ತರ: ಪ್ರಧಾನಮಂತ್ರಿಗಳು ಮಮತಾ ಬ್ಯಾನರ್ಜಿ ಅವರಿಗೆ ಸಭೆಯಿಂದ ಹೊರ ಬರಲು ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಮೂರನೇ ಬಾರಿ ಬಂಗಾಳದ ಗದ್ದುಗೆ ಏರಿದ ಮಮತಾ ಬ್ಯಾನರ್ಜಿ

  • ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತೆ, ಆಧಾರವಿಲ್ಲದ ಸುದ್ದಿಯೂ ಬರುತ್ತೆ: ಸಿ.ಟಿ.ರವಿ

    ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತೆ, ಆಧಾರವಿಲ್ಲದ ಸುದ್ದಿಯೂ ಬರುತ್ತೆ: ಸಿ.ಟಿ.ರವಿ

    ಚಿಕ್ಕಮಗಳೂರು: ಕೆಲವೊಮ್ಮೆ ಆಧಾರವಿಲ್ಲದೆಯೂ ಸುದ್ದಿ ಬರುತ್ತೆ. ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ಮುಖ್ಯಮಂತ್ರಿ, ಸಚಿವರು, ಶಾಸಕರು ತಲೆಕೆಡಿಸಿಕೊಳ್ಳಬೇಕಾಗಿರುವುದು ಯಾರು ಮುಖ್ಯಮಂತ್ರಿ ಆಗ್ತಾರೆ ಅಂತ ಅಲ್ಲ. ಇದು ಯಾವುದೋ ಗೊಂದಲಗಳಿಗೆ ತಲೆಕೆಡಿಸಿಕೊಳ್ಳುವ ಸಮಯವಲ್ಲ. ಇದು ಜನ ಒಟ್ಟಿಗೆ ಇದ್ದು, ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿ ನಮ್ಮ ಕರ್ತವ್ಯ ಮಾಡುವ ಸಮಯ ಎಂದು ತಿಳಿಸಿದರು.

    ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಹೇಗೆ ವಿಷಯ ಬಿಡುತ್ತಿದ್ದಾರೋ ಗೊತ್ತಿಲ್ಲ. ನಾವು ಈಗ ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಷ್ಟೆ ಆ ಕೆಲಸವನ್ನ ಮಾಡುವಂತೆ ಅಗ್ರಹಪೂರಕವಾಗಿ ವಿನಂತಿ ಮಾಡುತ್ತೇನೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರ್ಕಾರ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೆ. ಚರ್ಚೆ ಯಾಕೆ ಆಗುತ್ತಿದೆ ಗೊತ್ತಿಲ್ಲ. ಜನ ನಮ್ಮನ್ನ ಆರಿಸಿದ್ದು ಅವರು ಸಂಕಷ್ಟದಲ್ಲಿದ್ದಾಗ ನೆರವಿಗೆ ಬರಲೆಂದು. ಈಗ ಜನ ಸಂಕಷ್ಟದಲ್ಲಿದ್ದಾರೆ ಅವರ ನೆರವಿಗೆ ನಿಲ್ಲಬೇಕು ಎಂದರು.

    ಉಳಿದದ್ದು ಸತ್ಯವೋ… ಸುಳ್ಳೋ ಗೊತ್ತಿಲ್ಲ. ಕೆಲವೊಮ್ಮೆ ಆಧಾರವಿಲ್ಲದೆಯೂ ಸುದ್ದಿ ಬರುತ್ತೆ. ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತೆ. ಇದು ಯಾವುದಕ್ಕೂ ಕಾಲವಲ್ಲ. ಊಹಾಪೋಹಾದ ಆಧಾರವಿಲ್ಲದ ಪ್ರಶ್ನೆಗೆ ಉತ್ತರಿಸುವುದಕ್ಕೆ ಬರುವುದಿಲ್ಲ. ಅಧಿಕೃತ ಮಾಹಿತಿಗಳು ತಲುಪಿಲ್ಲ. ಅಂತೆ-ಕಂತೆಗಳಿಗೆಲ್ಲಾ ನಮ್ಮಂತ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಉತ್ತರಿಸಬಾರದು ಎಂದು ಹೇಳಿದರು.

    ಕೇಂದ್ರಿಯ ನಾಯಕತ್ವ ಕಾಲ-ಕಾಲಕ್ಕೆ ತಕ್ಕಂತೆ ಬೇರೆ-ಬೇರೆ ರಾಜ್ಯದಲ್ಲಿ ಆ ಜನರ ಹಿತ ಹಾಗೂ ಪಕ್ಷದ ಹಿತವನ್ನ ಗಮನದಲ್ಲಿಟ್ಟುಕೊಂಡು ನಿರ್ಣಯ ತೆಗೆದುಕೊಂಡಿದೆ. ಆ ಕಾಲ ಬಂದಾಗ ಅವರು ನಿರ್ಣಯ ತೆಗೆದುಕೊಳ್ಳಬಹುದು. ಸದ್ಯಕ್ಕೆ ಈಗ ನಾವೆಲ್ಲರೂ ಕೋವಿಡ್ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ ಎಂದರು.

  • ನಮೋ ಮಲತಾಯಿ ಧೋರಣೆ – ಆಕ್ಸಿಜನ್ ಸಮಸ್ಯೆಗೆ ಕೇಂದ್ರ ಕಾರಣ?

    ನಮೋ ಮಲತಾಯಿ ಧೋರಣೆ – ಆಕ್ಸಿಜನ್ ಸಮಸ್ಯೆಗೆ ಕೇಂದ್ರ ಕಾರಣ?

    – ಎರಡು ವಾರ ಕಳೆದರೂ ಬರಲಿಲ್ಲ ಆಕ್ಸಿಜನ್ ರೈಲು
    – ರಾಜ್ಯದ ಯಾವ ಸಮಸ್ಯೆಗೂ ಸಿಗುತ್ತಿಲ್ಲ ಪರಿಹಾರ

    ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. ಆಕ್ಸಿಜನ್ ಕೊರತೆ ನೀಗಿಸಲು ರಾಜ್ಯ ಸರ್ಕಾರ ಸಹ ಹರಸಾಹಸಪಡುತ್ತಿದೆ. ಆದರೆ ರಾಜ್ಯದ ಈ ಸ್ಥಿತಿಗೆ ಕಾರಣ ಕೇಂದ್ರ ಸರ್ಕಾರದ ನಿರ್ಧಾರಗಳು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಎರಡು ವಾರ ಕಳೆದರೂ ನಮ್ಮ ರಾಜ್ಯಕ್ಕೆ ಆಕ್ಸಿಜನ್ ರೈಲು ಬಂದಿಲ್ಲ, ಮಾತ್ರವಲ್ಲದೆ ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್‍ನ್ನೂ ನಮಗೆ ಬಳಸಲು ಬಿಡುತ್ತಿಲ್ಲ. ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರತೆ ಎದುರಾಗಿದೆ.

    ನಮ್ಮಲ್ಲಿ ಉತ್ಪಾದನೆ ಆಗುವ ಆಕ್ಸಿಜನ್‍ನ್ನು ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಗೆ ಕಳುಹಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಮಗೆ ಬಿಟ್ಟಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇದನ್ನೆಲ್ಲ ಪ್ರಶ್ನೆ ಮಾಡಬೇಕಾದ ನಮ್ಮ ಸಂಸದರು ಮೌನಕ್ಕೆ ಶರಣಾಗಿರುವುದು ಯಾಕೆ ಎಂಬ ಪ್ರಶ್ನೆ ಎದ್ದಿದೆ.

    ರಾಜ್ಯದಲ್ಲಿ ನಿತ್ಯ 1,041 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತದೆ. ಬಳ್ಳಾರಿ ಒಂದರಲ್ಲೇ 815 ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ಧಾರವಾಡ ಸೇರಿ ಇತರೆಡೆ 220 ಟನ್ ಉತ್ಪಾದನೆ ಆಗುತ್ತಿದೆ. ಸದ್ಯ ರಾಜ್ಯಕ್ಕೆ ನಿತ್ಯ 1,700 ಟನ್ ಆಕ್ಸಿಜನ್ ಅಗತ್ಯವಿದೆ. 865 ಟನ್ ಆಮ್ಲಜನಕ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. 140 ಟನ್ ಆಕ್ಸಿಜನ್‍ನ್ನು ಹೊರ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಬಳ್ಳಾರಿಯಿಂದ ಆಕ್ಸಿಜನ್ ಪೂರೈಕೆಗೆ ಕೇವಲ 25 ಟ್ಯಾಂಕರ್ ಗಳಿದ್ದು, ಹೀಗಾಗಿ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ.

    ಮೋದಿ ಸರ್ಕಾರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆಯೇ? 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಕಾಳಜಿ ತೋರುತ್ತಿಲ್ಲ ಯಾಕೆ? ಕರ್ನಾಟಕದ ಬಗ್ಗೆ ನಿರ್ಲಕ್ಷ್ಯವೋ, ಸಿಎಂ ಮೇಲೆ ಕೋಪವೋ? ರಾಜ್ಯ-ಕೇಂದ್ರ ಸರ್ಕಾರದ ನಡುವೆ ಕೊಲ್ಡ್ ವಾರ್ ನಡೆಯುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

    `ನಮೋ’ ಮಲತಾಯಿ ಧೋರಣೆ
    ಮಹಾರಾಷ್ಟ್ರದಲ್ಲಿ ಆಕ್ಸಿಜನ್ ದುರಂತ ಬೆನ್ನಲ್ಲೇ ಪ್ರಧಾನಿ ಮೋದಿ ಸಿಎಂಗೆ ಫೋನ್ ಮಾಡಿ ವಿಚಾರಿಸಿದ್ದರು. ಅಸ್ಸಾಂನಲ್ಲಿ ಭೂಕಂಪವಾದಾಗ ಸಹ ನೆರವಿನ ಅವಶ್ಯಕತೆ ಇದೆಯೇ ಎಂದು ಕೇಳಿದ್ದರು. ಗುಜರಾತ್‍ನಲ್ಲಿ ಆಕ್ಸಿಜನ್ ಕೊರತೆ ಆದರೆ ರಾತ್ರೋರಾತ್ರಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ 39 ಸೋಂಕಿತರು ಬಲಿಯಾದರೂ ತಿರುಗಿ ನೋಡದ್ದಕ್ಕೆ ಟೀಕೆ ವ್ಯಕ್ತವಾಗಿದೆ.

  • ರಾಜ್ಯ ಗೆದ್ದರೂ ಕ್ಷೇತ್ರ ಗೆಲ್ಲದ ಮಮತಾ ಬ್ಯಾನರ್ಜಿ- 3ನೇ ಬಾರಿಗೆ ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರ

    ರಾಜ್ಯ ಗೆದ್ದರೂ ಕ್ಷೇತ್ರ ಗೆಲ್ಲದ ಮಮತಾ ಬ್ಯಾನರ್ಜಿ- 3ನೇ ಬಾರಿಗೆ ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರ

    – ನಂದಿಗ್ರಾಮದಲ್ಲಿ ಶಿಷ್ಯ ಸುವೇಂದು ಎದುರು ಸೋಲು
    – ಆಪರೇಷನ್ ಕಮಲಕ್ಕೊಳಗಾದ ಬಹುತೇಕರಿಗೆ ಸೋಲು

    ಕೋಲ್ಕತ್ತಾ: ಬಂಗಾಳ ಪಡೆದುಕೊಳ್ಳಲು ಮೋದಿ-ಅಮಿತ್ ಶಾ ಮಾಡಿದ ಸರ್ವ ಪ್ರಯತ್ನ, ಬಂಗಾಳ ಉಳಿಸಿಕೊಳ್ಳಲು ದೀದಿ ಮಮತಾ ನಡೆಸಿದ ಏಕಾಂಗಿ ಹೋರಾಟ, ವ್ಹೀಲ್‍ಚೇರ್ ಪ್ರಚಾರದ ಕಾರಣದಿಂದ ತೀವ್ರ ಕುತೂಹಲ ಕೆರಳಿಸಿದ್ದ ಫಲಿತಾಂಶ ಪ್ರಕಟವಾಗಿದೆ. ಎಲ್ಲರ ಲೆಕ್ಕಾಚಾರಗಳನ್ನು ಸುಳ್ಳು ಮಾಡಿದ ಟಿಎಂಸಿ ಪ್ರಚಂಡ ಗೆಲುವು ಸಾಧಿಸಿದೆ. ಈ ಮೂಲಕ ದೀದಿ ಸತತ ಮೂರನೇ ಬಾರಿಗೆ ಗದ್ದುಗೆ ಏರೋದು ಖಚಿತವಾಗಿದೆ.

    ಸತತ ಮೂರನೇ ಬಾರಿಗೆ ಸಿಎಂ ಆಗುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮಮತಾ ಬ್ಯಾನರ್ಜಿ ಪಾತ್ರರಾಗುತ್ತಿದ್ದಾರೆ. ಅಧಿಕಾರ ಪಡೆದೇ ತೀರಬೇಕೆಂದು ಚುನಾವಣಾ ಕದನದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ರಣಭೀಕರವಾಗಿ ಹೋರಾಡಿದ್ದರ ಹೊರತಾಗಿಯೂ ಬಿಜೆಪಿ ಶತಕದಂಚು ತಲುಪಲು ಏದುಸಿರು ಬಿಟ್ಟಿದೆ. ಆದರೆ ನಂದಿಗ್ರಾಮದಲ್ಲಿ ನಡೆದ ತೀವ್ರ ಹಣಾಹಣಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೆದ್ದು ಸೋತಿದ್ದಾರೆ.

    ಮೊದಲ ಆರು ಸುತ್ತುಗಳವರೆಗೂ ಮಮತಾ ತೀವ್ರ ಹಿನ್ನೆಡೆ ಕಂಡಿದ್ದನ್ನು ನೋಡಿ, ಸುವೆಂದು ಗೆದ್ದೇ ಬಿಡ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದ್ರೆ ಫಿನಿಕ್ಸ್ ಮಾದರಿಯಲ್ಲಿ ಮುನ್ನಡೆಗೆ ಬಂದರು. ನಂತರ ಒಮ್ಮೆ ಸುವೆಂದು ಮುನ್ನಡೆಗೆ ಬಂದರೆ ಮರುಕ್ಷಣವೇ ಮಮತಾ ಲೀಡ್‍ಗೆ ತೆಗೆದುಕೊಳ್ಳುತ್ತಿದ್ದರು. ಕೊನೆವರೆಗೂ ವಿಜಯಮಾಲೆ ತೂಗೂಯ್ಯಾಲೆಯಲ್ಲೇ ಇತ್ತು. ಅಷ್ಟರ ಮಟ್ಟಿಗೆ ಸುವೆಂದು ಅಧಿಕಾರಿ ಬಿಗ್ ಫೈಟ್ ನೀಡಿದರು.

    ಕೊನೆಗೆ ಚುನಾವಣಾಧಿಕಾರಿಗಳು ಮಮತಾ 1,200 ಮತಗಳಿಂದ ಗೆದ್ದರು ಎಂದು ಘೋಷಿಸಿದರು. ಆದ್ರೆ ಇದಾದ ಸ್ವಲ್ಪ ಹೊತ್ತಿಗೆ ಸುವೆಂದು 1,622 ಮತಗಳಿಂದ ಗೆದ್ರು ಎಂದು ಘೋಷಿಸಲಾಯ್ತು. ಸದ್ಯ ನಂದಿಗ್ರಾಮ ಫಲಿತಾಂಶದ ಬಗ್ಗೆ ಗೊಂದಲ ಏರ್ಪಟ್ಟಿದೆ. ಮತ್ತೆ ಮರು ಎಣಿಕೆ ನಡೆಯುತ್ತಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮಮತಾ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಬಹುತೇಕ (140) ನಾಯಕರು ಸೋಲನ್ನಪ್ಪಿದ್ದಾರೆ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಮಮತಾಗೆ ಅಭಿನಂದನೆ ಹೇಳಿದ್ದಾರೆ.

    ಯಾರಿಗೆ ಎಷ್ಟು ಕ್ಷೇತ್ರ:
    * ಟಿಎಂಸಿ- 215 (48.01%) (211 ಕಳೆದ ಬಾರಿಯ ಸ್ಥಾನ)
    * ಬಿಜೆಪಿ- 75 (37.08%) (03 ಕಳೆದ ಬಾರಿಯ ಸ್ಥಾನ)
    * ಎಡರಂಗ+ಕಾಂಗ್ರೆಸ್- 01 (6.53%) (70 ಕಳೆದ ಬಾರಿಯ ಸ್ಥಾನ)
    * ಇತರೆ- 01 (8.38%) (10 ಕಳೆದ ಬಾರಿಯ ಸ್ಥಾನ)

    ಟಿಎಂಸಿ ಗೆಲುವಿಗೆ ಕಾರಣ: ಮಮತಾ ಬ್ಯಾನರ್ಜಿ ನಾಯಕತ್ವ, ವ್ಯಕ್ತಿತ್ವ ಹೆಚ್ಚು ಪರಿಣಾಮಕಾರಿಯಾಗಿತ್ತು. ಟಿಎಂಸಿ ಪಾಲಿಗೆ ದೀದಿ ಒನ್ ಮ್ಯಾನ್ ಆರ್ಮಿ ಎಂಬಂತೆ ಇಡೀ ಚುನಾವಣೆಯಲ್ಲಿ ಬಿಂಬಿತರಾದರು. ಚುನಾವಣೆ ಪ್ರಚಾರದುದ್ದಕ್ಕೂ ಬಂಗಾಳದ ಮಗಳು, ಬಂಗಾಳದ ಆಸ್ಮಿತೆಯ ತಂತ್ರಗಳನ್ನು ಪ್ರಯೋಗಿಸಿದರು. ಚುನಾವಣೆ ವೇಳೆ ಆದ ಕಾಲಿನ ನೋವಿನ ಅನುಕಂಪ ವರ್ಕೌಟ್ ಆಗಿರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಟಿಎಂಸಿ ತಳಮಟ್ಟದಿಂದಲೂ ಪ್ರಬಲವಾಗಿದೆ.

    ಬಿಜೆಪಿ ಸೋಲಿಗೆ ಕಾರಣ: ಹೊರಗಿನವರು ಎಂಬ ಆರೋಪಗಳ ಜೊತೆ ವಲಸಿಗರಿಗೆ ಬಿಜೆಪಿ ಹೆಚ್ಚು ಆದ್ಯತೆ ನೀಡಿತ್ತು. ಪಶ್ಚಿಮ ಬಂಗಾಳದಲ್ಲಿ ಆಪರೇಷನ್ ಕಮಲವೇ ಬಿಜೆಪಿಗೆ ಮುಳವಾಗಿದೆ. ಮೂಲ ಬಿಜೆಪಿ ನಾಯಕರು, ಕಾರ್ಯಕರ್ತರ ನಿರ್ಲಕ್ಷ್ಯವೂ ಸೋಲಿಗೆ ಕಾರಣ ಎನ್ನಲಾಗ್ತಿದೆ. ಗೆಲ್ಲುವ ಮೊದಲೇ ಸುವೆಂದು ಮತ್ತು ದಿಲೀಪ್ ಘೋಷ್ ನಡುವೆ ಸಿಎಂ ಗಾದಿಗಾಗಿ ಮುಸುಕಿನ ಗುದ್ದಾಟ ನಡೆದಿತ್ತು.

  • ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ – ಗುಂಡೇಟಿಗೆ ನಾಲ್ವರು ಬಲಿ

    ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ – ಗುಂಡೇಟಿಗೆ ನಾಲ್ವರು ಬಲಿ

    – ಆರೋಪ, ಪ್ರತ್ಯಾರೋಪದಲ್ಲಿ ಟಿಎಂಸಿ, ಬಿಜೆಪಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಮತದಾನದ ವೇಳೆ ನೆತ್ತರು ಚೆಲ್ಲಿದೆ. ಬಂಗಾಳದ ಕೂಚ್‍ಬೆಹಾರದ ಮತಗಟ್ಟೆ ಮುಂಭಾಗ ಗೋಲಿಬಾರ್ ನಡೆದಿದ್ದು, ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.

    ನಡೆದಿದ್ದೇನು?: ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಸಿಟಾಲ್ಕು ಚಿಯಾಟ್‍ನ ಮತದಾನದ ಕೇಂದ್ರದಲ್ಲಿ ಅಪರಿಚಿತರು ಕ್ಯೂಆರ್‍ಟಿ (ಕ್ವಿಕ್ ರೆಸ್ಪಾನ್ಸ್ ಟೀಂ) ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ಅಪರಿಚಿತರು ಕ್ಯೂಆರ್‍ಟಿ ವಾಹನ ಧ್ವಂಸಗೊಳಿಸಲು ಮುಂದಾಗಿ, ಗನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ಅಪರಿಚಿತರ ಚಲನವಲನ ಗಮನಿಸಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿ ವೇಳೆ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನ ಹಮಿದುಲ್ ಹಕ್, ಮನಿರೂಲ್ ಹಕಂ ಸಮಿಯುಲ್ ಹಕ್ ಮತ್ತು ಅಜ್ಮದ್ ಹುಸೈನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಗುರುತು ಪತ್ತೆಯಾಗಿಲ್ಲ.

    ಎಡಿಜಿ ಸ್ಪಷ್ಟನೆ: ಗೋಲಿಬಾರ್ ಸಂಬಂಧ ಒಂದು ಗಂಟೆಯಲ್ಲಿ ಪ್ರಾಥಮಿಕ ವರದಿ ನೀಡುವಂತೆ ಚುನಾವಣಾ ಆಯೋಗ ಕೂಚಿಬೆಹಾರನ ಡಿಇಓಗೆ ಸೂಚನೆ ನೀಡಿದೆ. ಪಶ್ಚಿಮ ಬಂಗಾಳದ ಎಡಿಜಿ ಜಗಮೋಹನ್ ನಾಲ್ವರು ಮೃತಪಟ್ಟಿರೋದನ್ನು ಖಚಿತ ಪಡಿಸಿದ್ದಾರೆ. ಅಪರಿಚಿತರು ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದಾಗ ಸಿಐಎಸ್‍ಎಫ್ ನ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಗುಂಡು ಹಾರಿಸ್ತೀರಾ?: ಈ ಕುರಿತು ಟಿಎಂಸಿ ಸಂಸದ ಡೆರೆಕೆ ಓ ಬ್ರಾಯನ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನೀವು ನಮ್ಮನ್ನ ಸೋಲಿಸಲು ಆಗದ್ದಕ್ಕೆ, ಗುಂಡು ಹಾರಿಸ್ತೀರಾ? ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಫೈರಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಕೆಲ ದಿನಗಳ ಹಿಂದೆ ಇಲ್ಲಿಯ ಡಿಜಿ, ಎಡಿಜಿ ಮತ್ತು ಗೋಲಿಬಾರ್ ನಡೆದ ಸ್ಥಳದ ಎಸ್‍ಪಿಯನ್ನ ಸಹ ಬದಲಿಸಿತ್ತು ಎಂದು ಆರೋಪಿಸಿದ್ದಾರೆ.

    ಮತ್ತೋರ್ವ ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಸಿಎಪಿಎಫ್ ನವರು ನಾಲ್ವರನ್ನ ಕೊಲೆ ಮಾಡಿದ್ದಾರೆ. ಇದಕ್ಕೆ ಚುನಾವಣಾ ಆಯೋಗವೇ ಕಾರಣ. ಮೋದಿ-ಅಮಿತ್ ಶಾ ಫೋರ್ಸ್ ನಿಯಂತ್ರಣ ಮಾಡಲು ಆಗದವರು. ಈ ಗೊಂಬೆಗಳನ್ನ ಸದನದಲ್ಲಿ ತೋರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಪ್ರತಿಕ್ರಿಯೆ: ಸಿಲಿಗುಡಿ ಬಿಜೆಪಿ ರ್ಯಾಲಿಯಲ್ಲಿ ಕೂಚ್‍ಬೆಹರಾ ಗೋಲಿಬಾರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದರು. ದೀದಿ ಮತ್ತು ಅವರ ಗೂಂಡಾಗಳು ಬಿಜೆಪಿಯ ಗೆಲುವನ್ನು ಕಂಡು ಚಡಪಡಿಸುತ್ತಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಹಿಂಸೆಯ ಮೊರೆ ಹೋಗಿದ್ದಾರೆ. ಆದ್ರೆ ಈ ಹಿಂಸೆ ಬಂಗಾಲದಿಂದ ದೀದಿಯನ್ನ ಹೊರ ಕಳುಹಿಸೋದರಿಂದ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.