Tag: Prime Minister candidate

  • ಪ್ರಧಾನಿ ಅಭ್ಯರ್ಥಿ ಹುಚ್ಚನಾಗಿರಬಾರದು – ರಾಹುಲ್ ಗಾಂಧಿಗೆ ಸಂಸದ ಬಸವರಾಜು ಟಾಂಗ್

    ಪ್ರಧಾನಿ ಅಭ್ಯರ್ಥಿ ಹುಚ್ಚನಾಗಿರಬಾರದು – ರಾಹುಲ್ ಗಾಂಧಿಗೆ ಸಂಸದ ಬಸವರಾಜು ಟಾಂಗ್

    ತುಮಕೂರು: ಪ್ರಧಾನಿ ಅಭ್ಯರ್ಥಿ ಭಾರತೀಯ ಪ್ರಜೆಯಾಗಿರಬೇಕು, ಹುಚ್ಚನಾಗಿರಬಾರದು ಎಂದು ಬಿಜೆಪಿ ಸಂಸದ ಜಿ.ಎಸ್ ಬಸವರಾಜು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಪುಲ್ವಾಮಾ ದಾಳಿಯಿಂದ ಯಾರಿಗೆ ಲಾಭವಾಯ್ತು ಎಂಬ ರಾಹುಲ್ ಗಾಂಧಿ ಟ್ವೀಟ್ ಅನ್ನು ಜಿ.ಎಸ್ ಬಸವರಾಜು ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರು ಮುಂದಿನ ಪ್ರಧಾನಿ ಅಭ್ಯರ್ಥಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರಲ್ಲ ಎಂದು ಜಿ.ಎಸ್ ಬಸವರಾಜು ಅವರನ್ನು ಪ್ರಶ್ನಿಸಿದರು.  ಇದನ್ನೂ ಓದಿ: ಪುಲ್ವಾಮಾ ದಾಳಿಯಿಂದ ಲಾಭ ಆಗಿದ್ದು ಯಾರಿಗೆ: ರಾಹುಲ್ ಗಾಂಧಿ ಪ್ರಶ್ನೆ

    ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿ.ಎಸ್ ಬಸವರಾಜು, ಪ್ರಧಾನಿ ಆಗುವವರಿಗೂ ಅರ್ಹತಾ ಮಟ್ಟ ಇದೆ. ನನಗೂ ಪ್ರಧಾನಿ ಆಗಬೇಕೆಂಬ ಚಟ ಇದೆ. ಪ್ರಧಾನಿ ಅಭ್ಯರ್ಥಿ ಭಾರತೀಯನಾಗಿರಬೇಕು ಹೊರತು ಹುಚ್ಚನಾಗಿರಬಾರದು ಎಂದು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಪುಲ್ವಾಮಾ ದಾಳಿ ರಾಹುಲ್ ಗಾಂಧಿಯೇ ಮಾಡಿಸಿರಬೇಕು ಸೈದ್ಧಾಂತಿಕ ಬದ್ಧತೆ, ಸೈದಾಂತಿಕ ಅರಿವು ಇದ್ದವರಿಗೆ ಏನಾದರೂ ಹೇಳಬಹುದು, ಆದರೆ ರಾಹುಲ್ ಗಾಂಧಿಗೆ ಅದ್ಯಾವುದೂ ಇಲ್ಲ ಎಂದರು.

    ನಾನು ಕಾಂಗ್ರೆಸ್ಸಿನಲ್ಲಿ ಇದ್ದವನು. ಒಳ್ಳೆಯವರು ಯಾರು ಈಗ ಕಾಂಗ್ರೆಸ್ಸಿನಲ್ಲಿ ಇಲ್ಲ. ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳುವಂತೆ ಈಗ ಕಾಂಗ್ರೆಸ್ಸಿನಲ್ಲಿ ಕೇವಲ ಕಳ್ಳರೇ ತುಂಬಿಕೊಂಡಿದ್ದಾರೆ ಎಂದು ಆರೋಪಿಸಿದರು.

  • ‘ಯೋಗಿಯನ್ನ ತನ್ನಿ – ದೇಶವನ್ನು ಉಳಿಸಿ’

    ‘ಯೋಗಿಯನ್ನ ತನ್ನಿ – ದೇಶವನ್ನು ಉಳಿಸಿ’

    – ಪ್ರಧಾನಿ ಪಟ್ಟಕ್ಕೆ ಯೋಗಿ ನೇಮಿಸಿ
    – ಉತ್ತರ ಪ್ರದೇಶದಲ್ಲಿ ಯೋಗಿ ಪರ ಬ್ಯಾನರ್

    ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಮೂರು ಕಡೆಯಲ್ಲಿ ಸೋಲು ಕಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತೊಂದು ಸವಾಲು ಎದುರಾಗಿದೆ.

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಸ್ಪರ್ಧಿಸುವುದು ಬೇಡ. ಅವರ ಬದಲಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕಣಕ್ಕೆ ಇಳಿಯಲಿ ಎನ್ನುವ ಬೇಡಿಕೆ ವ್ಯಕ್ತವಾಗಿದೆ.

    ಯೋಗಿ ಆದಿತ್ಯನಾಥ್ ಅವರಿಂದಾಗಿ ಪ್ರಧಾನಿ ಮೋದಿ ಜನಪ್ರಿಯತೆ ಕುಸಿಯುತ್ತಿದೆ. ಸುಳ್ಳಿಗೆ ಮತ್ತೊಂದು ಹೆಸರು ಮೋದಿ. ಹಿಂದುತ್ವದ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಹೀಗಾಗಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದು ಉತ್ತರ ಪ್ರದೇಶದ ಕೆಲವು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ಲಕ್ನೋದಲ್ಲಿ ಫೆಬ್ರವರಿ 10ರಂದು ಧರ್ಮ ಸಂಸತ್ತು ನಡೆಯಲಿದೆ. ಈ ಕಾರ್ಯಕ್ರಮ ಸ್ವಾಗತ ಕೋರಿ ಹಾಕಿರುವ ಪೋಸ್ಟರ್ ಗಳಲ್ಲಿ ಯೋಗಿ ಪರ ಉತ್ತರ ಪ್ರದೇಶ ನವ ನಿರ್ಮಾಣ ಸೇನಾ ಪ್ರಚಾರ ಮಾಡಿದೆ. ‘ಪ್ರಧಾನಿ ಪಟ್ಟಕ್ಕೆ ಯೋಗಿ’, ‘ಯೋಗಿಯನ್ನ ತನ್ನಿ – ದೇಶವನ್ನು ಉಳಿಸಿ’ ಎಂಬ ಘೋಷಣೆಯುಳ್ಳ ಪೋಸ್ಟರ್ ಗಳನ್ನು ಬೀದಿಯ ಬದಿಯಲ್ಲಿ ಹಾಕಲಾಗಿದೆ.

    ಯೋಗಿಯೇ ಯಾಕೆಬೇಕು?:
    ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಮತ್ತೆ ಚುನಾವಣೆ ಬಂದರೂ ಯಾವುದೇ ಬೆಳವಣಿಗೆ ಕಾಣಲಿಲ್ಲ. ಯೋಗಿ ಆದಿತ್ಯನಾಥ್ ಅವರು ರಾಮಮಂದಿರ ನಿರ್ಮಾಣದಲ್ಲಿ ಬದ್ಧರಾಗಿದ್ದಾರೆ. ಅವರು ತಮ್ಮ ಭಾಷಣದ ಮೂಲಕ ಹಿಂದೂ ಹೃದಯ ಸಾಮ್ರಾಟ್ ಅಂತ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಿಂದಿ ಭಾಷೆಯನ್ನು ಚೆನ್ನಾಗಿ ಅರಗಿಸಿಕೊಂಡಿರುವ ಯೋಗಿ ಧಾರ್ಮಿಕ ಮಾರ್ಗದ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಈ ಕಾರಣಕ್ಕೆ ಯೋಗಿ ಪರ ನವ ನಿರ್ಮಾಣ ಸೇನಾ ಬ್ಯಾನರ್ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv