Tag: Prevention

  • ಭಾರತದಲ್ಲಿ ಮಗು ಭ್ರೂಣದಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ, ಇದರ ತಡೆಗೆ ಕ್ರಮಗಳೇನು?

    ಭಾರತದಲ್ಲಿ ಮಗು ಭ್ರೂಣದಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ, ಇದರ ತಡೆಗೆ ಕ್ರಮಗಳೇನು?

    ಭಾರತವು (India) ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ, ಜಗತ್ತಿಗೆ ಅಗ್ರಗಣ್ಯ ಕೊಡುಗೆ ನೀಡುತ್ತದೆ. ಇದರ ಜೊತೆಗೆ ಭಾರತವು ವಿಶ್ವದಲ್ಲಿಯೇ ಭ್ರೂಣ ಮರಣಗಳಿಗೆ (Fetal Mortality) ಸಾಕ್ಷಿಯಾಗಿದೆ.

    ಹೌದು, ಭ್ರೂಣ ಹತ್ಯೆ ಮಾಡುವುದರ ಹೊರತಾಗಿಯೂ ಭಾರತದಲ್ಲಿ ಭ್ರೂಣದಲ್ಲಿ ಶಿಶುಗಳ ಮರಣ ಹೊಂದುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಹಿಂದೆ ಹಲವು ಕಾರಣಗಳಿವೆ. ಅಧಿಕ ರಕ್ತದೊತ್ತಡ, ಗರ್ಭಾವಸ್ಥೆಯ ಮಧುಮೇಹ, ಸೋಂಕುಗಳು, ಅಪೌಷ್ಟಿಕತೆಯಂತಹ ತಾಯಿಯಲ್ಲಿನ ಸಮಸ್ಯೆಗಳು ಭ್ರೂಣದಲ್ಲಿ ಮಗು ಸಾವನ್ನಪ್ಪಲು ಪ್ರಮುಖ ಕಾರಣವಾಗುತ್ತದೆ.

    ಸಾಮಾನ್ಯವಾಗಿ ಹೆರಿಗೆಯ ನಂತರ ತಾಯಿಯ ಮರಣ, ನವಜಾತ ಶಿಶುವಿನ ಮರಣವಾದಾಗ ಇವುಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಆದರೆ ಭ್ರೂಣದಲ್ಲಿಯೇ ಸಾಯುವ ಮಗುವಿನ ಸಾವಿನ ಕಾರಣವನ್ನು ಪತ್ತೆ ಹಚ್ಚುವಲ್ಲಿ ಕಡಿಮೆ ಗಮನಹರಿಸಲಾಗಿದೆ.

    ಭ್ರೂಣ ಮರಣ ಎಂದರೇನು?
    ಒಂದು ಹೆಣ್ಣು ಗರ್ಭಿಣಿಯಾದ ಬಳಿಕ ಮಗು ಹೊಟ್ಟೆಯಲ್ಲಿಯೇ ಉಸಿರಾಟ, ಹೃದಯ ಇಲ್ಲದೇ ಇರುವುದು ಅಥವಾ ಹೆರಿಗೆಯ ಬಳಿಕ ಉಸಿರಾಡದೇ ಇರುವುದು ಈ ರೀತಿಯ ಸಮಸ್ಯೆಯಿಂದ ಮೃತಪಟ್ಟಿರುತ್ತದೆ ಇದನ್ನು ಭ್ರೂಣ ಮರಣ ಎಂದು ಕರೆಯಲಾಗುತ್ತದೆ.

    ಗರ್ಭಾವಸ್ಥೆಯ 28 ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಮರಣಹೊಂದಿದ ಮಗು ಜನನ ಹೊಂದುತ್ತವೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನನ ಪ್ರಕಾರ, 2021ರಲ್ಲಿ ಭಾರತದಲ್ಲಿ 20 ವಾರಗಳ ಗರ್ಭಾವಸ್ಥೆಯಲ್ಲಿ 567,000 ಮತ್ತು 28 ವಾರಗಳ ಗರ್ಭಾವಸ್ಥೆಯಲ್ಲಿ 397,300 ಮರಣ ಹೊಂದಿದ ಶಿಶುಗಳು ಜನಿಸಿರುವುದನ್ನು ವರದಿ ಹೊಂದಿದೆ. ಇದು ಜಾಗತಿಕವಾಗಿ ಅತೀ ಹೆಚ್ಚು ಭ್ರೂಣ ಮರಣಗಳ ಸಂಖ್ಯೆಯಾಗಿದೆ. ಹೆರಿಗೆಯ ಸಂಖ್ಯೆ ಕಡಿಮೆಯಾದರೂ ಕೂಡ ಭ್ರೂಣ ಮರಣಗಳ ಇಳಿಕೆಯ ವೇಗ ಕಡಿಮೆಯಾಗಿದೆ.

    2030ರ ವೇಳೆಗೆ 28 ವಾರಗಳ ಗರ್ಭಾವಸ್ಥೆಯ ಅವಧಿಯಲ್ಲಿ ಮರಣ ಹೊಂದಿದ ಜನನದ ಪ್ರಮಾಣವನ್ನು 1000ಕ್ಕೆ ಇಳಿಸುವ ಗುರಿಯನ್ನು ಜಾಗತಿಕ ನವಜಾತ ಕ್ರಿಯಾ ಯೋಜನೆಯು ಹೊಂದಿದೆ.

    ಭಾರತದಲ್ಲಿ ಭ್ರೂಣ ಮರಣಕ್ಕೆ ಕಾರಣವೇನು?
    ಮೂಲ ಕಾರಣ ತಾಯಿಯ ಜೀವನ ಶೈಲಿ, ಅಪೌಷ್ಟಿಕತೆ, ಅನುವಂಶೀಯತೆ ಎನ್ನುವುದು ಮೂಲ ಕಾರಣಗಳಾಗಿ ಪರಿಣಮಿಸುತ್ತವೆ. 20% ರಷ್ಟು ಭ್ರೂಣ ಮರಣವು ಅನುವಂಶೀಯಾಗಿ ಹಾಗೂ 13% ನಷ್ಟು ಅಸಮರ್ಪಕ ಭ್ರೂಣದ ಬೆಳವಣಿಗೆಯಿಂದ ಹೊಂದುತ್ತದೆ. ಇನ್ನೂ ಕೆಲವು ಗ್ರಾಮೀಣ ವಸತಿ ಸ್ಥಿತಿ, ಕಡಿಮೆ ಸಾಮಾಜಿಕ-ಆರ್ಥಿಕ ಸ್ತರಗಳು ಮತ್ತು ಪ್ರಸವಪೂರ್ವ ಆರೈಕೆಯ ಕಳಪೆಯಿಂದಾಗಿ ಮರಣ ಹೊಂದುತ್ತವೆ.

    ಇನ್ನೂ ಇದರಿಂದ ತಾಯಿಯ ಮೇಲೆ ಪರಿಣಾಮ ಬೀರುವುದಲ್ಲದೇ, ಖಿನ್ನತೆ, ಆತಂಕ ಹಾಗೂ ಮಾನಸಿಕ ರೋಗಗಳಿಂದ ಬಳಲುತ್ತಾರೆ. ಅವರ ಪಾಲುದಾರರು ಹೆಚ್ಚಿನ ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ರೋಗಲಕ್ಷಣಗಳಿಂದ ಬಳಲುತ್ತಾರೆ.

    ಭ್ರೂಣ ಮರಣವು ಮಹಿಳೆಯ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಮನಾರ್ಹವಾದ ದೀರ್ಘಕಾಲೀನ ಪರಿಣಾಮವನ್ನು ಬೀರುತ್ತದೆ. ಇನ್ನೊಂದು ಹೆರಿಗೆಯ ಸಂದರ್ಭದಲ್ಲಿ ಅಪಾಯದ ಪರಿಣಾಮ ಸುಮಾರು ಐದು ಪಟ್ಟು ಹೆಚ್ಚು ಹೊಂದಿರುತ್ತಾರೆ.

    ಭ್ರೂಣ ಹತ್ಯೆಯನ್ನು ತಡೆಯುವುದು ಹೇಗೆ?
    ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೆರಿಗೆಗಳ ಸಾಂಕ್ರಾಮಿಕ ರೋಗಶಾಸ್ತ್ರ, ರೋಗನಿರ್ಣಯ ಮತ್ತು ತಡೆಗಟ್ಟುವಿಕೆ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿನ ಸವಾಲುಗಳನ್ನು ಎತ್ತಿಹಿಡಿಯುತ್ತಿದೆ. ಈ ಮೂಲಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

    ವೈದ್ಯಕೀಯ ತಜ್ಞರು ಪೆರಿಕಾನ್ಸೆಪ್ಷನಲ್ ಫೋಲಿಕ್ ಆಸಿಡ್ ಪೂರೈಕೆ, ಸಿಫಿಲಿಸ್ ಮತ್ತು ಮಲೇರಿಯಾದಂತಹ ಸೋಂಕುಗಳ ಆರಂಭಿಕ ಪತ್ತೆ, ಮಧುಮೇಹ ನಿರ್ವಹಣೆ ಮತ್ತು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಅಸ್ವಸ್ಥತೆಗಳ ಪತ್ತೆ ಹಾಗೂ ಪೌಷ್ಟಿಕಾಂಶ ಆಹಾರ ಮೂಲಕ ತಡೆಗಟ್ಟುವ ಕ್ರಮಗಳನ್ನು ಸೂಚಿಸುತ್ತದೆ.

  • ಸುಳ್ಳು ಸುದ್ದಿಗೆ ಬ್ರೇಕ್ ಹಾಕಲು ಮುಂದಾದ ವಾಟ್ಸಪ್

    ಸುಳ್ಳು ಸುದ್ದಿಗೆ ಬ್ರೇಕ್ ಹಾಕಲು ಮುಂದಾದ ವಾಟ್ಸಪ್

    – ದಿನಕ್ಕೆ 5 ಮೆಸೇಜ್ ಮಾತ್ರ ಫಾರ್ವರ್ಡ್

    ನವದೆಹಲಿ: ಸುಳ್ಳು ಸುದ್ದಿ ಹಬ್ಬುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ವಾಟ್ಸಪ್ ತನ್ನ ವಾಟ್ಸಪ್ ಆ್ಯಪ್ ಗಳಲ್ಲಿ ಬದಲಾವಣೆಯನ್ನು ತರಲು ಮುಂದಾಗಿದೆ.

    ಇನ್ನು ಮುಂದೆ ವಾಟ್ಸಪ್ ನಲ್ಲಿ ಬಳಕೆದಾರರು ಕೇವಲ 5 ಮಂದಿಗೆ ಫಾರ್ವಡ್ ಮೇಸೆಜ್ ಮಾಡಲು ಮಾತ್ರವೇ ಸಾಧ್ಯವಾಗುತ್ತದೆ. ಅಲ್ಲದೇ ವಾಟ್ಸಪ್ ಆ್ಯಪ್ ನಲ್ಲಿರುವ ಕ್ವಿಕ್ ಫಾರ್ವರ್ಡ್ ಆಯ್ಕೆಯನ್ನು ತೆಗೆದುಹಾಕಿರುವುದಾಗಿ ವಾಟ್ಸಪ್ ತಿಳಿಸಿದೆ.

    ಈ ಕುರಿತು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ವಾಟ್ಸಪ್, ಏಕ ಏಕಕಾಲದಲ್ಲಿ ಅನೇಕ ಮಂದಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಅನುವಾಗುವಂತೆ ಫೀಚರ್ ಅನ್ನು ಕೆಲ ವರ್ಷಗಳ ಹಿಂದೆ ಜಾರಿಗೊಳಿಸಿದ್ದೆವು. ಆದರೆ ಈಗ ಫಾರ್ವರ್ಡ್ ಸಂದೇಶಗಳನ್ನು ಮಿತಿಗೊಳಿಸಲು ನಾವು ನಿರ್ಧಾರ ಕೈಗೊಂಡಿದ್ದೇವೆ. ಇದನ್ನು ಪರೀಕ್ಷಾರ್ಥವಾಗಿ ಭಾರತದಲ್ಲಿರುವ ಬಳಕೆದಾರರು ಯಾವುದೇ ದೇಶಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫಾರ್ವರ್ಡ್ ಮಾಡಲಾಗುತ್ತಿದ್ದ ಫೋಟೋಗಳು, ವಿಡಿಯೋಗಳು ಹಾಗೂ ಸಂದೇಶಗಳಿಗೆ ತಡೆಹಿಡಿಯಲಾಗಿದೆ. ಸದ್ಯಕ್ಕೆ ಈ ಹೊಸ ಮಿತಿಗೆ ಯಾವ ಪ್ರತಿಕ್ರಿಯೆ ಸಿಗಲಿದೆ ಎಂದು ನೋಡುತ್ತೇವೆ. ಹಾಗೂ ಖಾಸಗಿತನ ಕುರಿತು ಸಾಕಷ್ಟು ಕಾಳಜಿ ವಹಿಸಿರುವುದಾಗಿ ಸಂಸ್ಥೆ ತಿಳಿಸಿದೆ.

    ಇತ್ತೀಚೆಗೆ ದೇಶದಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣಗಳಿಂದ ಹತ್ತಾರು ಅಮಾಯಕರು ಸಾವನ್ನಪ್ಪಿದ್ದರು. ಅಲ್ಲದೇ ದೇಶಾದ್ಯಂತ ಕಲ್ಲುತೂರಾಟ, ಗುಂಪು ಘರ್ಷಣೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶಗಳೇ ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ಗಂಭೀರ ಆಪಾದನೇ ಮಾಡಿತ್ತು. ಈ ಕುರಿತು ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ಸುಳ್ಳು ಸುದ್ದಿಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಅಲ್ಲದೇ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳು ಕಂಡು ಕಾಣದಂತಿದ್ದರೆ, ಅಂತಹರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸಪ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.