Tag: pressmeet

  • ಕುಮಾರಸ್ವಾಮಿ ಸರ್ಕಾರಕ್ಕೆ ಅಂತಿಮ ಘಂಟೆ ಬಾರಿಸಲು ಸಿದ್ದು ಯುರೋಪ್ ಪ್ರವಾಸ: ಶೆಟ್ಟರ್

    ಕುಮಾರಸ್ವಾಮಿ ಸರ್ಕಾರಕ್ಕೆ ಅಂತಿಮ ಘಂಟೆ ಬಾರಿಸಲು ಸಿದ್ದು ಯುರೋಪ್ ಪ್ರವಾಸ: ಶೆಟ್ಟರ್

    ಕಲಬುರಗಿ: ಹೈಕಮಾಂಡ್ ಒತ್ತಡಕ್ಕೆ ಮಣಿದು ಕಾಂಗ್ರೆಸ್-ಜೆಡಿಎಸ್ ಮದುವೆಯಾಗಿದೆ. ಈಗಾಗಲೇ ಪಕ್ಷಗಳ ನಡುವೆ ಜಗಳ ಶುರುವಾಗಿದ್ದು, ಸಿದ್ದರಾಮಯ್ಯ ಯುರೋಪ್ ದೇಶದ ಪ್ರವಾಸದ ಬಳಿಕ ವಿಚ್ಛೇದನ ಆಗಲಿದೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

    ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಕುಮಾರಸ್ವಾಮಿ ಸರ್ಕಾರದ ಅಂತಿಮ ಘಂಟೆ ಬಾರಿಸಲು ಸಿದ್ದು ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಜೊತೆ ಕಂದಾಯ ಸಚಿವರಾದ ಆರ್ ವಿ ದೇಶಪಾಂಡೆ, ಕೆಜೆ ಜಾರ್ಜ್ ಸೇರಿ 30-40 ಶಾಸಕರು ಹೊರಟಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಶಾಂತಿವನಕ್ಕೆ ಹೋಗಿ ಅಶಾಂತಿ ಸೃಷ್ಟಿಸಿದ್ದರು. ಈಗ ನಡೆಯುತ್ತಿರುವುದು ಆಪರೇಶನ್ ಕಮಲ ಅಲ್ಲ ಆಪರೇಶನ್ ಸಿದ್ದರಾಮಯ್ಯ. ಕೊಡಗು ಜಿಲ್ಲೆಯ ಪ್ರವಾಹ, ಉತ್ತರ ಕರ್ನಾಟಕದಲ್ಲಿನ ಬರಗಾಲದ ನಡುವೆಯೂ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಅವರ ಜೊತೆ ವಿದೇಶ ಯಾತ್ರೆ ಕೈಗೊಂಡಿದ್ದಾರೆ ಅಂತ ಕಿಡಿಕಾರಿದರು.

    ಇದೇ ವೇಳೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದು ಅವರು, ರಾಹುಲ್ ಗಾಂಧಿ ಒಬ್ಬ ಇಮ್ ಮೆಚ್ಯೂರ್ಡ್ ಲೀಡರ್. ವಿದೇಶದಲ್ಲಿ ಅವರ ಹೇಳಿಕೆ ಮಾತುಗಳನ್ನು ಮಾತಾಡೋದು ನೋಡಿದರೆ ನಮಗೆ ಅವಮಾನವಾಗುತ್ತದೆ. ಆರ್‍ಎಸ್‍ಎಸ್ ಬಗ್ಗೆ ಮಾತಾಡೋಕೆ ಅವರಿಗೇನು ಹಕ್ಕಿದೆ. ಭಾರತೀಯ ಸಂಸ್ಕೃತಿ ತಿಳಿದುಕೊಂಡಿದ್ದೀರಾ? ಏನೂ ಇಲ್ದೆ ಪ್ರಚಾರದ ಸಲುವಾಗಿ ಟೀಕೆ ಮಾಡ್ತೀರಾ ಅಂತ ಪ್ರಶ್ನೆ ಮಾಡಿದರು. ಇದು ನಿಮ್ಮ ನಾಶಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂತ್ರಸ್ತರಿಗೆ ತಾತ್ಕಾಲಿಕ 3,500 ರೂ. ಪರಿಹಾರ: 2 ಸಾವಿರ ಅಲ್ಯುಮಿನಿಯಮ್ ಶೆಡ್ ನಿರ್ಮಾಣ

    ಸಂತ್ರಸ್ತರಿಗೆ ತಾತ್ಕಾಲಿಕ 3,500 ರೂ. ಪರಿಹಾರ: 2 ಸಾವಿರ ಅಲ್ಯುಮಿನಿಯಮ್ ಶೆಡ್ ನಿರ್ಮಾಣ

    ಬೆಂಗಳೂರು: ಕೊಡಗು ಪ್ರವಾಹ ಪರಿಸ್ಥಿತಿ ಕುರಿತು ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಎಲ್ಲಾ ಸಂತ್ರಸ್ತರಿಗೂ ಹೊಸ ಜೀವನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದ್ದಾರೆ.

    ನೆರೆ ಪರಿಹಾರ ಕುರಿತು ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಸಿಎಂ, ಅತಿಯಾದ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಅನಾಹುತವಾಗಿದ್ದು, ಸರ್ಕಾರ ತಕ್ಷಣ ಸ್ಪಂದನೆ ಮಾಡಿದೆ. ಇದರಲ್ಲಿ ಯಾವುದೇ ಲೋಪ ಆಗಿಲ್ಲ. ಕಳೆದ ತಿಂಗಳು ಕೊಡಗಿಗೆ ಭೇಟಿ ನೀಡಿದ್ದ ವೇಳೆಯೂ ಮೂಲಭೂತ ಸೌಲಭ್ಯ ಕಲ್ಪಿಸಲು 100 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿತ್ತು. ಆಗಸ್ಟ್ 13 ಹಾಗೂ 14ರ ಬಳಿಕ ಕೊಡಗು ಜಿಲ್ಲೆಯಲ್ಲಿ ಅನೇಕ ಕಡೆ ಗುಡ್ಡ ಕುಸಿತ ಪ್ರಾರಂಭವಾಗಿತ್ತು. ಸತಕ್ಷಣದಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠ ಅಧಿಕಾರಿಗಳು ಶ್ರಮಪಟ್ಟು ಕಾರ್ಯನಿರ್ವಹಿಸಿದ್ದಾರೆ ಎಂದರು.

    ಸದ್ಯ ಕಾರ್ಯಾಚರಣೆಯಲ್ಲಿ 1,725 ಕ್ಕೂ ಹೆಚ್ಚಿನ ರಕ್ಷಣಾ ಸಿಬ್ಬಂದಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಭೂಸೇನೆ, ವಾಯುಪಡೆ, ರಾಷ್ಟ್ರೀಯ ವಿಪತ್ತು ಪಡೆ, ಎನ್‍ಸಿಸಿ ಸೇರಿದಂತೆ ವಿಶೇಷ ಪಡೆಗಳು ಕೆಲಸ ಮಾಡುತ್ತಿವೆ. ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ವಿಶೇಷವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ಪುನರ್ವಸತಿ ಕೇಂದ್ರ ನಿರ್ವಹಣೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

    ಇದುವರೆಗೂ ರಾಜ್ಯದಲ್ಲಿ ಮಳೆಯಿಂದ 152 ಜನ ಮೃತರಾಗಿದ್ದಾರೆ. ಇದರಲ್ಲಿ ಕೊಡಗಿನಲ್ಲಿ ಕೇವಲ 7 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ವರದಿ ಬಂದಿದೆ. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯ ಉಸ್ತುವರಿ ಸಚಿವರು, ಡಿಸಿಎಂ ಸೇರಿದಂತೆ ಬಿಬಿಎಂಪಿ ಪೌರ ಕಾರ್ಮಿಕರು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಇಂತಹ ಭೂ ಕುಸಿತ ಪ್ರಕರಣ ಹೆಚ್ಚಾಗಿದ್ದು, ಅಲ್ಲಿನ ತಜ್ಞರ ಜೊತೆ ಮಾತನಾಡಿ ಇಬ್ಬರು ತಜ್ಞರನ್ನು ಹಿಮಾಚಲ ಪ್ರದೇಶದಿಂದ ಕರೆಯಿಸಿಕೊಳ್ಳಲಾಗಿದೆ. ಅಲ್ಲದೇ ಹೈದ್ರಾಬಾದಿನ ಭೂ ವಿಜ್ಞಾನಿಗಳನ್ನು ಕರೆಯಲಾಗಿದೆ. ಭೂಕಂಪದಂತಹ ಯಾವುದೇ ಸುದ್ದಿಗೆ ಜನರು ಅಂತಕ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜೊತೆಗಿದೆ ಎಂದರು.

    ಇದುವರೆಗೂ ಕೊಡಗಿನಲ್ಲಿ 845 ಮನೆ ನಾಶವಾಗಿದ್ದು, 773 ಮನೆಗಳು ಭಾಗಶಃ ಹಾನಿಯಾಗಿದೆ. 123 ಕಿಲೋಮೀಟರ್ ರಸ್ತೆ ಹಾನಿಯಾಗಿದೆ. 58 ಸೇತುವೆ, 3,800 ವಿದ್ಯುತ್ ಕಂಬ ಹಾನಿಯಾಗಿದೆ. ಅದಷ್ಟು ಬೇಗ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಕೊಡಗಿನಲ್ಲಿ 41 ಪರಿಹಾರ ಕೇಂದ್ರ, ದಕ್ಷಿಣ ಕನ್ನಡದಲ್ಲಿ 9 ಕೇಂದ್ರ ಸ್ಥಾಪನೆ ಮಾಡಿ 6,620 ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶಯ ನೀಡಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಶೌಚಾಲಯ ಕೊರತೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ನಿರಾಶ್ರಿತರಿಗೆ ನರೇಗಾ ಯೋಜನೆ ಅಡಿ ಕೆಲಸ ನೀಡಲು ಸೂಚನೆ ನೀಡಲಾಗಿದ್ದು, 2 ಸಾವಿರ ಅಲ್ಯುಮಿನಿಯಂ ಶೆಡ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ತಾತ್ಕಾಲಿಕ ಪರಿಹಾರವಾಗಿ ನೆರೆ ಸಂತ್ರಸ್ತರಿಗೆ 3,800 ಪರಿಹಾರ ಹಣ ಹಾಗೂ ಆಹಾರ ಪದಾರ್ಥ ನೀಡಲಾಗುತ್ತದೆ. ನಾಳೆಯಿಂದ ಎಲ್ಲಾ ಕೆಲಸ ಆರಂಭವಾಗುತ್ತದೆ. ಶಾಶ್ವತ ಪರಿಹಾರ ನೀಡಲು ಎಷ್ಟೇ ಹಣ ವೆಚ್ಚವಾದರು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಅವಧಿಯಲ್ಲಿ ಆರಂಭಿಸಲಾದ ಕೆಲ್ಸಗಳನ್ನು ಪೂರ್ಣಗೊಳಿಸಿ: ಸಿಎಂಗೆ ರಾಯರೆಡ್ಡಿ ಪತ್ರ

    ನನ್ನ ಅವಧಿಯಲ್ಲಿ ಆರಂಭಿಸಲಾದ ಕೆಲ್ಸಗಳನ್ನು ಪೂರ್ಣಗೊಳಿಸಿ: ಸಿಎಂಗೆ ರಾಯರೆಡ್ಡಿ ಪತ್ರ

    ಬೆಂಗಳೂರು: ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ನನ್ನ ಅವಧಿಯಲ್ಲಿ ಮಾಡಲಾದ ಶೈಕ್ಷಣಿಕ ಕೆಲಸಗಳನ್ನ ಪೂರ್ಣ ಮಾಡುವಂತೆ ಪತ್ರವನ್ನು ಬರೆದಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕಾರಿಗಳಿಂದ ಕೂಡಲೇ ನಿಂತಿರುವ ಕೆಲಸ ಪ್ರಾರಂಭ ಮಾಡಿಸಬೇಕು. ಸಚಿವ ಜಿಟಿ ದೇವೇಗೌಡರಿಗೂ ಈ ಬಗ್ಗೆ ಪತ್ರ ಬರೆದು ಮಾತನಾಡುತ್ತೇನೆ. ಈ ಎಲ್ಲಾ ಕೆಲಸಗಳು ವಿದ್ಯಾರ್ಥಿಗಳ ಪರವಾಗಿದೆ. ಈ ಕೆಲಸಗಳನ್ನ ಮುಂದುವರಿಸಿದರೆ ಕುಮಾರಸ್ವಾಮಿ ಅವರಿಗೆ ಹೆಸರು ಬರುತ್ತೆ. ಕೂಡಲೇ ಕೆಲಸಗಳನ್ನ ಮುಕ್ತಾಯ ಮಾಡಬೇಕು ಎಂದು ಹೇಳಿದರು.

    ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯ ಬದಲಾವಣೆ ವಿಚಾರ ಕುರಿತು ಅಂತಹ ಕೆಲಸ ಜಿಟಿ ದೇವೇಗೌಡರು ಮಾಡಬಾರದಿತ್ತು. ಈ ಬಗ್ಗೆ ಸಿದ್ದರಾಮಯ್ಯ ಮಾತಾಡೋದಾಗಿ ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಅರ್ಹರನ್ನ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆದ್ರು ಅನರ್ಹರನ್ನ ನೇಮಕ ಮಾಡಿದ್ದಾರೆ ಅಂತ ಆರೋಪ ಮಾಡಲಾಗುತ್ತಿದೆ. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ದೇವೇಗೌಡ ವಿರುದ್ಧ ರಾಯರೆಡ್ಡಿ ಕಿಡಿಕಾರಿದರು.

    ಉನ್ನತ ಶಿಕ್ಷಣ ಸಚಿವರು ಒಂದು ಡಿಗ್ರಿ ಮಾಡಿಕೊಳ್ಳಲಿ ನಾನೇ ಅವರಿಗೆ ಸಲಹೆ ನೀಡುತ್ತೇನೆ. ಕೆಎಸ್ ಓಯುಗೆ ಮರು ಮಾನ್ಯತೆ ಸಿಕ್ಕಿದೆ. ನಿಮ್ಮ ಊರಲ್ಲೆ ಕೋರ್ಸ್ ಮಾಡಿ ಅಂತ ನಾನೇ ಸಲಹೆ ಕೊಡ್ತೀನಿ. ಎಂಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದ್ರೆ ಒಳ್ಳೆಯದು. ಬರೋ ಸ್ವಲ್ಪ ಇಂಗ್ಲೀಷ್ ನಲ್ಲಿ ಯಾಕೆ ಮಾತಾಡಬೇಕು. ಸಚಿವರು ಕನ್ನಡದಲ್ಲೆ ಮಾತಾಡಿದ್ರೆ ತಪ್ಪಿಲ್ಲ. ಎಕ್ಸಾಂ ಬರೆದು ಡಿಗ್ರಿ ಮಾಡಿಕೊಂಡ್ರೆ ದೇವೇಗೌಡರಿಗೆ ಒಳ್ಳೆಯದು ಎಂದು ಉನ್ನತ ಶಿಕ್ಷಣ ಸಚಿವರಿಗೆ ರಾಯರೆಡ್ಡಿ ಟಾಂಗ್ ನೀಡಿದರು.

    ಸಿಎಂಗೆ ಬರೆದ ಪತ್ರದ 17 ಅಂಶದ ಕಾರ್ಯಕ್ರಮಗಳು
    * ಸಮಗ್ರ ವಿಶ್ವವಿದ್ಯಾಲಯ ಕಾಯ್ದೆ ರಾಜ್ಯಪಾಲರ ಅಂಕಿತ ಪಡೆಯಲು ಸರ್ಕಾರ ಮುಂದಾಗಬೇಕು.
    * ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ನಿರ್ದೇಶಕರು, ಪ್ರಾಧ್ಯಾಪಕರನ್ನ ನೇಮಕ ಮಾಡಲು ಕ್ರಮವಹಿಸಬೇಕು.
    * ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ಹಾಸ್ಟಲ್ ನಿರ್ಮಾಣಕ್ಕೆ 50 ಕೋಟಿ ಬಿಡುಗಡೆ ಮಾಡಬೇಕು.

    * ರಾಯಚೂರು ಹೊಸ ವಿಶ್ವವಿದ್ಯಾಲಯ, ಮಂಡ್ಯದಲ್ಲಿ ಯೂನಿಟರಿ ವಿಶ್ವವಿದ್ಯಾಲಯ, ಮಹಾರಾಣಿ ಕಾಲೇಜ್ ಕ್ಲಸ್ಟರ್ ವಿವಿ ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ 55 ಕೋಟಿ ರೂ. ಅನುದಾನ ನೀಡಿದೆ. ಇದಕ್ಕೆ ರಾಜ್ಯಪಾಲರಿಂದ ಅನುಮೋದನೆ ನೀಡಿಸಬೇಕು.
    * ಬೆಳಗಾವಿ ರಾಣಿ ಚೆನ್ನಮ್ಮ ವಿವಿ, ತುಮಕೂರು ವಿವಿ, ಮೈಸೂರು ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಮ್ಮ ಸಂಪುಟ ಅನುದಾನ ನೀಡಿತ್ತು. ವಿವಿಗಳ ಕಟ್ಟಡ ನಿರ್ಮಾಣ ಕೆಲಸ ಪ್ರಾರಂಭ ಮಾಡಬೇಕು.
    * ಧಾರವಾಡ ಕರ್ನಾಟಕ ವಿವಿಯ ಅಧೀನದ ಕರ್ನಾಟಕ ಕಾಲೇಜು ಶತಮಾನೋತ್ಸವಕ್ಕೆ ಸಂಪುಟ ಹಣ ಬಿಡುಗಡೆ ಮಾಡಿತ್ತು. ಆದ್ರೆ ಕೆಲಸ ಪ್ರಾರಂಭವಾಗಿಲ್ಲ. ಕೂಡಲೇ ಕೆಲಸ ಪ್ರಾರಂಭ ಮಾಡಬೇಕು.

    * ಕೆಎಸ್‍ಓಯು ಗೆ ಮರು ಮಾನ್ಯತೆ ಸಿಕ್ಕಿದೆ. ಹಿಂದೆ ಹಲವು ಜಿಲ್ಲೆಯಲ್ಲಿ ಇದ್ದ ಪ್ರಾದೇಶಿಕ ಕಚೇರಿ ಕಟ್ಟಡಗಳನ್ನ ಆಯಾ ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯಗಳಿಗೆ ಹಸ್ತಾಂತರ ಮಾಡಬೇಕು.
    * ಬೆಂಗಳೂರು ಉತ್ತರ ವಿವಿ ಉಳಿಕೆ ಜಮೀನು ಕೊಡಿಸುವ ಕೆಲಸ ಸರ್ಕಾರ ಮಾಡಬೇಕು.
    * ವಿಟಿಯು ಐಟಿ ಸೀಜ್ ಮಾಡಿದ ಹಣ ವಾಪಸ್ ಬಂದಿದೆ. ಇದನ್ನ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು.

    * ಕೆಇಎಯ 350 ಕೋಟಿ ಹಣ ಇದೆ. ಇದನ್ನ ಮೆಡಿಕಲ್, ಎಂಜಿನಿಯರ್ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳಿಗೆ ಬಳಸಿಕೊಳ್ಳಲು ಕ್ರಮವಹಿಸಬೇಕು.
    * ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡಲು 250 ಕೋಟಿ ಅನುದಾನ ನೀಡಲಾಗಿತ್ತು. ಆದ್ರೆ ಕೆಲಸ ಕಾರಣಗಳಿಂದ ಲ್ಯಾಪ್ ಟಾಪ್ ವಿತರಣೆ ಆಗಿಲ್ಲ. ಕೂಡಲೇ ಟೆಂಡರ್ ಕರೆದು ಲ್ಯಾಪ್ ಟಾಪ್ ಹಂಚಿಕೆ ಮಾಡಬೇಕು.
    * 310 ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರು ಇಲ್ಲ. ನಾವು ಯುಜಿಸಿ ನಿಯಮ ಬದಲಾವಣೆಗೆ ಮುಂದಾಗಿದ್ದೆವು ಆದರೆ ಅದು ಆಗಲಿಲ್ಲ. ಕೂಡಲೇ ಪ್ರಾಂಶುಪಾಲರ ನೇಮಕ ಸರ್ಕಾರ ಮಾಡಬೇಕು.

    * ಪದವಿ ಕಾಲೇಜುಗಳ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪ್ರಕ್ರಿಯೆ ಮಾಡಬೇಕು.
    * ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ಆದಷ್ಟು ಬೇಗ ತುಂಬಬೇಕು.
    * ಸಂಸ್ಕೃತ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಬೇಕು.
    * ಎಸ್ ಸಿಪಿ ಯೋಜನೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಹಣ ನೀಡಲಾಗಿದೆ. ಈ ಕೆಲಸ ಪ್ರಕ್ರಿಯೆ ಮುಂದುವರೆಸಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮನೆಗೆ ಮಾರಿ ಊರಿಗೆ ಉಪಕಾರಿ: ಈಶ್ವರನಂದ ಸ್ವಾಮೀಜಿ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಸಿಎಂ!

    ಮನೆಗೆ ಮಾರಿ ಊರಿಗೆ ಉಪಕಾರಿ: ಈಶ್ವರನಂದ ಸ್ವಾಮೀಜಿ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಸಿಎಂ!

    ಬಾಗಲಕೋಟೆ: ತನ್ನ ವಿರುದ್ಧ ಕನಕ ಪೀಠದ ಗುರುಗಳು ನೀಡಿದ ಹೇಳಿಕೆಗೆ ಇಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

    ಕನಕ ಪೀಠ ಗುರುಗಳಾದ ಈಶ್ವರನಂದ ಸ್ವಾಮೀಜಿಯವರು, ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸುವುದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ. ಅಲ್ಲದೇ ಸಮುದಾಯದ ಯಾವೊಬ್ಬ ಶಾಸಕರ ಪರವು ದನಿ ಎತ್ತಲಿಲ್ಲ. ಸಿದ್ದರಾಮಯ್ಯನವರು ಮನೆಗೆ ಮಾರಿ ಊರಿಗೆ ಉಪಕಾರಿ ಎಂದು ಹೇಳಿಕೆ ನೀಡಿದ್ದರು.

    ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಪ್ರತಿಕ್ರಿಯಿಸಿ, ಸ್ವಾಮೀಜಿಯವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ ನನ್ನ ತಂದೆ ಯಾವಾಗಲೂ ಅದೇ ರೀತಿ ಹೇಳುತ್ತಿದ್ದರು ಎಂದು ನೆನಪಿಸಿಕೊಂಡು, ಸ್ವಾಮೀಜಿಯವರ ಹೇಳಿಕೆಗೆ ನಿರ್ಲಕ್ಷದ ಉತ್ತರವನ್ನು ನೀಡಿದ್ದಾರೆ.

    ಕಾಂಗ್ರೆಸ್ ಅತೃಪ್ತ ಶಾಸಕರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಮಳೆ ನಿಂತ ಮೇಲೆ ಮರದ ಹನಿ ಬೀಳುವ ಹಾಗೇ ಅಲ್ಲಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಎಲ್ಲಾ ಅತೃಪ್ತ ಶಾಸಕರ ಜೊತೆ ಸಂಪರ್ಕದಲ್ಲಿ ಇದ್ದೇನೆ. ಯಾವುದೇ ತೊಂದರೆ ಇಲ್ಲ, ಎಲ್ಲಾ ಶಾಸಕರ ಅಸಮಾಧಾನ ಶಮನವಾಗಿದೆ ಎಂದು ಅತೃಪ್ತ ಶಾಸಕರ ಬಗ್ಗೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

    ಬಾದಾಮಿ ಪ್ರವಾಸ ಕುರಿತು ಜಿ.ಪರಮೇಶ್ವರ್ ನೀಡಿದ ವ್ಯಂಗ್ಯ ಹೇಳಿಕೆ ಉತ್ತರಿಸದೆ, ನೋ ಕಮೆಂಟ್ಸ್ ಎಂದು ಹೇಳಿ, ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಸಲ್ಲಿಸಿದ್ದ ಪ್ರಸ್ಥಾವನೆಯನ್ನು ಕೇಂದ್ರ ಸರ್ಕಾರ ಹಿಂತಿರುಗಿಸಿದ್ದರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ. ಈ ಕುರಿತು ಸರ್ಕಾರವೇ ಮುಂದಿನ ಕ್ರಮ ಕೈಗೊಳ್ಳುತ್ತದೆ. ಸಮನ್ವಯ ಸಮಿತಿಯಲ್ಲಿ ಭಾಗಿಯಾಗಿ ಚರ್ಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

  • ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

    ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

    ಮೈಸೂರು: ಯದುವಂಶದ ಪ್ರಮೋದಾದೇವಿ ಒಡೆಯರ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಪ್ರಮೋದಾದೇವಿ ಒಡೆಯರ್ ಅವರೇ ಇಂದು ತೆರೆ ಎಳೆದಿದ್ದಾರೆ.

    ಮೈಸೂರಿನ ಅರಮನೆಯಲ್ಲಿ ಎಂದು ಸುದ್ದಿಗೋಷ್ಠಿ ನಡೆಸಿ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದರು. ನನಗೆ ರಾಜಕಾರಣ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮನ್ನು ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷ ಇಲ್ಲ. ಈ ಹಿಂದೆ ತುಂಬಾ ಜನ ರಾಜಕಾರಣಿಗಳು ಅರಮನೆಗೆ ಬಂದಿದ್ದಾರೆ. ಆಗ ಮಾಧ್ಯಮಗಳು ಹೆಚ್ಚು ಇರಲಿಲ್ಲ. ಇದೀಗ ಮಾಧ್ಯಮಗಳು ಹೆಚ್ಚಾಗಿದ್ದರಿಂದ ವಿಷಯ ದೊಡ್ಡದಾಗಿದೆ ಅಷ್ಟೇ ಎಂದು ಪ್ರಮೋದಾದೇವಿ ತಿಳಿಸಿದರು.

    ಅಮೀತ್ ಶಾ ಭೇಟಿ ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದರು. ಅವರು ರಾಜ್ಯಸಭಾ ಸ್ಥಾನದ ಆಫರ್ ಕೊಟ್ಟಿಲ್ಲ. ಹಾಗೇನಾದ್ದರು ಕೊಟ್ಟರೆ ತಕ್ಷಣ ನಿಮ್ಮನ್ನ ಕರೆದು ಹೇಳುತ್ತೇನೆ. ನನಗೆ ಖಂಡಿತವಾಗಲೂ ರಾಜಕೀಯ ಮತ್ತು ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಕೇವಲ ಜನರ ಪರವಾಗಿ ಕೆಲಸ ಮಾಡುತ್ತೇವೆ ಅಷ್ಟೇ ಎಂದು ಹೇಳಿದರು.

    ನನ್ನ ಮಗ ಯದುವೀರ್‍ಗೆ ರಾಜಕೀಯ ಇಷ್ಟವಿದ್ದರೆ ಹೋಗಬಹುದು. ಅವರು ಅದಕ್ಕೆ ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅವರಿಗೆ ಏನು ಇಷ್ಟ ಅದನ್ನು ಮಾಡಬಹುದು. ನನ್ನ ಸಮ್ಮತಿ ಕೇಳಿ ಅವರು ರಾಜಕೀಯಕ್ಕೆ ಬರಬೇಕಿಲ್ಲ. ಆದರೆ ಯದುವೀರ್ ತಮಗೆ ರಾಜಕೀಯ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರರೂ ಎಂದು ಕೂಡ ಸ್ಪಷ್ಟಪಡಿಸಿದರು.

    ಇದೇ ವೇಳೆ ಪ್ರಮೋದಾ ದೇವಿ ಒಡೆಯರ್ ನಾ ರಾಜಕೀಯಕ್ಕೆ ಬರಬೇಕಾ ಬೇಡವಾ ನೀವೇ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿ, ಈಗ ನಮ್ಮ ಕೆಲ ವಿಚಾರಗಳನ್ನು ಮಾಧ್ಯಮಗಳಲ್ಲೇ ತಿಳಿದುಕೊಳ್ಳುವಂತಾಗಿದೆ. ಹಾಗಾಗಿ ನೀವೇ ಹೇಳಿ ನಾ ರಾಜಕೀಯಕ್ಕೆ ಬರಬೇಕೇ? ಬೇಡವೇ ಎಂದು ಅವರು ಪತ್ರಕರ್ತರಿಗೆ ಪ್ರಶ್ನೆ ಮಾಡಿದರು.

  • ಬೆಂಗಳೂರು ಬಂದ್: ಬಿಜೆಪಿಗೆ ವಾಟಾಳ್ ನಾಗರಾಜ್ ಡೆಡ್‍ಲೈನ್

    ಬೆಂಗಳೂರು ಬಂದ್: ಬಿಜೆಪಿಗೆ ವಾಟಾಳ್ ನಾಗರಾಜ್ ಡೆಡ್‍ಲೈನ್

    ಬೆಂಗಳೂರು: ಮಹದಾಯಿ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಗೆ ಹರಿಸುವ ಭರವಸೆಯನ್ನು ನೀಡದೇ ಇದ್ದರೆ ಫೆ.4 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ರಾಜ್ಯ ಬಿಜೆಪಿಗೆ ಡೆಡ್‍ಲೈನ್ ನೀಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಜನವರಿ 25ರಂದು ಸ್ವಯಂ ಪ್ರೇರಿತವಾಗಿ ಕರ್ನಾಟಕ ಬಂದ್ ನಡೆಸಿದ್ದೇವೆ. ಇದಕ್ಕೆ ಯಾವ ಸರ್ಕಾರ ಕೂಡ ಬೆಂಬಲ ನೀಡಿರಲಿಲ್ಲ. ಆದರೆ ಬಿಜೆಪಿ ನಾಯಕರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ನಾಲಗೆ ಸರಿ ಇಲ್ಲ. ಹಾದಿಬೀದಿಯಲ್ಲಿ ಮಾತನಾಡುವುದನ್ನು ಬಿಟ್ಟು ಪ್ರಧಾನ ಮಂತ್ರಿ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಫೆ. 4ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ 3ನೇ ತಾರೀಖಿನ ಒಳಗಡೆ ಮಹದಾಯಿ ನೀರಿನ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಭರವಸೆ ಕೊಡಿಸಿ. ಇಲ್ಲದೇ ಇದ್ದರೆ 4ರಂದು ಬೆಂಗಳೂರು ಬಂದ್ ಮಾಡಬೇಕಾಗುತ್ತದೆ. ನಮಗೆ ಸ್ಪಷ್ಟವಾದ ಭರವಸೆ ಕೊಡಿಸಬೇಕು. ಶನಿವಾರ ಮಧ್ಯಾಹ್ನದ ತನಕ ಕಾಯುತ್ತೇವೆ. ಮಧ್ಯಾಹ್ನದ ಒಳಗಡೆ ಭರವಸೆ ಸಿಗದೇ ಹೋದರೆ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಡೆಡ್‍ಲೈನ್ ನೀಡಿದ್ದಾರೆ,

    ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುವಂತೆ ಮನವಿ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

  • ವೀಕೆಂಡ್ ನಲ್ಲಿ `ಕಿರಿಕ್ ಜೋಡಿ’ ಜಾಲಿ ಬೈಕ್ ರೈಡ್

    ವೀಕೆಂಡ್ ನಲ್ಲಿ `ಕಿರಿಕ್ ಜೋಡಿ’ ಜಾಲಿ ಬೈಕ್ ರೈಡ್

    ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ಬಳಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಐಶಾರಾಮಿ ಕಾರುಗಳಿರುತ್ತವೆ. ಕಾರ್ ಇದ್ದಾಗ ಬೈಕ್‍ ನಲ್ಲಿ ಸುತ್ತಾಟ ಮಾಡೋದು ತುಂಬಾ ಕಮ್ಮಿ. ಆದರೆ ಈ ವೀಕೆಂಡ್ ನಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಬೈಕ್‍ ನಲ್ಲಿ ಸ್ವಚ್ಛಂದವಾಗಿ ಬೆಂಗಳೂರಿನ ಬೀದಿಬೀದಿಗಳಲ್ಲಿ ಹಾರಾಡಿದೆ.

    ಸ್ಯಾಂಡಲ್ ವುಡ್‍ ನಲ್ಲಿ ಸದ್ಯಕ್ಕಂತೂ ಅಭಿಮಾನಿಗಳ ಹಾಟ್ ಫೆವರೇಟ್ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ. ಇವರು ಎಂಗೇಜ್ಡ್ ಕಪಲ್ ಎನ್ನುವುದು ಸೀಕ್ರೇಟ್ ಆಗಿ ಉಳಿದಿರೋ ವಿಷಯವಂತೂ ಅಲ್ಲ. ಹೀಗಾಗಿ ಸ್ಟಾರ್ ಜೋಡಿ ಈ ವೀಕೆಂಡ್ ನಲ್ಲಿ ಬೈಕ್ ರೈಡ್ ಮಾಡೋಕೆ ಮನಸ್ಸು ಮಾಡಿತ್ತು.

    ಭಾನುವಾರ ಶೂಟಿಂಗ್ ಗೆ ಗೇಟ್‍ಪಾಸ್ ಕೊಟ್ಟು `ಹಾರ್ಲೇ ಡೇವಿಡ್‍ಸನ್ ಬ್ರೇಕ್‍ ಔಟ್’ ಬೈಕ್ ಏರಿ ಔಟ್ ಹೋಗಿತ್ತು ಕಿರಿಕ್ ಜೋಡಿ. ಭಾನುವಾರ ಮಧ್ಯಾಹ್ನ ಬೆಂಗಳೂರಿನ ಬೆಸ್ಟ್ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿ ಬೀದಿ ಬೀದಿಗಳಲ್ಲಿ ಸಖತ್ ರೈಡ್ ಮಾಡಿದರು. ಅದೃಷ್ಟವಶಾತ್ ಇಬ್ಬರ ಮುಖ ಹೆಲ್ಮೆಟ್‍ ನಿಂದ ಮುಚ್ಚಿದ್ದೇ ಪುಣ್ಯ ಇಲ್ಲವಾದರೆ ರಸ್ತೆಯಲ್ಲೇ ಅಭಿಮಾನಿಗಳ ಸೆಲ್ಫಿಗಾಗಿ ಕಿರಿಕ್ ಮಾಡುತ್ತಿದ್ದರೋ ಏನೋ?

    ವೀಕೆಂಡ್ ನಲ್ಲಿ ಜಾಲಿ ರೈಡ್ ಹೋಗೋಕೆ ಕಾಯುತ್ತಿದ್ದ ಪ್ರೇಮಪಕ್ಷಿಗಳಿಗೆ ಸಿನಿಮಾ ಕೂಡ ಮುಖ್ಯ. ಈ ವಾರ ರಶ್ಮಿಕಾ ಮಂದಣ್ಣ ಅಭಿನಯದ ಅಂಜನಿಪುತ್ರ ಬಿಡುಗಡೆಯಾಗೋದಕ್ಕೆ ರೆಡಿಯಾಗಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಸ್ಟಾರ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿದ್ದ ದಿಢೀರ್ ಪತ್ರಿಕಾಗೋಷ್ಠಿಗೂ ರಶ್ಮಿಕಾ ಬರಲೇಬೇಕಿತ್ತು. ಹೀಗಾಗಿ ಸ್ಟಾರ್ ಹೊಟೇಲ್ ಗೂ ರಶ್ಮಿಕಾಗೆ ಭಾವೀ ಪತಿ ರಕ್ಷಿತ್ ಶೆಟ್ಟಿ ಬೈಕ್‍ ನಲ್ಲೇ ಡ್ರಾಪ್ ಮಾಡಿದರು.

    ಬೆಂಗಳೂರು ಎಂದರೆ ಹೆವೀ ಟ್ರಾಫಿಕ್. ಕಾರ್ ಏರಿ ಹೊರಟರಂತೂ ಇನ್ನೂ ಹೆಚ್ಚು ಟೈಂ ಬೇಕೇ ಬೇಕು. ಹೀಗಾಗೇ ಭಾನುವಾರವೊಂದೆ ಫ್ರೀ ಇರುವ ರಕ್ಷಿತ್- ರಶ್ಮಿಕಾ ತಾರಾ ಜೋಡಿ ಆಗಾಗ ಬೈಕ್‍ ನಲ್ಲೇ ರೈಡ್ ಹೋಗುತ್ತಾರಂತೆ. ಹೇಳಿ ಕೇಳಿ ರಕ್ಷಿತ್‍ ಗಂತೂ ಬೈಕ್ ಎಂದರೆ ಪ್ರೀತಿ. ಇನ್ನು ಹುಡುಗಿಯರಿಗಂತೂ ಬಿಡಿ ಬೈಕ್‍ ನಲ್ಲಿ ಸುತ್ತಾಡೋದರಲ್ಲಿ ಇರೋ ಖುಷಿನೇ ಬೇರೆ.

  • ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

    ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

    ಕಲಬುರಗಿ: ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪದೇ ಪದೇ ಪ್ರಧಾನಿ ಮೋದಿ ಚಹಾ ಮಾರುತ್ತಿದ್ದೆ ಎಂದು ಚುನಾವಣೆಯಲ್ಲಿ ಹೇಳುವ ಮೂಲಕ ಜನರ ಅನುಕಂಪಗಳಿಸಲು ಮುಂದಾಗುತ್ತಾರೆ. ನಾನು ಕೂಡ ಕೂಲಿ ಕಾರ್ಮಿಕನ ಮಗನಾಗಿದ್ದೆ. ಇದನ್ನೇ ಪದೇ ಪದೇ ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ: ನೀವು ಚಹಾ ಮಾರಾಟ ಮಾಡಿ, ದೇಶ ಮಾರಬೇಡಿ: ಕಾಂಗ್ರೆಸ್ಸಿಗೆ ಮೋದಿ ಟಾಂಗ್

    ನೋಟ್ ಬ್ಯಾನ್, ಜಿಎಸ್‍ಟಿಯಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ತವರು ರಾಜ್ಯದಲ್ಲಿ ಮೋದಿ ಗಾಳಿಯಿಲ್ಲ. ಗುಜರಾತ್‍ನಲ್ಲಿ ಸದ್ಯ ಕಾಂಗ್ರೆಸ್ ಪರ ವಾತಾವರಣವಿದ್ದು, ಅಲ್ಲಿನ ಜನ ಮೋದಿ ಮಾತಿಗೆ ಮರಳಾಗುವುದಿಲ್ಲ ಎಂದರು.

  • ಬಂಡಾಯ ಸುದ್ದಿಗೋಷ್ಠಿ ನಡೆಸಿ ಪಕ್ಷದ ನಾಯಕರ ವಿರುದ್ಧವೇ ತೊಡೆ ತಟ್ಟಿದ ಡಿ.ಕೆ.ಸುರೇಶ್

    ಬಂಡಾಯ ಸುದ್ದಿಗೋಷ್ಠಿ ನಡೆಸಿ ಪಕ್ಷದ ನಾಯಕರ ವಿರುದ್ಧವೇ ತೊಡೆ ತಟ್ಟಿದ ಡಿ.ಕೆ.ಸುರೇಶ್

    ಬೆಂಗಳೂರು: ನಮ್ಮ ನೆನಪೇ ಪಕ್ಷದ ನಾಯಕರಿಗೆ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಒಬ್ಬ ಸಂಸದನಿದ್ದೇನೆ ಎಂಬ ವಿಚಾರವನ್ನೇ ಮರೆತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಬೆಂಗಳೂರು ಬಿಬಿಎಂಪಿ ಮೇಯರ್ ಆಯ್ಕೆಯ ವಿಚಾರವಾಗಿ ಚರ್ಚೆ ನಡೆಸಲು ಕರೆದಿದ್ದ ಸಭೆಗೆ ತಮಗೇ ಆಹ್ವಾನ ನೀಡದಿರುವ ಕುರಿತು ಮಾತನಾಡಿದ ಸುರೇಶ್, ಈ ಸುದ್ದಿಗೋಷ್ಠಿಯನ್ನು ಬಂಡಾಯ ಪತ್ರಿಕಾಗೋಷ್ಠಿ ಅಂದರೂ ಯಾವುದೇ ತೊಂದರೆ ಇಲ್ಲ. ಬೆಂಗಳೂರು ಮೇಯರ್ ಚುನಾವಣೆ ಇದೇ ತಿಂಗಳ 26 ರಂದು ನಡೆಯಲಿದ್ದು, ಪ್ರಬಲ ನಾಯಕರೇ ಮೇಯರ್ ಆಗ್ತಾರೆ. ಆದರೆ ಬೆಂಗಳೂರು ವ್ಯಾಪ್ತಿಯಲ್ಲಿ ಹೊಸದಾಗಿ ಸೇರಿರುವ ಹಲವು ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ. ಸರ್ಕಾರ ಹಾಗೂ ಎಲ್ಲಾ ಮೇಯರ್‍ಗಳು ಈ ವಾರ್ಡ್‍ಗಳ ಅಭಿವೃದ್ಧಿಯನ್ನು ಮರೆತಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿಯೇ ಇಂತಹ ಹಲವು ವಾರ್ಡ್‍ಗಳಿವೆ ಎಂದು ಸರ್ಕಾರದ ನಿರ್ಲಕ್ಷದ ವಿರುದ್ಧ ಹಾರಿಯ್ದರು.

    ಮೇಯರ್ ಚುನಾವಣೆಯ ಬಗ್ಗೆ ನಮಗೇ ಜವಾಬ್ದಾರಿಯನ್ನು ವಹಿಸಿದರೆ ನಾವೇ ಸ್ವತಃ ಜೆಡಿಎಸ್ ನಾಯಕರೊಂದಿಗೆ ಮಾತಾನಾಡುತ್ತೇವೆ. ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಬೆಂಗಳೂರು ಹೊರ ವಲಯದ ಕಾರ್ಪೊರೇಟರ್ ಗಳಿಗೆ ಹುದ್ದೆಯನ್ನು ನೀಡಬೇಕು. ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ವೇಲು ನಾಯಕ್ ಹಾಗೂ ಅಂಜನಪ್ಪ ಇಬ್ಬರಲ್ಲಿ ಒಬ್ಬರನ್ನು ಮೇಯರ್ ಮಾಡಬೇಕು. ಈ ವಿಚಾರವಾಗಿ ಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನು ಒತ್ತಾಯ ಮಾಡುತ್ತೇವೆ ಎಂದರು.

    ನನ್ನ ಸಹೋದರ ಶಿವಕುಮಾರ್ ಸಂಪತ್ ರಾಜುಗೆ ಮೇಯರ್ ಆಗಲು ಬೆಂಬಲ ನೀಡಬಹುದು ಆದರೆ ನಾನು ನನ್ನ ಕ್ಷೇತ್ರದ ಕಾರ್ಪೊರೇಟರ್‍ಗಳಿಗೆ ಬೆಂಬಲ ನೀಡುತ್ತೇನೆ. ಅತ್ತರೆ ಹಾಲು ಕುಡಿಸುತ್ತಾರೆ ಎಂಬ ಮಾತಿದೆ. ಹಾಗೆಯೇ ನಾವಾಗೆ ಕೇಳದಿದ್ದರೆ ಅವರು ನಮ್ಮನ್ನು ಗಮನಿಸುವುದಿಲ್ಲ. ನನ್ನ ಸಹನೆ ಕಟ್ಟೆ ಒಡೆಯುತ್ತದೆ. ಮುಂದಿನ ದಿನಗಳಲ್ಲಿ ಅದು ದೊಡ್ಡದಾಗಬಹುದು ಎಂದು ಎಚ್ಚರಿಸಿದರು.

    ನನ್ನ ನಾಯಕರಾದ ಸಂಸದ ಡಿ.ಕೆ.ಸುರೇಶ್ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ಸುರೇಶ್ ಅವರ ಬೇಡಿಕೆ ನ್ಯಾಯಯುತವಾಗಿದೆ ಎಂದು ಶಾಸಕ ಮುನಿರತ್ನ ಹೇಳಿದರು.

  • ಎರಡು ಮೂರು ದಿನಗಳಲ್ಲಿ ಹಂತಕರ ಪತ್ತೆ ಹಚ್ಚಬಹುದು : ಎಚ್‍ಡಿಡಿ

    ಎರಡು ಮೂರು ದಿನಗಳಲ್ಲಿ ಹಂತಕರ ಪತ್ತೆ ಹಚ್ಚಬಹುದು : ಎಚ್‍ಡಿಡಿ

    ಬೆಂಗಳೂರು: ಸೂಕ್ತ ತನಿಖೆ ನಡೆಸಿ ಗೌರಿ ಅವರ ಹಂತಕರನ್ನು ಬಂಧಿಸಬೇಕು ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಪದ್ಮನಾಭನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ಮೂರು ದಿನಗಳಲ್ಲಿ ಹಂತಕರ ಪತ್ತೆ ಹಚ್ಚಬಹುದು ಎಂಬ ವಿಶ್ವಾಸವಿದೆ. ಗೌರಿ ಅವರು ತಮಗೆ ಜೀವ ಭಯ ಇದೆ. ರಕ್ಷಣೆ ಕೊಡಿ ಅಂತಾ ಕೇಳಲು ಗೃಹ ಸಚಿವರನ್ನು ಭೇಟಿ ಮಾಡಲು ಉದ್ದೇಶಿಸಿದ್ದರು. ಅಷ್ಟರಲ್ಲೇ ಈ ಘಟನೆ ನಡೆದು ಹೋಗಿದೆ ಎಂದು ಹೇಳಿದರು.

    ಈ ಪ್ರಕರಣವನ್ನು ಸಿಎಂ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆ ಸೂಕ್ತವಲ್ಲ ಎಂದು ವಿಶೇಷ ತನಿಖಾ ದಳದ(ಎಸ್‍ಐಟಿ) ತನಿಖೆಗೆ ವಹಿಸಿದ್ದಾರೆ. ಹಂತಕರ ಸುಳಿವು ಸಿಕ್ಕಿದೆ. ಆದಷ್ಟು ಶೀಘ್ರದಲ್ಲೇ ಹಂತಕರ ಬಂಧನ ಆಗುವ ವಿಶ್ವಾಸವಿದೆ ಎಂದು ದೇವೇಗೌಡ ತಿಳಿಸಿದರು.