Tag: Press Meet

  • ಕೊಟ್ಟ ಮಾತು ಉಳಿಸಿಕೊಂಡ ಮಾರ್ಕ್ ವಿಲಿಯಮ್ಸ್ – ಚಾಂಪಿಯನ್‍ಶಿಪ್ ಗೆದ್ದ ಬಳಿಕ ಬೆತ್ತಲೆ ಸುದ್ದಿಗೋಷ್ಠಿ

    ಕೊಟ್ಟ ಮಾತು ಉಳಿಸಿಕೊಂಡ ಮಾರ್ಕ್ ವಿಲಿಯಮ್ಸ್ – ಚಾಂಪಿಯನ್‍ಶಿಪ್ ಗೆದ್ದ ಬಳಿಕ ಬೆತ್ತಲೆ ಸುದ್ದಿಗೋಷ್ಠಿ

    ಶೇಫೀಲ್ಡ್: ವಿಶ್ವ ಸ್ನೂಕರ್ ಚಾಂಪಿಯನ್‍ಶಿಪ್‍ನ ಇತಿಹಾಸದಲ್ಲೇ ಅತ್ಯಂತ ಕಠಿಣ ಫೈನಲ್ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ಗೆದ್ದು ಬೀಗಿದ ಮಾರ್ಕ್ ವಿಲಿಯಮ್ಸ್, ದಾಖಲೆಯ ಮೂರನೇ ಬಾರಿಗೆ ಚಾಂಪಿಯನ್‍ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಇಂಗ್ಲೆಂಡ್‍ನ ಶೇಫೀಲ್ಡ್ ನಲ್ಲಿ ನಡೆದ ಜಿದ್ದಾಜಿದ್ದಿನ ಅಂತಿಮ ಹಣಾಹಣಿಯಲ್ಲಿ ವಿಲಿಯಮ್ಸ್, ನಾಲ್ಕು ಬಾರಿಯ ಚಾಂಪಿಯನ್ ಜಾನ್ ಹಿಗ್ಗಿನ್ಸ್ ವಿರುದ್ಧ 18-16 ಅಂತರದಲ್ಲಿ ರೋಚಕವಾಗಿ ಗೆದ್ದು ಇತಿಹಾಸ ನಿರ್ಮಿಸಿದರು. 42 ವರ್ಷದ ವಿಲಿಯಮ್ಸ್, ಬರೋಬ್ಬರಿ 15 ವರ್ಷದ ಬಳಿಕ ಮತ್ತೆ ಚಾಂಪಿಯನ್‍ಪಟ್ಟಕ್ಕೇರುವ ಮೂಲಕ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಮತ್ತೊಂದೆಡೆ ನಾಲ್ಕು ಬಾರಿಯ ಚಾಂಪಿಯನ್ ಜಾನ್ ಹಿಗ್ಗಿನ್ಸ್ ಸತತ ಎರಡನೇ ವರ್ಷವೂ ಫೈನಲ್‍ನಲ್ಲಿ ನಿರಾಸೆ ಅನುಭವಿಸಿದರು. ಕಳೆದ ವರ್ಷ ಮಾರ್ಕ್ ಸೆಲ್ಬಿಗೆ ಹಿಗ್ಗಿನ್ಸ್ ಶರಣಾಗಿದ್ದರು.

    ಬೆತ್ತಲೆ ಸುದ್ದಿಗೋಷ್ಠಿ:
    ಚಾಂಪಿಯನ್‍ಶಿಪ್‍ಗೂ ಮೊದಲು, ತಾನು ಗೆದ್ದರೆ ಬೆತ್ತೆಲೆಯಾಗಿ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಮಾರ್ಕ್ ವಿಲಿಯಮ್ಸ್ ಮಾತು ಕೊಟ್ಟಿದ್ದರು. ಚಾಂಪಿಯನ್‍ಶಿಪ್ ಮುಗಿದ ಬಳಿಕ ಟವಲ್ ಸುತ್ತಿ ಮಾಧ್ಯಮ ಕೊಠಡಿಗೆ ಆಗಮಿಸಿದ ವಿಲಿಯಮ್ಸ್, ಕೂತ ಬಳಿಕ ಟವಲ್‍ನ್ನೂ ತೆಗೆದು ಕೂಡ ಪಕ್ಕದಲಿದ್ದ ಆಸನದಲ್ಲಿರಿಸಿದರು. ಆದರೆ ಮಾಧ್ಯಮಗಳ ಲೋಗೋ ಇದ್ದ ಟೇಬಲ್‍ಗೆ ಹಾಕಲಾಗಿದ್ದ ಬಟ್ಟೆ ವಿಲಿಯಮ್ಸ್ ಮಾನ ಕಾಪಾಡಿತು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಲಿಯಮ್ಸ್, ಇಲ್ಲಿ ತುಂಬಾ ಚಳಿಯಾಗುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ಕ್ಷಣವನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ನಾನು ಈ ಬಗ್ಗೆ ಕನಸನ್ನಷ್ಟೇ ಕಂಡಿದ್ದೆ. ಅದೀಗ ನನಸಾಗುತ್ತಿದೆ. ಮುಂದಿನ ವರ್ಷವೂ ನಾನೇ ಗೆದ್ದರೆ ಮತ್ತೆ ನಗ್ನನಾಗಿಯೇ ನಿಮ್ಮ ಮುಂದೆ ಬರುತ್ತೇನೆ ಎಂದು ವಿಲಿಯಮ್ಸ್ ಹೇಳಿದರು.

  • ಮೆಡಿಕಲ್ ಎಮರ್ಜೆನ್ಸಿ: ಗುರುವಾರದಿಂದ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಸಿಗುತ್ತೆ? ಯಾವುದು ಸಿಗಲ್ಲ?

    ಮೆಡಿಕಲ್ ಎಮರ್ಜೆನ್ಸಿ: ಗುರುವಾರದಿಂದ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಸಿಗುತ್ತೆ? ಯಾವುದು ಸಿಗಲ್ಲ?

    ಬೆಂಗಳೂರು: ರಾಜ್ಯದಲ್ಲಿ ಈಗ ಆರೋಗ್ಯ ಎಮರ್ಜೆನ್ಸಿ ನಿರ್ಮಾಣವಾಗಿದೆ. ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ(ಕೆಪಿಎಂಇ) ವೈದ್ಯರ ಪ್ರತಿರೋಧ ಗುರುವಾರದಿಂದ ಮತ್ತಷ್ಟು ಜೋರಾಗಲಿದೆ. ಅನಿರ್ಧಿಷ್ಟಾವಧಿವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಯ ಒಪಿಡಿಗಳು ಕ್ಲೋಸ್ ಆಗಲಿದ್ದು, ಜನರಿಗೆ ಚಿಕಿತ್ಸೆ ಸಿಗುವುದಿಲ್ಲ. ಇದೆಲ್ಲ ಎಲೆಕ್ಷನ್ ಗಿಮಿಕ್ ಅಂತಾ ವೈದ್ಯರು ರಮೇಶ್ ಕುಮಾರ್ ರತ್ತ ಬೊಟ್ಟು ಮಾಡಿದ್ರೆ, ಸಚಿವರು ಪ್ರಾಣ ಹೋದ್ರು ಕಾಯ್ದೆ ಮಂಡಿಸುತ್ತೇನೆ ಅಂತಾ ಪಟ್ಟು ಹಿಡಿದಿದ್ದಾರೆ.

    ಇಂದು ತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾಸಗಿ ಆಸ್ಪತ್ರೆಗಳ ವೈದ್ಯರು ಸರ್ಕಾರ ವಿಧೇಯಕ ವಾಪಸು ಪಡೆಯುವವರೆಗೆ ಬೆಂಗಳೂರಿನಲ್ಲಿ ಸುಮಾರು ಆರು ಸಾವಿರ ಖಾಸಗಿ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆ ಎಂಟು ಗಂಟೆಯಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಸಚಿವರ ವಿರುದ್ಧ ಕಿಡಿಕಾರಿರುವ ವೈದ್ಯರು ರಮೇಶ್ ಕುಮಾರ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಹಠಮಾರಿ ಧೋರಣೆ ಮಾಡಿದ್ದಾರೆ ಜನ್ರ ಸಾವಿನ ಹೊಣೆ ಅವ್ರೇ ವಹಿಸಿಕೊಳ್ಳಲಿ ಅಂತಾ ಹೇಳಿದ್ದಾರೆ.

    ಫನಾ ಕಾರ್ಯದರ್ಶಿ, ಡಾ ರವೀಂದ್ರ ಅವರು ಹೊಸ ಬಾಂಬ್ ಹಾಕಿದ್ದು ಸಚಿವ ರಮೇಶ್ ಕುಮಾರ್ ಈ ಮಸೂದೆ ಜಾರಿಗೆ ಚುನಾವಣೆ ಕಾರಣ. ಇದಕ್ಕೆ ತರಾತುರಿಯಲ್ಲಿ ಮಸೂದೆ ಮಂಡನೆಗೆ ಹೊರಟಿದ್ದಾರೆ ಇದನ್ನು ಖುದ್ದು ನನ್ನ ಬಳಿಯೇ ಹೇಳಿಕೊಂಡಿದ್ದಾರೆ ಎಂದರು.

    ಸರ್ಕಾರ ಮೊದಲು ಆರು ಕೋಟಿ ಕನ್ನಡಿಗರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಭರವಸೆ ನೀಡಲಿ ಎಂದು ಆಗ್ರಹಿಸಿದರು.


     

  • ಸುದ್ದಿಗೋಷ್ಠಿಯಲ್ಲಿ ಶೆಣೈಗೆ ಸಿಟ್ಟು: ಅರ್ಧಕ್ಕೆ ಪ್ರೆಸ್‍ಮೀಟ್ ಮುಗಿಸಿ ಎದ್ದು ಹೋದ್ರು

    ಸುದ್ದಿಗೋಷ್ಠಿಯಲ್ಲಿ ಶೆಣೈಗೆ ಸಿಟ್ಟು: ಅರ್ಧಕ್ಕೆ ಪ್ರೆಸ್‍ಮೀಟ್ ಮುಗಿಸಿ ಎದ್ದು ಹೋದ್ರು

    ಬಳ್ಳಾರಿ: ಹೊಸ ರಾಜಕೀಯ ಪಕ್ಷ ಕಟ್ಟಿ ರಾಜಕೀಯ ನೆಲೆ ಕಂಡುಕೊಳ್ಳಲು ಹೊರಟಿರುವ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿ ಸುದ್ದಿಗೋಷ್ಠಿಯಿಂದ ಕೈ ಮುಗಿದು ಹೊರ ನಡೆದ ಘಟನೆ ನಡೆದಿದೆ.

    ನವಂಬರ್ ಒಂದರಂದು ಉದ್ಘಾಟನೆ ಯಾಗಲಿರುವ ಹೊಸ ಪಕ್ಷದ ಬಗ್ಗೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಇಂದು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಕೂಡ್ಲಿಗಿಯಲ್ಲೇ ಹೊಸ ಪಕ್ಷ ಉದ್ಘಾಟನೆ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ರು.

    ಇದಕ್ಕೆ ಸಿಟ್ಟಾದ ಅನುಪಮಾ ಶೆಣೈ ಮಾಧ್ಯಮವರು ಬಳ್ಳಾರಿಯನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅಂತಾ ಕೆಟ್ಟದಾಗಿ ಬಿಂಬಿಸಿದ್ದೀರಿ. ಆದ್ರೆ ವಾಸ್ತವವಾಗಿ ಬಳ್ಳಾರಿ ಹಾಗಿಲ್ಲ. ಇಲ್ಲಿನ ಜನರು ಮುಗ್ದರು ಅಂತಾ ಪತ್ರಕರ್ತರಿಗೆ ಮರುಪ್ರಶ್ನೆ ಎಸೆದರು. ಇದಕ್ಕೆ ಪ್ರತಿ ಉತ್ತರ ನೀಡಿದ ಪತ್ರಕರ್ತರು ನಾವೂ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅಂದಿಲ್ಲ. ನ್ಯಾಯಮೂರ್ತಿ ಸಂತೋಷ ಹೆಗಡೆ ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ಹೇಳಿದ್ದರು. ಈ ಹಿಂದೆ ನೀವೂ ಕೂಡಾ ಕೂಡ್ಲಿಗಿಯಲ್ಲಿ ‘ಲಿಕ್ಕರ್ ಲಾಬಿ’ ಎಂದು ಆರೋಪಿಸಿದ್ದು ಮರೆತುಬಿಟ್ಟರಾ ಎಂದು ಮರು ಪ್ರಶ್ನೆ ಎಸೆದರು.

    ಪತ್ರಕರ್ತರ ಉತ್ತರ, ಪ್ರತಿಯುತ್ತರಕ್ಕೆ ಏಕಾಎಕಿ ಸಿಟ್ಟಾದ ಅನುಪಮಾ ಶೆಣೈ, ಅರ್ಧಕ್ಕೆ ಮೊಟಕುಗೊಳಿಸಿ ಪತ್ರಕರ್ತರಿಗೆ ಕೈ ಮುಗಿದು ಸಿಟ್ಟಿನಿಂದಲೇ ಸುದ್ದಿಗೋಷ್ಠಿಯಿಂದ ಹೊರನಡೆದರು.

    ನವೆಂಬರ್ ಒಂದರಂದು ಹೊಸ ಪಕ್ಷ ಉದ್ಘಾಟನೆ ಮಾಡಲಿರುವ ಅನುಪಮಾ ಶೆಣೈ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಆದರೆ ಕ್ಷೇತ್ರ ಯಾವುದು ಎಂದು ಈಗಲೇ ಹೇಳವುದಿಲ್ಲವೆಂದು ಸ್ಪಷ್ಟಪಡಿಸಿದರು.

    224 ಕ್ಷೇತ್ರಗಳ ಪೈಕಿ 80 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಅನುಪಮಾ ಶೆಣೈ ಪ್ಲಾನ್ ರೂಪಿಸಿದ್ದಾರೆ. ಆದ್ರೆ ಅನುಪಮಾ ಹೊಸದಾಗಿ ರಾಜಕೀಯಕ್ಕೆ ಬರುವವರನ್ನೆ ಅಭ್ಯರ್ಥಿಗಳನ್ನಾಗಿ ಮಾಡಿ ಪಕ್ಷ ಕಟ್ಟಲು ಚಿಂತನೆ ನಡೆಸಿದ್ದಾರೆ.