Tag: Pregnant

  • ಚಳಿ-ಮಳೆಯಲ್ಲಿ ಗರ್ಭಿಣಿಯರಿಗೆ ನೆಲವೇ ಹಾಸಿಗೆ: ಹುಬ್ಬಳ್ಳಿ ಕಿಮ್ಸ್ ನಲ್ಲೂ ತಪ್ಪಿಲ್ಲ ವನವಾಸ

    ಚಳಿ-ಮಳೆಯಲ್ಲಿ ಗರ್ಭಿಣಿಯರಿಗೆ ನೆಲವೇ ಹಾಸಿಗೆ: ಹುಬ್ಬಳ್ಳಿ ಕಿಮ್ಸ್ ನಲ್ಲೂ ತಪ್ಪಿಲ್ಲ ವನವಾಸ

    ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕರ್ಮಕಾಂಡಕ್ಕೆ ಕೊನೆಯೇ ಇಲ್ಲದಂತಾಗಿದೆ. ಈಗ ಅದರ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.

    ಆಸ್ಪತ್ರೆಗೆ ಬರೋ ಗರ್ಭಿಣಿಯರು ನೆಲದ ಮೇಲೆ ಮಲಗೋ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸೂತಿ ಮತ್ತು ಹೆರಿಗೆ ವಿಭಾಗದಲ್ಲಿ ಅಗತ್ಯ ಹಾಸಿಗೆ ಮತ್ತು ಆಸನ ವ್ಯವಸ್ಥೆ ಇಲ್ಲದೇ ಇರೋ ಕಾರಣ ಗರ್ಭಿಣಿಯರು ನೆಲದಲ್ಲೇ ಮಲಗುತ್ತಿದ್ದಾರೆ.

    ಈ ಆಸ್ಪತ್ರೆಗೆ ಪ್ರತಿದಿನ 100ಕ್ಕಿಂತ ಹೆಚ್ಚು ಗರ್ಭಿಣಿಯರು ಬರ್ತಾರೆ. ಹೀಗಿದ್ದ ಮೇಲೂ ಆಸ್ಪತ್ರೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಹಿಂದೆ ಒಂದೇ ಸ್ಟ್ರೆಚರ್‍ನಲ್ಲಿ ನಾಲ್ವರು ಗರ್ಭಿಣಿಯರನ್ನು ಕೂರಿಸಿಕೊಂಡು ಹೋಗಿದ್ದು ಸುದ್ದಿಯಾಗಿತ್ತು.

     

  • ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ

    ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ

    ಉಡುಪಿ: ತುಂಬು ಗರ್ಭಿಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ ಅಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.

    ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಆಶಾ ಎಂಬ ಮಹಿಳೆಗೆ ಭಾನುವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಶಾ ಅವರನ್ನು ಆಟೋ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ಉತ್ತರ ಸಿಬ್ಬಂದಿಯಿಂದ ಬಂದಿದೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತ ಬಿಟ್ಟಿ ಸಲಹೆ ಕೊಟ್ಟಿದ್ದಾರೆ.

    ಕೊನೆಗೆ ಆಶಾ ಅವರನ್ನು ಅದೇ ಆಟೋದಲ್ಲಿ ಕುಂದಾಪುರದ ಶ್ರೀದೇವಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆಸ್ಪತ್ರೆ ಸೇರಿದ 10 ನಿಮಿಷಕ್ಕೆ ಆಶಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಬಗ್ಗೆ ಸೋಮವಾರ ಆಶಾ ಅವರ ಕುಟುಂಬಸ್ಥರು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಲಿಖಿತ ದೂರು ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಬೇಜಾವಬ್ದಾರಿ ಮತ್ತು ಅವ್ಯವಸ್ಥೆಯ ಕುರಿತು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸಾಂತ್ವಾನ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ಕೊಟ್ಟು ಆಶಾ ಅವರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.

    ವೈದ್ಯರು ಆಸ್ಪತ್ರೆಯಲ್ಲಿ 24 ಗಂಟೆ ಇರಬೇಕು. 108 ಗೆ ಕರೆ ಮಾಡಿದರೆ ಅದೂ ಬರಲಿಲ್ಲ. ತುಂಬು ಗರ್ಭಿಣಿಯರನ್ನು ಮೊದಲು ದಾಖಲು ಮಾಡಿಕೊಳ್ಳಬೇಕು. ನಂತರ ಕೂಡಲೇ ವೈದ್ಯರನ್ನು ಕರೆಸಬೇಕು. ಒಬ್ಬ ವೈದ್ಯರು ರಜೆಯಲ್ಲಿದ್ದರೆ, ಇನ್ನೊಬ್ಬರು ವೈದ್ಯರು ಆಸ್ಪತ್ರೆಯಲ್ಲಿ ಇರಲೇಬೇಕು. ಡಾ. ರೋಹಿಣಿ ಮತ್ತು ಡಾ. ಉದಯ ಶಂಕರ್ ಗೆ ದೂರಿನ ಪ್ರತಿಯನ್ನು ರವಾನೆ ಮಾಡಿದ್ದೇನೆ. ನರ್ಸ್‍ಗಳದ್ದೂ ಇದರಲ್ಲಿ ಬೇಜವಾಬ್ದಾರಿಯಿದೆ. ಬಡವರಿಗೆ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೀಗೆ ಆದ್ರೆ ಹೇಗೆ ಎಂದು ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರದ ಮುಖ್ಯಸ್ಥೆ ರಾಧಾ ದಾಸ್ ಪ್ರಶ್ನೆ ಮಾಡಿದ್ದಾರೆ.

     

  • ಮಲತಂದೆಯಿಂದ ಅತ್ಯಾಚಾರ- 10 ವರ್ಷದ ಬಾಲಕಿ ಈಗ 5 ತಿಂಗಳ ಗರ್ಭಿಣಿ

    ಮಲತಂದೆಯಿಂದ ಅತ್ಯಾಚಾರ- 10 ವರ್ಷದ ಬಾಲಕಿ ಈಗ 5 ತಿಂಗಳ ಗರ್ಭಿಣಿ

    ರೋಹ್ಟಕ್: ಮಲತಂದೆಯಿಂದ ಸತತವಾಗಿ ಅತ್ಯಾಚಾರಕ್ಕೊಗಾಗಿ 10 ವರ್ಷದ ಬಾಲಕಿ ಗರ್ಭಿಣಿಯಾಗಿರೋ ಆಘಾತಕಾರಿ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿ ಬೆಳಕಿಗೆ ಬಂದಿದೆ.

    ಶುಕ್ರವಾರದಂದು ಇಲ್ಲಿನ ಆಸ್ಪತ್ರೆಯೊಂದಕ್ಕೆ ಬಾಲಕಿಯನ್ನ ದಾಖಲಿಸಲಾಗಿದ್ದು, ಈ ವೇಳೆ ಆಕೆ 5 ತಿಂಗಳ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.

    ಬಿಹಾರದಿಂದ ವಲಸೆ ಬಂದು ಕಾರ್ಮಿಕರಾಗಿರುವ ಬಾಲಕಿಯ ತಾಯಿ ಮಗಳ ಸ್ಥಿತಿ ನೋಡಿ ವೈದ್ಯರ ಬಳಿ ಚೆಕ್‍ಅಪ್‍ಗಾಗಿ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಅತ್ಯಾಚಾರದ ಬಗ್ಗೆ ದೃಢಪಡಿಸಿದ್ದಾರೆ. ನಂತರ ಬಾಲಕಿ ಅಮ್ಮನ ಬಳಿ ನಡೆದ ವಿಷಯವನ್ನ ಹೇಳಿಕೊಂಡಿದ್ದಾಳೆ. ದೀರ್ಘ ಕಾಲದಿಂದ ಮಲತಂದೆ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದ ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿ: ಗೆಳೆಯರಿಂದ್ಲೇ ಮಗಳ ಮೇಲೆ ಗ್ಯಾಂಗ್‍ರೇಪ್ – ವೀಡಿಯೋ ಮಾಡಿದ ನಿಷ್ಕರುಣಿ ತಾಯಿ

    ನಂತರ ಬಾಲಕಿಯ ತಾಯಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರೋಹ್ಟಕ್‍ನ ಪಿಜಿಐಎಮ್‍ಎಸ್‍ನ ವೈದ್ಯಕೀಯ ಮಂಡಳಿ ಸೋಮವಾರದಂದು ಸಭೆ ಸೇರಲಿದ್ದು ಮಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಮಹಿಳೆ ಮೇಲೆ ಗ್ಯಾಂಗ್ ರೇಪ್- ಮುಖವನ್ನ ಇಟ್ಟಿಗೆಯಿಂದ ಹೊಡೆದ್ರು, ಛಿದ್ರವಾದ ಸ್ಥಿತಿಯಲ್ಲಿ ಶವ ಪತ್ತೆ

  • ಪ್ರಿಯಕರನ ಮನೆ ಮುಂದೆ 5 ತಿಂಗಳ ಗರ್ಭಿಣಿಯಿಂದ ಧರಣಿ

    ಪ್ರಿಯಕರನ ಮನೆ ಮುಂದೆ 5 ತಿಂಗಳ ಗರ್ಭಿಣಿಯಿಂದ ಧರಣಿ

    ತುಮಕೂರು: ಮದುವೆಯಾಗೋದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಪರಾರಿಯಾದ ಪ್ರಿಯಕರನ ಮನೆ ಮುಂದೆ ನೊಂದ ಯುವತಿ ಧರಣಿ ಕುಳಿತ ಘಟನೆ ಕುಣಿಗಲ್‍ನ ಕೊತ್ತಿಪುರದಲ್ಲಿ ನಡೆದಿದೆ.

    5 ತಿಂಗಳ ಗರ್ಭಿಣಿ ವರಲಕ್ಷ್ಮೀ ತನ್ನ ಪ್ರಿಯಕರ ಮೋಹನ್ ಮನೆಮುಂದೆ ಧರಣಿ ಕುಳಿತಿದ್ದಾರೆ. ಕುಣಿಗಲ್ ತಾಲೂಕಿನ ಹನುಮೇಗೌಡ ಪಾಳ್ಯದ ವರಲಕ್ಷೀ ಹಾಗೂ ಕೊತ್ತಿಪುರ ಗ್ರಾಮದ ಮೋಹನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ವರಲಕ್ಷ್ಮೀ ಕುಣಿಗಲ್ ಪಟ್ಟಣಕ್ಕೆ ಕಾಲೇಜಿಗೆ ಹೋಗುತಿದ್ದ ವೇಳೆ ಹೂವು ಮಾರುತಿದ್ದ ಮೋಹನ್ ಗೆ ಪರಿಚಯವಾಗಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಮದುವೆಯಾಗೊದಾಗಿ ನಂಬಿಸಿದ ಮೋಹನ್ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಈಗ ವರಲಕ್ಷ್ಮೀ 5 ತಿಂಗಳ ಗರ್ಭಿಣಿಯಾಗಿದ್ದಾರೆ.

    ಗರ್ಭಿಣಿಯಾದ ಸುದ್ದಿ ತಿಳಿಯುತ್ತಿದ್ದಂತೆ ಮೋಹನ್ ತನ್ನ ವರಸೆ ಬದಲಸಿದ್ದಾನೆ. ಜಾತಿ ನೆಪವೊಡ್ಡಿ ಮದುವೆಯಾಗಲು ನಿರಾಕರಿಸಿದ್ದಾನೆ. ತನ್ನ ಪ್ರಿಯಕರನ ಮೋಸದಿಂದಾಗಿ ಮನನೊಂದ ವರಲಕ್ಷ್ಮೀ ಪ್ರಿಯಕರ ಮೋಹನ್ ಮನೆಮುಂದೆ ಧರಣಿ ಕುಳಿತಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

    ಯುವತಿ ಧರಣಿ ಕುಳಿತ ವಿಚಾರ ತಿಳಿದ ತಾಲೂಕು ಮಹಿಳಾ ಸಂರಕ್ಷಣಾಧಿಕಾರಿ ರಜನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮೂಕಾಂಬಿಕಾ ಸ್ಥಳಕ್ಕೆ ಬಂದು ನೊಂದ ಯುವತಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ಈ ನಡುವೆ ಕುಣಿಗಲ್ ಪೆÇಲೀಸರು ಆರೋಪಿ ಮೋಹನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ : ತುಂಬು ಗರ್ಭಿಣಿಯನ್ನ ನಡುರಾತ್ರಿ ಹೊರಗೆ ಕಳಿಸಿದ ಸಿಬ್ಬಂದಿ

    ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ : ತುಂಬು ಗರ್ಭಿಣಿಯನ್ನ ನಡುರಾತ್ರಿ ಹೊರಗೆ ಕಳಿಸಿದ ಸಿಬ್ಬಂದಿ

    ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಅನ್ನೋ ಕಾರಣ ಹೇಳಿ ಮಧ್ಯರಾತ್ರಿ ವೇಳೆ ತುಂಬು ಗರ್ಭಿಣಿಯನ್ನ ಆಸ್ಪತ್ರೆಯಿಂದ ಹೊರಗೆ ಕಳುಹಿಸಿರುವ ಅಮಾನವೀಯ ಘಟನೆ ನಡೆದಿದೆ.

    ಹೆರಿಗೆಗಾಗಿ ಯಾದಗಿರಿಯ ಮುಂಡರಗಿಯಿಂದ ಬಂದ ಒಂಭತ್ತು ತಿಂಗಳ ಗರ್ಭಿಣಿ ಮಹಾದೇವಮ್ಮ ಎರಡು ದಿನಗಳಿಂದ ರಿಮ್ಸ್ ಆಸ್ಪತ್ರೆಯಲ್ಲಿದ್ದರು. ಮೊದಲಿಗೆ ತಪಾಸಣೆ ನಡೆಸಿದ ವೈದ್ಯರು ಎರಡು ದಿನದಲ್ಲಿ ಹೆರಿಗೆಯಾಗುವುದಾಗಿ ಹೇಳಿದ್ದರು, ಆದ್ರೆ ಬಳಿಕ ಗರ್ಭಿಣಿಯನ್ನ ನೋಡಲು ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ ಎನ್ನಲಾಗಿದೆ. ಹೀಗಾಗಿ ರಾತ್ರಿವೇಳೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಏಕಾಏಕಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಕೂಡಲೇ ಬೆಡ್ ಖಾಲಿ ಮಾಡುವಂತೆ ಒತ್ತಾಯಿಸಿ ಆಸ್ಪತ್ರೆಯಿಂದ ಹೊರಗಡೆ ಕಳುಹಿಸಿದ್ದಾರೆ.

    ತುಂಬು ಗರ್ಭಿಣಿ ಆಸ್ಪತ್ರೆ ಮುಂದೆ ಅಸಹಾಯಕಳಾಗಿ ನಿಂತಿರುವುದನ್ನ ಪಬ್ಲಿಕ್ ಟಿವಿ ಚಿತ್ರಿಕರಿಸುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಕೂಡಲೇ ಅಂಬುಲೆನ್ಸ್ ತಂದು ಮಹಾದೇವಮ್ಮರನ್ನ ಮರಳಿ ಆಸ್ಪತ್ರೆಗೆ ಕರೆದ್ಯೊಯ್ದು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

    ದೂರದ ಊರುಗಳಿಂದ ಬರುವ ಬಡ ರೋಗಿಗಳಿಗೆ ವರದಾನವಾಗಬೇಕಾದ ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯದ ಕೂಪವಾಗಿದೆ. ವೈದ್ಯರ ಕೊರತೆ ಮೊದಲಿನಿಂದಲೂ ಕಾಡುತ್ತಿದ್ದು, ರಾತ್ರಿ ವೇಳೆ ಯಾವೊಬ್ಬ ವೈದ್ಯರೂ ಆಸ್ಪತ್ರೆ ಕಡೆ ತಲೆ ಹಾಕದಿರುವುದು ಇಲ್ಲಿಗೆ ಬರುವ ರೋಗಿಗಳಲ್ಲಿ ಆತಂಕ ಮೂಡಿಸಿದೆ. ರಾತ್ರಿ ಪಾಳೆಯಲ್ಲಿ ಕೇವಲ ವೈದ್ಯಕೀಯ ವಿದ್ಯಾರ್ಥಿಗಳಿಂದಲೇ ಆಸ್ಪತ್ರೆ ನಡೆಯುತ್ತಿರುವುದು ಹಲವಾರು ಯಡವಟ್ಟುಗಳಿಗೆ ಕಾರಣವಾಗಿದೆ.

  • ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಲಕ್ನೋ: ತ್ರಿವಳಿ ತಲಾಖ್ ನಿಷೇಧಿಸಿ ಎಂದು ಉತ್ತರ ಪ್ರದೇಶದ ಮೂರು ತಿಂಗಳ ಗರ್ಭಿಣಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ತ್ರಿವಳಿ ತಲಾಖ್ ನಿಷೇಧಿಸಲು ನೀವು ಮುಂದಾಗಿದ್ದಕ್ಕೆ ನಾನು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತವನ್ನು ಹಾಕಿದ್ದೇನೆ. ಹೀಗಾಗಿ ತ್ರಿವಳಿ ತಲಾಖ್ ನಿಷೇಧಿಸಿ ಎಂದು ತ್ರಿವಳಿ ತಲಾಖ್ ಸಂತ್ರಸ್ತೆ ಎರಡು ಹೆಣ್ಣುಮಕ್ಕಳ ತಾಯಿ ಆಗಿರುವ ಶಗುಫ್ತಾ ಮೋದಿಗೆ ಪತ್ರ ಬರೆದಿದ್ದಾರೆ.

    ಈ ಪತ್ರದ ಪ್ರತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದಾರೆ.

    ಶಹನ್ ಪುರ ನಿವಾಸಿ ಶಗುಫ್ತಾ ಮತ್ತು ಶಂಶದ್ ನಡುವೆ 5 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗು ಹೆಣ್ಣಾಗಲಿದೆ ಎಂದು ತಿಳಿದು ಪತಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ. ಆದರೆ ಶಗುಫ್ತಾ ಪತಿಯ ಮಾತನ್ನು ವಿರೋಧಿಸಿದ್ದಾರೆ. ಇದಕ್ಕೆ ಸಿಟ್ಟಾದ ಶಂಶದ್ ತನ್ನ ಸಹೋದರರ ಜೊತೆಗೂಡಿ ಮನಬಂದಂತೆ ಥಳಿಸಿದ್ದಾನೆ. ಮಗುವನ್ನು ಭ್ರೂಣದಲ್ಲಿ ಹತ್ಯೆ ಮಾಡಲು ಹೊಟ್ಟೆಗೆ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಮೂರು ಬಾರಿ ತಲಾಖ್ ಹೇಳಿ ಈಗ ಮನೆಯಿಂದ ಹೊರಗೆ ಹಾಕಿದ್ದಾನೆ.

    ಈ ಸಂಬಂಧ ಶಂಶದ್ ಮತ್ತು ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 315ರ ಅಡಿ(ಭ್ರೂಣ ಹತ್ಯೆ) ಮಾರ್ಚ್ 24ರಂದು ಪ್ರಕರಣ ದಾಖಲಾಗಿದೆ.

    ಜೀವಂತವಾಗಿ ಜನಿಸುವುದನ್ನು ತಡೆಯುವ ಉದ್ದೇಶ ಅಥವಾ ಹುಟ್ಟಿನ ನಂತರ ಮಗುವಿನ ಸಾವಿಗೆ ಕಾರಣವಾಗುವ ಈ ಆರೋಪ ಸಾಬೀತಾದರೆ ಐಪಿಸಿಯ ಸೆಕ್ಷನ್ 315ರ ಅನ್ವಯ 10 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

  • ನಾಲ್ಕನೆಯ ಮಗು ಹೆಣ್ಣಾಗುತ್ತೆ ಅನ್ನೋ ಭಯಕ್ಕೆ ಗರ್ಭಪಾತದ ಮಾತ್ರೆ ಸೇವಿಸಿ ಗರ್ಭಿಣಿ ಸಾವು

    ನಾಲ್ಕನೆಯ ಮಗು ಹೆಣ್ಣಾಗುತ್ತೆ ಅನ್ನೋ ಭಯಕ್ಕೆ ಗರ್ಭಪಾತದ ಮಾತ್ರೆ ಸೇವಿಸಿ ಗರ್ಭಿಣಿ ಸಾವು

    ತುಮಕೂರು: ಹೆಣ್ಣು ಮಗು ಜನಿಸುತ್ತದೆ ಎಂಬ ಭಯದಿಂದ ಪತಿಯ ಸಲಹೆಯ ಮೇರೆಗೆ ಗರ್ಭಪಾತದ ಮಾತ್ರೆ ಸೇವಿಸಿ ಗರ್ಭಿಣಿಯೊಬ್ಬರು ಕೊರಟಗೆರೆ ತಾಲೂಕಿನ ಕಾಮರಾಜನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.

    ರಾಧಾಮಣಿ(25) ಮೃತಪಟ್ಟ ಗರ್ಭಿಣಿ. ರಾಮಯ್ಯ ಮತ್ತು ರಾಧಾಮಣಿ ದಂಪತಿಗೆ ಈಗಾಗಲೇ 3 ಹೆಣ್ಣು ಮಕ್ಕಳಿದ್ದು, ನಾಲ್ಕನೆಯ ಮಗುವಿಗಾಗಿ 6 ತಿಂಗಳ ಗರ್ಭವತಿಯಾಗಿದ್ದಳು.

    ಜನಿಸಲಿರುವ ನಾಲ್ಕನೇಯ ಮಗುವು ಹೆಣ್ಣಾಗಲಿದೆ ಎನ್ನುವ ಭಯಕ್ಕೆ ಬಿದ್ದು ಗರ್ಭಪಾತದ ಮಾತ್ರೆ ಸೇವಿಸಿದ್ದಳು. ಅತಿಯಾದ ಮಾತ್ರೆಗಳ ಸೇವಿಸಿ ಅನಾರೋಗ್ಯಕ್ಕೀಡಾದ ಪರಿಣಾಮ ಶುಕ್ರವಾರ ರಾಧಾಮಣಿಯನ್ನು ಕೊರಟಗೆರೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಮೃತ ಮಗುವನ್ನು ಹೊರ ತೆಗೆಯುವಾಗ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂದೇ ರಾಧಾಮಣಿ ಸಾವನ್ನಪ್ಪಿದ್ದಳು.

    ಸಂಬಂಧಿಕರ ಆರೋಪ ಏನು?
    ನಗರದ ಖಾಸಗಿ ಆಸ್ಪತ್ರೆಯ ನರ್ಸ್ ಮಂಜುಳಾ ರಾಧಾಮಣಿಗೆ ಗರ್ಭಪಾತದ ಮಾತ್ರೆಗಳನ್ನು ತೆಗದುಕೊಳ್ಳುವಂತೆ ಹೇಳಿದ್ದರು. ಬಳಿಕ ಆಸ್ಪತ್ರೆಯ ನರ್ಸ್ ಗಳು ಗರ್ಭಪಾತ ಮಾಡಿಸಿದ್ದಾರೆ. ರಾಧಾಮಣಿಯ ಹೊಟ್ಟೆಗೆ ಕೈ ಹಾಕಿ ಮೃತಪಟ್ಟ ಮಗುವನ್ನು ನರ್ಸ್ ಮಂಜುಳಾ ಹೊರಗಡೆ ತೆಗೆದಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಈ ಸಾವಿಗೆ ಪತಿ ರಾಮಯ್ಯ ಕಾರಣ ಎಂದು ಆರೋಪಿಸಿ ರಾಧಾಮಣಿ ಸಂಬಂಧಿಕರು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಆಕ್ರೋಶಗೊಂಡ ರಾಧಾಮಣಿ ಸಂಬಂಧಿಕರು ಭಾನುವಾರ ನರ್ಸ್ ಮಂಜುಳಾ ಮನೆ ಮುಂದೆ ಪ್ರತಿಭಟನೆ ನಡೆಸಿ ಬಂಧಿಸುವಂತೆ ಆಗ್ರಹಿಸಿದರು.