Tag: Pregnant

  • ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ವ್ಯಾನ್‍ನಿಂದ ಜಿಗಿದ ಗರ್ಭಿಣಿ ಸಾವು

    ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ವ್ಯಾನ್‍ನಿಂದ ಜಿಗಿದ ಗರ್ಭಿಣಿ ಸಾವು

    ಹೈದರಾಬಾದ್: ಅತ್ಯಾಚಾರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ವ್ಯಾನ್‍ನಿಂದ ಜಿಗಿದ ಪರಿಣಾಮ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಶನಿವಾರ ರಾತ್ರಿ ಮೇದಕ್ ಜಿಲ್ಲೆಯ ತೂಪ್ರನ್ ಬಳಿಯ ರವೆಲ್ಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ಘಟನೆ ನಡೆದಿದೆ. ಆದ್ರೆ ಭಾನುವರದಂದು ಈ ಘಟನೆ ಬೆಳಕಿಗೆ ಬಂದಿದೆ. ಮೃತ ಗರ್ಭಿಣಿಯನ್ನು ತೂಪ್ರನ್ ಮಂಡಲ್‍ನ ಪೋತುರಜುಪಲ್ಲಿ ನಿವಾಸಿಯಾದ ಕಲಾವತಿ(35) ಎಂದು ಗುರುತಿಸಲಾಗಿದೆ. ಇವರು 7 ತಿಂಗಳ ಗರ್ಭಿಣಿಯಾಗಿದ್ದರು.

    ಕಲಾವತಿ ಅವರು ಕೆಲಸ ಮುಗಿಸಿ ಮನೆಗೆ ಹೋಗಲು 7 ವರ್ಷದ ಮಗಳು ಶ್ರೀಶಾಳೊಂದಿಗೆ ಕೊಂಡಪಲ್ಲಿ ಗ್ರಾಮದಿಂದ ವ್ಯಾನ್‍ವೊಂದನ್ನ ಹತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಕಲಾವತಿ ಅವರ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾರೆ. ಸಹಾಯಕ್ಕಾಗಿ ಕಲಾವತಿ ಜೋರಾಗಿ ಕಿರುಚಿಕೊಂಡರೂ ಚಾಲಕ ಆಕೆಯ ಗ್ರಾಮದ ಬಳಿ ಬಸ್ ನಿಲ್ಲಿಸಿಲ್ಲ. ಹೀಗಾಗಿ ಅವರಿಂದ ತಪ್ಪಿಸಿಕೊಳ್ಳಲು ಕಲಾವತಿ ವ್ಯಾನ್‍ನಿಂದ ಹೊರಗೆ ಜಿಗಿದಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

    ಚಲಿಸುತ್ತಿದ್ದ ವ್ಯನ್‍ನಿಂದ ಹೊರಗೆ ಹಾರಿದ ಕಾರಣ ಕಲವತಿ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಗಳು ಕಲಾವತಿ ಅವರ ಮಗಳು ಶ್ರಿಶಾಳನ್ನು ಕೂಡ ಕೆಲವು ಮೀಟರ್ ದೂರದಲ್ಲಿ ಎಸೆದುಹೋಗಿದ್ದಾರೆ. ಸ್ಥಳೀಯರ ನೆರವಿನಿಂದ ಶ್ರೀಶಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ.

    ರಾಷ್ಟ್ರೀಯ ಹೆದ್ದಾರಿ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸಿರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಶಹಬ್ಬಾಸ್ ಹೇಳಿ..ಕತಾರ್ ನಿಂದ ಕುವೈತ್‍ಗೆ ಬಂದು ರಕ್ತ ನೀಡಿ ಗರ್ಭಿಣಿಯ ಪ್ರಾಣ ಉಳಿಸಿದ ಭಾರತೀಯ!

    ಶಹಬ್ಬಾಸ್ ಹೇಳಿ..ಕತಾರ್ ನಿಂದ ಕುವೈತ್‍ಗೆ ಬಂದು ರಕ್ತ ನೀಡಿ ಗರ್ಭಿಣಿಯ ಪ್ರಾಣ ಉಳಿಸಿದ ಭಾರತೀಯ!

    ದೋಹಾ: ಕತಾರ್ ನಿಂದ ಕುವೈತ್‍ಗೆ ಭಾರತೀಯನೊಬ್ಬ ಪ್ರಯಾಣ ಮಾಡಿ ಉಡುಪಿ ಮೂಲದ ಗರ್ಭಿಣಿಯೊಬ್ಬರಿಗೆ ರಕ್ತವನ್ನು ದಾನ ಮಾಡಿ ಪ್ರಾಣ ಉಳಿಸಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

    ಕತಾರ್ ನಲ್ಲಿ ಒಂದು ಹೈಪರ್ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದ ನಿಧೀಶ್ ರಘುನಾಥ್ ಈ ವಿಶೇಷ ಸಾಧನೆ ಮಾಡಿದ ವ್ಯಕ್ತಿ. ಇವರು ಗರ್ಭಿಣಿಯೊಬ್ಬರ ಚಿಕಿತ್ಸೆಗಾಗಿ ಕತಾರ್ ನಿಂದ ಕುವೈತ್‍ಗೆ ಆಗಮಿಸಿ ರಕ್ತ ನೀಡಿ ತಾಯಿ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.

    ಏನಿದು ಘಟನೆ?
    ಗರ್ಭಿಣಿ ವಿನೀತಾ ಕುವೈತ್‍ನ ಅದಾನ್ ಆಸ್ಪತ್ರೆ ದಾಖಲಾಗಿದ್ದರು. ಬಾಂಬೆ ಗ್ರೂಪ್ ರಕ್ತ ಹೊಂದಿದ್ದ ಅವರಿಗೆ ಸಿಸೇರಿಯನ್ ಆಪರೇಷನ್ ಮಾಡಬೇಕಾಗಿತ್ತು. ಭಾರತದಲ್ಲಿ 7,600 ಜನರಲ್ಲಿ ಒಬ್ಬರಲ್ಲಿ ಮಾತ್ರ ಈ ರಕ್ತ ಇರುವ ಕಾರಣ ಬಾಂಬೆ ಗ್ರೂಪ್ ರಕ್ತಕ್ಕೆ ಹುಡುಕಾಟ ಆರಂಭವಾಯಿತು.

    ಕುವೈತ್‍ನಲ್ಲಿ ಈ ಗುಂಪಿನ ರಕ್ತದ ದಾನಿಗಳಿಗಾಗಿ ಹುಡುಕಾಟ ಆರಂಭವಾಗಿ ಆದರೆ ಎಷ್ಟು ಹುಡುಕಿದರೂ ದಾನಿಗಳು ಸಿಗಲಿಲ್ಲ. ನಂತರ ಕೂಡಲೇ ಕೇರಳ ಮೂಲದ ‘ಬ್ಲಡ್ ಡೋನರ್ಸ್ ಫೋರಮ್, ಕೇರಳ-ಕುವೈತ್ ಚಾಪ್ಟರ್’ ಎಂಬ ರಕ್ತದಾನಿಗಳ ಸಂಸ್ಥೆಯಲ್ಲಿ ಆನ್‍ಲೈನ್ ಮೂಲಕ ಹುಡುಕಾಟ ಆರಂಭಿಸಲಾಯಿತು.

    ತುರ್ತು ರಕ್ತ ಬೇಕಾಗಿರುವ ವಿಚಾರವನ್ನು ಸಾಮಾಜಿಕ ತಾಣದಲ್ಲಿಯೂ ಶೇರ್ ಮಾಡಲಾಯಿತು. ಈ ವಿಚಾರ ಕತಾರ್ ನಲ್ಲಿದ್ದ ಕೇರಳ ಮೂಲದ ನಿಧೀಶ್ ರಘುನಾಥ್ ಅವರಿಗೂ ತಲುಪಿತು. ನನ್ನದು ಅದೇ ಗುಂಪಿನ ರಕ್ತ ಎಂದು ತಿಳಿದಿದ್ದ ನಿಧೀಶ್, ಕೂಡಲೇ ರಕ್ತ ನೀಡಲು ಮುಂದಾಗಿ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಕುವೈತ್‍ಗೆ ತೆರಳಲು ಅನುಮತಿ ಪಡೆದರು. ಅಷ್ಟೇ ಅಲ್ಲದೇ ತುರ್ತಾಗಿ ಕುವೈತ್‍ಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಹೀಗಾಗಿ ವೀಸಾ ಪ್ರಕ್ರಿಯೆ ಮುಗಿದು ಶುಕ್ರವಾರ ನಿಧೀಶ್ ಕುವೈತ್ ತಲುಪಿದರು.

    ನಿಧೀಶ್ ರಕ್ತ ಪರೀಕ್ಷೆ ಮಾಡಿ ನಂತರ ಜಾಬಿರಿಯಾ ರಕ್ತ ನಿಧಿಯಲ್ಲಿ ರಕ್ತದಾನ ಮಾಡಲಾಯಿತು. ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ನಿಧೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕುವೈತ್‍ನ ಆರೋಗ್ಯ ವಿಭಾಗವೂ ಅವರನ್ನು ಸನ್ಮಾನಿಸಿದೆ.

    ಏನಿದು ‘ಬಾಂಬೆ ಗ್ರೂಪ್’ ರಕ್ತ?
    ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಟಿಜನ್, ಬಿ ಗುಂಪಿನಲ್ಲಿ ಬಿ-ಆ್ಯಂಟಿಜನ್, ಎಬಿಯಲ್ಲಿ ಎಬಿ-ಆ್ಯಂಟಿಜನ್ ಮತ್ತು ಒ ಗುಂಪಿನಲ್ಲಿ ಎಚ್ ಆ್ಯಂಟಿಜನ್ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್-ಆ್ಯಂಟಿಜನ್ ಅಂಶ ಇರುವುದಿಲ್ಲವೋ ಅಂತಹವರನ್ನು ಬಾಂಬೆ ಗುಂಪಿನ ರಕ್ತದವರು ಎಂದು ಗುರುತಿಸಲಾಗುತ್ತದೆ.

    ಈ ರಕ್ತದ ಮಾದರಿ ಮೊದಲು ಮುಂಬೈನಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮುಂಬಯಿನ ಹಳೆಯ ಹೆಸರಾದ ಬಾಂಬೆ ಹೆಸರಿನೊಂದಿಗೆ ‘ಬಾಂಬೆ ಬ್ಲಡ್’ ಎಂದು ಕರೆಯಲಾಗುತ್ತದೆ.

     

  • ನಾಯಿಗಳ ಜಗಳಕ್ಕೆ 2 ಕುಟುಂಬದ ಮಧ್ಯೆ ಗಲಾಟೆಯಾಗಿ ಗರ್ಭಿಣಿ ಮೇಲೆ ಹಲ್ಲೆ, ಹೊಟ್ಟೆಯಲ್ಲೇ ಶಿಶು ಸಾವು

    ನಾಯಿಗಳ ಜಗಳಕ್ಕೆ 2 ಕುಟುಂಬದ ಮಧ್ಯೆ ಗಲಾಟೆಯಾಗಿ ಗರ್ಭಿಣಿ ಮೇಲೆ ಹಲ್ಲೆ, ಹೊಟ್ಟೆಯಲ್ಲೇ ಶಿಶು ಸಾವು

    ದಾವಣಗೆರೆ: ಸಾಕು ನಾಯಿಗಳ ಜಗಳಕ್ಕೆ ಎರಡು ಕುಟುಂಬದ ನಡುವೆ ಗಲಾಟೆಯಾಗಿ ಗರ್ಭಿಣಿಯ ಮೇಲೆ ಹಲ್ಲೆ ಮಾಡಿದ ಘಟನೆ ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಿಮ್ಮವ್ವ ಮತ್ತು ಅದೇ ಗ್ರಾಮದ ನಂಜುಡಪ್ಪ ಎಂಬುವರ ನಾಯಿಗಳು ಜಗಳ ಆಡ್ತಾ ಇದ್ವು. ಈ ಸಂದರ್ಭದಲ್ಲಿ ತಿಮ್ಮವ್ವ ಅವರ ನಾಯಿಗೆ ನಂಜುಂಡಪ್ಪ ಕಲ್ಲಿನಿಂದ ಹೊಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ತಿಮ್ಮವ್ವ ನಮ್ಮ ನಾಯಿಗೆ ಯಾಕೆ ಹೊಡೀತೀಯ ಎಂದು ಜಗಳಕ್ಕೆ ನಿಂತಿದ್ದಾರೆ. ಅಕ್ರೋಶಗೊಂಡ ನಂಜುಂಡಪ್ಪ ಹಾಗೂ ಅತನ ಸಂಬಂಧಿಕರು ಗರ್ಭಿಣಿ ಕವಿತಾ ಮತ್ತು ಆಕೆಯ ತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಿಂದ ಚರಂಡಿಗೆ ಬಿದ್ದ 8 ತಿಂಗಳ ಗರ್ಭಿಣಿ ಕವಿತ ಅವರ ಹೊಟ್ಟೆಗೆ ಪೆಟ್ಟು ಬಿದ್ದಿದೆ. ಇದರಿಂದ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ. ಕೂಡಲೇ ಅಲ್ಲಿದ್ದ ಕವಿತ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲದೇ ಮಗುವನ್ನು ಕಳೆದುಕೊಂಡ ತಾಯಿ ಅಕ್ರಂದನ ಮುಗಿಲು ಮುಟ್ಟುವಂತಿತ್ತು.

    ದಾವಣಗೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹಲ್ಲೆ ನಡೆಸಿದವರ ಮೇಲೆ ಕವಿತ ಕುಟುಂಬಸ್ಥರು ದೂರು ನೀಡಲು ಮುಂದಾಗಿದ್ದಾರೆ.

  • ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಉಡುಪಿ: ಆತ ಆಕೆಯನ್ನ ಮದುವೆಯಾಗಿ ದುಡಿಮೆಗೆಂದು ವಿದೇಶಕ್ಕೆ ಹಾರಿದ್ದ. ತನ್ನ ಹೊಟ್ಟೆಯಲ್ಲೇ ಗಂಡನ ಪ್ರೀತಿ ಬೆಳೆಯುತ್ತಿದ್ದು ಆ ಮಗುವಿನಲ್ಲಿ ತನ್ನ ಗಂಡನನ್ನು ನೋಡಲು ಆಕೆ ಹಾತೊರೆಯುತ್ತಿದ್ದಳು. ಆದರೆ ರಾಕ್ಷಸ ರೂಪಿ ಗಂಡನ ಮನೆಯವರು ಆಕೆಯನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ.

    ಈಗ ಹೆಂಡತಿಗೆ ಹಿಂಸೆ ನೀಡುತ್ತಿದ್ದ ಗಂಡ, ಮಾವ, ಅತ್ತೆ ಸಹಿತ ಆರು ಮಂದಿ ಆರೋಪಿಗಳ ವಿರುದ್ಧ ಉಡುಪಿಯ ನಗರ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿದೆ. ಗಂಡನ ಮನೆಯವರ ಹಿಂಸೆ ತಾಳಲಾರದೇ ಮಹಿಳೆ ತವರು ಮನೆ ಸೇರಿದ್ದಾಳೆ.

    ಏನಿದು ಪ್ರಕರಣ?
    ಮಂಗಳೂರಿನ ಮಾರ್ನಮಿಕಟ್ಟೆ ಡೈಮಂಡ್ ಸಿಟಿ ಫ್ಲಾಟ್ ನಿವಾಸಿ ಝಿಯಾನಾ ಸಲೀಂ ಚಿಸ್ಪಿ(23) ಚಿತ್ರ ಹಿಂಸೆಗೊಳಗಾದ ಮಹಿಳೆ. 2017 ಜುಲೈ 18 ರಂದು ಝಿಯಾನಾ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ ಎಂಬಾತನೊಂದಿಗೆ ಮದುವೆಯಾಗಿತ್ತು. ಮಂಗಳೂರಿನ ಕಾಂತಿ ಚರ್ಚ್ ಸಭಾಂಗಣದಲ್ಲಿ ಮದುವೆಯಾಗಿದ್ದು, ಮದುವೆಯ ವೇಳೆ ಅವರಿಗೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕೂಡಾ ಹಾಕಿದ್ದಾರೆ.

     

    ಮದುವೆಯ ಬಳಿಕ ಗಂಡ ಹೆಂಡತಿ ಒಳ್ಳೆಯ ರೀತಿಯಲ್ಲಿದ್ದರು. ಮನೆಯವರು ಕೂಡಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿರುತ್ತಾರೆ. ಆದರೆ ಗಂಡ ಹೊರ ದೇಶಕ್ಕೆ ಹೋದ ನಂತರ ಆರೋಪಿಗಳಾದ ಮಾವ, ಅತ್ತೆ, ನಾದಿನಿ ಹಾಗೂ ಗಂಡ ಸೇರಿಕೊಂಡು ಝಿಯಾನಾ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು.

    40 ದಿನಗಳ ಗರ್ಭಿಣಿಯಾದಾಗ ಆಕೆಗೆ ತಿಳಿಯದಂತೆ ಆರೋಪಿಗಳು ವೈದ್ಯರು ಬರೆದುಕೊಟ್ಟ ಮಾತ್ರೆಯ ಜೊತೆಗೆ ಗರ್ಭಪಾತ ಮಾತ್ರೆಯನ್ನು ಸೇರಿಸಿ ಗರ್ಭಪಾತವಾಗುವಂತೆ ಮಾಡಿಸಿದ್ದಾರೆ. ಝಿಯಾನಾ ಇಷ್ಟೆಲ್ಲಾ ಆದ ಮೇಲೆ ಈಗ ಮಂಗಳೂರಿನಲ್ಲಿರುವ ಪೋಷಕರ ಮನೆಗೆ ಹೋಗಿದ್ದಾರೆ.

    ಗಂಡ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ, ತಾಹಿರಾ ಬಾನು, ಸಯೀದಾ, ಆಲಿಶಾ, ಸುನೈನಾ, ಗಫೂರ್ ಅಬ್ದುಲ್ ಜಬ್ಬರ್, ಅಜೀಜುನ್ನೀಸಾ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬುದ್ಧಿಮಾಂದ್ಯ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಗರ್ಭಿಣಿಯಾದ್ಮೇಲೆ ಹೆರಿಗೆ ಮಾಡಿಸಿ ಮಕ್ಕಳ ಮಾರಾಟ

    ಬುದ್ಧಿಮಾಂದ್ಯ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಗರ್ಭಿಣಿಯಾದ್ಮೇಲೆ ಹೆರಿಗೆ ಮಾಡಿಸಿ ಮಕ್ಕಳ ಮಾರಾಟ

    ಬೆಳಗಾವಿ: ಬುದ್ಧಿಮಾಂದ್ಯ ಹೆಣ್ಣುಮಕ್ಕಳ ಅಸಹಾಯಕತೆಯನ್ನು ಬಳಸಿಕೊಂಡು ಬಾಡಿಗೆ ಗರ್ಭದ ದಂಧೆ ನಡೆಸುತ್ತಿರೋ ಸ್ಫೋಟಕ ತನಿಖಾ ವರದಿಯನ್ನು ಪಬ್ಲಿಕ್ ಟಿವಿ ಬಯಲಿಗೆಳಿದಿದೆ. ಮಾನಸಿಕ ಅಸ್ವಸ್ಥ, ಬುದ್ಧಿಮಾಂದ್ಯ ಹದಿಹರೆಯದ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿ ನಂತರ ಜನಿಸಿದ ಹಸುಗೂಸುಗಳನ್ನು ಇವರೇ ಪಡೆದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಾರೆ.

    ಇದು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಸ್ಫೋಟಕ ಸುದ್ದಿ. ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಈ ತಾಲೂಕಿನ ಹಲವಾರು ಕಡೆ ಇಂಥ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮಾನಸಿಕ ಅಸ್ವಸ್ಥರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ಅತ್ಯಾಚಾರ ಮಾಡಿದ ಮೇಲೆ ಅಂಥ ಮಹಿಳೆ, ಯುವತಿಯರ ಮೇಲೆ ನಿಗಾ ಇಡುತ್ತಾರೆ. ಅವರು ಮನೆಯಲ್ಲಿ ಹೇಳಲು ಬುದ್ಧಿಯಿಲ್ಲದ ಕಾರಣ ಹಾಗೂ ಹೊರಜಗತ್ತಿನ ಅರಿವಿಲ್ಲದ್ದರಿಂದ ಮಕ್ಕಳಿಗೆ ಜನ್ಮ ನೀಡುತ್ತಾರೆ.

    ಮಾನಸಿಕ ಅಸ್ವಸ್ಥರು ಮಗುವಿಗೆ ಜನ್ಮ ನೀಡಿದಾಗ ಪಾಲಕರು ಮಗುವನ್ನು ಏನು ಮಾಡುವುದು ಎಂದು ಚಿಂತಿಸುತ್ತಿರುವಾಗಲೇ ಇತ್ತ ಕಾಯುತ್ತ ಕುಳಿತ ಖದೀಮರು ಅಲ್ಲಿಗೆ ಸಹಾಯ ಮಾಡುವ ನೆಪದಲ್ಲಿ ಎಂಟ್ರಿ ಕೊಡುತ್ತಾರೆ. ತಾವೇ ಆಂಬುಲೆನ್ಸ್ ಗೆ ಫೋನ್ ಮಾಡಿ ತಾಯಿ-ಮಗುವನ್ನು ಚಿಕಿತ್ಸೆ ಕೊಡಿಸುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡ್ತಾರೆ. ಈ ಮಗುವನ್ನು ನೀವು ತಗೆದುಕೊಂಡು ಹೋದರೆ ನಿಮ್ಮ ಹೆಸರು ಹಾಳಾಗುತ್ತದೆ ಎಂದು ಪಾಲಕರಿಗೆ ಹೆದರಿಸಿ, ಮಗುವನ್ನು ಇಲ್ಲಿಯೇ ಬಿಟ್ಟು ತಾಯಿಯನ್ನು ಮಾತ್ರ ಕರೆದುಕೊಂಡು ಹೋಗುವಂತೆ ಪುಸಲಾಯಿಸಿ ಅದರಲ್ಲಿ ಸಕ್ಸಸ್ ಆಗುತ್ತಾರೆ. ಮೊದಲ್ಲೇ ಮಕ್ಕಳನ್ನು ಪಡೆಯುವ ಗಿರಾಕಿಗಳನ್ನು ಗುರುತಿಸಿದ ಖದೀಮರು ಲಕ್ಷಾಂತರ ರೂಪಾಯಿಗೆ ಇಂಥ ಹಸುಗೂಸುಗಳನ್ನು ಮಾರಾಟ ಮಾಡಿಕೊಳ್ಳುತ್ತಾರೆ.

    ಪ್ರತಿಯೊಬ್ಬ ಬುದ್ಧಿಮಾಂದ್ಯ ಯುವತಿಯಿಂದ ನಾಲ್ಕೈದು ಬಾರಿ ಡೆಲಿವರಿ ಮಾಡಿಸಿದ ಭೂಪರು ಯಾವುದೇ ಕಾನೂನಿನ ಅಡೆತಡೆಯಿಲ್ಲದೆ ತಾವೇ ಬುದ್ಧಿಮಾಂದ್ಯ ಯುವತಿಯರ ಕುಟುಂಬಗಳಿಗೆ ಸಹಾಯ ಮಾಡಿದ ರೀತಿ ಪೋಸ್ ನೀಡುತ್ತಿದ್ದಾರೆ. ಒರ್ವ ಬುದ್ಧಿಮಾಂದ್ಯ ಯುವತಿಗೆ ನಾಲ್ಕು ಬಾರಿ ಡೆಲಿವರಿ ಮಾಡಿಸಿದ್ದಾರೆ.

    ನಾಗರಿಕ ಸಮಾಜ ತಲೆ ತಗ್ಗಿಸುವ ಈ ಹೇಯ ಕೃತ್ಯ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಮಂತುರ್ಗಾ, ಮಾನ, ಸಡಾ ಗ್ರಾಮಗಳಲ್ಲಿ ಕಂಡುಬಂದಿದೆ. ಇಂಥ ಅನೇಕ ಪ್ರಕರಣಗಳು ಬೆಳಗಾವಿ ಜಿಲ್ಲೆಯ ಗಡಿ ತಾಲೂಕುಗಳಾದ ಚಿಕ್ಕೋಡಿ, ಬೆಳಗಾವಿ ಗ್ರಾಮೀಣ, ಅಥಣಿ, ನಿಪ್ಪಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಗುಮಾನಿ ಇದೆ. ಈ ಖದೀಮರ ಜಾಲದ ಹಿಂದೆ ಕೆಲ ಇಲಾಖೆ ಹಾಗೂ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆ ಎಂಬ ಆರೋಪವೂ ಕೇಳಿಬಂದಿದೆ.

     

  • 3 ತಿಂಗ್ಳ ಗರ್ಭಿಣಿ ಮಗಳ ಹೊಟ್ಟೆ ಮೇಲೆ ಕಲ್ಲು ಎತ್ತಿ ಹಾಕಿದ ಪೋಷಕರು

    3 ತಿಂಗ್ಳ ಗರ್ಭಿಣಿ ಮಗಳ ಹೊಟ್ಟೆ ಮೇಲೆ ಕಲ್ಲು ಎತ್ತಿ ಹಾಕಿದ ಪೋಷಕರು

    ಚಿತ್ರದುರ್ಗ: ರಾಜ್ಯವನ್ನೇ ಬೆಚ್ಚಿಬೀಳಿಸುವ ಘನಘೋರ ಘಟನೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ. ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಮಗಳು ಅಂತಲೂ ನೋಡದೇ ಪೋಷಕರಿಂದಲೇ ಕೊಲೆ ಯತ್ನ ನಡೆದಿದೆ.

    ಪೋಷಕರೇ 3 ತಿಂಗಳ ಗರ್ಭಿಣಿ ಮಗಳ ಹೊಟ್ಟೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕೃತ್ಯ ನಡೆಸಿದ್ದಾರೆ. ಚಿತ್ರದುರ್ಗ ತಾಲೂಕು ಚಿಕ್ಕಬೆನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

    6 ತಿಂಗಳ ಹಿಂದೆ ಯುವತಿ ಆಶಾ ದಲಿತ ಯುವಕ ಮಧು ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರ ಮದುವೆಗೆ ಪೋಷರ ವಿರೋಧವಿತ್ತು. ಹೀಗಾಗಿ ಇಬ್ಬರೂ ಊರನ್ನು ಬಿಟ್ಟು ಬೇರೆ ಕಡೆ ವಾಸವಿದ್ದರು. 2-3 ದಿನಗಳ ಹಿಂದೆ ಗ್ರಾಮಕ್ಕೆ ಬಂದು ಮಧು ಅವರ ತಂದೆ ತಾಯಿಯ ಮನೆಯಲ್ಲಿದ್ದರು.

    ಶುಕ್ರವಾರ ರಾತ್ರಿ ಮಧು ಮನೆಗೆ ನುಗ್ಗಿದ ಆಶಾ ಅವರ 12ಕ್ಕೂ ಹೆಚ್ಚು ಸಂಬಂಧಿಕರು 3 ತಿಂಗಳ ಗರ್ಭಿಣಿ ಆಶಾ ಮೇಲೆ ಕಲ್ಲು ಎತ್ತಿ ಹಾಕಿ ಹಲ್ಲೆ ಮಾಡಿದ್ದಾರೆ.

    ತೀವ್ರವಾಗಿ ಗಾಯಗೊಂಡಿರುವ ಆಶಾ ಅವರನ್ನ ಭರಮಸಾಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗಳು ಎಂಬುದನ್ನೂ ನೋಡದೇ ಪೋಷಕರೇ ಹಲ್ಲೆ ಮಾಡಿರುವುದು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

    ಭರಮಸಾಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

  • ರಾಜ್ಯದಲ್ಲಿ ಖಾಸಗಿ ಆಸ್ಪತ್ರೆ ಬಂದ್: ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ ಗರ್ಭಿಣಿಯರು

    ರಾಜ್ಯದಲ್ಲಿ ಖಾಸಗಿ ಆಸ್ಪತ್ರೆ ಬಂದ್: ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ ಗರ್ಭಿಣಿಯರು

    ಬೀದರ್: ಖಾಸಗಿ ಆಸ್ಪತ್ರೆ ಬಂದ್ ಆಗಿದ್ದರಿಂದ ನೂರಾರು ಗರ್ಭಿಣಿಯರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹುಮ್ನಾಬಾದ್, ಔರಾದ್, ಭಾಲ್ಕಿ, ಬಸವಕಲ್ಯಾಣದ ದೂರದ ಹಳ್ಳಿಗಳಿಂದ ಬಂದಿದ್ದರೂ ಯಾರು ಚಿಕಿತ್ಸೆಗೆ ಸ್ಪಂದಿಸಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತು ಗರ್ಭಿಣಿಯರು ಚಿಕಿತ್ಸೆ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

    ಹೀಗಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಚಿಕಿತ್ಸೆ ಸಿಗದೆ ಇದ್ದಾಗ ನೂರಾರು ಗರ್ಭಿಣಿಯರು ಸೇರಿ ಆಸ್ಪತ್ರೆಯ ಸೂಪರ್ ಇಂಡೆಟ್ ರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡಾ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತ್ತು.

    ನಾವು ಪ್ರತಿದಿನ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದೇವೆ. ಇಂದೂ ಕೂಡಾ ಯಾವ ವೈದ್ಯರು ನಮಗೆ ಚಿಕ್ಸಿತ್ಸೆ ನೀಡುತ್ತಿಲ್ಲವಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

  • ವಿಡಿಯೋ: ಮಂಚದ ಸಮೇತ 8 ಕಿ.ಮೀ ದೂರ ಬಾಣಂತಿಯನ್ನು ಹೊತ್ತು ಸಾಗಿದ ಡಾಕ್ಟರ್

    ವಿಡಿಯೋ: ಮಂಚದ ಸಮೇತ 8 ಕಿ.ಮೀ ದೂರ ಬಾಣಂತಿಯನ್ನು ಹೊತ್ತು ಸಾಗಿದ ಡಾಕ್ಟರ್

    ಭುವನೇಶ್ವರ: ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೆ, ಸೂಕ್ತ ಚಿಕಿತ್ಸೆ ನೀಡದೆ ಅಥವಾ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳು ಬಲಿಯಾದ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ವೈದ್ಯರು ಸುಮಾರು 8 ಕಿ.ಮೀ ದೂರ ಬಾಣಂತಿಯೊಬ್ಬರನ್ನು ಮಂಚದ ಸಮೇತ ಹೊತ್ತೊಯ್ದು ಮಾದರಿಯಾಗಿದ್ದಾರೆ.

    ಈ ಘಟನೆ ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಸರಿಗೆಟಾ ಎಂಬ ಕುಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಪಾಪ್ಲುರ್ ಆಸ್ಪತ್ರೆಯಲ್ಲಿ ವೈದ್ಯರಾಗಿರೋ ಡಾ. ಓಂಕಾರ್ ಹೋಟಾ ಅವರು ಬಾಣಂತಿಯನ್ನ 8 ಕಿ.ಮೀ ದೂರದ ಗ್ರಾಮದಿಂದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

    ಸರಿಗೇಟಾ ಗ್ರಾಮದ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ತಿಳಿದ ತಕ್ಷಣ ಓಂಕಾರ್ ಅವರು ಅಟೆಂಡೆಂಟ್‍ವೊಬ್ಬರ ಜೊತೆ ಸರಿಗೆಟಾ ಗ್ರಾಮಕ್ಕೆ ದೌಡಾಯಿಸಿದ್ದರು. ಗರ್ಭಿಣಿಗೆ ಅದಾಗಲೇ ಅತಿಯಾದ ರಕ್ತಸ್ರಾವವಾಗಿದ್ದರಿಂದ ಗ್ರಾಮದಲ್ಲೇ ವೈದ್ಯರು ಆಕೆಗೆ ಹೆರಿಗೆ ಮಾಡಿಸಿದ್ರು. ಆದರೆ ಹೆರಿಗೆ ನಂತರ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿದ್ದರು. ಆದರೆ ಗ್ರಾಮಸ್ಥರು ಮಹಿಳೆಯನ್ನು ಕರೆದೊಯ್ಯಲು ನಿರಾಕರಿಸಿದ್ದರು.

    ರಸ್ತೆ ಸರಿ ಇಲ್ಲದ ಕಾರಣ ವೈದ್ಯರು ಹಾಗೂ ಕೆಲವು ಗ್ರಾಮಸ್ಥರು ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಬಾಣಂತಿಯನ್ನು ಆಸ್ಪತ್ರೆಗೆ ರವಾನಿಸಲು ನಿರ್ಧರಿಸಿದ್ದ ಡಾ. ಓಂಕಾರ್ ಹಾಗೂ ಮಹಿಳೆಯ ಪತಿ ಬಾಣಂತಿಯನ್ನು ಮಂಚದಲ್ಲಿ ಮಲಗಿಸಿಕೊಂಡು ಸುಮಾರು 8 ಕಿ.ಮೀ ದೂರದವರೆಗೆ ಕಾಲ್ನಡಿಗೆಯಲ್ಲೇ ಹೊತ್ತೊಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಈ ಮೂಲಕ ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಡಾ.ಓಂಕಾರ್ ಸಾಬೀತು ಪಡಿಸಿದ್ದಾರೆ.

    ಚಿಕಿತ್ಸೆ ಹಾಗೂ ಆರೈಕೆಯ ನಂತರ ಬಾಣಂತಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

    https://www.youtube.com/watch?v=gmOE2S5WvH4

     

     

     

     

  • ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯ- ಗರ್ಭಿಣಿಯರು, ಮಕ್ಕಳಿಗೆ ನೀಡೋ ಆಹಾರ ಪದಾರ್ಥಗಳಲ್ಲಿ ಹುಳು

    ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯ- ಗರ್ಭಿಣಿಯರು, ಮಕ್ಕಳಿಗೆ ನೀಡೋ ಆಹಾರ ಪದಾರ್ಥಗಳಲ್ಲಿ ಹುಳು

    ಹಾವೇರಿ: ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅನ್ನೋ ಗಾದೆ ಮಾತಿದೆ. ಅದಕ್ಕೆ ತಕ್ಕಂತೆ ಇದೆ ಈ ಸ್ಟೋರಿ. ಬಡ ಗರ್ಭಿಣಿಯರಿಗೆ, ಮಕ್ಕಳಿಗೆ ಎಂದು ಸರ್ಕಾರವೇನೋ ಪೌಷ್ಠಿಕ ಆಹಾರ ನೀಡುವ ಯೋಜನೆ ತಂದಿದೆ. ಆದರೆ ಆ ಆಹಾರವೆಲ್ಲಾ ಈಗ ಹುಳು ಹಿಡಿದಿದೆ.

    ಬೂಸ್ಟ್ ಹಿಡಿದಿರೋ ಶೇಂಗಾ, ಹುಳುಗಳೇ ತುಂಬಿರೋ ರವೆ, ಹಾಳಾಗಿರೋ ಬೆಲ್ಲ, ಹಾಲಿನ ಪುಡಿ. ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಡಲ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಪ್ಲಾಟ್, ಅಗಡಿ ಮರಳೀಹಳ್ಳಿ ಗ್ರಾಮಗಳಲ್ಲಿ.

    ಗರ್ಭಿಣಿಯರು ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಈ ಸಾಮಗ್ರಿಗಳನ್ನು ನೀಡುತ್ತದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಆಹಾರ ಪದಾರ್ಥಗಳು ಹುಳು ಹಿಡಿದು ಹೋಗುತ್ತಿದೆ. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಮಾಲತೇಶ ಸೊಪ್ಪಿನ ಅನ್ನೋರು ಆಹಾರ ಪದಾರ್ಥಗಳು ಕೊಳೆಯುತ್ತಿರೋದನ್ನು ಪ್ರದರ್ಶಿಸಿದರು.

    ಅಂಗನವಾಡಿಗಳಲ್ಲಿ ಆಹಾರ ಪದಾರ್ಥಗಳು ಹಾಳಾಗಿರೋದು ಮಾಧ್ಯಮಗಳ ಮೂಲಕ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಒಟ್ನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಹಾಗೆ, ಸರ್ಕಾರ ಕೊಟ್ಟರೂ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬಡ ಗರ್ಭಿಣಿಯರು, ಮಕ್ಕಳ ಹೊಟ್ಟೆ ಸೇರಬೇಕಾದ ಆಹಾರ ಪದಾರ್ಥ ಹುಳುಗಳ ಪಾಲಾಗಿರೋದು ದುರಂತವೇ ಸರಿ.

  • ಹೆಡ್ ಮಾಸ್ಟರ್ ನಿಂದ್ಲೇ ರೇಪ್- ಗರ್ಭಿಣಿಯಾಗಿದ್ದಕ್ಕೆ ಗ್ರಾಮದಿಂದಲೇ ಬಾಲಕಿ ಕುಟುಂಬಕ್ಕೆ ಬಹಿಷ್ಕಾರ

    ಹೆಡ್ ಮಾಸ್ಟರ್ ನಿಂದ್ಲೇ ರೇಪ್- ಗರ್ಭಿಣಿಯಾಗಿದ್ದಕ್ಕೆ ಗ್ರಾಮದಿಂದಲೇ ಬಾಲಕಿ ಕುಟುಂಬಕ್ಕೆ ಬಹಿಷ್ಕಾರ

    ಭುವನೇಶ್ವರ್: ಮೂರು ವಾರಗಳ ಹಿಂದೆ ಶಾಲೆಯ ಮುಖ್ಯೋಪಾದ್ಯಾಯನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿ ಮಾಡಿ ಜೈಲಿಗೆ ಹೋದ ಘಟನೆ ಒಡಿಶಾದ ಕೊರತ್ ಪುತ್ ಜಿಲ್ಲೆಯಲ್ಲಿ ನಡೆದಿದೆ.

    ಮದುವೆಯ ಮುಂಚೆ ಬಾಲಕಿ ಗರ್ಭವತಿ ಆಗಿರುವ ವಿಷಯ ತಿಳಿದು ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಅಕ್ಟೋಬರ್ ತಿಂಗಳ ಮೊದಲು ಕೊರತ್ ಪುತ್ ಜಿಲ್ಲೆಯ ನಂದಾಪುರ್ ಬ್ಲಾಕ್ ನ ಬಾಲ್ದಾ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಾಯ 9ನೇ ತರಗತಿಯ ಬಾಲಕಿಯನ್ನು ಅತ್ಯಾಚಾರ ಮಾಡಿ ಅವಳನ್ನು ಗರ್ಭವತಿ ಮಾಡಿಸಿದ್ದಕ್ಕೆ ಆತನನ್ನು ಬಂಧಿಸಿದ್ದರು.

    ದೈಹಿಕವಾಗಿ ನನ್ನ ಜೊತೆ ನೀನು ಸಂಬಂಧವಿಟ್ಟುಕೊಳ್ಳಬೇಕು ಎಂದು ಬಾಲಕಿಗೆ ಕಿರುಕುಳ ನೀಡುತ್ತಿದ್ದನು. ಈ ವಿಷಯ ತಿಳಿದ ಬಾಲಕಿಯ ತಂದೆ ಮುಖ್ಯೋಪಾದ್ಯಾಯ ಬಿದುಬೂಷಣ್ ನಾಯಕ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

    5 ತಿಂಗಳು ಗರ್ಭಿಣಿ ಆಗಿದ್ದ ಬಾಲಕಿಯನ್ನು ಪೋಷಕರು ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದರು. ಬಾಲಕಿಯ ಆರೋಗ್ಯದ ಬಗ್ಗೆ ಪೋಷಕರು ಚಿಂತಿಸುತ್ತಿರುವಾಗಲೇ, ಇತ್ತ ಮದುವೆಗೆ ಮೊದಲೇ ಬಾಲಕಿ ಗರ್ಭವತಿ ಆಗಿರುವುದಕ್ಕೆ ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಮತ್ತು ಸಮುದಾಯದ ದಂಡ ಕಟ್ಟಲು ಹೇಳಿದ್ದಾರೆ.

    ನಾನು ಒಬ್ಬ ಕೂಲಿ ಕಾರ್ಮಿಕ. ಸಮುದಾಯದ ದಂಡ ಸುಮಾರು ರೂ. 30,000 ಇರುತ್ತದೆ. ನಾನು ಅಷ್ಟು ದೊಡ್ಡ ಮೊತ್ತ ಹೇಗೆ ಕೊಡಲಿ. ನನ್ನ ಮಗಳ ಆರೋಗ್ಯ ತಪಾಸಣೆಗೆ ನನಗೆ ದುಡ್ಡು ಬೇಕಾಗಿದೆ ಎಂದು ಬಾಲಕಿಯ ತಂದೆ ಮಾಧ್ಯಮದ ಮುಂದೆ ತಮ್ಮ ಅಳಲುತೋಡಿಕೊಂಡಿದ್ದಾರೆ.

    ಈ ಸಂಬಂಧದ ಬಗ್ಗೆ ಮಾತನಾಡಿದ ಕೊರತ್ ಪುತ್ ಜಿಲ್ಲಾ ಆಡಳಿತದ ಅಧಿಕಾರಿಯಾದ ಜಗನ್ನಾಥ್ ಸೋರೆನ್, ಬಾಲಕಿಯ ಕುಟುಂಬದವರಿಗೆ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ.