Tag: Pregnant

  • ಗರ್ಭಿಣಿ ರಾಧಿಕೆಗೆ ಸರ್ಪ್ರೈಸ್ ನೀಡಿದ ಗೆಳತಿಯರು

    ಗರ್ಭಿಣಿ ರಾಧಿಕೆಗೆ ಸರ್ಪ್ರೈಸ್ ನೀಡಿದ ಗೆಳತಿಯರು

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮಡದಿ, ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಅವರಿಗೆ ಗೆಳತಿಯರಾದ ಪ್ರತಿಭಾ ಸುರೇಶ್, ಸಾನಿಯಾ ಸರ್ದರಿಯಾ ಮತ್ತು ವನಿತಾ ಉಮೇಶ್ ಮೂವರು ಸರ್ಪ್ರೈಸ್ ನೀಡಿದ್ದಾರೆ.

    ಗರ್ಭಿಣಿಗೆ ಸಾಮಾನ್ಯವಾಗಿ ಬಗೆ ಬಗೆಯ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ. ಗರ್ಭಿಣಿ ರಾಧಿಕೆಯ ಬಯಕೆಯನ್ನ ಅರಿತ ಗೆಳತಿಯರು ವಿವಿಧ ಭಕ್ಷ್ಯ, ಭೋಜನ ಸಿದ್ಧಪಡಿಸಿ ರಾಮಾಚಾರಿ ಮಡದಿಗೆ ನೀಡಿದ್ದಾರೆ. ಗೆಳತಿಯರು ತನಗಾಗಿ ಸಿದ್ಧಪಡಿಸಿ ತಂದ ಆಹಾರ ಪದಾರ್ಥ ನೋಡಿದ ಮೊಗ್ಗಿನ ಚೆಲುವೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಫೋಟೋದಲ್ಲಿ ಮೂವರು ಗೆಳತಿಯರೊಂದಿಗೆ ರಾಧಿಕಾರ ತಾಯಿ ಮತ್ತು ಬಗೆಗೆ ತಿಂಡಿ, ಸಿಹಿ ಪದಾರ್ಥಗಳನ್ನು ಕಾಣಬಹುದಾಗಿದೆ. ನನ್ನ ಆಪ್ತ ಗೆಳತಿಯರು ನನಗಾಗಿ ಪ್ರೀತಿಯಿಂದ ಮಾಡಿಕೊಂಡ ಬಂದ ಅಡುಗೆ ಎಂಬ ಸಾಲುಗಳನ್ನು ಬರೆದು, ಮೂವರಿಗೂ ಟ್ಯಾಗ್ ಮಾಡಿದ್ದಾರೆ.

    ಈ ಹಿಂದೆ ರಾಧಿಕಾ ಖುದ್ದು ತಾವೇ ಆಹಾರ ಸೇವಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. ನಂತರ ಬೇಬಿ ಮೂನ್ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ತಾವು ಗರ್ಭಿಣಿಯಾಗಿದ್ದರೂ, ‘ಆದಿ ಲಕ್ಷ್ಮಿ ಪುರಾಣ’ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಡು ಹೇಳಲು ಬಂದ 7 ತಿಂಗ್ಳ ಗರ್ಭಿಣಿ – ವೇದಿಕೆಯಲ್ಲೇ ಸೀಮಂತ

    ಹಾಡು ಹೇಳಲು ಬಂದ 7 ತಿಂಗ್ಳ ಗರ್ಭಿಣಿ – ವೇದಿಕೆಯಲ್ಲೇ ಸೀಮಂತ

    ಬೆಂಗಳೂರು: ಹಾಡು ಹಾಡಲು ಏಳು ತಿಂಗಳ ಗರ್ಭಿಣಿ ಆಗಮಿಸಿದ್ದು, ಅವರಿಗೆ ವೇದಿಕೆಯ ಮೇಲೆಯೇ ಸೀಮಂತ ಮಾಡಿರುವ ಅಪರೂಪದ ಘಟನೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಕಾರ್ಯಕ್ರಮದಲ್ಲಿ ನಡೆದಿದೆ.

    ಭಾನುವಾರ ‘ಸರಿಗಮಪ ಸೀಸನ್ 15’ ರ ಮೆಗಾ ಆಡಿಷನ್ ಪ್ರಸಾರವಾಗಿತ್ತು. ಈ ಆಡಿಷನ್ ನಲ್ಲಿ 7 ತಿಂಗಳ ಗರ್ಭಿಣಿ ಸಂಧ್ಯಾ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಮೊದಲ ಬಾರಿ ಈ ಕಾರ್ಯಕ್ರಮದಲ್ಲಿ ಗರ್ಭಿಣಿ ಬಂದು ಹಾಡು ಹಾಡಿದ್ದಾರೆ. ಗರ್ಭಿಣಿ ಸಂಧ್ಯಾ ಅವರ ಆತ್ಮಸ್ಥೈರ್ಯ ನೋಡಿ ಎಲ್ಲರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

    ಸಂಧ್ಯಾ ಅವರು ಮೊದಲ ಆಡಿಷನ್ ನಲ್ಲಿ ಆಯ್ಕೆಯಾಗಿದ್ದರು. ಮೆಗಾ ಆಡಿಷನ್ ನಲ್ಲಿ ಸಂಧ್ಯಾ ‘ನಮ್ಮೂರ ಮಂದಾರ ಹೂವೆ’ ಸಿನಿಮಾದ ‘ಓಂಕಾರದಿ’ ಹಾಡನ್ನು ಹಾಡಿದ್ದಾರೆ. ನಂತರ ತುಂಬು ಗರ್ಭಿಣಿ ಸಂಧ್ಯಾ ಅವರಿಗೆ ವಾಹಿನಿ ಕಡೆಯಿಂದ ಸೀಮಂತ ಮಾಡಲಾಗಿದೆ.

    ”ಸರಿಗಮಪದ ಶೋದ ಎಲ್ಲ ಎಪಿಸೋಡ್ ಗಳನ್ನು ನೋಡು, ಕೇಳಿ ಆನಂದಪಡು. ಅದನ್ನು ನಿನ್ನ ಮಗುವಿಗೆ ಧಾರೆ ಏರಿ. ದೇವಭಾಷೆಯನ್ನು ಅನುವಾದಿಸಿ ಕರ್ನಾಟಕಕ್ಕೆ ಕೊಡು. ಆಲ್ ದಿ ಬೆಸ್ಟ್” ಎಂದು ಮಹಾಗುರುಗಳಾದ ಹಂಸಲೇಖ ಅವರು ಹೇಳಿ ಹಾರೈಸಿದ್ದಾರೆ.

    “ಒಂದು ಗಾಯನದ ದೃಷ್ಟಿಕೋನದಿಂದ ನೋಡಿದರೆ ಇನ್ನು ಸ್ವಲ್ಪ ಸಾಧನೆ ಬೇಕು. ಆದರೆ ಹಾಡಿಗಿಂತ ಬಹು ಮುಖ್ಯವಾದ ಕೆಲಸವನ್ನು ಭಗವಂತ ನಿಮಗೆ ನೀಡಿದ್ದಾನೆ. ನಿಮಗೆ ಆಯಸ್ಸು, ಆರೋಗ್ಯ ಎಲ್ಲವನ್ನು ದೇವರು ನೀಡಲಿ ಅಂತ ಕೇಳಿಕೊಳ್ಳುತ್ತೇನೆ” ಎಂದು ವಿಜಯ್ ಪ್ರಕಾಶ್ ಶುಭಾಶಯವನ್ನು ತಿಳಿಸಿದ್ದಾರೆ. ಇನ್ನು ಅರ್ಜುನ್ ಜನ್ಯ ಅವರು ನಿಮ್ಮ ಜೊತೆಗೆ ನಿಮ್ಮ ಮಗು ಕೂಡ ವೇದಿಕೆ ಮೇಲೆ ಬಂದಿದೆ. ಅದು ತುಂಬ ದೊಡ್ಡ ವಿಷಯ ಎಂದಿದ್ದಾರೆ.

    ನಿಮ್ಮ ಹಾಡು ಕೇಳಿ ನನಗೆ ನಮ್ಮ ತಾಯಿ ನೆನಪಾದರು. ನಾನು ನಮ್ಮ ತಾಯಿಯ ಹೊಟ್ಟೆಯಲ್ಲಿ ಇದ್ದಾಗ ಎಂಟು ತಿಂಗಳವರೆಗೆ ಅವರು ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಆ ನೆನಪು ನನಗೆ ಮೂಡುವಂತೆ ಮಾಡಿದ್ದೀರಾ. ನಿಮ್ಮ ಉತ್ಸಾಹವನ್ನು ಮೆಚ್ಚಬೇಕು ಎಂದು ರಾಜೇಶ್ ಕೃಷ್ಣನ್ ಅವರು ಹೇಳಿದ್ದಾರೆ.

    ಸಂಧ್ಯಾ ಅವರು ಮೆಗಾ ಆಡಿಷನ್ ನಲ್ಲಿ ಆಯ್ಕೆ ಆಗಲಿಲ್ಲ. ವೇದಿಕೆಯ ಮೇಲೆ ಪತ್ನಿಯ ಸೀಮಂತ ಮಾಡಿದಕ್ಕೆ ಅವರ ಪತಿ ವಿಷ್ಣು ಕೂಡ ಸಂತಸ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರ್ತವ್ಯದ ನಡುವೆ ಗರ್ಭಿಣಿಗೆ ಪೇದೆಯಿಂದ ರಕ್ತದಾನ!

    ಕರ್ತವ್ಯದ ನಡುವೆ ಗರ್ಭಿಣಿಗೆ ಪೇದೆಯಿಂದ ರಕ್ತದಾನ!

    ಹಾವೇರಿ: ಕರ್ತವ್ಯದ ನಡುವೆಯೂ ಟ್ರಾಫಿಕ್ ಪೊಲೀಸ್ ಪೇದೆಯೊರ್ವರು ಗರ್ಭಿಣಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಆಟೋ ಚಾಲಕ ನಾಗರಾಜ ಅವರ ಸಂಬಂಧಿ ಲಕ್ಷ್ಮಿ ಬರಡಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆ ವೇಳೆ ಲಕ್ಷ್ಮಿಗೆ ರಕ್ತಸ್ರಾವವಾಗಿ ಬಿ ಪಾಸಿಟಿವ್ ಗುಂಪಿನ ರಕ್ತ ಬೇಕಾಗಿತ್ತು. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಪೇದೆ ಮನೋಜ್ ದೇಸಾಯಿ, ವಿಷಯ ತಿಳಿದು ತಾವೇ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

    ಹಾವೇರಿ ರಕ್ತಭಂಡಾರ ಸಂಸ್ಥೆ ಲಕ್ಷ್ಮಿಗೆ ಬಿ ಪಾಸಿಟಿವ್ ರಕ್ತ ಒದಗಿಸಿದೆ. ಬಳಿಕ ಸಂಸ್ಥೆಯಲ್ಲಿ ರಕ್ತ ಸ್ಟಾಕ್ ಇಲ್ಲದ ವೇಳೆ ಪೇದೆ ಮನೋಜ್ ರಕ್ತದಾನದ ಮಾಡುವ ಮೂಲಕ ಬಾಣಂತಿ ಜೀವ ಉಳಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದಾವಣಗೆರೆಯ ಹರಪ್ಪನಹಳ್ಳಿ ಸಿಪಿಐ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ನೋಡಿ ತಮ್ಮ ವಾಹನದಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಕಚ್ಚಿದ ಮಹಿಳೆ

    ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಕಚ್ಚಿದ ಮಹಿಳೆ

    ಬೆಂಗಳೂರು: ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಮಹಿಳೆಯೊಬ್ಬಳು ರಕ್ತ ಬರುವ ಹಾಗೆ ಕಚ್ಚಿರುವ ಪ್ರಕರಣವೊಂದು ಬೆಂಗಳೂರಿನ ರಾಜಾನುಕುಂಟೆಯಲ್ಲಿ ನಡೆದಿದೆ.

    ಅನಿತಾ(50) ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಕಚ್ಚಿದ ಮಹಿಳೆ. ಅನಿತಾ ತುಂಬು ಗರ್ಭೀಣಿ ಜಯದೇವಿ(29)ಯನ್ನು ಬಾಯಿಂದ ಕಚ್ಚಿ ಗಂಭೀರ ಗಾಯಗೊಳಿಸಿದ್ದಾಳೆ. ಇದನ್ನು ತಡೆಯಲು ಬಂದ ಜಯದೇವಿ ತಂಗಿ ಅನಿತಾ ಮಡಿವಾಳಗೂ ಆಕೆ ಕಚ್ಚಿ ಗಾಯಗೊಳಿಸಿದ್ದಾಳೆ.

    ನೀರಿಗಾಗಿ ಮಹಿಳೆಯೊಬ್ಬಳು ರಕ್ತ ಬರುವ ಹಾಗೆ ಕಚ್ಚಿ ಇಬ್ಬರು ಸಹೋದರಿಯರನ್ನು ಗಾಯಗೊಳಿಸಿದ್ದು, ಗಾಯಾಳುಗಳು ರಾಜಾನುಕುಂಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ರಾಜಾನುಕುಂಟೆಯಲ್ಲಿ ಈ ನೀರಿನ ಜಗಳ ನಡೆದಿದೆ.

    ಅನಿತಾ ಮತ್ತು ಆಕೆಯ ಇಬ್ಬರು ಮಕ್ಕಳು ನ್ಯಾಯ ಕೇಳಲು ಬಂದ ಗರ್ಭಿಣಿಯ ಯಜಮಾನ ಶಂಕರ್ ಅವರ ಮೇಲು ಹಲ್ಲೆ ನಡೆಸಿದ್ದಾರೆ. ಶಂಕರ್ ದಂಪತಿ ಸಿಂಗನಾಯಕನಹಳ್ಳಿಯ ರಾಜಣ್ಣ ಅವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಾರೆ. ಪಕ್ಕದ ಮನೆಯವಳಾದ ಅನಿತಾ ಜಗಳ ತೆಗೆದಿದ್ದನ್ನು ಶಂಕರ್ ಪ್ರಶ್ನಿಸಿದ್ದಾರೆ.

    ಈ ಸಂಬಂಧ ಶಂಕರ್ ತನ್ನ ಪತ್ನಿ, ನಾದಿನಿ ಮತ್ತು ತನ್ನ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ರಾಜಾನುಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದಾವಣಗೆರೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಧನದಾಹಕ್ಕಿಲ್ಲ ಕೊನೆ- ದುಡ್ಡು ಕೊಡದಿದ್ರೆ ಬಾಣಂತಿಯರಿಗಿಲ್ಲ ಹಾಸಿಗೆ

    ದಾವಣಗೆರೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಧನದಾಹಕ್ಕಿಲ್ಲ ಕೊನೆ- ದುಡ್ಡು ಕೊಡದಿದ್ರೆ ಬಾಣಂತಿಯರಿಗಿಲ್ಲ ಹಾಸಿಗೆ

    ದಾವಣಗೆರೆ: ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಜೀವಾಂಮೃತವಿದ್ದಂತೆ. ಅಲ್ಲಿ ಹೋದ್ರೆ ನಮಗೆ ಒಳಿತು ಆಗುತ್ತೆ ಎಂಬ ನಂಬಿಕೆ ಅಲ್ಲಿಗೆ ಬಂದಂತಹ ರೋಗಿಗಳದ್ದು, ಜಿಲ್ಲೆಯ ಆಸ್ಪತ್ರೆಯಲ್ಲಿ ರೋಗಿಗಳನ್ನ ನಾಯಿಗಳಿಗಿಂತಲು ಕೀಳಾಗಿ ಕಾಣುತ್ತಾರೆ. ಅಲ್ಲದೆ ಅವರಿಗೆ ಯಾವುದೇ ಸವಲತ್ತು ನೀಡದೆ ಬದುಕಿರುವಾಗಲೆ ನರಕ ತೋರಿಸುತ್ತಾರೆ.

    ಹೌದು. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಯಿಂದ ಹೊರಬಂದು ಮಲಗಿದ ಗರ್ಭಿಣಿ, ಇನ್ನೊಂದೆಡೆ ಬಾಣಂತಿಯರು ತಮ್ಮ ಹಸುಗೂಸನ್ನ ತೊಡೆಮೇಲೆ ಮಲಗಿಸಿಕೊಂಡು ನೆಲದ ಮೇಲೆ ಕುಳಿತಿರುತ್ತಾರೆ. ಈಗಾಗಲೇ ಹಲವು ಅವಾಂತರಗಳಿಂದ ಕುಖ್ಯಾತಿ ಗಳಿಸಿದ್ದ ಈ ಆಸ್ಪತ್ರೆ ಇದೀಗ ಪುನಃ ತನ್ನ ಎಡವಟ್ಟಿನಿಂದ ಸುದ್ದಿಯಾಗಿದೆ. ಆಸ್ಪತ್ರೆಗೆ ಬರೋ ಗರ್ಭಿಣಿಯರಿಗೆ, ಬಾಣಂತಿಯರಿಗೆ ದುಡ್ಡು ಕೊಟ್ರೆ ಮಾತ್ರವೇ ಬೆಡ್ ಕೊಡಲಾಗ್ತಿದೆ. ಹಣ ಕೊಡದಿದ್ರೆ, ಹೆರಿಗೆಯಾದ ಬಾಣಂತಿಯರಿಗೆ ಯಾವುದೇ ಸೌಲಭ್ಯ ನೀಡದೇ ಹೀನಾಯವಾಗಿ ಕಾಣ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಆಸ್ಪತ್ರೆಯಿಂದಲೇ ಹೊರಹಾಕ್ತಾರೆ ಅಂತ ಯುವ ಶಕ್ತಿ ವೇದಿಕೆಯ ರಾಜು ಆರೋಪಿಸಿದ್ದಾರೆ.

    ಈ ಬಗ್ಗೆ ಗರ್ಭಿಣಿಯರು ಹಿರಿಯ ವೈದ್ಯಾಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಬೆಡ್ ಬೇಕಾದ್ರೆ ದುಡ್ಡು ಕೊಡ್ಬೇಕು. ಇಲ್ಲವಾದ್ರೆ ನೆಲದ ಮೇಲೆಯೇ ಚಿಕಿತ್ಸೆಪಡೀಬೇಕಾದ ಪರಿಸ್ಥಿತಿ ರೋಗಿಗಳದ್ದಾಗಿದೆ.

    ಒಟ್ಟಿನಲ್ಲಿ ಬಡವರಿಗೆ ಅನುಕೂಲವಾಗಲಿ ಅಂತ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿದ್ರೆ, ಈ ವೈದ್ಯರು ಮತ್ತು ಸಿಬ್ಬಂದಿ ತಮ್ಮದೇ ಆಸ್ಪತ್ರೆ ಎನ್ನುವಂತೆ ದುರಂಹಕಾರ ತೋರಿಸ್ತಿದ್ದಾರೆ. ಇನ್ನಾದ್ರೂ ಈ ಧನದಾಹಿ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ತಾರಾ ಅಂತ ಕಾದು ನೋಡ್ಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಂಪತಿಯಿಂದ ಗರ್ಭಿಣಿ ಕೊಲೆ- ಚಿನ್ನ, ದುಬಾರಿ ಡ್ರೆಸ್ ಕದ್ದು ಅದೇ ಸೂಟ್‍ಕೇಸ್‍ನಲ್ಲಿ ಶವ ತುಂಬಿ ಬಿಸಾಕಿದ್ರು!

    ದಂಪತಿಯಿಂದ ಗರ್ಭಿಣಿ ಕೊಲೆ- ಚಿನ್ನ, ದುಬಾರಿ ಡ್ರೆಸ್ ಕದ್ದು ಅದೇ ಸೂಟ್‍ಕೇಸ್‍ನಲ್ಲಿ ಶವ ತುಂಬಿ ಬಿಸಾಕಿದ್ರು!

    ನೊಯ್ಡಾ: ಗರ್ಭಿಣಿಯನ್ನು ಕೊಲೆಗೈದು ಚಿನ್ನಾಭರಣ ಹಾಗೂ ದುಬಾರಿ ಬೆಲೆಯ ಬಟ್ಟೆಗಳನ್ನು ಕದ್ದು, ಅದೇ ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿಸಿ ಎಸೆದ ಅಮಾನವೀಯ ಘಟನೆಯೊಂದು ಗಾಜಿಯಾಬಾದ್ ನಲ್ಲಿ ನಡೆದಿದೆ.

    ಮೃತ ದುರ್ದೈವಿ ಮಹಿಳೆಯನ್ನು ಮಾಲಾ ಎನ್ನಲಾಗಿದ್ದು ಈಕೆಯನ್ನು ಪಕ್ಕದಲ್ಲೇ ನೆಲೆಸಿದ್ದ ಸೌರಭ್ ದಿವಾಕರ್ ಹಾಗೂ ರಿತು ಕೊಲೆ ಮಾಡಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಅಂತ ಗೌತಮ್ ಬುದ್ದ ನಗರದ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ.

    ಘಟನೆ ವಿವರ:
    ಕಳೆದ ಗುರುವಾರ ಮೃತ ಮಹಿಳೆ ನೆಲೆಸಿದ್ದ ಬಾಡಿಗೆ ಮನೆಗೆ ಆಕೆಯ ಸಂಬಂಧಿಕರು ಬಂದಿದ್ದರು. ಈ ವೇಳೆ ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರಿಂದ ಮಾಲಾ ತನ್ನ ಬಳಿಯಿದ್ದ ಚಿನ್ನ ಹಾಗೂ ದುಬಾರಿ ಬೆಲೆಯ ಉಡುಪುಗಳನ್ನು ತೋರಿಸಿದ್ದಾರೆ. ಇವೆಲ್ಲವೂ ಪಕ್ಕದ ಮನೆಯಲ್ಲಿದ್ದ ರಿತು ಅವರ ಕಣ್ಣಿಗೂ ಬಿದ್ದಿದೆ. ಆರೋಪಿ ರಿತು ಮನೆಗೆ ಹಿಂದುರುಗಿ ತನ್ನ ಗಂಡ ಸೌರಭ್ ಜೊತೆ ಮಾಲಾ ಬಳಿ ಚಿನ್ನಾಭರಣ ಹಾಗೂ ದುಬಾರಿ ಬೆಲೆಯ ಉಡುಪುಗಳು ಇರುವ ಬಗ್ಗೆ ಹೇಳಿದ್ದಾಳೆ. ಅಲ್ಲದೇ ಮರುದಿನ ಮಾಲಾ ಪತಿ ಶಿವಂ ಕೆಲಸಕ್ಕೆ ಹೋದ ಬಳಿಕ ತನ್ನ ಮನೆಗೆ ಮಾಲಾರನ್ನು ಕರೆಸಿಕೊಂಡಿದ್ದಾಳೆ ಅಂತ ಶರ್ಮಾ ವಿವರಿಸಿದ್ದಾರೆ.

    ಮನೆಗೆ ಕರೆಸಿಕೊಂಡ ಬಳಿಕ ದಂಪತಿ ಮಾಲಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಾಲಾ ಮದುವೆ ಬಳಿಕ ಚಿನ್ನಾಭರಣ ಹಾಗೂ ಬಟ್ಟೆಗಳನ್ನು ಇಡುತ್ತಿದ್ದ ಸೂಟ್ ಕೇಸ್‍ನಲ್ಲಿ ಮಾಲಾ ಶವವನ್ನು ತುಂಬಿಸಿದ್ದಾರೆ. ಈ ಮೊದಲು ಮಾಲಾ ಅವರ ಸೂಟ್ ಕೇಸ್ ನಲ್ಲಿದ್ದ ಎಲ್ಲಾ ವಸ್ತುಗಳನ್ನು ಹಾಗೂ ಮೊಬೈಲನ್ನು ತೆಗೆದಿಟ್ಟುಕೊಂಡಿದ್ದಾರೆ. ಈ ಎಲ್ಲಾ ಕೃತ್ಯಗಳ ಬಳಿಕ ಅಂದರೆ 9 ಗಂಟೆಯ ನಂತರ ದಂಪತಿ ಶವ ತುಂಬಿದ ಸೂಟ್ ಕೇಸ್ ನ್ನು ತೆಗೆದುಕೊಂಡು ಗಾಜಿಯಾಬಾದ್ ಗೆ ಹೋಗುತ್ತಾರೆ. ಅಲ್ಲಿಂದ ಇಬ್ಬರು ಸೋದರಮಾವನ ಬಳಿಗೆ ಹೋಗುತ್ತಾರೆ. ಹೀಗೆ ಹೋಗುವಾಗ ಇಂದಿರಾಪುರಂ ಎಂಬ ಪ್ರದೇಶದಲ್ಲಿ ತಮ್ಮ ಕೈಲಿದ್ದ ಸೂಟ್ ಕೇಸನ್ನು ಎಸೆದಿದ್ದಾರೆ.

    ಇತ್ತ ಮಾಲಾ ಕಾಣೆಯಾಗಿರುವ ಬಗ್ಗೆ ಬಿಸ್ರಾಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ನಾಪತ್ತೆ ಪ್ರಕರಣ ದಾಖಲಾದಂತೆ ಗಾಜಿಯಾ ಬಾದ್ ನಲ್ಲಿ ಸೂಟ್ ಕೇಸ್ ಒಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿರುವುದು ಪೊಲೀಸರಿಗೆ ಮಾಹಿತಿ ದೊರೆಯುತ್ತದೆ. ಹೀಗಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದಾಗ ಮಾಲಾ ಶವ ಇರುವುದಾಗಿ ಶಂಕೆ ವ್ಯಕ್ತಪಡಿಸುತ್ತಾರೆ. ಈ ಮಧ್ಯೆ ಮಾಲಾ ಸಂಬಂಧಿಕರು ವರದಕ್ಷಿಣೆಗೋಸ್ಕರ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ಪ್ರಕರಣ ಸಂಬಂಧ ತನಿಖೆ ನಡೆಸಿದಾಗ, ಮಾಲಾ ಪತಿ ಶಿವಂ ಕೆಲಸಕ್ಕೆ ತೆರಳಿದ ಬಳಿಕ ಕೊಲೆ ಮಾಡಿರುವುದು ಬೆಳಕಿಗೆ ಬರುತ್ತದೆ. ಅಲ್ಲದೇ ಘಟನೆ ನಡೆದ ಬಳಿಕ ಪಕ್ಕದ ಮನೆ ನಿವಾಸಿಗಳಾದ ರೀತು, ಸೌರಭ್ ಮನೆಗೆ ವಾಪಸ್ಸಾಗಿಲ್ಲ. ಇದು ದಂಪತಿ ಮೇಲೆ ಮತ್ತುಷ್ಟು ಸಂಶಯ ಮೂಡಲು ಕಾರಣವಾಯಿತು. ಬಳಿಕ ದಂಪತಿಯನ್ನು ಪೊಲೀಸರು ಬಂಧಿಸಿದಾಗ ಚಿನ್ನಾಭರಣ, ಡ್ರೆಸ್ ಹಾಗೂ ಮೊಬೈಲ್ ಫೋನ್ ಕದ್ದಿರುವುದು ಬೆಳಕಿಗೆ ಬಂದಿದೆ ಅಂತ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ. ಆದ್ರೆ ಕೊಲೆಯಾದ ಮಾಲಾ ಗರ್ಭಿಣಿ ಅಂತ ಹೇಳಲಾಗಿದ್ದು, ಎಷ್ಟು ತಿಂಗಳಾಗಿತ್ತು ಎಂಬುದರ ಬಗ್ಗೆ ವರದಿಯಾಗಿಲ್ಲ.

    ಸದ್ಯ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 201(ಸಾಕ್ಷಿ ನಾಶ), 316, 394(ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಅಂತ ಶರ್ಮಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾನು ಗರ್ಭಿಣಿ ಅಲ್ಲ ಎಂದು ಹೇಳಲು ಟಾಪ್‍ಲೆಸ್ ಫೋಟೋ ಪೋಸ್ಟ್

    ತಾನು ಗರ್ಭಿಣಿ ಅಲ್ಲ ಎಂದು ಹೇಳಲು ಟಾಪ್‍ಲೆಸ್ ಫೋಟೋ ಪೋಸ್ಟ್

    ಹೈದರಾಬಾದ್: ನಟಿ ಸಲೋನಿ ಚೋಪ್ರಾ ತಾನು ಗರ್ಭಿಣಿ ಅಲ್ಲ ಎಂದು ಸಾಬೀತುಪಡಿಸಲು ತನ್ನ ಟಾಪ್‍ಲೆಸ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ಸಲೋನಿ ಚೋಪ್ರಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ತಮ್ಮ ಅರೆನಗ್ನ ಫೋಟೋಗಳನ್ನ ಹಾಕಿ ಎಲ್ಲರನ್ನ ಅಚ್ಚರಿಗೊಳಿಸಿದ್ದಾರೆ. ಸದ್ಯಕ್ಕೆ ಸಲೋನಿ ಬೆಲ್ಜಿಯಂ ಪ್ರವಾಸದಲ್ಲಿದ್ದಾರೆ.

    ಸಲೋನಿ ಚೋಪ್ರಾ ಅವರು ಗರ್ಭಿಣಿ ಎಂದು ಚರ್ಚೆಯಾಗಿಲ್ಲ. ಆದರೆ ವೈಯಕ್ತಿಕವಾಗಿ ಸುದ್ದಿಯಾಗಿರಬಹುದು. ಆದ್ದರಿಂದ ಟಾಪ್ ಲೆಸ್ ಫೋಟೋವನ್ನ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕುವ ಮೂಲಕ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    “ನಾನು ಗರ್ಭಿಣಿ ಅಲ್ಲ. ನಾನು ಗರ್ಭಿಣಿ ಎಂಬ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಇದು ನನ್ನ ವೈಯಕ್ತಿಕ ವಿಚಾರವಾಗಿದೆ. ಎಲ್ಲಾ ಹುಡುಗಿಯರು ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಫ್ಲಾಟ್ ಹೊಟ್ಟೆ ಇರುತ್ತದೆ. ಇನ್ನು ಕೆಲವರಿಗೆ ದಪ್ಪ ಹೊಟ್ಟೆ ಇರುತ್ತದೆ. ಅದೇ ರೀತಿ ಎಲ್ಲ ಹುಡುಗರಿಗೂ ಸಿಕ್ಸ್ ಪ್ಯಾಕ್ ಇರುವುದಿಲ್ಲ. ಎಲ್ಲ ಹುಡುಗಿಯರ ಕೂದಲು ಒಂದೇ ರೀತಿ ಇರುವುದಿಲ್ಲ. ಅದೇ ರೀತಿ ಎಲ್ಲ ಹುಡುಗಿಯರು ಆರೋಗ್ಯವಾಗಿ ಇರುವುದಿಲ್ಲ. ಆದರೆ ಎಲ್ಲ ಹುಡುಗಿಯರು ಸುಂದರವಾಗಿರುತ್ತಾರೆ” ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bna_jSClr2k/?hl=en&taken-by=redheadwayfarer

  • ಗರ್ಭಿಣಿಯನ್ನ ಹೊತ್ತು ಆಸ್ಪತ್ರೆಗೆ ಸಾಗಿಸ್ತಿದ್ದಾಗ ಅರಣ್ಯದಲ್ಲೇ ಹೆರಿಗೆ: ತಾಯಿ, ಮಗು ಆರೋಗ್ಯ

    ಗರ್ಭಿಣಿಯನ್ನ ಹೊತ್ತು ಆಸ್ಪತ್ರೆಗೆ ಸಾಗಿಸ್ತಿದ್ದಾಗ ಅರಣ್ಯದಲ್ಲೇ ಹೆರಿಗೆ: ತಾಯಿ, ಮಗು ಆರೋಗ್ಯ

    ಹೈದರಾಬಾದ್: ರಸ್ತೆ ಸಂಪರ್ಕವಿಲ್ಲದ ಗ್ರಾಮದಿಂದ ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಗರ್ಭಿಣಿಗೆ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಇಂತಹ ಘಟನೆ ಸಂಭವಿಸುತ್ತಿವೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಮಾಸಿಕ ವಾಲಾಸ ಚಿಂತಾಲಾ ಸಾಲುರ್ ಗ್ರಾಮದ ಮುತ್ತಮ್ಮ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರ ಪತಿ ಹಾಗೂ ಸಂಬಂಧಿಕರು, ಬಿದಿರಿನ ಕಟ್ಟಿಗೆಗೆ ಸೀರೆಯನ್ನು ಕಟ್ಟಿ, ಜೋಳಿಗೆ ಮಾಡಿ ಮುತ್ತಮ್ಮ ಅವರನ್ನು ಕೂರಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಗರ್ಭಿಣಿಗೆ ಏನು ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಗ್ರಾಮದ ಕೆಲವು ಪುರುಷರು ಹಾಗೂ ಮಹಿಳೆಯರು ಆಸ್ಪತ್ರೆಗೆ ಹೊರಟಿದ್ದರು. ಇದನ್ನು ಓದಿ: ಅಂಬುಲೆನ್ಸ್ ಸೇವೆಗೆ ಗರ್ಭಿಣಿಯನ್ನ 12 ಕಿ.ಮೀ. ಹೊತ್ತು ನಡೆದ ಗ್ರಾಮಸ್ಥರು: ಮಗು ಸಾವು

    ಅರಣ್ಯ ಪ್ರದೇಶದ ಕಲ್ಲು ಮಣ್ಣು ಮಿಶ್ರಿತ ಗುಡ್ಡ ಬೆಟ್ಟದ ದಾರಿಯಲ್ಲಿಯೇ ಅವರು ನಡೆಯಬೇಕಾಗಿತ್ತು. ಬಳಿಕ ಅವರು ಮುಖ್ಯರಸ್ತೆ ಸೇರಿ ವಾಹನದ ಮೂಲಕ ಮುತ್ತಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ಗ್ರಾಮದಿಂದ 6 ರಿಂದ 7 ಕಿ.ಮೀ. ನಡೆಯುತ್ತಿದ್ದಂತೆ ದಾರಿಯ ಮಧ್ಯದಲ್ಲಿ ಮುತ್ತಮ್ಮಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಅವರನ್ನು ಅಲ್ಲಿಯೇ ಕೆಳಗೆ ಇಳಿಸಿ, ಇಬ್ಬರು ಮಹಿಳೆಯರ ಸಹಾಯದಿಂದ ಹೆರಿಗೆ ಮಾಡಿಸಲಾಗಿದೆ.

    ಈ ದೃಶ್ಯವನ್ನು ಸ್ಥಳೀಯ ಯುವಕನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅನಾರೋಗ್ಯಕ್ಕೆ ತುತ್ತಾದವರನ್ನು ಹಾಗೂ ಗರ್ಭಿಣಿಯರನ್ನು ಹೀಗೆ ಹೊತ್ತುಕೊಂಡು ಮುಖ್ಯರಸ್ತೆ ಸೇರಬೇಕಾಗಿದೆ. ನಮ್ಮ ಸಮಸ್ಯೆಗೆ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿ ಸ್ಪಂಧಿಸುತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಬುಡಕಟ್ಟು ಯುವಕ ಆರೋಪಿಸಿದ್ದಾನೆ.

    2017ರಲ್ಲಿ ಬುಡಕಟ್ಟು ಜನಾಂಗದ 15 ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು 5.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಆದರೆ ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಯಾವುದೇ ಗುತ್ತಿಗೆದಾರರು ಮುಂದಾಗುತ್ತಿಲ್ಲ ಎಂದು ಬುಡಕಟ್ಟು ಪ್ರದೇಶಗಳ ಅಧಿವೃದ್ಧಿ ಯೋಜನಾ ಅಧಿಕಾರಿ ಲಕ್ಷ್ಮಿಶ್ ತಿಳಿಸಿದ್ದಾರೆ.

    ಇಂತಹದ್ದೇ ಘಟನೆಯೊಂದು ಜೂನ್ ತಿಂಗಳಿನಲ್ಲಿ ನಡೆದಿತ್ತು. ಅರಣ್ಯ ಪ್ರದೇಶ ವಾಸಿಯಾಗಿರುವ 8 ತಿಂಗಳ ಗರ್ಭಿಣಿ ಜಿದಮ್ಮ (22) ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲು, ಪತಿ ಹಾಗೂ ಗ್ರಾಮಸ್ಥರು ಪಟ್ಟ ಕಷ್ಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೀತಿಯ ನಾಯಿಗೆ ಅದ್ಧೂರಿ ಸೀಮಂತ

    ಪ್ರೀತಿಯ ನಾಯಿಗೆ ಅದ್ಧೂರಿ ಸೀಮಂತ

    ಬಳ್ಳಾರಿ: ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡೋದು ಪದ್ಧತಿ. ಆದ್ರೆ ಬಳ್ಳಾರಿಯಲ್ಲಿ ಪ್ರೀತಿಯಿಂದ ಸಾಕಿದ ನಾಯಿಗಳಿಗೂ ಸಹ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

    ಬಳ್ಳಾರಿಯ ವಂದನಾ ಶಾಲೆಯಲ್ಲಿ ಸಾಕಿ ಬೆಳೆಸಿದ ಸ್ವೀಟಿ ಹಾಗೂ ಪಂಡೂ ಅನ್ನೋ ನಾಯಿಗಳಿಗೆ ಗರ್ಭಿಣಿಯರಿಗೆ ಸೀಮಂತ ಮಾಡೋ ರೀತಿಯಲ್ಲೆ ಅದ್ಧೂರಿಯಾಗಿ ಕಾರ್ಯ ಮಾಡಿದ್ದಾರೆ. ಈ ಸೀಮಂತ ಕಾರ್ಯದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಸ್ವೀಟಿ ಹಾಗೂ ಪಂಡೂಗೆ ಆರತಿ ಮಾಡಿ ಹರಸಿ ಹಾರೈಸಿದ್ದಾರೆ.

    ಕಾರ್ಯಕ್ಕೆ ಬಂದವರಿಗೆಲ್ಲಾ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಸೀಮಂತ ಕಾರ್ಯದಲ್ಲಿ ಸ್ಥಳೀಯ ಮಹಿಳೆಯರು ಮತ್ತು ಮಕ್ಕಳು ಸಹ ಭಾಗವಹಿಸಿದ್ದರು. ನಾಯಿಗಳ ಮುಂದೆ ವಿವಿಧ ತಿನಿಸುಗಳನ್ನು ಇಟ್ಟು ಆರತಿ ಮಾಡಲಾಯಿತು.

    ಬೆಂಗಳೂರಿನಲ್ಲಿ ಅರುಣ್ ಎಂಬವರು ತಮ್ಮ ನೆಚ್ಚಿನ ನಾಯಿಯ ತಿಥಿಯನ್ನು ಮಾಡಿದ್ದರು. ಅರುಣ್ 17 ವರ್ಷಗಳಿಂದಲೂ ಸಿಂಧೂ ಹೆಸರಿನ ನಾಯಿಯನ್ನು ಸಾಕಿದ್ದರು. 12 ಜುಲೈ 1999 ರಲ್ಲಿ ಜನಿಸಿದ ಸಿಂಧೂ,ಶಸ 17 ಜುಲೈ 2017 ರಲ್ಲಿ ಸಾವನ್ನಪ್ಪಿತ್ತು. ಅದರ ನೆನಪಿಗಾಗಿ ಅರುಣ್ ಈ ಪುಣ್ಯ ತಿಥಿ ಕಾರ್ಯವನ್ನು ಮಾಡಿದ್ದರು. ಸಂಪ್ರದಾಯ ಬದ್ಧವಾಗಿ, ವಿಧಿವಿಧಾನಗಳ ಮೂಲಕ ನಾಯಿಯ ಒಂದು ವರ್ಷದ ಪುಣ್ಯ ತಿಥಿಯನ್ನು ಅರುಣ್ ಮಾಡಿದ್ದಾರೆ. ವಿಶೇಷ ಏನೆಂದರೆ 100 ಕ್ಕೂ ಹೆಚ್ಚು ಜನರಿಗೆ ಅರುಣ್ ಊಟ ಹಾಕಿ ಪ್ರೀತಿಯ ನಾಯಿಯ ಪುಣ್ಯಸ್ಮರಣೆಯನ್ನು ಕೈಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಪ್ರಮಾಣದ ನೀರು ಬಿಡುಗಡೆ- ಯಾದಗಿರಿಯಲ್ಲಿ ತುಂಬು ಗರ್ಭಿಣಿಯ ಪರದಾಟ

    ಭಾರೀ ಪ್ರಮಾಣದ ನೀರು ಬಿಡುಗಡೆ- ಯಾದಗಿರಿಯಲ್ಲಿ ತುಂಬು ಗರ್ಭಿಣಿಯ ಪರದಾಟ

    ಯಾದಗಿರಿ: ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆಯು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದಲ್ಲಿ ನಡೆದಿದೆ.

    ಪೂಜಮ್ಮ, ತುಂಬು ಗರ್ಭಿಣಿಯಾಗಿರುವುದರಿಂದ ಯಾವುದೇ ಸಮಯದಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಹಾಗಾಗಿ ಪೂಜಮ್ಮ ತಪಾಸಣೆಗೆಂದು ಆಸ್ಪತ್ರೆಗೆ ಹೋಗಲು ನರಳಾಡುವಂತಾಗಿದೆ. ಗ್ರಾಮದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಕಕ್ಕೇರಾಕ್ಕೆ ತೆರಳದೆ ತತ್ತರಿಸಿ ಹೋಗಿದ್ದಾರೆ. ಅದೇ ರೀತಿ ಗ್ರಾಮದ ಸಂಪರ್ಕ ಕಡಿದುಕೊಂಡ ಕಾರಣ ಶಾಲಾ ಶಿಕ್ಷಕ ಬಸನಗೌಡ ಕೂಡ ಸೋಮವಾರದಿಂದ ಗ್ರಾಮದಲ್ಲೇ ತಂಗಿದ್ದಾರೆ.

    ಈಗಾಗಲೇ ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆ ಬಸವಸಾಗರ ಡ್ಯಾಂಗೆ ಹೆಚ್ಚು ನೀರು ಹರಿಸಿದರೆ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇದೆ. ಸದ್ಯ ಬಸವಸಾಗರ ಡ್ಯಾಂ ನಿಂದ 1,28,000 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದರಿಂದ ನೀಲಕಂಠರಾಯನಗಡ್ಡಿ ಸಂಪರ್ಕ ಕಳೆದುಕೊಂಡಿದೆ. ಪ್ರವಾಹ ಭೀತಿ ಎದುರಾಗುವ ಸಂಭವ ಹೆಚ್ಚಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ನದಿ ಪಾತ್ರದ ಜನರಿಗೆ ನದಿ ಕಡೆ ತೆರಳದಂತೆ ಜಿಲ್ಲಾಧಿಕಾರಿ ಎಂ ಕೂರ್ಮಾರಾವ್ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv