Tag: Pregnant

  • ತರಬೇತಿಗೆ ಬಂದಾಕೆಯನ್ನ ಗರ್ಭಿಣಿ ಮಾಡಿದ ಜಿಮ್ ಟ್ರೈನರ್

    ತರಬೇತಿಗೆ ಬಂದಾಕೆಯನ್ನ ಗರ್ಭಿಣಿ ಮಾಡಿದ ಜಿಮ್ ಟ್ರೈನರ್

    – ಮಗನ ಕೃತ್ಯಕ್ಕೆ ಅಪ್ಪನ ಸಾಥ್

    ಚಿಕ್ಕಬಳ್ಳಾಪುರ: ದೈಹಿಕ ಫಿಟ್ ನೆಸ್ ಗಾಗಿ ಬಂದ ಯುವತಿ ಜೊತೆ ಲವ್ವಿಡವ್ವಿ ಅಂತ ಶುರುವಿಟ್ಟುಕೊಂಡು ಆಕೆಯನ್ನು ಗರ್ಭಿಣಿಯಾಗಿಸಿ ಕೈಕೊಡಲು ಯತ್ನಿಸಿದ್ದ ಜಿಮ್ ಟ್ರೈನರ್ ಜೈಲು ಪಾಲಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಗೌತಮ್ ಎಂಬಾತನೇ ಮೋಸ ಮಾಡಿದ ಜಿಮ್ ಟ್ರೈನರ್. ದೊಡ್ಡಬಳ್ಳಾಪುರ ನಗರದ ಕೋರ್ಟ್ ರಸ್ತೆಯಲ್ಲಿರುವ ಬುಲೆಟ್ ಜಿಮ್ ಮಾಲೀಕ ಹಾಗೂ ಟ್ರೈನರ್ ಆಗಿರುವ ಗೌತಮ್ ಮಹಿಳೆಯರು ಮತ್ತು ಪುರುಷರಿಗೆ ಫಿಟ್ ನೆಸ್ ತರಬೇತಿ ಕೊಡುತ್ತಿದ್ದನು. ತರಬೇತಿಗೆ ಬರುತ್ತಿದ್ದ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡಿದ್ದ ಗೌತಮ್ ಪ್ರೀತಿ ನಾಟಕವಾಡಿ ಅವರನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂಬ ಆರೋಪಗಳು ಕೇಳಿ ಬಂದಿವೆ.

    ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ ಕಳೆದ ಒಂದು ವರ್ಷದಿಂದ ಗೌತಮ್ ಬಳಿ ತರಬೇತಿಗೆ ಬರುತ್ತಿದ್ದಳು. ಅರ್ಚನಾ ಜೊತೆ ಪ್ರೀತಿಯ ನಾಟಕವಾಡಿದ ಗೌತಮ್ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿ ಮಾಡಿದ್ದಾನೆ.

    ಅರ್ಚನಾ ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆ ಆಕೆಯೊಂದಿಗೆ ಅಂತರ ಕಾಯ್ದುಕೊಂಡ ಗೌತಮ್, ಜಿಮ್ ಟ್ರೈನಿಂಗ್ ಗೆ ಬರುತ್ತಿದ್ದ ಮತ್ತೋರ್ವ ಶ್ರೀಮಂತ ಕುಟುಂಬದ ಯುವತಿ ಜೊತೆ ಲವ್ವಿ ಡವ್ವಿ ಶುರು ಹಂಚಿಕೊಂಡು ಆಕೆಯನ್ನು ರಹಸ್ಯವಾಗಿ ಮದುವೆಯಾಗಲು ನಿರ್ಧರಿಸಿದ್ದನು. ಮದುವೆ ವಿಷಯ ತಿಳಿಯುತ್ತಿದ್ದಂತೆ ಗೌತಮ್ ತಂದೆ ರಾಜಣ್ಣ ಬಳಿ ಹೋದ ಅರ್ಚನಾ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಅರ್ಚನಾಳ ಮಾತಿಗೆ ಬೆಲೆ ಕೊಡದ ರಾಜಣ್ಣ, ನನ್ನ ಮಗನ ಮದುವೆ ಬೇರೆ ಯುವತಿ ಜೊತೆ ಮಾಡಿಸುತ್ತೇನೆ ಏನು ಬೇಕಾದ್ರೂ ಮಾಡಿಕೋ ಎಂದು ಅವಾಜ್ ಹಾಕಿದ್ದಾನೆ.

    ಗೌತಮ್ ತಂದೆಯಿಂದಲೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಅರ್ಚನಾ ನೇರವಾಗಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕೂಡಲೇ ಎಚ್ಚೆತ್ತ ದೊಡ್ಡಬಳ್ಳಾಪುರ ವೃತ್ತ ನೀರಿಕ್ಷಕ ಸಿದ್ದರಾಜು ಆ್ಯಂಡ್ ಟೀಂ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕದ್ದು ಮುಚ್ಚಿ ಮದುವೆಯ ಅರತಕ್ಷತೆಗೆ ಸಿದ್ಧವಾಗಿದ್ದ ಗೌತಮ್ ನನ್ನ ಬಂಧಿಸಿದ್ದಾರೆ. ಇತ್ತ ಮಗನ ಕೃತ್ಯಕ್ಕೆ ಸಹಾಯ ಮಾಡಿದ್ದ ತಂದೆ ರಾಜಣ್ಣನನ್ನು ಸಹ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಇನ್ನು ಗೌತಮ್ ಜೊತೆ ಮದುವೆ ಆಗಲು ಬಂದಿದ್ದ ಯುವತಿ ಮನೆಯಲ್ಲಿ ಯಾರಿಗೂ ತಿಳಿಸದೇ ಚಿನ್ನಾಭರಣದೊಂದಿಗೆ ಬಂದಿದ್ದಳು ಎಂಬ ಮಾಹಿತಿ ಲಭಿಸಿದೆ.

  • ಗರ್ಭಿಣಿ ಆದ ನಂತ್ರ ‘ದಿ-ವಿಲನ್’ ಬೆಡಗಿಯ ಅಧಿಕೃತ ನಿಶ್ಚಿತಾರ್ಥ

    ಗರ್ಭಿಣಿ ಆದ ನಂತ್ರ ‘ದಿ-ವಿಲನ್’ ಬೆಡಗಿಯ ಅಧಿಕೃತ ನಿಶ್ಚಿತಾರ್ಥ

    ಲಂಡನ್: ಬ್ರಿಟಿಷ್ ಬ್ಯೂಟಿ ನಟಿ ಆಮಿ ಜಾಕ್ಸನ್ ಅವರು ಮೇ 5ರಂದು ಲಂಡನ್‍ನಲ್ಲಿರುವ ತಮ್ಮ ಮನೆಯಲ್ಲೇ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಆಮಿ ಭಾನುವಾರ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಕಾರ್ಜ್ ಪನಯೌಟು ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಅವರ ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಆಮಿ ತನ್ನ ನಿಶ್ಚಿತಾರ್ಥದಲ್ಲಿ ಕಪ್ಪು ಹಾಗೂ ಬಿಳಿ ಬಣ್ಣದ ಗೌನ್ ಧರಿಸಿದ್ದರು. ವೈರಲ್ ಆಗಿರುವ ಫೋಟೋ ಹಾಗೂ ವಿಡಿಯೋಗಳಲ್ಲಿ ಆಮಿ ತನ್ನ ಪ್ರಿಯಕರ, ಗೆಳೆಯರ ಹಾಗೂ ಸಂಬಂಧಿಕರ ಜೊತೆ ಸೇರಿ ನಿಶ್ಚಿತಾರ್ಥವನ್ನು ಸಂಭ್ರಮಿಸುತ್ತಿದ್ದಾರೆ.

    ಆಮಿ 2019 ಜನವರಿ 1ರಂದು ತಮ್ಮ ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ತಿಳಿಸಿದ್ದರು. ಈ ಜೋಡಿ 2020ಕ್ಕೆ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಆಮಿ ಜಾಕ್ಸನ್ ಅವರು ತಾವು ಮಗುವಿಗಾಗಿ ಕಾಯುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಮಾರ್ಚ್ 31 ರಂದು ಇಂಗ್ಲೆಂಡಿನಲ್ಲಿ ತಾಯಂದಿರ ದಿನವನ್ನಾಗಿ ಆಚರಿಸುತ್ತಾರೆ. ಹೀಗಾಗಿ ಅಂದಿನ ದಿನವೇ ನಟಿ ಆಮಿ ತಾವು ತಾಯಿಯಾಗುವ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

    ನಟಿ ಆಮಿ ಜಾಕ್ಸನ್ ಅವರು ಸ್ಯಾಂಡಲ್‍ವುಡ್ ನಲ್ಲಿ ಪ್ರೇಮ್ ನಿರ್ದೇಶನದ ಮತ್ತು ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅಭಿನಯದ `ದಿ ವಿಲನ್’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

  • ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಮೈಸೂರು, ಬೆಂಗ್ಳೂರು ಹೆದ್ದಾರಿ ತಡೆದು ಪ್ರತಿಭಟನೆ

    ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಮೈಸೂರು, ಬೆಂಗ್ಳೂರು ಹೆದ್ದಾರಿ ತಡೆದು ಪ್ರತಿಭಟನೆ

    – ಆಸ್ಪತ್ರೆಯಲ್ಲಿದ್ದ ಕಂಪ್ಯೂಟರ್, ಕಿಟಕಿ ಗ್ಲಾಸ್ ಪುಡಿಪುಡಿ

    ರಾಮನಗರ: ಗಂಡು ಮಗುವಿಗೆ ಜನ್ಮ ನೀಡಿ ಅರ್ಧ ಗಂಟೆಯ ಬಳಿಕ ಬಾಣಂತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಮೃತ ರಶ್ಮಿ ಸಂಬಂಧಿಕರು ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ ಆಸ್ಪತ್ರೆಗೆ ನುಗ್ಗಿ ಕಂಪ್ಯೂಟರ್, ಕಿಟಕಿ ಗ್ಲಾಸ್ ಗಳು, ಪೀಠೋಪಕರಣಗಳು ಧ್ವಂಸ ಮಾಡಿದ್ದಾರೆ. ರಶ್ಮಿ ಪೋಷಕರು ಸ್ಥಳಕ್ಕೆ ವೈದ್ಯರು ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಘಟನೆ ವಿವರ:
    ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ರಶ್ಮಿ(19)ಯನ್ನು ಹೆರಿಗೆಗೆಂದು ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಹಾಗೆಯೇ ರಶ್ಮಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನನವಾದ ಅರ್ಧ ಗಂಟೆಯಲ್ಲೇ ರಶ್ಮಿ ಮೃಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

    ರಶ್ಮಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಹೀಗಾಗಿ ರಶ್ಮಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ವೈದ್ಯರು ಆಪರೇಷನ್ ಥಿಯೇಟರ್ ನಲ್ಲಿ ಶವ ಬಿಟ್ಟು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕಳೆದ ಒಂದು ವರ್ಷದ ಹಿಂದೆ ರಶ್ಮಿಯನ್ನು ದೇವರ ಹೊಸಹಳ್ಳಿಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಸದ್ಯ ಆಸ್ಪತ್ರೆಗೆ ಡಿಎಚ್‍ಓ ಭೇಟಿ ನೀಡಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗುವಿಗೆ ಜನ್ಮವಿತ್ತ ಅರ್ಧ ಗಂಟೆಯಲ್ಲೇ ಬಾಣಂತಿ ಸಾವು

    ಮಗುವಿಗೆ ಜನ್ಮವಿತ್ತ ಅರ್ಧ ಗಂಟೆಯಲ್ಲೇ ಬಾಣಂತಿ ಸಾವು

    ರಾಮನಗರ: ಚನ್ನಪಟ್ಟಣದ ಬಾಲು ನರ್ಸಿಂಗ್ ಹೋಂನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅರ್ಧ ಗಂಟೆಯಲ್ಲೇ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ರಶ್ಮಿ(19) ಮೃತಪಟ್ಟ ಬಾಣಂತಿ. ಆಸ್ಪತ್ರೆಯ ವೈದ್ಯೆ ಡಾ.ಶೈಲಜಾ ಅವರ ಎಡವಟ್ಟಿನಿಂದಲೇ ರಶ್ಮಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ.

    ರಶ್ಮಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಹೀಗಾಗಿ ರಶ್ಮಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ವೈದ್ಯರು ಆಪರೇಷನ್ ಥಿಯೇಟರ್ ನಲ್ಲಿ ಶವ ಬಿಟ್ಟು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಕಳೆದ ಒಂದು ವರ್ಷದ ಹಿಂದೆ ರಶ್ಮಿಯನ್ನು ದೇವರ ಹೊಸಹಳ್ಳಿಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ತಡರಾತ್ರಿ 12 ಗಂಟೆ ಸುಮಾರಿಗೆ ಹೆರಿಗೆಗೆ ಎಂದು ರಶ್ಮಿಯನ್ನು ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಹಾಗೆಯೇ ರಶ್ಮಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನನವಾದ ಅರ್ಧ ಗಂಟೆಯಲ್ಲೇ ರಶ್ಮಿ ಮೃಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.


    ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಕಳೆದ ವರ್ಷ ಬಿಸಿಲು ಎಂದು ನಿಟ್ಟುಸಿರು ಬಿಟ್ಟವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ

    ಕಳೆದ ವರ್ಷ ಬಿಸಿಲು ಎಂದು ನಿಟ್ಟುಸಿರು ಬಿಟ್ಟವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ

    ರಾಯಚೂರು: ಹೈದರಾಬಾದ್ ಕರ್ನಾಟಕದ ತುಂಬು ಗರ್ಭಿಣಿಯರೆಲ್ಲಾ ನೋಡಲೇ ಬೇಕಾದ ಸ್ಟೋರಿ ಇದು. ಏಕೆಂದರೆ ಈ ಬಾರಿಯ ಬಿಸಿಲು ಜೀವಮಾರಕವಾಗಿದೆ. ಬಿಸಿಲನಾಡು ರಾಯಚೂರಿನಲ್ಲಂತೂ ಮಾರ್ಚ್ ತಿಂಗಳಿನಿಂದಲೇ ನವಜಾತ ಶಿಶುಗಳು ಸರತಿ ಸಾಲಿನಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿವೆ. ವೈದ್ಯರ ಪ್ರಕಾರ ಬಿಸಿಲಿನಿಂದ ಗರ್ಭದಲ್ಲೇ ಜೀವಗಳು ಸಾವನ್ನಪ್ಪುತ್ತಿವೆ.

    ಕಳೆದ ವರ್ಷವೇ ಬಿಸಿಲು ಎಂದು ನಿಟ್ಟುಸಿರು ಬಿಟ್ಟವರಿಗೆ ಭಾರತೀಯ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಕಳೆದ ವರ್ಷಕ್ಕಿಂತ ಒಂದು ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ಈ ವರ್ಷ ಹೆಚ್ಚಾಗಲಿದೆ. ಈ ಹೆಚ್ಚಾದ ತಾಪಮಾನ ರಾಯಚೂರು, ಬಳ್ಳಾರಿ, ಕಲಬುರಗಿ, ಯಾದಗಿರಿ ನವಜಾತ ಶಿಶುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ರಾಯಚೂರು ಜಿಲ್ಲೆಯಲ್ಲಂತೂ ಮಕ್ಕಳ ಆಸ್ಪತ್ರೆಗಳಲ್ಲಿ ಬೇಸಿಗೆ ಪರಿಣಾಮದ ಕಾಯಿಲೆಗಳಿಂದಲೇ ಶಿಶುಗಳು ದಾಖಲಾಗುತ್ತಿವೆ.

    ಬ್ಲಡ್ ಯೂರಿಯಾ ಪ್ರಮಾಣ ಹೆಚ್ಚಾಗುವುದು, ತೂಕ ಕಡಿಮೆಯಾಗುವುದು, ಜ್ವರ, ಕಾಮಾಲೆ, ಕಡಿಮೆ ಮೂತ್ರ, ನಿರ್ಜಲ, ಕಿಡ್ನಿ ವೈಫಲ್ಯ ಸಮಸ್ಯೆಗಳಿಂದ ಶಿಶುಗಳು ಬಳಲುತ್ತಿವೆ. ಶಿಶುಗಳ ಮೇಲೆ ಬೇಸಿಗೆ ಪರಿಣಾಮದ ಬಗ್ಗೆ ನಿರಂತರ ಅಧ್ಯಯನ ನಡೆಸಿರುವ ರಾಯಚೂರಿನ ಶ್ರೀ ಅಮೃತ ಮಕ್ಕಳ ಆಸ್ಪತ್ರೆ ವೈದ್ಯರು ಮುಂದಿನ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ರಿಮ್ಸ್ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ನೂರಾರು ಮಕ್ಕಳು ನಿರ್ಜಲಿಕರಣದಿಂದ ದಾಖಲಾಗಿದ್ದಾರೆ.

    ನಿರ್ಜಲೀಕರಣದಿಂದಾಗಿ ದೇಹದಲ್ಲಿ ನೀರಿನ ಅಂಶ ಹೊಂದಾಣಿಕೆಯಾಗದೆ ಜ್ವರ ಕಾಣಿಸಿಕೊಳ್ಳುತ್ತಿದೆ. ಇದು ನೇರವಾಗಿ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತಿದೆ. ಕೆಲ ಶಿಶುಗಳಲ್ಲಿ ಒಂದು ಕಿಡ್ನಿ ವೈಫಲ್ಯವಾದರೆ, ಇನ್ನೂ ಕೆಲ ಮಕ್ಕಳು ಎರಡು ಕಿಡ್ನಿ ಕಳೆದುಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿವೆ. ಮೊದಲ ಹೆರಿಗೆಯಾದರೆ ತಾಯಂದಿರಿಗೆ ಹಾಲುಣಿಸಲು ಬಾರದೆ ಶಿಶುಗಳು ನಾನಾ ಸಮಸ್ಯೆಗೆ ತುತ್ತಾಗುತ್ತಿವೆ. ರಾಯಚೂರು ಕೃಷಿ ವಿವಿಯ ಹವಾಮಾನ ತಜ್ಞರಂತೂ ಮೇ ತಿಂಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ವರ್ಷದ ಬಿಸಿಲು ನಿಜಕ್ಕೂ ಮಾರಣಾಂತಿಕವಾಗಿದೆ. ಎಚ್ಚರ ತಪ್ಪಿದರೆ ಶಿಶುಗಳ ಪಾಲಿಗೆ ಯಮಧೂತನಂತಾಗುತ್ತಿದೆ. ಪೋಷಕರು ಪುಟ್ಟಮಕ್ಕಳ ಆರೈಕೆಯಲ್ಲಿ ಬಹಳ ಎಚ್ಚರ ವಹಿಸಬೇಕಿದೆ. ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

  • ಶೂ ಲೇಸ್ ಕಟ್ಟಿಕೊಳ್ಳದ ಸೋನಂ ಈಗ ಗರ್ಭಿಣಿ?

    ಶೂ ಲೇಸ್ ಕಟ್ಟಿಕೊಳ್ಳದ ಸೋನಂ ಈಗ ಗರ್ಭಿಣಿ?

    ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಕಳೆದ ವರ್ಷ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಸೋನಂ ತಮ್ಮ ಪತಿ ಆನಂದ್ ಜೊತೆಯಿರುವ ಫೋಟೋ ನೋಡಿ ನಟಿ ಗರ್ಭಿಣಿ ಆಗಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಇತ್ತೀಚೆಗೆ ಸೋನಂ ಕಪೂರ್ ತಮ್ಮ ಪತಿ ಜೊತೆ ಲಾಂಚಿಂಗ್ ಇವೆಂಟ್‍ನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿನ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋ ನೋಡಿ ಅಭಿಮಾನಿಗಳು ಸೋನಂ ಗರ್ಭಿಣಿ ಆಗಿದ್ದಾರೆ ಎಂದುಕೊಂಡಿದ್ದಾರೆ.

    ಸೋನಂ ಕಾರ್ಯಕ್ರಮಕ್ಕೆ ಹಳದಿ ಬಣ್ಣದ ಉಡುಪು ಹಾಕಿ ಅದಕ್ಕೆ ಮ್ಯಾಚಿಂಗ್ ಶೂ ಹಾಕಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸೋನಂ ಅವರ ಶೂ ಲೇಸ್ ಓಪನ್ ಆಗಿದೆ. ಆಗ ಸೋನಂ ಪತಿ ಆನಂದ್ ಕೆಳಗೆ ಕುಳಿತುಕೊಂಡು ಸೋನಂ ಅವರ ಶೂ ಲೇಸ್ ಕಟ್ಟಿದ್ದಾರೆ.

    ಸೋನಂ ಅವರು ಶೂ ಲೇಸ್ ಕಟ್ಟಿಕೊಳ್ಳದ ಕಾರಣ ಅವರು ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಫೋಟೋ ನೋಡಿ ಅಭಿಮಾನಿಯೊಬ್ಬರು ಸೋನಂ ಪ್ರೆಗ್ನೆಂಟಾ? ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು ಬೇಬಿ ಬಂಪ್ ಕಾಣಿಸುತ್ತಿದೆ. ಆದರೆ ತನ್ನ ಸೋನಂ ಡ್ರೆಸ್‍ನಿಂದ ಅದನ್ನು ಬಚ್ಚಿಡುತ್ತಿದ್ದಾರೆ ಎಂದು ಕಮೆಂಟ್ ಹಾಕಿದ್ದಾರೆ.

    ಸೋನಂ ಕಪೂರ್ ಕಳೆದ ವರ್ಷ ಮೇ 8 ರಂದು ಆನಂದ್ ಅಹುಜಾ ಜೊತೆ ಸಿಖ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಸೋನಂ ಮದುವೆಗೆ ಕರೀನಾ ಕಪೂರ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಕರಣ್ ಜೋಹರ್, ಜಾನ್ವಿ ಕಪೂರ್, ಬೋನಿ ಕಪೂರ್ ಸೇರಿದಂತೆ ಬಾಲಿವುಡ್ ತಾರಾಗಣವೇ ಭಾಗವಹಿಸಿತ್ತು.

  • ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ

    ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ

    ಹೈದರಾಬಾದ್: ಪತಿ ಹಾಗೂ ಆತನ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ ಮಾಡಿಸಿದ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ರಾಜೇಶ್ವರಿ (23) ಕಿರುಕುಳಕ್ಕೆ ಒಳಗಾದ ಮಹಿಳೆ. ರಾಜೇಶ್ವರಿ ಹಾಗೂ ಆಕೆಯ ಸಹೋದರ ಚಂದ್ರಶೇಖರ್ ವಿಶಾಖಪಟ್ಟಣದ ದಾಬಾ ಗಾರ್ಡನ್‍ನಲ್ಲಿರುವ ಪ್ರೇಮಾ ಸಮಾಜಂ ಅನಾಥಶ್ರಮದಲ್ಲಿ ಬೆಳೆದಿದ್ದರು. ರಾಜೇಶ್ವರಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ತನ್ನದೇ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು.

    ರಾಜೇಶ್ವರಿ ಪತಿ ದಾಮೋದರ್ ಹಾಗೂ ಆತನ ತಾಯಿ ಲಲಿತಾ ತನ್ನ ಅಜ್ಜಿಯನ್ನು ನೋಡಲು ಅನಾಥಶ್ರಮಕ್ಕೆ ಹೋಗಿದ್ದರು. ಈ ವೇಳೆ ಅವರು ರಾಜೇಶ್ವರಿಯನ್ನು ನೋಡಿ ಮದುವೆ ಪ್ರಸ್ತಾಪವನ್ನು ಮಾಡಿದ್ದಾರೆ. ಆದರೆ ಮದುವೆಗೆ ಒಪ್ಪಿಗೆ ಇದೆ ಆದರೆ ವರದಕ್ಷಿಣೆ ನೀಡಲು ನನ್ನ ಬಳಿ ಹಣವಿಲ್ಲ ಎಂದು ರಾಜೇಶ್ವರಿ ಹೇಳಿದ್ದಳು. ಆಗ ದಾಮೋದರ್ ಹಾಗೂ ಆತನ ತಾಯಿ ನಮಗೆ ಯಾವುದೇ ಹಣ ಬೇಡ ಎಂದು ಹೇಳಿದ್ದರು. ಆದರೆ ಮದುವೆಯ ಸಮಯದಲ್ಲಿ ದಾಮೋದರ್ 1.5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ. ರಾಜೇಶ್ವರಿ ಹಾಗೂ ಚಂದ್ರಶೇಖರ್ ಹೇಗೋ ಹಣ ಹೊಂದಿಸಿ ದಾಮೋದರ್ ಗೆ ನೀಡಿದ್ದರು.

    ವರದಕ್ಷಿಣೆ ಕಿರುಕುಳ:
    ಮದುವೆಯಾದ ಕೆಲವೇ ತಿಂಗಳಿನಲ್ಲಿ ದಾಮೋದರ್ ಹಾಗೂ ಆತನ ತಾಯಿ ರಾಜೇಶ್ವರಿಗೆ 25 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಶುರು ಮಾಡಿದ್ದರು. ಅಲ್ಲದೆ ಮದುವೆಯಾಗಿ 2 ವರ್ಷದಲ್ಲಿ ಮೂರು ಬಾರಿ ಭ್ರೂಣ ಹತ್ಯೆ ಮಾಡಿಸಿದ್ದಾರೆ. ದಾಮೋದರ್ ಹಾಗೂ ಲಲಿತಾ ದಿನನಿತ್ಯ ರಾಜೇಶ್ವರಿಗೆ ನಿಂದಿಸಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ದಾಮೋದರ್ ಹಾಗೂ ಆತನ ತಾಯಿ ರಾಜೇಶ್ವರಿಯ ಬ್ಯೂಟಿ ಪಾರ್ಲರ್ ಮಾರಾಟ ಮಾಡಿ ಹೊಸ ಕಾರು ಕೂಡ ಖರೀದಿಸಿದ್ದರು.

    ಮೊದಲ ಪತ್ನಿಯ ಕರೆ:
    ರಾಜೇಶ್ವರಿ ಮತ್ತೆ ನಾಲ್ಕನೇ ಬಾರಿ ಗರ್ಭಿಣಿ ಆದಾಗ ದಾಮೋದರ್ ಮೊದಲ ಪತ್ನಿ ಸ್ವಾತಿ ಕರೆ ಮಾಡಿದ್ದಳು. ನೀನು ಈ ಮಗುವಿಗೆ ಜನ್ಮ ನೀಡಿದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಳು. ಆಗ ರಾಜೇಶ್ವರಿ ಮೊದಲ ಪತ್ನಿ ಬಗ್ಗೆ ದಾಮೋದರ್ ಬಳಿ ಕೇಳಿದ್ದಾಳೆ. ಇದರಿಂದ ಕೋಪಗೊಂಡ ದಾಮೋದರ್ ಆಕೆಯ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ರಾಜೇಶ್ವರಿ ಮನೆಯಿಂದ ಹೊರ ಬಂದು ಬೇರೆ ಕಡೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.

    ಕಾರಿನಲ್ಲಿ ಹಲ್ಲೆ:
    ಮಂಗಳವಾರ ಮಧ್ಯಾಹ್ನ ದಾಮೋದರ್ 6 ತಿಂಗಳ ಗರ್ಭಿಣಿ ಪತ್ನಿ ರಾಜೇಶ್ವರಿಗೆ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ದಾರಿ ಮಧ್ಯೆ ಕಾರಿನಲ್ಲಿದ್ದ ಅತ್ತೆ ಲಲಿತಾ ರಾಜೇಶ್ವರಿ ಮೇಲೆ ಹಲ್ಲೆ ಮಾಡಿದ್ದಾಳೆ. ಲಲಿತಾ ಮೊದಲು ರಾಜೇಶ್ವರಿ ಹೊಟ್ಟೆ ಭಾಗಕ್ಕೆ ಹೊಡೆದಿದ್ದಾಳೆ. ಬಳಿಕ ದುಪ್ಪಟ್ಟಾದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ. ಅಲ್ಲದೆ ಇಬ್ಬರು ಚೂಪಾದ ವಸ್ತುವಿನಿಂದ ಆಕೆಯ ಕೈ ಮುರಿದು ಹಾಕಿದ್ದಾರೆ.

    ರಾಜೇಶ್ವರಿ ತನ್ನ ಪತಿ ಹಾಗೂ ಅತ್ತೆಯಿಂದ ತಪ್ಪಿಸಿಕೊಂಡು ತನ್ನ ಸಹೋದರ ಚಂದ್ರಶೇಖರ್ ಬಳಿ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಇಬ್ಬರು ಪೆಂದೂರ್ತಿ ಪೊಲೀಸ್ ಠಾಣೆಗೆ ಹೋಗಿ ದಾಮೋದರ್ ಹಾಗೂ ಆತನ ತಾಯಿಯ ವಿರುದ್ಧ ದೂರು ನೀಡಿದ್ದಾರೆ. ರಾಜೇಶ್ವರಿ ಸ್ಥಿತಿ ನೋಡಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದ್ದಾರೆ.

  • ಮತದಾನ ಮಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯರು!

    ಮತದಾನ ಮಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯರು!

    ಮಂಗಳೂರು/ಮಂಡ್ಯ: ಮದುವೆ ಮಂಟಪಕ್ಕೆ ತೆರಳುವ ಮೊದಲೇ ವಧುಗಳು ಮತದಾನ ಮಾಡಿದ್ದರೆ, ಇತ್ತ ಮತದಾನ ಮಾಡಿದ ಬಳಿಕ ಇಬ್ಬರು ಮಹಿಳೆಯರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

    ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ. ಪುತ್ತೂರಿನ ಉರ್ಲಾಂಡಿ ನಿವಾಸಿ ಮೀನಾಕ್ಷಿ ಹಾಗೂ ಚಿಕ್ಕಮರಳಿ ಗ್ರಾಮದ ಮಂಗಳ ನವೀನ್ ಮತ ಚಲಾಯಿಸಿ ನಂತರ ಹೆರಿಗೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ.

    ಮೀನಾಕ್ಷಿಯವರು ಪುತ್ತೂರು ನಗರ ಕೋರ್ಟ್ ಬೂತ್ ನಲ್ಲಿ ಮತ ಚಲಾಯಿಸಿದ್ದಾರೆ. ಮತದಾನ ಬಳಿಕ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಸದೃಢ ಭಾರತಕ್ಕಾಗಿ ನವ-ವಧುಗಳು ಸರತಿ ಸಾಲಿನಲ್ಲಿಯೇ ನಿಂತು ಬೆಳಗ್ಗೆ ತನ್ನ ಹಕ್ಕು ಚಲಾಯಿಸಿದ್ದರು. ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲದ ಕುಡ್ಪಲ್ತಡ್ಕದಲ್ಲಿ ವಧು ಶ್ರುತಿ ಶೆಟ್ಟಿ ತನ್ನ ಮದುವೆಗೂ ಮುಂಚೆಯೇ ಮತದಾನ ಮಾಡಿದ್ದಾರೆ. ಇತ್ತ ಬೆಳ್ತಂಗಡಿಯಲ್ಲೂ ಮೂವರು ವಧುಗಳು ಒಂದೇ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಮದುವೆ ಶೃಂಗಾರದಲ್ಲೇ ಬಂದ ಅಕ್ಷತಾ, ಅಶ್ವಿನಿ ಹಾಗೂ ಹೇಮಲತಾ ಮದುವೆ ಮಂಟಪಕ್ಕೆ ತೆರಳುವ ಮುನ್ನವೇ ತಮ್ಮ ಅಮೂಲ್ಯ ಮತವನ್ನು ಹಾಕಿದ್ದಾರೆ.

  • ಮೇ 5ರಂದು ಗರ್ಭಿಣಿ ಆಮಿ ಜಾಕ್ಸನ್ ನಿಶ್ಚಿತಾರ್ಥ

    ಮೇ 5ರಂದು ಗರ್ಭಿಣಿ ಆಮಿ ಜಾಕ್ಸನ್ ನಿಶ್ಚಿತಾರ್ಥ

    ಮುಂಬೈ: ಬ್ರಿಟಿಷ್ ಬ್ಯೂಟಿ ನಟಿ ಆಮಿ ಜಾಕ್ಸನ್ ಅವರು ಮೇ 5ರಂದು ಲಂಡನ್‍ನಲ್ಲಿರುವ ಅವರ ಮನೆಯಲ್ಲೇ ತಮ್ಮ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

    ಆಮಿ 2019 ಜನವರಿ 1ರಂದು ತಮ್ಮ ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ತಿಳಿಸಿದ್ದರು. ಈಗ ಮೇ 5ರಂದು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಜೋಡಿ 2020ಕ್ಕೆ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಇತ್ತೀಚೆಗೆ ನಟಿ ಆಮಿ ಜಾಕ್ಸನ್ ಅವರು ತಾವು ಮಗುವಿಗಾಗಿ ಕಾಯುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಮಾರ್ಚ್ 31 ರಂದು ಯುಕೆಯಲ್ಲಿ ತಾಯಂದಿರ ದಿನವನ್ನಾಗಿ ಆಚರಿಸುತ್ತಾರೆ. ಹೀಗಾಗಿ ಅಂದಿನ ದಿನವೇ ನಟಿ ಆಮಿ ತಾವು ತಾಯಿಯಾಗುವ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

    “ನಾನು ನನ್ನ ಸಂತೋಷವನ್ನು ಗಟ್ಟಿಯಾದ ಧ್ವನಿಯಲ್ಲೇ ಕೂಗಿ ಹೇಳಲು ಕಾಯುತ್ತಿದ್ದೇನೆ. ಇಂದು ತಾಯಂದಿರ ದಿನವಾಗಿದೆ. ಹೀಗಾಗಿ ಇದಕ್ಕಿಂತ ಒಳ್ಳೆಯ ಸಮಯ ಸಿಗುವುದಿಲ್ಲ. ನಾನು ಈಗಾಗಲೇ ಜಗತ್ತಿನ ಎಲ್ಲದಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಇದು ಪ್ರಾಮಾಣಿಕ ಪ್ರೀತಿಯಾಗಿದ್ದು, ನಾವು ನಿನ್ನನ್ನು ಭೇಟಿ ಮಾಡಲು ಕಾತರದಿಂದ ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಆಮಿ ತಾವು ಮಗುವಿನ ನಿರೀಕ್ಷೆಯಲ್ಲಿರುವುದನ್ನು ಬಹಿರಂಗಗೊಳಿಸಿದ್ದರು.

    ನಟಿ ಆಮಿ ಜಾಕ್ಸನ್ ಅವರು ಸ್ಯಾಂಡಲ್‍ವುಡ್ ನಲ್ಲಿ ಪ್ರೇಮ್ ನಿರ್ದೇಶನದ ಮತ್ತು ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅಭಿನಯದ `ದಿ ವಿಲನ್’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

  • ಒಂದೇ ಶಾಲೆಯ 7 ಶಿಕ್ಷಕಿಯರು ಗರ್ಭಿಣಿ

    ಒಂದೇ ಶಾಲೆಯ 7 ಶಿಕ್ಷಕಿಯರು ಗರ್ಭಿಣಿ

    – 14 ಸಿಬ್ಬಂದಿಯಲ್ಲಿ 7 ಜನರಿಗೆ ಏಕಕಾಲದಲ್ಲಿ ಹೆರಿಗೆ ರಜೆ
    – ಹೊಸ ಸಿಬ್ಬಂದಿಯ ನೇಮಕಕ್ಕೆ ಮುಂದಾದ ಪ್ರಾಂಶುಪಾಲ

    ವಾಷಿಂಗ್ಟನ್: ಅಮೆರಿಕದ ಗೊಡಾರ್ಡ್ ನಗರದ ಪ್ರಾಥಮಿಕ ಶಾಲೆಯ ಏಳು ಶಿಕ್ಷಕಿಯರು ಏಕಕಾಲದಲ್ಲಿ ಗರ್ಭಿಣಿಯರಾಗಿದ್ದಾರೆ. ಏಳು ಶಿಕ್ಷಕಿಯರು 15 ರಿಂದ 1 ತಿಂಗಳ ಆಸುಪಾಸಿನಲ್ಲಿ ಏಕಕಾಲದಲ್ಲಿ ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದ್ದಾರೆ.

    ಎಲ್ಲಾ ಮಹಿಳಾ ಸಹದ್ಯೋಗಿಗಳು ಏಕಕಾಲದಲ್ಲಿ ತಾಯಿ ಆಗುತ್ತಿದ್ದೇವೆ. ಏಳು ಶಿಕ್ಷಕಿಯರು ಒಂದೇ ಬಾರಿ ಗರ್ಭಿಣಿ ಆಗಬೇಕೆಂಬುವುದು ದೇವರ ಇಚ್ಛೆ. ಶಿಕ್ಷಕಿ ಟಿಫನಿ ಎಂಬವರು ಮೂರನೇ ಬಾರಿ ಗರ್ಭಿಣಿಯಾಗಿದ್ದು, ಅವರಿಗೆ 9 ಮತ್ತು 7 ವರ್ಷದ ಮಕ್ಕಳಿವೆ ಎಂದು ಶಿಕ್ಷಕಿ ಕೈಟಿ ಸಂತಸ ವ್ಯಕ್ತಪಡಿಸುತ್ತಾರೆ.

    ನನ್ನ 20 ವರ್ಷದ ಸೇವಾ ಅವಧಿಯಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ಶಾಲೆಯ ಏಳು ಶಿಕ್ಷಕಿಯರು ಗರ್ಭಿಣಿ ಎಂಬ ವಿಚಾರ ತಿಳಿದಾಗ ಒಂದು ಬಾರಿ ಶಾಕ್ ಆಯ್ತು. ಮೊದಲಿಗೆ ಆರು ಜನ ಶಿಕ್ಷಕಿಯರ ಗರ್ಭಿಣಿ ಎಂಬ ವಿಷಯ ತಿಳಿದಿತ್ತು. ಏಳನೇ ಶಿಕ್ಷಕಿಯೂ ಗರ್ಭಿಣಿ ಎಂದು ಆಶ್ಚರ್ಯ ಚಕಿಯನಾದೆ. ಸುದ್ದಿ ಕೇಳಿದಾಗ ಶಿಕ್ಷಕಿಯರು ತಮಾಷೆ ಮಾಡುತ್ತಿದ್ದಾರೆಂದು ಸುಮ್ಮನಾಗಿದ್ದೆ. ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದಾಗ ಖಾತರಿ ಆಯ್ತು. ಅಕ್ಟೋಬರ್ ನಲ್ಲಿ ಇಬ್ಬರು ಶಿಕ್ಷಕಿಯರು ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಪ್ರಾಂಶುಪಾಲ ಐಶ್ಲೇ ಮಿಲರ್ ಹೇಳಿದ್ದಾರೆ.

    ಶಾಲೆಯ ಎಲ್ಲ ಶಿಕ್ಷಕಿಯರು ಗರ್ಭಿಣಿ ಆಗಿರುವ ವಿಷಯ ನಗರದಲೆಲ್ಲ ಹಬ್ಬಿದೆ. ಸ್ಥಳೀಯರು ನಗೆಯ ವಿಷಯದಂತೆ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಶಾಲೆಯಲ್ಲಿನ ನೀರಿನ ಮಹಿಮೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಎಂಟು ಮಕ್ಕಳು ಜನಿಸಲಿವೆ. ನಾಲ್ಕನೇ ತರಗತಿ ಶಿಕ್ಷಕಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.