Tag: Pregnant women

  • ಅಮ್ಮಂದಿರೇ ಎಚ್ಚರ – ಪಾಲಿಷ್ ಮಾಡಿದ ಅಕ್ಕಿ ತಿಂದ್ರೆ ಶಿಶುಗಳಲ್ಲಿ ಹೃದಯ ಸಂಬಂಧಿ ಕಾಯಿಲೆ

    ಅಮ್ಮಂದಿರೇ ಎಚ್ಚರ – ಪಾಲಿಷ್ ಮಾಡಿದ ಅಕ್ಕಿ ತಿಂದ್ರೆ ಶಿಶುಗಳಲ್ಲಿ ಹೃದಯ ಸಂಬಂಧಿ ಕಾಯಿಲೆ

    – ಬೆಚ್ಚಿ ಬೀಳಿಸುವಂತ ರೈಸ್ ಕಹಾನಿ ಬಿಚ್ಚಿಟ್ಟ ವೈದ್ಯರ ಸರ್ವೆ

    ಬೆಂಗಳೂರು: ಓವರ್ ಪಾಲಿಷ್ ಮಾಡಿದ ಅಕ್ಕಿ ಬಳಸುವುದರಿಂದ ಆಗ ತಾನೇ ಹುಟ್ಟಿದ ನವಜಾತ ಶಿಶುಗಳಲ್ಲಿ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಆಗ ತಾನೇ ಹುಟ್ಟುವ ನವಜಾತ ಶಿಶುಗಳಿಗೆ ಹೃದಯಘಾತ, ಉಸಿರಾಟದ ತೊಂದರೆ, ರಕ್ತದೊತ್ತಡ, ಧ್ವನಿಯ ಸಮಸ್ಯೆ ಹೆಚ್ಚಳವಾಗಿದ್ದು, ಇದು ವೈದ್ಯರ ಗಮನಕ್ಕೆ ಬಂದಿದೆ. ಇದರಿಂದ ಭಯಗೊಂಡ ವೈದ್ಯರು ಇದಕ್ಕೆ ಕಾರಣ ಹುಡುಕಲು ಸಮೀಕ್ಷೆ ಮಾಡಿದ್ದಾರೆ. ಈ ಸಮೀಕ್ಷೆಯಲ್ಲಿ ಭಯಾನಕ ವಿಚಾರವೊಂದು ಬೆಳಕಿಗೆ ಬಂದಿದ್ದು, ಪಾಲಿಷ್ ಮಾಡಿದ ಅಕ್ಕಿಯನ್ನು ಹೆಚ್ಚು ತಿನ್ನುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಗೊತ್ತಾಗಿದೆ.

    ರೈಸ್ ತಿನ್ನಲು ಚೆನ್ನಾಗಿ ಇರಬೇಕು. ಬೆಳ್ಳಗೆ ಕಾಣಬೇಕು ಎಂದು ಇತ್ತೀಚೆಗೆ ಪಾಲಿಷ್ ಮಾಡಿದ ಅಕ್ಕಿಯನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಆದರೆ ಇದರಿಂದ ಹುಟ್ಟುವ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ವೈದ್ಯರ ಸಮೀಕ್ಷೆ ಬಹಿರಂಗಪಡಿಸಿದೆ. ಓವರ್ ಪಾಲಿಷ್ ಮಾಡಿದ ಅಕ್ಕಿಯನ್ನು ತಿನ್ನೋದ್ರಿಂದ ವಿಟಮಿನ್ ಬಿ-1 ಕೊರತೆಯಾಗುತ್ತದೆ. ಈ ಜೀವಸತ್ವ ಕೊರತೆಯಿಂದ ಹುಟ್ಟುವ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ.

    ಅಕ್ಕಿಯ ಮೇಲ್ಪದರದಲ್ಲಿ ಈ ವಿಟಮಿನ್ ಬಿ-1 ಇರುತ್ತದೆ. ಆದರೆ ನಾವು ಅಕ್ಕಿಯನ್ನು ಪಾಲಿಷ್ ಮಾಡಿಸಿದಾಗ ಈ ವಿಟಮಿನ್ ಹೊರಟು ಹೋಗುತ್ತೆ. ಈ ಅಕ್ಕಿಯನ್ನು ಸೇವಿಸುವ ತಾಯಿಯರು ಮಕ್ಕಳಿಗೆ ಎದೆ ಹಾಲು ನೀಡಿದಾಗ ಇದರಲ್ಲಿ ವಿಟಮಿನ್ ಬಿ-1 ಕೊರೆತೆ ಬರುತ್ತದೆ. ಇದರಿಂದ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ. ಹೀಗಾಗಿ ಗರ್ಭಿಣಿಯರು ಪಾಲಿಷ್ ಮಾಡಿದ ಅಕ್ಕಿಯನ್ನು ಸೇವನೆ ಮಾಡದಂತೆ ಜಯದೇವ ಆಸ್ಪತ್ರೆಯಿಂದ ಗರ್ಭಿಣಿಯರಿಗೆ ಸಂದೇಶ ನೀಡಲಾಗಿದೆ.

    ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಈ ವಿಚಾರ ಬಯಲಾಗಿದೆ. ಸುಮಾರು 250 ನವಜಾತ ಶಿಶುಗಳನ್ನು ಈ ಸರ್ವೇಗೆ ಒಳಪಡಿಸಲಾಗಿದೆ ಎಂದು ಜಯದೇವ ಆಸ್ಪತ್ರೆ ವೈದ್ಯರ ತಂಡ ತಿಳಿಸಿದೆ. ಪಾಲಿಷ್ ಅಕ್ಕಿಯ ಬದಲು ಕುಚ್ಚಲಕ್ಕಿ, ರೆಡ್ ರೈಸ್ ಅಥವಾ ಹೆಚ್ಚು ಪಾಲಿಷ್ ಆಗದ ಅಕ್ಕಿಯ ಅನ್ನವನ್ನು ತಿನ್ನುವಂತೆ ಡಾ. ಮಂಜುನಾಥ್ ಅವರು ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಸಲಹೆ ನೀಡಿದ್ದಾರೆ.

  • ಗಂಡು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ತಾಯಂದಿರು

    ಗಂಡು ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ತಾಯಂದಿರು

    ಬಳ್ಳಾರಿ: ನಗರದಲ್ಲಿ ಇಂದು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕೊರೊನಾ ಸೋಂಕಿತ ಗರ್ಭಿಣಿಯರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಬಳ್ಳಾರಿಯ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಗರ್ಭಿಣಿಯಾದ್ದರಿಂದ ತೀವ್ರ ನಿಗಾ ವಹಿಸಿ ನೋಡಿಕೊಳ್ಳಲಾಗಿತ್ತು. ಇಂದು ಬೆಳಗ್ಗೆ ಗರ್ಭಿಣಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಮಗು ಕೂಡ ಆರೋಗ್ಯವಾಗಿದ್ದು, 2.7 ಕೆಜಿ ತೂಕ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

    ಮತ್ತೊಬ್ಬ ಕಾರ್ಮಿಕ ಮಹಿಳೆ ಸಹ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಗರ್ಭಕೋಶದ ತೊಂದರೆಯಿಂದ ಸಹ ಬಳಲುತ್ತಿದ್ದರು. ಹೀಗಾಗಿ ಇಂದು ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ ನೇತೃತ್ವದ ತಂಡ ಸೋಂಕಿತ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಸೋಂಕಿತ ಮಹಿಳೆಯರಿಗೆ ಹೆರಿಗೆ ಮಾಡಿಸುವುದು ಸವಾಲಿನ ಕೆಲಸ. ಹೆಚ್ಚಿನ ಅಪಾಯ ಸಹ ಇರುತ್ತದೆ ಎಂದು ಹೇಳಿದ್ದಾರೆ.

  • ಗರ್ಭಿಣಿಯರಿಗೆ ಅಮೆರಿಕದ ವೀಸಾ ನೀಡಲ್ಲ – ಟ್ರಂಪ್ ಸರ್ಕಾರ

    ಗರ್ಭಿಣಿಯರಿಗೆ ಅಮೆರಿಕದ ವೀಸಾ ನೀಡಲ್ಲ – ಟ್ರಂಪ್ ಸರ್ಕಾರ

    ವಾಷಿಂಗ್ಟನ್: ಇನ್ನು ಮುಂದೆ ಗರ್ಭಿಣಿಯರಿಗೆ ವೀಸಾ ನೀಡುವುದಿಲ್ಲ ಎಂದು ಅಮೆರಿಕ ಹೇಳಿದೆ.

    ಅಧ್ಯಕ್ಷರಾದ ಬಳಿಕ ವಲಸಿಗರ ವಿರುದ್ಧ ಕಠಿಣ ನೀತಿ ಪ್ರದರ್ಶಿಸುತ್ತಿರುವ ಡೊನಾಲ್ಡ್ ಟ್ರಂಪ್ ಸರ್ಕಾರ ಈಗ ಗರ್ಭಿಣಿಯರಿಗೆ ವೀಸಾ ನೀಡದೇ ಇರಲು ನಿರ್ಧರಿಸಿದೆ.

    ಗುರುವಾರ ಸರ್ಕಾರ ಈ ಆದೇಶವನ್ನು ಪ್ರಕಟಿಸಿದೆ. ಗರ್ಭಿಣಿಯರು ಪ್ರವಾಸ ಮಾಡಲು ಅಮೆರಿಕಕ್ಕೆ ಬರುತ್ತಿಲ್ಲ. ಬದಲಾಗಿ ಇಲ್ಲಿ ಮಗುವಿಗೆ ಜನ್ಮ ನೀಡಲೆಂದೇ ‘ಜನನ ಪ್ರವಾಸ’ವನ್ನು ಕೈಗೊಳ್ಳುತ್ತಾರೆ. ವೀಸಾ ದುರುಪಯೋಗ ಆಗುವುದನ್ನು ತಡೆಗಟ್ಟಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಸರ್ಕಾರ ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    ಅಮೆರಿಕದಲ್ಲಿ ಜನಿಸಿದ ಪ್ರತಿಯೊಂದು ಮಗುವಿಗೂ ಅಮೆರಿಕದ ಪೌರತ್ವ ಸಿಗುತ್ತದೆ. ಹೀಗಾಗಿ ಗರ್ಭಿಣಿಯರು ಮಕ್ಕಳಿಗೆ ಪೌರತ್ವ ಸಿಗಲೆಂದು ‘ಬರ್ತ್ ಟೂರಿಸಂ’ ಕೈಗೊಳ್ಳುತ್ತಾರೆ ಎನ್ನುವ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇಲ್ಲಿಯವರೆಗೆ ಯಾವುದೇ ಸರ್ಕಾರ ಈ ವಿಷಯದ ಕಡೆ ಗಮನ ಹರಿಸಿರಲಿಲ್ಲ. ಆದರೆ ಈಗ ಟ್ರಂಪ್ ಸರ್ಕಾರ ಬಹಳ ಚರ್ಚೆಗೆ ಗ್ರಾಸವಾಗಬಲ್ಲ ವಿಚಾರಕ್ಕೆ ಕೈ ಹಾಕಿದೆ.

    ನಮ್ಮ ದೇಶಕ್ಕೆ ವಲಸಿಗರದ್ದೇ ದೊಡ್ಡ ಸಮಸ್ಯೆ. ಅವರಿಂದಾಗಿ ನಮ್ಮ ಪ್ರಜೆಗಳಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಅಕ್ರಮವಾಗಿ ನುಸುಳಿರುವ ವಲಸಿಗರನ್ನು ಅಮೆರಿಕದಿಂದ ಓಡಿಸಿ ನಮ್ಮ ದೇಶವನ್ನು ಸುರಕ್ಷಿತ ದೇಶವನ್ನಾಗಿ ಮಾಡುತ್ತೇನೆ ಟ್ರಂಪ್ ತಮ್ಮ ಅಧ್ಯಕ್ಷೀಯ ಪ್ರಚಾರ ಭಾಷಣದಲ್ಲಿ ವಲಸಿಗರ ವಿರುದ್ಧ ಗುಡುಗುತ್ತಿದ್ದರು. ಈ ನಿಟ್ಟಿನಲ್ಲಿ ಉದ್ಯೋಗ ವೀಸಾದಲ್ಲಿ ಬದಲಾವಣೆ ತಂದಿದ್ದ ಟ್ರಂಪ್ ಕಣ್ಣು ಗರ್ಭಿಣಿಯರ ಮೇಲೆ ಬಿದ್ದಿದ್ದು, ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ ವಲಸೆ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ.

    https://twitter.com/Alyssa_Milano/status/1220390714426740738?

    ಟ್ರಂಪ್ ಸರ್ಕಾರದಿಂದ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಅಮೆರಿಕ ಮಹಿಳೆಯರು ವಿರೋಧ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ಮಂದಿ ಸಂಬಂಧಿಕರು, ಸ್ನೇಹಿತರು ಇಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಈ ವೈದ್ಯರ ಆಪ್ತರು ಇಲ್ಲಿ ಬಂದು ಡೆಲಿವರಿ ಮಾಡಿಸಿಕೊಂಡು ಸ್ವದೇಶಕ್ಕೆ ತೆರಳುತ್ತಾರೆ. ಹೀಗಿರುವಾಗ ನಿರ್ಬಂಧಿಸಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರವಾಸಕ್ಕೆ ಬರುತ್ತಿರುವ ಮಹಿಳೆಯರ ಪೈಕಿ ಇವರು ಗರ್ಭಿಣಿಯರು ಎಂದು ಅಮೆರಿಕದ ಅಧಿಕಾರಿಗಳು ಹೇಗೆ ಪತ್ತೆ ಹಚ್ಚುತ್ತಾರೆ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ.

    ಪ್ರಸ್ತುತ ಅಮೆರಿಕ ಕಾನೂನು ಪ್ರಕಾರ, ಯಾವುದೇ ದೇಶದ ದಂಪತಿಗೆ ಅಮೆರಿಕದಲ್ಲೇ ಮಗು ಜನನವಾದರೆ ಆ ಮಗು ಸಹಜವಾಗಿಯೇ ಅಮೆರಿಕದ ಪೌರತ್ವಕ್ಕೆ ಅರ್ಹವಾಗಿರುತ್ತದೆ. ಅಷ್ಟೇ ಅಲ್ಲದೇ ಅಮೆರಿಕದ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳು ಆ ಮಗುವಿಗೆ ಸಿಗುತ್ತದೆ. ಈ ಕಾನೂನನ್ನೇ ರದ್ದು ಪಡಿಸುವುದಾಗಿ 2018 ರಲ್ಲೇ ಟ್ರಂಪ್ ಹೇಳಿದ್ದರು.

    ಇಡೀ ವಿಶ್ವದಲ್ಲಿಯೇ ಅಮೆರಿಕ ಮಾತ್ರ ಈ ರೀತಿ ಪೌರತ್ವ ನೀಡುತ್ತದೆ. ಇದು ಹಾಸ್ಯಾಸ್ಪದ ಮತ್ತು ಅಸಂಬದ್ಧ. ಇದು ಕೊನೆಯಾಗಲೇಬೇಕು. ನಾನೇ ಇದಕ್ಕೆ ಇತಿಶ್ರೀ ಹಾಡುತ್ತೇನೆ ಎಂದು ಖಡಕ್ ಆಗಿ ಹೇಳಿದ್ದರು.

    ಈಗಾಗಲೇ ಕಾಯ್ದೆಯನ್ನು ರದ್ದುಪಡಿಸುವ ಕೆಲಸ ಆರಂಭವಾಗಿದೆ. ನಾನು ಸಹಿ ಹಾಕಿಯೇ ಹಾಕುತ್ತೇನೆ. ಮುಂದೆ ಈ ಆದೇಶ ಅಧಿಕೃತವಾಗಿ ಜಾರಿಯಾಗಲಿದೆ ಎಂದು ಟ್ರಂಪ್ ಗುಡುಗಿದ್ದರು.

    ತಾತ್ಕಾಲಿಕ ವೀಸಾ, ಟ್ರಾವೆಲ್ ವೀಸಾದಲ್ಲಿ ಬಂದಿರುವವರು, ಅಕ್ರಮವಾಗಿ ನೆಲೆಸಿರುವ ದಂಪತಿಗೆ ಮಗುವಾದರೆ ಹಾಲಿ ಕಾನೂನಿನ ಪ್ರಕಾರ ಅಮೆರಿಕದ ಜನ್ಮ ಪ್ರಮಾಣಪತ್ರ ದೊರೆಯುತ್ತದೆ. ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು ಈಗಾಗಲೇ ಅಮೆರಿಕದ ಪೌರತ್ವ ಪಡೆದುಕೊಂಡಿದ್ದಾರೆ.

  • ಹೆಣ್ಮಗುವಿಗೆ ಜನ್ಮಕೊಟ್ಟು ಬಾಣಂತಿ ಸಾವು – ಕುಂದಾಪುರದಲ್ಲಿ ವೈದ್ಯರ ವಿರುದ್ಧ ಆಕ್ರೋಶ

    ಹೆಣ್ಮಗುವಿಗೆ ಜನ್ಮಕೊಟ್ಟು ಬಾಣಂತಿ ಸಾವು – ಕುಂದಾಪುರದಲ್ಲಿ ವೈದ್ಯರ ವಿರುದ್ಧ ಆಕ್ರೋಶ

    ಉಡುಪಿ: ಕುಂದಾಪುರ ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ನಡೆದಿದೆ. ಆಕ್ರೋಶಿತ ಕುಟುಂಬ ಸರ್ಕಾರಿ ಆಸ್ಪತ್ರೆಗೆ ಮುತ್ತಿಗೆ ಹಾಕಿದೆ.

    ಉಡುಪಿ ಜಿಲ್ಲೆ ಕುಂದಾಪುರದ ಅಂಕದಕಟ್ಟೆ ನಿವಾಸಿ ಸುಧೀರ್ ದೇವಾಡಿಗ ಅವರ ಪತ್ನಿ ಸುಜಾತ ಮೃತಪಟ್ಟ ಬಾಣಂತಿ. ಸುಜಾತಾಗೆ ಸರ್ಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿಗೆ ವೈದ್ಯರು ಪ್ರಯತ್ನಿಸಿದ್ದರು. ಆದರೆ ಹೆರಿಗೆ ಸಂದರ್ಭ ಅಧಿಕ ರಕ್ತಸ್ರಾವವಾಗಿದೆ. ವೈದ್ಯರು ಅಧಿಕ ರಕ್ತಸ್ರಾವಕ್ಕೆ ಒಳಗಾದಾಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದರು.

    ಖಾಸಗಿ ಆಸ್ಪತ್ರೆಯಲ್ಲಿ ಅಧಿಕ ರಕ್ತಸ್ರಾವದಿಂದಲೇ ಬಾಣಂತಿ ಸುಜಾತಾ ಮೃತಪಟ್ಟಿದ್ದಾರೆ. ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದಾಗಿ ಸಾವಾಗಿದೆ ಎಂದು ಮಹಿಳೆಯ ಮನೆಯವರು ಆರೋಪಿಸಿ, ಆಸ್ಪತ್ರೆ ಮುಂದೆ ಜಮಾಯಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ಪ್ರಕರಣದಲ್ಲಿ ರಕ್ತಸ್ರಾವ ಹತೋಟಿಗೆ ಬರಲ್ಲ. ನಮ್ಮ ಎಲ್ಲಾ ಪ್ರಯತ್ನ ಮಾಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

    ಸಂಬಂಧಿಕರಾದ ಮಂಜುಳಾ ಮಾತನಾಡಿ, ಸುಜಾತ ಹೆರಿಗೆಗೆ ಹೋಗುವ ತನಕ ಆರೋಗ್ಯವಾಗಿದ್ದರು. ಏಕಾಏಕಿ ಹೀಗಾಗಿದ್ದಕ್ಕೆ ಸರಿಯಾದ ತನಿಖೆಯಾಗಬೇಕು ಎಂದರು. ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ, ಮಾತನಾಡಿ ಕೆಲವು ಪ್ರಕರಣದಲ್ಲಿ ವೈದ್ಯರ ಕೈಮೀರಿ ಪರಿಸ್ಥಿತಿ ಹೋಗುತ್ತದೆ. ರಕ್ತಸ್ರಾವವನ್ನು ಹತೋಟಿಗೆ ತರಲು ಅಸಾಧ್ಯವಾಯ್ತು. ನಮ್ಮ ಕರ್ತವ್ಯ ದಲ್ಲಿ ಲೋಪವೆಸಗಿಲ್ಲ ಎಂದು ಹೇಳಿದರು.

  • ಕೊಚ್ಚಿ ಹೋಯ್ತು ತಾಯಿಯ ಕನಸು- ಗರ್ಭದಲ್ಲಿಯೇ ಕಣ್ಮುಚ್ಚಿದ ಕಂದಮ್ಮ!

    ಕೊಚ್ಚಿ ಹೋಯ್ತು ತಾಯಿಯ ಕನಸು- ಗರ್ಭದಲ್ಲಿಯೇ ಕಣ್ಮುಚ್ಚಿದ ಕಂದಮ್ಮ!

    ಬೆಳಗಾವಿ: ವರುಣನ ಅಬ್ಬರ ಹಾಗೂ ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ನದಿಗೆ ಸಿಕ್ಕಿರುವ ಜನರ ಕನಸುಗಳು ಕೊಚ್ಚಿಕೊಂಡು ಹೋಗುತ್ತಿವೆ. ಅಂತೆಯೇ ಬೆಳಗಾವಿ ಜಿಲ್ಲೆಯ 7 ತಿಂಗಳ ಗರ್ಭಿಣಿಯೊಬ್ಬರ ಮಗುವಿನ ಕನಸು ಕೋಯ್ನಾ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ.

    ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದ ರೇಣುಕಾ ಅವರು ಇನ್ನೇನು ಎರಡು ತಿಂಗಳಿಗೆ ಮಗುವಿಗೆ ಜನ್ಮ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆರಂಭವಾದ ಹೊಟ್ಟೆನೋವಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಗರ್ಭದಲ್ಲಿಯೇ ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ತಾಯಿ ರೇಣುಕಾ ಅವರ ಆಕ್ರಂದನ ಮುಗಿಲುಮುಟ್ಟಿದೆ.

    ಮಳೆ ಹಾಗೂ ಪ್ರವಾಹದಿಂದ ಉಗದಟ್ಟಿ ಗ್ರಾಮವು ನಡುಗಡ್ಡೆಯಂತೆ ಆಗಿದ್ದು, ಮನೆಗಳಿಗೆ ನೀರು ನುಗ್ಗಿ ಜನ ಜೀವನ, ಸಂಚಾರ ಅಸ್ತವ್ಯಸ್ತವಾಗಿದೆ. ರೇಣುಕಾ ಅವರಿಗೆ ಗುರುವಾರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮುಳುಗಡೆಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸೇನಾ ತುಕಡಿಯ ಮೂಲಕ ವೈದ್ಯರನ್ನು ಕರೆತರಲಾಗಿತ್ತು. ಆದರೆ ಅವಧಿಪೂರ್ವ ಹೆರಿಗೆಯಾಗಿದ್ದರಿಂದ ತೂಕವಿಲ್ಲದ ಕಂದಮ್ಮ ತಾಯಿಯ ಮಡಿಲಲ್ಲೇ ಅಸುನೀಗಿತ್ತು.

    ಮಗುವನ್ನು ಕಳಕೊಂಡ ತಾಯಿಯನ್ನು ಗುರುವಾರ ಆಸ್ಪತ್ರೆಗೆ ಶಿಫ್ಟ್ ಮಾಡಬೇಕಾಗಿತ್ತು. ಆದರೆ ನವಮಾಸ ಹೊತ್ತ ಕಂದಮ್ಮ ಇನ್ನಿಲ್ಲ, ನಾನು ಎಲ್ಲಿಗೂ ಬರುವುದಿಲ್ಲ ಅಂತ ರೇಣುಕಾ ಹಠ ಹಿಡಿದಿದ್ದರು. ಕೊನೆಗೂ ಸೇನೆಯ ಸಿಬ್ಬಂದಿ ಹಾಗೂ ವೈದ್ಯರು ರೇಣುಕಾ ಅವರನ್ನು ಒತ್ತಾಯದಿಂದ ಇಂದು ರಕ್ಷಣೆ ಮಾಡಿ, ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

  • ಗರ್ಭಿಣಿ ಜೊತೆ ಕೋತಿಗೂ ನಡೀತು ಸೀಮಂತ!

    ಗರ್ಭಿಣಿ ಜೊತೆ ಕೋತಿಗೂ ನಡೀತು ಸೀಮಂತ!

    ತುಮಕೂರು: ಗರ್ಭಿಣಿಯೊಬ್ಬರ ಸೀಮಂತದ ಕಾರ್ಯಕ್ರಮದ ವೇಳೆ ತುಂಬು ಗರ್ಭಿಣಿಯಾಗಿದ್ದ ಕೋತಿಗೂ ಸೀಮಂತ ಮಾಡಿದ ಅಚ್ಚರಿಯ ಘಟನೆ ಜಿಲ್ಲೆಯ ಗಂಗೋತ್ರಿ ಬಡಾವಣೆಯಲ್ಲಿ ನಡೆದಿದೆ.

    ನಗರದ ಗಂಗೋತ್ರಿ ಬಡಾವಣೆಯ ನಿವಾಸಿ ಅನುಷಾ ಅಶೋಕ್ ಎನ್ನುವವರ ಸೀಮಂತ ಶಾಸ್ತ್ರ ಮಂಗಳವಾರ ನಡೆಯುತ್ತಿತ್ತು. ಇದೇ ವೇಳೆ ತುಂಬು ಗರ್ಭಿಣಿ ಕೋತಿಯೊಂದು ಪದೇ ಪದೇ ಅವರ ಮನೆಯ ಕಿಟಕಿಯಿಂದ ಇಣಕಿ ನೋಡುತಿತ್ತು. ಇದನ್ನು ಗಮನಿಸಿದ ಗರ್ಭಿಣಿ  ಕೋತಿಯನ್ನು ಮುದ್ದಾಡಿದ್ದಾರೆ. ಅಲ್ಲದೆ ತಮಗೆ ಸೀಮಂತ ಶಾಸ್ತ್ರ ಮಾಡಿದಂತೆ ಕೋತಿಗೂ ಸೀಮಂತ ಮಾಡಿಸಿದ್ದಾರೆ.

    ಕೋತಿಗೂ ಕೂಡ ಹಣ್ಣು, ಸಿಹಿ, ಖಾರ, ಚಕ್ಕುಲಿ, ಹೂವಿನ ಸಿಂಗಾರ ಮಾಡಿ ಸೀಮಂತ ಮಾಡಿದ್ದಾರೆ. ಅನುಷಾ ಅವರು ಆಂಜನೇಯ ಭಕ್ತೆ. ಆದ್ದರಿಂದ ಆಂಜನೇಯ ಚಿತ್ರ ಇರುವ ಬ್ರಾಸ್‍ಲೈಟ್‍ನ್ನು ಸದಾ ಧರಿಸುತ್ತಾರೆ. ಹಾಗಾಗಿ ಮಹಿಳೆ ಸಿಮಂತ ಕಾರ್ಯ ನಡೆಯುವ ವೇಳೆ ಕಾಕತಾಳಿಯ ಎಂಬಂತೆ ಗರ್ಭಿಣಿ ಕೋತಿಗೂ ಸೀಮಂತ ನಡೆದಿದ್ದು ಸ್ಥಳದಲ್ಲಿ ನೆರೆದವರ ಅಚ್ಚರಿ ಹಾಗು ಕುತೂಹಲಕ್ಕೆ ಕಾರಣವಾಗಿತ್ತು.

    https://www.youtube.com/watch?v=MfNsXlBW_xk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗರ್ಭಿಣಿಯರಿಗೆ ನಮ್ಮ ಮೆಟ್ರೋದಿಂದ ಗುಡ್‍ನ್ಯೂಸ್

    ಗರ್ಭಿಣಿಯರಿಗೆ ನಮ್ಮ ಮೆಟ್ರೋದಿಂದ ಗುಡ್‍ನ್ಯೂಸ್

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಗರ್ಭಿಣಿಯರಿಗೆ ನಮ್ಮ ಮೆಟ್ರೋ ಗುಡ್‍ನ್ಯೂಸ್ ನೀಡಿದ್ದು, ಮೆಟ್ರೋ ಹತ್ತಲು, ಸ್ಟೇಷನ್‍ಗೆ ಹೋದಾಗ ಗೇಟ್ ದಾಟಲು ಕಷ್ಟ ಪಡುತ್ತಿದ್ದ ಗರ್ಭಿಣಿಯರಿಗೆ ಸಹಾಯವಾಗಲು ಬಿಎಂಆರ್‍ಸಿಎಲ್ ಹೊಸ ವ್ಯವಸ್ಥೆ ಕಲ್ಪಿಸಿ ಕೊಡಲಿದೆ.

    ಸಾಮಾನ್ಯ ಜನರು ಓಡಾಟ ನಡೆಸುವ ಮಂದಿಗೆ ಹೋಲಿಕೆ ಮಾಡಿದರೆ ಗರ್ಭಿಣಿಯರು ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ವೇಳೆ ಸಮಸ್ಯೆ ಎದುರಿಸಿದ್ದರು. ಸದ್ಯ ನಮ್ಮ ಮೆಟ್ರೋ ಈ ಸಮಸ್ಯೆಗೆ ಮುಕ್ತಿ ನೀಡಲು ಗರ್ಭಿಣಿಯರಿಗಾಗಿಯೇ ವಿಶೇಷ ಸರ್ವೀಸ್ ಗೇಟ್‍ಗಳ ವ್ಯವಸ್ಥೆಯನ್ನು ಮಾಡಲಿದೆ.

    ಸದ್ಯ ಮೆಟ್ರೋ ನಿಲ್ದಾಣದಲ್ಲಿ ಇರುವ ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ ಗೇಟ್‍ಗಳು ಟೋಕನ್ ಹಾಕಿದ ತಕ್ಷಣ ತೆರೆದುಕೊಂಡು ನಿರ್ದಿಷ್ಟ ಸಮಯದೊಳಗೆ ಮುಚ್ಚಿಕೊಳ್ಳುತ್ತವೆ. ಈ ಅವಧಿಯಲ್ಲಿ ತುಂಬು ಗರ್ಭಿಣಿಯರು ಗೇಟ್ ದಾಟಲು ಆಗದೇ ಪರದಾಡುತ್ತಿದ್ದರು. ಇದರಿಂದ ಅವರಿಗೆ ಅಪಾಯ ಆಗಬಹುದು ಎಂದು ಬೇರೊಂದು ವ್ಯವಸ್ಥೆ ಮಾಡಲು ಕೆಲವು ಮಹಿಳೆಯರು ಬಿಎಂಆರ್‌ಸಿಎಲ್ ಗೆ ಮನವಿ ಮಾಡಿಕೊಂಡಿದ್ದರು. ಈ ಮನವಿ ಪರಿಗಣಿಸಿ, ಸರ್ವೀಸ್ ಗೇಟ್ ಕಲ್ಪಿಸಿಕೊಡಲು ಮೆಟ್ರೋ ನಿಗಮ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈಲಿನಲ್ಲಿ ಸಿಗರೇಟ್ ಸೇದಬೇಡಿ ಅಂದಿದಕ್ಕೆ ಗರ್ಭಿಣಿಯ ಕೊಲೆಗೈದ ಪಾಪಿ

    ರೈಲಿನಲ್ಲಿ ಸಿಗರೇಟ್ ಸೇದಬೇಡಿ ಅಂದಿದಕ್ಕೆ ಗರ್ಭಿಣಿಯ ಕೊಲೆಗೈದ ಪಾಪಿ

    ಉತ್ತರ ಪ್ರದೇಶ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಸಹಪ್ರಯಾಣಿಕನಿಗೆ ಇಲ್ಲಿ ಸಿಗರೇಟ್ ಸೇದಬೇಡಿ ಅಂದಿದ್ದಕ್ಕೆ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಶಹಜಹಾನ್‍ಪುರ್‍ನಲ್ಲಿ ನಡೆದಿದೆ.

    ಚೀನತ್ ದೇವಿ (45) ಮೃತ ದುರ್ದೈವಿ. ಕೊಲೆ ಮಾಡಿದ ಆರೋಪಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಚೀನತ್ ತನ್ನ ಕುಟುಂಬಸ್ಥರೊಡನೆ ಛತ್ ಪೂಜೆಗೆಂದು ಬಿಹಾರ್ ಗೆ ಪಂಜಾಬ್-ಬಿಹಾರ್ ಜಲಿಯಾನ್ವಾಲ ಎಕ್ಸಪ್ರೆಸ್‍ನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಅದೇ ರೈಲಿನಲ್ಲಿ ಸೋನು ಯಾದವ್ ಕೂಡ ಪ್ರಯಾಣಿಸುತ್ತಿದ್ದನು.

    ಈ ವೇಳೆ ಸೋನುಗೆ ರೈಲಿನಲ್ಲಿ ಸಿಗರೇಟ್ ಸೇದಬೇಡಿ ಎಂದು ಮಹಿಳೆ ಹೇಳಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳ ನಡೆದು ಕೋಪಗೊಂಡ ಸೋನು ಮಹಿಳೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಜಿಆರ್‍ಪಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಂದ್ರಗ್ರಹಣ ಎಫೆಕ್ಟ್: ಹೆರಿಗೆ ಆಸ್ಪತ್ರೆ ಖಾಲಿ ಖಾಲಿ!

    ಚಂದ್ರಗ್ರಹಣ ಎಫೆಕ್ಟ್: ಹೆರಿಗೆ ಆಸ್ಪತ್ರೆ ಖಾಲಿ ಖಾಲಿ!

    ವಿಜಯಪುರ: ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಜಯಪುರ ನಗರದ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿ-ಖಾಲಿಯಾಗಿದೆ.

    ನಗರದ ಆಸ್ಪತ್ರೆಗಳಲ್ಲಿ ತುಂಬು ಗರ್ಭಿಣಿ ಸ್ತ್ರೀಯರಿಗೆ ಸಿಸೇರಿಯನ್ ಗಾಗಿ ದಿನಾಂಕ ನೀಡಿದ್ದರೂ ಯಾರೊಬ್ಬರು ಆಸ್ಪತ್ರೆಯತ್ತ ತಲೆ ಹಾಕುತ್ತಿಲ್ಲ. ಸಿಸೇರಿಯನ್ ಗಾಗಿ ನಿಗದಿಪಡಿಸಿದ ಡೇಟ್‍ಗಳು ಗ್ರಹಣದ ಹಿನ್ನೆಲೆಯಲ್ಲಿ ರದ್ದಾಗಿದೆ. ಇದನ್ನು ಓದಿ: ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಗ್ರಹಣ ಯಾರಿಗೆ ಹಿಡಿಯುತ್ತೆ?

    ಗರ್ಭಿಣಿಯರ ಮನೆಯವರು ಹೆರಿಗೆಗೆ ನಿರಾಕರಣೆ ಮಾಡಿದ್ದು, ಬಹುತೇಕ ಆಸ್ಪತ್ರೆಗಳು ಖಾಲಿ ಖಾಲಿಯಾಗಿವೆ. ಇನ್ನು ಕೆಲವರು ಶನಿವಾರಕ್ಕೆ ಸಿಸೇರಿಯನ್ ಮುಂದೂಡಿದ್ದಾರೆ.

    ಚಂದ್ರ ಗ್ರಹಣದಿಂದಾಗಿ ಮುಂದೆ ಹುಟ್ಟಲಿರುವ ಮಗುವಿಗೆ ಕಂಟಕವಾಗುತ್ತದೆ ಎಂದು ಭಾವಿಸಿ ಗರ್ಭಿಣಿಯರು ದೇವರ ನಾಮ ಸ್ಮರಣೆಯ ಮೊರೆ ಹೋಗಿದ್ದಾರೆ. ಸ್ತ್ರೋತ್ರ ಪುಸ್ತಕಗಳನ್ನು ಓದುತ್ತ ಕುಳಿತ ಗರ್ಭಿಣಿ ಸ್ತ್ರೀಯರು ದೇವರ ನಾಮಸ್ಮರಣೆಯಲ್ಲಿ ತಲ್ಲೀನರಾಗಿದ್ದಾರೆ. ಇದನ್ನು ಓದಿ: ಗ್ರಹಣ ಎಫೆಕ್ಟ್ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ

  • ಈ ಗ್ರಾಮದಲ್ಲಿ ರೋಗಿಗಳನ್ನು ಕೊಂಡೊಯ್ಯೋದಕ್ಕೆ ಆಂಬುಲೆನ್ಸ್ ಗಿಂತ ಮೊದ್ಲು ಟ್ರ್ಯಾಕ್ಟರ್ ಬರ್ಬೇಕು!

    ಈ ಗ್ರಾಮದಲ್ಲಿ ರೋಗಿಗಳನ್ನು ಕೊಂಡೊಯ್ಯೋದಕ್ಕೆ ಆಂಬುಲೆನ್ಸ್ ಗಿಂತ ಮೊದ್ಲು ಟ್ರ್ಯಾಕ್ಟರ್ ಬರ್ಬೇಕು!

    ಧಾರವಾಡ: ತುರ್ತು ಚಿಕಿತ್ಸೆ ಬೇಕಾದಾಗ ಅಥವಾ ಗರ್ಭಿಣಿಗೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ 108ಕ್ಕೆ ಕರೆ ಮಾಡಿ ಅಂಬುಲೆನ್ಸ್ ಕರಿಸೋದು ಸಾಮಾನ್ಯ. ಅಂಬುಲೆನ್ಸ್ ಗೆ ಕರೆ ಮಾಡುವ ಮುಂಚೆ ಒಂದು ಟ್ರ್ಯಾಕ್ಟರ್‍ಗೆ ಕರೆ ಮಾಡಲೇಬೇಕಾದ ಪರಿಸ್ಥಿತಿ ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ ಎದುರಾಗಿದೆ.

    ಹೌದು. ಧಾರವಾಡ ತಾಲೂಕಿನ ಸಿಂಗನಕೊಪ್ಪ ಗ್ರಾಮದಲ್ಲಿ ರಸ್ತೆ ಹಾಳಾಗಿ ಅಂಬುಲೆನ್ಸ್ ಹೋಗೋಕೆ ಆಗಲ್ಲ. ಇನ್ನು ಗ್ರಾಮಕ್ಕೆ ಅಂಬುಲೆನ್ಸ್ ಬಂದರೆ ಅದನ್ನ ಜಗ್ಗೋಕೆ ಒಂದು ಟ್ರ್ಯಾಕ್ಟರ್ ಬೇಕು.

    ಕಳೆದ ಸೆಪ್ಟೆಂಬರ್ 7 ರಂದು ಸಿಂಗನಕೊಪ್ಪ ಗ್ರಾಮದ ಗರ್ಭಿಣಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಅಂಬುಲೆನ್ಸ್ ರಸ್ತೆ ಸರಿ ಇಲ್ಲದ ಕಾರಣ ರಾಡಿಯಲ್ಲಿ ಸಿಲುಕಿಕೊಂಡಿತ್ತು. ಇದನ್ನ ಜಗ್ಗೋಕೆ ಟ್ರ್ಯಾಕ್ಟರ್ ತರಿಸಿದರು.

     

    ಗರ್ಭಿಣಿ ಕೂಡಾ ಅಂಬುಲೆನ್ಸ್‍ಗೆ ಜಗ್ಗುತಿದ್ದ ಟ್ರ್ಯಾಕ್ಟರ್ ಹಿಂದೆ ನಡೆದುಕೊಂಡು ಹೋದ ದೃಶ್ಯವನ್ನ ವಿಡಿಯೋ ಮಾಡಲಾಗಿದೆ. ಈ ರೀತಿ ರಸ್ತೆಗಳು ಹಾಳಾಗಿರೋದು ಸಚಿವ ಸಂತೋಷ್ ಲಾಡ್ ಅವರ ಕ್ಷೇತ್ರದಲ್ಲೇ. ದನ ಕಾಯುವ ಈ ಗವಳಿ ಜನರು ಎಷ್ಟೋ ವರ್ಷಗಳಿಂದ ಇದೇ ರೀತಿ ಪರದಾಟ ನಡೆಸಿದ್ದಾರೆ. ಆದರೆ ಇವರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.