Tag: Pratap Sinha

  • ಸಿದ್ದು, ಡಿಕೆಶಿ ಇಬ್ಬರಿಗೂ ಮುಸ್ಲಿಮರೇ ಬೇಕು: ಪ್ರತಾಪ್ ಸಿಂಹ

    ಸಿದ್ದು, ಡಿಕೆಶಿ ಇಬ್ಬರಿಗೂ ಮುಸ್ಲಿಮರೇ ಬೇಕು: ಪ್ರತಾಪ್ ಸಿಂಹ

    – ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾಲಿಬಾನ್ ಸರ್ಕಾರ ಬರುತ್ತೆ
    -ಕಾಂಗ್ರೆಸ್‍ನಲ್ಲಿ ಈಗ ಎರಡು ಟೀಂ ಇದೆ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಮುಸ್ಲಿಮರೇ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

    ಕಾಂಗ್ರೆಸ್ ನಾಯಕತ್ವದ ಕುರಿತು ಮಾತನಾಡಿದ ಅವರು, ಸಿದ್ದು, ಡಿಕೆಶಿ ಇಬ್ಬರಿಗೂ ಸಾಬ್ರೇ ಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾಲಿಬಾನ್ ಸರ್ಕಾರ ಬರುತ್ತೆ. ಸಿದ್ದರಾಮಯ್ಯ ಅವರಿಗೆ ಸಿಎಂ ಆಗಿದ್ದಾಗ ಯಧುವಂಶದವರು ನೆನಪಾಗಲಿಲ್ಲ. ಯಧುವಂಶ ನಿರ್ವಂಶ ಮಾಡಲು ಹೊರಟ ಅವರು ಟಿಪ್ಪು ಜಯಂತಿ ಮಾಡಿದ್ರು ಎಂದು ಆಕ್ರೋಶ ಹೊರಹಾಕಿದರು.

    ಸಿದ್ದರಾಮಯ್ಯ ಅವರಿಗೆ ಕಾನೂನು ಪದವಿ ಕೊಟ್ಟ ವಿ.ವಿ ನಾಲ್ವಡಿ ಅವರು ಕಟ್ಟಿಸಿದ್ದು. ನಾಲ್ವಡಿ ಅವರು KRS ಡ್ಯಾಂ ಕಟ್ಟಿ, ನೀರು ಕೊಟ್ರು. ಆದರೂ ಅವರಿಗೆ ನೆನಪಾಗಿದ್ದು, ಹೈದರಾಲಿ ಮಗ ಟಿಪ್ಪು ಮಾತ್ರ. ಸಿದ್ದರಾಮಯ್ಯ ಅವರು 5 ವರ್ಷದಲ್ಲಿ ಏನು ಘನಂಧಾರಿ ಕೆಲಸ ಮಾಡಿದ್ರು. ಡಿಕೆಶಿ ವಿರುದ್ಧ ಒಳಗಿಂದಲೇ ಸಂಚು ಮಾಡ್ತಿದ್ದಾರೆ. ಡಿಕೆಶಿ ಅವರನ್ನು ತುಳಿದು ಮತ್ತೆ ಸಿಎಂ ಆಗಲು ಹೊರಟಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೆ ಸಕ್ರಿಯವಾಯ್ತ ದರೋಡೆ ಪ್ರಕರಣಗಳು?

    ಕಾಂಗ್ರೆಸ್ಸಿನಲ್ಲಿ ಇವತ್ತು ಎರಡು ಟೀಂ ಇದೆ. ಒಂದು ಸಿದ್ದರಾಮಯ್ಯ ಟೀಂ, ಮತ್ತೊಂದು ಡಿ.ಕೆ.ಶಿವಕುಮಾರ್ ಟೀಂ. ಸಿದ್ದರಾಮಯ್ಯ ಅವರ ಟೀಂನ ವೈಸ್ ಕ್ಯಾಪ್ಟನ್ ಗೋರಿಪಾಳ್ಯದ ಬಸ್ಸು ಮತ್ತು ಜಮೀರಣ್ಣ. ಡಿ.ಕೆ.ಶಿವಕುಮಾರ್ ಟೀಂನ ವೈಸ್ ಕ್ಯಾಪ್ಟನ್ ನಲಪಾಡ್. ಈ ಹಿಂದೆ ಫರ್ಜೀ ಕೆಫೆಯಲ್ಲಿ ನಲಪಾಡ್ ಅವರು ಪುಂಡಾಟಿಕೆ ಮಾಡಿದ್ದರು. ಇವರಿಬ್ಬರಿಗೂ ಸಾಬ್ರೇ ಬೇಕು, ಕಾಂಗ್ರೆಸ್ಸಿನಲ್ಲಿ ಹಿಂದೂಗಳಿಗೆ ಯಾರಿದ್ದಾರೆ ಎಂದು ಪ್ರಶ್ನಿಸಿದರು.

    ಹಿಂದೂಗಳ ಪರವಾಗಿ ಧನಿ ಎತ್ತುವವರು ಕಾಂಗ್ರೆಸ್ಸಿನಲ್ಲಿ ಯಾರಿದ್ದಾರೆ? ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ತಾಲಿಬಾನಿ ಸರ್ಕಾರ ಬರುತ್ತೆ ಹೊರತು ಕನ್ನಡಿಗರ ಸರ್ಕಾರ ಬರಲ್ಲ. ಈ ಬಗ್ಗೆ ನಾವು ಇವತ್ತಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಮತ್ತೆ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾವು, ನೀವೆಲ್ಲ ಕೆಲಸ ಮಾಡೋಣ ಎಂದು ಕರೆಕೊಟ್ಟರು.

  • ‘ಮೈಸೂರು ಪಾಕ್’ ಹೆಸರಿನಲ್ಲೇ ಮೈಸೂರು ಇದೆ, ಅದನ್ನು ಪ್ರತ್ಯೇಕ ಮಾಡೋಕ್ಕಾಗಲ್ಲ: ಪ್ರತಾಪ್ ಸಿಂಹ

    ‘ಮೈಸೂರು ಪಾಕ್’ ಹೆಸರಿನಲ್ಲೇ ಮೈಸೂರು ಇದೆ, ಅದನ್ನು ಪ್ರತ್ಯೇಕ ಮಾಡೋಕ್ಕಾಗಲ್ಲ: ಪ್ರತಾಪ್ ಸಿಂಹ

    ಮೈಸೂರು: ಲೇಖಕ ಆನಂದ್ ರಂಗನಾಥನ್ ಅವರ ಟ್ವೀಟ್‍ಗೆ ಸಂಸದ ಪ್ರತಾಪ್ ಸಿಂಹ ಸಖತ್ ಟಾಂಗ್ ಕೊಟ್ಟಿದ್ದಾರೆ. ಮೈಸೂರು ಪಾಕ್ ಹೆಸರಲ್ಲೇ ಮೈಸೂರು ಇದೆ. ‘ಪಾಕ್’ದಿಂದ ಮೈಸೂರು ತೆಗೆದರೆ ಅದಕ್ಕೆ ಬೆಲೆ ಇಲ್ಲ. ಅದನ್ನು ಪ್ರತ್ಯೇಕ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಸದ್ಯ ಭಾರೀ ಚರ್ಚೆಗೆ ಕಾರಣವಾಗಿರುವ ಮೈಸೂರ್ ಪಾಕ್ ಜಿಐ ತಮಿಳು ನಾಡಿಗೆ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಆನಂದ್ ರಂಗನಾಥನ್ ಟ್ವೀಟ್ ಬಗ್ಗೆ ಮಾತನಾಡಿ, ಮೈಸೂರು ತೆಗೆದು ‘ಪಾಕ್’ ಮಾತ್ರ ಇದ್ರೆ ಅದು ಬೇರೆ ಅರ್ಥ ಕೊಡಲಿದೆ. ಮೈಸೂರು ಪಾಕ್ ಅನ್ನು ಬೇರೆ ಅವ್ರಿಗೆ ಕೊಡುವ ಪ್ರಶ್ನೆಯೇ ಇಲ್ಲ. ನಾನೂ ಆನಂದ್ ರಂಗನಾಥ್ ಟ್ವಿಟ್ ಗಮನಿಸಿದ್ದೇನೆ. ಅವರು ಈ ರೀತಿಯ ಕೆಲಸ ಜಾಸ್ತಿ ಮಾಡುತ್ತಾರೆ. ಈ ರೀತಿ ಕಿಡಿಗೇಡಿತನದಿಂದ ಮಾಡುವ ಟ್ವೀಟ್‍ಗಳನ್ನು ನಿರ್ಲಕ್ಷಿಸಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಮೈಸೂರು ಪಾಕ್ ಯಾರಿಗೆ ಸೇರಿದ್ದು?- ಏನಿದು ಜಿಐ ಟ್ಯಾಗ್? ಕರ್ನಾಟಕಕ್ಕೆ ಎಷ್ಟು ಸಿಕ್ಕಿದೆ?

    ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಬಳಿ ಆನಂದ್ ಅವರು ಯಾವ ಉದ್ದೇಶದಿಂದ ಹೋಗಿದ್ದರೋ ಗೊತ್ತಿಲ್ಲ. ಆದರೆ ಕೇಂದ್ರ ಸರ್ಕಾರ ತಮಿಳುನಾಡಿಗೆ ಮೈಸೂರು ಪಾಕ್ ಕೊಟ್ಟಿಲ್ಲ, ಅದು ಶುದ್ದ ಸುಳ್ಳು ಸುದ್ದಿ. ಅವರು ಸಚಿವೆಯ ಜೊತೆ ಫೋಟೋ ಹಾಕಿಕೊಂಡು ಅದಕ್ಕೆ ಏನೋ ಕ್ಯಾಪ್ಷನ್ ಬರೆದುಕೊಂಡರೆ ಅದಕ್ಕೆ ನಾವು ಹೊಣೆಯಲ್ಲ. ಅದು ಅವರವರ ಹೊಣೆಗೇಡಿತನವನ್ನು ತೋರಿಸಿಕೊಡುತ್ತದೆ. ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ, ಕೇಂದ್ರ ಸರ್ಕಾರ ಮೈಸೂರು ಪಾಕ್ ಜಿಐ ಟ್ಯಾಗ್ ತಮಿಳುನಾಡಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕೆಲವು ವಸ್ತುಗಳು, ತಿಂಡಿಗಳು ಇತರೇ ಸಾಮಾಗ್ರಿಗಳು ಆಯಾಯ ಪ್ರದೇಶದ ಹೆಸರಿನಿಂದ ಪ್ರಸಿದ್ಧಿಗಳಿಸಿರುತ್ತದೆ. ಉದಾಹರಣೆಗೆ ಮೈಸೂರು ವಿಳ್ಯದ ಎಲೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಸಿಲ್ಕ್ ಹೀಗೆ ಹೊಲವು ಪದಾರ್ಥಗಳು ಮೈಸೂರಿನಲ್ಲಿ ಮಾತ್ರ ತಯಾರಾಗುತ್ತದೆ ಆದ್ದರಿಂದ ಅವುಗಳ ಹೆಸರಿನೊಂದಿಗೆ ಮೈಸೂರನ್ನು ಕೂಡ ಸೇರಿಸಲಾಗಿದೆ. ಮೈಸೂರು ಪಾಕ್ ಯಾರದ್ದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಈ ಬಗ್ಗೆ ಯಾರೋ ವಿವೇಕವಿಲ್ಲದೆ ಮಾತನಾಡುತ್ತಾರೆ ಎಂದರೆ ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.