Tag: Prashanth

  • ದೊಡ್ಮನೆಯಲ್ಲಿ ಸ್ಯಾಂಡ್‍ವಿಚ್ ಆಗಿ ಸಾಕಾಗಿದೆ: ಶಮಂತ್

    ದೊಡ್ಮನೆಯಲ್ಲಿ ಸ್ಯಾಂಡ್‍ವಿಚ್ ಆಗಿ ಸಾಕಾಗಿದೆ: ಶಮಂತ್

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಹಲವಾರು ಪ್ರತಿಭೆಗಳಲ್ಲಿ ಶಮಂತ್ ಕೂಡ ಒಬ್ಬರು. ಫಸ್ಟ್ ಇನ್ನಿಂಗ್ಸ್‍ನಲ್ಲಿ ಅಷ್ಟೇನೂ ಸದ್ದು ಮಾಡದೇ ಇದ್ದರೂ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಅದರ ಎರಡರಷ್ಟು ಆ್ಯಕ್ಟಿವ್ ಆಗಿರುವುದರ ಜೊತೆಗೆ ಮನೆಯಲ್ಲಿ ತಮ್ಮ ಹಾಡಿನ ಮೂಲಕ ಮೈನ್ ಆಫ್ ದಿ ಆಟ್ರ್ಯಾಕ್ಷನ್ ಆಗುತ್ತಿದ್ದಾರೆ.

    ಕಳೆದ ವಾರ ಕಿಚ್ಚ ಸುದೀಪ್, ಪ್ರಶಾಂತ್ ಹಾಗೂ ಚಕ್ರವರ್ತಿ ಮಧ್ಯೆ ಸಿಲುಕಿಕೊಂಡಿರುವ ಶಮಂತ್‍ರವರ ಪರಿಸ್ಥಿತಿ ಯಾವ ರೀತಿ ಇದೆ ಎಂದು ಹಾಡನ್ನು ಬರೆದು ಮುಂದಿನ ವಾರ ಹೇಳಬೇಕೆಂದು ಸೂಚಿಸಿದ್ದರು. ಅದರಂತೆ ಶಮಂತ್ ವಾರದ ಕಥೆ ಕಿಚ್ಚ ಜೊತೆ ಸಂಚಿಕೆಯಲ್ಲಿ ತಾವು ಬರೆದಿರುವ ಹಾಡನ್ನು ಕಿಚ್ಚನ ಎದುರಿಗೆ ಹಾಡಿ ಮಿಂಚಿದ್ದಾರೆ.

    ಅಯ್ಯಯ್ಯೋ ನೋಡು ದೇವ್ರೆ, ಸಿಕ್ಕಾ ಪಟ್ಟೆ ಕಷ್ಟ ಮಾರ್ರೆ, ಇತ್ತ ಮಳ್ಳ, ಅತ್ತ ಸುಳ್ಳ, ಮಧ್ಯ ನಾನು ಕಳ್ಳ ಅಲ್ಲ. ಅಲ್ಲಿ ಮಳ್ಳಿ, ಇಲ್ಲಿ ಕುಳ್ಳಿ, ನಾನು ಈಗ ಎಲ್ಲಿ ಹೋಗ್ಲಿ, ನನ್ನ ಪಾಡಿಗೆ ನಾನು ಕೂತಿದ್ರು ನನ್ನ ಬುಡಕ್ಕೆ ಬರ್ತಾರೆ. ಇನ್ನೇನು ಕಿರಿಕ್ ಸ್ಟಾರ್ಟ್ ನಾನು ಓಡಬೇಕಿದೆ, ಅಲ್ಲಿದ್ದ ತಪ್ಪಿಗೆ ಸಾಕ್ಷಿ ಹೇಳಬೇಕಾಗಿದೆ. ಅಯ್ಯಪ್ಪ ಸ್ಯಾಂಡ್‍ವಿಚ್ ಬಾಳು ನಂದು ಆಗಿ ಹೋಗಿದೆ, ಸಾಕಾಗೋಗಿದೆ.. ಸಾಕಾಗೋಗಿದೆ.. ಎಂದು ಹಾಡು ಹೇಳಿದ್ದಾರೆ.

    ಹಾಡಿನ ನಂತರ ಲಿರಿಕ್‍ನಲ್ಲಿ ಮಳ್ಳ-ಸುಳ್ಳ ಎಂದು ಬಂತು ಅದು ಯಾರು ಎಂದು ಸುದೀಪ್ ಕೇಳಿದಾಗ, ಹಾಗೆ ಸುಮ್ಮನೆ ಬರೆದೆ ಎಂದು ಶಮಂತ್ ಹೇಳುತ್ತಾರೆ. ಆಗ ಸುದೀಪ್ ಹೋಗ್ಲಿ ಬಿಡಿ ಯಾಕೆ, ಆಮೇಲೆ ನಾನು ನಿಮ್ಮನ್ನು ಸ್ಯಾಂಡ್‍ವಿಚ್ ಮಾಡುವುದು ಎಂದು ರೇಗಿಸುತ್ತಾರೆ.

    ಒಟ್ಟಾರೆ ಶಮಂತ್ ಪ್ರತಿಭೆ ಕಂಡು ಮನೆಮಂದಿ ಜೊತೆ ಕಿಚ್ಚ ಕೂಡ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

  • ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

    ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

    ಪ್ರತಿ ಬಾರಿಯಂತೆ ಈ ಸಲ ಕೂಡ ಮನೆಯ ಸ್ಪರ್ಧಿಗಳನ್ನು ವಿಜಯ ಯಾತ್ರೆ ಹಾಗೂ ನಿಂಗೈತೆ ಇರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಬಿಗ್‍ಬಾಸ್ ಡಿಫರೆಂಟ್ ಟಾಸ್ಕ್ ಅನ್ನು ನೀಡಿದ್ದರು. ಅದರಂತೆ ಮೊದಲ ಟಾಸ್ಕ್‌ನಲ್ಲಿ ಗೆದ್ದ ವಿಜಯಯಾತ್ರೆ ತಂಡದವರು ಓಡಾಡಬೇಕಾದರೆ, ನಿಂಗೈತೆ ತಂಡದ ಇಬ್ಬರು ಸದಸ್ಯರು ಬಾಗಿಲನ್ನು ತೆಗೆಯಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು.

    ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಶುಭಾ ಪೂಂಜಾ ಟಾಸ್ಕ್ ಗೆದ್ದ ಖುಷಿಯಲ್ಲಿ ಮಂಜುರನ್ನು ಸಿಕ್ಕಾಪಟ್ಟೆ ಸತಾಯಿಸಿದ್ದರು. ನಂತರ ‘ಹೀಗೂ ಅಂಟೆ’ ಟಾಸ್ಕ್‌ನಲ್ಲಿ ಗೆದ್ದ ಮಂಜು ಶುಭಾ ಪೂಂಜಾ ವಿರುದ್ಧ ರಿವೇಂಜ್ ತೆಗೆದುಕೊಂಡಿದ್ದಾರೆ.

    ಹೀಗೂ ಅಂಟೆ ಟಾಸ್ಕ್‌ನಲ್ಲಿ ಸೋತ ವಿಜಯಯಾತ್ರೆ ತಂಡದ ಇಬ್ಬರು ಸದಸ್ಯರು ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಅಂಬೆ ಕಾಲಿನಲ್ಲಿ ಓಡಾಡಬೇಕು ಎಂದು ತಿಳಿಸಿದ್ದಾರೆ. ಇದನ್ನು ಕೇಳಿ ಮಂಜು, ನನಗೆ ಬಹಳ ಖುಷಿಯಾಗುತ್ತಿದೆ ಅಂತ ಹೇಳಿ, ತಂಡವರೆಲ್ಲರೂ ಶುಭಾ ಪೂಂಜಾ ಹಾಗೂ ಪ್ರಶಾಂತ್‍ರವರನ್ನು ಸೂಚಿಸುತ್ತಾರೆ.

    ಬಳಿಕ ಅಂಬೆ ಕಾಲಿನಲ್ಲಿ ಓಡಾಡಲು ಆರಂಭಿಸಿದ ಶುಭಾಗೆ, ಟೈಂ ಒಂದೇ ರೀತಿ ಇರುವುದಿಲ್ಲ, ಯಾವಾಗಲೂ ತಿರುಗುತ್ತಲೇ ಇರುತ್ತದೆ. ಬಿಗ್ ಬಾಸ್ ಈ ಶಿಕ್ಷೆಯನ್ನು ಎರಡು ದಿನ ತೆಗೆಯಲೇ ಬಿಡಿ, ಜಿಂಕೆ ತರ ಎಗರುತ್ತಿದ್ದೆ, ಯಾಕೆ ಕಪ್ಪೆ ತರ ಕುತಿದ್ಯಾ, ನನ್ನ ಎದುರು ಹಾಕ್ಕೊಂಡವರು ಮಂಡಿ ಬಗ್ಗಿಸಿಯೇ ನಡೆಯಬೇಕು ಎಂದು ಮಂಜು ಅಣುಕಿಸುತ್ತಾರೆ. ಈ ವೇಳೆ ನಾನು ಏನು ಮಾಡಿದೆ ನನಗೆ ಯಾಕೆ ಶಿಕ್ಷೆ ಎಂದು ಪ್ರಶಾಂತ್ ಕೇಳಿದಾಗ, ಚಕ್ರವರ್ತಿಯವರು ಬಾತ್ ರೂಂ ಬಾಗಿಲು ಕುಟ್ಟಿದ್ಯಾಲ್ಲೋ ಚಕ್ರಿ ಬಾಗಿಲು ತೆಗಿ ಅಂತ, ಅದಕ್ಕೆ ಈ ಶಿಕ್ಷೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ರೇಗಿಸಿದ್ದಾರೆ.

    ಒಟ್ಟಾರೆ ಮನೆ ಪೂರ್ತಿ ಅಂಬೆ ಗಾಲಿನಲ್ಲಿ ಶುಭಾ ಪೂಂಜಾ ಓಡಾಡಲು ಪರದಾಡಿದರೆ, ಚಕ್ರವರ್ತಿಯವರು ಒಂದೇ ಚೇರ್ ಮೇಲೆ ಕುಳಿತು ಡ್ರೆಸ್ ಚೇಂಜ್ ಮಾಡಲು ಆಗದೇ ಕಿಚನ್ ಬಳಿಯೇ ಕುಳಿತುಕೊಂಡು ಟಿ-ಶರ್ಟ್ ಬಿಚ್ಚಿ ಮತ್ತೊಂದು ಟಿ-ಶರ್ಟ್ ಕಿಚನ್ ಬಳಿಯೇ ತಂದು ಕೊಡುವಂತೆ ಮನೆಮಂದಿಯನ್ನು ಬೇಡುತ್ತಾ ಒದ್ದಾಡಿದ್ದಾರೆ.

  • ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ನೀಡಿದ್ದ ಚಿನ್ನದ ಮೊಟ್ಟೆ ಟಾಸ್ಕ್ ವೇಳೆ ಪ್ರಿಯಾಂಕ ತಿಮ್ಮೇಶ್ ತಲೆಯ ಮೇಲೆ ದಿವ್ಯಾ ಸುರೇಶ್ ಮೊಟ್ಟೆ ಒಡೆದು ಗೆಲ್ಲುತ್ತಾರೆ. ಇದರಿಂದ ತಮ್ಮ ಬಳಿ ಇದ್ದ ಸಂಪೂರ್ಣ ಹಣ ಕಳೆದುಕೊಂಡ ಪ್ರಿಯಾಂಕ ತಿಮ್ಮೇಶ್, ಶಮಂತ್‍ರಿಂದಾಗಿ ದಿವ್ಯಾ ಸುರೇಶ್ ಗೆದ್ದರು ಎಂಬ ಕಾರಣಕ್ಕೆ ಶಮಂತ್ ಲಾಕರ್‌ನಲ್ಲಿದ್ದ ಹಣವನ್ನು ಕದಿಯಲು ಮುಂದಾಗುತ್ತಾರೆ.

    ಈ ವೇಳೆ ಲಾಕರ್‍ನಲ್ಲಿದ್ದ ಹಣವನ್ನು ಕಾಪಾಡಿಕೊಳ್ಳಲು ಶಮಂತ್, ಪ್ರಿಯಾಂಕ ತಿಮ್ಮೇಶ್ ಜೊತೆ ಡೀಲ್ ಮಾಡಿಕೊಳ್ಳುತ್ತಾರೆ. ನಾನು ಈಗ ನಿನಗೆ 14 ಸಾವಿರ ರೂ. ನೀಡುತ್ತೇನೆ. ಆದರೆ ಮುಂದಿನ ಟಾಸ್ಕ್‌ನಲ್ಲಿ ನೀನು ಎಷ್ಟೇ ಗೆದ್ದರೂ 25 ಸಾವಿರ ಮೇಲೆ ದಾಟುವುದಿಲ್ಲ. ಆಗ ನಿನ್ನ ಬಳಿ ಇರುವ ಹಣದಲ್ಲಿ ನನಗೆ ಪಾಲು ನೀಡುವುದಾಗಿ ಪ್ರಾಮಿಸ್ ಮಾಡಿದರೆ ಕೊಡುತ್ತೇನೆ ಎನ್ನುತ್ತಾರೆ. ಅದರಂತೆ ಡೀಲ್ ಓಕೆ ಮಾಡಿಕೊಂಡು ಪ್ರಿಯಾಂಕಗೆ ಶಮಂತ್ ಹಣ ನೀಡುತ್ತಾರೆ.

    ನಂತರ ರಾತ್ರಿ ಗಾರ್ಡನ್ ಏರಿಯಾದಲ್ಲಿ ಶಮಂತ್, ಪ್ರಶಾಂತ್, ಚಕ್ರವರ್ತಿ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಪ್ರಿಯಾಂಕ ಬಳಿ 14,800ರೂ ಇತ್ತು. ಸದ್ಯ ಅವರ ಲಾಕರ್‌ನಲ್ಲಿ 14,800 ರೂ ಇಟ್ಟಿದ್ದೇನೆ ಅದು ನನಗೆ ಆಮೇಲೆ ವಾಪಸ್ ಬರುತ್ತದೆ ಎಂದು ಹೇಳಿದ್ದಾರೆ. ಆಗ ಚಕ್ರವರ್ತಿಯವರು ನಿನ್ನ ಬಳಿ ಪ್ರಿಯಾಂಕ ಹಣವನ್ನು ಕಿತ್ತುಕೊಂಡು ಹೋಗಿದ್ದಾರಾ ಎಂದಾಗ, ಲಾಕರ್‌ನಲ್ಲಿದ್ದ ಎಲ್ಲವನ್ನು ಎತ್ತಿಕೊಂಡು ಹೋಗಿ ಬಿಟ್ಟಿದ್ದರು ಎಂದು ಶಮಂತ್ ಹೇಳುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮೊಟ್ಟೆ ಒಡೆದಿರುವುದು ದಿವ್ಯಾ ಸುರೇಶ್, ಹಣ ಕೊಟ್ಟಿರುವುದು ಇವನು, ಇವನೆಷ್ಟು ಮುಟ್ಟಾಳ ಎಂದು ಪ್ರಶಾಂತ್ ಬಳಿ ಮಾತು ಒಪ್ಪಿಸುತ್ತಾ, ಹೊಸ ಚಾಪ್ಟರ್ ಎಂದು ಅಣುಕಿಸುತ್ತಾರೆ.

    ಈ ವೇಳೆ ಶಮಂತ್ ನಗುತ್ತಾ ನಿಮಗೇಕೆ, ನೋಡಿ ನಾನು ಒಂದು ಪ್ರಾಮಿಸ್ ಮೇಲಿನ ನಂಬಿಕೆಯಿಂದ ಹಣ ನೀಡಿದ್ದೇನೆ ಎನ್ನುತ್ತಾರೆ. ಅದಕ್ಕೆ ಚಕ್ರವರ್ತಿಯವರು ನಿನ್ನನ್ನು ನಾನು ಕರೆಸಿ, ನಿನ್ನ ತಲೆಯ ಮೇಲೆ ಮೊಟ್ಟೆ ಹೊಡೆಸಿ, ಇವನಿಗೆ ದುಡ್ಡು ಕೊಟ್ಟು, ಇಷ್ಟೇಲ್ಲಾ ನಾವು ಈ ಹುಡುಗನಿಗೋಸ್ಕರ ಮಾಡಿದರೆ, ಒಂದು ಹುಡುಗಿಗೆ ಹೆದರಿಕೊಂಡು ಹಣ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ಹೇಳುತ್ತಾರೆ.

    ಈ ಮಧ್ಯೆ ಹೆದರಿಕೊಂಡಿರುವ ಪದವನ್ನು ವಾಪಸ್ ತೆಗೆದುಕೊಳ್ಳಿ ಎಂದು ಶಮಂತ್ ಹೇಳುವ ವೇಳೆ ಪ್ರಶಾಂತ್, ಹಾಗದರೆ ಇವನು ಪ್ರಿಯಾಂಕಗೆ ದುಡ್ಡು ನೀಡಿದ್ದಾನಾ ಎಂದು ಚಕ್ರವರ್ತಿಯವರನ್ನು ಪ್ರಶ್ನಿಸುತ್ತಾರೆ. ಬಳಿಕ ಹಣ ಕೊಟ್ಟಿರುವ ವಿಚಾರ ತಿಳಿದು, ಸೋಫಾ ಮೇಲೆ ಮಲಗಿಕೊಂಡು ನಗುತ್ತಾ, ಬಳಿಕ ಎದ್ದು ತಮ್ಮ ಎರಡು ಚಪ್ಪಲಿಗಳನ್ನು ಪ್ರಶಾಂತ್, ಶಮಂತ್ ಮೇಲೆ ಎಸೆದಿದ್ದಾರೆ.

    ನಂತರ ಈಗ ನೀವು ನಗುತ್ತಿದ್ದೀರಾ ಅಲ್ವಾ, ನಾಳೆಯವರೆಗೂ ನನಗೆ ಟೈಮ್ ಕೊಡಿ ಎನ್ನುತ್ತಾರೆ. ಆಗ ಚಕ್ರವರ್ತಿಯವರು, ಮೊಟ್ಟೆ ಹೊಡೆದಿದ್ದು ಡಿಎಸ್, ಜಗಳ ಆಡಿದ್ದು ಡಿಎಸ್, ಇವನಿಗೋಸ್ಕರ ನೀನು ಅಷ್ಟೇಲ್ಲಾ ತ್ಯಾಗ ಮಾಡಿದೆ ಆದರೆ ಇವನು ಪ್ರಿಯಾಂಕಳನ್ನು ಸೇವ್ ಮಾಡುತ್ತಿದ್ದಾನೆ ಎಂದು ಪ್ರಶಾಂತ್‍ಗೆ ಹೇಳುತ್ತಾ ನಕ್ಕಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ