Tag: Prashant

  • ನಾನು ಸಿಗಲಿಲ್ಲ ಎಂದು ಹೀಗೆಲ್ಲ ಮಾಡಿದ್ದಾನೆ: ಅಯೋಗ್ಯ ಸಿನ್ಮಾದ ಸಹ ನಟಿ ದೃಶ್ಯ

    ನಾನು ಸಿಗಲಿಲ್ಲ ಎಂದು ಹೀಗೆಲ್ಲ ಮಾಡಿದ್ದಾನೆ: ಅಯೋಗ್ಯ ಸಿನ್ಮಾದ ಸಹ ನಟಿ ದೃಶ್ಯ

    ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯಾಗಿರುವ ದೃಶ್ಯಾರ ಮೇಲೆ ಕೆಲವೊಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ನಾನು ಸಿಗಲಿಲ್ಲ ಎಂದು ಪ್ರಶಾಂತ್ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ದೃಶ್ಯ ಪ್ರತ್ಯಾರೋಪ ಮಾಡಿದ್ದಾರೆ.

    ಪ್ರಶಾಂತ್ ಎಂಬವರು ನನ್ನ ಮೇಲೆ ಕೆಲವು ಅರೋಪಗಳನ್ನು ಮಾಡಿದ್ದಾರೆ. ನಾನು ಮತ್ತು ಪ್ರಶಾಂತ್ ಕಳೆದ ಎರಡು ವರ್ಷಗಳಿಂದ ಲಿವಿಂಗ್ ರಿಲೇಶನ್ ಶಿಪ್‍ನಲ್ಲಿದ್ದೀವಿ ಎಂದು ಸುಳ್ಳು ಹೇಳಿದ್ದಾರೆ. ನನ್ನೊಂದಿಗೆ ಅವರ ಸಂಬಂಧವಿಲ್ಲ. ನಾನು ಕಿರುಕುಳ ನೀಡುತ್ತಿದ್ದೆ, ಬ್ಲ್ಯಾಕ್ ಮೇಲ್ ಮಾಡ್ತಿದ್ದೆ ಎಂಬ ಆರೋಪಗಳನ್ನು ನನ್ನ ಮೇಲೆ ಮಾಡಿದ್ದರಿಂದ ತುಂಬಾ ನೋವಾಗಿದೆ ಎಂದು ನಟಿ ದೃಶ್ಯ ಬೇಸರ ವ್ಯಕ್ತಪಡಿಸಿದರು.

    ಪ್ರಶಾಂತ್ ಬಳಿ ನಾನು ಯಾವತ್ತು ಹಣ ಕೇಳಿಲ್ಲ. ಅವರು ಫೇಸ್‍ಬುಕ್ ಬಳಕೆ ಮಾಡೋದು ಇಲ್ಲ. ಅದು ಹೇಗೆ ಅವರ ಅಕೌಂಟ್ ಹ್ಯಾಕ್ ಆಗುತ್ತದೆ. ಈಗಾಗಲೇ ನಾನು ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದೇನೆ. ರಾಜ್‍ಕುಮಾರ್ ಕುಟುಂಬಸ್ಥರ ಹೆಸರು ಬಳಸಿಕೊಂಡು ಓಡಾಡುತ್ತಿದ್ದಾರೆ. ರಾಜ್‍ಕುಮಾರ್ ಹೆಸರನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮನೆಗೆ ಬಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು. ಅಲ್ಲದೇ ನನ್ನ ತಂದೆಗೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರಿಂದ 2018ರಲ್ಲಿಯೇ ಕುಶಾಲನಗರದಲ್ಲಿ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದೇನೆ ಎಂದರು.

    ದೂರು ದಾಖಲಿಸಿದ್ದರ ಪ್ರತಿಕಾರಕ್ಕಾಗಿ ನನ್ನ ವಿರುದ್ಧ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ನಾನು ಅವನಿಗೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ರೀತಿ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟ ಅಮವಾಸೆ!

    ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟ ಅಮವಾಸೆ!

    ಪ್ರಶಾಂತ್ ನಿರ್ದೇಶನದ ಅಮವಾಸೆ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟಿಸಿತ್ತು. ಇದು ಹೇಳಿ ಕೇಳಿ ಹೊಸಾ ಅಲೆಯ ಚಿತ್ರಗಳ ಜಮಾನ. ಹುಮ್ಮಸ್ಸಿನ ಹುಡುಗರು ಸದ್ದೇ ಇಲ್ಲದೆ ಎಂಟ್ರಿ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಡುತ್ತಾರೆ. ಅಮವಾಸೆಯಲ್ಲೂ ಕೂಡಾ ಇಂಥಾದ್ದೇ ಕಮಾಲ್ ನಡೆದಿರಬಹುದೆಂಬ ನಿರೀಕ್ಷೆ ಹೊತ್ತು ಥೇಟರು ಹೊಕ್ಕವರಿಗೆ ಸಿಕ್ಕಿದ್ದು ನಿರಾಸೆಯ ಅನುಭವ!

    ಯಾವ್ಯಾವುದೋ ಕಾರಣಕ್ಕೆ ಸತ್ತು ಹೋದವರು ದೆವ್ವವಾಗೋದು, ಅದಕ್ಕೆ ಕಾರಣರಾದವರನ್ನು ಥರ ಥರದಲ್ಲಿ ಕಾಡೋದು… ಹುಡುಕಿದರೆ ಈ ಥರದ ಕಥೆ ಹೊಂದಿರೋ ಚಿತ್ರಗಳಿಗೆ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಇಂಥವುಗಳಿಗೆ ಹೊಸಾ ಉದಾಹರಣೆಯಂಥಾ, ಹಳೇ ಟ್ರ್ಯಾಕಿನ ಚಿತ್ರವಾಗಿ ಅಮವಾಸೆ ದಾಖಲಾಗಿದೆ.

    ಈ ಚಿತ್ರದ್ದು ಸಾಧಾರಣ ಕಥೆ. ನಾಲ್ವರು ಆತ್ಮೀಯ ಸ್ನೇಹಿತರಲ್ಲೊಬ್ಬನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗುತ್ತೆ. ಆಗ ಆತನ ಮುಂದೆ ಸ್ನೇಹ ಅಥವಾ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳುವಂಥಾ ಭಯಾನಕ ಸಂದರ್ಭ ಸೃಷ್ಟಿಯಾಗುತ್ತೆ. ಆತ ಸ್ನೇಹವನ್ನೇ ಆಯ್ದುಕೊಂಡಿದ್ದರ ಫಲವಾಗಿ ಹುಡುಗಿಯ ದುರಂತ ಅಂತ್ಯ. ನಂತರ ಈತನೂ ಆತ್ಮಹತ್ಯೆ ಮಾಡಿಕೊಂಡೇಟಿಗೆ ಕಥೆಗೊಂದು ತಿರುವು. ಅದರಾಚೆಗೆ ಪ್ರೀತಿ ಕೈ ತಪ್ಪಿ ಸತ್ತ ಹುಡುಗಿ ಪ್ರೇತಾತ್ಮವಾಗಿ ಕಾಡುತ್ತಾಳಾ ಎಂಬುದು ಕುತೂಹಲ.

    ಆದರೆ ಈ ಚಿತ್ರದುದ್ದಕ್ಕೂ ಅಂಥಾ ಯಾವ ಕುತೂಹಲಕರವಾದ ವಿಚಾರಗಳೂ ಇಲ್ಲ. ನಿರ್ದೇಶಕ ಪ್ರಶಾಂತ್ ಉಲ್ಟಾ ಸ್ಕ್ರೀನ್ ಪ್ಲೇ ಕೂಡಾ ವರ್ಕೌಟ್ ಆಗಿಲ್ಲ. ಇಡೀ ಚಿತ್ರ ಹಾರರ್ ಕಥೆ ಹೊಂದಿದ್ದರೂ ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟಂತಾಗಿದೆ. ಸಿದ್ಧಸೂತ್ರದ ಆಚೀಚೆಗೆ ಕದಲದ ಅಮವಾಸೆಯ ಬೂತಚೇಷ್ಟೆಗಳು ಯಾವ ರೀತಿಯಿಂದಲೂ ಕಾಡೋದಿಲ್ಲ. ಕತೆ ಸಾಧಾರಣವಾದದ್ದೇ ಆದರೂ ಒಂದಷ್ಟುಯ ಶ್ರಮ ವಹಸಿದ್ದರೆ ತಕ್ಕಮಟ್ಟಿಗೆ ಎಫೆಕ್ಟಿವ್ ಆಗಬಹುದಾಗಿದ್ದ ಅವಕಾಶವನ್ನೂ ಕೂಡಾ ನಿರ್ದೇಶಕರು ಕೈ ತಪ್ಪಿಸಿಕೊಂಡಿದ್ದಾರೆ.

    ಹೊಸಬರು ಚಿತ್ರ ಮಾಡಿದಾಗ ಒಂದಷ್ಟು ನಿರೀಕ್ಷೆಗಳಿರುತ್ತವೆ. ಹೊಸಾ ಬಗೆಯ ಕಥೆಯೊಂದಿಗೆ ಏನೋ ಮೋಡಿ ಮಾಡಿರುತ್ತಾರೆಂಬ ನಂಬಿಕೆಯೂ ಪ್ರೇಕ್ಷಕರಲ್ಲಿರುತ್ತೆ. ಆದರೆ ಅಮವಾಸೆಯಂಥಾ ಚಿತ್ರಗಳು ಕೊಡಮಾಡೋದು ಅಪಾದಮಸ್ತಕ ನಿರಾಸೆಯನ್ನಷ್ಟೇ. ಇದರ ಪರಿಣಾಮವಾಗಿ ಕೆಲ ಒಳ್ಳೆ ಚಿತ್ರಗಳನ್ನೂ ಸೋಲಿನ ಬಾಧೆ ಆವರಿಸಿಕೊಳ್ಳುವಂತಾಗುತ್ತದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv