Tag: Pranam Devraj

  • ಕುಮಾರಿಯ ಬಗ್ಗೆ ಯಾಕಿಂಥಾ ಕುತೂಹಲ?

    ಕುಮಾರಿಯ ಬಗ್ಗೆ ಯಾಕಿಂಥಾ ಕುತೂಹಲ?

    ಬೆಂಗಳೂರು: ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ‘ಕುಮಾರಿ 21 ಎಫ್’ ಎಂಬ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿರೋ ವಿಚಾರ ಎಲ್ಲರಿಗೂ ತಿಳಿದದ್ದೇ. ಆದರೆ, ಈ ಚಿತ್ರದ ಟೈಟಲ್ಲಿನ ಬಗ್ಗೆ ಇದೀಗ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಇದರ ಅಸಲೀ ನಿಗೂಢ ಏನಿರಬಹುದೆಂಬ ಬಗ್ಗೆ ಪ್ರೇಕ್ಷಕರಲ್ಲೊಂದು ಗಾಢವಾದ ಕುತೂಹಲವೂ ಇದೆ!

    ಇದು ನಿಜಕ್ಕೂ ಆಲೋಚನೆಗೆ ಹಚ್ಚುವ ಟೈಟಲ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಗೆಗಿನ ಯಾವ ವಿಚಾರಗಳನ್ನೂ ಬಿಟ್ಟುಕೊಡದ ಚಿತ್ರ ತಂಡ ಥೇಟರಿನಲ್ಲಿಯೇ ಅದನ್ನು ಪ್ರೇಕ್ಷಕರ ಮುಂದೆ ತೆರೆದಿಡೋ ನಿರ್ಧಾರ ಮಾಡಿದಂತಿದೆ. ನಾಯಕ ಪ್ರಣಾಮ್ ಮಾತುಗಳಲ್ಲಿಯೇ ಈ ಚಿತ್ರ ವಿಭಿನ್ನವಾದೊಂದು ಕಥೆ ಹೊಂದಿದೆ ಎಂಬ ವಿಚಾರ ಮಾತ್ರ ಜಾಹೀರಾಗಿದೆ.

    ಹೇಳಿ ಕೇಳಿ ಪ್ರಣಾಮ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಪುತ್ರ. ಆದ್ದರಿಂದಲೇ ಆತನ ಎಂಟ್ರಿಯ ಬಗ್ಗೆ ಪ್ರೇಕ್ಷಕರಲ್ಲೊಂದು ಮಾಸ್ ಆದ ನಿರೀಕ್ಷೆ ಇದ್ದೇ ಇತ್ತು. ಪ್ರಣಾಮ್ ಆಕ್ಷನ್ ಓರಿಯಂಟೆಡ್ ಕಥೆಯ ಮೂಲಕವೇ ಎಂಟ್ರಿ ಕೊಡುತ್ತಾರೆಂಬ ಬಗೆಗೂ ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಪ್ರಣಾಮ್ ಎಲ್ಲ ಹೀರೋಯಿಸಮ್ಮಿನ ಅಬ್ಬರದಾಚೆಗೆ ನಟನೆಗೆ ಸವಾಲಾಗಿರುವ ಪಾತ್ರವನ್ನೇ ಆರಿಸಿಕೊಳ್ಳುವ ಮೂಲಕ ಭರವಸೆ ಹುಟ್ಟಿಸಿದ್ದಾರೆ.

    ಪ್ರಣಾಮ್ ಅವರದ್ದಿಲ್ಲಿ ತನ್ನ ಪಾಡಿಗೆ ತಾನಿರುವ, ಸಣ್ಣ ಕನಸೇ ಆದರೂ ಕಷ್ಟಪಟ್ಟು ನನಸು ಮಾಡಿಕೊಳ್ಳುವ ಪಾತ್ರವಂತೆ. ಇಂಥಾ ಹುಡುಗನ ಬಾಳಲ್ಲಿ ಬಿಂದಾಸ್ ಹುಡುಗಿಯೊಬ್ಬಳ ಪ್ರವೇಶವಾದ ನಂತರದಲ್ಲಿ ನಡೆಯುವ ರಸವತ್ತಾದ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಈಗಾಗಲೇ ಟ್ರೈಲರ್ ಗೆ ವ್ಯಾಪಕ ಮೆಚ್ಚುಗೆ ಬಂದಿದೆ. ಪ್ರಣಾಮ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರೋ ದಿನಗಳೂ ಹತ್ತಿರಾಗಿವೆ.

  • ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ಅಲ್ಲ ಪ್ರಣಾಮ್?

    ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ಅಲ್ಲ ಪ್ರಣಾಮ್?

    ಬೆಂಗಳೂರು: ನಗರದಲ್ಲಿ ಉದ್ಯಮಿ ಮೊಮ್ಮಗನ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಸಿಕ್ಕಿದೆ.

    ಘಟನೆ ನಡೆದ ವೇಳೆ ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಸ್ಯಾಂಡಲ್‍ವುಡ್ ನಟರು ಇದ್ದರು ಎಂದು ತಿಳಿದುಬಂದಿತ್ತು. ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಕಾರಿನಲ್ಲಿ ಇದ್ದರೆಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದನ್ನು ಅಲ್ಲಗಳೆದಿದ್ದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದ್ರೆ ಆದಿಕೇಶವುಲು ಮೊಮ್ಮಗನ ಜೊತೆ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ದೇವರಾಜ್ ಅಲ್ಲ, ಅವರ ಸಹೋದರ ಪ್ರಣಾಮ್ ದೇವರಾಜ್ ಎಂದು ತಿಳಿದುಬಂದಿದೆ.

     

    ಪ್ರಜ್ವಲ್ ಸಹೋದರ ಪ್ರಣಾಮ್ ದೇವರಾಜ್‍ನನ್ನು ನೋಡಿ ಜನರು ಗೊಂದಲಕ್ಕೀಡಾದರು. ನೋಡೋದಕ್ಕೆ ಇಬ್ಬರೂ ಒಂದೇ ರೀತಿ ಇದ್ದ ಹಿನ್ನೆಲೆಯಲ್ಲಿ ಜನ ಗೊಂದಲಕ್ಕೀಡಾಗಿದ್ದರು. ನಂತರ ಪ್ರಜ್ವಲ್ ದೇವರಾಜು ಅಂತ ತಪ್ಪಾಗಿ ಗ್ರಹಿಸಿದ್ದರು.

    ಇದನ್ನೂ ಓದಿ: ಅಪಘಾತಕ್ಕೂ ನನಗೂ ಸಂಬಂಧವಿಲ್ಲ-ಅಭಿಮಾನಿಗಳಿಗೆ ವಿಡಿಯೋ ಶೇರ್ ಮಾಡಿದ ದಿಗಂತ್

    ಪ್ರಣಾಮ್ ದೇವರಾಜು ಕೂಡ ನಟರಾಗಿದ್ದು, ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಣಾಮ್ ದೇವರಾಜ್ ಘಟನೆ ನಡೆದ ದಿನದಂದು ಸ್ಥಳದಲ್ಲೇ ಇದ್ದರು ಎಂಬ ಬಗ್ಗೆ ತಾಂತ್ರಿಕವಾಗಿ ಮಾಹಿತಿ ಕಲೆಹಾಕಿದ ಪೊಲೀಸರು ಪ್ರಣಾಮ್‍ಗೆ ಈಗ ನೋಟಿಸ್ ಜಾರಿ ಮಾಡಿದ್ದಾರೆ ನಾಳೆಯೊಳಗಾಗಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

    ಉದ್ಯಮಿಯ ಮೊಮ್ಮಗನ ಪುಂಡಾಟ ಪ್ರಕರಣದಲ್ಲಿ ವಿಷ್ಣುವಿಗಾಗಿ ತೀವ್ರ ಶೋಧದ ಬೆನ್ನಲ್ಲೆ ಪೊಲೀಸರು ಆಕ್ಟೀವ್ ಆಗಿದ್ದಾರೆ.

    ಇದನ್ನೂ ಓದಿ: ಅಪಘಾತದ ಬಗ್ಗೆ ನಟರಾದ ದಿಗಂತ್, ಪ್ರಜ್ವಲ್ ಹೇಳಿದ್ದು ಹೀಗೆ

    https://www.youtube.com/watch?v=XkSGJRHTDEw