Tag: prabhakara bhat

  • ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಬರುತ್ತಿದ್ದ ಅನುದಾನ ಕಟ್: ರಮಾನಾಥ ರೈ ಹೀಗಂದ್ರು!

    ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಬರುತ್ತಿದ್ದ ಅನುದಾನ ಕಟ್: ರಮಾನಾಥ ರೈ ಹೀಗಂದ್ರು!

    ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಖಾಸಗಿ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಅನ್ನದಾನದ ಅನುದಾನ ಕಡಿತಗೊಳಿಸಿರುವುದು ಇದೀಗ ಭಾರೀ ವಿವಾದಕ್ಕೀಡಾಗಿದೆ.

    ಸಚಿವ ರಮಾನಾಥ ರೈ ರಾಜಕೀಯ ದ್ವೇಷದಿಂದ ಈ ರೀತಿ ಮಾಡಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಿಸಿದ್ದಾರೆ. ಆದರೆ ಕೇವಲ ಎರಡು ಖಾಸಗಿ ಶಾಲೆಗಳಿಗೆ ಅನುದಾನ ಕೊಡುವುದರ ಮೂಲಕ ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಈಗ ರಾಜ್ಯ ಸರಕಾರ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.

    ಕೊಲ್ಲೂರು ದೇವಸ್ಥಾನದಿಂದ ಎರಡು ಖಾಸಗಿ ಶಾಲೆಗಳಿಗೆ ಅನ್ನದಾನ ಬರುತ್ತಿದೆ. ಉಭಯ ಜಿಲ್ಲೆಗಳಲ್ಲಿ ಸಾಕಷ್ಟು ಶಾಲೆಗಳಿವೆ. ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಹೀಗಾಗಿ ವಾಪಾಸ್ ಪಡೆದಿದೆ ಅಂತ ಹೇಳಿದ್ರು.

    ಕಳೆದ 4 ವರ್ಷಗಳ ಬಳಿಕ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಬೆಳವಣಿಗೆಗಳಿಂದಾಗಿ ರೈ ಈ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸುಮಾರು 5 ತಿಂಗಳಿಕ್ಕಿಂತಲೂ ಹಿಂದೆ ಈ ಬಗ್ಗೆ ಮುಖ್ಯಮಂತ್ರಿ ಪತ್ರ ಬರೆದಿದ್ದರು. ಅದಕ್ಕಿಂತಲೂ ಹಿಂದೆ ಕೂಡ ಎರಡು ಖಾಸಗಿ ಶಾಲೆಗಳಿಗೆ ಅನ್ನದಾನ ನೀಡಲಾಗುತ್ತಿದೆ ಎಂಬ ವಿಚಾರವನ್ನು ಗಮನಕ್ಕೆ ತಂದಿದ್ದರು. ಹೀಗಾಗಿ ಸರ್ಕಾರ ಇದೀಗ ವಾಪಾಸ್ ಪಡೆದುಕೊಂಡಿದೆ. ಹಿಂದಿನ ಸರ್ಕಾರ ಕೇವಲ ಎರಡು ಶಾಲೆಗಳಿಗೆ ಅನ್ನದಾನ ಕೊಟ್ಟಿರೋದು ಸರಿಯಲ್ಲ. ಅದೇ ಅಧಿಕಾರ ದುರುಪಯೋಗ. ಅದಕ್ಕಿಂತ ಕಷ್ಟದಲ್ಲರುವಂತಹ ಶಾಲೆಗಳು ಸಾಕಷ್ಟಿವೆ. ಅವರಿಗೂ ಕೂಡ ಕೊಡಬಹುದಿತ್ತು. ಯಾಕೆ ಸಂಘ ಪರಿವಾರದ ಶಾಲೆಗೆ ಮಾತ್ರ ಕೊಡಬೇಕಿತ್ತು ಅಂತ ಪ್ರಶ್ನಿಸಿದ್ದಾರೆ.

    ಈ ಹಿನ್ನೆಲೆಯಿಂದ ಸರ್ಕಾರ ಗಮನಕ್ಕೆ ಬಂದ ಕೂಡಲೇ ವಾಪಾಸ್ ಪಡೆದಿದೆ. ಇದು ನಿನ್ನೆ ಮೊನೆಯ ಬೆಳವಣಿಗೆಯಿಂದಾಗಿ ಈ ನಿಧಾರ ತೆಗೆದುಕೊಂಡಿದ್ದಲ್ಲ. 5, 6 ತಿಂಗಳ ಹಿಂದೆಯೇ ಮುಜರಾಯಿ ಇಲಾಖೆಗೆ ಸಿಎಂ ಪತ್ರ ಬರೆದಿದ್ದರು. ಖಾಸಗಿ ಶಾಲಾ ಮಕ್ಕಳ ಅನ್ನದಾನಕ್ಕೆ ಸರ್ಕಾರ ದುಡ್ಡು ಕೊಡುವುದು ಇಲ್ಲ. ಬೇಕಿದ್ರೆ ಮಕ್ಕಳಿಗೆ ಅವರೇ ಅನ್ನ ಹಾಕಿಸಬೇಕು. ಅದು ಅವರ ಜವಾಬ್ದಾರಿ. ಕೆಲವು ಮಠಾಧೀಶರು ಶಾಲಾ ಮಕ್ಕಳಿಗೆ ಅನ್ನದಾನ ಮಾಡ್ತಾರೆ. ಆದ್ರೆ ಅವರು ಸರ್ಕಾರ ದುಡ್ಡು ಉಪಯೋಗಿಸಲ್ಲ ಅಂತ ಹೇಳಿ ಸರ್ಕಾರದ ನಡೆಯನ್ನು ರಮಾನಾಥ ರೈ ಸಮರ್ಥಿಸಿಕೊಂಡರು.

  • ಶೋಭಾ ಕರಂದ್ಲಾಜೆಯವರು ಪ್ರಭಾಕರ್ ಭಟ್ ಭಾಷಣ ಕೇಳಲಿ: ಸಂಸದೆಗೆ ಖಾದರ್ ತಿರುಗೇಟು

    ಶೋಭಾ ಕರಂದ್ಲಾಜೆಯವರು ಪ್ರಭಾಕರ್ ಭಟ್ ಭಾಷಣ ಕೇಳಲಿ: ಸಂಸದೆಗೆ ಖಾದರ್ ತಿರುಗೇಟು

    ಕೋಲಾರ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಮ್ಮಿಂದ ಯಾವುದೇ ಭಯಭೀತಿಯ ವಾತಾವರಣ ನಿರ್ಮಾಣವಾಗಿಲ್ಲ. ಪ್ರಭಾಕರ್ ಭಟ್ ಅವ್ರ ಭಾಷಣಗಳು ಪ್ರಚೋದನಾಕಾರಿಯಾಗಿದೆ. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಒಮ್ಮೆ ಅವರ ಭಾಷಣ ಕೇಳಲಿ ಎಂದು ಆಹಾರ ಸಚಿವ ಯು ಟಿ ಖಾದರ್ ಸಂಸದೆ ಹೇಳಿಕೆಗೆ ತಿರುಗೇಟು ನೀಡಿದ್ರು.

    ರಂಜಾನ್ ಪ್ರಯುಕ್ತ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಾಂಗ್ರೆಸ್ ಮುಖಂಡ ಕೆ ವೈ ನಂಜೇಗೌಡ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಮಾನಾಥ ರೈ ರಾಜೀನಾಮೆ ನೀಡುವ ಪ್ರಸ್ತಾಪವಿಲ್ಲ. ಬಿಜೆಪಿ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಅವರು ಬಿಜೆಪಿ ಮುಖಂಡರ ಆರೋಪವನ್ನ ತಳ್ಳಿ ಹಾಕಿದ್ರು.

    ಖಾಸಗಿ ಆಸ್ಪತ್ರೆಗಳ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಖಾಸಗಿ ಆಸ್ಪತ್ರೆಗಳು ಮಾನವೀಯತೆಯಿಂದ ಚಿಂತಿಸಬೇಕು. ಸರ್ಕಾರದ ವಿಧೇಯಕಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದ ಅವರು, ಸಚಿವ ರಮೇಶ್ ಕುಮಾರ್ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಪರೋಕ್ಷ ಬೆಂಬಲ ನೀಡಿದ್ರು.

    ವಿಧೇಯಕಕ್ಕೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ, ಬಡವರ ಹಿತ ದೃಷ್ಟಿಯಿಂದ ಸರ್ಕಾರ ವಿಧೇಯಕ ಮಂಡನೆ ಮಾಡಿದೆ ಎಂದು ಸರ್ಕಾರದ ನಿರ್ಧಾರವನ್ನ ಸಮರ್ಥಿಸಿಕೊಂಡ್ರು.

     

  • ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

    ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

    ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಭಟ್ ಒಬ್ಬ ಪುಕ್ಕಲ. ಅವನನು ಅರೆಸ್ಟ್ ಮಾಡಿದ್ರೂ ಏನೂ ಆಗಲ್ಲ ಅಂತಾ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

    ರಮಾನಾಥ ರೈ ಜಿಲ್ಲಾ ಎಸ್‍ಪಿ ಭೂಷಣ್ ರಾವ್ ಬೋರಸೆಯವರನ್ನು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ, “ಗಲಾಟೆ ಮಾಡೋದಿಲ್ಲ, ವಯಸ್ಸಾದವರು. ನನಗೆ ಎಲ್ಲಾ ಹಂಡ್ರೆಡ್ ಪರ್ಸೆಂಟ್ ಗೊತ್ತು, ನೀವು ಮನೆಯವರನ್ನು ಕರೆದುಕೊಂಡು ಹೋದ್ರೆ, ಕಾಂಗ್ರೆಸ್‍ನವರನ್ನೂ ಕೂಡ ಕರೆದುಕೊಂಡು ಹೋಗುವುದು. ಇದು ಮಂಡ್ಯ ಅಲ್ಲ ಇಂಡಿಯಾ ಅಂತ. ನೀವು ಮಂಡ್ಯದಿಂದ ಬಂದಿದ್ದೀರಿ, ಇಲ್ಲಿ ವಿಷ್ಯ ಬೇರೇನೇ ಇದೆ” ಅಂತಾ ಹೇಳಿರುವ ದೃಶ್ಯವಿದೆ.

    ನೇತ್ರಾವತಿ ಹೋರಾಟಗಾರರು ಅದು ಮಾಡ್ತಾರೆ, ಇದು ಮಾಡ್ತಾರೆ ಅಂತೀರಿ. ಆದ್ರೆ ಏನೂ ಮಾಡಲ್ಲ, ಪ್ರಭಾಕರ್ ಅರೆಸ್ಟ್ ಮಾಡಿದ್ರೂ ಕೂಡ ಏನೂ ಮಾಡಲ್ಲ, ಇದನ್ನು ನಾನು ಪ್ರಮಾಣಮಾಡಿ ಹೇಳ್ತೀನಿ. ಅವನು ಭಾಷಣ ಮಾಡಿದ್ರೆ ನೀವು ಆತನ ವಿರುದ್ಧ 307 ಕ್ರಿಮಿನಲ್ ಕೇಸ್ ಹಾಕಿ. ಆತ ಹೊರಗೆ ಬಂದ್ರೆ ಹೇಳಿದಾಗೆ ಕೇಳ್ತೀನಿ. ಅವನು ಅಷ್ಟು ದೊಡ್ಡ ವ್ಯಕ್ತಿಯಲ್ಲ, ಎಲೆಕ್ಷನ್ ಟೈಂನಲ್ಲಿ ನಾನು ಅವನನ್ನು ಇಲ್ಲಿಂದ ಓಡಿಸ್ತೀನಿ. ನಾನಲ್ಲ ನಾನಲ್ಲ ಅಂತ ಅವನ ಜೊತೆ ಇದ್ದ ಹುಡುಗ್ರು ಈ ಬಗ್ಗೆ ಜೋಕ್ ಮಾಡಿದ್ರು ಅಂತಾ ಸಚಿವರು ಹೇಳಿದ್ದಾರೆ.

    https://www.youtube.com/watch?v=0TjehsPe2VA