Tag: portfolio

  • ಸಿಎಂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, 2,3 ದಿನಗಳಲ್ಲಿ ನಿರ್ಧಾರ ತಿಳಿಸುವೆ: ಎಂಟಿಬಿ ನಾಗರಾಜ್

    ಸಿಎಂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, 2,3 ದಿನಗಳಲ್ಲಿ ನಿರ್ಧಾರ ತಿಳಿಸುವೆ: ಎಂಟಿಬಿ ನಾಗರಾಜ್

    ಬೆಂಗಳೂರು: ಕಳೆದ ಬಾರಿಯ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ ಎಂದು ಸಚಿವ ಎಂಟಿಬಿ ನಾಗರಾಜ್‍ ಆಕ್ರೋಶ ಹೊರ ಹಾಕಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಎಂಟಿಬಿ, ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಕ್ಕ ಖಾತೆಯಲ್ಲಿ ‘ಆನಂದ’ವಿಲ್ಲ – ಸಚಿವ ಆನಂದ್ ಸಿಂಗ್ ಅಸಮಾಧಾನ

    ಎಂಟಿಬಿ ನಾಗರಾಜ್‍ಗೆ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆಗಳ ಖಾತೆಯನ್ನು ನೀಡಲಾಗಿದೆ. ಇದಕ್ಕಾಗಿ ಎಂಟಿಬಿ ಆಕ್ರೋಶ ಹೊರ ಹಾಕಿದ್ದಾರೆ. ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕೆ ಆನಂದ್ ಸಿಂಗ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಖಾತೆ ಹಂಚಿಕೆ ಕಸರತ್ತಿಗೆ ನಾಳೆ ಬೀಳುತ್ತಾ ತೆರೆ?

    ಖಾತೆ ಹಂಚಿಕೆ ಕಸರತ್ತಿಗೆ ನಾಳೆ ಬೀಳುತ್ತಾ ತೆರೆ?

    ಬೆಂಗಳೂರು: ನೂತನ ಸಚಿವರು ಸೋಮವಾರಕ್ಕೆ ನಿರೀಕ್ಷೆ ನೆಟ್ಟು ಕೂತಿದ್ದಾರೆ. 10 ಹೊಸ ಸಚಿವರು ನಾಳೆಯಾದರೂ ತಮಗೆಲ್ಲರಿಗೆ ಬಯಸಿದ ಖಾತೆಗಳು ಸಿಗುತ್ತದಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಮಾತಾಡಿದ್ದ ಸಿಎಂ ಯಡಿಯೂರಪ್ಪ, ಸೋಮವಾರದಂದು ಖಾತೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದರು. ನಿನ್ನೆ ಸರ್ಕಾರಿ ರಜಾ ದಿನವಾಗಿದ್ದರಿಂದ ಖಾತೆ ಹಂಚಿಕೆ ಮಾಡಲಾಗಿಲ್ಲ ಎಂದೂ ಸಿಎಂ ಹೇಳಿದ್ದರು. ಹೀಗಾಗಿ ಸೋಮವಾರ ಖಾತೆ ಹಂಚಿಕೆ ನಡೆಯುತ್ತಾ ಇಲ್ವಾ ಎಂಬ ಕುತೂಹಲ ಹುಟ್ಟಿಕೊಂಡಿದೆ.

    ಸಿಎಂ ಯಡಿಯೂರಪ್ಪ, ನಾಳೆಯೇ ಖಾತೆ ಹಂಚಿಕೆ ಮಾಡಬೇಕಾದ ಅನಿವಾರ್ಯತೆಗೆ ಸಿಕ್ಕಿಬಿದ್ದಿರೋದೇನೋ ಹೌದು. ಹಾಗಂತ ಕಗ್ಗಂಟು ಬಗೆಹರಿದಿಲ್ಲ. ಖಾತೆ ಕ್ಯಾತೆ ಇನ್ನೂ ಮುಂದುವರಿದಿದೆ. ಇಂದು ಖಾತೆ ಕಗ್ಗಂಟು ಕ್ಲಿಯರ್ ಮಾಡಿದ್ರೆ ಮಾತ್ರ ನಾಳೆ ಹಂಚಿಕೆ ಮಾಡಲು ಸುಲಭವಾಗಲಿದೆ. ಇಲ್ಲದಿದ್ದರೆ ಮತ್ತೆ ಬಿಕ್ಕಟ್ಟು ಮುಂದುವರಿಯುವ ಸಾಧ್ಯತೆಯೂ ಇಲ್ಲದಿಲ್ಲ. ಮುಖ್ಯಮಂತ್ರಿಗಳು ಇಂದು ದಾವಣಗೆರೆ ಮತ್ತು ಹಾಸನ ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ಜಿಲ್ಲಾ ಕಾರ್ಯಕ್ರಮಗಳಲ್ಲಿದ್ದರೂ ಖಾತೆ ಕಗ್ಗಂಟ್ಟು ಬಿಡಿಸುವತ್ತಲೂ ಸಿಎಂ ಚಿತ್ತ ಹರಿಸಿದ್ದಾರಂತೆ. ಬಹುತೇಕ ಇಂದೇ ಖಾತೆ ಕ್ಯಾತೆಗೆ ಫುಲ್ ಸ್ಟಾಪ್ ಇಡಲು ಸಿಎಂ ನಿರ್ಧಾರ ಮಾಡಿದ ಹಾಗಿದೆ. ಅದಕ್ಕಾಗಿಯೇ ಫೋನ್ ಮೂಲಕವೇ ಖಾತೆ ಕಗ್ಗಂಟು ಬಿಡಿಸಲು ಸಿಎಂ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ. ಪ್ರಭಾವಿ ಖಾತೆ ಕೇಳಿರುವ ಮಿತ್ರಮಂಡಳಿ ಸಚಿವರ ಜೊತೆ ಇಂದು ಸಿಎಂ ಮಾತುಕತೆ ಫೋನ್ ಮೂಲಕವೇ ಮಾತಾಡಲಿದ್ದಾರೆ. ಬಹುತೇಕ ಇಂದೇ ಖಾತೆ ಕಗ್ಗಂಟು ಕ್ಲಿಯರ್ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಇಂದೇ ಸಮಸ್ಯೆ ಬಗೆಹರಿದರೆ ನಾಳೆ ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿಯನ್ನು ಸಿಎಂ ರವಾನಿಸಲಿದ್ದಾರೆ.

    ಪ್ರಬಲ ಖಾತೆಗಳಿಗೇ ಮಿತ್ರಮಂಡಳಿ ಪಟ್ಟು:
    ಮೂಲಗಳ ಪ್ರಕಾರ ಮಿತ್ರಮಂಡಳಿ ಸಚಿವರು ಪ್ರಬಲ ಖಾತೆಗಳಿಗೆ ಹಿಡಿದ ತಮ್ಮ ಪಟ್ಟು ಸಡಿಲಿಸಲು ತಯಾರಿಲ್ಲ ಎನ್ನಲಾಗಿದೆ. ಹೀಗಾಗಿ ಮಿತ್ರಮಂಡಳಿ ಸಚಿವರ ಬೇಡಿಕೆಗೆ ಸಿಎಂ ಯಡಿಯೂರಪ್ಪ 50:50 ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಂದ್ರೆ ಬಿಕ್ಕಟ್ಟಿಗೆ ಕಾರಣವಾಗಿರುವ ನಾಲ್ಕು ಖಾತೆಗಳ ಪೈಕಿ ಎರಡು ಖಾತೆಗಳನ್ನು ಕೊಡೋದು. ಉಳಿದ ಎರಡನ್ನು ಇಟ್ಕೊಳ್ಳೋದು. ನಾಲ್ಕು ಪ್ರಬಲ ಖಾತೆಗಳ ಪೈಕಿ ಎರಡು ಖಾತೆಗಳು ಮಿತ್ರಮಂಡಳಿಗೆ ಕೊಡೋದು ಫಿಕ್ಸ್ ಎನ್ನಲಾಗಿದೆ.

    ಜಲಸಂಪನ್ಮೂಲ ಖಾತೆ, ರಮೇಶ್ ಜಾರಕಿಹೊಳಿಗೆ ಬಹುತೇಕ ಫಿಕ್ಸ್ ಎಂಬ ಮಾತುಗಳೂ ಕೇಳಿಬರುತ್ತಿವೆ. ಜಾರಕಿಹೊಳಿಯವರಿಗೆ ಈ ಖಾತೆ ಕೊಡುವಂತೆ ಹೈಕಮಾಂಡ್‍ಗೂ ಸಿಎಂ ಮನವರಿಕೆ ಮಾಡಲಿದ್ದಾರೆ. ಡಿಸಿಎಂ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆ ಕೊಡಲು ಸಿಎಂ ಒಪ್ಪಿಕೊಂಡಿದ್ದಾರೆ. ಡಾ.ಕೆ.ಸುಧಾಕರ್ ಗೂ ಖಾತೆ ಹಂಚಿಕೆಯಲ್ಲಿ ಬಂಪರ್ ಖಾತೆ ಸಿಗಲಿದೆ. ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಅಥವಾ ಇಂಧನ ಇಲಾಖೆ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ.

    ಆದರೆ ಬೆಂಗಳೂರು ಅಭಿವೃದ್ಧಿ ಮತ್ತು ಗೃಹ ಖಾತೆಗಳ ಹಂಚಿಕೆ ಸದ್ಯಕ್ಕಿಲ್ಲ. ಇವೆರಡೂ ಖಾತೆಗಳನ್ನೂ ಹಂಚಿಕೆ ಮಾಡದಿರಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆ. ಗೃಹ ಖಾತೆ ಬಸವರಾಜ್ ಬೊಮ್ಮಾಯಿ ಬಳಿಯೇ ಉಳಿಯಲಿದೆ. ಈ ಎರಡೂ ಖಾತೆಗಳನ್ನು ಮಿತ್ರಮಂಡಳಿಗೆ ಹಂಚಿಕೆ ಮಾಡದಿರುವ ಮೂಲಕ ಪಕ್ಷದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಗೆ ಬ್ರೇಕ್ ಹಾಕಲು ಸಿಎಂ ಕಸರತ್ತು ನಡೆಸಿದ್ದಾರೆ.

    ಇಂದು ತಡರಾತ್ರಿ ಸಿಎಂ ಯಡಿಯೂರಪ್ಪ ಬೆಂಗಳೂರಿಗೆ ವಾಪಸಾಗಲಿದ್ದಾರೆ. ನಾಳೆಯೇ ಖಾತೆ ಹಂಚಿಕೆ ಬಹುತೇಕ ಫೈನಲ್ ಆಗಿದ್ದು, ನಾಳೆ ಬೆಳಗ್ಗೆ ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿ ತಲುಪಲಿದೆ ಎನ್ನಲಾಗಿದೆ.

  • ಇನ್ನೂ ಅಳಿಯಂದಿರಿಗೆ ಸ್ಥಾನ ನೀಡ್ಬೇಕು, ನಮ್ಮದೇನು ಬಹುಮತದ ಸರ್ಕಾರವೇ? – ಕತ್ತಿಗೆ ಈಶ್ವರಪ್ಪ ಟಾಂಗ್

    ಇನ್ನೂ ಅಳಿಯಂದಿರಿಗೆ ಸ್ಥಾನ ನೀಡ್ಬೇಕು, ನಮ್ಮದೇನು ಬಹುಮತದ ಸರ್ಕಾರವೇ? – ಕತ್ತಿಗೆ ಈಶ್ವರಪ್ಪ ಟಾಂಗ್

    ಬೆಂಗಳೂರು: ಅದೇ ಬೇಕು, ಇದೇ ಬೇಕು ಎನ್ನಲು ನಮ್ಮದೇನು ಬಹುಮತದ ಸರ್ಕಾರವೇ? ಇನ್ನೂ 17, 18 ಜನ ಅಳಿಯಂದಿರಿದ್ದಾರೆ. ಅವರಿಗೂ ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಕರ್ತವ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅತೃಪ್ತ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನುವುದನ್ನು ಸಚಿವ ಈಶ್ವರಪ್ಪ ಖಚಿತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಕೇಳಲು ನಮ್ಮ ಬಳಿ ಪೂರ್ಣ ಬಹುಮತವಿದೆಯೇ? ಇನ್ನು 17, 18 ಜನ ಅಳಿಯಂದಿರಿದ್ದಾರೆ. ಅಳಿಯಂದಿರ ಬೆಂಬಲ ಇರದಿದ್ದರೆ ಈ ಸರ್ಕಾರವೇ ಬರುತ್ತಿರಲಿಲ್ಲ. ಅವರನ್ನು ತೃಪ್ತಿಪಡಿಸಬೇಕಿರುವುದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ನನಗೆ ಇದೇ ಖಾತೆ ಬೇಕು, ಅದೇ ಖಾತೆ ಬೇಕು, ಸಚಿವ ಸ್ಥಾನ ಬೇಕು ಎಂದು ಕೇಳುವುದು ಸರಿಯಲ್ಲ ಎಂದು ಹೇಳಿ ಉಮೇಶ್ ಕತ್ತಿ ಅವರಿಗೆ ಟಾಂಗ್ ನೀಡಿದ್ದಾರೆ.

    ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಆದರೆ, ಹಿರಿಯರ ತೀರ್ಮಾನಕ್ಕೆ ಬದ್ಧರಾಗಿರಬೇಕು. ಅನರ್ಹ ಶಾಸಕರು ನಮಗೆ ಹೊರೆಯೆನಿಸುವುದಿಲ್ಲ. ಏಕೆಂದರೆ ಅವರಿಲ್ಲದಿದ್ದರೆ ನಮ್ಮ ಸರ್ಕಾರವೇ ಇಲ್ಲ. ಪೂರ್ಣ ಬಹುಮತ ಬಂದಿದ್ದರೆ ಈ ಸಮಸ್ಯೆಗಳು ಇರುತ್ತಿರಲಿಲ್ಲ. ಪೂರ್ಣ ಬಹುಮತ ಬಾರದ್ದರಿಂದ ಎಲ್ಲ ಶಾಸಕರು ಇದನ್ನು ಅರಿತುಕೊಳ್ಳಬೇಕು. ಸುಖಾಸುಮ್ಮನೆ ಅಸಮಾಧಾನ ವ್ಯಕ್ತಪಡಿಸಬಾರದು. ಸಂದರ್ಭ ಬಂದಾಗ ಸೂಕ್ತ ಸ್ಥಾನ ಸಿಗುತ್ತದೆ. ನಾನೂ ಸಹ ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ, ನನಗೆ ಖಾತೆ ಬಗ್ಗೆ ಗೊಂದಲವಿಲ್ಲ, ಯಾವುದೇ ಖಾತೆ ನೀಡಿದರೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ಸಚಿವ ಸ್ಥಾನ ಸಿಗದ್ದಕ್ಕೆ ಉಮೇಶ್ ಕತ್ತಿ ಬೇಸರವಾಗಿರುವುದು ನಿಜ. ಈ ಕುರಿತು ನಿರಂತರವಾಗಿ ಉಮೇಶ್ ಕತ್ತಿ ಬಳಿ ಮಾತನಾಡುತ್ತಿದ್ದೇನೆ. ಫೋನ್ ಮಾಡಿ ಮಾತನಾಡಿದ್ದೇನೆ, ಖುದ್ದು ಭೇಟಿಯಾಗಿ ಮಾತನಾಡಿದ್ದೇನೆ. ಅವರು ಸಹ ಈ ಕುರಿತು ಸ್ಪಷ್ಟಪಡಿಸಿ, ಯಾವುದೇ ಅಪೇಕ್ಷೆ ಇಲ್ಲ ಸರ್ಕಾರ ಬೀಳಿಸಲ್ಲ. ಸಚಿವ ಸ್ಥಾನ ಸಿಕ್ಕರೆ ಕೆಲಸ ಮಾಡುತ್ತೇನೆ ಇಲ್ಲದಿದ್ದರೆ ಬೇಸರವಿಲ್ಲ ಎಂದು ಹೇಳಿದ್ದಾರೆ. ಹಿರಿತನದ ಆಧಾರ ಮೇಲೆ ಅವರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಆದರೆ, ಇಂದು ಸಂದರ್ಭ ಬೇರೆ ಇದೆ. ಹೀಗಾಗಿ ಸಹಕರಿಸಬೇಕು ಎಂದು ಹೇಳಿದರು.

    ಚುನಾವಣೆಗೆ ನಾವು ರೆಡಿ
    ಯಾವಾಗ ಚುನಾವಣೆ ಬಂದರೂ ನಾವ್ ರೆಡಿಯಾಗಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚುನಾವಣೆಯ ನಡೆಯುವ ಸೂಚನೆಯನ್ನು ಈಶ್ವರಪ್ಪ ನೀಡಿದ್ದು, ಎಲೆಕ್ಷನ್ ಯಾವಾಗ ಬೇಕಾದ್ರೂ ಬರಬಹುದು. ನಾನು ಮಧ್ಯಂತರ ಚುನಾವಣೆ ಬಗ್ಗೆ ಹೇಳುತ್ತಿಲ್ಲ. ಈಗ ಸಮಸ್ಯೆ ಬಹುಮತದ ಸರ್ಕಾರ ಬಾರದಿರುವುದರಿಂದ ಉದ್ಭವವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸುತ್ತೇವೆ. ಆ ಮೂಲಕ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದ್ದಾರೆ.

    ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಒಳಗೊಳಗೆ ಚಾಕು ಹಾಕಿಕೊಳ್ಳುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಇದನ್ನು ಕಂಡಿದ್ದೇವೆ. ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಹಿಂದೆ ತೆರೆ ಮರೆಯಲ್ಲಿ ಬಡಿದಾಡುತ್ತಿದ್ದರು. ಈಗ ಬಹಿರಂಗವಾಗಿಯೇ ಬಡಿದಾಡುತ್ತಿದ್ದಾರೆ. ಯಾವ ವಿಚಾರದಲ್ಲಿ ಇಬ್ಬರೂ ಒಂದಾಗುತ್ತಾರೆ? ಜಾತಿ, ವೈಚಾರಿಕವಾಗಿ ಒಂದಾಗಿರುತ್ತಾರಾ? ಇವರಿಗೆ ಅಧಿಕಾರ ಮಾತ್ರ ಬೇಕು. ಸಿದ್ದರಾಮಯ್ಯನವರಿಗೂ ಅಧಿಕಾರ ಬೇಕು, ದೇವೇಗೌಡರ ಮಕ್ಕಳಿಗೂ ಅಧಿಕಾರ ಬೇಕು. ಇದು ದೇಶದಲ್ಲೇ ನಡಿಯುವುದಿಲ್ಲ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಸರ್ಕಾರಗಳು ಬರಬೇಕು. ಇಲ್ಲವೇ ಜನರ ಅಭಿವೃದ್ಧಿಗಾಗಿ ಸರ್ಕಾರ ಬರಬೇಕು. ಎರಡೂ ಇಲ್ಲದೆ ಸುಮ್ಮನೇ ಬಡಿದಾಡುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಇವರಿಬ್ಬರ ಬಡಿದಾಟಕ್ಕೆ ಕೊನೆ ಇಲ್ಲ, ಇಬ್ಬರೂ ಬಡಿದಾಡಿಕೊಂಡು ಕೊನೆಗೆ ಬಿಜೆಪಿ ಮೇಲೆ ಹಾಕುತ್ತಾರೆ ಎಂದು ಮೈತ್ರಿ ನಾಯಕರ ವಿರುದ್ಧ ಈಶ್ವರಪ್ಪ ಹರಿಹಾಯ್ದರು.

  • 2 ಖಾತೆ ಬೇಕೆ ಬೇಕು – ಎಚ್‍ಡಿ ರೇವಣ್ಣ ಪಟ್ಟು!

    2 ಖಾತೆ ಬೇಕೆ ಬೇಕು – ಎಚ್‍ಡಿ ರೇವಣ್ಣ ಪಟ್ಟು!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಒಂದಿಲ್ಲೊಂದು ತಲೆನೋವು ಎದುರಾಗಿದೆ. ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೆ ಮತ್ತೊಂದು ಕಡೆ ಜೆಡಿಎಸ್ ಗೆ ರೇವಣ್ಣ ಎರಡು ಖಾತೆ ನೀಡಿ ಎಂದು ಪಟ್ಟು ಹಿಡಿದ್ದಾರೆ.

    ಎಚ್ ಡಿ ರೇವಣ್ಣರ ಹಠ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಚಿವ ಸಂಪುಟದಲ್ಲಿ ನನಗೆ ಇಂಧನ ಮತ್ತು ಪಿಡಬ್ಲ್ಯೂಡಿ ಎರಡೂ ಖಾತೆಯನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯಲ್ಲಿ ರೇವಣ್ಣರ 2 ಖಾತೆಯ ಮನವಿಯನ್ನು ತಿರಸ್ಕರಿಸಿ ಗೌಡರು ಖಡಕ್ ವಾರ್ನಿಂಗ್ ನೀಡಿದ್ದು, ಕೇವಲ ಯಾವುದಾದರೂ ಒಂದು ಖಾತೆಯನ್ನು ನಿರ್ವಹಿಸುವಂತೆ ರೇವಣ್ಣಗೆ ಸೂಚಿಸಿದ್ದಾರೆ. ಇಂಧನ ಇಲ್ಲವೇ ಲೋಕೊಪಯೋಗಿ ಖಾತೆಯನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

    ಈ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಮಣಿಸಿದ್ದ ಜಿ. ಟಿ. ದೇವೇಗೌಡ ಅವರು ಲೋಕೋಪಯೋಗಿ ಇಲಾಖೆಯ ಪಟ್ಟು ಹಿಡಿದಿದ್ದಾರೆ. ಮೈಸೂರು ಕ್ಷೇತ್ರದ ಶಾಸಕರುಗಳಾದ ಸಾರಾ ಮಹೇಶ್, ಕೆ ಮಹದೇವ್ ಹಾಗೂ ಅಶ್ವಿನ್ ಕುಮಾರ್‍ರವರು ಜಿಟಿಡಿಯವರಿಗೆ ಸಾಥ್ ನೀಡಿದ್ದಾರೆ. ದೇವೇಗೌಡರು ಚುನಾವಣೆಯಲ್ಲಿ ಜಿಟಿಡಿಗೆ ಉಸ್ತುವಾರಿ ಸಚಿವ ಸ್ಥಾನ ನೀಡುವ ಮಾತುಕೊಟ್ಟ ಹಿನ್ನೆಲೆಯಲ್ಲಿ ಜಿಟಿಡಿಗೆ ಮಂತ್ರಿಸ್ಥಾನ ಸಿಗುವುದು ಪಕ್ಕಾ ಆಗಿದ್ದು ಖಾತೆ ಯಾವುದು ಎನ್ನುವುದು ತಿಳಿಯಬೇಕಿದೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆಗೆ ಶುರುವಾಯ್ತೆ ಸಹೋದರನ ಕಿರಿಕಿರಿ – ಸಮ್ಮಿಶ್ರ ಸರ್ಕಾರದ ಮೂರನೇ ಹೈಕಮಾಂಡ್ ರೇವಣ್ಣ?