Tag: poor family

  • 16 ಕೋಟಿ ಬೆಲೆಯ ಇಂಜೆಕ್ಷನ್‍ಗೆ ಬಡದಂಪತಿಯ ಪರದಾಟ

    16 ಕೋಟಿ ಬೆಲೆಯ ಇಂಜೆಕ್ಷನ್‍ಗೆ ಬಡದಂಪತಿಯ ಪರದಾಟ

    ಚಿಕ್ಕಬಳ್ಳಾಪುರ: ಹೆತ್ತ ಮಗನನ್ನು ಉಳಿಸಿಕೊಳ್ಳೋಕೆ 16 ಕೋಟಿ ದುಬಾರಿ ಬೆಲೆಯ ಇಂಜೆಕ್ಷನ್‍ಗೆ ಬಡದಂಪತಿ ಪರದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಬಳಿ ಧನಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಲ್ಲಸಂದ್ರ ಗ್ರಾಮದ ದಂಪತಿ ನಂದೀಶ್ ಹಾಗೂ ಸೌಮ್ಯಲತಾ ದಂಪತಿಯ ಮಗ ಯಶ್ವಿಕ್‍ಗೆ ಎಸ್‍ಎಂಎ ಖಾಯಿಲೆ ಆವರಿಸಿದೆ. ಎಸ್‍ಎಂಎ ಅಂದರೆ ಸ್ಪೈನಲ್ ಮಸ್ಕುಲರ್ ಅಟ್ರೋಫಿ ಇದು ದೇಹದ ಸ್ನಾಯುಗಳನ್ನ ದುರ್ಬಲಗೊಳಿಸುವ ನರಸಂಬಂಧಿತ ಕಾಯಿಲೆಯಾಗಿದೆ. ಇದನ್ನೂ ಓದಿ: ಕಿರಿಕ್ ಪ್ರಶ್ನೆಯನ್ನು ಕೇಳಿದ ಅಭಿಮಾನಿಯ ಬಾಯಿ ಮುಚ್ಚಿಸಿದ ಸಮಂತಾ

    1000 ಮಕ್ಕಳಲ್ಲಿ ಒಬ್ಬರಿಗೆ ಈ ಖಾಯಿಲೆ ತಗಲುವ ಸಾಧ್ಯತೆಯಿದ್ದು, ಈ ಕಾಯಿಲೆಗೆ ಗುರಿಯಾದ ಮಗು 2 ವರ್ಷಕ್ಕಿಂತ ಹೆಚ್ಚು ಬದುಕುವುದಿಲ್ಲ ಅಂತ ಹೇಳಲಾಗುತ್ತೆ. ಇನ್ನೂ ಈ ಖಾಯಿಲೆ ಗುಣಪಡಿಸಲು ಇರುವ ಏಕೈಕ ಔಷಧಿ ಝೊಲ್ಗೆನ್ಸಾ ಇಂಜೆಕ್ಷನ್. ಇದು ಅಮೇರಿಕಾದಲ್ಲಿ ಮಾತ್ರ ಲಭ್ಯವಿದ್ದು, ಒಂದು ಇಂಜೆಕ್ಷನ್‍ನ ಬೆಲೆ 16 ಕೋಟಿ ರೂಪಾಯಿ ಇದೆ. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ

    ಗ್ರಾಮ ಪಂಚಾಯತಿ ಕರ ವಸೂಲಿಗಾರನಾಗಿರುವ ಯಶ್ವಿಕ್ ತಂದೆ ತಾಯಿಗೆ ಈ ಹಣ ಭರಿಸಲು ಶಕ್ತರಾಗಿಲ್ಲ. ಹೀಗಾಗಿ ಸಾರ್ವಜನಿಕರು ಸಹಾಯ ಮಾಡುವಂತೆ ಬಡ ದಂಪತಿ ಅಂಗಲಾಚುತ್ತಿದ್ದಾರೆ. ಅವರ ಮೊಬೈಲ್ ಸಂಖ್ಯೆ 9148495959 ಆಗಿದ್ದು ಯುಪಿಐ ಮೂಲಕ ವರ್ಗಾವಣೆ ಮಾಡಬಹುದಾಗಿದೆ.

  • ಮಳೆಯಿಂದ ಕುಸಿದ ಮನೆಯ ಗೋಡೆ – ಸಂಕಟಕ್ಕೆ ಸಿಲುಕಿದ ಬಡ ಕುಟುಂಬ

    ಮಳೆಯಿಂದ ಕುಸಿದ ಮನೆಯ ಗೋಡೆ – ಸಂಕಟಕ್ಕೆ ಸಿಲುಕಿದ ಬಡ ಕುಟುಂಬ

    ಹಾಸನ: ಮಳೆಯಿಂದ ಮನೆಯ ಗೋಡೆ ಕುಸಿತವಾಗಿ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.

    ಶ್ರೀಕಂಠನಗರದಲ್ಲಿ ಮಂಜುಳಮ್ಮ ಎಂಬುವವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಇರಲು ಮನೆ ಬಿಟ್ಟರೆ ಬೇರೆ ಆಸ್ತಿಯಿಲ್ಲದ ಮಂಜುಳಮ್ಮ ಗಾರೆ ಕೆಲಸ ಮಾಡಿಕೊಂಡು ಇಬ್ಬರು ಹೆಣ್ಣು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು.

    ಲಾಕ್‍ಡೌನ್ ನಂತರ ಸರಿಯಾಗಿ ಕೂಲಿ ಕೆಲಸ ಕೂಡ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಳೆಯಿಂದ ಮನೆಗೋಡೆ ಕುಸಿದಿದ್ದು, ಇಡೀ ಕುಟುಂಬ ಸಂಕಟಕ್ಕೆ ಸಿಲುಕಿದೆ. ಅದಷ್ಟು ಬೇಗ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿ ಸರ್ಕಾರದಿಂದ ಧನ ಸಹಾಯ ಮಾಡಿಸುವಂತೆ ಮನೆ ಹಾನಿಗೊಳಗಾದವರು ಮನವಿ ಮಾಡಿದ್ದಾರೆ.

  • 20 ವರ್ಷಗಳಿಂದ ವಿದ್ಯುತ್ ಕಾಣದ ಬಡ ಕುಟುಂಬಕ್ಕೆ ಬೆಳಕಾದ ಸೇವಾ ಚಾರಿಟೇಬಲ್ ಟ್ರಸ್ಟ್

    20 ವರ್ಷಗಳಿಂದ ವಿದ್ಯುತ್ ಕಾಣದ ಬಡ ಕುಟುಂಬಕ್ಕೆ ಬೆಳಕಾದ ಸೇವಾ ಚಾರಿಟೇಬಲ್ ಟ್ರಸ್ಟ್

    ಮಂಗಳೂರು: ಸುಮಾರು 20 ವರ್ಷಗಳಿಂದ ಕಾಟಿಪಳ್ಳ 4ನೇ ಬ್ಲಾಕ್ ನಲ್ಲಿ ನಿವಾಸಿ ಮೀನಾಕ್ಷಿ ಮತ್ತು ಮನೆಯವರು ತೀರಾ ಬಡತನದಿಂದಾಗಿ ವಿದ್ಯುತ್ ಸಂಪರ್ಕವಿಲ್ಲದೆ ವಾಸವಿದ್ದರು.

    ಕಳೆದ ಇಪ್ಪತ್ತು ವರ್ಷಗಳಿಂದಲೂ ವಿದ್ಯುತ್ ಕಾಣದ ಈ ಕುಟುಂಬದ ಸ್ಥಿತಿ ಕಂಡು ಮಂಗಳೂರಿನ ಸುರತ್ಕಲ್ ಸಮೀಪದ ಗಣೇಶಪುರ ಕಾಟಿಪಳ್ಳ ‘ಸೇವಾ ಚಾರಿಟೇಬಲ್ ಟ್ರಸ್ಟ್’ ಸದರಿ ಮನೆಗೆ ಉಚಿತವಾಗಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ವಿದ್ಯುತ್ ದೀಪವನ್ನು ಕಾಣದ ಬಡಕುಟುಂಬದ ಮನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಿ ಕೊಟ್ಟು ಮಾದರಿಯಾಗಿದೆ.

    ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸಲು ಶ್ರೀ ದೇವರು ಶಕ್ತಿ ನೀಡಲಿ ಎಂದು ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದ ಟ್ರಸ್ಟ್‍ನ ಗೌರವ ಕಾನೂನು ಸಲಹೆಗಾರ ಮಯೂರ ಕೀರ್ತಿಯವರು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುರತ್ಕಲ್ ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಂಜು ಕಾವು ಹಾಗೂ 5ನೇ ಬ್ಲಾಕ್ ಕೃಷ್ಣಾಪುರ ಪಣಂಬೂರು ಶ್ರೀ ಕೊಡ್ಡು ದೈವಸ್ಥಾನದ ಗುರಿಕಾರ ಲೋಕೇಶ್‍ರವರು ದೀಪ ಪ್ರಜ್ವಲಿಸಿ, ಪ್ರಶಂಸೆಗೈದು ಶುಭ ಹಾರೈಸಿದರು.

    ಕಳೆದ ಡಾಕ್‍ಡೌನ್ ಸಂದರ್ಭದಲ್ಲಿ ತರಕಾರಿ-ಪಡಿತರ ಕಿಟ್‍ಗಳನ್ನು ವಿತರಿಸಿದ ಸಂದರ್ಭ ಮೀನಾಕ್ಷಿಯವರ ಮನೆಯ ಪರಿಸ್ಥಿತಿ ನಮ್ಮ ಗಮನಕ್ಕೆ ಬಂದು ಅಂದೇ ಟ್ರಸ್ಟ್ ವತಿಯಿಂದ ಮನೆಗೆ ವಿದ್ಯುತ್ ಸಂಪರ್ಕವನ್ನು ನೀಡುವ ಬಗ್ಗೆ ತೀರ್ಮಾನಿಸಿದ್ದು, ಈ ಮನೆಯ ಪರಿಸ್ಥಿತಿ ತಿಳಿದು ಈ ಬಗ್ಗೆ ವಾಗ್ದಾನ ಮಾಡಿ, ಈ ಸತ್ಕಾರ್ಯ ಸರ್ವರ ಸಹಕಾರದಿಂದ ಸಾಕಾರಗೊಂಡಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಎ.ಪಿ. ಮೋಹನ್ ಗಣೇಶಪುರ ಮಾತನಾಡಿ ಹೇಳಿದರು.

    ಟ್ರಸ್ಟ್‍ನ ಕಾರ್ಯದರ್ಶಿ ದಿನೇಶ್ ಸುವರ್ಣ, ಕೋಶಾಧಿಕಾರಿ ಸಂದೀಪ್ ಕಾಟಿಪಳ್ಳ, ಟ್ರಸ್ಟಿಗಳಾದ ಗಿರೀಶ್ ನಾಯಕ, ಸುಧಾಕರ ಬೊಳ್ಳಾಜೆ, ರವೀಂದ್ರ ಆಚಾರ್ಯ, ಲೋಕನಾಥ್ ಶೆಟ್ಟಿ, ಗಣೇಶ್ ದೇವಾಡಿಗ, ಕಿಶನ್ ಅಮೀನ್ ನಾಗರಾಜ ಸುವರ್ಣ, ಪ್ರಮುಖರಾದ ಗಂಗಾಧರ ಶೆಟ್ಟಿಗಾರ್, ತಾರಾನಾಥ ಶೆಟ್ಟಿಗಾರ್, ಮಂಜುನಾಥ ಪೂಜಾರಿ, ತಾರಾನಾಥ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರರು ಬಾಲಕೃಷ್ಣ ಶೆಟ್ಟಿಗಾರ್, ಮಹಿಳಾ ಸಮಿತಿಯ ಇಂದ್ರಾಕ್ಷಿ ಹರೀಶ್, ಮಮತಾ ರಾವ್, ಜಯಂತಿ ಪಿ.ಟಿ.ರೈ, ಅಕ್ಷಿತಾ ಸಂದೀಪ್, ಲತಾ ಮಹೇಶ್, ಜಯಂತಿ ಗಣೇಶ್ ಮುಂತಾದವರು ಭಾಗವಹಿಸಿದರು.

  • ಬಡ ಕುಟುಂಬಗಳಿಗೆ 10 ಸಾವಿರ ನೆರವು ನೀಡಿ – ಕಾಂಗ್ರೆಸ್‍ನಿಂದ ಆನ್‍ಲೈನ್ ಅಭಿಯಾನ

    ಬಡ ಕುಟುಂಬಗಳಿಗೆ 10 ಸಾವಿರ ನೆರವು ನೀಡಿ – ಕಾಂಗ್ರೆಸ್‍ನಿಂದ ಆನ್‍ಲೈನ್ ಅಭಿಯಾನ

    ನವದೆಹಲಿ: ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರ ನೆರವಿಗೆ ನಿಲ್ಲುವ ಪ್ರಯತ್ನ ಆರಂಭಿಸಿರುವ ಕಾಂಗ್ರೆಸ್, ಈ ಸಂಬಂಧ ಅಭಿಯಾನವೊಂದನ್ನು ಶುರು ಮಾಡಲು ನಿರ್ಧರಿಸಿದೆ.

    ದೇಶದಲ್ಲಿರುವ ಶೇ.50 ಕುಟುಂಬಗಳ ಖಾತೆಗೆ ತಲಾ 10 ಸಾವಿರ ರೂಪಾಯಿ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು, ಮೇ 28ರಂದು ಈ ಆನ್‍ಲೈನ್ ಮೂಲಕ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಸರಣಿ ಸುದ್ದಿಗೋಷ್ಠಿ ನಡೆಸುತ್ತಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಹಲವು ಬಾರಿ ಬಡ ಜನರ ಖಾತೆಗಳಿಗೆ ನೇರ ಹಣ ಜಮಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಕಾಂಗ್ರೆಸ್ ಮುಂದಾಗಿದೆ.

    ಇದಕ್ಕೂ ಮುನ್ನ ರಾಹುಲ್ ಗಾಂಧಿ, ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಾ.ರಘುರಾಮ್ ರಾಜನ್ ಹಾಗೂ ಖ್ಯಾತ ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಜನ ಸಾಮಾನ್ಯರಿಗೆ ನಗದು ಹಣದ ಅವಶ್ಯಕತೆ ಬಗ್ಗೆ ಚರ್ಚೆ ನಡೆಸಿದ್ದರು.

    ಈ ನಡುವೆ ಬಡ ಜನರು ಮತ್ತು ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ರಾಜಕೀಯ ಶುರುವಾಗಿದ್ದು, ವಲಸೆ ಕಾರ್ಮಿಕರಿಗೆ ರೈಲು ನೀಡಿ ಕಾಂಗ್ರೆಸ್ ಬೆಚ್ಚ ಭರಿಸುವುದಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಇದು ವಿವಾದವಾಗುತ್ತಿದ್ದಂತೆ 85% ಕೇಂದ್ರ ಹಾಗೂ 15% ರಾಜ್ಯ ಸರ್ಕಾರದ ವೆಚ್ಚದಲ್ಲಿ ಶ್ರಮಿಕ್ ಹೆಸರಿನ ವಿಶೇಷ ಟ್ರೈನ್ ಓಡಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಈ ನಡುವೆ ಪ್ರಿಯಾಂಕಾ ಗಾಂಧಿ ಸಾವಿರ ಬಸ್‍ಗಳಲ್ಲಿ ವಲಸೆ ಕಾರ್ಮಿಕರ ಸಂಚಾರಕಕ್ಕೆ ಅನುಮತಿ ಕೇಳಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವಕಾಶ ಸಿಗದ ಬೆನ್ನಲ್ಲೇ ಇದು ಕೂಡಾ ವಿವಾದವಾಗಿತ್ತು.

    ವಲಸೆ ಕಾರ್ಮಿಕರ ಬಳಿಕ ಬಡವರ ಪರ ಧ್ವನಿ ಎತ್ತಿರುವ ಕಾಂಗ್ರೆಸ್ ಈಗ ಆನ್‍ಲೈನ್ ಅಭಿಯಾನದ ಮೂಲಕ ಹತ್ತು ಸಾವಿರ ಹಣದ ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಕೊರೊನಾ ಸಂಕಷ್ಟ ವೇಳೆ ರಾಜಕೀಯ ನುಸುಳಲು ಆರಂಭಿಸಿದೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ನೆಲಮಂಗಲ: ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಆಟೋ ಡ್ರೈವರ್ ಧನಂಜಯ ಎಂಬವರು ಶುಕ್ರವಾರ ಕರೆ ಮಾಡಿ ತಮ್ಮ ಕಷ್ಟವನ್ನ ಹೇಳಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಹೊರಬರದೆ ಹಾಗೂ ಬಡತನದ ಬೇಗೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದ ಕುಟುಂಬಕ್ಕೆ ನೆರವು ಸಿಕ್ಕಿದೆ. ಇಂದು ಈ ಬಡ ಕುಟುಂಬದ ಸದಸ್ಯರಿಗೆ ಕರವೇ ಶಿವರಾಮೇಗೌಡ ಬಣದ ನೆಲಮಂಗಲ ತಾಲೂಕು ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಕರವೇ ಸ್ನೇಹಿತರು ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯ ಕರೆಗೆ ಸ್ಪಂದಿಸಿ ಈ ಕುಟುಂಬಕ್ಕೆ 15 ದಿನಕ್ಕೆ ಬೇಕಾಗುವ ಎಲ್ಲಾ ರೀತಿಯ ದಿನಸಿ ಪದಾರ್ಥಗಳು ಹಾಗೂ ತರಕಾರಿ ಹಣ್ಣುಗಳನ್ನು ನೀಡಿ ಸಂಕಷ್ಟದಲ್ಲಿದ್ದ ಆಟೋ ಡ್ರೈವರ್ ಧನಂಜಯ್ ಕುಟುಂಬಕ್ಕೆ ನೆರವು ನೀಡಿದ್ದಾರೆ. ನೆರವಿಗೆ ಧಾವಿಸಿದ ಪಬ್ಲಿಕ್ ಟಿವಿ ತಂಡ ಹಾಗೂ ಕರವೇ ಸ್ನೇಹಿತರಿಗೆ ಆಟೋ ಚಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ನೆಲಮಂಗಲ ಕರವೇ ಅಧ್ಯಕ್ಷ ಸುರೇಶ್, ಇಂತಹ ಸಾಕಷ್ಟು ಜನರು ಈ ಲಾಕ್‍ಡೌನ್ ಸಮಯದಲ್ಲಿ ಸಮಸ್ಯೆ ಎದುರಿಸುತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಿ ಜನರ ಏಳಿಗೆಗೆ ನಮ್ಮ ತಂಡ ಶ್ರಮಿಸುವುದಾಗಿ ತಿಳಿಸಿದ್ದಾರೆ.

     

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಂಧತ್ವದ ಶಾಪದಲ್ಲಿದ್ದ ಕುಟುಂಬಕ್ಕೆ ಮಿಡಿದ ಸರ್ಕಾರ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಂಧತ್ವದ ಶಾಪದಲ್ಲಿದ್ದ ಕುಟುಂಬಕ್ಕೆ ಮಿಡಿದ ಸರ್ಕಾರ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದ ಅಂಧ ಕುಟುಂಬದ ಕರುಣಾಜನಕ ಸ್ಥಿತಿಗೆ ಕೊನೆಗೂ ಸರ್ಕಾರ ಮಿಡಿದಿದೆ. 18 ವರ್ಷ ತಲುಪುತ್ತಿದ್ದಂತೆ ಅಂಧತ್ವಕ್ಕೆ ಜಾರುವ ಸುರೇಶ್, ಬಸ್ಸಮ್ಮ ದಂಪತಿ ಕುಟುಂಬ ಸದಸ್ಯರ ಕುರಿತು ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ಈಗ ವರದಿಯಿಂದ ಎಚ್ಚೆತ್ತಿರುವ ಸರ್ಕಾರ ಕುಟುಂಬಸ್ಥರ ಸಹಾಯಕ್ಕೆ ಮುಂದಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್. ಮಣಿವಣ್ಣನ್ ಸಹಾಯಕ್ಕೆ ಮುಂದಾಗಿದ್ದಾರೆ.

    ರಾಯಚೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ ಗ್ರಾಮಕ್ಕೆ ಭೇಟಿ ನೀಡಿ ವಸ್ತು ಸ್ಥಿತಿಯ ವರದಿ ಸಲ್ಲಿಸಿದ್ದಾರೆ. ವರದಿ ಪಡೆದಿರುವ ಕ್ಯಾ.ಮಣಿವಣ್ಣನ್ ಕುಟುಂಬಕ್ಕೆ ಆಶ್ರಯ ಮನೆ ಒದಗಿಸಿಕೊಡುವಂತೆ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಅವರಿಗೆ ನಿರ್ದೇಶನ ನೀಡಲಾಗುವುದು. ಈ ಕುಟುಂಬದ ಯಾವುದೇ ಸದಸ್ಯರು ನೌಕರಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಲ್ಲಿ ಅದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 18 ವರ್ಷವಷ್ಟೇ ಈ ಕುಟುಂಬಸ್ಥರ ಕಣ್ಣಿನ ದೃಷ್ಟಿ ಆಯುಷ್ಯ

    ಈಗಾಗಲೇ ದೃಷ್ಟಿ ಕಳೆದುಕೊಂಡಿರುವ ಕುಟುಂಬದ ಮಗಳು ಜ್ಯೋತಿ ಹಾಗೂ ದೃಷ್ಟಿ ಕಳೆದುಕೊಳ್ಳುತ್ತಿರುವ 14 ವರ್ಷದ ನವೀನ್‍ಗೆ ದೃಷ್ಟಿ ಮರುಕಳಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಲು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಒಪ್ಪಿಕೊಂಡಿದೆ. ಹೀಗಾಗಿ ಅವರನ್ನು ರಾಯಚೂರಿನಿಂದ ಕರೆದೊಯ್ಯಲು ಹಟ್ಟಿ ಚಿನ್ನದ ಗಣಿ ಕಂಪನಿಗೆ ವಾಹನದ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸೂಚಿಸಲಾಗಿದೆ. ಮುಖ್ಯವಾಗಿ ಕುಟುಂಬಕ್ಕೆ ಒದಗಿಸಿಕೂಡಬೇಕಾದ ಸೌಲಭ್ಯಗಳ ಬಗ್ಗೆ ಗಮನಹರಿಸಿ ವರದಿ ನೀಡಲು ನೋಡೆಲ್ ಅಧಿಕಾರಿ ಒಬ್ಬರನ್ನೂ ನಿಯೋಜಿಸಲಾಗುವುದು ಎಂದು ಕ್ಯಾ.ಮಣಿವಣ್ಣನ್ ಮಾಹಿತಿ ನೀಡಿದ್ದಾರೆ.

    ಕುಟುಂಬಕ್ಕೆ ಆರ್ಥಿಕ ನೆರವು ನೀಡ ಬಯಸುವವರು ಕುಟುಂಬದ ಸದಸ್ಯ ನವೀನ್ ಕುಮಾರ ಬ್ಯಾಂಕ್ ಖಾತೆಗೆ ಸಹಾಯ ಮಾಡಬಹುದಾಗಿದೆ. ಬ್ಯಾಂಕ್ ಖಾತೆ ವಿವರ ಇಂತಿದೆ: ನವೀನ್ ಕುಮಾರ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಖಾತೆ ಸಂಖ್ಯೆ: 10964101048247, ಐಎಫ್‌ಎಸ್‌ಸಿ: PKGB0010964 ಕಳುಹಿಸಿಕೊಡಬಹುದಾಗಿದೆ ಎಂದು ನೋಡೆಲ್ ಅಧಿಕಾರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಹೆಚ್.ಜಿ ತಿಳಿಸಿದ್ದಾರೆ.

  • ಆಧಾರ ಸ್ತಂಭವಾಗಿದ್ದ ಮಗನ ಕಳಕೊಂಡು ತಂದೆ, ತಾಯಿ ಕಣ್ಣೀರು

    ಆಧಾರ ಸ್ತಂಭವಾಗಿದ್ದ ಮಗನ ಕಳಕೊಂಡು ತಂದೆ, ತಾಯಿ ಕಣ್ಣೀರು

    – ಅಪಘಾತವಲ್ಲ ಕೊಲೆಯೆಂದು ಆರೋಪ

    ಉಡುಪಿ: ಬಡ ಕುಟುಂಬದ ಆಧಾರ ಸ್ತಂಭವಾಗಿದ್ದ ಯುವಕನೊಬ್ಬ ನಡು ವಯಸ್ಸು ದಾಟಿದ ತಂದೆ ತಾಯಿಗೆ ಊರುಗೋಲಾಗಿ, ತಮ್ಮನ ವಿಧ್ಯಾಭ್ಯಾಸಕ್ಕೆ ದಾರಿ ದೀಪವಾಗಲು ತಯಾರಾಗಿದ್ದನು. ಏನಾಯ್ತೋ ಏನೋ ಒಂದು ರಾತ್ರಿ ವಿನೋದ್ ಜೀವನದಲ್ಲಿ ಕೊನೆಯ ರಾತ್ರಿಯಾಯ್ತು. ಕಗ್ಗತ್ತಲ ಕಾಡಿನ ರಸ್ತೆ ಜೀವಕ್ಕೆ ಕುತ್ತು ತಂದಿತ್ತು. ಆದರೆ ವಿನೋದ್ ಸಾವಿನ ಹಿಂದೆ ವ್ಯವಸ್ಥಿತ ಸಂಚಿದೆ ಎಂಬೂದು ಕುಟುಂಬಸ್ಥರ ಆರೋಪವಾಗಿದೆ.

    ಹೌದು. ಮೂರು ತಿಂಗಳ ಹಿಂದೆ ಮಗ ವಿನೋದ್ ಮೃತಪಟ್ಟ ನೆನಪು ತಾಯಿಯನ್ನು ಮತ್ತೆ ಮತ್ತೆ ಬಿಕ್ಕಳಿಸಿ ಅಳುವಂತೆ ಮಾಡುತ್ತಿದೆ. ವಿನೋದ್ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದ ಯುವಕ. ಬಡ ಕುಟುಂಬವಾದ್ದರಿಂದ ಓದು ನಿಲ್ಲಿಸಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಜೂನ್ 26ರ ರಾತ್ರಿ ಗೆಳೆಯರೆಲ್ಲ ಸೇರಿಕೊಂಡು ಮಂಚಕಲ್ಲುವಿನ ಮರೀನಾ ಬಾರಿನಲ್ಲಿ ಪಾರ್ಟಿ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವಾಗಿದೆ. 11 ಗಂಟೆ ಸುಮಾರು ಬಾರ್‍ನಿಂದ ಮನೆಗೆ ತನ್ನ ಗೆಳೆಯ ಕುಮಾರನೊಂದಿಗೆ ವಿನೋದ್ ಹೊರಟಿದ್ದಾನೆ. ಮನೆಯಿಂದ ಅರ್ಧ ಕೊಲೋಮೀಟರ್ ದೂರದಲ್ಲಿ ವಿನೋದ್ ಮೃತದೇಹ ಪತ್ತೆಯಾಗಿದೆ. ಅಪಘಾತ ಎಂದು ಎಫ್‍ಐ ಆರ್ ದಾಖಲಾಗಿದೆ. ಆದರೆ ಇದೊಂದು ವ್ಯವಸ್ಥಿತ ಕೊಲೆ ವಿನೋದ್ ಪೋಷಕರು ಆರೋಪಿಸಿದ್ದಾರೆ.

    ಬೈಕ್ ಸ್ಕಿಡ್ ಆಗಿ ವಿನೋದ್ ಮೃತಪಟ್ಟಿದ್ದಾನೆ ಎಂದು ಎಫ್‍ಐಆರ್‍ನಲ್ಲಿ ದಾಖಲಾಗಿದೆ. ಹಿಂಬದಿ ಸವಾರ ಕುಮಾರನಿಗೂ ತರಚಿದ ಗಾಯಗಳಾಗಿದೆ ಅಂತಲೂ ನಮೂದಿಸಲಾಗಿದೆ. ಆದರೆ ಕುಟುಂಬಸ್ಥರು ಇದನ್ನು ಒಪ್ಪುತ್ತಿಲ್ಲ. ಸುತ್ತಮುತ್ತಲ ಸಿಸಿಟಿವಿ ಫೂಟೇಜ್ ಪರಿಶೀಲಿಸುವಾಗ ವಿನೋದ್ ಮತ್ತು ಗೆಳೆಯ ಕುಮಾರ ಜೊತೆಗೆ ಬೈಕಿನಲ್ಲಿ ಹೋಗಿದ್ದಾರೆ. ಅಪಘಾತವಾದ ಸ್ಥಳದಲ್ಲಿ ಯಾವುದೇ ಕುರುಹುಗಳು ಕಾಣಿಸಿಲ್ಲ. ಬೈಕಿಗೆ ಡ್ಯಾಮೇಜಾಗಿಲ್ಲ. ವಿನೋದ್ ಮೃತದೇಹದ ಮೇಲೆ ಗಾಯಗಳಿಲ್ಲ. ಫೋನ್ ನಲ್ಲಿ ಜಗಳದ ಸಂಭಾಷಣೆಗಳು ರೆಕಾರ್ಡ್ ಆಗಿದೆ. ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ. ಎಸ್‍ಪಿ, ಎಎಸ್‍ಪಿ, ಸರ್ಕಲ್ ಆಫೀಸ್‍ಗಳಿಗೆ ಎಷ್ಟೇ ಸುತ್ತಿದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ವಿನೋದ್ ತಾಯಿ ಮಲ್ಲಿಕಾ ಕಣ್ಣೀರು ಹಾಕಿದ್ದಾರೆ.

    ಘಟನೆ ನಡೆದ ದಿನ ಜೊತೆಗಿದ್ದ ಗೆಳೆಯರನ್ನು ಕರೆಸಿ ವಿಚಾರಣೆ ಮಾಡಬೇಕು. ಅಪಘಾತದಿಂದ ಸಾವನ್ನಪ್ಪಿದ್ದರೆ ಮರಣೋತ್ತರ ಪರೀಕ್ಷೆ ವರದಿ ಬರಲಿ, ಸಂಚು ರೂಪಿಸಿ ಕೊಲೆಗೈದಿದ್ದರೆ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.

  • ಅಂಗವಿಕಲ ಮಗಳೊಂದಿಗೆ ಬಳೆ, ಸೀರೆ ವ್ಯಾಪಾರ ಮಾಡ್ತಿರೋ ತಾಯಿಗೆ ಬೇಕಿದೆ ಸಹಾಯ

    ಅಂಗವಿಕಲ ಮಗಳೊಂದಿಗೆ ಬಳೆ, ಸೀರೆ ವ್ಯಾಪಾರ ಮಾಡ್ತಿರೋ ತಾಯಿಗೆ ಬೇಕಿದೆ ಸಹಾಯ

    ಹಾವೇರಿ: ಅವರದ್ದು ಕಡುಬಡತನದ ಕುಟುಂಬ. ಮಗಳು ಹುಟ್ಟುತ್ತಾ ಅಂಧೆ, ತಂದೆ ಸ್ವಲ್ಪ ದಿನದಲ್ಲಿಯೇ ನಿಧನ ಹೊಂದಿದ್ದಾರೆ. ತಾಯಿ ಕೂಲಿ ಮಾಡಿಯೇ ಮಗಳನ್ನ ಬೆಳೆಸಿದ್ದಾರೆ. ಅಲ್ಲದೆ ಮಗಳಿಗೆ ಬರೋ ತಿಂಗಳ ಅಂಗವಿಕಲ ವೇತನದಲ್ಲಿ ಬಳೆ ಹಾಗೂ ಸೀರೆ, ಜಾಕೆಟ್‍ಗಳ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದಾರೆ. ಆದ್ರೆ ಇದೀಗ ಕಡುಬಡತನದಲ್ಲಿರೋ ಈ ಕುಟುಂಬ ವ್ಯಾಪಾರ ಹಾಗೂ ಅಂಗಡಿ ಮಾಡಲು ದಾನಿಗಳ ಮೊರೆ ಹೋಗಿದೆ.

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಪುಟ್ಟದೊಂದು ಮನೆಯಲ್ಲಿ ಬಳೆಯ ವ್ಯಾಪಾರ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಮಗಳ ಕೈಹಿಡಿದುಕೊಂಡು ತಲೆಯ ಮೇಲೆ ಬುಟ್ಟಿಯನ್ನ ಹೊತ್ತು ತಾಯಿ ವ್ಯಾಪಾರಕ್ಕೆ ಹೋಗುತ್ತಿದ್ದಾರೆ. ಮಗಳು ಫಜಲುನಿಸ್ಸ್ ಬಡೇಮಿಯ್ಯಾ ಹುಟ್ಟುತ್ತಾ ಅಂಧೆ. ತಾಯಿ ಶಕುಂದಿ ಬಡೇಮಿಯ್ಯಾ ಆಶ್ರಯದಲ್ಲಿಯೇ ಬೆಳೆದಿದ್ದಾಳೆ. ತಂದೆ ಬೇಗ ನಿಧನ ಹೊಂದಿದ್ದರಿಂದ ಮಗಳಿಗೆ ತಾಯಿಯೇ ಆಸರೆ. ಆದ್ರೆ ಈಗ ತಾಯಿಗೆ ಸುಮಾರು 70 ವರ್ಷ. ಕಳೆದ 20 ವರ್ಷಗಳಿಂದ ತಾಯಿ ಮತ್ತು ಮಗಳು ಬಳೆ ವ್ಯಾಪಾರ ಹಾಗೂ ಜಾಕೆಟ್ ಪೀಸ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪ್ರತಿ ತಿಂಗಳು ಸರ್ಕಾರದಿಂದ ಬರುವ ಅಂಗವಿಕಲ ವೇತನ 1200 ರೂಪಾಯಿ ತೆಗೆದುಕೊಂಡು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಆದ್ರೆ ಇದೀಗ ನಮಗೆ ವ್ಯಾಪಾರಕ್ಕಾಗಿ ಒಂದಿಷ್ಟು ಹಣ ಮತ್ತು ಗ್ರಾಮದಲ್ಲಿಯೇ ಸಣ್ಣ ಅಂಗಡಿಯನ್ನ ಹಾಕಿಕೊಟ್ಟರೇ ನಮ್ಮ ಜೀವನ ನಡೆಸುತ್ತಿವೆ ಅಂತಿದ್ದಾರೆ ಈ ತಾಯಿ ಮಗಳು.

    ಮೊದಲು ತಾಯಿ ಗ್ರಾಮದ ಬೇರೆ ಜಮೀನುಗಳಿಗೆ ಹೋಗಿ ಕೂಲಿ ಕೆಲಸ ಮಾಡಿ ತನ್ನ ಮಗಳನ್ನ ಸಾಕುತ್ತಿದ್ದರು. ಆದ್ರೆ ಇದೀಗ ತಾಯಿಗೆ ವಯಸ್ಸಾಗಿದ್ದರಿಂದ ಜಮೀನಿಗೆ ಹೋಗಿ ಕೆಲಸ ಮಾಡುವ ಶಕ್ತಿ ಇಲ್ಲ. ಹಾಗಾಗಿ ಪ್ರತಿ ತಿಂಗಳು ಬರೋ ಮಗಳ ಅಂಗವಿಕಲ ವೇತನದಲ್ಲಿ ಬಳೆಗಳು ಹಾಗೂ ಸೀರೆಯ ಜಾಕೆಟ್ ತಂದು ಮಾರಾಟ ಮಾಡ್ತಿದ್ದಾರೆ. ಅದರಲ್ಲಿ ಬಂದ ಹಣದಲ್ಲಿಯೇ ತಾಯಿ ಮತ್ತು ಮಗಳು ಜೀವನ ನಡೆಸುತ್ತಿದ್ದಾರೆ.

    ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಲು ಆರಂಭಿಸಿ ಎರಡು ವರ್ಷ ಆಗಿದೆ. ಆದ್ರೆ ಇನ್ನೂ ಮನೆ ಪೂರ್ಣವಾಗಿಲ್ಲ. ಈ ಕುಟುಂಬದ ಬಳೆ ಹಾಗೂ ಸೀರೆ ವ್ಯಾಪಾರಕ್ಕಾಗಿ ದಾನಿಗಳ ಸಹಾಯಬೇಕಿದೆ ಅಂತಾರೆ ಸ್ಥಳೀಯರು. ಮಗಳಿಗೆ ಸ್ಪಲ್ಪ ದೊಡ್ಡ ಪ್ರಮಾಣದಲ್ಲಿ ಬಳೆ ಹಾಗೂ ಸೀರೆ ವ್ಯಾಪಾರ ಮಾಡಿಕೊಡುವ ಆಸೆಯನ್ನು ತಾಯಿ ಹೊಂದಿದ್ದಾರೆ. ದಾನಿಗಳು ಸಹಾಯ ಮಾಡಿ ಈ ಕುಟುಂಬಕ್ಕೆ ದಾರಿದೀಪವಾಗಬೇಕಿದೆ.

    https://www.youtube.com/watch?v=VJXVGw7ajJ8