Tag: Pomegranate Crop

  • ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿ – 6.5 ಲಕ್ಷ ಪಂಗನಾಮ

    ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿ – 6.5 ಲಕ್ಷ ಪಂಗನಾಮ

    ವಿಜಯಪುರ: ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿಸಿ 6.5 ಲಕ್ಷ ಹಣ ಕೊಡದೇ ಪರಾರಿಯಾಗಿರುವ ಘಟನೆ ವಿಜಯಪುರ (Vijayapura) ತಾಲೂಕಿನ ಜಂಬಗಿ ಗ್ರಾಮದಲ್ಲಿ ನಡೆದಿದೆ.

    ಜಂಬಗಿ (Jambagi) ನಿವಾಸಿಗಳಾದ ಸುಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಎಂಬುವವರು ವಂಚನೆಗೆ ಒಳಗಾಗಿದ್ದಾರೆ. ಒಟ್ಟು ನಾಲ್ವರು ಆರೋಪಿಗಳಿದ್ದು, ದಾವಣಗೆರೆ ಮೂಲದವರು ಎಂದು ಗುರುತಿಸಲಾಗಿದೆ. ಓರ್ವನನ್ನು ರಫೀಕ್ ಶೇಖ್ ಎಂದು ಪತ್ತೆಹಚ್ಚಲಾಗಿದೆ.ಇದನ್ನೂ ಓದಿ: ನವಜಾತ ಶಿಶು ಕದ್ದು 50,000 ರೂ.ಗೆ ಮಾರಾಟ – ಮೂವರು ಖತರ್ನಾಕ್‌ ಕಳ್ಳಿಯರು ಅರೆಸ್ಟ್‌

    ವಿಜಯಪುರ ಜಿಲ್ಲೆಯ ರೈತರು ಒಂದೆಡೆ ಮಳೆ ಅಭಾವದಿಂದ ಬೇಸತ್ತಿದ್ದಾರೆ. ಆದರೂ ಕೂಡ ಸಾಲ ಮಾಡಿ ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಸುಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಸಹೋದರರು ತಮ್ಮ ಮೂರು ಎಕರೆ ಜಮೀನಲ್ಲಿ ದಾಳಿಂಬೆ ಬೆಳೆದಿದ್ದರು. ಈ ದಾಳಿಂಬೆಯನ್ನು ಖರೀದಿಸಲು ರೈತರ ಸೋಗಿನಲ್ಲಿ ರಫೀಕ್ ಶೇಖ್ ಸೇರಿದಂತೆ ನಾಲ್ವರು ಖದೀಮರು ಬಂದಿದ್ದರು. ದಾಳಿಂಬೆಯನ್ನ ಖರೀದಿಸಿ ಅರ್ಧ ಹಣ ನೀಡಿ, ಇನ್ನುಳಿದ ಹಣ ನೀಡದೆ 6.5 ಲಕ್ಷ ರೂ. ಪಂಗನಾಮ ಹಾಕಿ ಪರಾರಿಯಾಗಿದ್ದಾರೆ.

    ರಫೀಕ್ ಆಂಡ್ ಗ್ಯಾಂಗ್ ಎರಡು ದಿನದ ಹಿಂದೆ ಜಂಬಗಿ ಗ್ರಾಮದ ಪಕ್ಕದ ನಾಗಠಾಣಾ ಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ನಂತರ ದಾಳಿಂಬೆ ಬೆಳೆದಿದ್ದ ಅಲ್ಲಿನ ರೈತರ ಬಗ್ಗೆ ವಿಚಾರಿಸಿದ್ದಾರೆ. ಆಗ ಸುಭಾಸ, ಗುರಪ್ಪ ಸಹೋದರರ ದಾಳಿಂಬೆ ಬೆಳೆಯನ್ನು ಪತ್ತೆ ಹಚ್ಚಿ ಅವರ ಜಮೀನಿಗೆ ತೆರಳಿದ್ದಾರೆ. ಒಟ್ಟು 3 ಎಕರೆ ಜಮೀನಿನ ದಾಳಿಂಬೆಗೆ 12 ಲಕ್ಷ ರೂ. ಹೊಂದಿಸಿದ್ದಾರೆ. ನಂತರ 5.5 ಲಕ್ಷ ರೂ ಹಣ ನೀಡಿ, ಒಳ್ಳೆಯ ದಾಳಿಂಬೆಯ ಒಂದು ಲೋಡ್ ಕೊಂಡೊಯ್ದಿದ್ದಾರೆ. ಮರುದಿನ ಬಂದು ಉಳಿದ ಹಣ ನೀಡಿ ಇನ್ನುಳಿದ 2 ವಾಹನದ ಲೋಡ್ ದಾಳಿಂಬೆಯನ್ನ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಬಳಿಕ ಕರೆ ಮಾಡಿ ಹಣ ಕೇಳಿದರೆ ಯಾವ ದಾಳಿಂಬೆ, ಯಾವ ಹಣ? ಎಂದು ಹೇಳಿದ್ದಾರೆ.

    ರೈತ ಸುಭಾಸ ಹಾಗೂ ಇತರರು ಸೇರಿ ದಾವಣಗೆರೆಯ ಆಜಾದ್‌ನಗರ ಪೊಲೀಸ್ ಠಾಣೆಗೆ ತೆರಳಿ ವಂಚನೆ ಮಾಡಿರುವ ಕುರಿತು ತಿಳಿಸಿದ್ದಾರೆ. ಆಗ ಪೊಲೀಸರು ಖದೀಮರನ್ನು ವಿಚಾರಣೆಗೆ ಕರೆಸಿದಾಗ ನಾವು ಯಾವುದೇ ಹಣ ನೀಡುವುದಿಲ್ಲ, ನಾವು ಯಾವುದೇ ದಾಳಿಂಬೆ ಖರೀದಿ ಮಾಡಿಲ್ಲ ಎಂದು ರೀಲ್ ಬಿಟ್ಟಿದ್ದಾರೆ. ಈ ಕುರಿತು ರೈತ ಸುಭಾಸ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಫೀಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ: 27-11-2024

  • ದಾಳಿಂಬೆಯಿಂದ ಬದುಕು ಬಂಗಾರ – ಮೊದಲ ಬೆಳೆಯಲ್ಲೇ ಕೋಟಿ ಒಡೆಯನಾದ ರೈತ

    ದಾಳಿಂಬೆಯಿಂದ ಬದುಕು ಬಂಗಾರ – ಮೊದಲ ಬೆಳೆಯಲ್ಲೇ ಕೋಟಿ ಒಡೆಯನಾದ ರೈತ

    ಚಿಕ್ಕಬಳ್ಳಾಪುರ: ಅವರು ಮೊದಲೆಲ್ಲಾ ಹಿಪ್ಪು ನೇರಳೆ, ಸೊಪ್ಪು ಬೆಳೆಯುವ ಕೃಷಿ ಮಾಡುತ್ತಿದ್ದ ರೈತರು (Farers) ಕ್ರಮೇಣ ದ್ರಾಕ್ಷಿ ಬೆಳೆದು ಕೈ ಸುಟ್ಟುಕೊಂಡಿದ್ದರು. ಕೊನೆಗೆ ಏನು ಮಾಡುವುದು ಅಂತಾ ತಲೆಮೇಲೆ ಕೈಹೊತ್ತು ಕುಳಿತಿದ್ದಾಗ ಬಾಲ್ಯ ಸ್ನೇಹಿತ ಕೊಟ್ಟ ದಾಳಿಂಬೆ (Pomegranate) ಬೆಳೆಯುವ ಐಡಿಯಾ ಈಗ ಆ ರೈತನ ಬದುಕನ್ನೇ ಬದಲಿಸಿದೆ. ಮೊದಲ ಬೆಳೆಯಲ್ಲೇ ರೈತ 1 ಕೋಟಿಗೂ ಅಧಿಕ ಆದಾಯ ಗಳಿಸಿದ್ದು ಬದುಕು ಸಿಹಿಯಾಗಿಸಿಕೊಂಡಿದ್ದಾರೆ.

    ಹೌದು.. ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಹೊಸಹುಡ್ಯ ಗ್ರಾಮದ ರೈತ ಮಂಜುನಾಥ್ ಇದೇ ಮೊದಲ ಬಾರಿಗೆ ದಾಳಿಂಬೆ ಬೆಳೆದು ಯಶಸ್ಸು ಕಂಡಿದ್ದಾರೆ. ತಮ್ಮ ಪಿತ್ರಾರ್ಜಿತ 11 ಎಕೆರೆ ಭೂಮಿಯಲ್ಲಿ ದಾಳಿಂಬೆ ಬೆಳೆದಿದ್ದು (Pomegranate Crop) ರೈತನಿಗೆ ಇದೀಗ ಭರಪೂರ ಇಳುವರಿ ಬಂದಿದೆ. ಮೊದಲ ಬೆಳೆಯಲ್ಲೇ 80ಕ್ಕೂ ಹೆಚ್ಚು ಟನ್ ಹಣ್ಣು ಕಟಾವಿಗೆ ಬಂದಿದ್ದು 1 ಕೆಜಿ ದಾಳಿಂಬೆ ಹಣ್ಣು 145 ರೂಪಾಯಿಗೆ ಮಾರಾಟವಾಗಿದೆ. ಇದರಿಂದ 1 ಕೋಟಿ ರೂ.ಗಿಂತಲೂ ಅಧಿಕ ಆದಾಯ ಗಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿಗರು ಭಾಗಿಯಾಗದ್ದಕ್ಕೆ ಆಕ್ರೋಶ- ಕಾವೇರಿ ನೀರು ಸರಬರಾಜು ಮಾಡೋ ಪಂಪ್ ಹೌಸ್‍ಗೆ ಮುತ್ತಿಗೆ

    ಕಳೆದ 2 ವರ್ಷಗಳಿಂದ ಹಗಲು ರಾತ್ರಿ ಅನ್ನದೇ ಕಷ್ಟಪಟ್ಟು ದಾಳಿಂಬೆ ಬೆಳೆದಿದ್ದು, ರೈತ ಮಂಜುನಾಥ್ ಕಷ್ಟಕ್ಕೆ ಪ್ರತಿಫಲವಾಗಿ ಉತ್ತಮ ಬೆಳೆ ಬಂದಿದೆ. ಮಂಜುನಾಥ 60 ಲಕ್ಷ ರೂ.ನಷ್ಟು ಬಂಡವಾಳ ಹೂಡಿ ಸರಿಸುಮಾರು 11 ಎಕೆರೆ ಪ್ರದೇಶದಲ್ಲಿ 4,500 ದಾಳಿಂಬೆ ಗಿಡ ನಾಟಿ ಮಾಡಿದ್ದರು. ಇದೀಗ ವ್ಯಾಪಾರಸ್ಥರೇ ತೋಟಕ್ಕೆ ಬಂದು ಹಣ್ಣು ಖರೀದಿ ಮಾಡಲು ಮುಂದಾಗಿದ್ದು, ನಿರೀಕ್ಷೆಗೂ ಮೀರಿದ ಆದಾಯ ದೊರೆತಿದೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ

    ಈಗಾಗಲೇ 11 ಎಕೆರೆಯಲ್ಲಿ ದಾಳಿಂಬೆ ಬೆಳೆದಿರುವ ರೈತ ಮತ್ತೊಂದೆಡೆ 8 ಎಕರೆ ದಾಳಿಂಬೆ ನಾಟಿ ಮಾಡಿದ್ದಾರೆ. ಸಾಲದ್ದಕ್ಕೆ ಇನ್ನೂ 40 ಎಕೆರೆ ಭೂಮಿ ಭೋಗ್ಯಕ್ಕೆ ಪಡೆದು ದಾಳಿಂಬೆ ಬೆಳೆಯಲು ಮುಂದಾಗುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]