Tag: pollution

  • ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ನವದೆಹಲಿ: ದೀಪಾವಳಿ (Deepavali) ಸನಿಹವಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಮತ್ತೆ ವಾಯು ಮಾಲಿನ್ಯದ (Pollution) ಆತಂಕ ಶುರುವಾಗಿದೆ. ಈ ನಡುವೆ ಈ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ದೆಹಲಿ – ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ಪಟಾಕಿಗಳ (Firecrackers) ಮಾರಾಟವನ್ನು ನಿಷೇಧಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠವು, ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಪಟಾಕಿಗಳ ಮಾರಾಟ ಮತ್ತು ತಯಾರಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಹೇಳಿತು. ಇದನ್ನೂ ಓದಿ: Andhra Pradesh | ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

    ಸುಪ್ರೀಂಕೋರ್ಟ್ (Supreme Court) ದೆಹಲಿಯಲ್ಲಿ ಪಟಾಕಿ ತಯಾರಕರಿಗೆ ಹಸಿರು ಪಟಾಕಿಗಳನ್ನು ತಯಾರಿಸಲು ಅನುಮತಿ ನೀಡಿತು. ಆದಾಗ್ಯೂ, ಮುಂದಿನ ಆದೇಶದವರೆಗೆ ಈ ಪಟಾಕಿಗಳನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಮಾರಾಟ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಹಸಿರು ಪಟಾಕಿ ಪ್ರಮಾಣಪತ್ರ ಹೊಂದಿರುವ ತಯಾರಕರು ಮಾತ್ರ ಪಟಾಕಿಗಳನ್ನು ತಯಾರಿಸಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ. ಈ ಪ್ರಮಾಣಪತ್ರವನ್ನು NEERI ಮತ್ತು PESOನಂತಹ ಅಧಿಕೃತ ಏಜೆನ್ಸಿಗಳು ನೀಡಬೇಕು ಎಂದು ಹೇಳಿದೆ. ಇದನ್ನೂ ಓದಿ: ಲಡಾಖ್‌ ಹಿಂಸಾಚಾರಕ್ಕೆ ಪ್ರಚೋದನೆ – ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅರೆಸ್ಟ್‌

    ದೆಹಲಿ-ಎನ್‌ಸಿಆರ್‌ನಲ್ಲಿ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪಟಾಕಿ ತಯಾರಕರು ಲಿಖಿತ ಭರವಸೆ ನೀಡಬೇಕಾಗುತ್ತದೆ. ದೀಪಾವಳಿಯ ಸಮಯದಲ್ಲಿ ಈ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುವುದರಿಂದ ನ್ಯಾಯಲಯ ಈ ಷರತ್ತು ವಿಧಿಸಿದೆ. ಈ ವಿಷಯದ ಕುರಿತು ಮುಂದಿನ ವಿಚಾರಣೆಯಲ್ಲಿ, ಮಾರಾಟವನ್ನು ತಡೆಯಲು ಮುಂದಿನ ಹಂತದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸುಪ್ರೀಂಕೋರ್ಟ್ ನಿರ್ಧರಿಸಲಿದೆ.  ಇದನ್ನೂ ಓದಿ: ಮಿಗ್ -21 ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ: ರಾಜನಾಥ್ ಸಿಂಗ್

  • ಮಲೀನವಾಗಿ ಹಸಿರು ಬಣ್ಣಕ್ಕೆ ತಿರುಗಿದ ಟಿಬಿ ಡ್ಯಾಂ ನೀರು

    ಮಲೀನವಾಗಿ ಹಸಿರು ಬಣ್ಣಕ್ಕೆ ತಿರುಗಿದ ಟಿಬಿ ಡ್ಯಾಂ ನೀರು

    ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಜಲಕಂಟಕ ಎದುರಾಗಿದ್ದು, ಜಲಾಶಯದ ನೀರು ಸಂಪೂರ್ಣ ಮಲೀನವಾಗಿ, ಹಸಿರು ಬಣ್ಣಕ್ಕೆ (Green Color) ತಿರುಗಿದೆ.

    ಇದೇ ಹಸಿರು ಬಣ್ಣಕ್ಕೆ ತಿರುಗಿದ, ಕುಡಿಯಲು ಯೋಗ್ಯವಲ್ಲದ ನೀರೇ ಮೂರು ರಾಜ್ಯಗಳ 8 ಜಿಲ್ಲೆಗಳ ಜನರಿಗೆ ಅನಿವಾರ್ಯ ಎನ್ನುವಂತಾಗಿದೆ. ಈಗಾಗಲೇ ಹಲವು ಬಾರಿ ತುಂಗಭದ್ರಾ ಜಲಾಶಯದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

    ಜಲಾಶಯದ ನೀರು ಮಲೀನಗೊಂಡಿದ್ದರಿಂದ ಬೃಹತ್ ಗಾತ್ರದ ಮೀನುಗಳು ಆಮ್ಲಜನಕದ ಕೊರತೆಯಿಂದ ಸಾಯುತ್ತಿವೆ. ಹೀಗೇ ಸತ್ತು ಬಿದ್ದ ಮೀನುಗಳು ಜಲಾಶಯದ ಹಿನ್ನೀರು ಪ್ರದೇಶಕ್ಕೆ ತೇಲಿ ಬರುತ್ತಿವೆ. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    ಕಾರ್ಖಾನೆಗಳು ಹಾಗೂ ನಗರಗಳ ತ್ಯಾಜ್ಯವನ್ನು ನದಿಗೆ ಹರಿಬಿಟ್ಟಿದ್ದರಿಂದ ನೀರು ಹಸಿರುಬಣ್ಣಕ್ಕೆ ತಿರುಗಿದೆ.

  • ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ – GRAP-III ನಿರ್ಭಂಧ ತೆರವು

    ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ – GRAP-III ನಿರ್ಭಂಧ ತೆರವು

    ನವದೆಹಲಿ: ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟದಲ್ಲಿ (Delhi Air Quality) ಸುಧಾರಣೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ವಿಧಿಸಲಾಗಿದ್ದ 3ನೇ ಹಂತದ ನಿರ್ಬಂಧಗಳನ್ನು‌ ತೆರವುಗೊಳಿಸಲಾಗಿದೆ. ಜೊತೆಗೆ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ವಾಹನಗಳ ಓಡಾಟದ ಮೇಲಿನ ನಿರ್ಬಂಧಗಳನ್ನೂ ಸಡಿಲಗೊಳಿಸಲಾಗಿದೆ.

    ಭಾನುವಾರ (ಇಂದು) ದೆಹಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಅಂಕಿ – ಅಂಶಗಳ ಪ್ರಕಾರ, ಮಧ್ಯಾಹ್ನ 2 ಗಂಟೆ ವೇಳೆ ದೆಹಲಿಯ ಎಕ್ಯೂಐ 348 ಆಗಿತ್ತು, ಇದು ಮಧ್ಯಾಹ್ನ 3 ಗಂಟೆ ವೇಳೆಗೆ 343 ಹಾಗೂ ಸಂಜೆ 5 ಗಂಟೆ ಸುಮಾರಿಗೆ 335 ದಾಖಲಾಗಿದೆ. ಇದು ಸುಧಾರಣೆಯ ಸ್ಪಷ್ಟ ಸಂಕೇತ ಎಂದು ವರದಿ ಹೇಳಿದೆ.

    ಈ ಸಕಾರಾತ್ಮಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಎನ್‌ಸಿಆರ್‌ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಿಧಿಸಲಾಗಿದ್ದ 3ನೇ ಹಂತದ ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಿದೆ. ಇದನ್ನೂ ಓದಿ: ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ

    ಹಂತ-1, ಹಂತ – 2ರ ನಿರ್ಬಂಧಗಳು ಮುಂದುವರಿಯಲಿವೆ. ಇದರೊಂದಿಗೆ ಕೈಗಾರಿಕಾ ಘಟಕಗಳು ಹಾಗೂ ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ವಿಧಿಸಲಾದ ನಿರ್ಬಂಧಗಳು ಮುಂದಿನ ಆದೇಶದವರೆಗೆ ಮುಂದುವರಿಯಲಿವೆ ಎಂದು ಸರ್ಕಾರ ಹೇಳಿದೆ ಎನ್ನಲಾಗಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನೆಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

  • ಹಕ್ಕಿಗಳ ವಲಸೆಯಲ್ಲಿ ವಿಳಂಬ – ಜಾಗತಿಕ ತಾಪಮಾನ ಏರಿಕೆಯ ಪಾತ್ರವೇನು?

    ಹಕ್ಕಿಗಳ ವಲಸೆಯಲ್ಲಿ ವಿಳಂಬ – ಜಾಗತಿಕ ತಾಪಮಾನ ಏರಿಕೆಯ ಪಾತ್ರವೇನು?

    ಭಾರತ (India) ಜೀವವೈವಿಧ್ಯದ ತಾಣವಾಗಿದ್ದು, ವಿದೇಶಿ ಹಕ್ಕಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಇನ್ನೂ ಕರ್ನಾಟಕದಲ್ಲಿ ಗುರುತಿಸಲಾಗಿರುವ 530ಕ್ಕೂ ಹೆಚ್ಚಿನ ಪಕ್ಷಿ ಪ್ರಬೇಧಗಳಲ್ಲಿ ಸುಮಾರು 80ರಷ್ಟು ಪ್ರಬೇಧಗಳು ವಲಸೆ ಬರುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. 

    ಯೂರೋಪ್, ಮಂಗೋಲಿಯಾ, ಸೈಬೀರಿಯಾ, ರಷ್ಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮುಂತಾದ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುವ ಹಕ್ಕಿಗಳ (Migratory Birds) ಸಂಖ್ಯೆ ಹೆಚ್ಚು. ಈ ಹಕ್ಕಿಗಳೆಲ್ಲ ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಬರುವ ವಲಸೆ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೇ ವಲಸೆಯ ಅವಧಿ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ. 

    ಆಗಸ್ಟ್ 25 ರಂದು ಸುಮಾರು 30,000 ಪಕ್ಷಿ ವೀಕ್ಷಕರ ದತ್ತಾಂಶವನ್ನು ಆಧರಿಸಿ ಬಿಡುಗಡೆಯಾದ ವರದಿಯ ಪ್ರಕಾರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷಿ ಪ್ರಭೇದಗಳು ಕ್ಷೀಣಿಸುತ್ತಿವೆ. ಮೌಲ್ಯಮಾಪನ ಮಾಡಲಾದ 942 ಪಕ್ಷಿ ಪ್ರಭೇದಗಳಲ್ಲಿ 142 ಪಕ್ಷಿಗಳು ಕ್ಷೀಣಿಸುತ್ತಿವೆ ಎಂದು ವರದಿಯಾಗಿದೆ. 

    ವಲಸೆ ಅಧ್ಯಯನ ಹೇಗೆ ಮಾಡಲಾಗುತ್ತದೆ?

    ವಲಸೆ ಹಕ್ಕಿಗಳ ಜೀವನಕ್ರಮವನ್ನು ಅಧ್ಯಯನ ಮಾಡಲು ವಿಶ್ವದಾದ್ಯಂತ ವಿಜ್ಞಾನಿಗಳು ನಿರಂತರ ಪ್ರಯತ್ನದಲ್ಲಿದ್ದಾರೆ. ವಿಶ್ವದ ಹಲವಾರು ವೈಜ್ಞಾನಿಕ ಮತ್ತು ವನ್ಯಜೀವಿ ಸಂಶೋಧನಾ ಸಂಸ್ಥೆಗಳು ವಲಸೆ ಅಧ್ಯಯನಕ್ಕಾಗಿ ಸಂಶೋಧನಾ ಉಪಕರಣಗಳನ್ನು ಅಭಿವೃದ್ಧಿ ಪಡಿಸಿವೆ.

    ಇತ್ತೀಚಿನ ವರ್ಷಗಳಲ್ಲಿ ವಲಸೆ ಅಧ್ಯಯನಕ್ಕೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಅದರಲ್ಲಿ ಪ್ರಮುಖವಾದದ್ದು ಉಪಗ್ರಹ-ಆಧಾರಿತ ರೇಡಿಯೋ ಟೆಲಿಮೆಟ್ರಿ. ಇದು ಹಕ್ಕಿಗಳ ಗಾತ್ರ, ಆಕಾರ, ಜೀವನ ಶೈಲಿ, ಹಾರುವ ರೀತಿ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಡೆಸುವ ಅಧ್ಯಯನಕ್ಕೆ ಅನುಕೂಲವಾಗಿದೆ.  

    ಹಕ್ಕಿಗಳ ಅಧ್ಯಯನಕ್ಕೆ ಕಾಲಿನಲ್ಲಿ ಅಳವಡಿಸುವ ಕಾಲುಂಗುರದಂತಹ ಮೈಕ್ರೋಚಿಪ್‌, ಕುತ್ತಿಗೆಯಲ್ಲಿ ಅಳವಡಿಸುವ ಪಟ್ಟಿ ಮತ್ತು ಬೆನ್ನಮೇಲೆ ಅಳವಡಿಸುವ ಪುಟ್ಟ ಕ್ಯಾಮೆರಾ ಒಳಗೊಂಡ ಉಪಕರಣಗಳು ಅಭಿವೃದ್ಧಿಗೊಂಡಿವೆ. ಉಪಗ್ರಹಗಳ ಮೂಲಕ ಹಕ್ಕಿಯ ಚಲನವಲನಗಳ ಮಾಹಿತಿ ಪ್ರತಿಕ್ಷಣ ಸಿಗುವಂತಹ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಅಧುನಿಕ ಕಂಪ್ಯೂಟರ್‌ಗಳನ್ನು ಬಳಸಿ ಹಕ್ಕಿಯ ವಲಸೆಯನ್ನು ಅಭ್ಯಸಿಸಲಾಗುತ್ತಿದೆ. ಭಾರತದಲ್ಲಿ ಉಪಗ್ರಹ ಆಧಾರಿತ ರೇಡಿಯೋ ಟೆಲಿಮೆಟ್ರಿ ವಿಧಾನವನ್ನು ಉಪಯೋಗಿಸಿ ನಡೆಸುವ ಅಧ್ಯಯನ ಬಹಳ ಕಡಿಮೆ. 

    ವಲಸೆ ಬರುವ ಹಕ್ಕಿಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು? 

    ಹವಾಮಾನ ವೈಪರೀತ್ಯ (Climate Change), ಭೂ ತಾಪಮಾನ ಏರಿಕೆ. ಮನುಷ್ಯರನ್ನೊಳಗೊಂಡಂತೆ ಬೇಟೆಗಾರ ಪ್ರಾಣಿಗಳು, ಆವಾಸ ಸ್ಥಾನಗಳ ಕೊರತೆ, ಆಹಾರದ ಕೊರತೆ, ಕೃಷಿಭೂಮಿ ಮತ್ತು ಕಾಡನ್ನು ನಾಶ ಮಾಡಿ ನಗರೀಕರಣ, ಕೈಗಾರಿಕೀಕರಣ, ವಲಸೆ ಸಮಯದಲ್ಲಿ ಕೆರೆಗಳಲ್ಲಿ ಮೀನುಗಾರಿಕೆಯಿಂದ ಆಗುವ ತೊಂದರೆಗಳಿಂದ ವಲಸೆ ಬರುವ ಹಕ್ಕಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. 

    ಸಾಮಾನ್ಯವಾಗಿ 80ಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳು ಅಕ್ಟೋಬರ್ ವೇಳೆಗೆ  ದೆಹಲಿ ಎನ್‌ಸಿಆರ್ ಪ್ರದೇಶದ ಜೌಗು ಪ್ರದೇಶಗಳಿಗೆ ಈ ಪ್ರದೇಶಕ್ಕೆ ಆಗಮಿಸುತ್ತವೆ. ಸುಮಾರು 40 ಜಾತಿಯ ವಲಸಿಗ ಹಕ್ಕಿಗಳು ಈ ಪ್ರದೇಶದಲ್ಲಿ ತಂಗುತ್ತವೆ. ಆದರೆ ವಾತಾವರಣದ ಬದಲಾವಣೆಯಿಂದ ವಲಸೆ ಹಕ್ಕಿಗಳು ಬರುವುದು ವಿಳಂಬವಾಗುತ್ತಿದೆ. ನವೆಂಬರ್‌ನಲ್ಲೂ ಸಹ ಈ ಜಾಗ ಸಾಕಷ್ಟು ಬೆಚ್ಚಗಿರುತ್ತದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದು ವಲಸೆ ಹಕ್ಕಿಗಳ ಮೇಲೆ ಪ್ರಭಾವ ಬೀರಿದೆ.

    ಕರ್ನಾಟಕದ ವಲಸೆ ಹಕ್ಕಿಗಳ ತಾಣ

    ರಂಗನತಿಟ್ಟು, ಗುಡವಿ, ಅಂಕಸಮುದ್ರ ಪಕ್ಷಿ ಧಾಮಗಳು, ಹಗರಿಬೊಮ್ಮನ ಹಳ್ಳಿಯ ತುಂಗಭದ್ರಾ, ಕಬನಿ, ಅಲಮಟ್ಟಿ ಹಿನ್ನೀರು ಪ್ರದೇಶಗಳು, ಮಂಗಳೂರು, ಉಡುಪಿ, ಮಲ್ಪೆ, ಕಾರವಾರ ಸಮುದ್ರ ತೀರಗಳು ಅಲ್ಲದೇ ಮೈಸೂರು, ದಾವಣಗೆರೆ, ತುಮಕೂರು, ಬೆಂಗಳೂರಿನ ಕೆರೆಗಳಲ್ಲಿ ವಲಸೆ ಹಕ್ಕಿಗಳು ಹೆಚ್ಚಾಗಿ ಕಂಡುಬರುತ್ತವೆ.

     

    ಕರ್ನಾಟಕದಲ್ಲಿ ದಾಖಲಾಗಿರುವ ವಲಸೆ ಹಕ್ಕಿಗಳೆಂದರೆ ಮಂಗೋಲಿಯಾದ ಪಟ್ಟೆ ಹೆಬ್ಬಾತು, ಯೂರೋಪಿನ ಉಲಿಯಕ್ಕಿಗಳು, ಕಂದು ಬಾತು. ನಾಮದ ಬಾತು. ಬಿಳಿಹುಬ್ಬಿನ ಬಾತು, ಚಲುಕ ಬಾತು, ವಿವಿಧ ಬಗೆಯ ಗೊರವಗಳು, ರಷ್ಯಾದ ಉಲ್ಲಂಕಿಗಳು, ಸೈಬೀರಿಯಾದ ಕಲ್ಲುಚಟಕ ಹಕ್ಕಿ, ಉತ್ತರ ಭಾರತದ ನವರಂಗ, ವಿವಿಧ ನೊಣಹಿಡುಕಗಳು, ಹೆಜ್ಜಾರ್ಲೆ ಮುಂತಾದ ಹಕ್ಕಿಗಳು ಕಂಡು ಬರುತ್ತವೆ.

    ವಲಸೆ ಹಕ್ಕಿಗಳಿಗೆ ದಿಕ್ಕು, ಸ್ಥಳ ಗುರುತಿಸೋಕೆ ಇದೆ ಸೂಪರ್‌ ಪವರ್‌!

    ಹಕ್ಕಿಗಳು ನಕ್ಷತ್ರಗಳು ಕಾಣುವ ದಿಕ್ಕು ಮತ್ತು ಸಮಯವನ್ನು ಅಂದಾಜಿಸಿ ಹಕ್ಕಿಗಳು ಸಂಚರಿಸುತ್ತವೆ. ಕೆರೆ, ನದಿ, ಗುಡ್ಡ, ಬೆಟ್ಟ, ಸಮುದ್ರ ಮುಂತಾದವುಗಳನ್ನು ನೋಡಿ ತಮ್ಮ ಕಣ್ಣಿನ ಅಥವಾ ಮೂಗಿನ ಬುಡದಲ್ಲಿ ವಿಶೇಷವಾದ ಮ್ಯಾಗ್ನಟೈಟ್ ಎಂಬ ಕಬ್ಬಿಣದ ಅಂಶವಿರುವ ಪ್ರೊಟೀನ್ ಅನ್ನು ದಿಕ್ಕೂಚಿಯಂತೆ ಬಳಸಿ ಭೂಮಿಯ ಆಯಸ್ಕಾಂತ ಶಕ್ತಿಯನ್ನು ಗುರುತಿಸಿ ತಾವು ಕ್ರಮಿಸುವ ದಿಕ್ಕನ್ನು ನಿರ್ಧರಿಸುತ್ತವೆ. 

    ಒಡಿಶಾದ ಪ್ರಮುಖ ಪಕ್ಷಿಧಾಮಗಳಿಗೆ ಬಂದ ವಲಸೆ ಹಕ್ಕಿಗಳ ಅಂಕಿ ಅಂಶ

    ಚಿಲಿಕಾ

    2024 – 189 ಜಾತಿಗಳ 11,37,759

    2023 – 1,844 ಜಾತಿಗಳು 11,31,929

    2021-22 – 107 ಜಾತಿಗಳ 10.74 ಲಕ್ಷ

    2020-21 – 111 ಜಾತಿಗಳ 12.04 ಲಕ್ಷ

    2019-20 – 109 ಜಾತಿಗಳ 10.71 ಲಕ್ಷ

    2018-19 – 105 ಜಾತಿಗಳ 10.21 ಲಕ್ಷ

    2017-18 – 95 ಜಾತಿಗಳ 8.68 ಲಕ್ಷ

    2016-17 – 100 ಜಾತಿಗಳ 9.24 ಲಕ್ಷ

    ಭೀತರ್ಕನಿಕಾ 

    2024 – 13,0123 ಪಕ್ಷಿಗಳು

    2023 – 123867

    2021-22 – 144 ಜಾತಿಗಳ 1.38 ಲಕ್ಷ

    2020-21 – 121 ಜಾತಿಗಳಲ್ಲಿ 1.36 ಲಕ್ಷ

    2019-20 – 105 ಜಾತಿಗಳಲ್ಲಿ 1.18 ಲಕ್ಷ

    ಹಿರಾಕುಡ್‌

    2021-22 – 104 ಜಾತಿಗಳ 2.08 ಲಕ್ಷ

    2020-21 – 41 ಜಾತಿಗಳ 1.03 ಲಕ್ಷ

    2019-20 – 93 ಜಾತಿಗಳ 0.98 ಲಕ್ಷ

  • ದೆಹಲಿಯಲ್ಲಿ ಪಟಾಕಿ ಬ್ಯಾನ್‌ ಯಾಕೆ?

    ದೆಹಲಿಯಲ್ಲಿ ಪಟಾಕಿ ಬ್ಯಾನ್‌ ಯಾಕೆ?

    ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಮನೆಮನೆಯಲ್ಲಿಯೂ ಪಟಾಕಿಯದ್ದೇ ಸದ್ದು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ದೀಪಾವಳಿಗೆ ಪಟಾಕಿ (Fire Crackers) ಇನ್ನಷ್ಟು ಮೆರುಗು ನೀಡುತ್ತದೆ. ಅದರಲ್ಲೂ ಮಕ್ಕಳು ಪಟಾಕಿ ಸಿಡಿಸುವುದನ್ನು ನೋಡಲು ಬಲು ಇಷ್ಟಪಡುತ್ತಾರೆ. ಆದರೆ ಈ ಬಾರಿ ದೀಪಾವಳಿ ಹೊಸ್ತಿಲಲ್ಲಿ ದೆಹಲಿ (New Delhi) ಸರ್ಕಾರ ಜನವರಿ 1ರವರೆಗೂ ಪಟಾಕಿ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಚಳಿಗಾಲದಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ದೆಹಲಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

    ದೆಹಲಿಯಲ್ಲಿ ಪಟಾಕಿ ನಿಷೇಧ ಏಕೆ?
    ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುವ ಅಪಾಯವಿದೆ. ಈ ಸಮಯದಲ್ಲಿ ಪಟಾಕಿಗಳನ್ನು ಸುಡುವುದು ಮಾಲಿನ್ಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಆದ್ದರಿಂದ ಕಳೆದ ವರ್ಷದಂತೆ ಈ ವರ್ಷವೂ ಪಟಾಕಿ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಪಟಾಕಿಗಳ ತಯಾರಿಸುವಿಕೆ, ಸಂಗ್ರಹ ಮತ್ತು ಮಾರಾಟದ ಮೇಲಿನ ನಿಷೇಧ 2025ರ ಜನವರಿ 1ರವರೆಗೆ ಜಾರಿಯಲ್ಲಿರುತ್ತದೆ ಎಂದು ಗೋಪಾಲ್‌ ರೈ ಮಾಹಿತಿ ನೀಡಿದ್ದಾರೆ.

    FIRE CRACKERS

    ಆನ್‌ಲೈನ್‌ನಲ್ಲಿಯೂ ಪಟಾಕಿ ಮಾರಾಟ ಹಾಗೂ ಖರೀದಿಸುವಿಕೆಗೆ ನಿಷೇಧ ಹೇರಲಾಗಿದೆ. ಇದರಿಂದ ಜನರನ್ನು ಮಾಲಿನ್ಯದಿಂದ ರಕ್ಷಿಸಬಹುದು. ದೀಪ ಬೆಳಗುವ ಮೂಲಕ ಹಾಗೂ ಸಿಹಿ ಹಂಚುವ ಮೂಲಕ ದೀಪಾವಳಿಯನ್ನು ಹಬ್ಬಗಳನ್ನು ಆಚರಿಸುವಂತೆ ಗೋಪಾಲ್‌ ರೈ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಪಟಾಕಿಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲುವಾಗಿ ದೆಹಲಿ ವಾಯುಮಾಲಿನ್ಯ ಸಮಿತಿ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ 21ಪ್ರಮುಖ ಅಂಶಗಳನ್ನು ಒಳಗೊಂಡ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಲಾಗುವುದು ಎಂದು ಗೋಪಾಲ್‌ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ 2017ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಪಟಾಕಿಯನ್ನು ನಿಷೇಧಿಸಲಾಯಿತು. ಇದಾದ ಬಳಿಕ ದೆಹಲಿ ಸರ್ಕಾರವು 2020ರಿಂದ ಪ್ರತಿ ಚಳಿಗಾಲದಲ್ಲಿ ಎಲ್ಲಾ ಪಟಾಕಿಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟದ ಮೇಲೆ ನಿಷೇಧ ಹೇರಿದೆ. ಅಲ್ಲದೇ ಕೇವಲ ಹಸಿರು ಪಟಾಕಿಯನ್ನು ಬಳಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

    ಪಟಾಕಿಯಿಂದ ವಾಯುಮಾಲಿನ್ಯ ಹೇಗೆ ಉಂಟಾಗುತ್ತದೆ?
    ನಿಕ್ಕಲ್‌, ಕಾಪರ್, ಲೆಡ್‌ನಂತಹ ಹೆಚ್ಚಿನ ರಾಸಾಯನಿಕ ಮಿಶ್ರಿತ ಪಟಾಕಿ ಸಿಡಿಸಿದರೆ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಪರಿಸರ ಅಧಿಕಾರಿಗಳು ಹೇಳುತ್ತಾರೆ. ಪಟಾಕಿ ಉರಿದು ಸ್ಫೋಟಗೊಳ್ಳಲು ಹಾಗೂ ಪ್ರಕಾಶಮಾನವಾಗಿ ಕಾಣಲು ಅಪಾಯಕಾರಿ ರಾಸಯನಿಕಗಳನ್ನು ಬಳಸುತ್ತಾರೆ. ಆಕ್ಸಿಡೈಸರ್‌ಗಳು, ಇಂಧನ, ಬಣ್ಣ ಮತ್ತು ಬೈಂಡರ್‌ಗಳ ಮಿಶ್ರಣದಿಂದ ಪಟಾಕಿಗಳು ಕಲರ್‌ಫುಲ್‌ ಆಗಿ ಕಾಣಿಸುವುದಲ್ಲದೇ ನೋಡಲು ಆಕರ್ಷಣೀಯವಾಗಿರುತ್ತದೆ. ಪಟಾಕಿಗಳನ್ನು ಸಿಡಿಸಿದಾಗ, ಅವು ವಿಷಕಾರಿ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತವೆ. ಅದು ಉಸಿರಾಟ, ಆರೋಗ್ಯ ಮತ್ತು ಪರಿಸರಕ್ಕೆ ಹಾನಿ ಮಾಡುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೇಳಿದೆ.

    ಆರೋಗ್ಯದ ಮೇಲೆ ಪರಿಣಾಮ ಹೇಗೆ?
    ಪಟಾಕಿಗಳು ವಿಷಕಾರಿ ಅನಿಲಗಳನ್ನು ಹೊರಸೂಸುತ್ತವೆ. ಸಲ್ಫರ್‌ ಡೈಆಕ್ಸೈಡ್‌ , ಕಾರ್ಬನ್‌ ಡೈಆಕ್ಸೈಡ್‌, ಕಾರ್ಬನ್‌ ಮೋನಾಕ್ಸೈಡ್‌ ಮತ್ತು ಪರ್ಟಿಕ್ಯುಲೆಟ್‌ ಮ್ಯಾಟರ್‌ ಜೊತೆಗೆ ಹಲವಾರು ರಾಸಾಯನಿಕಗಳು ಗಾಳಿಯ ಗುಣಮಟ್ಟದಲ್ಲಿ ಹಾನಿಕಾರಕ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.

    ಪಟಾಕಿಯಲ್ಲಿ ಸೀಸವನ್ನು ಬಳಸಲಾಗುತ್ತದೆ. ಇದು ನಮ್ಮ ಮೆದುಳು ಮತ್ತು ನರಗಳ ಮೇಲೆ ಹೆಚ್ಚು ಪರಿಣಾಮ ಬೀರುವ ವಿಷಕಾರಿ ಹೊಗೆಯನ್ನು ಹೊರಸೂಸುತ್ತದೆ. ಮಕ್ಕಳು ಹೆಚ್ಚು ಪಟಾಕಿ ಹಚ್ಚುವುದರಿಂದ ಬೆಳವಣಿಗೆಯಲ್ಲಿ ವಿಳಂಬ ಹಾಗೂ ಕಲಿಕೆಯಲ್ಲಿ ಅಸಮರ್ಥತೆಯನ್ನು ಅನುಭವಿಸಬಹುದು ಎಂದು ಡಾ. ಸಮೀರ್‌ ಗುಪ್ತಾ ಹೇಳಿದ್ದಾರೆ.

    ಮೆಗ್ನೇಸಿಯಂ ಒಳಗೊಂಡ ಪಟಾಕಿಯ ಹೊಗೆಯನ್ನು ಉಸಿರಾಡುವುದರಿಂದ ಮೆಟಲ್‌ ಫ್ಯೂಮ್‌ ಎಂಬ ಜ್ವರ ಕಾಣಿಸಿಕೊಳ್ಳಬಹುದು. ಇದು ಜನರಲ್ಲಿ ಶೀತ ಮತ್ತು ಸ್ನಾಯು ದೌರ್ಬಲ್ಯವನ್ನು ಉಂಟುಮಾಡುತ್ತದೆ.

    ಶಬ್ದ ಮಾಲಿನ್ಯ ಶಬ್ದ ತುಂಬಾ ಜನರಲ್ಲಿ ಆತಂಕವನ್ನುಂಟು ಮಾಡುತ್ತದೆ ಅದರಿಂದ ಪ್ಯಾನಿಕ್ ಅಟ್ಯಾಕ್ಸ್​, ವಯಸ್ಸಾದವರಿಗೆ ಹೃದಯ ಸಂಬಂಧಿತ ತೊಂದರೆಗಳು, ಕೆಲವು ಬಾರಿ ಹೃದಯಾಘಾತವಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಜೊತೆಗೆ ಪಟಾಕಿ ಹೊಡೆದಾಗ ರೇಡಿಯೋ ಆಕ್ಟೀವ್ ಸಬ್​ಸ್ಟೆನ್ಸ್ ಬಿಡುಗಡೆಯಾಗಿರುತ್ತದೆ. ಅದು ದೀರ್ಘಕಾಲದ ಕ್ಯಾನ್ಸರ್ ಅಪಾಯವನ್ನು ಉಂಟು ಮಾಡಬಹುದು, ಮಕ್ಕಳಲ್ಲಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಬೆಂಕಿಯ ಅಪಾಯಗಳು ಹೆಚ್ಚಿನ ಪ್ರಮಾಣದಲ್ಲಿ ಆಗುವ ಸಾಧ್ಯತೆ ಇರುತ್ತದೆ, ಏಕಾಏಕಿ ಬೆಂಕಿ ಹೊತ್ತಿಕೊಳ್ಳಬಹುದು. ಇದು ಸುಟ್ಟಗಾಯಗಳು, ಕಣ್ಣು ಹಾಗೂ ಇತರೆ ನಿಮ್ಮ ಅಂಗಗಳಿಗೆ ಹಾನಿಯುಂಟು ಮಾಡಬಹುದು.

    ಬಣ್ಣ ಬರಲು ಹಾಕುವ ಲವಣಾಂಶಗಳು, ಜಿಂಕ್, ಮೆಗ್ನೀಸಿಯಂ ಫ್ಯೂಮ್ ಫೀವರ್ ಉಂಟು ಮಾಡುತ್ತದೆ ಅಂದರೆ ಹೊಗೆಯಿಂದ ಜ್ವರ ಬರುವುದುಂಟು, ಕ್ಯಾಡ್ಮಿಯಂ ದೇಹದಲ್ಲಿ ಅನೀಮಿಯಾ ಅಂದರೆ ರಕ್ತಹೀನತೆಯನ್ನು ಸೃಷ್ಟಿಸುತ್ತದೆ. ಗರ್ಭಿಣಿಯರಿಗೆ, ಪಟಾಕಿ ಮಾಲಿನ್ಯವು ಹೆಚ್ಚು ಅಪಾಯಗಳನ್ನು ಉಂಟುಮಾಡುತ್ತದೆ. ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿ, ಪಟಾಕಿಗಳಿಂದ ಉತ್ಪತ್ತಿಯಾಗುವ ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳುವುದು, ತಾಯಿಗೆ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು.

    ದೀಪಾವಳಿಯ ಸಮಯದಲ್ಲಿ ಜೋರಾಗಿ ಸಿಡಿಯುವ ಪಟಾಕಿಗಳು ಸುಮಾರು 85 ಡೆಸಿಬಲ್‌ಗಿಂತಲೂ ಹೆಚ್ಚಿನ ಶಬ್ದವನ್ನು ಉಂಟುಮಾಡುತ್ತವೆ. ಇದು ಕಿವಿಯ ತಮಟೆಗಳನ್ನು ಹಾನಿಗೊಳಿಸುತ್ತದೆ. ಕೇವಲ 15 ನಿಮಿಷಗಳ ಕಾಲ ಸುಮಾರು 100 ಡಿಬಿ ಧ್ವನಿಯ ತೀವ್ರತೆಗೆ ಒಡ್ಡಿಕೊಳ್ಳುವುದು ತಾತ್ಕಾಲಿಕ ಶ್ರವಣ ನಷ್ಟಕ್ಕೆ ಕಾರಣವಾಗಬಹುದು ಮತ್ತು ದೀರ್ಘಕಾಲ ಈ ಶಬ್ದಕ್ಕೆ ಒಡ್ಡಿಕೊಳ್ಳುವುದರಿಂದ ಕಿವಿ ಕೇಳಿಸದಯೇ ಇರಬಹುದು.

    ಶಬ್ದ ಮಾಲಿನ್ಯವು ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು. ಹಠಾತ್ ದೊಡ್ಡ ಶಬ್ದಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಹೃದಯ ಬಡಿತವನ್ನು ಉಲ್ಬಣಗೊಳಿಸಬಹುದು. ಇದು ಹೃದಯಾಘಾತದಿಂದ ಬಳಲುತ್ತಿರುವವರಿಗೆ ಹೆಚ್ಚಿನ ತೊಂದರೆ ಉಂಟುಮಾಡಬಹುದು.

    ವಿಶೇಷವಾಗಿ ಅಸ್ತಮಾ ಅಥವಾ ಇತರ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ಜನರು ಪಟಾಕಿಗಳನ್ನು ಹೊಡೆಯಬಾರದು. ವಾಯು ಮಾಲಿನ್ಯ ಇರುವ ಸ್ಥಳದಲ್ಲಿ ಉಸಿರಾಡುವುದರಿಂದ ಅವರ ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಐಸಿಎಂಆರ್​ ಅಧ್ಯಯನದ ಪ್ರಕಾರ, 2019ರಲ್ಲಿ 1.7 ಮಿಲಿಯನ್ ಸಾವುಗಳು ಅಥವಾ ಭಾರತದಲ್ಲಿನ ಒಟ್ಟು ಸಾವುಗಳಲ್ಲಿ ಶೇ. 18ರಷ್ಟು ಸಾವುಗಳು ವಾಯು ಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ವಾಯು ಮಾಲಿನ್ಯದಿಂದ ರೋಗಿಗಳು ಕಣ್ಣು, ಮೂಗು, ಗಂಟಲು ಮತ್ತು ಚರ್ಮದ ಕಿರಿಕಿರಿ, ಕೆಮ್ಮು, ಉಸಿರಾಟದ ತೊಂದರೆ, ಉಬ್ಬಸ, ಎದೆ ಉರಿಯಂತಹ ಕೆಲವು ಲಕ್ಷಣಗಳನ್ನು ಹೊಂದಬಹುದು. ಅಸ್ವಸ್ಥತೆ, ಎದೆನೋವು, ತಲೆನೋವು, ತಲೆತಿರುಗುವಿಕೆ, ಕೈಕಾಲು ದೌರ್ಬಲ್ಯ ಇತ್ಯಾದಿಗಳನ್ನು ಕೂಡ ಅನುಭವಿಸಬಹುದು.

  • ಹೊರ ರಾಜ್ಯದ ನೋಂದಣಿ ಕ್ಯಾಬ್‌ಗಳಿಗಿಲ್ಲ ದೆಹಲಿ ಪ್ರವೇಶ

    ಹೊರ ರಾಜ್ಯದ ನೋಂದಣಿ ಕ್ಯಾಬ್‌ಗಳಿಗಿಲ್ಲ ದೆಹಲಿ ಪ್ರವೇಶ

    ನವದೆಹಲಿ: ಇತರ ರಾಜ್ಯಗಳಲ್ಲಿ ನೋಂದಾಯಿಸಲಾದ (Registration) ಅಪ್ಲಿಕೇಶನ್ ಆಧಾರಿತ ಕ್ಯಾಬ್‌ಗಳ (Cab) ಪ್ರವೇಶವನ್ನು ನಿಷೇಧಿಸುವುದಾಗಿ ಬುಧವಾರ ದೆಹಲಿ ಸರ್ಕಾರ ಘೋಷಿಸಿದೆ. ದೆಹಲಿ ಸಾರಿಗೆ ಇಲಾಖೆಯಿಂದ ನಿಷೇಧವು ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಕುರಿತು ಪ್ರತ್ಯೇಕ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಹೇಳಿದೆ.

    ಮಾಲಿನ್ಯಕ್ಕೆ (Pollution) ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಈ ಆದೇಶ ಹೊರಡಿಸಿದೆ. ದೆಹಲಿ ಸರ್ಕಾರದ ಆದೇಶದ ಪ್ರಕಾರ, ದೆಹಲಿಯ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕ್ಯಾಬ್‌ಗಳನ್ನು ಮಾತ್ರ ನಗರದೊಳಗೆ ಓಡಿಸಲು ಅನುಮತಿಸಲಾಗುವುದು. ಇದನ್ನೂ ಓದಿ: ಮಹಿಳೆಯರ ಕುರಿತು ವಿವಾದಿತ ಹೇಳಿಕೆ – ಕ್ಷಮೆ ಕೇಳಿದ ನಿತೀಶ್ ಕುಮಾರ್

    ಕಳೆದ ಐದು ದಿನಗಳ ಬಳಿಕ ವಾಯು ಮಾಲಿನ್ಯವು ತೀವ್ರ ಕಳಪೆಯಿಂದ ಕಳಪೆ ಗುಣಮಟ್ಟಕ್ಕೆ ಮರಳಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಂಕಿಅಂಶಗಳ ಪ್ರಕಾರ, ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (IQA) ಬೆಳಗ್ಗೆ 7 ಗಂಟೆಗೆ 421ಕ್ಕೆ ದಾಖಲಾಗಿದೆ. ಇದನ್ನೂ ಓದಿ: ಕೆಲಸವಿಲ್ಲದ ನಿರುದ್ಯೋಗಿ ನಾಯಕರಿಂದ ಚಪಲಕ್ಕೆ ಆಪರೇಷನ್ ಕಮಲದ ಪ್ರಯತ್ನ: ಡಿಕೆಶಿ ವಾಗ್ದಾಳಿ

    ಅಪಾಯಕಾರಿ ಗಾಳಿಯ ಗುಣಮಟ್ಟದ ದೃಷ್ಟಿಯಿಂದ ಜಿಆರ್‌ಎಪಿ ಹಂತದ ಐವಿ ಅಡಿಯಲ್ಲಿ ನಿರ್ಬಂಧಗಳನ್ನು ಹೊಂದಿದ್ದರೂ ಮಾಲಿನ್ಯಕಾರಕ ವಾಹನಗಳು ಮುಕ್ತವಾಗಿ ನಗರವನ್ನು ಪ್ರವೇಶಿಸುತ್ತಿವೆ ಮತ್ತು ಗಡಿಗಳಲ್ಲಿ ಸರಿಯಾದ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಇದನ್ನೂ ಓದಿ: ಬೆಂಗಳೂರು ಕುಡಿಯುವ ನೀರಿಗೆ ಕಾವೇರಿಯಿಂದ 24 ಟಿಎಂಸಿ ಬಳಕೆ: ಡಿಕೆಶಿ

    ದೆಹಲಿಯಲ್ಲಿನ ಮಾಲಿನ್ಯ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್ ಬಹಳ ನಿಕಟವಾಗಿ ಗಮನಿಸುತ್ತಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪರಿಸರ ಮತ್ತು ಸಾರಿಗೆ ಆಯುಕ್ತರಿಗೆ ನಿರ್ದೇಶನಗಳನ್ನು ನೀಡಿದೆ. ಇದನ್ನೂ ಓದಿ: ಅಮಿತ್‌ ಶಾ ರಥಕ್ಕೆ ಕರೆಂಟ್‌ ಶಾಕ್‌ – ಅಪಾಯದಿಂದ ಪಾರು

  • ತುಂಗಾನದಿಗೆ ಅಲ್ಯುಮಿನಿಯಂ ಅಂಶ ಸೇರ್ಪಡೆ – ಪ್ರಯೋಗಾಲಯದಿಂದ ನೀರಿನ ವರದಿ ಬಹಿರಂಗ

    ತುಂಗಾನದಿಗೆ ಅಲ್ಯುಮಿನಿಯಂ ಅಂಶ ಸೇರ್ಪಡೆ – ಪ್ರಯೋಗಾಲಯದಿಂದ ನೀರಿನ ವರದಿ ಬಹಿರಂಗ

    – ಆರೋಗ್ಯಕ್ಕೆ ತುಂಗಾಪಾನ ಅಪಾಯ?

    ಶಿವಮೊಗ್ಗ: ಮಲೆನಾಡಿನ ಜೀವನದಿ ತುಂಗಾನದಿ. ಗಂಗಾ ಸ್ನಾನ – ತುಂಗಾ ಪಾನ ಎಂಬುದು ಪ್ರಸಿದ್ಧ ನಾಣ್ಣುಡಿ. ಆದರೆ ಇನ್ನು ಮುಂದೆ ತುಂಗೆಯ ನೀರನ್ನು ಕುಡಿಯುವ ಮೊದಲು ಯೋಚಿಸಬೇಕಿದೆ. ಇದಕ್ಕೆ ಕಾರಣ ಪ್ರಯೋಗಾಲಯದ ವರದಿ.

    ಮಲೆನಾಡಿನ ಜಿಲ್ಲೆ ಶಿವಮೊಗ್ಗ (Shivamogga) ಸೇರಿದಂತೆ ದಾವಣಗೆರೆ ಜಿಲ್ಲೆಯ ಹಲವು ಗ್ರಾಮಗಳಿಗೆ ಕುಡಿಯಲು ತುಂಗಾ ನದಿ (Tunga River) ನೀರೆ ಆಸರೆ. ಆದರೆ ಇತ್ತೀಚಿಗೆ ತುಂಗಾನದಿ ನೀರು ಮಲಿನವಾಗುತ್ತಿದೆ (Water Pollution) ಎಂಬ ಅಂಶ ಪ್ರಯೋಗಾಲಯದ ವರದಿಯಿಂದ ಬಹಿರಂಗಗೊಂಡಿದೆ. ಇದು ಮಲೆನಾಡಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.

    ತುಂಗಾ ನದಿ ನೀರು ಗಾಜನೂರು ಜಲಾಶಯದಿಂದ ಮುಂದೆ ಹರಿಯುವಾಗ ಮಲಿನಗೊಳ್ಳುತ್ತಿದೆ. ಅದರಲ್ಲೂ ಜಿಲ್ಲಾ ಕೇಂದ್ರ ತಲುಪುತ್ತಿದ್ದಂತೆ ಮತ್ತಷ್ಟು ವಿಷಕಾರಕ ಅಂಶಗಳು ನೀರಿಗೆ ಸೇರುತ್ತಿದೆ. ತುಂಗಾನದಿ ನೀರಿನಲ್ಲಿ ಅಲ್ಯುಮಿನಿಯಂ ಅಂಶ ಹೆಚ್ಚಿರುವುದು ದೃಢಪಟ್ಟಿದೆ.

    ಗುಣಮಟ್ಟದ ನೀರಿನಲ್ಲಿ ಎಲ್ಲಾ ಖನಿಜಾಂಶಗಳು ನಿಗದಿತ ಪ್ರಮಾಣದಲ್ಲಿ ಇರಬೇಕು. ಆಗ ಮಾತ್ರ ಅದು ಕುಡಿಯಲು ಹಾಗೂ ಆರೋಗ್ಯಕ್ಕೆ ಪೂರಕವಾಗಿ ಇರುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಖನಿಜಾಂಶ ಹೆಚ್ಚಳವಾದರೂ ಆರೋಗ್ಯಕ್ಕೆ ಅಪಾಯಕಾರಿ. ಈಗ ತುಂಗೆಯ ಸ್ಥಿತಿಯು ಅಪಾಯಕಾರಿ ಹಂತ ತಲುಪಿದೆ.

    ಶಿವಮೊಗ್ಗದ ಕೆಲವು ಪರಿಸರ ಆಸಕ್ತರು ಸೇರಿಕೊಂಡು ನಿರ್ಮಲ ತುಂಗಾ ಅಭಿಯಾನ ಆರಂಭಿಸಿದ್ದರು. ಈ ತಂಡ ಜಲಾಶಯದ ಮಧ್ಯ ಭಾಗದಿಂದ ನದಿ ನೀರು ಹಾಗೂ ನೀರು ಶುದ್ಧೀಕರಣ ಘಟಕದಿಂದ ನಾಗರಿಕರಿಗೆ ಪೂರೈಕೆಯಾಗುವ ನೀರು ಎರಡನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಬೆಂಗಳೂರಿನ ಯುರೋಪಿನ್ಸ್ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಇದೀಗ ಪ್ರಯೋಗಾಲಯದಿಂದ ವರದಿ ಬಂದಿದ್ದು ತುಂಗಾ ನದಿಯಲ್ಲಿ ಅಲ್ಯುಮಿನಿಯಂ ಅಂಶ ಇರುವುದು ಪತ್ತೆಯಾಗಿದೆ.

    ಸಾಮಾನ್ಯವಾಗಿ ಕುಡಿಯುವ ಪ್ರತಿ ಲೀಟರ್ ನೀರಿನಲ್ಲಿ ಅಲ್ಯುಮಿನಿಯಂ ಪ್ರಮಾಣ 0.2 – 0.03 ಮಿಲಿ ಗ್ರಾಂ ಇರಬೇಕು. ಆದರೆ ತುಂಗಾ ನದಿಯ ನೀರಿನಲ್ಲಿ ಇದರ ಪ್ರಮಾಣ 0.205 ಮಿಲಿಗ್ರಾಂ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಇದು ನದಿ ನೀರಿನ ಮಲಿನಕ್ಕೆ ಉದಾಹರಣೆಯಾಗಿದೆ. ಇದನ್ನೂ ಓದಿ: ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರ – ವಿಧ್ವಂಸಕ ಕೃತ್ಯಕ್ಕೆ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಪ್ಲ್ಯಾನ್‌

    ಅಲ್ಯುಮಿನಿಯಂ ಪ್ರಮಾಣ ಹೆಚ್ಚಿರುವ ನೀರು ಸೇವಿಸಿದರೆ ಕ್ರಮೇಣ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ನರಸಂಬಂಧಿ ಕಾಯಿಲೆಗಳು ಭಾಧಿಸುವ ಅಪಾಯ ಇರುತ್ತದೆ. ಇಂತಹ ನೀರು ಸೇವಿಸಿದರೆ ಅಡ್ಡ ಪರಿಣಾಮಗಳು ಇವೆ ಎಂಬುದು ಆತಂಕದ ಸಂಗತಿಯಾಗಿದೆ.

    ತುಂಗಾ ನದಿ ನೀರಿನಲ್ಲಿ ಅಲ್ಯುಮಿನಿಯಂ ಅಂಶ ಮಾತ್ರ ಹೆಚ್ಚಳವಾಗಿರದೇ, ಈ ನೀರಿನಲ್ಲಿ ಇತರೆ ಲೋಹದ ಅಂಶಗಳು ಇವೆ. ಆದರೆ ಅವುಗಳು ನಿಗದಿತ ಪ್ರಮಾಣ ಮೀರಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಬೇರಿಯಂ, ಬೋರಾನ್, ಕ್ಲೋರೈಡ್, ಮ್ಯಾಗ್ನೇಶಿಯಂ, ಕ್ಯಾಡ್ಮಿಯಂ, ಪಾದರಸ ಇರುವುದು ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿದೆ.

    ಒಟ್ಟಿನಲ್ಲಿ ತುಂಗಾನದಿಯಲ್ಲಿ ಅಲ್ಯುಮಿನಿಯಂ ಅಂಶ ಸೇರುತ್ತಿರುವುದರ ಜೊತೆಗೆ ನಾಗರಿಕರು ಸಹ ಕಸ ಹಾಗೂ ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಇದು ಸಹ ನದಿ ಮಲಿನವಾಗಲು ಕಾರಣವಾಗುತ್ತಿದೆ. ಇನ್ನಾದರೂ ನಾಗರಿಕರು ಎಚ್ಚೆತ್ತುಕೊಂಡು ನದಿಗೆ ಕಸ ಎಸೆಯದಂತೆ, ತ್ಯಾಜ್ಯ ಸುರಿಯದಂತೆ ಕ್ರಮ ವಹಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯವಂತು ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: ವಂದೇ ಭಾರತ್‌ ಸೆಮಿಸ್ಪೀಡ್‌ ರೈಲಿನಲ್ಲಿ ಓಡಾಡ್ಬೇಕು ಎಂಬ ಉತ್ತರ ಕರ್ನಾಟಕ ಜನರ ಕನಸು ಶೀಘ್ರವೇ ನನಸು!

  • ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಇಲ್ಲದ್ದಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ದಂಡ

    ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಇಲ್ಲದ್ದಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ದಂಡ

    ತಿರುವನಂತಪುರಂ: ಕೇರಳ ಸಂಚಾರಿ ಪೊಲೀಸರು(Kerala Traffic Police) ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕರಿಗೆ ಮಾನ್ಯವಾದ ಮಾಲಿನ್ಯ ನಿಯಂತ್ರಣ (Pollution Under Control) ಪ್ರಮಾಣ ಪತ್ರವನ್ನು ಹೊಂದಿಲ್ಲದ ಕಾರಣಕ್ಕೆ ದಂಡ ಹಾಕಿ ಸುದ್ದಿಯಾಗಿದ್ದಾರೆ.

    ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಚೇರಿಯಲ್ಲಿ ಸೆಪ್ಟೆಂಬರ್ 6ರಂದು ಏಥರ್ 450X (Ather 450X) ಸ್ಕೂಟರ್‌ ಮಾಲೀಕರಿಗೆ 250 ರೂ. ದಂಡ ವಿಧಿಸಿದ್ದಾರೆ. ಪೊಲೀಸರು ನೀಡಿದ ಚಲನ್‌ ಪ್ರತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 213 (5) (ಇ) ಅಡಿ ದಂಡ ವಿಧಿಸಲಾಗಿದೆ. ನೆಟ್ಟಿಗರು ಈಗ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ(Nitin Gadkari) ಅವರಿಗೆ ಟ್ಯಾಗ್‌ ಮಾಡಿ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬೇಕೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಳ ಉಡುಪು ಖರೀದಿಸಲು ದೆಹಲಿಗೆ ಹೋಗಿದ್ದೆ- ಜಾರ್ಖಂಡ್ ಸಿಎಂ ಸಹೋದರನ ವಿವಾದಾತ್ಮಕ ಹೇಳಿಕೆ

    ಪೊಲೀಸರು ಇಂತಹ ವಿಚಿತ್ರ ಚಲನ್ ನೀಡುತ್ತಿರುವುದು ಇದೇ ಮೊದಲಲ್ಲ. ಜುಲೈನಲ್ಲಿ ಕೇರಳದ ವ್ಯಕ್ತಿಯೊಬ್ಬರು ಸಾಕಷ್ಟು ಇಂಧನವಿಲ್ಲದೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಚಲಾಯಿಸಿದ್ದಕ್ಕಾಗಿ ದಂಡವನ್ನು ಹಾಕಿದ್ದರು.

    ಏಥರ್ ಸ್ಕೂಟರ್ 5.4 kW ಬ್ರಶ್‌ಲೆಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 2.4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ. ಸ್ಕೂಟರ್ 3.9 ಸೆಕೆಂಡುಗಳಲ್ಲಿ ಝೀರೋದಿಂದ 40 ಕಿಮೀ/ಗಂಟೆಗೆ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 80 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿರುವ ಸ್ಕೂಟರ್‌ ಒಂದು ಬಾರಿ ಚಾರ್ಜ್‌ ಮಾಡಿದರೆ 75 ಕಿ.ಮೀವರೆಗೆ ಸಂಚರಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಲಿನ್ಯ ನಿಯಂತ್ರಣಕ್ಕೆ  ಟಾಸ್ಕ್‌ಫೋರ್ಸ್‌- 17 ತಂಡ ರಚನೆ

    ಮಾಲಿನ್ಯ ನಿಯಂತ್ರಣಕ್ಕೆ  ಟಾಸ್ಕ್‌ಫೋರ್ಸ್‌- 17 ತಂಡ ರಚನೆ

    ನವದೆಹಲಿ: ಮಾಲಿನ್ಯ ನಿಯಂತ್ರಣಕ್ಕಾಗಿ 5 ಜನರಿರುವ ಟಾಸ್ಕ್ ಫೋರ್ಸ್ ಹಾಗೂ 40 ಜನರ ತಂಡದ 17 ಸ್ಕ್ವಾಡ್ ರಚನೆ ಮಾಡಲಾಗುವುದು ಎಂದು ದೆಹಲಿ ವಾಯುಗುಣ ಮಟ್ಟದ ನಿರ್ವಹಣಾ ಆಯೋಗ ನಿನ್ನೆ  ಮಾಹಿತಿ ನೀಡಿದೆ.

    ಮಾಲಿನ್ಯ ನಿಯಂತ್ರಣಕ್ಕೆ ಏನು ಮಾಡಬಹುದು ಎಂಬುದರ ಬಗ್ಗೆ 24 ಗಂಟೆಗಳಲ್ಲಿ ವರದಿ ನೀಡಿ ಎಂಬ ಸುಪ್ರೀಂಕೋರ್ಟ್ ಕಟು ಎಚ್ಚರಿಕೆ ಬೆನ್ನಲ್ಲೇ ಈ ಮಾಹಿತಿ ಸಲ್ಲಿಸಲಾಗಿದೆ.

    ಅದರನ್ವಯ ಮಾಲಿನ್ಯ ನಿಯಂತ್ರಣಕ್ಕಾಗಿ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಇದರ ಮೇಲ್ವಿಚಾರಣೆ ನೋಡಿಕೊಳ್ಳಲು ರಾಷ್ಟ್ರ ರಾಜಧಾನಿ ವಲಯಕ್ಕೆ ಸೇರುವ ರಾಜ್ಯಗಳಿಂದ 5 ಜನರಿರುವ ಟಾಸ್ಕ್‌ಫೋರ್ಸ್‌ ರಚನೆ ಮಾಡಲಾಗುವುದು. 40 ಮಂದಿ ಇರುವ 17 ಪ್ಲೆಯಿಂಗ್ ಸ್ಕ್ವಾಡ್‍ಗಳು ಪ್ರತಿನಿತ್ಯ   ಮಾಹಿತಿ ನೀಡಲಿವೆ. ಈ ಮಾಹಿತಿಯ ಆಧಾರದಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಮರು ಪರಿಶೀಲಿಸುವ ಅಧಿಕಾರವನ್ನು ಟಾಸ್ಕ್‌ಫೋರ್ಸ್‍ಗೆ ನೀಡಲಾಗಿದೆ ಎಂದು ಆಯೋಗ ಸುಪ್ರೀಂಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಹೇಳಿದೆ. ಇದನ್ನೂ ಓದಿ:   ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!

    ಈ ನಿಯಮಗಳನ್ನು ಕಟ್ಟುನಿಟ್ಟಾಗಿ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಪಾಲಿಸುವಂತೆ ಸರ್ಕಾರಕ್ಕೆ ಸುಪ್ರಿಂಕೋರ್ಟ್ ಹೇಳಿದೆ. ಆಯೋಗ ಸಲ್ಲಿಸಿರುವ ಅಫಿಡವಿಟ್ ಅನ್ನು ಸೂಕ್ಷ್ಮವಾಗಿ ಕೋರ್ಟ್ ಅವಲೋಕಿಸಿದೆ. ಈ ನಿಯಮಗಳನ್ನು ಗಂಭೀರವಾಗಿ ಜಾರಿ ಮಾಡಬೇಕು. ಮುಂದಿನ ಶುಕ್ರವಾರ ಈ ಕುರಿತು ವಿಚಾರಣೆ ನಡೆಸಲಾಗುತ್ತದೆ ಎಂದು ಮುಖ್ಯ ನಾಯಮೂರ್ತಿ ಎನ್.ವಿ ರಮಣ ಅವರಿದ್ದ ಪೀಠ ಹೇಳಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

    ಪಾಕಿಸ್ತಾನದಿಂದ ಮಾಲಿನ್ಯ: ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯಕ್ಕೆ ಪಾಕಿಸ್ತಾನದಿಂದ ಬರುತ್ತಿರುವ ಹೊಗೆ ಕಾರಣ ಎಂದು ಉತ್ತರ ಪ್ರದೇಶ ಸರ್ಕಾರ ನಿನ್ನೆ ಕೋರ್ಟ್‍ಗೆ ಹೇಳಿದೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

    ಕಾರ್ಖಾನೆಗಳನ್ನು ಮೆಚ್ಚುವಂತೆ ಸುಪ್ರೀಂ ಸೂಚನೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸರ್ಕಾರ ಪಾಕಿಸ್ತಾನ ಕಾರಣ ಎಂದು ಹೇಳಿದೆ. ಈ ವಾದಕ್ಕೆ ಕೋಪಗೊಂಡ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಪಾಕಿಸ್ತಾನದ ಕಾರ್ಖಾನೆಗಳನ್ನು ಮುಚ್ಚಿಸಬೇಕಾ? ಎಂದು ಪ್ರಶ್ನಿಸಿದ್ದಾರೆ.

  • ದೆಹಲಿಯಲ್ಲಿ ಮುಂದುವರಿದ ವಾಯುಮಾಲಿನ್ಯ – ವಾಯು ಸೂಚ್ಯಂಕ 362 ಏರಿಕೆ

    ದೆಹಲಿಯಲ್ಲಿ ಮುಂದುವರಿದ ವಾಯುಮಾಲಿನ್ಯ – ವಾಯು ಸೂಚ್ಯಂಕ 362 ಏರಿಕೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೆಲದಿನಗಳಿಂದ ವಾಯು ಮಾಲಿನ್ಯ ಹೆಚ್ಚಳವಾಗುತ್ತಿದೆ. ಇಂದು ಬೆಳಗ್ಗೆ ದೆಹಲಿಯ ವಾಯು ಸೂಚ್ಯಂಕ ಪರೀಕ್ಷಿಸಿದಾಗ 362 ಕಂಡುಬಂದಿದೆ.

    ದೆಹಲಿಯಲ್ಲಿ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಈ ಗಾಳಿ ಉಸಿರಾಟಕ್ಕೆ ಅನರ್ಹವಾಗಿದೆ. ಇಂದು ಬೆಳಿಗ್ಗೆ ದೆಹಲಿ ವಾಯು ಸೂಚ್ಯಂಕ 362 ಕಂಡು ಬಂದಿದೆ. ವಾಯು ಸೂಚ್ಯಂಕ 200ಕ್ಕಿಂತ ಹೆಚ್ಚು ಇದ್ದರೆ ಉಸಿರಾಡಲು ಅನರ್ಹವಾಗಿರುತ್ತದೆ. ಹಾಗಾಗಿ ಇದೀಗ ದೆಹಲಿ ಜನ ವಾಯು ಮಾಲಿನ್ಯದಿಂದಾಗಿ ಮನೆಯಿಂದ ಹೊರ ಬರದಿರುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಮಾಲಿನ್ಯ ತಡೆಗೆ ಕಠಿಣ ಕ್ರಮ ಕೈಗೊಂಡ ದೆಹಲಿ

    ವಾಯು ಮಾಲಿನ್ಯ ತಡೆಗಾಗಿ ನಿನ್ನೆ ಕೇಂದ್ರ ಸರ್ಕಾರ ನೇತೃತ್ವದಲ್ಲಿ ದೆಹಲಿ ಸುತ್ತಮುತ್ತಲಿನ 4 ರಾಜ್ಯಗಳ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ವಾಯು ಗುಣಮಟ್ಟ ಆಯೋಗದ ಸೂಚನೆಯಂತೆ ದೆಹಲಿ ಹಾಗೂ ಸುತ್ತಮುತ್ತಲಿನ ವಲಯದಲ್ಲಿ ಮಾಲಿನ್ಯಕಾರಕ ಇಂಧನ ಬಳಕೆ ಉದ್ದಿಮೆಗಳು ಕಾರ್ಯ ನಿರ್ವಹಿಸಕೂಡದು ಎನ್ನಲಾಗಿದೆ. 11 ಉಷ್ಣವಿದ್ಯುತ್ ಸ್ಥಾವರಗಳ ಪೈಕಿ 5 ಮಾತ್ರ ನವೆಂಬರ್ 30 ರವರೆಗೆ ಕೆಲಸ ಮಾಡಬೇಕು. ನವೆಂಬರ್ 31 ರವರೆಗೆ ಅಗತ್ಯವಸ್ತು ಸಾಗಾಣೆ ಟ್ರಕ್ ಹೊರತುಪಡಿಸಿ ಉಳಿದ ಟ್ರಕ್‍ಗಳ ಪ್ರವೇಶ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

    ಇದರೊಂದಿಗೆ 10 ವರ್ಷಕ್ಕಿಂತ ಹಳೆಯ ಪೆಟ್ರೋಲ್ 15 ವರ್ಷಕ್ಕಿಂತ ಹಳೆ ಡೀಸೆಲ್ ವಾಹನ ನವೆಂಬರ್ 21 ರವರೆಗೆ ಸಂಚಾರ ಮಾಡಬಾರದು. ನವೆಂಬರ್ 21 ರವರೆಗೆ ವರ್ಕ್ ಫ್ರಂ ಹೋಮ್‍ಗೆ ಆದ್ಯತೆ ಕೊಡಿ ಎಂದು ಸೂಚಿಸಿದ್ದು, ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದಲ್ಲದೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ನೀಡಲಾಗಿದೆ.