Tag: politics

  • ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನಿಧನ

    ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನಿಧನ

    ಗದಗ: ಜಿಲ್ಲೆಯ ರೋಣ ತಾಲೂಕಿನ ಜಕ್ಜಲಿ ಗ್ರಾಮದ ಸರಳ, ಸಜ್ಜನಿ, ಮೌಲ್ಯಾಧಾರಿತ ರಾಜಕಾರಣಿ ಹಾಗೂ ಸಾಹಿತಿಯಾಗಿದ್ದ ಜ್ಞಾನದೇವ ದೊಡ್ಡಮೇಟಿ ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖರಾದ ದಿವಂಗತ ಅಂದಾನಪ್ಪ ದೊಡ್ಡಮೇಟಿ ಅವರ ಪುತ್ರರಿವರು. ಇವರು ಕೂಡಾ ಸ್ವಾತಂತ್ರ್ಯ ಹೋರಾಟ ಕಂಡಂತವರು. 1983 ಹಾಗೂ 85 ರಲ್ಲಿ ಎರಡು ಬಾರಿ ರೋಣ ಕ್ಷೇತ್ರದಿಂದ ಜನತಾಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಜ್ಞಾನದೇವ ದೊಡ್ಡಮೇಟಿಯವರು ಸಾಹಿತಿ ಸಹ ಆಗಿದ್ರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮತ್ತು ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

    ದೊಡ್ಡಮೇಟಿ ಅವರು ನಾಲ್ವರು ಪುತ್ರರು, ಓರ್ವ ಪುತ್ರಿ ಸೇರದಂತೆ ಅಪಾರ ಬಂಧು-ಬಳಗವನ್ನ ಅಗಲಿದ್ದಾರೆ. ಇಂದು ಸಂಜೆ ಗದಗ ಜಿಲ್ಲೆಯ ಜಕ್ಕಲ್ಲಿ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ದೊಡ್ಡಮೇಟಿ ಅವರ ಅಗಲಿಕೆಯಿಂದ ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಜ್ಞಾನದೇವ ದೊಡ್ಡಮೇಟಿ ಅವರಿಗೆ 86 ವರ್ಷ ವಯಸ್ಸಾಗಿತ್ತು.

     

  • ರಾಜ್ಯದ ರಾಜ್ಯಸಭೆ ಸದಸ್ಯರೊಬ್ಬರ ಮೇಲೆ ಮೋದಿ ಫುಲ್ ಗರಂ: ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠ

    ರಾಜ್ಯದ ರಾಜ್ಯಸಭೆ ಸದಸ್ಯರೊಬ್ಬರ ಮೇಲೆ ಮೋದಿ ಫುಲ್ ಗರಂ: ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠ

    ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ರಾಜ್ಯಸಭೆಯ ಸಂಸದರೊಬ್ಬರ ಮೇಲೆ ಗರಂ ಆಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಹೌದು, ದಕ್ಷಿಣ ಭಾರತದಲ್ಲಿ ಪಕ್ಷ ಬಲವರ್ಧನೆಯ ವಿಚಾರವಾಗಿ ಇಂದು ದೆಹಲಿಯ ಲೋಕಮಾನ್ಯ ತಿಲಕ್ ರಸ್ತೆಯಲ್ಲಿರುವ ನಿವಾಸದಲ್ಲಿ ಮೋದಿ ಬೆಳಗ್ಗೆ ಬಿಜೆಪಿ ಅಧಿಕಾರ ಇಲ್ಲದೇ ಇರುವ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯಗಳ ಸಂಸದರ ಸಭೆ ನಡೆಸಿದರು.

    ಈ ಸಭೆಯಲ್ಲಿ ಕರ್ನಾಟಕದ ಸಂಸದರೊಬ್ಬರು ಭೂ ಕಾನೂನು ತಿದ್ದುಪಡಿ ವಿಚಾರದಲ್ಲಿ ಸಲಹೆ ನೀಡಿದರು. ಈ ಸಲಹೆಗೆ ಗರಂ ಆದ ಮೋದಿ ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠವನ್ನು ಹೇಳಿಕೊಟ್ಟಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

    “70ರ ದಶಕದ ರಾಜಕಾರಣ ಬೇರೆ. ಈಗಿನ ರಾಜಕರಾಣದ ಸ್ಟೈಲೇ ಬೇರೆ. 70ರ ದಶಕದ ರಾಜಕಾರಣವನ್ನು ಬಿಟ್ಟುಬಿಡಿ. ಇನ್ನು ಏನಿದ್ದರೂ ಈಗಿನ ಟ್ರೆಂಡ್‍ಗೆ ಲಾಭವಾಗುವ ರಾಜಕಾರಣ ಮಾಡಿ. ಜನರಿಗೆ ಅನುಕೂಲ ಆಗಬೇಕು ಮತ್ತು ಅರ್ಥವಾಗಬೇಕು. ಆ ಕಾನೂನು ಜಾರಿಗೆ ತರುವುದು ನಮಗೆ ಗೊತ್ತಿದೆ. ನೀವು ಮೊದಲು ಜನರಿಗೆ ಹತ್ತಿರವಾಗುವ ರಾಜಕಾರಣ ಮಾಡಿ” ಎಂದು ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಭೆಯಲ್ಲಿ ಮೋದಿ ಸಡನ್ ಆಗಿ ಗರಂ ಆಗಿದ್ದನ್ನು ನೋಡಿ ಸಂಸದರು ಕಕ್ಕಾಬಿಕ್ಕಿಯಾಗಿದ್ದರಂತೆ. ಮೋದಿಯ ಫುಲ್ ಕ್ಲಾಸ್ ಬಳಿಕ ಸಭೆ ಫುಲ್ ಸೈಲೆಂಟ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಸಭೆಯಲ್ಲಿ ಏನು ಚರ್ಚೆ ಆಗಿದೆ?
    ಕೇಂದ್ರದ ಯೋಜನೆಗಳಿಗೆ ರಾಜ್ಯದವರು ಹೊಸ ಹೆಸರು ಇಟ್ಟು ತಮ್ಮ ಯೋಜನೆ ಎಂದು ಪ್ರಚಾರ ಮಾಡುತ್ತಿದ್ದು ಇದರ ಬಗ್ಗೆ ಗಮನಹರಿಸಿ. ರಾಜ್ಯ ಸರ್ಕಾರದ ಹೊಸ ಬೆಳಕು ಯೋಜನೆ ಕೇಂದ್ರದ ಯೋಜನೆಯಾಗಿದ್ದು ಇದನ್ನು ರಾಜ್ಯ ಸರ್ಕಾರ ತಮ್ಮದು ಎಂದು  ಬಿಂಬಿಸುತ್ತಿದೆ. ಇಂತಹ ಅಂಶಗಳನ್ನು ನೀವು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರಧಾನಿ ಮೋದಿ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.

    ಬಿಜೆಪಿ ಸರ್ಕಾರ ಇರದ ರಾಜ್ಯಗಳಲ್ಲಿ ಸಂಸದರೇ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳಬೇಕು. ಮುದ್ರಾ ಯೋಜನೆ, ಫಸಲ್ ಭೀಮಾ, ಉಜ್ವಲ ಯೋಜನೆ ಬಗ್ಗೆ ಪ್ರಚಾರ ಮಾಡಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ತಳ ಮಟ್ಟದ ಜನರಲ್ಲಿ ಜಾಗೃತಿ ಮೂಡಿಸಬೇಕು. ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಸಂಘಟನೆಗೆ ಆದ್ಯತೆ ನೀಡುಬೇಕು ಎಂದು ಸೂಚಿಸಿದ್ದಾರೆ.

    ಇನ್ನೂ ಎರಡು ವರ್ಷದ ಅವಧಿ ಮಾತ್ರ ಇದೆ. ಸಮಯ ಎಷ್ಟು ಬೇಗ ಹೋಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಹೀಗಾಗಿ ಇವುಗಳನ್ನು ಅರಿತುಕೊಂಡು ಪಕ್ಷ ಸಂಘಟನೆಯ ಜೊತೆ ಅಭಿವೃದ್ಧಿ ಕಾರ್ಯವನ್ನು ಮಾಡಿ ಎಂದು ನಾಯಕರಿಗೆ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಸಭೆಯಲ್ಲಿ ರಾಜ್ಯದ ಹಿತವನ್ನು ಮರೆತ ಬಿಜೆಪಿ ಸಂಸದರು

  • ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಚೆನ್ನೈ: ತಮಿಳುನಾಡಲ್ಲಿ ದಿನದಿಂದ ದಿನಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ದೇಶಾದ್ಯಂತ ಸುದ್ದಿ ಮಾಡ್ತಿದೆ. ಈ ನಡುವೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಹೊಸ ಚಿತ್ರ ಮಾಡಲು ಹೊರಟಿದ್ದಾರೆ.

    ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜಯಲಲಿತಾ ಹಾಗೂ ಶಶಿಕಲಾ ಸಂಬಂಧವನ್ನಿಟ್ಟುಕೊಂಡು ರಾಮಗೋಪಾಲ್ ವರ್ಮಾ ಚಿತ್ರ ಮಾಡಲು ರೆಡಿಯಾಗಿದ್ದಾರೆ. ಚಿತ್ರಕ್ಕೆ `ಶಶಿಕಲಾ’ ಅಂತಾ ಟೈಟಲ್ ಇಡಲು ತೀರ್ಮಾನಿಸಲಾಗಿದ್ದು, ಚಿತ್ರ ಸಂಪೂರ್ಣವಾಗಿ ಕಾಲ್ಪನಿಕವಾಗಿದೆಯಂತೆ. ದಿವಂಗತ ಜಯಲಲಿತಾರ ಬಗ್ಗೆ ನನಗೆ ಅಪಾರ ಗೌರವವಿದೆ. ಅದಕ್ಕಿಂತಲೂ ಹೆಚ್ಚಾಗಿ ಶಶಿಕಲಾರ ಪ್ರಾಮಾಣಿಕತೆ ಬಗ್ಗೆ ನನಗೆ ಹೆಚ್ಚು ಗೌರವ ಇದೆ. ಹಾಗಾಗಿ ನಾನು ಚಿತ್ರಕ್ಕೆ ಶಶಿಕಲಾ ಅಂತಾ ಹೆಸರಿಟ್ಟಿದ್ದೇನೆ ಅಂತಾ ರಾಮ್‍ಗೋಪಾಲ್ ವರ್ಮಾ ಹೇಳಿದ್ದಾರೆ.

    ಈ ಚಿತ್ರಕ್ಕೆ ರಾಜಕೀಯದ ಟಚ್ ಇಲ್ಲ. ಶಶಿಕಲಾ ತಮಿಳಿಗರ ಪಾಲಿಗೆ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದಾರೆ. ಹಾಗಾಗಿ ಚಿತ್ರ ರಾಜಕೀಯೇತರವಾಗಿದ್ದು ಕಾಲ್ಪನಿಕ ಕಥೆ ಒಳಗೊಂಡಿದೆ ಅಂತಾ ನಿರ್ಮಾಪಕ ರಾಮ್‍ಗೋಪಾಲ್ ವರ್ಮಾ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಕೂಡ ವರ್ಮಾ ರಕ್ತಚರಿತ, ಕಿಲ್ಲಿಂಗ್ ವೀರಪ್ಪನ್, 26/11ರ ಮುಂಬೈ ದಾಳಿ ಕುರಿತ ಚಿತ್ರ್ರಗಳನ್ನು ಮಾಡಿದ್ದರು.