Tag: police

  • ಮಠಕ್ಕೆ ಬಂದ ಭಕ್ತೆಯನ್ನೇ ಪಟಾಯಿಸಿ ಕೈ ಕೊಟ್ಟ ಕಾಮಿ ಸ್ವಾಮೀಜಿ

    ಮಠಕ್ಕೆ ಬಂದ ಭಕ್ತೆಯನ್ನೇ ಪಟಾಯಿಸಿ ಕೈ ಕೊಟ್ಟ ಕಾಮಿ ಸ್ವಾಮೀಜಿ

    ಕಲಬುರಗಿ: ಮಠಕ್ಕೆ ಭಕ್ತೆಯಾಗಿ ಬಂದ ಭಕ್ತಳನ್ನೆ ಪಟಾಯಿಸಿ ಮದುವೆಯಾಗಿ ನಂತರ ಕೈ ಕೊಟ್ಟ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಭಾ ಮಠದ ಪ್ರಕಾಶ್ ಪುರಾಣಿಕ್ ಮಹಿಳೆಯನ್ನು ವಂಚಿಸಿ ಈಗ ಅರೆಸ್ಟ್ ಆಗಿದ್ದಾನೆ.

    ಏನಿದು ಪ್ರಕರಣ?
    ಮಠಕ್ಕೆ ಬಂದ ಭಕ್ತೆಯನ್ನು ಮಠದ ಪೀಠಾಧಿಪತಿಯಾದ ಪ್ರಕಾಶ್ ಪುರಾಣಿಕ ಮುತ್ಯಾ ಯುವತಿಯನ್ನು ಪ್ರೀತಿಸಲು ಆರಂಭಿಸಿದ್ದ. ಈ ಪ್ರೀತಿ ಮದುವೆಯ ಸಂಬಂಧಕ್ಕೆ ತಿರುಗಿ 2010 ರಲ್ಲಿ ಇಬ್ಬರು ಶ್ರೀಶೈಲಕ್ಕೆ ಹೋಗಿ ಮದುವೆಯಾಗಿದ್ದರು. 7 ವರ್ಷ ಚೆನ್ನಾಗಿ ಸಂಸಾರ ನಡೆಸಿದ ಪ್ರಕಾಶ್ ಮುತ್ಯ ಇತ್ತೀಚಿಗೆ ಯುವತಿಗೇ ಕೈ ಕೊಟ್ಟು ಮೊಬೈಲ್ ಸ್ವೀಚ್ ಆಫ್ ಮಾಡಿ ಪರಾರಿಯಾಗಿದ್ದ.

    7 ವರ್ಷ ಸಂಸಾರ ಮಾಡಿದ್ರರೂ ಸ್ವಾಮೀಜಿ ಮಹಾನಂದಳಿಗೆ ಮಕ್ಕಳಾಗದಂತೆ ಔಷಧಿ ನೀಡಿದ್ದಾನೆ. ಅಷ್ಟೇ ಅಲ್ಲ ಮಹಾನಂದಳಿಗಾಗಿ ಕಲಬುರಗಿ ನಗರದಲ್ಲಿ ಕಟ್ಟಿಸಿದ ಮನೆ ಸಹ ಸ್ವಾಮೀಜಿ ಇದೀಗ ಭಕ್ತರ ಹೆಸರಿನಲ್ಲಿ ನೋಂದಾಯಿಸಿದ್ದಾನೆ. ಅಷ್ಟೇ ಅಲ್ಲದೇ ಯುವತಿಗೇ ಮನೆ ಬಿಡುವಂತೆ ರೌಡಿಗಳ ಮೂಲಕ ಹೆದರಿಸುತ್ತಿದ್ದಾನೆ. ಹೀಗಾಗಿ ಕೂಡಲೇ ಪ್ರಕಾಶ್ ಮುತ್ಯಾನ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆ ಆಗ್ರಹಿಸಿವೆ.

    ಈ ಕುರಿತು ಕಲಬುರಗಿ ನಗರದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಾಮಿ ಸ್ವಾಮಿಯನ್ನು ಬಂಧಿಸಿದ್ದಾರೆ.

     

  • ವಿಡಿಯೋ- ಹಾಡಹಗಲೇ ಬೆಂಗಳೂರಿನಲ್ಲಿ ಪುಡಿ ರೌಡಿಗಳಿಂದ ಮನೆಗೆ ನುಗ್ಗಿ ಹಲ್ಲೆ, ಬೆದರಿಕೆ

    ವಿಡಿಯೋ- ಹಾಡಹಗಲೇ ಬೆಂಗಳೂರಿನಲ್ಲಿ ಪುಡಿ ರೌಡಿಗಳಿಂದ ಮನೆಗೆ ನುಗ್ಗಿ ಹಲ್ಲೆ, ಬೆದರಿಕೆ

    – ದೂರು ಕೊಟ್ರೂ ಎಫ್‍ಐಆರ್ ದಾಖಲಿಸಿದ ಪೊಲೀಸ್ರು

    ಬೆಂಗಳೂರು: ನಗರದಲ್ಲಿ ರೌಡಿಗಳ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಜಾಗದ ವಿಚಾರವಾಗಿ ರೌಡಿಗಳು ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೇ ಬೆದರಿಕೆ ಹಾಕಿರುವ ಪ್ರಕರಣವೊಂದು ರಾಮಮೂರ್ತಿ ನಗರದಲ್ಲಿ ಬೆಳಕಿಗೆ ಬಂದಿದೆ.

    ರಾಮಮೂರ್ತಿ ನಗರದ ನಿವಾಸಿ ರಾಜು ಎಂಬವರ ಮನೆಗೆ ನುಗ್ಗಿ ರೌಡಿಗಳು ಗೂಮಡಾಗಿರಿ ನಡೆಸಿದ್ದಾರೆ. ಪುಡಿ ರೌಡಿಗಳು ಕಂಠಪೂರ್ತಿ ಕುಡಿದುಕೊಂಡು ರಾಜು ಮನೆಗೆ ನುಗ್ಗಿ ತಾಯಿಯ ಎದುರೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೇ ಬೆದರಿಕೆ ಕೂಡ ಹಾಕಿದ್ದಾರೆ.

    ರಾಜು ಮೇಲೆ ಹಲ್ಲೆ ಆದ ಕೂಡಲೇ ಅವರು 100 ನಂಬರಿಗೆ ಕರೆ ಮಾಡಿದ್ದರು. ಆದ್ರೆ ಪೊಲೀಸರು ತಡವಾಗಿ ಬಂದು ಕ್ರಮ ಕೈಗೊಳ್ಳುತ್ತೇವೆ ಅಂತ ಸಮಾಧಾನ ಮಾಡಿ ಹೊರಟಿದ್ದಾರೆ. ಆದ್ರೆ ನಿನ್ನೆ ಮಧ್ಯಾಹ್ನ ಮತ್ತೆ 2 ಗಂಟೆ ಸುಮಾರಿಗೆ 20ಕ್ಕೂ ಹೆಚ್ಚು ಮಂದಿ ಕುಡಿದು ಬಂದು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ವೇಳೆ ರಾಜು ತಾಯಿ ರೌಡಿಗಳನ್ನು ತಡೆಯಲು ಮುಂದಾಗಿದ್ದಾರೆ. ಆದ್ರೆ ರೌಡಿಗಳು ರಾಜು ಮೇಲೆ ಹಲ್ಲೆ ಮಾಡಿದ್ದಾರೆ.

    ಈ ಸಂಬಂಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ರೂ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಕೆ ಆರ್ ಪುರ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜ್ ಬೆಂಬಲಿಗರು ಈ ಗೂಂಡಾಗಿರಿ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    https://www.youtube.com/watch?v=qEVeLkOJY-0&feature=youtu.be

  • ಕಲಬುರಗಿ: ಹಗ್ಗದಿಂದ ಕುತ್ತಿಗೆ ಬಿಗಿದು ಮಹಿಳೆ ಕೊಲೆ

    ಕಲಬುರಗಿ: ಹಗ್ಗದಿಂದ ಕುತ್ತಿಗೆ ಬಿಗಿದು ಮಹಿಳೆ ಕೊಲೆ

    ಕಲಬುರಗಿ: ಲಾಡ್ಜ್ ಒಂದರಲ್ಲಿ ಮಹಿಳೆಯೋರ್ವಳನ್ನು ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ.

    32 ವರ್ಷದ ಪದ್ಮಮ್ಮ ಕೊಲೆಯಾದ ಮಹಿಳೆ. ಪದ್ಮಮ್ಮ ನೆರೆಯ ತೆಲಂಗಾಣ ರಾಜ್ಯದ ತಾಂಡೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ ಪದ್ಮಮ್ಮಾ ಹಾಗು ನರಸಪ್ಪ ಎಂಬವರು ಸೇಡಂ ಪಟ್ಟಣಕ್ಕೆ ಬಂದು ಅಶೋಕ್ ಲಾಡ್ಜ್‍ನಲ್ಲಿ ತಂಗಿದ್ದರು.

    ಇಂದು ನಸುಕಿನ ಜಾವ ಪದ್ಮಮ್ಮರನ್ನು ಕೊಲೆ ಮಾಡಿ ನರಸಪ್ಪ ಪರಾರಿಯಾಗಿದ್ದಾನೆ. ನರಸಪ್ಪ ಕೂಡ ತಾಂಬುರ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ. ಇನ್ನು ನರಸಪ್ಪ ಮತ್ತು ಪದ್ಮಮ್ಮ ಸತಿ-ಪತಿಗಳಾ ಎಂಬುವುದಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಸೇಡಂ ಪಟ್ಟಣ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ನರಸಪ್ಪನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

     

  • ತಾಯಿಯನ್ನು ನಿಂದಿಸಿದ್ದಕ್ಕೆ ಅರೆಬೆತ್ತಲೆಗೊಳಿಸಿ ನಡುರೋಡಲ್ಲೇ  ಹಲ್ಲೆ

    ತಾಯಿಯನ್ನು ನಿಂದಿಸಿದ್ದಕ್ಕೆ ಅರೆಬೆತ್ತಲೆಗೊಳಿಸಿ ನಡುರೋಡಲ್ಲೇ ಹಲ್ಲೆ

    – ಕಾನೂನು ಕೈಗೆತ್ತಿಕೊಂಡ ಯುವಕರು

    ಗದಗ: ತಾಯಿಯನ್ನು ನಿಂದಿಸಿದ್ದಕ್ಕೆ ಸಿಟ್ಟಿಗೆದ್ದ ಮಕ್ಕಳು ಮತ್ತು ಕುಟುಂಬಸ್ಥರು ಆರೋಪಿಗಳನ್ನು ಅರೆಬೆತ್ತಲೆಗೊಳಿಸಿ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಗದಗದ ನರಗುಂದಪಟ್ಟದಲ್ಲಿ ನಡೆದಿದೆ.

    ನರಗುಂದ ಪಟ್ಟಣದ ಮಲ್ಲಿಕ್ ಜಾನ್ ನಲಬಂದ್, ಖಾದಿರ್ ಸಾಬ್ ಮಲ್ಲಸಮುದ್ರ, ಗೌಸುಸಾಬ್ ರಾಹುತ್ ಮೇಲೆ ಮಾರಣಾಂತಿಕ ಹಲ್ಲೆಗೊಳಗಾದವರು. ಬಸುರಾಜ್ ಗಡೇಕರ್, ಸಂಜೀವ್ ನಲವಡಿ, ತವನಪ್ಪ ಸಂಬಳ ಹಲ್ಲೆ ಮಾಡಿದವರು ಅಂತ ಗೊತ್ತಾಗಿದೆ.

    ನಡೆದಿದ್ದೇನು: ತಾಯಿಯನ್ನು ಹಿಯಾಳಿಸಿ ಮಾತನಾಡಿದ್ದ ವೀಡಿಯೋವೊಂದನ್ನು ಆರೋಪಿಗಳು ವಾಟ್ಸಾಪ್‍ನಲ್ಲಿ ಹಾಕಿದ್ರು. ಇದರಿಂದ ಸಿಟ್ಟುಗೊಂಡ ಮಕ್ಕಳು ಹಾಗೂ ಕುಟುಂಬಸ್ಥರು ರಸ್ತೆ ತುಂಬೆಲ್ಲಾ ಮೂವರನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪಟ್ಟಣದ ಮಾರುಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಪೊಲೀಸ್ ಠಾಣೆಯವರೆಗೂ ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಥಳಿಸಿ ಆರೋಪಿಗಳನ್ನು ಪೊಲೀಸರು ಕೈಗೆ ನೀಡಿದ್ದಾರೆ.

    ಸದ್ಯಕ್ಕೆ ಹಲ್ಲೆಗೊಳಗಾದ ಯುವಕರಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿದ ಮೂವರನ್ನ ಗದಗ ಜಿಲ್ಲೆ ನರಗುಂದ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=hM4ppiA4l3Y&feature=youtu.be

  • ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ

    ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ

    ಬೀದರ್: ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರನ್ನು ಬೀದರ್ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ.

    ಕಮಲಾಬಾಯಿ (33), ಅಂಬಾಬಾಯಿ (35), ರಮಾಬಾಯಿ (36) ಹಾಗೂ ರೇಖಾಬಾಯಿ (31) ಬಂಧಿತ ಮಹಿಳೆಯರು. ಈ ನಾಲ್ವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಿಂದ ಮಹಾರಾಷ್ಟ್ರ ರಾಜ್ಯದ ಲಾಥೂರ್ ನಗರಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಬಂಧಿತರಿಂದ 22 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರು ಬಸ್‍ನಲ್ಲಿ ಗಾಂಜಾ ಸಾಗಿಸುವ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಸದ್ಯ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮಂಗಳೂರು: ಜಿಲ್ಲಾ ಕಾರಾಗೃದಿಂದ ವಿಚಾರಣಾಧೀನ ಕೈದಿ ಪರಾರಿ

    ಮಂಗಳೂರು: ಜಿಲ್ಲಾ ಕಾರಾಗೃದಿಂದ ವಿಚಾರಣಾಧೀನ ಕೈದಿ ಪರಾರಿ

    ಮಂಗಳೂರು: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ವಿಚಾರಣಾಧೀನ ಕೈದಿಯೊಬ್ಬ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾನೆ. ಎರಡು ವರ್ಷಗಳ ಹಿಂದೆ ಅತ್ಯಾಚಾರ ಯತ್ನ ಮತ್ತು ಕಳವು ಪ್ರಕರಣದಲ್ಲಿ ಬಂಧಿಯಾಗಿದ್ದ ಕೈದಿ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ.

    ಜಿನ್ನಪ್ಪ ಪರವ ಜೈಲಿನಿಂದ ಪರಾರಿಯಾದ ಕೈದಿ. ಜಿನ್ನಪ್ಪ ಬೆಳ್ತಂಗಡಿ ತಾಲೂಕಿನ ಬೆಳ್ಳಾಲು ಗ್ರಾಮದ ನಿವಾಸಿ. ಇಂದು ಬೆಳಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಕಾರಾಗೃಹದ ಕಾವಲು ಪೊಲೀಸರು ನಿದ್ದೆ ಹೋದ ಸಂದರ್ಭದಲ್ಲಿ ಹಳೆಯ ಜೈಲಿಗೆ ಹೋಗಿ ಗೋಡೆ ಹಾರಿ ವಿದ್ಯುತ್ ಕಂಬದ ಮೂಲಕ ಇಳಿದು ತಪ್ಪಿಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

    ಎರಡು ವರ್ಷಗಳ ಹಿಂದೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸರು 2015 ಅಗಸ್ಟ್ 25 ರಂದು ಜಿನ್ನಪ್ಪನನ್ನು ಬಂಧಿಸಿದ್ದರು. ನಂತರ ಆತನನ್ನು ವಿಚಾರಣಾಧೀನ ಕೈದಿಯಾಗಿ ಮಂಗಳೂರು ಕಾರಾಗೃಹದಲ್ಲಿ ತನಿಖೆಗೆ ಒಳಪಡಿಸಲಾಗಿತ್ತು. ಜಿನ್ನಪ್ಪ ಜೈಲಿನಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

    ಇಂದು ಬೆಳಗ್ಗೆ ಪೊಲೀಸ್ ಸರ್ಪಗಾವಲು ಇದ್ರೂ ಜಿನ್ನಪ್ಪ ಪರಾರಿಯಾಗಿದ್ದು, ಪೊಲೀಸರ ಕರ್ತವ್ಯಲೋಪದ ಬಗ್ಗೆ ಭಾರೀ ಟೀಕೆಗೆ ವ್ಯಕ್ತವಾಗಿದೆ. ಜೈಲಿನೊಳಗೇ ಭೂಗತ ಪಾತಕಿಗಳಿಬ್ಬರ ಹತ್ಯೆ, ಭೂಗತ ಚಟುವಟಿಕೆ, ಕೈದಿಗಳಿಗೆ ಗಾಂಜಾ ಪೂರೈಕೆ ಮೂಲಕ ಕುಖ್ಯಾತಿಗೀಡಾಗಿದ್ದ ಮಂಗಳೂರಿನ ಕಾರಾಗೃಹ ಇದೀಗ ಕೈದಿ ಪರಾರಿಯಾಗುವ ಮೂಲಕ ಮತ್ತೊಂದು ಕಳಂಕವನ್ನು ಮೈಮೇಲೆ ಎಳೆದುಕೊಂಡಿದೆ.

     

  • ಗೃಹ ಇಲಾಖೆಯಿಂದ ಆರ್ಡರ್ಲಿ ಪದ್ದತಿ ರದ್ದು

    ಗೃಹ ಇಲಾಖೆಯಿಂದ ಆರ್ಡರ್ಲಿ ಪದ್ದತಿ ರದ್ದು

    ಬೆಂಗಳೂರು: ಪೊಲೀಸರಿಗೆ ಸಿಹಿ ಸುದ್ದಿ. ಬ್ರಿಟೀಷರ ಬಳುವಳಿ ಎಂಬಂತೆ ಪೊಲೀಸ್ ಇಲಾಖೆಯಲ್ಲಿ ಬಂದಿದ್ದ ಆರ್ಡರ್ಲಿ ಪದ್ಧತಿಗೆ ತಿಲಾಂಜಲಿ ಇಡಬೇಕು ಅನ್ನೋ ಕೂಗಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಶೇ.50 ರಷ್ಟು ಸಿಬ್ಬಂದಿಯನ್ನು ಈ ಕೂಡಲೇ ಎಲ್ಲಾ ಅಧಿಕಾರಿಗಳು ವಾಪಸ್ ಕಳುಹಿಸುವಂತೆ ಸೂಚಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

    ಬಿಡುಗಡೆಗೊಂಡ ಸಿಬ್ಬಂದಿಯ ಸ್ಥಳದಲ್ಲಿ ಖಾಸಗಿ ಅನುಯಾಯಿಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದು, ಭತ್ಯೆ ರೂಪದಲ್ಲಿ ಹಣ ಪಾವತಿ ಮಾಡುವುದಾಗಿ ಗೃಹ ಇಲಾಖೆ ಕೂಡ ಆದೇಶದಲ್ಲಿ ತಿಳಿಸಿದೆ. ಬೆಂಗಳೂರೊಂದರಲ್ಲೇ ವಿವಿಧ ದರ್ಜೆ ಅಧಿಕಾರಿಗಳ ಮನೆಗಳಲ್ಲಿ 1239 ಮಂದಿ ಸಿಎಆರ್ ಸಿಬ್ಬಂದಿ ಆರ್ಡರ್ಲಿ ಪದ್ಧತಿಯ ಅಡಿಯಲ್ಲಿ ಕೆಲಸ ಮಾಡ್ತಿದ್ದಾರೆ.

    ಸಾಕಷ್ಟು ಖರ್ಚು ಮಾಡಿ ತರಬೇತಿ ನೀಡಿರೋ ಪೊಲೀಸ್ ಸಿಬ್ಬಂದಿಯನ್ನು ಮನೆಗಳ ಕೆಲಸಕ್ಕೆ ಬಳಕೆ ಮಾಡೋದು ಎಷ್ಟು ಸರಿ ಅನ್ನೋ ಕೂಗು ಹತ್ತಾರು ವರ್ಷಗಳಿಂದಲೂ ಕೇಳಿಬರ್ತಿತ್ತು. ಈಗ ರಾಜ್ಯ ಸರ್ಕಾರ ಅರ್ಧದಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

  • ಚುಡಾಯಿಸಿದ ಪೋಲಿಗೆ ಚಳಿಬಿಡಿಸಿದ ಯುವತಿ: ನೊಂದವಳ ಆಕ್ರೋಶಕ್ಕೆ ಬೆಚ್ಚಿಬಿತ್ತು ಬಸ್ ಸ್ಟ್ಯಾಂಡ್

    ಚುಡಾಯಿಸಿದ ಪೋಲಿಗೆ ಚಳಿಬಿಡಿಸಿದ ಯುವತಿ: ನೊಂದವಳ ಆಕ್ರೋಶಕ್ಕೆ ಬೆಚ್ಚಿಬಿತ್ತು ಬಸ್ ಸ್ಟ್ಯಾಂಡ್

    – ಚಾಕು ಹಿಡಿದು ಬಸ್ ನಿಲ್ದಾಣದ ತುಂಬಾ ಓಡಾಡಿಸಿದಳು
    – ಒಂದು ತಿಂಗಳಿಂದ ಪೀಡಿಸುತ್ತಿದ್ದ ಪೋಲಿ ಪರಾರಿ

    ರಾಯಚೂರು: ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳು ಪೋಲಿ ಯುವಕನಿಗೆ ಸರಿಯಾಗೇ ಬುದ್ದಿ ಕಲಿಸಿದ್ದಾಳೆ. ಒಂದು ತಿಂಗಳಿನಿಂದ ಚುಡಾಯಿಸಿ, ಕಾಲು ಕೆರೆದು ಜಗಳ ತೆಗೆಯುತ್ತಿದ್ದ ಇಲ್ಲಿನ ತಿಡಿಗೋಳ ಗ್ರಾಮದ ಯುವಕ ದೇವ ಎಂಬುವವನ ಕಿರುಕುಳಕ್ಕೆ ಬೇಸತ್ತು ಚಾಕು ಹಾಕಲು ಮುಂದಾಗಿರುವ ಘಟನೆ ನಡೆದಿದೆ.

    ಎಂದಿನಂತೆ ಚುಡಾಯಿಸಲು ಮುಂದಾದಾಗ ಯುವತಿ ಪೂಜಾ (ಹೆಸರು ಬದಲಾಯಿಸಲಾಗಿದೆ) ಮೊದಲೇ ಪೂರ್ವ ಸಿದ್ಧತೆ ಮಾಡಿಕೊಂಡು ಹೆಣ್ಣು, ತರಕಾರಿ ಕತ್ತರಿಸುವ ಚಾಕುವಿನಿಂದ ದೇವನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ತಪ್ಪಿಸಿಕೊಂಡ ದೇವ ಇಡೀ ಬಸ್ ನಿಲ್ದಾಣದ ತುಂಬಾ ಓಡಾಡಿದ್ದಾನೆ. ಅಷ್ಟಕ್ಕೇ ಬಿಡದ ಯುವತಿ ಅವನನ್ನ ಅಟ್ಟಾಡಿಸಿಕೊಂಡು ಚಾಕು ಹಾಕಲು ಮುಂದಾಗಿದ್ದಾಳೆ. ಸಹ ಪ್ರಯಾಣಿಕರು ಯುವತಿಯನ್ನ ತಡೆದಿದ್ದು, ದೇವ ಅಲ್ಲಿಂದ ಪರಾರಿಯಾಗಿದ್ದಾನೆ.

    ಪಿಯುಸಿ ಮುಗಿಸಿರುವ ಯುವತಿ ಪ್ರತಿದಿನ ಚಿಕ್ಕಬೇರಗಿ ಗ್ರಾಮದಿಂದ ಸಿಂಧನೂರಿನ ನಗರ ಗ್ರಂಥಾಲಯಕ್ಕೆ ಓದಲು ಬರುತ್ತಿದ್ದಳು. ಸಿಂಧನೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿರುವ ದೇವ ಸಹ ಅದೇ ಮಾರ್ಗದ ತಿಡಿಗೋಳ ಗ್ರಾಮದಿಂದ ಒಂದೇ ಬಸ್ ನಲ್ಲಿ ಬರುತ್ತಿದ್ದ. ಬಸ್ ನಲ್ಲೇ ಚುಡಾಯಿಸಲು ಆರಂಭಿಸಿದ ದೇವ ಬಸ್ ನಿಲ್ದಾಣದಲ್ಲೂ ಜಗಳ ಕಾಯುತ್ತಿದ್ದ, ಇದರಿಂದ ಬೇಸತ್ತು ಚಾಕು ಹಾಕಲು ಮುಂದಾಗಿದ್ದಾಳೆ. ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಯುವತಿಯಿಂದ ಚಾಕು ವಶಕ್ಕೆ ಪಡೆದಿದ್ದಾರೆ.

     

  • ಕಳ್ಳತನ ಕೇಸ್‍ನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದಕ್ಕೆ ಪತಿ ಆತ್ಮಹತ್ಯೆ

    ಕಳ್ಳತನ ಕೇಸ್‍ನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದಕ್ಕೆ ಪತಿ ಆತ್ಮಹತ್ಯೆ

    – ಕಂಗಾಲಾದ ಪತ್ನಿಯೂ ಆತ್ಮಹತ್ಯೆಗೆ ಶರಣು

    ಮೈಸೂರು: ಕಳ್ಳತನ ಕೇಸಿನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದರಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಗರದ ವಿವಿ ಮೊಹಲ್ಲಾದಲ್ಲಿ ನಡೆದಿದೆ.

    35 ವರ್ಷದ ರಾಜು ಆತ್ಮಹತ್ಯೆಗೆ ಶರಣಾದ ಪತಿ. ರಾಜು ಅವರ ಪತ್ನಿ ಲತಾ ಇತ್ತೀಚಿಗೆ ತಾವು ಕಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಪೊಲೀಸ್ ವಿಚಾರಣೆ ವೇಳೆ ಲತಾ ತಪ್ಪೊಪ್ಪಿಕೊಂಡು ಕದ್ದ ಪದಾರ್ಥಗಳನ್ನು ಹಿಂದಿರುಗಿಸಿ, ಜಾಮೀನು ಪಡೆದು ಹೊರಬಂದಿದ್ದರು.

    ಪತ್ನಿಯ ಕಳ್ಳತನ ಪ್ರಕರಣದಿಂದ ಮನನೊಂದ ರಾಜು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪತಿಯ ಆತ್ಮಹತ್ಯೆಯಿಂದ ಕಂಗಾಲಾದ ಲತಾ ಕೂಡ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅಸ್ವಸ್ಥಗೊಂಡ ಲತಾರನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೇ ಲತಾ ಕೂಡ ಮೃತಪಟ್ಟಿದ್ದಾರೆ.

    ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

     

  • ಇದು ನೋಡಲಾಗದ, ಆದರೆ ಬೆಚ್ಚಿಬೀಳಿಸುವ ದೃಶ್ಯ: ಅಟ್ಟಾಡಿಸಿಕೊಂಡು ಎಳೆದಾಡಿ ಬರ್ಬರ ಹತ್ಯೆ

    ಇದು ನೋಡಲಾಗದ, ಆದರೆ ಬೆಚ್ಚಿಬೀಳಿಸುವ ದೃಶ್ಯ: ಅಟ್ಟಾಡಿಸಿಕೊಂಡು ಎಳೆದಾಡಿ ಬರ್ಬರ ಹತ್ಯೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗ್ಯಾಂಗ್ ವಾರ್ ಆರಂಭಗೊಂಡಿದ್ದು, ಬುಧವಾರ ಬೆಳ್ಳಂಬೆಳಗ್ಗೆ ರೌಡಿಯೊಬ್ಬನನ್ನು ಮತ್ತೊಂದು ಗ್ಯಾಂಗ್ ಹತ್ಯೆ ಮಾಡಿದೆ.

    ಸುನೀಲ್ ಹತ್ಯೆಯಾದ ರೌಡಿ ಶೀಟರ್. ಸ್ಪಾಟ್ ನಾಗನ ಗ್ಯಾಂಗ್ ಬಸವೇಶ್ವರನಗರದಲ್ಲಿ ನೆಲೆಸಿದ್ದ ಸುನೀಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದೆ.

    ಕೊಲೆ ಹೇಗಾಯ್ತು?
    ಬೆಳಗ್ಗೆ ಎಂಟು ಗಂಟೆ ವೇಳೆಗೆ ನಾಲ್ವರ ತಂಡದಿಂದ ಸುನೀಲ್ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಪಾರಾಗಲು ರೌಡಿ ಸುನೀಲ್ ಯತ್ನಿಸಿದ್ದಾನೆ. ಈ ವೇಳೆ ಮನೆಯ ಬಾಗಿಲು ಒಡೆದು ಒಳನುಗ್ಗಿ ಹೊರಗಡೆ ಎಳೆದು ಸ್ಪಾಟ್ ನಾಗನ ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಿದೆ. ದಾಳಿ ವೇಳೆ ಸುನೀಲ್ ಪೋಷಕರಿಗೂ ಗಾಯವಾಗಿದೆ.

    ಹಳೆ ದಾಳಿಗೆ ಸೇಡು:
    ಸ್ಪಾಟ್ ನಾಗನ ಮೇಲೆ ರೌಡಿ ಸುನೀಲ್ ಗ್ಯಾಂಗ್ 2016ರ ಮಾರ್ಚ್ ನಲ್ಲಿ ಹಲ್ಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಈ ಘಟನೆಯಿಂದ ಹೆಂಡತಿ ಮತ್ತು ಮಕ್ಕಳು ನಾಗನನ್ನು ತೊರೆದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುನೀಲ್ 10 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕವೂ ನಾಗನನ್ನು ಕುಂಟ ಎಂದು ಲೇವಡಿ ಮಾಡುತ್ತಿದ್ದ. ಹಲ್ಲೆ ಮತ್ತು ಲೇವಡಿಯಿಂದ ಮನನೊಂದಿದ್ದ ನಾಗ ಇಂದು ಒಂದು ವರ್ಷದ ಹಿಂದಿನ ದಾಳಿಗೆ ಸುನೀಲ್ ನನ್ನು ಕೊಲೆ ಮಾಡುವ ಮೂಲಕ ಸೇಡನ್ನು ತೀರಿಸಿಕೊಂಡಿದ್ದಾನೆ.

    https://www.youtube.com/watch?v=a3vmsD9DKZw