Tag: police

  • ಮಹಿಳೆಯಿಂದ ರಾಂಗ್‍ನಂಬರ್‍ಗೆ ಕರೆ- ತಡರಾತ್ರಿ ಫೋನ್ ಮಾಡಿ ಸೆಕ್ಸ್ ಗೆ ಕರೆದ ಯುವಕ

    ಮಹಿಳೆಯಿಂದ ರಾಂಗ್‍ನಂಬರ್‍ಗೆ ಕರೆ- ತಡರಾತ್ರಿ ಫೋನ್ ಮಾಡಿ ಸೆಕ್ಸ್ ಗೆ ಕರೆದ ಯುವಕ

    ಬೆಂಗಳೂರು: ತಡರಾತ್ರಿ ಫೋನ್ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಯುವಕನಿಗೆ ಮಹಿಳೆ ಮತ್ತು ಆಕೆಯ ಪತ್ನಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಪೀಣ್ಯದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಯುವಕನನ್ನು 22 ವರ್ಷದ ಶ್ರೀಮಂತ್ ಎಂದು ಗುರುತಿಸಲಾಗಿದ್ದು, ಈಗ ಪೀಣ್ಯ ಪೊಲೀಸರ ವಶದಲ್ಲಿದ್ದಾನೆ.

    ಏನಿದು ಪ್ರಕರಣ?: ಪೀಣ್ಯ ನಿವಾಸಿಯಾಗಿರುವ ಮಹಿಳೆಯೋರ್ವರು ತನ್ನ ಗೆಳತಿಗೆ ಕರೆ ಮಾಡುವ ವೇಳೆ ನಂಬರ್ ಮಿಸ್ ಆಗಿ ಶ್ರೀಮಂತ್ ಎಂಬಾತನಿಗೆ ಕರೆ ಮಾಡಿದ್ದರು. ಈ ವೇಳೆ ಶ್ರೀಮಂತ್ ಕರೆ ಸ್ವೀಕರಿಸಿ ಮಾತನಾಡಿರಲಿಲ್ಲ. ಬಳಿಕ ರಾತ್ರಿ ಮಹಿಳೆಗೆ ಕರೆ ಮಾಡಿದ್ದ. ಈ ವೇಳೆ ಮಹಿಳೆ `ಕ್ಷಮಿಸಿ ರಾಂಗ್ ನಂಬರ್ ಗೆ ಡಯಲ್ ಆಗಿತ್ತು’ ಎಂದು ಸಂಭಾಷಣೆ ವೇಳೆ ತಿಳಿಸಿದ್ದರು. ಆದ್ರೆ ನಂತರ ಶ್ರೀಮಂತ್ ಮಹಿಳೆಗೆ ತಡರಾತ್ರಿ ಕರೆ ಮಾಡುತ್ತಿದ್ದ. ಬರೋಬ್ಬರಿ ನೂರಕ್ಕೂ ಹೆಚ್ಚು ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದ. ಅಷ್ಟೇ ಅಲ್ಲದೇ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟಿದ್ದ. ಆತನನ್ನು ಅವಾಯ್ಡ್ ಮಾಡಲು ಹೋದಾಗ ಶ್ರೀಮಂತ್ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.

    ಇಷ್ಟೆಲ್ಲಾ ಆದರೂ ಮಹಿಳೆ ತನ್ನ ಪತಿಗೆ ಈ ಬಗ್ಗೆ ಏನೂ ಹೇಳಿರಲಿಲ್ಲ. ಕೀಚಕ ಶ್ರೀಮಂತ್ ಕೃತ್ಯದಿಂದ ನೊಂದಿದ್ದ ಮಹಿಳೆ ಬಳಿಕ ತನ್ನ ಪತಿಯ ಮುಂದೆ ಯುವಕನ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.

    ಬಳಿಕ ಪತಿ ಹೇಳಿದಂತೆ ಮಹಿಳೆ ಶ್ರೀಮಂತ್‍ಗೆ ಕರೆ ಮಾಡಿ 8ನೇ ಮೈಲಿಯ ಜಂಕ್ಷನ್ ಬಳಿ ಬರುವಂತೆ ಸೂಚಿಸಿದ್ದರು. ತಾನಿಟ್ಟಿರುವ ಬೇಡಿಕೆ ಒಪ್ಪಿರುವಂತೆ ತಿಳಿದಿದ್ದ ಶ್ರೀಮಂತ್, ಅದರಂತೆ ಕಳೆದ ಬುಧವಾರ ಆಕೆ ಹೇಳಿದ ಸ್ಥಳಕ್ಕೆ ಬಂದಿದ್ದ. ಆತ ಬಂದ ವೇಳೆ ಮಹಿಳೆ ಹಾಗೂ ಆಕೆಯ ಪತಿ ಶ್ರೀಮಂತ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಶ್ರೀಮಂತ್ ಪರಾರಿಯಾಗಲು ಮುಂದಾಗಿದ್ದು, ಆತನನ್ನು ಹಿಡಿದು ದಂಪತಿ ಅಲ್ಲೇ ಇದ್ದ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೀಣ್ಯ ಮಹಿಳೆಯ ಜೊತೆ ಫೋನ್ ನಲ್ಲಿ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಬಾಬೂರಾವ್ ಮಾತನಾಡಿ, ಮಹಿಳೆ ಸ್ನೇಹಿತರಿಗೆ ಕಾಲ್ ಮಾಡೊದಕ್ಕೆ ಹೋಗಿ ಆರೋಪಿಗೆ ಕಾಲ್ ಹೋಗಿದೆ. ಆದ್ರೆ ಆ ವ್ಯಕ್ತಿ ಪದೇ ಪದೇ ಕಾಲ್ ಮಾಡಿ ಅಸಭ್ಯ ರೀತಿ ಮಾತಾನಾಡ್ತಿದ್ದ. ಮಹಿಳೆ  ಕಳೆದ 28ರಂದು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪೊಲಿಸ್ರು ತನಿಖೆ ಮಾಡಿ ಆರೋಪಿಯನ್ನ ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಆರೋಪಿ ಡ್ರೈವರ್ ಕೆಲಸ ಮಾಡ್ತಿದ್ದ ಅಂತಾ ಹೇಳಿದ್ದಾರೆ.

  • ಬೈಕ್ ನಿಲ್ಲಿಸಿ ಎಳೆದಾಡಿ, ಕಪಾಳಕ್ಕೆ ಹೊಡೆದು ಎದೆ ಮುಟ್ಟಿ ನನ್ನನ್ನು ತಳ್ಳಿದ್ರು!

    ಬೈಕ್ ನಿಲ್ಲಿಸಿ ಎಳೆದಾಡಿ, ಕಪಾಳಕ್ಕೆ ಹೊಡೆದು ಎದೆ ಮುಟ್ಟಿ ನನ್ನನ್ನು ತಳ್ಳಿದ್ರು!

    – ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಬ್ಯಾಂಕ್ ಬಳಿ ಭಾನುವಾರ ರಾತ್ರಿ ಲೈಂಗಿಕ ದೌರ್ಜನ್ಯ ನಡೆದಿದೆ.

    ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಬೈಕಿನಲ್ಲಿ ಬರುತ್ತಿದ್ದಾಗ ದೌರ್ಜನ್ಯ ನಡೆದಿದ್ದು, ಲೀಸರು ಮಂಜುನಾಥ್, ರವಿ, ಕೃಷ್ಣಾ, ಪ್ರವೀಣ್ ರನ್ನು ಬಂಧಿಸಿದ್ದಾರೆ.

    ವಿದ್ಯಾರ್ಥಿನಿಯ ದೂರಿನಲ್ಲಿ ಏನಿದೆ?
    19ರ ರಾತ್ರಿ 9 ಗಂಟೆಯ ವೇಳೆ ನಾನು ಸ್ನೇಹಿತನ ಜೊತೆ ದ್ವಿಚಕ್ರ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಬೆಂಗಳೂರು ಕಡೆಗೆ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದೆವು. ಈ ವೇಳೆ ಎ2ಬಿ ಮತ್ತು ವಿದ್ಯಾನಗರ ಕ್ರಾಸ್ ನಡುವೆ ಬರಬೇಕಾದರೆ ಆಕ್ಟೀವಾದಲ್ಲಿ ಬಂದಂತಹ ವ್ಯಕ್ತಿಯೊಬ್ಬ ನಮ್ಮ ಬೈಕಿಗೆ ಅಡ್ಡವಾಗಿ ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

    ಈ ವೇಳೆ ನಾವು ಆತನನ್ನು ನೀನು ವಿರುದ್ಧ ದಿಕ್ಕಿನಿಂದ ಬರುತ್ತಿದ್ದೀಯ ಎಂದು ಪ್ರಶ್ನಿಸಿದ್ದಕ್ಕೆ ಆತನು ಬೈಕಿನಿಂದ ಕೆಳಗಡೆ ಇಳಿದು ನಮ್ಮ ವಾಹನದ ಕೀಯನ್ನು ತೆಗೆದುಕೊಂಡನು. ಈ ವೇಳೆ ಸ್ಥಳದಲ್ಲಿ ಆಟೋ ಡ್ರೈವರ್‍ಗಳು ಮತ್ತು ಇತರೇ 40-45 ಮಂದಿ ಸ್ಥಳೀಯರು ಸುತ್ತುವರೆದರು. ಸೇರಿದ ವ್ಯಕ್ತಿಗಳಲ್ಲಿ ಕೆಲವರು ನನ್ನ ಕಪಾಳಕ್ಕೆ ಹೊಡೆದರು. ಅಷ್ಟೇ ಅಲ್ಲದೇ ನನ್ನ ಸ್ನೇಹಿತನ ಮೇಲೂ ಹಲ್ಲೆ ನಡೆಸಿದರು. ಇವರು ನನ್ನ ದೇಹದ ಎಲ್ಲ ಭಾಗಗಳನ್ನು ಮುಟ್ಟಿದರು. ನನ್ನ ಎದೆಯ ಭಾಗವನ್ನು ಮುಟ್ಟಿ ನೀವು ಬೆಂಗಳೂರಿನವರಲ್ಲ ಎಂದು ಬೆದರಿಕೆ ಹಾಕಿ ಕೆಳಗಡೆ ದೂಡಿದರು. ನಂತರ ನಾವು ಬೇಡಿಕೊಂಡು ಗಾಡಿ ಕೀಯನ್ನು ಪಡೆದು ಅಲ್ಲಿಂದ ಹೊರಟೆವು. ಇದಾದ ಬಳಿಕ ತಾಯಿಗೆ ಕರೆ ಮಾಡಿ ತಿಳಿಸಿದೆ. ನಮ್ಮನ್ನು ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಿ, ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಬೇಕೆಂದು ಕೇಳಿಕೊಳ್ಳುತ್ತೇನೆ.

  • ತನ್ನ ಜೀಪಿಗೆ ದಾರಿ ಬಿಡದವನ ಮೇಲೆ ಕುಡಚಿ ಪಿಎಸ್‍ಐ ಗೂಂಡಾಗಿರಿ

    ತನ್ನ ಜೀಪಿಗೆ ದಾರಿ ಬಿಡದವನ ಮೇಲೆ ಕುಡಚಿ ಪಿಎಸ್‍ಐ ಗೂಂಡಾಗಿರಿ

    ಬೆಳಗಾವಿ: ರಾಯಭಾಗ್ ತಾಲೂಕಿನ ಕುಡಚಿ ಠಾಣೆ ಪಿಎಸ್‍ಐ ಶಿವಶಂಕರ ಅವರ ಗೂಂಡಾಗಿರಿಯ ಪ್ರಕರಣಗಳು ತಡವಾಗಿ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಚಿಕ್ಕೋಡಿ ತಾಲೂಕಿನ ಗಳತಗಾ ಜಾತ್ರೆಯಲ್ಲಿ ತಮ್ಮ ಜೀಪಿಗೆ ದಾರಿ ಬಿಟ್ಟಿಲ್ಲ ಎಂಬ ಕಾರಣಕ್ಕೆ ಯುವಕನೋರ್ವನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಸುಮಾರು 5 ರಿಂದ 6 ತಿಂಗಳ ಹಿಂದೆ ಸದಲಗ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಶಿವಶಂಕರ ಕಾರ್ಯನಿರ್ವಹಿಸುತ್ತಿದ್ದರು. ಗಳತಗಾ ಜಾತ್ರೆಯಲ್ಲಿ ಶಿವಶಂಕರ ಯುವಕನ ಮೇಲೆ ತಮ್ಮ ಅಧಿಕಾರ ದರ್ಪವನ್ನು ತೋರಿಸಿದ್ದಾರೆ. ಯುವಕನ ಮೇಲೆ ಹಲ್ಲೆ ಮಡುತ್ತಿರುವ ವೇಳೆ ಯುವಕ ಚರಂಡಿಯಲ್ಲಿ ಬಿದ್ರೂ, ಬಿಡದ ಶಿವಶಂಕರ ಯುವಕನನ್ನು ಮೇಲಕ್ಕೆ ಎತ್ತಿ ಥಳಿಸಿದ್ದಾರೆ.

    ಇದನ್ನೂ ಓದಿ: ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!

    ನಿನ್ನೆ (ಭಾನುವಾರ) ಪಬ್ಲಿಕ್ ಟಿವಿ ಇದೇ ಪಿಎಸ್‍ಐ ಶಿವಶಂಕರ ತಮ್ಮ ಸಿಬ್ಬಂದಿಯೊಂದಿಗೆ ಕುಡಚಿಯ ಬಾರ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಬಿತ್ತರಿಸಿತ್ತು. ಇನ್ನು ಶಿವಶಂಕರ ತಾವು ಕಾರ್ಯ ನಿರ್ವಹಿಸಿದ ಪ್ರತಿಯೊಂದು ಊರಿನಲ್ಲಿ ತಮ್ಮ ಅಧಿಕಾರ ದರ್ಪವನ್ನು ತೋರಿಸಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಪಿಎಸ್‍ಐ ಮೇಲೆ ಇದೂವರೆಗೂ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಜರುಗಿಸುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.

    ಹೋಳಿ ಹಬ್ಬದ ದಿನದಂದು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣದ ತನಿಖಾಧಿಕಾರಿ ನಾಗರಾಜ್ ಅವರಿಗೆ ಆದೇಶ ಪತ್ರ ದೊರಕಿಲ್ಲ. ಪಿಎಸ್‍ಐ ಶಿವಶಂಕರ ಪ್ರಭಾವಿ ವ್ಯಕ್ತಿಯ ಬೆಂಬಲವಿದೆ ಎಂದು ಕೇಳಿ ಬಂದಿದೆ. ಶಿವಶಂಕರ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರ ಕ್ರಮ ಜರುಗಿಸಲಾಗುತ್ತದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರ ಸೆಕ್ಸೆನಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    https://www.youtube.com/watch?v=V83ANKNDdaQ

  • ಅಪಘಾತವೆಸಗಿದ ಡಿವೈಎಸ್‍ಪಿ ಪುತ್ರಿಯ ರಕ್ಷಣೆಗೆ ಯತ್ನ – ಪತ್ರಕರ್ತರ ಮೊಬೈಲ್ ಕಸಿಯಲು ಖಾಕಿ ದರ್ಪ

    ಅಪಘಾತವೆಸಗಿದ ಡಿವೈಎಸ್‍ಪಿ ಪುತ್ರಿಯ ರಕ್ಷಣೆಗೆ ಯತ್ನ – ಪತ್ರಕರ್ತರ ಮೊಬೈಲ್ ಕಸಿಯಲು ಖಾಕಿ ದರ್ಪ

    ಬಳ್ಳಾರಿ: ಅಪಘಾತ ಮಾಡಿ ಪರಾರಿಯಾದ ಆರೋಪಿಯನ್ನು ಹಿಡಿಯೋದು ಪೊಲೀಸರ ಕರ್ತವ್ಯ. ಆದ್ರೆ ಅಪಘಾತ ಮಾಡಿದ ಪೊಲೀಸ್ ಅಧಿಕಾರಿಯ ಪುತ್ರಿಯನ್ನು ಪೊಲೀಸರೇ ಸ್ಥಳದಿಂದ ಕಳಿಸಿಕೊಟ್ಟು ರಕ್ಷಣೆ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಅಫಘಾತದಲ್ಲಿ ಗಾಯಗೊಂಡವನ ದೃಶ್ಯಗಳನ್ನು ಸೆರೆಹಿಡಿದ ಪತ್ರಕರ್ತರ ಮೊಬೈಲ್‍ಗಳನ್ನ ಕಸಿಯಲು ಪೊಲೀಸರು ಯತ್ನಿಸಿದ ಘಟನೆಯೂ ನಡೆದಿದೆ.

    ಬಳ್ಳಾರಿಯ ಕಾಸ್ಮೋಪಾಲಿಟಿನ್ ಕ್ಲಬ್ ಬಳಿ ಕಳೆದ ರಾತ್ರಿ ಡಿವೈಎಸ್‍ಪಿಯೊಬ್ಬರ ಪುತ್ರಿಯ ಕೆಎ34ಎಕ್ಸ್4601 ನೋಂದಣಿ ಸಂಖ್ಯೆ ಹೊಂದಿರುವ ಸ್ಕೂಟಿ ನಿಯಂತ್ರಣ ಕಳೆದುಕೊಂಡು ಬಾಷಾ ಎಂಬಾತನಿಗೆ ಡಿಕ್ಕಿ ಹೊಡೆದಿದೆ. ಈ ವಿಚಾರ ತಿಳಿದ ತಕ್ಷಣವೇ ಪತ್ರಕರ್ತರು ಸ್ಥಳಕ್ಕೆ ತೆರಳಿ ದೃಶ್ಯಗಳನ್ನು ಸೆರೆಹಿಡಿಯಲು ಮುಂದಾದ್ರು. ಈ ವೇಳೆ ಗಾಯಾಳುವನ್ನು ಪೊಲೀಸರು ತರಾತುರಿಯಲ್ಲಿ ಆಟೋದಲ್ಲಿ ಕರೆದೊಯ್ದರು. ಪತ್ರಕರ್ತರ ಮೊಬೈಲ್‍ಗಳನ್ನು ಕಸಿದು ಸೆರೆಯಾದ ದೃಶ್ಯಗಳನ್ನು ಡಿಲೀಟ್ ಮಾಡಲು ಯತ್ನಿಸಿದ್ರು. ಮಾತ್ರವಲ್ಲದೇ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ರು.

    ಪೊಲೀಸರ ಈ ದೌರ್ಜನ್ಯವನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದ ಪೊಲೀಸರು ಮೊಬೈಲ್ ಕಸಿದು ದೃಶ್ಯಗಳನ್ನ ಬಲವಂತವಾಗಿ ಡಿಲೀಟ್ ಮಾಡಿದ್ರು. ಒಮ್ಮೆ ತಾನು ಜೀನ್ಸ್ ಕಾರ್ಖಾನೆಯ ಕಾರ್ಮಿಕ ಎನ್ನುವ ಗಾಯಾಳು ಮತ್ತೊಮ್ಮೆ ಡಿವೈಎಸ್‍ಪಿ ಮನೆಯಲ್ಲಿ ಕೆಲಸಕ್ಕಿರೋದಾಗಿ ಹೇಳ್ತಿದ್ದಾನೆ. ಇದೀಗ ಈತನ ಹೇಳಿಕೆಗಳು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

  • ಹೆಂಡತಿ, ಮಗಳ ಮೇಲೆ ಕೊಡಲಿಯಿಂದ ಹಲ್ಲೆಗೈದ ಕ್ರೂರಿ ತಂದೆ!

    ಹೆಂಡತಿ, ಮಗಳ ಮೇಲೆ ಕೊಡಲಿಯಿಂದ ಹಲ್ಲೆಗೈದ ಕ್ರೂರಿ ತಂದೆ!

    ಹುಬ್ಬಳ್ಳಿ: ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿ ಹಾಗೂ ಕರುಳಿನ ಬಳ್ಳಿಯನ್ನು ಕೊಡಲಿಯಿಂದ ಹೊಡೆದು ಕ್ರೂರತೆ ಪ್ರದರ್ಶನ ಮಾಡಿದ್ದಾನೆ. ತನ್ನ ಒಂದು ವರ್ಷದ ಮಗುವಿನ ತಲೆಗೆ ಕೊಡಲಿಯಿಂದ ಹೊಡೆದು ಮಗು ಮತ್ತು ತಾಯಿ ಇಬ್ಬರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ತಾಯಿ ಹಾಗೂ ಮಗು ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.

    ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದ ನಿವಾಸಿ ಹನುಮಂತಪ್ಪ ಕೊಪ್ಪದ ಪತ್ನಿ ಹಾಗು ಮಗಳ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಹನುಮಂತಪ್ಪ ನಾಲ್ಕು ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಬಂಟೂರು ಗ್ರಾಮದ ನಿವಾಸಿ ಅನ್ನಪೂರ್ಣ ಅವರನ್ನು ವಿವಾಹವಾಗಿದ್ದನು. ಇವರಿಗೆ ಮುದ್ದಾದ ಹೆಣ್ಣು ಮಗು ಸಹ ಇದೆ. ಮದುವೆಯ ನಂತರ ಹನುಮಂತಪ್ಪ ಹೆಂಡತಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದರು. ಶನಿವಾರ ರಾತ್ರಿ ಕುಡಿದು ಬಂದು ಹೆಂಡತಿ ಹಾಗು ಮಗುವಿನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.

    ಅನ್ನಪೂರ್ಣ ಅವರ ತಲೆಗೆ ಮತ್ತು ಮಗುವಿನ ಮುಖಕ್ಕೆ ಗಂಭೀರವಾದ ಗಾಯಗಳಾಗಿವೆ. ಗ್ರಾಮಸ್ಥರು ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯ ಬಳಿಕ ಹನುಮಂತಪ್ಪ ನಾಪತ್ತೆಯಾಗಿದ್ದಾನೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹನುಮಂತಪ್ಪನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

     

  • ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!

    ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!

    ಬೆಳಗಾವಿ: ಬಾರ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಪಿಎಸ್‍ಐ ಮನಬಂದಂತೆ ಹಲ್ಲೆ ನಡೆಸಿ ದರ್ಪ ಮೆರೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಾಮೂಲಿಯನ್ನು ನೀಡಲಿಲ್ಲ ಎಂಬ ಹಳೇ ದ್ವೇಷದ ಹಿನ್ನೆಲೆಯಲ್ಲಿ ಪೊಲೀಸರು ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬೆಳಗಾವಿ ಜಿಲ್ಲೆಯ ರಾಯಭಾಗ್ ತಾಲೂಕಿನ ಕುಡಚಿ ಠಾಣೆ ಪೊಲೀಸರ ಗೂಂಡಾ ವರ್ತನೆ ತಡವಾಗಿ ಬೆಳಕಿಗೆ ಬಂದಿದೆ. ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪಿಎಸ್‍ಐ ಹೆಸರು ಶಿವಶಂಕರ ಮುಕರಿ. ಮಾರ್ಚ್ 13 ರಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಅಂದು ರಾತ್ರಿ ಕುಡುಚಿಯ ಶಿವಶಕ್ತಿ ಬಾರ್‍ಗೆ ನುಗ್ಗಿದ ಪಿಎಸ್‍ಐ ಶಿವಶಂಕರ ಹಾಗು ಪೇದೆಗಳಾದ ಪೂಜೇರಿ, ಎಚ್.ಡಿ.ಬೋಜನ್ನವರ ಅಧಿಕಾರಿಗಳು ಬಾರ್ ಸಿಬ್ಬಂದಿ ಅಜಿತ್ ಹಳಿಂಗಳೆಯ ಹೊಟ್ಟೆ ಮತ್ತು ಮರ್ಮಾಂಗಕ್ಕೆ ಯದ್ವಾತದ್ವ ಒದ್ದು ಸ್ಟೀಲ್ ರಾಡ್ ನಿಂದ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆಗಿದ್ದೇನು?: ಮಾರ್ಚ್ 13 ರಂದು ರೆಸ್ಟೋರೆಂಟ್‍ಗೆ ಬಂದ ಶಿವಶಂಕರ ಹಾಗು ಪೇದೆಗಳು ಮದ್ಯದ ಬಾಟಲಿಗಳು ನೀಡುವಂತೆ ಕೇಳಿದ್ದಾರೆ. ಬಾರ್ ಸಿಬ್ಬಂದಿ ಇಂದು ಮದ್ಯ ಮಾರಾಟಕ್ಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಬಾರ್ ಬಂದ್ ಮಾಡಿದ್ದು, ಕೇವಲ ರೆಸ್ಟೋರೆಂಟ್ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸರು ಬಾರ್ ಸಿಬ್ಬಂದಿ ಅಜೀತ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕ ಶಿವರಾಜ್

    ಪಿಎಸ್‍ಐ ಶಿವಶಂಕರ್ ಅವರಿಗೆ ಪ್ರತಿತಿಂಗಳು ಮಾಮೂಲಿ ನೀಡಬೇಕು. ನಾವು ಪ್ರತಿ ತಿಂಗಳು ಮಾಮೂಲಿ ನೀಡದಕ್ಕೆ ಶಿವಶಂಕರ ನಮ್ಮ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಪ್ರತಿ ಬಾರಿ ಮದ್ಯ ಮತ್ತು ಸೋಡಾವನ್ನು ಪುಕ್ಕಟೆಯಾಗಿ ನೀಡಬೇಕು ಎಂದು ಶಿವಶಕ್ತಿ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕ ಶಿವರಾಜ್ ಆರೋಪಿಸಿದ್ದಾರೆ.

    ಪೊಲೀಸರಿಂದ ಹಲ್ಲೆಗೊಳಗಾದ ಅಜೀತ್

    ಪೊಲೀಸರಿಂದ ಹಲ್ಲೆಗೊಳಗಾದ ಅಜೀತ್ ರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಅವರು ಪ್ರಕರಣದ ತನಿಖೆಯನ್ನು ಜಿಲ್ಲಾ ಅಪರಾಧ ತಡೆ ಡಿಎಸ್‍ಪಿ ನಾಗರಾಜ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲು ಆದೇಶಿಸಿದ್ದಾರೆ.

    https://www.youtube.com/watch?v=jTySUe5I_j4

     

  • ಟೈರ್ ಸ್ಫೋಟಗೊಂಡು ಟೆಂಫೋ ಟ್ರಾವೆಲರ್ ಪಲ್ಟಿ- 12 ಜನರಿಗೆ ಗಂಭೀರ ಗಾಯ

    ಟೈರ್ ಸ್ಫೋಟಗೊಂಡು ಟೆಂಫೋ ಟ್ರಾವೆಲರ್ ಪಲ್ಟಿ- 12 ಜನರಿಗೆ ಗಂಭೀರ ಗಾಯ

    ತುಮಕೂರು: ಟೈರ್ ಸ್ಫೋಟಗೊಂಡ ಪರಿಣಾಮ ಟೆಂಪೋ ಟ್ರಾವೆಲರ್ ಪಲ್ಟಿ ಹೊಡೆದಿದ್ದು, 12 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರೇಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

    ಬೀರೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್‍ನ ಟೈರ್ ಬಿಸಿಲಿನಿಂದಾಗಿ ಸ್ಫೋಟಗೊಂಡಿದೆ. ಇದರ ಪರಿಣಾಮ ಟೆಂಪೋ ಪಲ್ಟಿಯಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಘಟನೆಯಲ್ಲಿ ಗಾಯಗೊಂಡವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಹೆದ್ದಾರಿಯಲ್ಲಿದ್ದ ಟೆಂಪೋ ತೆರವು ಮಾಡುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಆಟೋಗಳಿಗೆ ಲಾರಿ ಡಿಕ್ಕಿಯಾಗಿ 12 ಮಂದಿ ಸ್ಥಳದಲ್ಲೇ ಸಾವು

     

  • ವಾಟ್ಸಪ್‍ನಲ್ಲೇ ವೇಶ್ಯಾವಾಟಿಕೆ -ಫೋಟೋ ಕಳಿಸಿ, ಅಲ್ಲೇ ಡೀಲ್ ಮಾಡ್ತಾರೆ!

    ವಾಟ್ಸಪ್‍ನಲ್ಲೇ ವೇಶ್ಯಾವಾಟಿಕೆ -ಫೋಟೋ ಕಳಿಸಿ, ಅಲ್ಲೇ ಡೀಲ್ ಮಾಡ್ತಾರೆ!

    ಕೊಪ್ಪಳ: ಈವರೆಗೆ ಮುಂಬೈ, ಹುಬ್ಬಳ್ಳಿ, ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಇದೀಗ ಸಣ್ಣ ಸಣ್ಣ ನಗರಗಳಿಗೂ ಕಾಲಿಟ್ಟಿದೆ. ವಾಟ್ಸಾಪ್ ಮೂಲಕ ಹುಡುಗಿಯರ ಫೋಟೋ ಕಳುಹಿಸಿ, ರೇಟ್ ಬಗೆಹರಿಸುವ ದಂದೆ ಸದ್ದಿಲ್ಲದೇ ಕೊಪ್ಪಳ ನಗರದಲ್ಲಿ ನಡೆದಿದೆ.

    ವೇಶ್ಯಾವಾಟಿಕೆ ದಂಧೆ ಬಗ್ಗೆ ಅರಿತ ಕೆಲ ಸ್ಥಳೀಯರು ಯುವತಿಯರು ಮತ್ತು ಮಧ್ಯ ವರ್ತಿಗಳನ್ನು ಥಳಿಸಿ ಮನೆ ಬಿಡಿಸಿದ್ದಾರೆ. ಕೊಪ್ಪಳ ಸಮೀಪದ ಭಾಗ್ಯನಗರ ಎಂಬ ಗ್ರಾಮದಲ್ಲಿ ಕುಣಿಕೇರಿ ಗ್ರಾಮದ ಇಬ್ಬರು ಯುವಕರು ಮನೆ ಬಾಡಿಗೆಗೆ ಪಡೆದು ಹೊರ ರಾಜ್ಯದ ಮಹಿಳೆಯರನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಪ್ರತಿ ವಾರಕ್ಕೆ ಇಬ್ಬರು ಯುವತಿಯರು ಇಲ್ಲಿಗೆ ಬಂದು ಹೋಗುತ್ತಿದ್ದರ. ಬರುವ ಮೊದಲ ದಿನ ಅವರ ಫೋಟೋಗಳನ್ನು ಗಿರಾಕಿಗಳಿಗೆ ಕಳುಹಿಸಿ, ಮುಂಗಡ ಬುಕ್ ಮಾಡಲಾಗುತ್ತಿತ್ತು.

    ಭಾಗ್ಯನಗರ ಗ್ರಾಮದಲ್ಲಿ ಕಳೆದ 15 ದಿನದಿಂದ ಕುಣಿಕೇರಿ ಯುವಕರು ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿಗೆ ಬಂದು ಹೋಗುವ ಯುವತಿಯರು ಮತ್ತು ಜನರ ಕುರಿತು ಸ್ಥಳೀಯರಿಗೆ ಅನುಮಾನ ಬಂದಿದ್ದು, ಇಲ್ಲಿ ನಡೆಯುತ್ತಿರುವ ದಂಧೆಯನ್ನು ಖಚಿತಪಡಿಸಿಕೊಂಡು ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಥಳಿಸಿ ಮನೆ ಬಿಡಿಸಿ ಓಡಿಸಿದ್ದಾರೆ.

     

  • ಮಂಗಳೂರಿನಲ್ಲಿ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಹತ್ಯೆಗೆ ಸಂಚು?

    ಮಂಗಳೂರಿನಲ್ಲಿ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಹತ್ಯೆಗೆ ಸಂಚು?

    ಮಂಗಳೂರು: ಬುಧವಾರ ನಗರದಲ್ಲಿ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಅವರ ಕೊಲೆಗೆ ಯತ್ನ ನಡೆದಿದೆ.

    ಬೆಳಗ್ಗೆ 6 ಗಂಟೆಯ ವೇಳೆ ಲೇಡಿಹಿಲ್ ಬಳಿ ಕಾರಿನಲ್ಲಿ ನರೇಂದ್ರನಾಯಕ್ ತೆರಳುತ್ತಿದ್ದ ಸಂದರ್ಭ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಿಮ್ಮ ಕಾರಿನ ಟಯರ್ ಪಂಚರ್ ಆಗಿದೆ ಕಾರು ನಿಲ್ಲಿಸಿ ಎಂದಿದ್ದರು. ಆದರೆ ತಕ್ಷಣಕ್ಕೆ ಎಚ್ಚೆತ್ತುಕೊಂಡ ನರೇಂದ್ರ ನಾಯಕ್ ಕಾರಿನ ವೇಗವನ್ನು ಜಾಸ್ತಿ ಮಾಡಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದಾರೆ.

    ನರೇಶ್ ಶೆಣೈ ಮೇಲೆ ಆರೋಪ: ಮಂಗಳೂರಿನಲ್ಲಿ ಕೊಡಿಯಾಲ್‍ಬೈಲ್‍ನಲ್ಲಿ ಕಳೆದ ಮಾರ್ಚ್ 21 ರಂದು ಆರ್‍ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗರನ್ನು ಬರ್ಬರವಾಗಿ ಕಡಿದು ಹತ್ಯೆ ನಡೆಸಲಾಗಿತ್ತು. ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಈ ಹತ್ಯೆಯನ್ನು ಮಾಡಿಸಿದ್ದು ಆರೋಪಿಸಿ ಬಾಳಿಗ ಕುಟುಂಬದ ಪರವಾಗಿ ಪ್ರೊ.ನರೇಂದ್ರ ನಾಯಕ್ ಹೋರಾಟಗಳನ್ನು ನಡೆಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿ ಈಗ ಜಾಮೀನಿನ ಮೇಲೆ ಹೊರ ಬಂದಿರುವ ನರೇಶ್ ಶೆಣೈ ತನ್ನ ಸಹಚರ ಶಿವ ಎಂಬಾತನಿಂದ ತನ್ನ ಹತ್ಯೆಗೆ ಸಂಚು ರೂಪಿಸಿದ್ದಾನೆಂದು ನರೇಂದ್ರ ನಾಯಕ್ ಈಗ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕೊಲೆ ಬೆದರಿಕೆಯ ಪೊಲೀಸ್ ಇಲಾಖೆಯಿಂದ ಗನ್‍ಮ್ಯಾನ್ ಇದೆಯಾದರೂ ನಿನ್ನೆ ಗನ್‍ಮ್ಯಾನ್ ಇಲ್ಲದೇ ನಾನೊಬ್ಬನೇ ಕಾರಿನಲ್ಲಿ ಸಂಚರಿಸುತ್ತಿದ್ದೆ.ಇದನ್ನೇ ಗುರಿಯಾಗಿಸಿ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ನರೇಂದ್ರ ನಾಯಕ್ ಆರೋಪಿಸಿದ್ದಾರೆ.

    ಮಾರ್ಚ್ 21ಕ್ಕೆ ವಿನಾಯಕ್ ಬಾಳಿಗಾ ಹತ್ಯೆಯಾಗಿ ಒಂದು ವರ್ಷವಾಗಲಿದ್ದು ನಾವು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೇವೆ. ಈ ಸಂಬಂಧ ಬಾಳಿಗಾ ಹತ್ಯೆಯಾಗಿ ಒಂದು ವರ್ಷದ ಒಳಗಡೆ ನನ್ನನ್ನು ಹತ್ಯೆ ನಡೆಸಲು ದುಷ್ಕರ್ಮಿಗಳು ಮುಂದಾಗಿದ್ದರು ಎಂದು ಅವರು ಆರೋಪಿಸಿದ್ದಾರೆ. ಪ್ರಕರಣ ಈಗ ಸಿಸಿಬಿ ಪೊಲೀಸರಿಗೆ ವರ್ಗಾವಣೆಯಾಗಿದೆ.

  • 36 ವರ್ಷದ ಬಳಿಕ ಮಂಡ್ಯ ಪೊಲೀಸರಿಂದ ದಂಡುಪಾಳ್ಯ ಗ್ಯಾಂಗ್‍ನಲ್ಲಿದ್ದ ಕಳ್ಳ ಅರೆಸ್ಟ್!

    36 ವರ್ಷದ ಬಳಿಕ ಮಂಡ್ಯ ಪೊಲೀಸರಿಂದ ದಂಡುಪಾಳ್ಯ ಗ್ಯಾಂಗ್‍ನಲ್ಲಿದ್ದ ಕಳ್ಳ ಅರೆಸ್ಟ್!

    ಮಂಡ್ಯ: ದಂಡುಪಾಳ್ಯ ಗ್ಯಾಂಗ್‍ನಲ್ಲಿ ಗುರುತಿಸಿಕೊಂಡಿದ್ದ ಓರ್ವ ಸೇರಿದಂತೆ ಇಬ್ಬರು ಕಳ್ಳರನ್ನು 36 ವರ್ಷದ ಬಳಿಕ ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾಗಡಿ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ದೊಡ್ಡಮುನಿಯ ಮತ್ತು ಚಿಕ್ಕಮುನಿಯ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ಅಣ್ಣ-ತಮ್ಮಂದಿರಾಗಿದ್ದು, 1981ರಲ್ಲಿ ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಒಂದು ಮತ್ತು 1984ರಲ್ಲಿ ನಾಗಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇವರ ವಿರುದ್ಧ ರಾಜ್ಯದ ವಿವಿಧ ಠಾಣೆಯಲ್ಲಿ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಬಂಧಿತರ ಪೈಕಿ ದೊಡ್ಡಮುನಿಯ ಕುಖ್ಯಾತ ದಂಡುಪಾಳ್ಯದ ತಂಡದಲ್ಲಿ ಗುರುತಿಸಿಕೊಂಡಿದ್ದ.

    ಸುಮಾರು ವರ್ಷ ತಲೆಮರೆಸಿಕೊಂಡಿದ್ದ ಈ ಇಬ್ಬರು ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಮಾರ್ಚ್ 6ರಂದು ಮಾಗಡಿ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಬಂಧಿಸಲಾಗಿದೆ. ನಾಗಮಂಗಲ ಸಿಪಿಐ ಹರೀಶ್ ಬಾಬು, ಎಎಸೈ ರವಿ, ಮುಖ್ಯಪೇದೆ ಸೋಮಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

    ಬಂಧನದ ಬಳಿಕ ಆರೋಪಿಗಳನ್ನ ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಂಧಿತ ಆರೋಪಿಗಳು ಕೇವಲ ಕಳ್ಳತನದಲ್ಲಷ್ಟೇ ಭಾಗಿಯಾಗಿದ್ದಾರೆಯೇ ಅಥವಾ ಬೇರೆ ಪ್ರಕರಣದಲ್ಲಿ ಇದ್ದಾರೆಯೇ ಎಂಬುದು ವಿಚಾರಣೆ ಬಳಿಕವಷ್ಟೇ ತಿಳಿಯಬೇಕಿದೆ.