Tag: police

  • ಡಿಜಿಗೆ ಮನವಿ ಪತ್ರ ಕೊಟ್ಟು ಸಿಕ್ಕಿಬಿದ್ದ ಅಗ್ನಿ ಶ್ರೀಧರ್?

    ಡಿಜಿಗೆ ಮನವಿ ಪತ್ರ ಕೊಟ್ಟು ಸಿಕ್ಕಿಬಿದ್ದ ಅಗ್ನಿ ಶ್ರೀಧರ್?

    ಬೆಂಗಳೂರು:`ಹಲವು ಕಾರಣಗಳಿಂದಾಗಿ 1981 ರಿಂದ 1998ರ ಅವಧಿಯವರೆಗೂ ನಾನು ಭೂಗತ ಜಗತ್ತಿನಲ್ಲಿ ಇದ್ದೆ. 1986ರಲ್ಲಿ ನಡೆದ ಕುಖ್ಯಾತ ಭೂಗತ ಪಾತಕಿ ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೆ. ತುಂಡರಿಸದ ಸರಪಣಿ ರೀತಿ ಹತ್ತು ಹಲವು ಘಟನಾವಳಿಗಳ ನಡೆದು ಹೋದ ಕಾರಣ ನಾನು 13 ವರ್ಷ ಭೂಗತ ಪ್ರಪಂಚದಲ್ಲಿ ಇದ್ದೆ’ ಎಂದು ಅಗ್ನಿ ಶ್ರೀಧರ್ ಡಿಜಿಪಿ ಆರ್‍ಕೆ ದತ್ತಾಗೆ ಸಲ್ಲಿಸಿರುವ ಮನವಿಯೇ ಈಗ ಆತನಿಗೆ ಉರುಳಾಗುವ ಸಾಧ್ಯತೆಯಿದೆ.

    ಹೌದು.ಭೂಗತ ಜಗತ್ತಿನ ದಿನಗಳ ಬಗ್ಗೆ ವಿವರಣೆ ಇರುವ ಮನವಿ ಪತ್ರವನ್ನು ಡಿಜಿಪಿಗೆ ಅಗ್ನಿ ಶ್ರೀಧರ್ ಕೊಟ್ಟಿದ್ದ. ಕೊತ್ವಾಲ್ ಮರ್ಡರ್ ಕೇಸ್‍ನಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವ ಅಂಶವನ್ನು ಅಗ್ನಿ ಶ್ರೀಧರ್ ಈ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದ. ಈ ಅಂಶವನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಮತ್ತೆ ಈ ಕೊಲೆ ಕೇಸಿಗೆ ಮರು ಜೀವ ನೀಡಲು ಬೆಂಗಳೂರು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.ಇವತ್ತು ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಅಗ್ನಿಶ್ರೀಧರ್ ಮನವಿ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಅಂಥ ಹೇಳಿದ್ದಾರೆ.

    ಇದನ್ನೂ ಓದಿ: Exclusive : ಅಗ್ನಿ ಶ್ರೀಧರ್ ರಕ್ಷಣೆ ಮುಂದಾಗಿದ್ದ ಸರ್ಕಾರದ ಪ್ರಭಾವಿ ಸಚಿವ

    ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ದರ್ಪ ತೋರಿಸಿ ನನ್ನ ಮೇಲೆ ಸುಳ್ಳು ಆರೋಪ ದಾಖಲಿಸಿದ್ದಾರೆ. ಆದರೆ ನಾನು ಈಗ ಭೂಗತ ಜಗತ್ತಿನಿಂದ ಹೊರ ಬಂದಿದ್ದೇನೆ. ಈ ಪ್ರಕರಣದಲ್ಲಿ ನಾನು ವಿಲನ್ ಅಲ್ಲ. ನಿಂಬಾಳ್ಕರ್ ನನಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಅಗ್ನಿ ಶ್ರೀಧರ್ ಮನವಿ ಮಾಡಿದ್ದ.

    ಏನಿದು ಕೊತ್ವಾಲ್ ಮರ್ಡರ್ ಕೇಸ್?
    80ರ ದಶಕದಲ್ಲಿ ಕೊತ್ವಾಲ್ ರಾಮಚಂದ್ರಪ್ಪ ಬೆಂಗಳೂರಿನ ಅಂಡರ್ ವಲ್ರ್ಡ್ ಡಾನ್ ಆಗಿದ್ದ. 1986ರ ಮಾರ್ಚ್ 22 ರಂದು ಕುಣಿಗಲ್ ಸಮೀಪ ತೋಟದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದರು. ಈ ಕೊಲೆ ಪ್ರಕರಣದಲ್ಲಿ ಜೈರಾಜ್, ಸೀತಾರಾಮ್ ಶೆಟ್ಟಿ, ಶ್ರೀಧರ್‍ಮೂರ್ತಿ ಅಲಿಯಾಸ್ ಅಗ್ನಿಶ್ರೀಧರ್ ಸೇರಿದಂತೆ ಅನೇಕರನ್ನು ಆರೋಪಿಗಳನ್ನಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

    ಕೋರ್ಟ್‍ನಲ್ಲಿ ಖುಲಾಸೆ :
    ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಬಂದಿದ್ದವರು ಹೆದರಿಕೊಂಡು ಹೋಗಿದ್ದರಂತೆ. ಸಾಕ್ಷ್ಯಗಳ ಕೊರತೆಯಿಂದಾಗಿ ಕೊತ್ವಾಲ್ ಕೊಲೆ ಪ್ರಕರಣದಲ್ಲಿದ್ದ ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಈಗ ಅಗ್ನಿ ಶ್ರೀಧರ್ ಕೊತ್ವಾಲ್ ಕೊಲೆ ಕೇಸ್‍ನಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಹಿ ಹಾಕಿರುವ ಪತ್ರವನ್ನು ಡಿಜಿಗೆ ನೀಡಿದ್ದು ಈ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.

    ದಾಳಿಯಾಗಿದ್ದು ಯಾಕೆ?
    ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ಸ್‍ಗೆ ಆಶ್ರಯ ನೀಡಿದ್ದ ಮಾಹಿತಿ ಮೇರೆಗೆ ಇತ್ತೀಚೆಗೆ ಪೊಲೀಸರು ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ವಿದೇಶಿ ಮದ್ಯ ದೊರಕಿತ್ತು. ದಾಳಿ ನಡೆದಾಗ ಅತಿಯಾದ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರಿಂದ ಅಗ್ನಿ ಶ್ರೀಧರ್ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಶ್ರೀಧರ್ ಆಪ್ತ, ಬಲಗೈ ಬಂಟ ಬಚ್ಚನ್ ಸೇರಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

    ಸಾಗರ್ ಆಸ್ಪತ್ರೆಯ ಸ್ಪೆಶಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಧರ್, ಬಂಧನದ ಭೀತಿ ಹಿನ್ನೆಲೆಯಲ್ಲಿ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿತ್ತು.

    https://www.youtube.com/watch?v=ZhUvTr8EtIk

    ಕೊತ್ವಾಲ್ ರಾಮಚಂದ್ರ
  • ಕಾಂಪೌಂಡ್ ಜಿಗಿಯಲು ಹೋಗಿ ಗೋಡೆಯ ಸರಳುಗಳಿಗೆ ಸಿಕ್ಕಿ ಯುವಕ ಸಾವು

    ಕಾಂಪೌಂಡ್ ಜಿಗಿಯಲು ಹೋಗಿ ಗೋಡೆಯ ಸರಳುಗಳಿಗೆ ಸಿಕ್ಕಿ ಯುವಕ ಸಾವು

    ಬಳ್ಳಾರಿ: ಮಾನಸಿಕ ಅಸ್ವಸ್ಥನೊಬ್ಬ ಕಂಪೌಂಡ್ ಜಿಗಿಯಲು ಹೋಗಿ ಗೋಡೆಯ ಕಬ್ಬಿಣದ ಸರಳುಗಳಿಗೆ ತಲೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ.

    ಬಳ್ಳಾರಿಯ ಎಸ್‍ಬಿಐ ಬ್ಯಾಂಕ್‍ನ ಮುಂಭಾಗದ ಕಾಂಪೌಂಡ್ ಜಿಗಿಯಲು ಹೋದಾಗ ಸರಳುಗಳ ಮಧ್ಯೆ ತಲೆ ಸಿಲುಕಿಕೊಂಡ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥ ತನ್ನ ಹುಚ್ಚಾಟದಿಂದಲೇ ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಸಾವನ್ನಪ್ಪಿದ ಯುವಕನ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

    ಸ್ಥಳಕ್ಕೆ ಬ್ರೂಸ್ ಪೇಟೆಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ ಶವವನ್ನು ಪಂಚನಾಮೆಗೆ ಕಳುಹಿಸಿದ್ದಾರೆ. ಈ ಕುರಿತು ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ವಿಡಿಯೋ: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಎದುರೇ ಇತ್ತಂಡಗಳ ಹೊಡೆದಾಟ

    ವಿಡಿಯೋ: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಎದುರೇ ಇತ್ತಂಡಗಳ ಹೊಡೆದಾಟ

    ಕೋಲಾರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಎದುರೇ ಇತ್ತಂಡಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ದೃಶ್ಯಗಳು ಜಿಲ್ಲಾಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ನಗರದ ಶೇನ್ ಷಾ ಬಡವಾಣೆಯಲ್ಲಿ ಉರುಸ್ ಮೆರವಣಿಗೆ ವೇಳೆ ಏಜಾಜ್ ಅಹಮದ್ ಮತ್ತು ವಸೀಮ್ ಗುಂಪುಗಳ ನಡುವೆ ಗಲಾಟೆ ಉಂಟಾಗಿತ್ತು. ಎರಡು ಗುಂಪುಗಳು ಒಬ್ಬರ ಮೇಲೊಬ್ಬರು ಬ್ಲೇಡ್ ಮತ್ತು ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದರು. ಗಲಾಟೆಯಲ್ಲಿ ಏಜಾಜ್ ಅಹಮದ್ ಗುಂಪಿನ 6 ಜನರು ಗಂಭೀರವಾಗಿ ಗಾಯಗಳಾಗಿತ್ತು.

    ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡುತ್ತಿದ್ದಂತೆ ತುರ್ತು ನಿಗಾ ಘಟಕದಲ್ಲಿ ಸ್ಥಳದಲ್ಲಿಯೇ ಪೊಲೀಸರು ಇದ್ದರೂ ಎರಡು ಗುಂಪುಗಳ ಸದಸ್ಯರು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿಕೊಳ್ಳಲು ಮುಂದಾಗಿದ್ದರು. ಇದರಿಂದ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಮತ್ತು ರೋಗಿಗಳಲ್ಲಿ ಭಯದ ವಾತವಾರಣ ನಿರ್ಮಾಣವಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಾಮಿಸಿದ ನಗರ ಠಾಣಾ ಪಿಎಸ್‍ಐ ಪ್ರದೀಪ್ ವಾಸೀಂ ಗುಂಪಿನ 8 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=EnSV5WDKu1M

     

  • ನಾಲ್ವರಿಂದ ಬರೋಬ್ಬರಿ 5 ಕೋಟಿ ರೂ. ಹಳೆ ನೋಟು ವಶ

    ನಾಲ್ವರಿಂದ ಬರೋಬ್ಬರಿ 5 ಕೋಟಿ ರೂ. ಹಳೆ ನೋಟು ವಶ

    ಬೆಂಗಳೂರು: ನೋಟ್ ಬ್ಯಾನ್ ಆದ ಬಳಿಕ ಕೋಟಿ ಕೋಟಿ ಹಣ ಮಾಡಿಕೊಂಡಿದ್ದ ಕಪ್ಪು ಕುಳಗಳನ್ನು ಸದ್ದಿಲ್ಲದೆ ಐಟಿ ಅಧಿಕಾರಿಗಳು ಹಿಡಿದ ಬಳಿಕ ಬ್ಲ್ಯಾಕ್ ಆಂಡ್ ವೈಟ್ ಮನಿ ದಂಧೆ ತಣ್ಣಗೆ ಆಗಿತ್ತು. ಆದರೆ ಈಗ ಮತ್ತೆ ಈ ದಂಧೆ ಶುರುವಾಗಿದ್ದು ಈಗ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಹಳೆ ನೋಟು ಸಿಕ್ಕಿದೆ.

    ಕಳೆದ ಒಂದು ವಾರದಿಂದ 10 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಸಿಕ್ಕಿದ್ದು ಈಗ ಮತ್ತೆ 5 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶ ಪಡಿಸಿಕೊಂಡು ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಅಂಬ್ರೋಸ್, ಆರೀಫ್ ಪಾಷ, ಫೇಲಿಕ್ಸ್ ಮತ್ತು ನಂಜುಂಡ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಪೈಕಿ ನಂಜುಂಡ ವೆಸ್ಟ್ ಆಫ್ ಕಾರ್ಡ್ ರೋಡ್‍ನ ಬಳಿಯ ಶಿವಾಲಿ ಲಾಡ್ಜ್ ಒಂದರಲ್ಲಿ ಹಣ ಬದಲಾವಣೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈತನೊಬ್ಬನಿಂದಲೇ 3 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಸಿಕ್ಕಿವೆ.

    ಅಂಬ್ರೋಸ್, ಆರೀಫ್ ಪಾಷ, ಫೇಲಿಕ್ಸ್ ಬೇರೊಂದು ಗ್ಯಾಂಗ್‍ನಲ್ಲಿ ಹಣ ಬದಲಾವಣೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಈ ಗ್ಯಾಂಗ್‍ನಲ್ಲಿ 2 ಕೋಟಿ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ.

    ಇದನ್ನೂ ಓದಿ: ನಿಷೇಧವಾಗಿದ್ದ ನೋಟುಗಳು ನಿಮ್ಮಲ್ಲಿದ್ದರೆ ದಂಡ ಕಟ್ಟಲು ರೆಡಿಯಾಗಿ!  ದಂಡ  ಎಷ್ಟು?

  • ಬೀದಿಯಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೀದಿಯಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೆಳಗಾವಿ: ಕಾಮುಕನೊಬ್ಬ ಬೀದಿಯಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಈ ನೀಚ ಕೃತ್ಯ ಎಸಗಿದಾತನನ್ನು ಹಣಮಂತ ಹಡಪದ ಎಂದು ಗುರುತಿಸಲಾಗಿದೆ. ಈತ ಸವದತ್ತಿ ಪಟ್ಟಣದಲ್ಲಿ ತಡರಾತ್ರಿ ರಸ್ತೆಯ ಬದಿಯಲ್ಲಿ ಮಲಗಿದ್ದ ಯುವತಿ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಈತನ ನೀಚ ಕೃತ್ಯವನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ಸಂಬಂಧ ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವತಿಯನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ವಿಶ್ವದ ವೇಗದ ಕಾರಿನಲ್ಲಿ ದುಬೈ ಪೊಲೀಸರ ಪ್ಯಾಟ್ರೋಲಿಂಗ್!

    ವಿಶ್ವದ ವೇಗದ ಕಾರಿನಲ್ಲಿ ದುಬೈ ಪೊಲೀಸರ ಪ್ಯಾಟ್ರೋಲಿಂಗ್!

    – ದುಬೈ ಪೊಲೀಸರಿಂದ ಬುಗಾಟಿ ವೇಯ್ರಾನ್ ಕಾರು ಖರೀದಿ
    – ಗಂಟೆಗೆ 407 ಕಿಮೀ ಕ್ರಮಿಸಬಲ್ಲ ಸಾಮರ್ಥ್ಯದ ಕಾರು

    ದುಬೈ: ವಿಶ್ವದ ಅತ್ಯಂತ ಎತ್ತರ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದುಬೈ ನಗರ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ವಿಶ್ವದಲ್ಲೇ ವೇಗದ ಕಾರನ್ನು ಹೊಂದುವ ಮೂಲಕ ದುಬೈ ಪೊಲೀಸರು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದ್ದಾರೆ.

    ದುಬೈ ಪೊಲೀಸರ ಬಳಿ ಈಗ ದುಬಾರಿ ಲಕ್ಷುರಿ ಬುಗಾಟಿ ವೇಯ್ರಾನ್ ಕಾರುಗಳು ಇದೆ. ಗಂಟೆಗೆ 407 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ರುವ ಈ ಕಾರನ್ನು 2016ರ ಏಪ್ರಿಲ್‍ನಲ್ಲಿ ದುಬೈ ಪೊಲೀಸರು ಖರೀದಿಸಿದ್ದರು.

    ಒಂದು ಬುಗಾಟಿ ವೇಯ್ರಾನ್ ಕಾರಿಗೆ 10.5 ಕೋಟಿ ರೂ. ಬೆಲೆ ಇದ್ದು, 1 ಸಾವಿರ ಅಶ್ವಶಕ್ತಿಯ 16 ಸಿಲಿಂಡರ್ ಎಂಜಿನ್ ಹೊಂದಿದೆ. 0 ಯಿಂದ 97 ಕಿ.ಮೀ ವೇಗವನ್ನು ಕೇವಲ 2.5 ಸೆಕೆಂಡ್‍ನಲ್ಲಿ ತಲುಪುವ ಸಾಮರ್ಥ್ಯ ಈ ಬುಗಾಟಿ ಕಾರಿಗೆ ಇದೆ.

    ಗಿನ್ನಿಸ್ ದಾಖಲೆ ವೆಬ್‍ಸೈಟ್ ಪ್ರಕಾರ ಬುಗಾಟಿ ವೇಯ್ರಾನ್ ಕಾರು ವೇಗದ ಕಾರುಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಹೆನ್ನೆಸ್ಸಿ ವೆನೂಮ್ ಜಿಟಿ ಇದ್ದು, ಇದು ಗಂಟೆಗೆ 427 ಕಿ.ಮೀ ವೇಗದಲ್ಲಿ ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

    ಈ ಕಾರೇ ಯಾಕೆ?
    ವಿಶ್ವದ ಅತಿ ದೊಡ್ಡ 828 ಮೀಟರ್ ಎತ್ತರದ ಬುರ್ಜ್ ಖಲೀಫಾ ಸೇರಿದಂತೆ ಹಲವು ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಈ ವೇಳೆ ಅವರಿಗೆ ರಕ್ಷಣೆ ನೀಡಲು ಈ ಕಾರನ್ನು ಖರೀದಿಸಲಾಗಿದೆ ಎಂದು ದುಬೈ ಪೊಲೀಸರು ಹೇಳಿದ್ದಾರೆ.

    ದುಬೈ ಪೊಲೀಸರು 14 ವಿವಿಧ ಕಾರುಗಳನ್ನು ಬಳಸುತ್ತಿದ್ದು, ಇವುಗಳ ಪೈಕಿ ಬುಗಾಟಿ ವೇಯ್ರಾನ್ ಮೊದಲ ಸೂಪರ್ ಕಾರ್ ಆಗಿದೆ. ಮೆಕ್ಲಾರೆನ್ ಎಂಪಿ4-12ಸಿ, ಲಂಬೋರ್ಗಿನಿ ಅವೆಂಟೆಡರ್, ಫೆರಾರಿ ಎಫ್‍ಎಫ್, ಮರ್ಸಿಡೀಸ್ ಎಸ್‍ಎಲ್‍ಎಸ್‍ಎಂಜಿ, ರೋಶ್ ಮುಸ್ತಾಂಗ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಆಡಿ ಆರ್8 ವಿಓ1 ಪ್ಲಸ್, ನಿಸ್ಸಾನ್ ಜಿಟಿಆರ್, ಮರ್ಸಿಡಿಸ್ ಎಸ್‍ಎಲ್36 ಎಎಂಜಿ, ಆಸ್ಟನ್ ಮಾರ್ಟಿನ್, ಹೈ ಬ್ರಿಡ್ ಪೋರ್ಶೆ, ಬಿಎಂಡಬ್ಲ್ಯೂ ಎಂ6 ಗ್ರಾನ್ ಕೂಪ್, ಮರ್ಸಿಡಿಸ್ ಜಿ36 ಎಎಂಜಿ ಕಾರುಗಳು ಇವೆ.

    ಮೈಲೇಜ್ ಎಷ್ಟು? ಆಟೋಮೊಬೈಲ್ ವೆಬ್‍ಸೈಟ್‍ಗಳು ಪ್ರಕಟಿಸಿದಂತೆ ಒಂದು ಲೀಟರ್ ಪೆಟ್ರೋಲ್‍ಗೆ ಬುಗಾಟಿ ವೇಯ್ರಾನ್ ಕಾರು ನಗರದಲ್ಲಿ 2.3 ಕಿ.ಮೀ ಮೈಲೇಜ್ ನೀಡಿದ್ರೆ, ಹೈವೇಯಲ್ಲಿ 6.3 ಕಿ.ಮೀ ನೀಡುತ್ತದೆ.

  • ವರದಕ್ಷಿಣೆ ಕೊಡದೇ ಇದ್ರೆ ಫಸ್ಟ್ ನೈಟ್ ಇಲ್ಲ ಎಂದ ಪತಿ ವಿರುದ್ಧ ದೂರು

    ವರದಕ್ಷಿಣೆ ಕೊಡದೇ ಇದ್ರೆ ಫಸ್ಟ್ ನೈಟ್ ಇಲ್ಲ ಎಂದ ಪತಿ ವಿರುದ್ಧ ದೂರು

    ಬೆಂಗಳೂರು: ವರದಕ್ಷಿಣಿಯ ಹಣವನ್ನು ಕೊಟ್ಟಿಲ್ಲ ಅಂದ್ರೆ ಮಂಚಕ್ಕೆ ಏರಬೇಡ ಎಂದು ಪೀಡಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ಈಗ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಪತಿ ಮಹೇಶ್, ಅತ್ತೆ ಶಕುಂತಲ, ಮಾವ ಶಿವನಾರಾಯಣ ವಿರುದ್ಧ ಪತ್ನಿ ದಿವ್ಯಾ(ಹೆಸರು ಬದಲಾಯಿಸಲಾಗಿದೆ) ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಪತ್ನಿ ಆರೋಪ ಏನು?
    ಮಹಾಗಣಪತಿ ನಗರದಲ್ಲಿ ನೆಲೆಸಿರುವ ಮಹೇಶ್ ಜೊತೆ ನನ್ನ ವಿವಾಹ 2016ರ ಮೇ1ರಂದು ನಡೆದಿದೆ. ಮದುವೆ ವೇಳೆ ಚಿನ್ನ, ಹಣ ನೀಡುವಂತೆ ಪೀಡಿಸುತ್ತಿದ್ದರು. ಮದುವೆಯಾದ ಬಳಿಕ ಪತಿ ಮನೆಯವರು ಕಿರುಕುಳ ಜಾಸ್ತಿ ಆಗಿದ್ದು, ನನ್ನ ಮೇಲೆ ಹಲ್ಲೆ ನಡೆಸಿ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ವರದಕ್ಷಿಣೆಯ ತರದೇ ನಿನ್ನ ಮೇಲೆ ಲೈಂಗಿಕ ಕ್ರಿಯೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಹಣವನ್ನು ತರದಿದ್ದರೆ ಈ ಮನೆಯಲ್ಲಿ ನೀನು ಇರಬಾರದು. ಇದ್ದರೆ ಜೀವ ಸಹಿತ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ, ಇವರ ಕಿರುಕುಳಕ್ಕೆ ಬೇಸತ್ತು ನಾನು 2017ರ ಜನವರಿ 23ರಂದು ತವರು ಮನೆಗೆ ಹೋಗಿದ್ದೇನೆ. ಹೀಗಾಗಿ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಈ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ನಿ ದಿವ್ಯಾ ದೂರು ನೀಡಿದ್ದಾರೆ.

    ಇದನ್ನೂ ಓದಿ: ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!

  • ಉತ್ತರಪ್ರದೇಶದಲ್ಲಿ ಸರ್ಕಾರದ ವಿರುದ್ಧ ಮಾಂಸ ವ್ಯಾಪಾರಿಗಳ ಮುಷ್ಕರ

    ಉತ್ತರಪ್ರದೇಶದಲ್ಲಿ ಸರ್ಕಾರದ ವಿರುದ್ಧ ಮಾಂಸ ವ್ಯಾಪಾರಿಗಳ ಮುಷ್ಕರ

    ಲಕ್ನೋ: ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿರೋ ಬೆನ್ನಲ್ಲೇ ಲಕ್ನೋ, ಅಲಹಾಬಾದ್ ಸೇರಿದಂತೆ ಉತ್ತರಪ್ರದೇಶದ ಹಲವು ಭಾಗಗಳಲ್ಲಿ ಮಾಂಸ ವ್ಯಾಪಾರಿಗಳು ಸರ್ಕಾರದ ವಿರುದ್ಧ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

    ಇಂದಿನಿಂದ ನಮ್ಮ ಮುಷ್ಕರವನ್ನು ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಎಲ್ಲಾ ಅಂಗಡಿಗಳು ಬಂದ್ ಆಗಲಿವೆ. ಮೀನು ವ್ಯಾಪಾರಿಗಳು ಕೂಡ ನಮಗೆ ಬಂಬಲ ನೀಡಿದ್ದಾರೆ. ಕಸಾಯಿಖಾನೆಗಳನ್ನ ಮುಚ್ಚಿಸುತ್ತಿರೋದ್ರಿಂದ ಲಕ್ಷಾಂತರ ಮಂದಿ ಜೀವನಾಧಾರ ಕಳೆದುಕೊಂಡಿದ್ದಾರೆಂದು ಲಕ್ನೋದ ಕುರಿ ಹಾಗೂ ಮೇಕೆ ವ್ಯಾಪಾರ ಮಂಡಳಿ ಮುಖ್ಯಸ್ಥ ಮುಬೀನ್ ಖುರೇಷಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ತಮ್ಮ ಬಳಿ ಲೈಸೆನ್ಸ್ ಇದ್ದರೂ ಕೂಡ ಪೊಲೀಸರು ದಾಳಿ ನಡೆಸುತ್ತಿದ್ದಾರೆ ಎಂದು ಇಲ್ಲಿನ ಕೆಲವು ಮಾಂಸ ವ್ಯಾಪಾರಿಗಳು ಆರೋಪಿಸಿದ್ದಾರೆ. ಅಲ್ಲದೆ ಸರಬರಾಜು ಕಡಿಮೆಯಾಗಿರೋಗ್ರಿಂದ ಅಂಗಡಿ ಮುಚ್ಚುವ ಸ್ಥಿತಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

    ಇನ್ನು ಸಿಎಂ ಹೊರಡಿಸಿರುವ ಈ ಆದೇಶದಿಂದ ನೊಯ್ಡಾದ ಕಸಾಯಿಖಾನೆಯವರು ನಮ್ಮ ಅದಾಯ ಆರ್ಧದಷ್ಟು ಕುಸಿದಿದೆ ಎಂದಿದ್ದಾರೆ. ಅಧಿಕಾರಿಗಳು ಕೋಳಿ ಅಂಗಡಿಗಳನ್ನು ಕೂಡ ಮುಚ್ಚಿಸುತ್ತಿದ್ದಾರೆ ಎಂದು ಅಂಗಡಿ ಮಾಲೀಕರಬ್ಬರು ಆರೋಪಿಸಿದ್ದಾರೆ. ಅಗತ್ಯ ದಾಖಲೆಗಳನ್ನ ನೀಡಿದ್ರೂ ಪರದೆ ಅಥವಾ ಕರ್ಟನ್ ಹಾಕುವಂತೆ ಹೇಳ್ತಿದ್ದಾರೆ ಅಂತ ಆರೋಪಿಸಿದ್ದಾರೆ.

    ಈ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ದಾಖಲೆಗಳನ್ನ ಪರಿಶೀಲಿಸುವುದು ಪೊಲೀಸರ ಜವಾಬ್ದಾರಿ. ಕೆಲವರು ಲೈಸೆನ್ಸ್ ನವೀಕರಿಸದ ಕಾರಣ ತಾವಾಗೇ ಅಂಗಡಿಗಳನ್ನ ಮುಚ್ಚುತ್ತಿದ್ದಾರೆ ಎಂದು ಹೇಳಿದ್ದಾರೆ.

    ಆದ್ರೆ ಅಕ್ರಮ ಕಸಾಯಿಖಾನೆಗಳನ್ನು ಮಾತ್ರ ಮುಚ್ಚಲು ಆದೇಶ ನೀಡಲಾಗಿದ್ದು, ಕಾನೂನುಬದ್ಧವಾಗಿರುವ ಕಸಾಯಿಖಾನೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ.

  • ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!

    ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!

    ಬೆಳಗಾವಿ: ನೀನು ನಾಯಿಗಿಂತ ಕಡೆ ಅದರ ಜೊತೆಯಲ್ಲೆ ಮಲಗು ಎಂದು ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ಪತ್ನಿಗೆ ಪತಿರಾಯನೊಬ್ಬ ಚಿತ್ರಹಿಂಸೆ ಕೊಡುತ್ತಿದ್ದ ಪ್ರಕರಣ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸಂಜೀವ ಭಾಗೋಜಿ ಕಳೆದ ಆರು ತಿಂಗಳಿನಿಂದ ತನ್ನ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದನು. ಪ್ರತಿದಿನ ಅಶ್ಲೀಲ ಚಿತ್ರ ಮತ್ತು ವೀಡಿಯೋಗಳನ್ನು ತೋರಿಸಿ ಅನೈಸರ್ಗಿಕವಾಗಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಭಾನುವಾರ ತನ್ನ ಪತ್ನಿಗೆ ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿದ್ದಾನೆ. ಪತಿಯ ವಿಕೃತಿಯನ್ನು ನಿರಾಕರಿಸಿದಕ್ಕೆ ಪತ್ನಿ ಮತ್ತು ತನ್ನ ಎರಡು ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾನೆ.

    ಸಂಜೀವ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡುತ್ತಿದ್ದ ಸಂಜೀವ 6 ತಿಂಗಳಿನಿಂದ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದನು. ತನ್ನ ಪತಿ ವಿಕೃತಿಯನ್ನು ಸಹಿಸಲಾರದ ಪತ್ನಿ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸದ್ಯ ಪೊಲೀಸರು ಸಂಜೀವನ ವಿರುದ್ಧ ಕಲಂ 498 (ಎ), 504, 506, 377 ಅನ್ವಯ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಸಂತ್ರಸ್ತ ಮಹಿಳೆಗೆ ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

     

  • 10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!

    10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!

    ನೆಲಮಂಗಲ: ಚಾಣಾಕ್ಷ ಕಳ್ಳನೊಬ್ಬ 10 ರೂಪಾಯಿ ಸ್ಕೇಲ್ ಖರೀದಿಸಿ, ಲಕ್ಷಾಂತರ ಮೌಲ್ಯದ ಕಾರನ್ನೇ ಕಳ್ಳತನ ಮಾಡುತ್ತಿದ್ದ ಎಂದರೆ ನೀವು ನಂಬುತ್ತೀರಾ..?

    ಹೌದು, ಚಾಣಾಕ್ಷತೆಯಿಂದ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳನ್ನು ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ಮಂಜ ಅಲಿಯಾಸ್ ಕ್ವಾಲಿಸ್ ಮಂಜ, ಕುರಿ ಮಂಜನನ್ನು ವಶಕ್ಕೆ ಪಡೆದಿದ್ದಾರೆ.

    ಮೂಲತಃ ಹಾಸನ ಜಿಲ್ಲೆಯ ಮಟ್ಟನವಿಲೆ ಗ್ರಾಮದ ನಿವಾಸಿಯಾಗಿರುವ ಮಂಜ, ಕೆಲ ದಿನದ ಹಿಂದೆ ನೆಲಮಂಗಲದ ದಾಸನಪುರ ತೋಟದಗುಡ್ಡದಹಳ್ಳಿಯಲ್ಲಿ ಕಾರುಗಳನ್ನ ಕದ್ದು ಪರಾರಿಯಾಗಿದ್ದ. ಆದರೆ ಈತ ಕಾರುಗಳನ್ನು ಚಾಣಾಕ್ಷತೆಯಿಂದ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ತನ್ನ ಬುದ್ಧಿ ಉಪಯೋಗಿಸಿ ಕೇವಲ 10 ರೂಪಾಯಿ ಸ್ಕೇಲ್ ಸಹಾಯದಿಂದ, ಮನೆ ಮುಂದೆ ನಿಂತಿರುವ ಲಕ್ಷಾಂತರ ರೂಪಾಯಿ ಕಾರುಗಳನ್ನ ಕಳ್ಳತನ ಮಾಡುತ್ತಿದ್ದ. ಅಲ್ಲದೆ ಈ ಕದ್ದ ಕಾರಿನಲ್ಲಿ ಕುರಿಗಳನ್ನ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

    ಕಳ್ಳತನ ಹೇಗೆ?
    10 ರೂ. ಸ್ಕೇಲ್ ಮೂಲಕ ಕಾರಿನ ಡೋರನ್ನು ಓಪನ್ ಮಾಡುತ್ತಿದ್ದ. ಡೋರ್ ಓಪನ್ ಆದ ಬಳಿಕ ಮೆಕಾನಿಕ್ ಬುದ್ಧಿಯಿಂದ ಸ್ಟೇರಿಂಗ್ ಲಾಕನ್ನು ಒಡೆದು, ವಯರ್‍ಗಳನ್ನು ಜೋಡಿಸಿ ಆನ್ ಮಾಡಿ ಗೇರ್ ಬದಲಾಯಿಸಿ ಕಾರನ್ನು ಚಲಾಯಿಸಿ ಕಳ್ಳತನ ಎಸಗುತ್ತಿದ್ದ.

    ಮಾದನಾಯಕನಹಳ್ಳಿ ಪೊಲೀಸರು ಈತನನ್ನು ಬಂಧಿಸಿದ್ದು, ಎರಡು ಕ್ವಾಲಿಸ್ ಹಾಗೂ ಒಂದು ಟಾಟಾ ಇಂಡಿಕಾ ಕಾರನ್ನ ವಶಪಡಿಸಿಕೊಂಡಿದ್ದಾರೆ.

    https://www.youtube.com/watch?v=eI-KypOKPF8