Tag: police

  • ಗಮನಿಸಿ, ಈ ಹುಡುಗಿಗಾಗಿ 6 ಜಿಲ್ಲೆಯ ಪೊಲೀಸರಿಂದ ಹುಡುಕಾಟ!

    ಗಮನಿಸಿ, ಈ ಹುಡುಗಿಗಾಗಿ 6 ಜಿಲ್ಲೆಯ ಪೊಲೀಸರಿಂದ ಹುಡುಕಾಟ!

    – ಕಾರಿನಲ್ಲಿ ಊರೂರು ಅಲೆದಾಡುತ್ತಿದ್ದಾಳೆ ವಿದ್ಯಾರ್ಥಿನಿ

    ಮಡಿಕೇರಿ: ವಿದ್ಯಾರ್ಥಿನಿಯೋರ್ವಳು ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಕಾರಿನೊಂದಿಗೆ ಮನೆಯಿಂದ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸುರೇಶ್ ಎಂಬವರ ಮಗಳು ದೀಕ್ಷಿತಾ(17) ನಾಪತ್ತೆಯಾದ ವಿದ್ಯಾರ್ಥಿನಿ. ಕಳೆದ ಮೂರು ದಿನಗಳ ಹಿಂದೆ ಸುರೇಶ್ ಎಂಬುವರು ತನ್ನ ಮಗಳನ್ನು ಹೋಟೆಲ್ ಹೋಗೋಣ ಬಾ ಎಂದು ಕರೆದಿದ್ದರು. ಆದ್ರೆ ತಂದೆಯೊಂದಿಗೆ ಹೋಗದ ದೀಕ್ಷಿತಾ ನೀನು ಬೈಕ್ ನಲ್ಲಿ ಹೋಗು ನಾನು ಮತ್ತೆ ಬರುತ್ತೇನೆ ಎಂದು ಹೇಳಿದ್ದಾಳೆ.

    ಮಗಳ ಮಾತು ಕೇಳಿ ಸುರೇಶ್ ಬೈಕ್ ನಲ್ಲಿ ಹೋಟೆಲ್‍ಗೆ ತೆರಳಿದ್ದಾರೆ. ಆದರೆ ಈಕೆ ಮನೆಯಲ್ಲಿದ್ದ ತಂದೆಯ ಎಟಿಎಂ ಕಾರ್ಡ್ ತೆಗೆದುಕೊಂಡು ಕೆ.ಎ.02 ಝೆಡ್ 3394 ನೋಂದಣಿಯ ಆಲ್ಟೊ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾಳೆ.

    ಇತ್ತ ದೀಕ್ಷಿತಾ ಮನೆ ಬಿಟ್ಟು ಹೋಗಿದ್ದಾಳೆಂದು ತಿಳಿದ ಪೋಷಕರು ಹುಡುಕಾಟಕ್ಕೆ ಆರಂಭಿಸಿದ್ದಾರೆ. ಪೋಷಕರು ಗೋಣಿಕೊಪ್ಪ ಮಾರ್ಗವಾಗಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದಾರೆ. ಆದರೆ ದೀಕ್ಷಿತಾ ಬಗ್ಗೆ ಸುಳಿವು ಸಿಕ್ಕದ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ದೀಕ್ಷಿತಾಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.

    ಆದ್ರೆ ದೀಕ್ಷಿತಾ ಮಾತ್ರ ಮಂಡ್ಯ ರಾಮನಗರ ಮತ್ತಿತರ ಊರುಗಲ್ಲಿ ಕಾರಿಗೆ ಪೆಟ್ರೋಲ್ ಹಾಕಿಕೊಂಡು ಮನ ಬಂದತೆ ಊರೂರು ಸುತ್ತುತ್ತಿದ್ದಾಳೆ. ಬುಧವಾರ ಬೆಳಗ್ಗೆ ಮಂಡ್ಯ ರಾಮನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿನಿ ಕಾರ್ ಡ್ರೈವ್ ಮಾಡಿಕೊಂಡು ಹೋಗಿರೊ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಆಧರಿಸಿ ಇದೀಗ ಯುವತಿಯ ಪತ್ತೆಗಾಗಿ 6 ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ.

  • ಮನೆಯ ಮುಂದೆ ನಿಲ್ಲಿಸಿದ ಕಾರಿನ ಟಯರ್ ಕದ್ದ ಕಳ್ಳರು

    ಮನೆಯ ಮುಂದೆ ನಿಲ್ಲಿಸಿದ ಕಾರಿನ ಟಯರ್ ಕದ್ದ ಕಳ್ಳರು

    ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಕಾರುಗಳನ್ನ ಕದಿಯುತ್ತಿದ್ದ ಖತರ್ನಾಕ್ ಕಳ್ಳರು, ಇದೀಗ ವಾಹನಗಳ ಬಿಡಿಭಾಗಗಳಿಗೂ ಕನ್ನ ಹಾಕಲು ಆರಂಭಿಸಿದ್ದಾರೆ.

    ನಗರದ ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕವನ್ನ ತೋರಿದ್ದಾರೆ. ಇಲ್ಲಿನ ಗಜಾರಿಯಾ ಬಡಾವಣೆಯಲ್ಲಿ ವಾಸವಾಗಿರುವ ಚಂದ್ರಶೇಖರ್ ಎಂಬವರು ಐದು ದಿನದ ಹಿಂದೆಯಷ್ಟೇ ಮಾರುತಿ ಕಂಪನಿಯ ಹೊಸ ಕಾರನ್ನ ಖರೀದಿಸಿದ್ದರು. ಆದರೆ ಕಳೆದ ರಾತ್ರಿ ತಮ್ಮ ಮನೆ ಮುಂದೆಯ ರಸ್ತೆಯಲ್ಲಿ ನಿಲ್ಲಿಸಿದ್ದ ವೇಳೆ ಐನಾತಿ ಕಳ್ಳರು ಕಾರಿನ ಕೆಳಗೆ ಕಲ್ಲಿಟ್ಟು ನಾಲ್ಕು ಚಕ್ರಗಳನ್ನ ಕದ್ದು ಚಾಣಾಕ್ಷತೆಯಿಂದ ಸ್ಥಳದಿಂದ ಪರಾರಿಯಾಗಿದ್ದಾರೆ.

    ಇದನ್ನೂ ಓದಿ: 10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!

    ಬೆಳಗ್ಗೆ ಮನೆಯಿಂದ ಹೊರ ಬಂದು ಹೊಸ ಕಾರನ್ನ ನೋಡಿದರೆ ಅದರ ಟೈರ್‍ಗಳನ್ನು ಕಳ್ಳತನ ಮಾಡಲಾಗಿದೆ. ಚಂದ್ರಶೇಖರ್ ಅವರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚಿಗೆ ನೆಲಮಂಗಲ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ನೆಲಮಂಗಲ: ಅಡ್ರೆಸ್ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿಯಾದ್ರು

  • ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್

    ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್

    ಹೈದರಾಬಾದ್: ತನ್ನ ಪತ್ನಿಗೆ ಅಂಚೆ ಪತ್ರದಲ್ಲಿ ಮೂರು ಬಾರಿ ತಲಾಖ್ ಎಂದು ಬರೆದು ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಹನೀಫ್ (38) ಬಂಧಿತ ವ್ಯಕ್ತಿ. ಹನೀಫ್ ಕುಕಟಪಲ್ಲಿಯ ಟೈಕ್ಸ್ ಟೈಲ್ಸ್ ಶೋರೂಂ ನಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 9 ರಂದು ತಲಾಬ್‍ಕಟ್ಟಾ ಗ್ರಾಮದ 26 ವರ್ಷದ ಯುವತಿಯನ್ನು ಮದುವೆ ಮಾಡಿಕೊಂಡಿದ್ದ.

    ಮದುವೆಯ ಮರುದಿನ ಮನೆಬಿಟ್ಟು ಹೋಗಿದ್ದ ಹನೀಫ್ ತಾನು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೆಂಡತಿಗೆ ಮಾಹಿತಿ ನೀಡಿದ್ದ. ಮಾರ್ಚ್ 19 ರಂದು ಹನೀಫ್ ತನ್ನ ಪತ್ನಿಗೆ ಪೋಸ್ಟ್ ಮುಖಾಂತರ ತಲಾಖ್ ಪತ್ರವನ್ನು ಕಳುಹಿಸಿದ್ದ. ಪತ್ರದಲ್ಲಿ ಮೂರು ಬಾರಿ ತಲಾಖ್ ಎಂದು ಬರೆದು ಈ ನಿರ್ಧಾರವನ್ನು ಇಬ್ಬರ ಸಮ್ಮುಖದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಬರೆದಿದ್ದ. ನಂತರ ಇದೇ ವಿಚಾರದ ಬಗ್ಗೆ ಫೋನ್ ಮಾಡಿ ಮಾತನಾಡಿದ್ದ.

    ಪತಿಯ ತಲಾಖ್ ಪತ್ರ ಪಡೆದ ಯುವತಿ ತವರುಮನೆಗೆ ತೆರಳಿದ್ದು, ಪೋಷಕರಿಗೆ ಈ ವಿಚಾರವನ್ನ ತಿಳಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹನೀಫ್‍ನನ್ನು ಬಂಧಿಸಿದ್ದಾರೆ.

    ಇಸ್ಲಾಂನ ತ್ರಿವಳಿ ತಲಾಖ್ ಪದ್ಧತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ತ್ರಿವಳಿ ತಲಾಖ್ ನಿಷೇಧಿಸಬೇಕೋ ಬೇಡವೋ ಎಂಬ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದ್ದು ಮೇ 11ರಿಂದ ವಿಚಾರಣೆ ಆರಂಭವಾಗಲಿದೆ.

     

  • ಮಂಗಳೂರು: ಗಸ್ತಿನಲ್ಲಿ ತಿರುಗುತ್ತಿದ್ದ ಎಎಸ್‍ಐ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಮಂಗಳೂರು: ಗಸ್ತಿನಲ್ಲಿ ತಿರುಗುತ್ತಿದ್ದ ಎಎಸ್‍ಐ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಮಂಗಳೂರು: ಉರ್ವಾ ಪೊಲೀಸ್ ಠಾಣೆ ಎಎಸ್‍ಐ ಮೇಲೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಹಲ್ಲೆ ನಡೆಸಿದ್ದಾರೆ. ಲೇಡಿಹಿಲ್ ಸರ್ಕಲ್ ಬಳಿ ಬೈಕಿನಲ್ಲಿ ಬಂದ ಇಬ್ಬರು, ರಾತ್ರಿ ಗಸ್ತಿನಲ್ಲಿದ್ದ ಐತಪ್ಪ ಅವರನ್ನು ಅಡ್ಡಗಟ್ಟಿ ಅವರ ತಲೆಗೆ ರಾಡ್‍ನಿಂದ ಹೊಡೆದು ಪರಾರಿಯಾಗಿದ್ದಾರೆ.

    ತೀವ್ರ ರಕ್ತಸ್ತ್ರವವಾಗಿ ಬಿದ್ದಿದ್ದ ಎಎಸ್‍ಐ ಐತಪ್ಪ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದ್ದು ಚೇತರಿಸಿಕೊಂಡಿದ್ದಾರೆ.

    ಮಂಗಳವಾರದಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಎದುರು ಅನುಮತಿ ಇಲ್ಲದೆ ಪ್ರತಿಭಟಿಸಿದ್ದ ಪಿಎಫ್‍ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ರು. ಈ ವೇಳೆ 7 ಮಂದಿ ಪೊಲೀಸ್ ಸೇರಿದಂತೆ ಹಲವು ಪ್ರತಿಭಟನಾಕಾರರಿಗೂ ಗಾಯಗಳಾಗಿತ್ತು. ಆದ್ರೆ ಪ್ರತಿಭಟನಾಕಾರರು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ, ಅವರನ್ನ ಸುಮ್ಮನೆ ಬಿಡೋದಿಲ್ಲ ಎಂದು ಘೋಷಣೆ ಕೂಗಿದ್ದರು. ಹೀಗಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರಿಂದಲೇ ಎಎಸ್‍ಐ ಐತಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಇದನ್ನೂ ಓದಿ: ಅನುಮತಿ ಇಲ್ಲದೇ ಮಂಗಳೂರಿನಲ್ಲಿ ಪ್ರತಿಭಟನೆ: ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಐಪಿಎಲ್ ಬೆಟ್ಟಿಂಗ್ ತಡೆಗೆ ಸಿದ್ಧವಾಗಿದೆ ಸಿಸಿಬಿ ತಂಡ

    ಐಪಿಎಲ್ ಬೆಟ್ಟಿಂಗ್ ತಡೆಗೆ ಸಿದ್ಧವಾಗಿದೆ ಸಿಸಿಬಿ ತಂಡ

    ಬೆಂಗಳೂರು: ಜೂಜಾಟದಲ್ಲಿ ತೊಡಗೋ ಕೆಲವರು ಐಪಿಎಲ್ ಆರಂಭವಾಗೋದನ್ನೇ ಕಾಯ್ತಿರ್ತಾರೆ. ಸಾವಿರದಿಂದ ಹಿಡಿದು ಲಕ್ಷಗಟ್ಟಲೇ ಬೆಟ್ಟಿಂಗ್‍ನಲ್ಲಿ ಹಣ ಕಟ್ತಾರೆ. ಅಂತವರ ವಿರುದ್ಧ ನಿಗಾ ಇಡೋಕೆ ಕ್ರೈಮ್ ಬ್ರಾಂಚ್‍ನ ವಿಶೇಷ ತಂಡ ಸಿದ್ಧವಾಗಿದೆ.

    ಇಂದಿನಿಂದ ಐಪಿಎಲ್‍ನ 10ನೇ ಆವೃತ್ತಿ ಆರಂಭವಾಗಲಿದೆ. ಹೈದ್ರಾಬಾದ್‍ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸನ್‍ರೈಸರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯ ಮೇಲೆ ಬೆಟ್ಟಿಂಗ್ ಭೂತದ ಕಾರ್ಮೋಡ ಆವರಿಸಿದೆ. ಈ ಬಾರಿ ಬೆಂಗಳೂರೇ ಕಪ್ ಗೆಲ್ಲೋ ಹಾಟ್ ಫೇವರಿಟ್ ಎನ್ನಲಾಗ್ತಿದೆ. ಇನ್ನು ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಳ ಮೇಲೆ ಕೋಟ್ಯಂತರ ರೂಪಾಯಿ ಬಾಜಿ ವ್ಯವಹಾರ ನಡೆಯೋ ನಿರೀಕ್ಷೆಯಿದೆ. ಆದ್ರೆ ಈ ಎಲ್ಲದಕ್ಕೂ ಬ್ರೇಕ್ ಹಾಕಲು ಸಿಸಿಬಿ ರೆಡಿಯಾಗಿದೆ.

    ರಾಜಧಾನಿಯಲ್ಲಿ ಬೆಟ್ಟಿಂಗ್ ದಂಧೆಗೆ ಅವಕಾಶ ಕೊಡದಂತೆ ಕ್ರೈಂ ಬ್ರಾಂಚ್ ಪೊಲೀಸರು ತಯಾರಿ ನಡೆಸಿದ್ದಾರೆ. ಬೆಟ್ಟಿಂಗ್ ದಂಧೆಕೋರರನ್ನ ಬಗ್ಗು ಬಡಿಯಲು ಸಿಸಿಬಿ ವಿಶೇಷ ತಂಡ ರಚನೆ ಮಾಡಲಾಗಿದೆ. ಅದಾಗಲೇ ಬೆಟ್ಟಿಂಗ್ ವೀರರ ಎಲ್ಲಾ ಮೊಬೈಲ್‍ಗಳನ್ನ ಟ್ರ್ಯಾಕ್ ಮಾಡಲಾಗಿದೆ. ಜೊತೆಗೆ ಒಂದೇ ಮೊಬೈಲ್‍ಗೆ ಹೆಚ್ಚು ಕರೆಗಳು ಹೋಗೋದರ ಮೇಲೂ ನಿಗಾ ವಹಿಸಲಾಗಿದೆ.

    ಕ್ರಿಕೆಟ್ ಬೆಟ್ಟಿಂಗ್ ನಡೆಸೋಕೆ ಈಗ ಆನ್‍ಲೈನ್ ಆ್ಯಪ್‍ಗಳು ಸೃಷ್ಟಿಯಾಗಿಬಿಟ್ಟಿವೆ. ಈವರೆಗೆ ಇಂಥ 31 ಆಪ್‍ಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಸೈಬರ್ ತಂಡವೂ ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

     

  • ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಪ್ರೇಯಸಿಯ ಕಣ್ಮುಂದೆಯೇ ಪ್ರೇಮಿಯ ಕೊಲೆ!

    ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಪ್ರೇಯಸಿಯ ಕಣ್ಮುಂದೆಯೇ ಪ್ರೇಮಿಯ ಕೊಲೆ!

    ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯುವಕನ ದೇಹ ಪತ್ತೆ ಬಳಿಕ ಘಟನೆ ಬೆಳಕಿಗೆ ಬಂದ್ರೂ ಪ್ರೇಮಿ ನಾಗರಾಜ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದ ಅನ್ಯ ಕೋಮಿನ 20 ವರ್ಷದ ಯುವತಿ ಹಾಗೂ ಚಿತ್ರದುರ್ಗ ಮೂಲದ 25 ವರ್ಷದ ಯುವಕ ನಾಗರಾಜ ಕೊಲೆಯಾದ ಪ್ರೇಮಿಗಳಾಗಿದ್ದಾರೆ. ಕಳೆದ ಮಾರ್ಚ್ 24 ರಂದು ಪ್ರೇಮಿಗಳು ಮನೆ ಬಿಟ್ಟು ಓಡಿಹೋಗುವ ವೇಳೆ ಸಿಕ್ಕಿಬಿದ್ದಿದ್ದರು. ಆಗ ಪ್ರಿಯತಮೆ ಮುಂದೆಯೇ ಪ್ರೇಮಿ ನಾಗರಾಜ ಮೇಲೆ ಆಕೆ ತಂದೆ ಹಾಗೂ ಸಹೋದರ ಹಲ್ಲೆ ನಡೆಸಿದ್ದಾರೆ. ನಾಗರಾಜನನ್ನು ಹೊಡೆದು ಆತ ಸಾವನ್ನಪ್ಪಿದ್ದಾನೆ ಎಂದುಕೊಂಡು ಗೋಣಿಚೀಲದಲ್ಲಿ ಬಿಸಾಕಿ ಹೋಗಿದ್ದಾರೆ. ಆದರೆ ಇನ್ನೂ ಜೀವಂತವಿದ್ದ ನಾಗರಾಜನ ದೇಹವನ್ನ ಜಿ.ಕೋಡಿಹಳ್ಳಿ ಕ್ರಾಸ್ ಬಳಿ ಸ್ಥಳೀಯರು ನೋಡಿದ್ದಾರೆ. ಪ್ರಜ್ಞೆ ತಪ್ಪಿದ್ದ ನಾಗರಾಜನನ್ನು ದಾವಣಗೆರೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕ್ಸಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಿ ನಾಗರಾಜ ಸಾವನ್ನಪ್ಪಿದ್ದಾರೆ.

    ಕೊಲೆಯಾದ ನಾಗರಾಜ ಹಾಗೂ ಯುವತಿ ಕಳೆದ ಹಲವಾರು ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ಯುವತಿಯ ಮನೆಯವರಿಗೂ ಸಹ ತಿಳಿದಿತ್ತು. ನಾಗರಾಜನ ಕೊಲೆಯನ್ನು ನೋಡಿದ ಮಗಳು ಎಲ್ಲಿ ಬಾಯಿ ಬಿಡುತ್ತಾಳೋ ಅಂತಾ ಹೆದರಿ ಯುವತಿಯನ್ನು ಸಹ ಹೊಡೆದು ಕೊಲೆ ಮಾಡಿದ್ದರು. ನಂತರ ಹೃದಯಾಘಾತದ ಕಥೆ ಕಟ್ಟಿ ಅಂತ್ಯಸಂಸ್ಕಾರ ಮಾಡಿದ್ದರು.

    ಪ್ರೇಮಿ ನಾಗರಾಜ ಕೊಲೆಯಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸುತ್ತಿದ್ದರು. ಯುವತಿಯ ಸಂಬಂಧಿಕರನ್ನು ಕರೆದು ವಿಚಾರಣೆ ಮಾಡುತ್ತಿದ್ದಂತೆ ಯುವತಿಯ ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್‍ಪಿ ಆರ್.ಚೇತನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಇದೇ ನನ್ನ‌ ಕೊನೆಯ FB ಲೈವ್ ಚಾಟ್ – ಆತ್ಮಹತ್ಯೆ ಗೆ ಯತ್ನಿಸಿದ ಪ್ರಥಮ್

    ಇದೇ ನನ್ನ‌ ಕೊನೆಯ FB ಲೈವ್ ಚಾಟ್ – ಆತ್ಮಹತ್ಯೆ ಗೆ ಯತ್ನಿಸಿದ ಪ್ರಥಮ್

    – ಸ್ನೇಹಿತನ ಜೊತೆ ರಸ್ತೆಯಲ್ಲೇ ಬಡಿದಾಟ?

    ಬೆಂಗಳೂರು: ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಮತ್ತು ಅವರ ಸ್ನೇಹಿತ ಲೋಕಲ್ ಲೋಕಿ ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ.

    ಪ್ರಥಮ್ ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನು ರೈತರಿಗೆ ನೀಡಿಲ್ಲ. ಕೇಳೋಕೆ ಹೋದವರಿಗೆಲ್ಲಾ ಬಾಯಿಗೆ ಬಂದಂತೆ ಬೈಯ್ತಾನೆ ಅಂತ ಫೇಸ್‍ಬುಕ್‍ನಲ್ಲಿ ಲೋಕಿ ಪೋಸ್ಟ್ ಮಾಡಿದ್ದರು. ಈ ವಿಷಯದ ಕುರಿತಾಗಿ ಪ್ರಥಮ್ ಮತ್ತು ಲೋಕಿ ನಡುವೆ ವೈಮನಸ್ಸು ಉಂಟಾಗಿತ್ತು.

    ಮಂಗಳವಾರ ರಾತ್ರಿ ಯಾವುದೋ ವಿಚಾರ ಮಾತನಾಡ್ಬೇಕು ಅಂತ ಕುರುಬರಹಳ್ಳಿಯ ಬಳಿ ನನ್ನನ್ನು ಪ್ರಥಮ್ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಲೋಕಿ ಆರೋಪ ಮಾಡಿದ್ದಾರೆ. ರಾತ್ರಿ ಸುಮಾರು 10:30 ರ ಸಮಯದಲ್ಲಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.

    ರಾತ್ರಿ ನಡೆದ ಗಲಾಟೆಯ ನಂತರ ಪ್ರಥಮ್ ತಮ್ಮ ಮನೆಗೆ ಬಂದು ಬಿಗ್‍ಬಾಸ್ ಪ್ರಶಸ್ತಿ ಪಡೆಯುವ ದಿನ ಧರಿಸಿದ್ದ ಬಟ್ಟೆಯನ್ನು ಧರಿಸಿ ಫೇಸ್‍ಬುಕ್‍ನಲ್ಲಿ 20 ನಿಮಿಷ ಲೈವ್ ಚಾಟ್ ಮಾಡಿದ್ದಾರೆ. ಎಲ್ಲರಿಗೂ ಒಳ್ಳೇದಾಗ್ಲಿ. ನನಗೆ ತುಂಬಾ ಡಿಸ್ಟರ್ಬ್ ಮಾಡ್ತಿದ್ದಾರೆ. ನೆಮ್ಮದಿಯಾಗಿ ಬದುಕೋಕೆ ಬಿಡ್ತಿಲ್ಲ, ನನ್ನ ಕೆಲಸವನ್ನ ಕೆಟ್ಟದಾಗಿ ತೋರಿಸ್ತಿದ್ದಾರೆ. ಇನ್ನು ಮುಂದೆ ಯಾರಿಗೂ ಬೇಸರ ಮಾಡೋದಿಲ್ಲ. ಈಗಾಗಲೇ ನಾನು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದೇನೆ. ಇದು ನನ್ನ ಕೊನೆಯ ಫೇಸ್‍ಬುಕ್ ಲೈವ್ ಚಾಟ್ ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.

    ಪ್ರಥಮ್ ನಿಜವಾಗ್ಲೂ ಲೋಕಿ ಮೇಲೆ ಹಲ್ಲೆ ಮಾಡಿದ್ದಾರಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಲೋಕಿ ಪ್ರಥಮ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

    https://www.facebook.com/iamOlleHudgaPratham/videos/vb.719171738250468/730938370407138/?type=2&theater

    https://www.youtube.com/watch?v=Yq0GHrMSFgM

     

  • ಹಸೆಮಣೆ ಏರಬೇಕಾದ ಯುವತಿ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಹಸೆಮಣೆ ಏರಬೇಕಾದ ಯುವತಿ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಬೆಳಗಾವಿ: ಮುಂದಿನ ತಿಂಗಳು ಹಸಮಣೆ ಏರಬೇಕಾದ ಯುವತಿ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಗಣೇಶಪುರದ ಸಮೃದ್ಧಿ ಕಾಲೋನಿಯ ನಿವಾಸಿ ಶೃತಿ ಗೋಕಾಕ್ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಶೃತಿ ಅವರ ಆತ್ಮಹತ್ಯೆಗೆ ಕಾರಣ ಭಾವಿ ಪತಿ ವಿನಾಯಕ್ ಕುಂದಗೋಳ್ ಎನ್ನುವ ಆರೋಪ ಕೇಳಿಬಂದಿದೆ.

    ಶೃತಿ ಅವರಿಗೆ ವಿನಾಯಕ್ ಎಂಬ ಯುವಕನ ಜೊತೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಲಾಗಿತ್ತು. ಅದರಂತೆ 2017ರ ಮೇ 5ರಂದು ಮದುವೆ ನಡೆಸಲು ದಿನಾಂಕ ಸಹ ನಿಗದಿಯಾಗಿತ್ತು.

    ವಿನಾಯಕ್ ನಿರಂತರವಾಗಿ ಶೃತಿ ಅವರಿಗೆ ತಮ್ಮ ಪೋಷಕರಿಂದ 5 ಲಕ್ಷ ರೂ. ಹಣ ಕೊಡಿಸುವಂತೆ ಒತ್ತಾಯಿಸುತ್ತಿದ್ದನು. ಈ ವಿಚಾರವಾಗಿ ಶೃತಿ ಮತ್ತು ವಿನಾಯಕ್ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಇತ್ತೀಚಿಗೆ ಜಗಳ ನಡೆದಾಗ ಶೃತಿ ಎರಡು ದಿನ ವಿನಾಯಕ್ ಪೋನ್ ರೀಸಿವ್ ಮಾಡಿರಲಿಲ್ಲ. ಶೃತಿ ಮತ್ತೆ ಪೋನ್ ಮಾಡಿದಾಗ ವಿನಾಯಕನ ಗರ್ಲ್ ಫ್ರೆಂಡ್ ಕಾಲ್ ರಿಸೀವ್ ಮಾಡಿ ನಾನು ಮತ್ತು ವಿನಾಯಕ್ ಎರಡು ವರ್ಷದಿಂದ ಲವ್ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಇದರಿಂದ ಶೃತಿಗೆ ಮತ್ತಷ್ಟು ಆಘಾತವಾಗಿದೆ. ಈ ಬಗ್ಗೆ ವಿನಾಯಕ್ ಗೆ ಕೇಳಿದಾಗ ಎರಡು ವರ್ಷ ಮದುವೆ ಮುಂದೆ ಹಾಕು ಎಂದು ಹೇಳಿದ್ದಾನೆ.

    ವಿನಾಯಕನ ಮಾತುಗಳಿಂದ ಮನನೊಂದ ಶೃತಿ ಡಿಸಿಪಿ ಜಿ. ರಾಧಿಕಾರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಆದರೆ ಡಿಸಿಪಿ ಜಿ.ರಾಧಿಕಾ. ಸ್ಥಳೀಯ ಪೊಲೀಸ್ ಠಾಣೆಗೆ ಹೋಗುವಂತೆ ಸೂಚನೆ ನೀಡಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಪೊಲೀಸ್ ಠಾಣೆಗೆ ಬಂದ ಶೃತಿ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ಶ್ರತಿಯನ್ನು ಬೆಳಗಾವಿಯ ಜಿಲ್ಲಾಸ್ಪತ್ರೆ ದಾಖಲಿಸಿದ್ದಾರೆ. ಈ ಸಂಬಂಧ ನಗರ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

     

  • ಅನುಮತಿ ಇಲ್ಲದೇ ಮಂಗಳೂರಿನಲ್ಲಿ ಪ್ರತಿಭಟನೆ: ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

    ಅನುಮತಿ ಇಲ್ಲದೇ ಮಂಗಳೂರಿನಲ್ಲಿ ಪ್ರತಿಭಟನೆ: ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

    ಮಂಗಳೂರು: ಪೊಲೀಸರ ಅನುಮತಿ ಇಲ್ಲದೆ ಮಂಗಳೂರು ಕಮಿಷನರೇಟ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪಾಪ್ಯುಲರ್ ಫ್ರಂಟ್ ಆಫ್‍ಇಂಡಿಯಾ (ಪಿಎಫ್‍ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ಸುರತ್ಕಲ್ ಠಾಣೆ ವ್ಯಾಪ್ತಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಪಿಎಫ್‍ಐ ಕಾರ್ಯಕರ್ತರನ್ನು ಬಂಧಿಸಿದ್ದರು. ಆದರೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಅಕ್ರಮವಾಗಿ ಕೂಡಿಟ್ಟು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಇವತ್ತು ಬೆಳಗ್ಗೆ ಕಮಿಷನರೇಟ್ ಮುಂದೆ ಪಿಎಫ್‍ಐ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿತ್ತು.

    ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ರೂ, ಜಗ್ಗದ ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ನೂರಾರು ಕಾರ್ಯಕರ್ತರು ಸೇರಿದ್ದರಿಂದ ಉದ್ವಿಗ್ನ ಸ್ಥಿತಿ ನೆಲೆಸಿತ್ತು. ಬಳಿಕ ಕೆಲವು ಕಾರ್ಯಕರ್ತರನ್ನು ಬಲವಂತವಾಗಿ ಹೊತ್ತೊಯ್ದು ಪೊಲೀಸರು ಬಂಧಿಸಿದರು.

     

  • ರಿಮ್ಸ್ ನಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಮಗು ಪತ್ತೆ

    ರಿಮ್ಸ್ ನಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಮಗು ಪತ್ತೆ

    ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ನವಜಾತ ಗಂಡು ಶಿಶು ಕೊನೆಗೂ ಪತ್ತೆಯಾಗಿದೆ. ಹಣದ ಆಸೆಗೆ ಶಿಶುವನ್ನ ಕದ್ದಿದ್ದ ಹಾಗೂ ಮಗುವನ್ನ ಪಡೆದಿದ್ದ ಆರೋಪಿಗಳನ್ನ ಬಂಧಿಸಲಾಗಿದೆ.

    ಮಾರ್ಚ್ 28 ರಂದು ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ಮಗು ಒಂದು ವಾರದ ಬಳಿಕ ನಗರದ ಜಲಾಲನಗರದಲ್ಲಿ ಪತ್ತೆಯಾಗಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವನ್ನ ಬಂಡವಾಳ ಮಾಡಿಕೊಂಡ ಆಟೋಚಾಲಕ ಚಾಂದ್ ಪಾಶ, ಶಿಶುವನ್ನ ಕದ್ದು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಸುಮಾರು ವರ್ಷಗಳಿಂದ ಮಕ್ಕಳಾಗದ ಜಲಾಲನಗರದ ಇಂದ್ರಮ್ಮ ಗಂಡು ಮಗುವನ್ನ ಖರೀದಿ ಮಾಡಿದ್ದರು. ಈಗ ಈ ಇಬ್ಬರೂ ಪೊಲೀಸರ ಅಥಿತಿಗಳಾಗಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಮಗುವನ್ನ ಚಾಂದ್‍ಪಾಶ ಕೈಗೆ ಯಾರು ಕೊಟ್ಟರು ಅನ್ನೋ ಬಗ್ಗೆ ತನಿಖೆ ಮುಂದುವರೆದಿದೆ.

    ದೇವದುರ್ಗದ ಮಲ್ಲಾಪುರ ಗ್ರಾಮದ ಯಲ್ಲಮ್ಮ ತಿಮ್ಮಣ್ಣ ದಂಪತಿಯ ಮೂರು ದಿನದ ನವಜಾತ ಶಿಶುವನ್ನ ಆಸ್ಪತ್ರೆಯಿಂದಲೇ ಕಳ್ಳತನ ಮಾಡಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಶಿಶು ಅಪಹರಣದ ಬಗ್ಗೆ ಪ್ರಕರಣ ದಾಖಲಾಗಿತ್ತು.

    ಈಗ ಪತ್ತೆಯಾಗಿರುವ ಶಿಶು ಆರೋಗ್ಯವಾಗಿದ್ದು ರಿಮ್ಸ್ ಆಸ್ಪತ್ರೆಯ ಸೂಕ್ಷ್ಮ ನಿಗಾ ಘಟಕದಲ್ಲಿಡಲಾಗಿದೆ.

    https://www.youtube.com/watch?v=aIVf7pjbNXQ