Tag: police

  • 2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    ಕಲಬುರಗಿ: ಪ್ರಿಯಕರನೊಬ್ಬ ಎರಡು ವರ್ಷಗಳ ಕಾಲ ಪ್ರೀತಿಸಿದ್ದ ಯುವತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಕುರಿಕೋಟಾ ಬ್ರಿಡ್ಜ್ ಬಳಿ ನಡೆದಿದೆ.

    ಶರಣು ಮತ್ತು ರೇಣುಕಾ ಎಂಬವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರು ತಡಗಂಚಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಪ್ರೇಮದ ಬಲೆಗೆ ಬಿದ್ದಿದ್ರು. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಇಬ್ಬರ ಪೋಷಕರು ಜೂನ್ 5ರಂದು ಮದುವೆಯನ್ನ ಸಹ ಫಿಕ್ಸ್ ಮಾಡಿದ್ದರು. ಆದರೆ ಅಷ್ಟರೊಳಗೆ ಶರಣು ಮೇ 26ರಂದು ರೇಣುಕಾಳ ಅಪ್ರಾಪ್ತ ಸಹೋದರಿಯನ್ನು ದೇವಸ್ಥಾನದಲ್ಲಿ ಮದುವೆ ಆಗಿದ್ದಾನೆ.

    ಸಹಜವಾಗಿಯೇ ಕೋಪಗೊಂಡ ರೇಣುಕಾ, ಪ್ರಿಯಕರ ಶರಣು ಜೊತೆ ಜಗಳ ಆರಂಭಿಸಿದ್ದಾರೆ. ರವಿವಾರ ಶರಣು ತನ್ನ ಸ್ನೇಹಿತರೊಂದಿಗೆ ಸೇರಿ ರೇಣುಕಾ ಅವರನ್ನು ಬ್ರಿಡ್ಜ್ ಬಳಿ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ. ನದಿಯಲ್ಲಿ ರೇಣುಕಾ ಮುಳುಗುತ್ತಿದ್ದುದನ್ನು ಗಮಿನಿಸಿದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಸ್ಥಳೀಯರು ರಕ್ಷಣೆಗೆ ಮುಂದಾಗುತ್ತಿದ್ದಂತೆ ಶರಣು ಸಹ ನದಿಗೆ ಧುಮುಕಿ ರೇಣುಕಾರನ್ನು ಕಾಪಾಡುವಂತೆ ನಾಟಕ ಮಾಡಿದ್ದಾನೆ. ಇದೀಗ ರೇಣುಕಾ ಅವರಿಗೆ ಪ್ರಜ್ಞೆ ಬಂದಿದ್ದು, ಗೆಳಯ ಶರಣು ನಿಜರೂಪ ಬಯಲಾಗಿದೆ.

    ನನಗೂ ಇದಕ್ಕೂ ಸಂಬಂಧವಿಲ್ಲ. ಅವನಿಗೂ ಮತ್ತು ನನ್ನ ಸಂಬಂಧಿಯಾದ ರೇಣುಕಾಳಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಶರಣು ನನ್ನ ಹೆದರಿಸಿ ನನಗೆ ತಾಳಿ ಕಟ್ಟಿ ಫೋಟೋ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಾಯಿದ್ದಾನೆ ಎಂದು ಶರಣುನಿಂದ ತಾಳಿ ಕಟ್ಟಿಸಿಕೊಂಡಿರುವ ಅಪ್ರಾಪ್ತೆ ಹೇಳಿದ್ದಾಳೆ.

    ಸದ್ಯ ಶರಣು ಪೋಲಿಸರ ವಶದಲ್ಲಿದ್ದಾನೆ. ಈ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬೀದಿನಾಯಿ ಕೊಂದವರ ವಿರುದ್ಧ ಎಫ್‍ಐಆರ್!

    ಬೀದಿನಾಯಿ ಕೊಂದವರ ವಿರುದ್ಧ ಎಫ್‍ಐಆರ್!

    ಬೆಂಗಳೂರು: ಬೀದಿನಾಯಿನ್ನು ಕೊಂದ ಇಬ್ಬರು ದುಷ್ಕರ್ಮಿಗಳ ವಿರುದ್ಧ ಪ್ರಾಣಿಪ್ರಿಯರೊಬ್ಬರು ದೂರು ದಾಖಲಿಸಿದ್ದಾರೆ.

    ವರ್ತೂರು ರಸ್ತೆಯ ದೊಮ್ಮಸಂದ್ರದಲ್ಲಿ ಇಬ್ಬರು ದುಷ್ಕರ್ಮಿಗಳು ಮೇ 26ರಂದು ಬೀದಿನಾಯಿಯನ್ನು ಅಮಾನವೀಯವಾಗಿ ಕೊಂದು ರಸ್ತೆ ಪಕ್ಕದ ಜಮೀನಿನಲ್ಲಿ ಎಸೆಯುತ್ತಿದ್ದರು. ಈ ವೇಳೆ ಪ್ರತ್ಯಕ್ಷದರ್ಶಿ ಹರೀಶ್ ಕೆ.ಬಿ. ಇದನ್ನು ಪ್ರಶ್ನಿಸಿದಾಗ ಸರಿಯಾದ ಉತ್ತರ ಕೊಡದೆ ಕಾರಿನಲ್ಲಿ ಪರಾರಿಯಾಗಿದ್ದರು.

    ಇದೀಗ ಹರೀಶ್ ಆರೋಪಿಗಳ ಕಾರ್ ನಂಬರ್‍ನೊಂದಿಗೆ ದೂರು ದಾಖಲಿಸಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 429 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ.

    ಸದ್ಯ ಬೀದಿ ನಾಯಿ ಕೊಂದ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಮಗನ ಬೊಲೆರೊ ವಾಹನ ಡಿಕ್ಕಿಯಾಗಿ ತಂದೆ ಸಾವು

    ಮಗನ ಬೊಲೆರೊ ವಾಹನ ಡಿಕ್ಕಿಯಾಗಿ ತಂದೆ ಸಾವು

    ಚಿಕ್ಕಬಳ್ಳಾಪುರ: ಮಗನ ಬುಲೆರೊ ವಾಹನಕ್ಕೆ ಸಿಲುಕಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆ ಗ್ರಾಮದಲ್ಲಿ ನಡೆದಿದೆ.

    52 ವರ್ಷದ ಮೌಲಾ ಮೃತಪಟ್ಟ ದುರ್ದೈವಿ ತಂದೆ. ವಾಹನ ರಿವರ್ಸ್ ತೆಗೆದುಕೊಳ್ಳುವಾಗ ಮಗ ನಾಸಿರ್(22) ಹಿಂದಿನಿಂದ ತಂದೆಗೆ ಡಿಕ್ಕಿ ಹೊಡೆದಿದ್ದಾನೆ. ಇದಕ್ಕೂ ಮೊದಲು ನಾಸಿರ್ ತಂದೆಯ ಜೊತೆ ಜಗಳವಾಡಿದ್ದ. ಘಟನೆ ನಂತರ ವಾಹನ ಸಮೇತ ಮಗ ಪರಾರಿಯಾಗಿದ್ದಾನೆ.

    ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ನಿಮ್ಮ ಕಥೆ ಏನಾಗುತ್ತೆ ಗೊತ್ತಾ ಅಂತಾ ಎಸ್‍ಐ ಧಮ್ಕಿ: ಪ್ರೀತಿಸಿ ಮದ್ವೆಯಾದ ಜೋಡಿ ಆರೋಪ

    ನಿಮ್ಮ ಕಥೆ ಏನಾಗುತ್ತೆ ಗೊತ್ತಾ ಅಂತಾ ಎಸ್‍ಐ ಧಮ್ಕಿ: ಪ್ರೀತಿಸಿ ಮದ್ವೆಯಾದ ಜೋಡಿ ಆರೋಪ

    ಚಿತ್ರದುರ್ಗ: ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಅವರಲ್ಲಿತ್ತು. ಅದಕ್ಕಾಗಿ ಪೋಷಕರ ವಿರೋಧದ ನಡುವೆಯೂ ಮದ್ವೆ ಕೂಡ ಮಾಡ್ಕೊಂಡಿದ್ದಾರೆ. ಎಲ್ಲಾ ಸರಿಯಾಯಿತು ಅಂದುಕೊಳ್ಳುವಾಗ್ಲೇ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ನಿಮ್ಮಿಬ್ಬರನ್ನು ದೂರ ಮಾಡ್ತೀನಿ. ನೀವಿಬ್ಬರೂ ಹೇಗೆ ಜೊತೆಯಾಗಿ ಇರ್ತೀರಿ. ನಿಮ್ಮನ್ನ ಏನ್ ಮಾಡ್ತೀನಿ ನೋಡ್ತಿರಿ ಅಂತೆಲ್ಲಾ ಆವಾಜ್ ಹಾಕಿ ವಿಲನ್ ಆಗಿದ್ದಾರೆ ಅನ್ನೋ ಆರೋಪವೊಂದು ಕೇಳಿಬಂದಿದೆ.

    ದಾವಣೆಗೆರೆಯ ಗಂಗೊಂಡನಹಳ್ಳಿ ಯುವಕ ಮಹಾರುದ್ರ ಹಾಗೂ ಹೊಳಲ್ಕೆರೆಯ ದೊಗ್ಗನಾಳ್ ಗ್ರಾಮದ ವನಿತಾರಾಣಿ ಹಲವು ವರ್ಷಗಳಿಂದ ಪ್ರೀತಿಸ್ತಿದ್ರು. ಇಬ್ಬರ ಪ್ರೀತಿಗೆ ಯುವತಿ ಮನೆಯವರು ಅಡ್ಡಿ ಪಡಿಸಿದ್ದರಿಂದ ಪ್ರೇಮಿಗಳು ತಿರುಪತಿಗೆ ಹೋಗಿ ಮದ್ವೆಯಾಗಿ ಬಂದಿದ್ದಾರೆ. ಈಗ ಮದ್ವೆಯಾಗಿರೋ ನೂತನ ಜೋಡಿಗಳ ಪಾಲಿಗೆ ಹೊಳಲ್ಕೆರೆ ಎಸ್‍ಐ ಮಹೇಶ್ ವಿಲನ್ ಆಗಿದ್ದಾರೆ.

    ಮದ್ವೆ ಬಳಿಕ ಎರಡೂ ಕಡೆಯರು ರಾಜಿ ಸಂಧಾನ ಮಾಡಿಸಿದ್ದಾರೆ. ಇಷ್ಟಕ್ಕೆ ಮುಗೀತು ಅನ್ನೋವಷ್ಟರಲ್ಲಿ ಯುವತಿ ತಂದೆ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ ಅಂತ ಕೇಸ್ ಹಾಕಿದ್ದಾರೆ. ಬಳಿಕ ಇಬ್ಬರು ಪ್ರೇಮಿಗಳು ಸ್ಟೇಷನ್‍ಗೆ ಬರೋದು ಸ್ವಲ್ಪ ತಡವಾಗಿದ್ದಕ್ಕೆ ಎಸ್‍ಐ ಮಹೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಗತಿ ಏನಾಗುತ್ತೆ ಗೊತ್ತಾ ಅಂತ ಬೆದರಿಕೆ ಹಾಕಿದ್ದಾರೆ. ಇದರಿಂದ ಭೀತಿಗೊಂಡಿರೋ ನವವಿವಾಹಿತ ಜೋಡಿ ರಕ್ಷಣೆಗೆ ಮೊರೆ ಇಟ್ಟಿದ್ದಾರೆ.

    ಗಂಡ-ಹೆಂಡತಿ ಇಬ್ಬರನ್ನೂ ದೂರ ಮಾಡುವಂತಹ ಶಕ್ತಿ ನಮಗಿದೆ. ಅಂತಹ ಕೇಸ್ ಗಳನ್ನು ನಿಮ್ಮ ಮೇಲೆ ರಿಸ್ಟರ್ ಮಾಡ್ತೀವಿ. ಇದೇನು ನನಗೆ ದೊಡ್ಡ ಕೇಸಲ್ಲ. ಇದ್ನ ಏನು ಮಾಡಬೇಕೆಂದು ನನಗೆ ಗೊತ್ತಿದೆ ಅಂತಾ ನವವಿವಾಹಿತ ಮಹಾರುದ್ರ ಎಸ್ ಐ ವಿರುದ್ಧ ಆರೋಪ ಮಾಡಿದ್ದಾರೆ.

    ರಕ್ಷಣೆ ನೀಡುವ ಪೊಲಿಸ್ ಠಾಣೆಯಲ್ಲಿಯೇ ಇಂತಹ ಮಾತುಗಳನ್ನು ಕೇಳಿಸಿಕೊಂಡಾಗ ಅಲ್ಲಿ ಹೋಗಕ್ಕೆ ನಮಗೆ ಸ್ವಲ್ಪ ಹಿಂಜರಿಕೆಯಾಗುತ್ತದೆ. ತಂದೆ ಹಾಗೂ ಪೊಲೀಸರ ಕಿರುಕುಳ ಇಲ್ಲದೆನೇ ನಾವು ನೆಲ್ಲದಿಯಾಗಿ ಜೀವನ ಮಾಡಲು ನಮಗೆ ಅವಕಾಶ ಬೇಕು ಅಂತಾ ಯುವತಿ ವನಿತಾರಾಣಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಟೆಕ್ಕಿ ಪತಿ!

    ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಟೆಕ್ಕಿ ಪತಿ!

    ಬೆಂಗಳೂರು: ಪತಿಯೊಬ್ಬ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಮಹದೇವಪುರದಲ್ಲಿ ನಡೆದಿದೆ.

    ಸನಾ ಅಕಿಲ್ ಕೊಲೆಯಾದ ಪತ್ನಿ. ಸನಾ ಅವರು 2015ರಲ್ಲಿ ಎಂಜಿನೀಯರ್ ಅಗಿರುವ ಸಾದಾಬ್ ಶಫೀ ಎಂಬಾತನೊಂದಿಗೆ ಸಂಪ್ರದಾಯಬದ್ದವಾಗಿ ವಿವಾಹವಾಗಿದ್ದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ 8 ತಿಂಗಳ ಮಗು ಸಹವಿದೆ. ಇದೇ ತಿಂಗಳು 21 ರಂದು ಸಾದಾಪ್ ಪತ್ನಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.

    ಸಾದಾಪ್ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಸಾದಾಪ್‍ನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

    ಇದನ್ನೂ ಓದಿ: ನ್ಯೂಜೆರ್ಸಿಯಲ್ಲಿ ಆಂಧ್ರದ ಮಹಿಳಾ ಟೆಕ್ಕಿ, ಮಗ ಹತ್ಯೆ!

  • ಸಂಪ್ ಕ್ಲೀನ್ ಮಾಡಲು ಇಳಿದ ಯುವಕರು ಉಸಿರುಗಟ್ಟಿ ಸಾವು

    ಸಂಪ್ ಕ್ಲೀನ್ ಮಾಡಲು ಇಳಿದ ಯುವಕರು ಉಸಿರುಗಟ್ಟಿ ಸಾವು

    ಬೆಂಗಳೂರು: ಕಲ್ಮಶ ನೀರಿನ ಸಂಸ್ಕರಣ ಘಟಕದ ಸಂಪ್‍ನಲ್ಲಿ ಕ್ಲೀನ್ ಮಾಡಲು ಇಳಿದಿದ್ದ ಇಬ್ಬರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.

    ಹಾರಿಜನ್ ಪ್ಯಾಕ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಮಿಕರಾದ ಉಮೇಶ್ ಹಾಗೂ ದಿಲೀಪ್ ಮೃತ ದುರ್ದೈವಿಗಳು.

    ಮಳೆಯ ನೀರು ಹಾಗೂ ಕಾರ್ಖಾನೆಯ ಕಲ್ಮಶ ನೀರಿನಿಂದ ಸಂಸ್ಕರಣ ಘಟಕದ ಸಂಪ್ ಬ್ಲಾಕ್ ಆಗಿತ್ತು. ಬ್ಲಾಕ್ ಆಗಿದ್ದ ಸಂಪ್ ಕ್ಲೀನ್ ಮಾಡಲು ಮೊದಲು ಉಮೇಶ್ ಒಳಗೆ ಇಳಿದಾಗ ಉಸಿರುಗಟ್ಟದೆ. ನಂತರ ಉಮೇಶ್‍ನನ್ನು ಕಾಪಾಡಲು ಸಂಪ್‍ಗೆ ಇಳಿದ ದಿಲೀಪ್ ಕೂಡಾ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

    ಸಂಪಿನ ಏರ್ ಔಟ್ ಮಾಡದೇ ಒಳಗೆ ಇಳಿದಿದ್ದೆ ದುರ್ಘಟನೆಗೆ ಕಾರಣವಾಗಿದೆ. ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಳಿಯನ ಪ್ರಾಣವನ್ನು ಮಾವ ತೆಗೆದ್ರೆ, ತನ್ನ ಪ್ರಾಣವನ್ನೇ ತಾನೇ ತೆಗೆದ್ಳು ಮಗಳು: ಇದು ಫಿಲ್ಮಿ ಸ್ಟೈಲ್ ಟ್ರಾಜಿಡಿ ಕಥೆ

    ಅಳಿಯನ ಪ್ರಾಣವನ್ನು ಮಾವ ತೆಗೆದ್ರೆ, ತನ್ನ ಪ್ರಾಣವನ್ನೇ ತಾನೇ ತೆಗೆದ್ಳು ಮಗಳು: ಇದು ಫಿಲ್ಮಿ ಸ್ಟೈಲ್ ಟ್ರಾಜಿಡಿ ಕಥೆ

    ಹೈದರಾಬಾದ್: ಸಿನಿಮೀಯ ಕಥೆಯಂತೆ ಮೇಲ್ಜಾತಿ -ಕೆಳಜಾತಿ ಗಲಾಟೆಯಲ್ಲಿ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಅಳಿಯನ್ನು ಮಾವ ಕೊಲೆ ಮಾಡಿ ಸುಟ್ಟು ಹಾಕಿದ್ದರೆ, ಆಳಿಯನನ್ನು ಕೊಲೆ ಮಾಡಿ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ಬೀಗುತ್ತಿದ್ದ ತಂದೆಗೆ ಮಗಳು ನೇಣಿಗೆ ಶರಣಾಗುವ ಮೂಲಕ ಶಾಕ್ ನೀಡಿದ್ದಾಳೆ.

    ನರೇಶ್(23) ಮಾವನಿಂದಲೇ ಕೊಲೆಯಾದರೆ, ಪತಿ ನಾಪತ್ತೆಯಾಗಿದ್ದನ್ನು ಕಂಡು ಸ್ವಾತಿ(23) ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೆಲಂಗಾಣದಲ್ಲಿ ಈ ಕೊಲೆ, ಆತ್ಮಹತ್ಯೆ ನಡೆದಿದ್ದು, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಪತ್ನಿ ಸ್ವಾತಿಯ ತಂದೆ ಶ್ರೀನಿವಾಸ್ ರೆಡ್ಡಿ ಮತ್ತು ಆತನ ಸಂಬಂಧಿಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ರೆಡ್ಡಿ ಸಮುದಾಯಕ್ಕೆ ಸೇರಿದ ಸ್ವಾತಿ(23) ನಲಗೊಂಡಾ ಜಿಲ್ಲೆಯ ವಲಿಗೊಂಡದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ಫೇಸ್‍ಬುಕ್ ಮೂಲಕ ನರೇಶ್ ಪರಿಚಯವಾಗಿತ್ತು. ಈ ಪ್ರೀತಿಗೆ ಸ್ವಾತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ಮುಂಬೈ ನ್ಯಾಯಾಲಯದಲ್ಲಿ ಮದುವೆಯಾಗಿದ್ದರು.

    ಮಗಳು ಮದುವೆಯಾದ ವಿಚಾರ ತಿಳಿದ ತಂದೆ ಶ್ರೀನಿವಾಸ್ ರೆಡ್ಡಿ ಸ್ವಾತಿಗೆ ಕರೆ ಮಾಡಿ, ಮನೆಗೆ ಬಾ, ಬಹಳ ಅದ್ಧೂರಿಯಾಗಿ ನಿಮ್ಮಿಬ್ಬರ ಮದುವೆ ನಡೆಸುತ್ತೇನೆ ಎಂದು ಹೇಳಿದ್ದ. ಈ ಮಾತಿಗೆ ಬೆಲೆ ನೀಡಿದ ಸ್ವಾತಿ ಮೇ 2ರಂದು ತಂದೆಯ ಜೊತೆ ತನ್ನ ಗ್ರಾಮಕ್ಕೆ ತೆರಳಿದ್ದರೆ, ನರೇಶ್ ಲಿಂಗರಾಜಪಲ್ಲಿ ಗ್ರಾಮಕ್ಕೆ ತೆರಳಿದ್ದ.

    ಅಳಿಯನ ಕೊಲೆ:
    ನರೇಶ್ ಲಿಂಗರಾಜಪುರಪಲ್ಲಿಕ್ಕೆ ತೆರಳುತ್ತಿದ್ದಾಗ ಶ್ರೀನಿವಾಸ್ ರೆಡ್ಡಿ ತನ್ನ ಸಂಬಂಧಿಯ ಜೊತೆ ಸೇರಿ, ನರೇಶ್ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಯಾದ ಮೃತದೇಹವನ್ನು ಬೆಂಕಿಯಿಂದ ಸುಟ್ಟು ಕೆಲ ಭಾಗಗಳನ್ನು ನದಿಗೆ ಇವರು ಎಸೆದಿದ್ದರು.

    ನರೇಶ್ ಸಂಪರ್ಕಿಸಲು ಸಾಧ್ಯವಾಗ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಸ್ವಾತಿ ಮನೆಯ ಸ್ನಾನಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಅಂತ್ಯಸಂಸ್ಕಾರವನ್ನು ತಂದೆ ಶ್ರೀನಿವಾಸ ರೆಡ್ಡಿ ನರೇಶ್ ಸುಟ್ಟ ಜಾಗದಲ್ಲಿ ನೆರೆವೇರಿಸಿದ್ದ.

    ಮಗಳಿಗೆ ನರೇಶ್ ತುಂಬಾ ಹಿಂಸೆ ನೀಡುತ್ತಿದ್ದ. ವರದಕ್ಷಿಣ ತರಬೇಕೆಂದು ಪೀಡಿಸುತ್ತಿದ್ದ. ಈ ಕಾರಣಕ್ಕೆ ನಾನು ನರೇಶ್ ನನ್ನು ಕೊಲೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾನೆ.

    ಬೆಳಕಿಗೆ ಬಂದಿದ್ದು ಹೇಗೆ? ನರೇಶ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ತಂದೆ ವೆಂಕಟೇಶ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅಷ್ಟೇ ಅಲ್ಲದೇ ಮಗನ ನಾಪತ್ತೆಯಾಗಿರುವ ಪ್ರಕರಣದ ಹಿಂದೆ ಸ್ವಾತಿ ತಂದೆಯ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಜೂನ್ 1ರ ಒಳಗಡೆ ನಾಪತ್ತೆ ಪ್ರಕರಣವನ್ನು ಬೇಧಿಸಿ ಮಾಹಿತಿ ನೀಡಬೇಕೆಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶ್ರೀನಿವಾಸ ರೆಡ್ಡಿಯನ್ನು ವಿಚಾರಣೆ ನಡೆಸಿದಾಗ ಲವ್ ಮರ್ಡರ್ ಪ್ರಕರಣ ಬೆಳಕಿಗೆ ಬಂದಿದೆ.

    ಶನಿವಾರ ಪೊಲೀಸರು ನರೇಶ್‍ನನ್ನು ಹತ್ಯೆ ಮಾಡಿದ ಸ್ಥಳದಿಂದ ಕೆಲ ಅವಶೇಷಗಳನ್ನು ತೆಗೆದಿದ್ದಾರೆ.

  • ಮಗಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿದ್ರು – ಆತ್ಮಹತ್ಯೆ ಅಂತ ಬರೆದು ಸಹಿ ಹಾಕ್ಸಿದ್ರು ಪೊಲೀಸ್ರು?

    ಮಗಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿದ್ರು – ಆತ್ಮಹತ್ಯೆ ಅಂತ ಬರೆದು ಸಹಿ ಹಾಕ್ಸಿದ್ರು ಪೊಲೀಸ್ರು?

    – ಪತಿ, ಮತ್ತು ಆತನ ಪೋಷಕರ ವಿರುದ್ಧ ಪರಶುರಾಮ್ ಆರೋಪ

    ಶಿವಮೊಗ್ಗ: ಓದು-ಬರಹ ಬಾರದ ಅಮಾಯಕರೊಬ್ಬರಿಗೆ ಪೊಲೀಸರು ಅನ್ಯಾಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಸ್ಟೌವ್, ಕುಕ್ಕರ್, ಮಿಕ್ಸಿ ರಿಪೇರಿ ಕೆಲಸ ಮಾಡುತ್ತಿದ್ದ ಪರುಶುರಾಮ್ ಎಂಬುವರ ಮಗಳು ಅಶ್ವಿನಿ ಸಂಬಂಧಿಯೊಬ್ಬನನ್ನು ಹೇಳದೇ ಕೇಳದೇ ಮದ್ವೆಯಾಗಿದ್ದಳು. ಮಗಳು ಚೆನ್ನಾಗಿದ್ರೆ ಸಾಕು ಅಂತ ತಂದೆ ತಾಯಿ ಸುಮ್ಮನಾಗಿದ್ರು. ಆದ್ರೆ ಒಂದು ದಿನ ನಿಮ್ಮ ಮಗಳು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಅಂತಾ ಸುದ್ದಿ ಬಂತು. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗಳು ಅಶ್ವಿನಿ ಮೃತಪಟ್ಟಳು.

    ಓದು-ಬರಹ ತಿಳಿಯದ ಪರಶುರಾಮ್‍ರಿಂದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಸಾಕ್ಷಿಗೆ ಅಂತಾ ಸಹಿ ಹಾಕಿಸಿಕೊಂಡ್ರು. ಮಗಳನ್ನು ಕೊಂದವರಿಗೆ ಶಿಕ್ಷೆ ಆಗುತ್ತೆ ಅಂತಾ ಕಾಯ್ತಿದ್ದ ಪರಶುರಾಮ್‍ಗೆ ಇದೀಗ ಶಾಕ್ ಆಗಿದೆ.

    ಯಾಕಂದ್ರೆ ಕೊಲೆ ಮಾಡಿದ ಆಕೆಯ ಅತ್ತೆ, ಮಾವ, ಪತಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಅಂದು ಪೊಲೀಸರು ಸಹಿ ಹಾಕಿಸಿಕೊಂಡಿದ್ದ ಪತ್ರಗಳನ್ನು ಅಕ್ಕಪಕ್ಕದವರಿಂದ ಓದಿಸಿದಾಗ ಸಿನಿಮಾಕ್ಕೆ ಕರೆದುಕೊಂಡು ಹೋಗಲಿಲ್ಲ ಅಂತಾ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದಕ್ಕೆ ಯಾರೂ ಕಾರಣರಲ್ಲ ಅಂತಾ ಬರೆದಿತ್ತು ಎನ್ನಲಾಗಿದೆ.

    ಈ ಸಂಬಂಧ ಪರಶುರಾಮ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗಳು ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದ್ದಾಳೆ ಅಂದ ಕೂಡಲೇ ನಾವು ಆಸ್ಪತ್ರೆಗೆ ಹೋಗಿದ್ದೆವು. ಆದ್ರೆ ಅಲ್ಲಿ ನಿಮ್ಮ ಮಗಳ ಶೆ.60ರಷ್ಟು ದೇಹ ಸುಟ್ಟು ಹೋಗಿದೆ. ಹೀಗಾಗಿ ಆಕೆ ಉಳಿಯುತ್ತಾಳೆ ಅನ್ನೋ ಭರವಸೆ ನಾವು ಕೊಡಲ್ಲ ಅಂತಾ ವೈದ್ಯರು ಹೇಳಿದ್ದರು. ನನಗೆ ಓದೋಕೆ ಬರಲ್ಲ ಏನೂ ಬರಲ್ಲ ಅಂತಾ ಗೊತ್ತಿದ್ದು ಪೊಲೀಸ್ರು ನನ್ನ ಕೈಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ಅಕ್ಕಪಕ್ಕದ ಮನೆಯವರ ಜೊತೆ ಸಹಿ ಹಾಕಿಸಿದ ಹಾಳೆಯನ್ನು ತೋರಿಸಿದಾಗ ಅವರು, ನಿಮ್ಮ ಮಗಳೇ ಸ್ವತಃ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಹೇಳಿ ನಿನ್ನ ಬಳಿ ಸಹಿ ಹಾಕಿಸಿಕೊಂಡಿದ್ದಾರೆ ಅಂತಾ ಹೇಳಿದ್ರು. ಈ ವೇಳೆ ವಿಚಾರ ನಮಗೆ ತಿಳಿದಿದೆ. ಆದ್ರೆ ಈ ಬಗ್ಗೆ ಪೊಲೀಸರ ಹತ್ರ ಕೇಳು ಹೋದ್ರೆ ನಮಗೆ ಮಾತಾಡಲು ಅವಕಾಶನೇ ಕೊಡಲ್ಲ. ಸರ್ ಏನಿದು? ಯಾಕ್ ಹಿಂಗೆ ಮಾಡಿದ್ರಿ ಅಂತಾ ಕೆಳಿದ್ರೆ, ನಿಗ್ಯಾಕೋ ಅದೆಲ್ಲಾ. ಸುಮ್ನೆ ನಿಂತ್ಕೋ ಅಲ್ಲಿ. ನಾವು ಹೇಳಿದಷ್ಟು ಕೇಳು ಅಂತಾ ಬೆದರಿಸುತ್ತಾರೆ. ಒಟ್ಟಿನಲ್ಲಿ ನಮ್ಮ ಜಾಗದಲ್ಲಿ ಬೇರೆ ತಂದೆ-ತಾಯಿ ಇರುತ್ತಿದ್ರೆ ಜೀವ ಕಳ್ಕೊಂಡು ಬಿಡೋರು. ಸದ್ಯ ಮಗಳ ಸಾವಿಗೆ ನ್ಯಾಯ ಕೊಡಿಸಬೇಕೆಂದು ಅಂತಾ ಕಣ್ಣೀರು ಹಾಕಿದ್ದಾರೆ.

  • ನಡುರಸ್ತೇಲಿ ಲಾಂಗು, ಮಚ್ಚುಗಳಿಂದ 2 ಗುಂಪುಗಳ ನಡುವೆ ಗ್ಯಾಂಗ್ ವಾರ್ – ವಿಡಿಯೋ ನೋಡಿ

    ನಡುರಸ್ತೇಲಿ ಲಾಂಗು, ಮಚ್ಚುಗಳಿಂದ 2 ಗುಂಪುಗಳ ನಡುವೆ ಗ್ಯಾಂಗ್ ವಾರ್ – ವಿಡಿಯೋ ನೋಡಿ

    ಕಲಬುರಗಿ: ನಗರದ ಗೋವಾ ಹೋಟೆಲ್ ಬಳಿ ಇತ್ತೀಚಿಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಪುಡಿ ರೌಡಿಗಳು ಯಾರ ಭಯವಿಲ್ಲದೇ ನಡು ರಸ್ತೆಯಲ್ಲಿ ಲಾಂಗ್, ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಏನಿದು ಘಟನೆ?: ಮೇ 23ರಂದು ನಗರದ ಗೋವಾ ಹೋಟೆಲ್ ಬಳಿ ಸೆವನ್ ಸ್ಟಾರ್ ಪ್ರದೀಪ ಗ್ಯಾಂಗ್‍ನವರು ಎದುರಾಳಿ ಫಯೀಮ್ ಗ್ಯಾಂಗ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ರೌಡಿ ಫಯೀಮ್, ನಿತಿನ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ರೌಡಿಗಳು ಒಬ್ಬರ ಮೇಲೊಬ್ಬರು ಹಲ್ಲೆ ಮಾಡುವುದನ್ನ ಕಂಡ ಸ್ಥಳೀಯರು ಭಯಭೀತರಾಗಿ ಅಂಗಡಿಗಳನ್ನು ಮುಚ್ಚಿಕೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಕಲಬುರಗಿ ಎಸ್‍ಪಿ ಎನ್. ಶಶಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಇತ್ತೀಚಿಗೆ ಈ ಎರಡು ಗ್ಯಾಂಗ್‍ಗಳ ನಡುವೆ ಪದೇ ಪದೇ ಜನವಸತಿ ಪ್ರದೇಶದಲ್ಲಿ ಗಲಾಟೆ ನಡೆಯುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ವಿಡಿಯೋ: ಹಾಡಹಗಲೇ ವ್ಯಕ್ತಿಯನ್ನ ಅಟ್ಟಾಡಿಸಿ ಕುರಿ ಕಡಿಯುವಂತೆ ಕೊಚ್ಚಿ ಕೊಚ್ಚಿ ಕೊಂದ್ರು

    https://www.youtube.com/watch?v=o0057li_BTo

     

  • ಕಿಡ್ನ್ಯಾಪ್ ಪ್ರಕರಣದಲ್ಲಿ `ಎರಡು ಕನಸು’ ಚಿತ್ರದ ನಿರ್ದೇಶಕ ಸೇರಿ ಐವರ ಬಂಧನ

    ಕಿಡ್ನ್ಯಾಪ್ ಪ್ರಕರಣದಲ್ಲಿ `ಎರಡು ಕನಸು’ ಚಿತ್ರದ ನಿರ್ದೇಶಕ ಸೇರಿ ಐವರ ಬಂಧನ

    ಬೆಂಗಳೂರು: ರವಿ ಅಕ್ಷಯ ಅಡ್ವರ್ಟೈಸಿಂಗ್ ಮಾಲೀಕ ಪರಮೇಶ್‍ರನ್ನು ಬಸವೇಶ್ವರ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ಎರಡು ಕನಸು ಚಿತ್ರದ ನಿರ್ದೇಶಕ ಮದನ್‍ರನ್ನು ಪೊಲೀಸರು ಬಂಧಿಸಿದ್ದಾರೆ.

    ಚಿತ್ರದ ಪ್ರಮೋಷನ್‍ಗಾಗಿ ನಿರ್ದೇಶಕ ಮದನ್, ಪರಮೇಶ್‍ಗೆ 16.3 ಲಕ್ಷ ಹಣ ಕೊಟ್ಟಿದ್ದರು. ಚಿತ್ರದ ಪ್ರಮೋಷನ್ ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ 8 ಲಕ್ಷ ರೂ. ಹಣ ವಾಪಸ್ ನೀಡುವಂತೆ ಕೇಳಿದ್ದರು. ಈ ನಡುವೆ ನಿರ್ದೇಶಕ ಮದನ್‍ರಿಂದ ಪರಮೇಶ್ ಅಂತರ ಕಾಯ್ದುಕೊಂಡಿದ್ದರು. ಪರಮೇಶ್ ಹಣ ಕೊಡಲು ನಿರಾಕರಿಸಿದಾಗ ಮದನ್ ತನ್ನ ಸಹಚರರಾದ ಚಲಪತಿ, ಕಿರಣ್, ಮೂರ್ತಿ ಮತ್ತು ಮೋಹನ್ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿದ್ದಾರೆ.

    ಮೂರು ದಿನಗಳ ಹಿಂದೆ ಪರಮೇಶ್‍ರನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳು, ಬಳಿಕ ಬ್ಯಾಟ್ ಮತ್ತು ಬೆಲ್ಟ್‍ನಿಂದ ಪರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ದೇವನಹಳ್ಳಿ ಹತ್ತಿರ ಡೈರೆಕ್ಟರ್ ಮದನ್ ಸೇರಿದಂತೆ ಐವರು ಆರೋಪಿಗಳನ್ನು ಶುಕ್ರವಾರ ರಾತ್ರಿ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.