Tag: police quarters

  • ಜನರ ರಕ್ಷಣೆ ಮಾಡುವ ಪೊಲೀಸರ ಕುಟುಂಬದ ಕಣ್ಣೀರ ಕಥೆ

    ಜನರ ರಕ್ಷಣೆ ಮಾಡುವ ಪೊಲೀಸರ ಕುಟುಂಬದ ಕಣ್ಣೀರ ಕಥೆ

    ಬೆಳಗಾವಿ: ಪುಂಡಪೋಕರಿ ಹಾಗೂ ಕಳ್ಳ, ಕಾಕರಿಗೆ ಮೂಗುದಾರ ಹಾಕುವ ಖಾಕಿ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಿನ್ನಡೆ ಸಾಧಿಸುತ್ತಿದೆ. ನಾಲ್ಕೈದು ದಶಕಗಳಿಂದ ಪೊಲೀಸ್ ವಸತಿಗೃಹಗಳಲ್ಲಿ ನೂರಾರು ಪೊಲೀಸ್ ಕುಟುಂಬಗಳು ಸಮಸ್ಯೆಗೆ ಸಿಲುಕಿ ಜೀವನ ಸಾಗಿಸುತ್ತಿದ್ದಾರೆ. ಮಳೆಗಾಲ ಸಂದರ್ಭದಲ್ಲಿ ಸಿಬ್ಬಂದಿಗಳ ಕುಟುಂಬಗಳು ಸೂರುತ್ತಿರುವ ಸೂರಿನ ಅಡಿಯಲ್ಲಿ ಕಾಲ ಕಳೆಯುವ ಅರ್ನಿವಾಯತೆ ಇದೆ. ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿ ಪಕ್ಕದಲ್ಲಿರುವ ಜಿಲ್ಲಾ ಪೊಲೀಸ್ ಕೇಂದ್ರಿಯ 200 ವಸತಿ ಗೃಹಗಳಲ್ಲಿ ಸಿಆರ್ ಸಿಬ್ಬಂದಿ ವಾಸವಾಗಿದ್ದಾರೆ. ಇಲ್ಲಿನ ಕುಟುಂಬಗಳು ಸಮರ್ಪಕ ನೀರಿನ ಸೌಲಭ್ಯ ಇಲ್ಲದೆ ಪರದಾಡುತ್ತಿವೆ. ನಾಲ್ಕೈದು ದಿನಕ್ಕೂಮ್ಮೆ ನೀರು ಹಾಗೂ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಕಾಡತೊಡಗಿದೆ. ನೀರನ್ನು ಶೇಖರಿಸುವ ಟ್ಯಾಂಕರ್ ಹಳೆಯದಾಗಿದ್ದು, ನೀರು ಕಲುಷಿತಗೊಂಡು ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು ಎಂದು ಇಲ್ಲಿನ ಮಹಿಳೆಯರು ಆರೋಪಿಸಿದ್ದಾರೆ.

    ಕಳಚಿದ ತಡೆಗೋಡೆ: 200ಕ್ಕೂ ಅಧಿಕ ವಸತಿಗೃಹಗಳ ಪೈಕಿ 30 ಮನೆಗಳು ಹಾಳಾಗಿವೆ. ಇನ್ನುಳಿದ ಗೃಹಗಳನ್ನು ಆಯುಕ್ತರ ಸಿಬ್ಬಂದಿಗಳ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ವಸತಿಗೃಹಗಳಿಗೆ ಸುತ್ತಲೂ ಸುಣ್ಣ-ಬಣ್ಣ ಬಳಿಯಲಾಗಿದೆ ಆದರೆ ಒಳಗಡೆ ಕುಟುಂಬಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಪಕ್ಕದಲ್ಲಿ ಚರಂಡಿ, ಕಸದ ರಾಶಿ ಹಾಗೂ ವಿದ್ಯುತ್ ದೀಪಗಳ ಕೊರತೆಯಿದೆ. ನಾಲ್ಕು ದಿಕ್ಕಿನಲ್ಲಿ ಗೋಡೆ ಹಾಳಾಗಿದರಿಂದ ಬೀದಿನಾಯಿಗಳಿಗೆ ಸೂಕ್ತ ಸ್ಥಳವಾಗಿದೆ. ಎಡಭಾಗದಲ್ಲಿ ಗೋಡೆ ಮಾಯವಾಗಿದ್ದು, ಈಗಿರುವ ಬೇಲಿ ಕಳಚಿಕೊಂಡಿದ್ದರಿಂದ ಕಳ್ಳರಿಗೆ, ಪುಂಡಪೋಕರಿಗಳಿಗೆ ಇಲಾಖೆ ಅವಕಾಶ ನೀಡಿದಂತಾಗಿದೆ. ಹೀಗಾಗಿ ಸಾರ್ವಜನಿಕರಿಗೆ ರಕ್ಷಣಾ ಒದಗಿಸುವ ಪೊಲೀಸ್ ಸಿಬ್ಬಂದಿ ಮನೆಗಳ ಭದ್ರತೆ ಗೋಡೆ ಕಳಚಿದೆ.

    ಸೊರಗಿದ ಉದ್ಯಾನವನ: ಬಿಡುವಿನ ವೇಳೆಯಲ್ಲಿ ಮಕ್ಕಳು, ವೃದ್ಧರಿಗಾಗಿ ನಿರ್ಮಿಸಲಾದ ವಾಯುವಿಹಾರ ನಿರ್ವಹಣೆ ಇಲ್ಲದೆ ಸೊರಗಿದ್ದು, ಸದ್ಯ ಸೌಂದರ್ಯದಿಂದ ಕಳೆದುಕೊಂಡು ಪಾಳುಬಿಂದತಾಗಿದೆ. 1500 ಜನರಿಗೆ ವಿಶ್ರಾಂತಿಯಾಗಬೇಕಿದ್ದ ಉದ್ಯಾನವನದಲ್ಲಿ ಕಸ, ಹುಲ್ಲು ಬೆಳೆದು ನಿಂತಿದೆ. ವಿದ್ಯಾರ್ಥಿಗಳು, ಕುಟುಂಬಸ್ಥರು ಈ ಕಡೆಗೆ ಬರುವುದೇ ವಿಶೇಷವಾಗಿದೆ. ಮಕ್ಕಳು ಮನೆಯ ಅಂಗಳವನ್ನು
    ಕ್ರೀಡಾ, ಉದ್ಯಾನವನ ಮಾಡಿಕೊಂಡಿದ್ದಾರೆ.

    ಶೀಘ್ರದಲ್ಲಿ ನೂತನ ವಸತಿಗೃಹ: ಹಳೆಯ ಗೃಹಗಳನ್ನು ನೆಲಸಮಗೊಳ್ಳಿಸಲಾಗುವುದು. ಲಿಂಗರಾಜ ಶಾಲೆಯ ಪಕ್ಕದಲ್ಲಿ 38 ವಸತಿಗೃಹಗಳ ಪೈಕಿ 6 ಪಿಎಸ್‍ಐ ಹಾಗೂ 23 ವಸತಿಗೃಹ ಪೇದೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಶಾಹುಪೂರದಲ್ಲಿ 12 ವಸತಿಗೃಹ ನಿರ್ಮಾಣವಾಗುತ್ತಿದೆ. ಕಾಕತಿ ನಿರ್ಮಿಣಿಸಲಾದ 12 ವಸತಿಗೃಹಗಳನ್ನು ಪೇದೆಗಳಿಗೆ ಶೀಘ್ರದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

    ಹೀರೆಬಾಗೆವಾಡಿಯಲ್ಲಿ ನೂತನವಾಗಿ ವಸತಿಗೃಹ ನಿರ್ಮಾಣವಾಗುತ್ತಿದೆ. ಜತೆಗೆ ಬೃಹತ್ ಪೊಲೀಸ್ ಆಯುಕ್ತಾಲಯ ತಲೆ ಎತ್ತಲಿದೆ. ಪೊಲೀಸ್ ಸಿಬ್ಬಂದಿಗಳಿಗೆ ವ್ಯವಸ್ಥೆ ಕಲ್ಪಿಸಲು ಇಲಾಖೆ ಸನ್ನದ್ಧವಾಗಿದೆ ಅನುದಾನದ ಯಾವುದೇ ಕೊರತೆಯಿಲ್ಲ. ಆಯುಕ್ತರ ಸಿಬ್ಬಂದಿಗಳಿಗೆ ನೀಡಲಾಗಿರುವ 48 ವಸತಿಗೃಹಗಳ ಸದ್ಯ ದುರಸ್ತಿ ಮಾಡಲಾಗಿದ್ದು, ಹೆಚ್ಚುವರಿ ವಸತಿಗೃಹಗಳಿಗಾಗಿ ಇಲಾಖೆ ಯೋಜನೆ ರೂಪಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ರಜೆ ಕೊರತೆ: ಜನಸಾಮನ್ಯರಿಗೆ ಸರ್ಪಗಾವಲಾಗಿರುವ ಪೊಲೀಸ್ ಸಿಬ್ಬಂದಿಗೆ ವಾರದ ಬಿಡುವ ಕಗ್ಗಂಟಾಗಿದೆ. ದಿನದ 24 ಗಂಟೆ ಕಾರ್ಯನಿರ್ವಸುವ ಪೊಲೀಸ್‍ರಿಗೆ ವಾರದ ರಜೆ ಅಗತ್ಯವಾಗಿದ್ದು, ಸರ್ಕಾರ ಈ ವ್ಯವಸ್ಥೆ ಕಲ್ಪಿಸಲು ಹಿಂದೇಟು ಹಾಕುತ್ತಿದೆ. ದುಡಿದ ವಾರದ ಭತ್ತೆಯನ್ನು ಸಿಬ್ಬಂದಿಎ ಸರ್ಕಾರ ನೀಡುತ್ತಿಲ್ಲ ಎಂಬ ಆಘಾತಕಾರಿ ಮಾಹಿತಿ ಪೊಲೀಸ್ ಇಲಾಖೆಯಿಂದ ಹೊರಬಿದ್ದಿದೆ. ಜನಸಾಮಾನ್ಯರ ರಕ್ಷಣೆಗಾಗಿ ಹಗಳಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಗೆ ಸರ್ಕಾರ ಕೊರತೆಗಳನ್ನು ನೀಗಿಸಿ ಸೌಲಭ್ಯಕ್ಕಾಗಿ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ.

    ಸಿಬ್ಬಂದಿಗಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಶೀಘ್ರದಲ್ಲೇ ನೂತನ ವಸತಿಗೃಹಗಳನ್ನು ಪೇದೆಗಳಿಗೆ ನೀಡಲಾಗುವುದು. ತಡೆಗೋಡೆ ನಿರ್ಮಿಸಲು ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಭದ್ರತೆಗಾಗಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್. ಲೋಕೆಶಕುಮಾರ್ ಹೇಳಿದ್ದಾರೆ.

    ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ, ಮಳೆ ಸಂದರ್ಭದಲ್ಲಿ ವಸತಿ ಸೂರಿನ ಸಮಸ್ಯೆಯಿದೆ. ಪೊಲೀಸ್ ಸಿಬ್ಬಂದಿಗಾಗಿ ನೂತನ ವಸತಿಗೃಹಗಳನ್ನು ನಿರ್ಮಾಣವಾಗುತ್ತಿವೆ. ತ್ಯಾಜ್ಯ ವಸ್ತುಗಳನ್ನು ಪಾಲಿಕೆ ನಿರ್ವಹಣೆ ಮಾಡುತ್ತಿಲ್ಲ ಕುಟುಂಬಗಳು ಬಿಸಾಡಿದ ಕಸದರಾಶಿ ರಸ್ತೆಯಲ್ಲಿ ನರ್ತನ ಮಾಡುತ್ತಿದೆ ಹೆಸರು ಹೆಳಲು ಇಚ್ಚಯಿಸದ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

  • ಶಿಥಿಲಗೊಂಡ ವಸತಿ ನಿಲಯದಲ್ಲಿ ವಾಸಿಸುತ್ತಿದ್ದಾರೆ ಕಲಬುರಗಿ ಪೊಲೀಸರು!

    ಶಿಥಿಲಗೊಂಡ ವಸತಿ ನಿಲಯದಲ್ಲಿ ವಾಸಿಸುತ್ತಿದ್ದಾರೆ ಕಲಬುರಗಿ ಪೊಲೀಸರು!

    ಕಲಬುರಗಿ: ನಗರದ ಹೊರವಲಯ ತಾಜಸುಲ್ತಾನಪುರ ಕೆಎಸ್‍ಆರ್‍ಪಿ ಪೊಲೀಸ್ ವಸತಿ ನಿಲಯಗಳು ಸಂಪೂರ್ಣ ಶಿಥಿಲಗೊಂಡಿವೆ. ಇಂತಹ ಮನೆಗಳಲ್ಲಿ ಆತಂಕದ ನಡುವೆಯೇ ಪೊಲೀಸ್ ಪೇದೆಗಳು ದಿನಗಳೆಯುವಂತಾಗಿದೆ.

    ಸರ್ಕಾರ ಪ್ರತಿ ವರ್ಷ ನೂರಾರು ಕೋಟಿ ರೂ.ಗಳನ್ನು ಇತರೆ ಕಾಮಗಾರಿಗಳಿಗೆ ಖರ್ಚು ಮಾಡುತ್ತಿದೆ. ಇದರಲ್ಲಿ ಸ್ವಲ್ಪ ಹಣ ಮೀಸಲಿಟ್ಟರೆ ನೂತನ ಕಟ್ಟಡ ಪೊಲೀಸರಿಗೆ ಒದಗಿಸಬಹುದು. ಆದರೆ ಸರ್ಕಾರ ಇದಕ್ಕೆ ಮನಸ್ಸು ಮಾಡದ ಕಾರಣ ಸುಮಾರು 40 ರಿಂದ 50 ವರ್ಷಗಳ ಹಳೆಯದಾದ ಕಟ್ಟಡಗಳಲ್ಲಿ ಪೊಲೀಸರ ಕುಟುಂಬಗಳು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ವಾಸಿಸುವಂತಾಗಿದೆ.

    ಸಮಾಜದ ಸುರಕ್ಷತೆಗೆ ದುಡಿಯುವ ಪೊಲೀಸರ ಕುಟುಂಬಗಳು ಈ ಬಗ್ಗೆ ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಹಳೆಯ ಕಟ್ಟಡ ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಜೈ ಕರವೇ ಎಚ್ಚರಿಸಿದೆ.