Tag: Police Public TV

  • ಹಾವೇರಿ ಜೋಡಿ ಕೊಲೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    ಹಾವೇರಿ ಜೋಡಿ ಕೊಲೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    ಹಾವೇರಿ: 14 ವರ್ಷದ ಬಾಲಕ ಹಾಗೂ ಯುವಕನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹಾವೇರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕಾಂಪ್ಲೆಕ್ಸ್ ಒಂದರಲ್ಲಿ ಬುಧವಾರ ನಿಂಗಪ್ಪ ಶಿರಗುಪ್ಪಿ(28) ಮತ್ತು ಗಣೇಶ್ ಕುಂದಾಪುರ(14) ಹತ್ಯೆಯಾಗಿದ್ದರು. ಇದೀಗ ಹತ್ಯೆ ಮಾಡಿದ ಆರೋಪಿಗಳನ್ನು ಶಂಭುಲಿಂಗ ಪೋರಾಪುರ ಮತ್ತು ಮಂಜುನಾಥ್ ಯರೆಶೀಮೆ ಎಂದು ಗುರುತಿಸಲಾಗಿದೆ.

    ಆರೋಪಿ ಶಂಭುಲಿಂಗ ಹಾಗೂ ಹತ್ಯೆಯಾದ ನಿಂಗಪ್ಪ ಸ್ನೇಹಿತನಾಗಿದ್ದನು. 4 ಲಕ್ಷ ರೂಪಾಯಿ ಕೊಟ್ಟ ಹಣ ಮರಳಿಸದೆ ಬೈಕ್, ಕಾರು ತೆಗೆದುಕೊಂಡು ವಾಪಸ್ ಕೊಡದೆ ಪದೇ ಪದೇ ನಮಗೆ ನಿಂಗಪ್ಪ ಬೆದರಿಕೆ ಹಾಕುತ್ತಿದ್ದ. ಹಾಗಾಗಿ ರಾಡ್ ಮತ್ತು ಡಂಬಲ್ಸ್ ನಿಂದ ಹೊಡೆದು ನಿಂಗಪ್ಪನ ಹತ್ಯೆ ಮಾಡಿದ್ದೇವೆ ಎಂದು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಕೊಲೆ ಮಾಡಿದ ಆರೋಪಿ ಶಂಭುಲಿಂಗ ಎರಡು ಲಾರಿ ಇಟ್ಟುಕೊಂಡು ಮರಳು ಸಾಗಾಣಿಕೆ ಹಾಗೂ ಇತರೆ ವ್ಯಾಪಾರ ವಹಿವಾಟು ಮಾಡುತ್ತಿದ್ದ. ಕೊಲೆಗೆ ಶಂಭುಲಿಂಗನ ಲಾರಿ ಚಾಲಕನಾಗಿದ್ದ ಮಂಜುನಾಥ್ ಸಹಕಾರಿಯಾಗಿದ್ದ ಎಂದು ವರದಿಯಾಗಿದ್ದು, ಕೊಲೆಯಾದ ನಿಂಗಪ್ಪ ಡಕಾಯಿತಿ ಮತ್ತು ಕೊಲೆ ಪ್ರಕರಣ ಒಂದರಲ್ಲಿ ಶಿಕ್ಷೆಗೆ ಒಳಗಾಗಿ ಕಳೆದೊಂದು ವರ್ಷದಿಂದ ಜಾಮೀನು ಮೇಲೆ ಹೊರಗಡೆ ಇದ್ದ ಎನ್ನಲಾಗಿದೆ. ಗಣೇಶ್ ಯಾವಾಗಲೂ ನಿಂಗಪ್ಪನ ಜೊತೆ ಇರುತ್ತಿದ್ದರಿಂದ ಕೊಲೆ ಬಗ್ಗೆ ಹೇಳಬಹುದೆಂದು ಆರೋಪಿಗಳು ಗಣೇಶನನ್ನು ಹತ್ಯೆ ಮಾಡಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

  • ಪ್ರಿಯತಮನಿಗೆ ಜಾಮೀನು ಕೊಡಲು ಒಪ್ಪದ ತಂದೆ – ಬಾಲಕಿ ಆತ್ಮಹತ್ಯೆ

    ಪ್ರಿಯತಮನಿಗೆ ಜಾಮೀನು ಕೊಡಲು ಒಪ್ಪದ ತಂದೆ – ಬಾಲಕಿ ಆತ್ಮಹತ್ಯೆ

    – ಮಗಳಿಗೆ ಬುದ್ದಿ ಹೇಳಲು ಹೋಗಿ ಕಣ್ಣೀರು ಹಾಕುತ್ತಿರುವ ತಂದೆ

    ಗಾಂಧಿನಗರ: ಪ್ರಿಯತಮನಿಗೆ ಜಾಮೀನು ಕೊಡಿಸಲು ಅಪ್ಪ ಒಪ್ಪಲಿಲ್ಲ ಎಂದು ಸಿಟ್ಟಿಗೆದ್ದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ರಾಜ್‍ಕೋಟ್‍ನಲ್ಲಿ ನಡೆದಿದೆ.

    17 ವರ್ಷದ ಬಾಲಕಿಯೊಬ್ಬಳು 21ರ ಯುವಕನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗುವುದಾಗಿ ತಂದೆಯ ಬಳಿ ಹೇಳಿದ್ದಾಳೆ. ಕೋಪಗೊಂಡ ತಂದೆ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಲಕಿ ಜಾಮೀನು ಕೊಟ್ಟು ಪ್ರಿಯಕರನನ್ನು ಠಾಣೆಯಿಂದ ಬಿಡಿಸುವಂತೆ ತಂದೆಯನ್ನು ಕೇಳಿದ್ದಾಳೆ. ಆದರೆ ಆಕೆಯ ತಂದೆ ಮಗಳ ಮಾತಿಗೆ ಒಪ್ಪಲಿಲ್ಲ. ಇದರಿಂದ ಯುವತಿ ಡಿಸೆಂಬರ್ 31 ರಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಬದುಕನ್ನು ಸರಿಪಡಿಸಲು ಹೋಗಿ ಮಗಳನ್ನೇ ಕಳೆದುಕೊಂಡ ನೋವಿನಲ್ಲಿ ಈಗ ತಂದೆ ಇದ್ದಾರೆ.

  • ಸ್ಪೋರ್ಟ್ಸ್ ಬೈಕ್ ಅಪಘಾತವಾಗಿ ಸಿನಿಮಾ ವಿತರಕ ಸಾವು -ಸುದೀಪ್ ಸಂತಾಪ

    ಸ್ಪೋರ್ಟ್ಸ್ ಬೈಕ್ ಅಪಘಾತವಾಗಿ ಸಿನಿಮಾ ವಿತರಕ ಸಾವು -ಸುದೀಪ್ ಸಂತಾಪ

    ಬೆಂಗಳೂರು: ಸ್ಪೋರ್ಟ್ಸ್ ಬೈಕ್ ಅಪಘಾತದಲ್ಲಿ ಸಿನಿಮಾ ವಿತರಕ ಮತ್ತು ಫೈನಾನ್ಶಿಯರ್ ಮೃತಪಟ್ಟಿದ್ದು, ನಟ ಸುದೀಪ್ ಕೂಡ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

    ಅಜಯ್ ಚಂದಾನಿ (48) ಮೃತ ಸಿನಿಮಾ ವಿತರಕ. ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಭಾನುವಾರ ಸಂಜೆ ಈ ಅಪಘಾತ ಸಂಭವಿಸಿದೆ. ಅಜಯ್ ಚಂದಾನಿ ಅವರು ವಸಂತನಗರದ ಅಬ್ಶೂಟ್ ಲೇಔಟ್‍ನ ನಿವಾಸಿಯಾಗಿದ್ದು, ತಮ್ಮ ಸುಮಾರು 7.5 ಲಕ್ಷ ರೂ. ಮೌಲ್ಯದ ಸುಜುಕಿ ವಿ ಸ್ಟಾರ್ಮ್ 650 ಎಕ್ಸ್ ಟಿ ಸೂಪರ್ ಬೈಕಿನಲ್ಲಿ ಮನೆಯಿಂದ ಭಾನವಾರ ಹೊರಗಡೆ ಹೊರಟ್ಟಿದ್ದರು.

    ಬೈಕನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದರಿಂದ ಸುಮಾರು 6.30ಕ್ಕೆ ಇವರು ಕನ್ನಿಂಗ್ ಹ್ಯಾಂ ರಸ್ತೆಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಸಂಚಾರ ಪೊಲೀಸರು ಅಳವಡಿಸಿದ್ದ ಸೂಚನಾ ಫಲಕಕ್ಕೆ ಮೊದಲು ಡಿಕ್ಕಿ ಹೊಡೆದಿದೆ. ಬಳಿಕ ಅಲ್ಲೇ ಸಮೀಪದಲ್ಲಿದ್ದ ಹೂಡಿ ಅಪಾರ್ಟ್ ಮೆಂಟ್‍ನ ಕಾಂಪೌಂಡ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಗೋಡೆಯನ್ನು ಸೀಳಿ ಅಲ್ಲೇ ಸಿಕ್ಕಿಕೊಂಡಿದೆ. ಆದರೆ ಅಜಯ್ ಚಂದಾನಿ ಅಪಾರ್ಟ್ ಮೆಂಟ್‍ನ ಗ್ರೌಂಡ್‍ಗೆ ಹೋಗಿ ಬಿದ್ದಿದ್ದಾರೆ.

    ತಕ್ಷಣ ಸ್ಥಳೀಯರು ಹೈಗ್ರೌಂಡ್ಸ್ ಸಂಚಾರಿ ಪೊಲೀಸರಿಗೆ ಮಾಹಿತಿ ತಿಳಿಸಿ ಅವರನ್ನು ಜೈನ್ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಂಗಳೂರಿನಲ್ಲಿ ಅತಿದೊಡ್ಡ ಹಿಂದಿ ಚಲನಚಿತ್ರ ವಿತರಕರಲ್ಲಿ ಒಬ್ಬರಾಗಿದ್ದ ದಿವಂಗತ ಪಾಲ್ ಚಂದಾನಿ ಅವರ ಪುತ್ರ ಅಜಯ್ ಚಂದಾನಿಯಾಗಿದ್ದು, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಕರ್ನಾಟಕದಲ್ಲಿ ಹಿಂದಿ ಚಲಚಚಿತ್ರಗಳ ಪ್ರಮುಖ ವಿತರಕರಾಗಿದ್ದರು. ಇವರ ಸಾವಿನ ಬಗ್ಗೆ ತಿಳಿದು ನಟ ಸುದೀಪ್ ಅವರು ಕೂಡ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

  • ಕೇಕ್ ಜೊತೆ ಮಾಜಿ ಪ್ರೇಯಸಿ ಮನೆಗೆ ಬಂದು ಹಾಲಿ ಲವ್ವರ್‌ನ ಕೊಂದ

    ಕೇಕ್ ಜೊತೆ ಮಾಜಿ ಪ್ರೇಯಸಿ ಮನೆಗೆ ಬಂದು ಹಾಲಿ ಲವ್ವರ್‌ನ ಕೊಂದ

    ಚಂಡೀಗಢ: ಯುವತಿಯೊಬ್ಬಳ ಮಾಜಿ ಲವ್ವರ್ ಮತ್ತು ಹಾಲಿ ಪ್ರಿಯಕರ ನಡುವೆ ಜಗಳ ನಡೆದಿದ್ದು, ಪರಿಣಾಮ ಮಾಜಿ ಪ್ರಿಯಕರ ತನ್ನ ಪ್ರೇಯಸಿಯ ಲವ್ವರ್ ನನ್ನು ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ರಾತ್ರಿ ನಾಯಗಾಂವ್ ನಲ್ಲಿ ನಡೆದಿದ್ದು ಮೋಹಿತ್(20) ಮುಖ್ಯ ಆರೋಪಿ ಎಂದು ಗುರುತಿಸಲಾಗಿದೆ. ಈತನ ಜೊತೆ ಇಬ್ಬರು ಸ್ನೇಹಿತರಾದ ಗೌರವ್ ಅಲಿಯಾಸ್ ಗೊಟಾ (21) ಮತ್ತು ರಣಜೀತ್ ಸಿಂಗ್ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸೋಮವಾರ ರಾತ್ರಿ ಆರೋಪಿ ಮೋಹಿತ್ ತನ್ನ ಹುಟ್ಟುಹಬ್ಬವನ್ನು ಆಚರಿಸಲು ಕೇಕ್ ತೆಗೆದುಕೊಂಡು ಇಬ್ಬರು ಸ್ನೇಹಿತರಾದ ಗೌರವ್ ಮತ್ತು ರಂಜಿತ್ ಸಿಂಗ್ ಜೊತೆ ಮಾಜಿ ಪ್ರಿಯತಮೆಯ ಮನೆಗೆ ಹೋಗಿದ್ದನು. ಆಗ ಆಕೆಯ ಹಾಲಿ ಪ್ರಿಯತಮ ರಾಕೇಶ್ ಅಲ್ಲಿದ್ದನು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ  ತಿರುಗಿ ಮೋಹಿತ್ ಸ್ನೇಹಿತರ ಸಹಾಯದಿಂದ ಚಾಕುವಿನಿಂದ ರಾಕೇಶ್ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

    ಮೃತ ರಾಕೇಶ್ ಬಾಲೋಂಗಿಯಲ್ಲಿರುವ ತನ್ನ ಮನೆಗೆ ಹಿಂದಿರುಗಲಿಲ್ಲ ಎಂದು ಕುಟುಂಬದವರು ಯುವತಿಯ ಮನೆಗೆ ಬಂದಾಗ ಈ ಕೊಲೆ ಬೆಳಕಿಗೆ ಬಂದಿದೆ. ಆಗ ರಾಕೇಶ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

    ಮೃತ ರಾಕೇಶ್ ಕಳೆದೆರಡು ದಿನಗಳಿಂದ ಯುವತಿಯ ಮನೆಯಲ್ಲಿದ್ದನು. ಈ ಘಟನೆ ನಡೆದ ಸಮಯದಲ್ಲಿ ಯುವತಿ ಮನೆಯಲ್ಲಿ ಇರಲಿಲ್ಲ. ಸೋಮವಾರ ಸಂಜೆ ಬರ್ತ್ ಡೇ ಆಚರಿಸಿಕೊಳ್ಳಲು ಆರೋಪಿ ಮೋಹಿತ್ ಮತ್ತು ಸ್ನೇಹಿತರ ಜೊತೆ ಬಂದು ಆತನನ್ನು ಹತ್ಯೆಗೈದಿದ್ದಾನೆ ಎಂದು ನಯಾಗಾಂವ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಗುರ್ವಂತ್ ಸಿಂಗ್ ಹೇಳಿದ್ದಾರೆ.

    ಈ ಕುರಿತು ಐಪಿಸಿ ಸೆಕ್ಷನ್ 302 ಮತ್ತು 34 ರ ಅಡಿಯಲ್ಲಿ ಪ್ರಕರಣವನ್ನು ನಾಯಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

  • ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ಮಡಿಕೇರಿ: 18 ವರ್ಷದ ಯುವತಿಯೊಬ್ಬಳು ತಲೆ ಕೂದಲು ಉದುರುತ್ತಿದೆ ಎಂದು ನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ಕೊಡಗು ಮೂಲದ ನೇಹಾ ಗಂಗಮ್ಮ(18) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮೂರು-ನಾಲ್ಕು ದಿನಗಳ ಹಿಂದೆ ಮನೆಗೆ ಹೋಗುತ್ತೇನೆ ಎಂದು ಪಿಜಿಯಿಂದ ಹೊರಟಿದ್ದಾಳೆ. ಆದರೆ ಮನೆಗೆ ಬಾರದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರ ಈಕೆ ಮೃತದೇಹ ಪತ್ತೆಯಾಗಿದೆ.

    ನೇಹಾ ಗಂಗಮ್ಮ ಒಂದು ತಿಂಗಳ ಹಿಂದೆ ತನ್ನ ಕೂದಲನ್ನು ವಿ.ವಿ ಮೊಹಲ್ಲದ ರೋಹಿಣಿ ಬ್ಯೂಟಿಪಾರ್ಲರ್ ಎಂಬಲ್ಲಿ ಸ್ಟ್ರೈಟ್ನಿಂಗ್ ಮಾಡಿಸಿದ್ದಾಳೆ. ನಂತರ ಕೂದಲು ಉದುರಲಾರಂಭಿಸಿದೆ. ಇದರಿಂದ ದೃತಿಗೆಟ್ಟ ನೇಹಾ ಬ್ಯೂಟಿಪಾರ್ಲರ್ ಮಾಲೀಕರೊಂದಿಗೆ ಮಾತನಾಡಿದ್ದಾಳೆ. ಆದರೂ ಕೂದಲು ಉದುರುವಿಕೆ ಕಡಿಮೆಯಾಗಿಲ್ಲ. ನಂತರ ಮೈಸೂರಿನಿಂದ ಕೊಡಗಿಗೆ ಆಗಮಿಸಿದ್ದು, ಮನೆಗೆ ಬಂದಿರಲಿಲ್ಲ.

    ಮನೆಯವರು ಕೂಡ ಮಗಳು ಮೈಸೂರಿನಲ್ಲಿ ಇದ್ದಾಳೆ ಎಂದು ತಿಳಿದು ಮಗಳಿದ್ದ ಪಿಜಿಗೆ ಕರೆ ಮಾಡಿದ್ದಾರೆ. ಆದರೆ ಮಗಳು ಪಿಜಿಯಲ್ಲಿ ಇಲ್ಲದಿರುವುದು ತಿಳಿದು ಬಂದಿದೆ. ನಂತರ ಪೊಷಕರು ತಮಗೆ ಗೊತ್ತಿರುವ ಕಡೆಯೆಲ್ಲ ಹುಡುಕಾಡಿದ್ದಾರೆ. ಆದರೆ ಏನು ಪ್ರಯೋಜವಾಗಿಲ್ಲ, ಕೊನೆಗೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಪ್ರಕರಣ ದಾಖಲಿಸಿಕೊಂಡು ಯುವತಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಆದರೆ ಶನಿವಾರ ನೇಹಾ ಮೃತದೇಹ ತನ್ನ ಸ್ವಗ್ರಾಮ ಬಾಳೆಲೆಯ ಲಕ್ಷ್ಮಣ ತೀರ್ಥ ನದಿಯಲ್ಲಿ ಪತ್ತೆಯಾಗಿದೆ. ಆನೇಕ ಬಾರಿ ನೇಹಾ ತಮ್ಮ ಪೊಷಕರ ಬಳಿ ತನ್ನ ಅಳಲು ತೋಡಿಕೊಂಡಿದ್ದು, ನಾನು ಕಾಲೇಜಿಗೆ ಹೋಗಲ್ಲ ನನ್ನ ಕೂದಲು ಉದರುವಿಕೆ ಸರಿಯಾದ ನಂತರ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆಗ ಪೋಷಕರು ಕೂಡ ಆಕೆಯನ್ನ ಸಮಾಧಾನ ಮಾಡಿ ಕಾಲೇಜಿಗೆ ಹೋಗು ಎಂದ ಹೇಳಿ ಮೈಸೂರಿಗೆ ಕಳುಹಿಸಿದ್ದಾರೆ. ಆದರೆ ಹೇರ್ ಫಾಲ್ ನಿಂದ ಕಂಗೆಟ್ಟ ನೇಹಾ ನೊಂದು ಸ್ವಗ್ರಾಮಕ್ಕೆ ಬಂದು ನದಿಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

    ಸದ್ಯಕ್ಕೆ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜನರಿಗೆ ಜಾಗೃತಿ ಮೂಡಿಸ್ತಿದ್ದಾಗ 5 ಎನ್‍ಜಿಒ ಕಾರ್ಯಕರ್ತೆಯರನ್ನು ಕಿಡ್ನಾಪ್‍ಗೈದು ಗ್ಯಾಂಗ್‍ರೇಪ್!

    ಜನರಿಗೆ ಜಾಗೃತಿ ಮೂಡಿಸ್ತಿದ್ದಾಗ 5 ಎನ್‍ಜಿಒ ಕಾರ್ಯಕರ್ತೆಯರನ್ನು ಕಿಡ್ನಾಪ್‍ಗೈದು ಗ್ಯಾಂಗ್‍ರೇಪ್!

    ಸಾಂದರ್ಭಿಕ ಚಿತ್ರ

    ರಾಂಚಿ: ಮಾನವ ಕಳ್ಳಸಾಗಾಣಿಕೆ ವಿರೋಧಿಸಿ ಜಾಗೃತಿ ಮೂಡಿಸುತ್ತಿದ್ದ ಐವರು ಸರ್ಕಾರೇತರ ಸಂಸ್ಥೆಯ(ಎನ್‍ಜಿಒ) ಕಾರ್ಯಕರ್ತೆಯರನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರಗೈದ ಘಟನೆ ಜಾರ್ಖಂಡ್ ರಾಜ್ಯದ ಖುಂತಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಮಾನವ ಕಳ್ಳಸಾಗಾಣಿಕೆ ವಿರೋಧಿಸಿ ಎನ್‍ಜಿಒ ಕಾರ್ಯಕರ್ತೆಯರು ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಕೊಚಾಂಗ್ ಬ್ಲಾಕ್ ನ ಮಿಶನ್ ಶಾಲೆಯೊಂದರ ಆವರಣದಲ್ಲಿ ಬೀದಿ ನಾಟಕ ಮಾಡುತ್ತಿದ್ದರು. ಅಷ್ಟರಲ್ಲಿ ವಾಹನವೊಂದರಲ್ಲಿ ಬಂದ ಶಸ್ತ್ರಧಾರಿ ವ್ಯಕ್ತಿಗಳು ಕಾರ್ಯಕರ್ತೆಯರನ್ನು ಅಪಹರಿಸಿದ್ದಾರೆ ಎಂದು ರಾಂಚಿ ಡಿಐಜಿ ಎಚ್. ವಲಿ ಹೋಮ್ಕಾರ್ ತಿಳಿಸಿದ್ದಾರೆ

    ಮಹಿಳೆಯರನ್ನು ಬಲವಂತವಾಗಿ ಕಾರಿನಲ್ಲಿ ಬಂದು ಅಪಹರಿಸಿದ ಕಾಮುಕರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮೂರು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಈ ಕೃತ್ಯ ಪಥಲ್ ಗಡಿ ಬೆಂಬಲಿಗರದ್ದೇ ಎಂದು ಹೇಳಲಾಗಿದೆ.

    ಯುವತಿಯರನ್ನು ಅತ್ಯಾಚಾರಗೈದಿರುವ ಕಿರಾತಕರು ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದು, ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಕಾಮುಕರ ಬೆದರಿಕೆಗೆ ಹೆದರಿದ ಮಹಿಳೆಯರು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಮೂಲಗಳನ್ನು ಪೊಲೀಸರಿಗೆ ಈ ಕೃತ್ಯದ ಬಗ್ಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಈ ರೀತಿಯಾದ ಯಾವುದೇ ವಿಡಿಯೊ ಕಂಡುಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ. ಈಗಾಗಲೇ ಕಾಮುಕರ ಪತ್ತೆಗೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ. ಆ ಗುಂಪಿನ ಕೆಲವರ ಗುರುತು ಕೂಡ ಪತ್ತೆಯಾಗಿದೆ. ಈ ಕುರಿತು ಹಲವೆಡೆ ತೀವ್ರ ಶೋಧ ನಡೆದಿದೆ ಎಂದು ಡಿಐಜಿ ಎಚ್. ವಲಿ ಹೋಮ್ಕಾರ್ ತಿಳಿಸಿದ್ದಾರೆ.

    ಪಥಲ್ ಗಡಿ ಎಂದರೇನು:
    ಜಖಾರ್ಂಂಡ್ ಬುಡಕಟ್ಟು ಜನಾಂಗಗಳು ಹೆಚ್ಚು ವಾಸವಾಗಿರುವ ಕಡೆ ಈ ಸಮುದಾಯದ ಪ್ರಾಬಲ್ಯ ಹೊಂದಿರುತ್ತದೆ. ಪ್ರಾಬಲ್ಯ ಹೊಂದಿದವರಿಗೆ ಪಥಲ್ ಗಡಿ ಎಂದು ಕರೆಯಲಾಗುತ್ತದೆ. ಪೊಲೀಸರಿಗೆ ಅಥವಾ ಸರ್ಕಾರಿ ಅಧಿಕಾರಿಗಳಿಗೆ ಈ ಗ್ರಾಮಗಳಿಗೆ ಪ್ರವೇಶ ಇರುವುದಿಲ್ಲ. ಪಥಲ್ ಗಡಿಯವರಿಂದ ಅನುಮತಿ ಸಿಕ್ಕಿದರೆ ಮಾತ್ರ ಈ ಗ್ರಾಮಗಳ ಪ್ರವೇಶ ಮಾಡಬಹುದಾಗಿದೆ.

  • ಪಕ್ಕದ ಮನೆಯ ಗೃಹಿಣಿ ಸ್ನಾನ, ಬಟ್ಟೆ ಬದಲಿಸೋ ವಿಡಿಯೋ ಮಾಡಿ, ಮದ್ವೆ ಆಗ್ತೀನಿ ಅಂದ ಪೋಲಿ ಪೇದೆ!

    ಪಕ್ಕದ ಮನೆಯ ಗೃಹಿಣಿ ಸ್ನಾನ, ಬಟ್ಟೆ ಬದಲಿಸೋ ವಿಡಿಯೋ ಮಾಡಿ, ಮದ್ವೆ ಆಗ್ತೀನಿ ಅಂದ ಪೋಲಿ ಪೇದೆ!

    ಬಳ್ಳಾರಿ: ಪಕ್ಕದ ಮನೆಯ ಗೃಹಿಣಿಯೊಬ್ಬರು ಸ್ನಾನ ಮಾಡುತ್ತಿರುವ ಹಾಗೂ ಬಟ್ಟೆ ಬದಲಾಯಿಸುತ್ತಿರೋ ವಿಡಿಯೋ ಮಾಡಿರುವ ಆರೋಪವೊಂದು ಪೊಲೀಸ್ ಪೇದೆಯ ವಿರುದ್ಧ ಕೇಳಿಬಂದಿದ್ದು, ಇದೀಗ ಪೇದೆ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಹೊಸಪೇಟೆ ಟೌನ್ ಪೊಲೀಸ್ ಠಾಣೆಯ ಪೇದೆಯೊಬ್ಬ, ಹೊಸಪೇಟೆ ಪಟ್ಟಣದ ಪಟೇಲ್ ನಗರದ ನಿವಾಸಿಯಾಗಿರುವ ಗೃಹಿಣಿಯೊಬ್ಬರಿಗೆ ಕಳೆದ 2 ವರ್ಷದಿಂದ ಆಕೆ ಸ್ನಾನ ಮಾಡೋ, ಬಟ್ಟೆ ಬದಲಾಯಿಸುವ ಫೋಟೋ ಹಾಗೂ ವಿಡಿಯೋ ರೆರ್ಕಾಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಗೃಹಿಣಿ ಪತಿ ಪೊಳಿಸರಿಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?: 2 ವರ್ಷದ ಹಿಂದೆ ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಪತ್ನಿಗೆ ಗೊತ್ತಿಲ್ಲದಂತೆ ಆಕೆ ಬಟ್ಟೆ ಬದಲಾಯಿಸುತ್ತಿರುವ ಮತ್ತು ಸ್ನಾನ ಮಾಡುತ್ತಿರುವ ಫೋಟೋ, ವಿಡಿಯೋವನ್ನು ಪೇದೆ ಮಾಡಿದ್ದಾನೆ. ಬಳಿಕ ಅದನ್ನು ಆಕೆಗೆ ತೋರಿಸಿ ಯಾರಿಗಾದರೂ ಹೇಳಿದರೆ ಸಂಬಂಧಿಕರಿಗೆ, ಸ್ನೇಹಿತರಿಗೆ, ಪೇಸ್ ಬುಕ್ ಮತ್ತು ವಾಟ್ಸಪ್ ಗೆ ಅಪ್ಲೋಡ್ ಮಾಡುತ್ತೇನೆ. ನಾನು ಹೇಳಿದ ಹಾಗೆ ಕೇಳು ಎಂದು ಹೇಳಿದ್ದಾನೆ. ಒಂದು ವೇಳೆ ನಿನ್ನ ಪತಿಗೆ ಹೇಳಿದರೆ ಆತನ ಅಂಗಡಿಯಲ್ಲಿ ಗಾಂಜಾ ಇಟ್ಟು ಕೇಸ್ ಬುಕ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

    ನಿನ್ನ ಗಂಡನನ್ನು ಬಿಟ್ಟು ಬಿಡು, ನಾನು ನಿನ್ನ ಮದವೆ ಮಾಡಿಕೊಳ್ಳುತ್ತೇನೆ. ನಾನು ನಿನ್ನ ಪ್ರೀತಿಸುತ್ತೇನೆ. ಅವನಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಅಸಭ್ಯವಾಗಿ ಸಂದೇಶ ಕಳುಹಿಸಲು ಪ್ರಾರಂಭಿಸಿದನು. ಒಂದು ವೇಳೆ ನೀನು ಬರದಿದ್ದರೆ ನಿನ್ನ ಗಂಡನನ್ನ ಸುಮ್ಮನೆ ಬಿಡುವುದಿಲ್ಲ. ಅಷ್ಟೇ ಅಲ್ಲದೇ ಈ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತೇನೆ ಎಂದು ಸುಮಾರು 8 ತಿಂಗಳಿಂದ ದೌರ್ಜನ್ಯ ಮಾಡುತ್ತಿದ್ದಾನೆ. ಕೊನೆಗೆ ಪತ್ನಿ ನನಗೆ ವಿಚಾರ ತಿಳಿಸಿದ್ದಳು. ನಂತರ ಆತನ ಬಳಿ ನಾನು ಮಾತನಾಡಿದ್ದೆ. ಆದರೆ ನನ್ನ ಬಳಿ ಹಣ ತೆಗೆದುಕೊಂಡು ಮತ್ತೆ ಅದೇ ರೀತಿ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆಯ ಪತಿ ಉಲ್ಲೇಖಿಸಿದ್ದಾರೆ.

    ಈ ಬಗ್ಗೆ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೇದೆ ವೆಂಕಟೇಶ ವಿರುದ್ಧ ಪ್ರಾಣ ಬೆದರಿಕೆ ಹಾಗೂ ಬ್ಲಾಕಮೇಲ್ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಪೇದೆ ವೆಂಕಟೇಶ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪೋಲಿ ಪೇದೆ ವೆಂಕಟೇಶ ಪರಾರಿಯಾಗಿದ್ದಾನೆ. ಈ ಘಟನೆಯ ಕುರಿತು ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್ ಗೆ ಟಿಪ್ಪರ್ ಡಿಕ್ಕಿ-2 ವರ್ಷದ ಕಂದಮ್ಮ ಸೇರಿ ಮೂವರ ಸಾವು

    ಬೈಕ್ ಗೆ ಟಿಪ್ಪರ್ ಡಿಕ್ಕಿ-2 ವರ್ಷದ ಕಂದಮ್ಮ ಸೇರಿ ಮೂವರ ಸಾವು

    ಕಾರವಾರ: ಬೈಕ್ ಗೆ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಿಣಗಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

    ಮೃತರನ್ನು ಉತ್ತರ ಪ್ರದೇಶ ಮೂಲದ ಅಮಿತ್ ಕೌಶಲ್ (31), ಪತ್ನಿ ಜ್ಯೋತಿ ಗುಪ್ತಾ (25) ಹಾಗೂ ದಂಪತಿಯ 2 ವರ್ಷದ ಗಂಡು ಮಗು ಎಂದು ಗುರುತಿಸಲಾಗಿದೆ.

    ಅಮಿತ್ ಕೌಶಲ್ ಕದಂಬ ನೌಖಾ ನೆಲೆಯ ಉದ್ಯೋಗಿಯಾಗಿದ್ದು, ಇಂದು ಬಿಣಗಾದಿಂದ ಕಾರವಾರ ಕಡೆ ಬೈಕ್ ನಲ್ಲಿ ಬರುತ್ತಿರುವಾಗ ವೇಳೆ ಕಾರವಾರ ದಿಂದ ಅಂಕೋಲ ಕಡೆ ಹೋಗುತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ.

    ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಅಪಘಾತದಲ್ಲಿ ಇಡೀ ಕುಟುಂಬ ಸಾವನ್ನಪ್ಪಿದೆ. ಈ ಘಟನೆ ಸಂಬಂಧ ಕಾರವಾರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

     

  • ಐಷಾರಾಮಿ ಜೀವನಕ್ಕೆ ಮಿಂತ್ರಾ ಸಿಇಒ ಮನೆಯಲ್ಲಿ 1 ಕೋಟಿ ರೂ. ಮೌಲ್ಯದ ಆಭರಣ ಕದ್ದ ಕೆಲಸದಾಕೆ!

    ಐಷಾರಾಮಿ ಜೀವನಕ್ಕೆ ಮಿಂತ್ರಾ ಸಿಇಒ ಮನೆಯಲ್ಲಿ 1 ಕೋಟಿ ರೂ. ಮೌಲ್ಯದ ಆಭರಣ ಕದ್ದ ಕೆಲಸದಾಕೆ!

    ಬೆಂಗಳೂರು: ಆನ್‍ಲೈನ್ ಶಾಪಿಂಗ್ ತಾಣ ಮಿಂತ್ರಾ ಕಾರ್ಯ ನಿರ್ವಹಣಾಧಿಕಾರಿ ಅನಂತ್ ನಾರಾಯಣನ್ ಮನೆಯಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಮನೆಯ ಕೆಲಸದಾಕೆಯನ್ನು ಬಂಧಿಸಿದ್ದಾರೆ.

    ಭವಾನಿ ಬಂಧಿತ ಆರೋಪಿಯಾಗಿದ್ದು, ತಮಿಳುನಾಡು ಮೂಲದ ಮತ್ತೊಬ್ಬ ಆರೋಪಿ ಸುರೇಶ್‍ಗಾಗಿ ಶೋಧ ಕಾರ್ಯವನ್ನು ಕಬ್ಬನ್ ಪಾರ್ಕ್ ಪೊಲೀಸರು ನಡೆಸುತ್ತಿದ್ದಾರೆ.

    ಕದ್ದಿದ್ದು ಯಾಕೆ?
    ಭವಾನಿ ಮತ್ತು ಸುರೇಶ್ 2 ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು ಮದುವೆ ಆಗುವ ನಿರ್ಧಾರ ಮಾಡಿದ್ದರು. ಮದುವೆಯಾದ ಬಳಿಕ ಐಷಾರಾಮಿ ಜೀವನ ನಡೆಸುವ ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ ಈ ಕಳ್ಳತನ ನಡೆಸುವ ಯೋಜನೆ ರೂಪಿಸಿದ್ದರು.

    ಕುಟುಂಬ ಸದಸ್ಯರು ವಿದೇಶಕ್ಕೆ ತೆರಳುವ ಮಾಹಿತಿ ತಿಳಿದಿದ್ದ ಭವಾನಿ ಅನಂತ್ ನಾರಾಯಣನ್ ಅವರ ಪತ್ನಿ ಪರ್ಸ್ ನಿಂದ ಲಾಕರ್ ಕೀಯನ್ನು ಕದ್ದಿದ್ದಳು. ಆನಂತ್ ನಾರಾಯಣನ್ ಕುಟುಂಬ ಸದಸ್ಯರು ವಿದೇಶಕ್ಕೆ ತೆರಳಿದ ಬಳಿಕ ಭವಾನಿ ಮತ್ತು ಸುರೇಶ್ ಆಭರಣವನ್ನು ಕದ್ದಿದ್ದರು.

    ಪ್ಲಾನ್ ಹೀಗಿತ್ತು:
    ತಮಿಳುನಾಡಿನ ಸುರೇಶ್ 7 ತಿಂಗಳ ಮುಂಚೆ ಅನಂತ್ ಅವರ ಮನೆಯಲ್ಲಿ ಕೆಲಸ ಬಿಟ್ಟು ದರೊಡೆ ಮಾಡಲು ಎಲ್ಲಾ ತಯಾರಿ ನಡೆಸುತ್ತಿದ್ದ. ಇದರ ನಡುವೆಯೇ ಅನಂತ್ ಕುಟುಂಬದ ಜೊತೆ ಫಾರಿನ್ ಗೆ ಹೋಗಿದ್ದರು. ಇದು ಸರಿಯಾದ ಸಮಯ ಎಂದು ಭವಾನಿ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಳು. ನಂತರ ಎಲ್ಲಾ ಚಿನ್ನಾಭರಣವನ್ನು ಸುರೇಶ್ ಗೆ ಒಪ್ಪಿಸಿದ್ದಳು. ಚಿನ್ನ ಮಾರುವವರಿಗೂ ಕರೆ ಮಾಡದಂತೆ ಸುರೇಶ್ ಭವಾನಿಗೆ ತಿಳಿಸಿದ್ದ ವಿಚಾರ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

    ಅನಂತ್ ಅವರ ಮನೆಯಲ್ಲಿ ಭವಾನಿ, ಸುರೇಶ್ ಹಾಗೂ ಪುಷ್ಪ ಕೆಲಸ ಮಾಡುತ್ತಿದ್ದರು. ಅನಂತ್ ಕೊಟ್ಟ ದೂರಿನ ಆಧಾರದ ಮೇರೆಗೆ ಮನೆಯ ಎಲ್ಲಾ ಕೆಲಸಗಾರರನ್ನೂ ವಿಚಾರಣೆ ನಡೆಸಿ ಮನೆ ಹಾಗೂ ಕಟ್ಟಡದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿತ್ತು. ನಂತರ ಫಿಂಗರ್ ಪ್ರಿಂಟ್ ತಜ್ಞರನ್ನು ಕರೆಸಿ ಪರೀಕ್ಷಿಸಿದಾಗ ಭವಾನಿ ಕಳ್ಳತನ ಎಸಗಿದ್ದು ಸಾಬೀತಾಗಿತ್ತು.

    ಅನುಮಾನ ನಿಜವಾಯ್ತು: ಕುಟುಂಬದ ಸದಸ್ಯರ ಜೊತೆ ವಿದೇಶ ಪ್ರವಾಸದಲ್ಲಿದ್ದಾಗ ಲ್ಯಾವೆಲ್ಲಿ ರೋಡ್ ನಲ್ಲಿರುವ ಮನೆಯಿಂದ ಏಳು ವಜ್ರದ ನೆಕ್ಲೇಸ್, ಆರು ಚಿನ್ನದ ಬಳೆ, ನಾಲ್ಕು ವಜ್ರದ ಬ್ರೇಸ್‍ಲೆಟ್, ಚಿನ್ನಾಭರಣ ಕಳುವಾಗಿದೆ ಎಂದು ಅನಂತ್ ನಾರಾಯಣನ್ ಸೆ.8ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸಮಾರಂಭವೊಂದಕ್ಕೆ ತೆರಳಲು ಮನೆಯಲ್ಲಿದ್ದವರು ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಆಭರಣ ಧರಿಸಲು ಬೀರು ತೆಗೆದಾಗ ಅದರಲ್ಲಿ ಯಾವುದೂ ಕಾಣಲಿಲ್ಲ. ಕಳವಾಗಿರುವ ಆಭರಣಗಳ ಮೌಲ್ಯ ಸುಮಾರು 1 ಕೋಟಿ ರೂಪಾಯಿ ಎಂದು ದೂರಿನಲ್ಲಿ ವಿವರಿಸಿದ್ದರು. ದೂರಿನಲ್ಲಿ ಅನಂತ್ ನಾರಾಯಣ್ ಅವರು ಮನೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

    ಆರೋಪಿ ಭವಾನಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಂಡ್ತಿಯನ್ನ ಹೂರ ಹಾಕಿದ ಗಂಡ!

    ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಂಡ್ತಿಯನ್ನ ಹೂರ ಹಾಕಿದ ಗಂಡ!

    ಬೆಂಗಳೂರು: ಪಾಪಿ ಗಂಡ ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಂಡತಿಯನ್ನ ಹೂರ ಹಾಕಿದ ಘಟನೆ ನಗರದ ಮಾಗಡಿ ರೋಡ್ ಬಳಿ ದಾಸರಹಳ್ಳಿಯಲ್ಲಿ ನಡೆದಿದೆ.

    ಗಂಡ ಮಹೇಶ್ ಎಂಬಾತ ಪತ್ನಿ ಸುಮಿತ್ರ ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಈ ದಂಪತಿ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು.

    ಮಹೇಶ, ನಾದಿನಿ ಮಂಜುಳ, ಗಂಡನ ಅಣ್ಣ ರಾಜು, ಅತ್ತೆ ಜಯಮ್ಮನಿಂದ ಹೆಣ್ಣು ಮಗು ಆಗಿದೆ ಅಂತ ಗಂಡನ ಕುಟುಂಬಸ್ಥರು ಸುಮಿತ್ರಗೆ ಕಿರುಕುಳ ನೀಡುತಿದ್ದರು ಎನ್ನಲಾಗಿದೆ.

    ಕಂಪ್ಲೇಟ್ ತೆಗೆದುಕೊಳ್ಳದೇ ಪೊಲೀಸರು ಸತಾಯಿಸುತ್ತಿದ್ದರು. ಮಹಿಳಾ ಠಾಣೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಸದ್ಯ ಸುಮಿತ್ರಾ ಅವರು ಮಾಗಡಿ ರೋಡ್ ಪೊಲೀಸ್ ಠಾಣೆಗೆ ಬಂದಿದ್ದಾರೆ.