ಬಳ್ಳಾರಿ: ನೇಪಾಳದ ಪೋಕ್ರಾದಲ್ಲಿ(Pokhara) ವಿಜಯನಗರ ಜಿಲ್ಲೆಯ ಹೊಸಪೇಟೆಯ ಗಿರೀಶ್ ಅವರ ಕುಟುಂಬ ಸಿಲುಕಿಕೊಂಡಿದೆ.
ಹೊಸಪೇಟೆಯಿಂದ (Hosapete) ಸೆ.6 ರಂದು ನೇಪಾಳಕ್ಕೆ (Nepal) ಪ್ರಯಾಣ ಬೆಳೆಸಿದ್ದ ಕುಟುಂಬ ಪೋಕ್ರಾದ ಹೋಟೆಲ್ನಲ್ಲಿ ಉಳಿದುಕೊಂಡಿದೆ. ಕನ್ನಡಿಗರು ಇದ್ದ ಹೋಟೆಲಿನ ಸಮೀಪದಲ್ಲೇ ಇದ್ದ ಮತ್ತೊಂದು ಹೊಟೇಲ್ಗೆ ಬೆಂಕಿ ಹೊತ್ತಿಕೊಂಡಿದ್ದು ಗಿರೀಶ್ ಕುಟುಂಬ ಆತಂಕದಲ್ಲಿದೆ. ಇದನ್ನೂಓದಿ: ಕಟ್ಟಿಹಾಕಿ, ಪ್ರೆಷರ್ ಕುಕ್ಕರ್ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ
ಮೊಬೈಲ್ ನೆಟ್ವರ್ಕ್ ಇಲ್ಲದೇ ಹೋಟೆಲಿನಿಂದ ಹೊರ ಹೋಗಲಾಗದೇ ಆತಂಕದಲ್ಲಿದ್ದಾರೆ. ಸೆ.9 ರರಂದು ಪೋಕ್ರಾದಿಂದ ಕಠ್ಮಂಡುಗೆ ಹೋಗಲು ಗಿರೀಶ್ ಕುಟುಂಬ ಪ್ಲಾನ್ ಮಾಡಿತ್ತು.
ಗಿರೀಶ್ ಜಿಂದಾಲ್ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ನೇಪಾಳದಲ್ಲಿ ರಸ್ತೆಗಳು ಕ್ಲಿಯರ್ ಆಗಿರುವ ಮಾಹಿತಿ ಇದ್ದು, ಸೈನಿಕರ ಸಹಾಯದಿಂದ ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರಿಗೆ ಗಿರೀಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
ಕಠ್ಮಂಡು: ನೇಪಾಳದ ಪೋಖ್ರಾ (Pokhara) ಪ್ರದೇಶದಲ್ಲಿ ಜನವರಿ 15 ರಂದು ಸಂಭವಿಸಿದ ಯೇತಿ ಏರ್ಲೈನ್ಸ್ನ (Yeti Airlines) ವಿಮಾನ ದುರಂತದಲ್ಲಿ ನಾಪತ್ತೆಯಾಗಿದ್ದ ಮತ್ತಿಬ್ಬರು ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿದೆ. ನಿರಂತರ ಕಾರ್ಯಚರಣೆ ಬಳಿಕ ಮೃತದೇಹಗಳ ಸಂಖ್ಯೆ ಈಗ 71ಕ್ಕೆ ಏರಿದೆ. ಮತ್ತೋರ್ವ ಪ್ರಯಾಣಿಕನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
ನೇಪಾಳದ ಪೋಖ್ರಾ (Pokhara) ವಿಮಾನ ನಿಲ್ದಾಣದ ಸಮೀಪ ನಡೆದ ಭೀಕರ ವಿಮಾನ ದುರಂತದಲ್ಲಿ ಯೇತಿ ಏರ್ಲೈನ್ಸ್ನ ATR 72 ವಿಮಾನದಲ್ಲಿದ್ದ 72 ಜನರ ಪೈಕಿ ಈವರೆಗೆ 71 ಜನ ಮೃತಪಟ್ಟಿದ್ದಾರೆ. ಎಲ್ಲ ಪ್ರಯಾಣಿಕರ ಮೃತ ದೇಹಗಳನ್ನು ವೈದ್ಯಕೀಯ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ (CAAN) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ವಿಮಾನದ ಎರಡು ಕಪ್ಪು ಪೆಟ್ಟಿಗೆಯೂ (Black Box) ಸಿಕ್ಕಿದ್ದು ದುರಂತದ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ.
ಜನವರಿ 15 ರಂದು ಕಠ್ಮಾಂಡುವಿನಿಂದ ಪೋಖ್ರಾಗೆ ತೆರಳುತ್ತಿದ್ದ ಯೇತಿ ಏರ್ಲೈನ್ಸ್ ವಿಮಾನ ಪತನಗೊಂಡು 72 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ವಿಮಾನದಲ್ಲಿ ಐದು ಮಂದಿ ಭಾರತೀಯರು 10ಕ್ಕೂ ಅಧಿಕ ವಿದೇಶಿ ಪ್ರಯಾಣಿಕರು ಸೇರಿದಂತೆ 9 ಮಕ್ಕಳು ಕೂಡ ಇದ್ದರು.
Live Tv
[brid partner=56869869 player=32851 video=960834 autoplay=true]
ಕಠ್ಮಂಡು: 16 ವರ್ಷಗಳ ಹಿಂದೆ ನಡೆದ ಯೇತಿ ಏರ್ಲೈನ್ಸ್ನ (Yeti Airlines) ವಿಮಾನ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಪತ್ನಿ, ತಾನೂ ಅಂತಹದ್ದೇ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.
ಹೌದು. ಯೇತಿ ಏರ್ಲೈನ್ಸ್ (Airlines) ಸಹ ಪೈಲಟ್ ಅಂಜು ಖತಿವಾಡ ಭಾನುವಾರ ನೇಪಾಳದ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pokhara International Airport) ನಡೆದ ದುರಂತದಲ್ಲಿ ಮೃತಪಟ್ಟಿದ್ದಾರೆ.
ಮೃತ ಅಂಜು ಖತಿವಾಡ, ಆಕೆಯ ಪತಿ ಯೇತಿ ಏರ್ಲೈನ್ಸ್ ಸಹ ಪೈಲಟ್ ಆಗಿದ್ದರು. ಪತಿ 16 ವರ್ಷಗಳ ಹಿಂದೆ, ಅಂದ್ರೆ 2016ರ ಜೂನ್ 21 ರಂದು ಮೃತಪಟ್ಟಿದ್ದರು. ನೇಪಾಲಗಂಜ್ನಿಂದ ಸುರ್ಖೇತ್ ಮೂಲಕ ಜುಮ್ಲಾಗೆ ತೆರಳುತ್ತಿದ್ದ 9-N AEQ ವಿಮಾನ ಅಪಘಾತಕ್ಕೀಡಾಗಿ 6 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಸಾವನ್ನಪಿದ್ದರು. ಅದರಲ್ಲಿ ಅಂಜು ಪತಿಯೂ ಒಬ್ಬರಾಗಿದ್ದರು. ಇದೀಗ ಭಾನುವಾರ (ಜ.15) ನಡೆದ ವಿಮಾನ ಅಪಘಾತದಲ್ಲಿ ಅಂಜು ಸಹ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ, ಅಂಜು ಖತಿವಾಡ ಪೈಲಟ್ ಆಗುವ ಕನಸು ಕಂಡಿದ್ದರು. ಅದಕ್ಕಾಗಿ ಇನ್ನೂ ಕೆಲವೇ ಗಂಟೆಗಳು ಬಾಕಿಯಿತ್ತು. ಸದ್ಯ ಹಿರಿಯ ಕ್ಯಾಪ್ಟನ್ ಕೆ.ಸಿ ಕಮಲ್ ಪೈಲಟ್ ಆಗಿ, ಅಂಜು ಸಹ ಪೈಲಟ್ ಆಗಿದ್ದರು. ದುರಾದೃಷ್ಟ ಅದುವೇ ಅವರ ಕೊನೆಯ ಹಾರಾಟವಾಗಿದೆ. ಪೈಲಟ್ ಆಗುವ ಕನಸು ಕನಸಾಗಿಯೇ ಉಳಿದು – ಜೀವ ಅಳಿದು ಹೋಗಿದೆ. ಇದನ್ನೂ ಓದಿ: 9ರ ಬಾಲಕಿ ಮೇಲೆ ಅಪ್ರಾಪ್ತರಿಂದ ರೇಪ್- ವೀಡಿಯೋ ಮಾಡಿಕೊಂಡು ಬ್ಲ್ಯಾಕ್ಮೇಲ್
ಈ ಹಿಂದೆ ಅಂಜು ಕೆಲಸ ನಿವರ್ಹಿಸಿದ ನೇಪಾಳದ ಎಲ್ಲ ವಿಮಾನಗಳೂ ನಿಲ್ದಾಣಕ್ಕೆ ಯಶಸ್ವಿಯಾಗಿ ಬಂದಿಳಿದಿದ್ದವು. 100 ಗಂಟೆ ಯಶಸ್ವಿ ಪ್ರಯಾಣ ಬೆಳೆಸಿ ಪೈಲಟ್ ಆಗೋದ್ರಲ್ಲಿದ್ದರು. ಅವರು ಪೈಲಟ್ ಆಗೋದಕ್ಕೆ ಕೆಲವೇ ಸೆಕೆಂಡುಗಳು ಬಾಕಿಯಿತ್ತು. ಆಗಲಿದ್ದರು. ಆದ್ರೆ ವಿಧಿ ಆಟ ಬೇರೆಯಾಗಿತ್ತು. ಲ್ಯಾಂಡಿಂಗ್ಗೇ ಕೆಲವೇ ಕ್ಷಣಗಳಿಗೂ ಮುನ್ನ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ
ಏನಿದು ಘಟನೆ?
ಇದೇ ಜನವರಿ 15ರಂದು ನೇಪಾಳದ ಪೋಖ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ನಿಲ್ದಾಣ ಅಪಘಾತದಲ್ಲಿ 68 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ನಾಲ್ವರು ಭಾರತೀಯರು ಸೇರಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ ಶೋಧ ಮುಂದುವರಿದಿದ್ದು, ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆಸಿದ್ದಾರೆ. ಒಟ್ಟು 4 ಸಿಬ್ಬಂದಿ 68 ಪ್ರಯಾಣಿಕರು ಸೇರಿ 72 ಮಂದಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
Live Tv
[brid partner=56869869 player=32851 video=960834 autoplay=true]
ಕಠ್ಮಂಡು: ನೆರೆರಾಷ್ಟ್ರ ನೇಪಾಳದಲ್ಲಿ (Nepal) ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ (Nepal Plane Crash) ನಾಲ್ವರು ಭಾರತೀಯರು ಸೇರಿದಂತೆ ಒಟ್ಟು ಮೃತಪಟ್ಟವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಮೃತರಿಗೆ ಸಂತಾಪ ಸೂಚಿಸಲು ಜನವರಿ 16ರಂದು ನೇಪಾಳದಲ್ಲಿ ರಾಷ್ಟ್ರೀಯ ಶೋಕದಿನ ಆಚರಿಸಲಾಗುತ್ತಿದೆ.
#WATCH | A passenger aircraft crashed at Pokhara International Airport in Nepal today. 68 passengers and four crew members were onboard at the time of crash. Details awaited. pic.twitter.com/DBDbTtTxNc
ಯೇತಿ ಏರ್ಲೈನ್ಸ್ನ (Yeti Airlines) ಈ ವಿಮಾನದಲ್ಲಿ ನಾಲ್ವರು ಸಿಬ್ಬಂದಿ, ಐವರು ಭಾರತೀಯರು, 10 ವಿದೇಶಿಗರು ಸೇರಿ 72 ಜನ ಪ್ರಯಾಣಿಕರಿದ್ದರು. ದುರಂತದಲ್ಲಿ ಐವರಲ್ಲಿ ನಾಲ್ವರು ಭಾರತೀಯರು ಸೇರಿ 68 ಜನ ಸಾವನ್ನಪ್ಪಿದ್ದಾರೆ. ಓರ್ವ ಭಾರತೀಯ ಪತ್ತೆಯಾಗಿಲ್ಲ. ಇದರಲ್ಲಿ 9 ಮಕ್ಕಳು ಕೂಡ ಇದ್ದರು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು
ಇಬ್ಬರು ನೇಪಾಳಿಗರು ಜೀವನ್ಮರಣದ ಹೋರಾಟ ನಡೆಸ್ತಿದ್ದು, ಇಬ್ಬರ ಶವ ಪತ್ತೆಯಾಗಿಲ್ಲ. ರಾಜಧಾನಿ ಕಠ್ಮಂಡುವಿನಿಂದ ಟೇಕಾಫ್ ಆದ ಯೇತಿ ಏರ್ಲೈನ್ಸ್ ವಿಮಾನ ಪೋಖ್ರಾದಲ್ಲಿ ಲ್ಯಾಂಡಿಂಗ್ 2 ಕಿ.ಮೀ. ದೂರ ಇರುವಾಗ ಪತನವಾಗಿದೆ. 2 ನಿಲ್ದಾಣಗಳ ನಡುವೆ ಒಟ್ಟು 25 ನಿಮಿಷಗಳ ಪ್ರಯಾಣವಾಗಿದ್ದು, 20 ನಿಮಿಷಗಳ ಪ್ರಯಾಣ ಮಾಡಿದ್ದ ವಿಮಾನ ಲ್ಯಾಂಡಿಂಗ್ ಗೆ 5 ನಿಮಿಷ ಬಾಕಿ ಇರುವಾಗ ರನ್ವೇನಲ್ಲಿ ವಿಮಾನ ಪತನಗೊಂಡಿದೆ.
ಈ ವಿಮಾನದಲ್ಲಿ ಒಟ್ಟು 53 ನೇಪಾಳ, 5 ಭಾರತ, 4 ರಷ್ಯಾ, 2 ಕೊರಿಯಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಐರ್ಲೆಂಡ್ ಹಾಗೂ ಫ್ರಾನ್ಸ್ನ ತಲಾ ಒಬ್ಬರು ಪ್ರಜೆಗಳು ದುರ್ಮರಣಕ್ಕೀಡಾಗಿದ್ದಾರೆ. ಭಾರತೀಯರಾದ ಅಭಿಷೇಕ್ ಕುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್ಭರ್ , ಸೋನು ಜೈಸ್ವಾಲ್, ಸಂಜಯ್ ಜೈಸ್ವಾಲ್ ಸಜೀವ ದಹನಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಇದನ್ನು ಅರಿಯುವ ಪ್ರಯತ್ನವೂ ನಡೆದಿದೆ. ತಾಂತ್ರಿಕ ಕಾರಣವಾ ಅಥವಾ ಪೈಲಟ್ ನಿರ್ಲಕ್ಷö್ಯವಾ ಅನ್ನೋದು ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: Nepal Plane Crashː 32 ಮೃತದೇಹ ಹೊರಕ್ಕೆ – ತುರ್ತು ಸಭೆ ಕರೆದ ನೇಪಾಳ ಸರ್ಕಾರ
ಘಟನಾ ಸ್ಥಳಕ್ಕೆ ಪ್ರಧಾನಿ ಪುಷ್ಪ ಕಮಲ್ ದಹಾಲ್ ಮತ್ತು ಗೃಹ ಸಚಿವ ರಬಿ ಲಮಿಚಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ವಿಮಾನ ಸಂಚಾರ ಬಂದ್ ಮಾಡಲಾಗಿದೆ. ನೇಪಾಳದಲ್ಲಿ 8 ತಿಂಗಳ ಅಂತರದಲ್ಲಿ 2ನೇ ಹಾಗೂ 30 ವರ್ಷಗಳಲ್ಲಿ ಅತಿದೊಡ್ಡ ದುರಂತ ಇದಾಗಿದೆ. ಮೃತರಿಗೆ ಸಂತಾಪ ಸೂಚಿಸಲು ಜನವರಿ 16ರಂದು ನೇಪಾಳ ಸರ್ಕಾರ ರಾಷ್ಟ್ರೀಯ ಶೋಕಾಚರಣೆ ದಿನವನ್ನಾಗಿ ಘೋಷಣೆ ಮಾಡಿದೆ. ಪ್ರಯಾಣದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
Live Tv
[brid partner=56869869 player=32851 video=960834 autoplay=true]
ಕಠ್ಮಂಡು: ಐವರು ಭಾರತೀಯರು ಸೇರಿ 72 ಜನರಿದ್ದ ವಿಮಾನವು ನೇಪಾಳದ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇನಲ್ಲೇ ಪತನಗೊಂಡಿದ್ದು, 32 ಮಂದಿ ಮೃತದೇಹಗಳನ್ನ ಹೊರಕ್ಕೆ ತೆಗೆಯಲಾಗಿದೆ.
#WATCH | A passenger aircraft crashed at Pokhara International Airport in Nepal today. 68 passengers and four crew members were onboard at the time of crash. Details awaited. pic.twitter.com/DBDbTtTxNc
ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ಕು ಸಿಬ್ಬಂದಿ ಪ್ರಯಾಣಿಸುತ್ತಿದ್ದ ಯೇತಿ ಏರ್ಲೈನ್ಸ್ ವಿಮಾನವು ಇಲ್ಲಿನ ಹಳೆಯ ವಿಮಾನ ನಿಲ್ದಾಣ ಹಾಗೂ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪತನಗೊಂಡಿದೆ. ವಿಮಾನ ಪತನದ ಸ್ಥಳದಲ್ಲಿ 32 ಮಂದಿಯ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್ಗೆ ಕಾರಣವಾದ್ರಾ ಸಾನ್ಯ ಅಯ್ಯರ್?
ವಿಮಾನವು ರನ್ವೇಗೆ ಅಪ್ಪಳಿಸಿದ್ದು, ಅದರ ರಭಸಕ್ಕೆ ಕೂಡಲೇ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಮುಗಿಲೆತ್ತರ ಚಿಮ್ಮುತ್ತಿದ್ದ ಅಗ್ನಿ ಜ್ವಾಲೆಗಳನ್ನು ನಂದಿಸಲು ರಕ್ಷಣಾ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ರಕ್ಷಣಾ ಕಾರ್ಯಚರಣೆ ಮುಕ್ತಾಯವಾಗುವವರೆಗೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಸಿಬ್ಬಂದಿ ಸೇರಿ 72 ಜನರಿದ್ದ ವಿಮಾನ ನೇಪಾಳದಲ್ಲಿ ಪತನ – ಹೊತ್ತಿ ಉರಿದ ಫ್ಲೈಟ್
ಈ ವಿಮಾನದಲ್ಲಿ 53 ಮಂದಿ ನೇಪಾಳಿಗರು, ಐವರು ಭಾರತೀಯರು, ನಾಲ್ವರು ರಷ್ಯನ್ನರು, ಇಬ್ಬರು ಕೊರಿಯನ್ಸ್, ಅರ್ಜೆಂಟೀನಿಯಾ ಹಾಗೂ ಐರಿಶ್ ದೇಶದ ಒಬ್ಬೊಬ್ಬರು ಪ್ರಯಾಣಿಸುತ್ತಿದ್ದರು.
ತುರ್ತು ಕ್ಯಾಬಿನೆಟ್ ಸಭೆ: ಪೋಖ್ರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಿಮಾನ ಅಪಘಾತ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ತುರ್ತು ಕ್ಯಾಬಿನೆಟ್ ಸಭೆ ಕರೆದಿದೆ. ರಕ್ಷಣಾ ಕಾರ್ಯಚರಣೆ ಬಗ್ಗೆ ಚರ್ಚೆಗೆ ತಕ್ಷಣವೇ ಬರುವಂತೆ ಸೂಚನೆ ನೀಡಿದೆ.
Live Tv
[brid partner=56869869 player=32851 video=960834 autoplay=true]