Tag: PM

  • ಲೂಟಿ ಹೊಡೆದ ಖಜಾನೆಯನ್ನು ಸರಿಪಡಿಸಲು 4 ವರ್ಷ ಬೇಕಾಯ್ತು- ಬಜೆಟ್ ಬಗ್ಗೆ ಸಿಂಹ ಪ್ರತಿಕ್ರಿಯೆ

    ಲೂಟಿ ಹೊಡೆದ ಖಜಾನೆಯನ್ನು ಸರಿಪಡಿಸಲು 4 ವರ್ಷ ಬೇಕಾಯ್ತು- ಬಜೆಟ್ ಬಗ್ಗೆ ಸಿಂಹ ಪ್ರತಿಕ್ರಿಯೆ

    ಬೆಂಗಳೂರು: ಪ್ರಧಾನಿ ಮೋದಿ ಸರ್ಕಾರದ ಕೊನೆಯ ಬಜೆಟ್ ಇಂದು ಮಂಡನೆಯಾಗಿದ್ದು, ಇಂತಹ ಬಜೆಟ್ ಗೋಸ್ಕರ ಜನ ಎಷ್ಟೋ ವರ್ಷಗಳಿಂದ ಕಾದಿದ್ದರು. ಇದನ್ನು ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಕೊಡಬೇಕೆಂಬ ಉದ್ದೇಶ ಇದ್ದರೂ ಕೂಡ ಈ ಹಿಂದೆ 10 ವರ್ಷಗಳ ಕಾಲ ಯುಪಿಎದವರು ಲೂಟಿ ಹೊಡೆದು ಖಜಾನೆಯನ್ನು ಬರಿದು ಮಾಡಿ ಹೋಗಿದ್ದರಿಂದಾಗಿ ಅದನ್ನು ಸರಿಪಡಿಸಲು 4 ವರ್ಷ ಬೇಕಾಯಿತು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

    ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಖಜಾನೆಯನ್ನು ಸರಿಪಡಿಸಿ, ಜಿಎಸ್‍ಟಿ ತಂದು, ನೋಟು ನಿಷೇಧ ಮಾಡಿ, ತೆರಿಗೆಯಲ್ಲಿ ಸುಧಾರಣೆಗಳನ್ನು ತಂದು, ಬ್ಯಾಂಕ್ ಗಳಲ್ಲಿ ಎನ್ ಪಿಎ(ಕಾರ್ಯನಿರ್ವಹಿಸದ) ಮಾಡುತ್ತಿದ್ದರೋ ಅವರನ್ನು ಕೂಡ ಹಿಡಿದುಕೊಂಡು ಬಂದು 3 ಲಕ್ಷ ರೂ. ಕಕ್ಕಿಸಿ, ಇಂದು ದೇಶ ಅರ್ಥ ವ್ಯವಸ್ಥೆಯನ್ನು ಸರಿಸ್ಥಿತಿಗೆ ತಂದು ರೈತರಿಗೆ, ತೆರಿಗೆದಾರರಿಗೆ, ಮಧ್ಯಮವರ್ಗದವರಿಗೆ, ದೀನ ದಲಿತರಿಗೆ ಹೀಗೆ ಎಲ್ಲರಿಗೂ ಕೂಡ ಏಕಕಾಲಕ್ಕೆ ನ್ಯಾಯಕೊಡುವಂತಹ ಬಜೆಟ್ಟನ್ನು ಇಂದು ಮಂಡಿಸಿದ್ದಾರೆ ಅಂದ್ರು.

    ಅದರಲ್ಲೂ ವಿಶೇಷವಾಗಿ ಸಣ್ಣ ಹಿಡುವಳಿದಾರರಿಗೆ ಸಾಲಮನ್ನಾ ಮಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರಿದ ಕೆಲಸವನ್ನು ಎಲ್ಲರೂ ಮಾಡಿಕೊಂಡು ಬಂದಿದ್ದರು. ಆದ್ರೆ ಅವರ ಆದಾಯ ಯಾವತ್ತೂ ಸುಸ್ಥಿತಿಯಲ್ಲಿರಬೇಕು ಅನ್ನೋ ದೃಷ್ಟಿಯಲ್ಲಿಟ್ಟುಕೊಂಡು ಒಂದೆಡೆ ಗೊಬ್ಬರ ಬೆಲೆಯಲ್ಲಿ ಕಡಿತಗೊಳಿಸಿರುವ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ತರುವ ಜೊತೆಗೆ 2 ಹೆಕ್ಟೇರ್ ಗಿಂತ ಕಡಿಮೆ ಹಿಡುವಳಿ ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಅವರ ಅಕೌಂಟ್ ಗೆ ನೇರವಾಗಿ ನೀಡುವಂತಹ ಒಂದು ಯೋಜನೆ ತಂದಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರೈತ, ಯುವಜನ ವಿರೋಧಿ ಬಜೆಟ್ – ಕೇಂದ್ರ ಬಜೆಟ್ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ

    ರೈತ, ಯುವಜನ ವಿರೋಧಿ ಬಜೆಟ್ – ಕೇಂದ್ರ ಬಜೆಟ್ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ

    ಬೆಂಗಳೂರು: ಇಂದು ಮೋದಿ ಸರ್ಕಾರದ ಕೊನೆಯ ಬಜೆಟ್ ಇಂದು ಮಂಡನೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಕೇಂದ್ರ ಸರ್ಕಾರದ ಬಜೆಟ್ ರೈತ ಹಾಗೂ ಯುವಜನ ವಿರೋಧಿ ಬಜೆಟಾಗಿದೆ. ಈ ಎರಡೂ ವರ್ಗಕ್ಕೂ ಮೋದಿ ದ್ರೋಹ ಎಸಗಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    2019-20ರ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ ‘ರೈತ ವಿರೋಧಿ’ ಮತ್ತು ‘ಯುವಜನ ವಿರೋಧಿ’ ಆಗಿದೆ. ತೀರಾ ಸಂಕಷ್ಟದಲ್ಲಿರುವ ಈ ಎರಡೂ ವರ್ಗಗಳಿಗೆ ಸಮಾಧಾನ ನೀಡಬಲ್ಲ ಬಲವಾದ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ. ಎರಡೂ ವರ್ಗಕ್ಕೂ ಪ್ರಧಾನಿ ನರೇಂದ್ರ ಮೋದಿ ದ್ರೋಹ ಎಸಗಿದ್ದಾರೆ ಎಂದು ಬರೆದಿದ್ದಾರೆ. ಅಲ್ಲದೇ ಇದನ್ನು ಈಎನ್‍ಸಿ ಕರ್ನಾಟಕಕ್ಕೆ ಟ್ಯಾಗ್ ಮಾಡಿದ್ದಾರೆ.

    ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಪಿಯೂಶ್ ಗೋಯಲ್ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಡೆದಾಡುವ ದೇವರ ವಿಚಾರದಲ್ಲಿ ಸುಳ್ಳು ಹೇಳಿದ್ರಾ ಮೋದಿ..?

    ನಡೆದಾಡುವ ದೇವರ ವಿಚಾರದಲ್ಲಿ ಸುಳ್ಳು ಹೇಳಿದ್ರಾ ಮೋದಿ..?

    ಬೆಂಗಳೂರು: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಭಾರೀ ಆಕ್ಷೇಪ ವ್ಯಕ್ತವಾಗಿದ್ದು, ಇದೀಗ ಪ್ರಧಾನಿಯವರು ಸುಳ್ಳು ಹೇಳಿದ್ರಾ ಎಂಬ ಅನುಮಾನವೊಂದು ಮೂಡಿದೆ.

    ಹೌದು. ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬರಲು ಭದ್ರತೆ ಇಲ್ಲ. ಹೀಗಾಗಿ ಪ್ರಧಾನಿಗಳು ದೇವರ ಅಂತಿಮ ದರ್ಶನಕ್ಕೆ ಬರುತ್ತಿಲ್ಲ ಎಂದು ಹೇಳಲಾಗಿತ್ತು. ಆದ್ರೆ `ನಡೆದಾಡುವ ದೇವರ’ ಕೈಲಾಸ ಯಾತ್ರೆ ವೇಳೆ ಕಂಡುಕೇಳರಿಯದ ಭದ್ರತೆ ಒದಗಿಸಲಾಗಿತ್ತು. ತಾವು ನೀಡಿದ್ದ ಭದ್ರತೆಗೆ ‘ಆಪರೇಷನ್ ಆರೆಂಜ್ ಬುಕ್’ ಎಂದು ಪೊಲೀಸರು ಹೆಸರಿಟ್ಟಿದ್ದರು. ಇದರ ಪ್ರಕಾರ ವಿವಿಐಪಿ, ವಿಐಪಿಗಳಿಗೆಲ್ಲಾ ಭದ್ರತೆ ಪಕ್ಕಾ ಆಗಿತ್ತು. ಯಾರೆಲ್ಲಾ ವಿವಿಐಪಿಗಳು ಬರ್ತಾರೆ, ಅವರಿಗೆ ಭದ್ರತೆ ಹೇಗೆ, ಟ್ರಾಫಿಕ್ ಕಂಟ್ರೋಲ್ ಬಗ್ಗೆ ಸ್ಪಷ್ಟ ಸೂತ್ರವನ್ನು 1 ತಿಂಗಳ ಮುಂಚಿತವಾಗಿ ಪ್ಲಾನ್ ಮಾಡಲಾಗಿತ್ತು.

    ವಿಐಪಿಗಳು ಬಂದು ದರ್ಶನ ಪಡೆದು ಹೋಗುವವರೆಗೆ ಮಾಡಬೇಕಿದ್ದ ಭದ್ರತಾ ವ್ಯವಸ್ಥೆ ಅಂತಿಮವಾಗಿತ್ತು. ಪ್ರಧಾನಿ ಮೋದಿ ಸೇರಿದಂತೆ ಯಾರೇ ದೊಡ್ಡ ವ್ಯಕ್ತಿಗಳು ಬಂದಿದ್ದರೂ ಒಂದಷ್ಟು ಲೋಪಕ್ಕೂ ಅವಕಾಶ ಇರಲಿಲ್ಲ. ಭದ್ರತೆಯ ಬಗ್ಗೆ ಖಾಕಿಗಳು ಮಾಡಿಕೊಂಡಿದ್ದ ಸಿದ್ಧತೆ, ವ್ಯವಸ್ಥೆ ಎಲ್ಲರ ಪ್ರಶಂಸೆಗೂ ಪಾತ್ರವಾಗಿತ್ತು. ಆದ್ರೆ ಇದೀಗ ಭೇಷ್ ಅನ್ನಿಸಿಕೊಂಡಿದ್ದ ಭದ್ರತಾ ವ್ಯವಸ್ಥೆಯ ಬಗ್ಗೆಯೇ ಶಂಕಿಸಿ ಪ್ರಧಾನಿ ದೇವರ ದರ್ಶನದಿಂದ ದೂರ ಉಳಿದಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.  ಇದನ್ನೂ ಓದಿ: ಪ್ರತಿಷ್ಠಿತ ವ್ಯಕ್ತಿಗಳ ಮದ್ವೆಗೆ ಹೋಗ್ತಾರೆ, ಶ್ರೀಗಳ ನೋಡಲು ಮೋದಿಗೆ ಬರಲು ಸಮಯವಿಲ್ಲ- ಪರಮೇಶ್ವರ್

    ಶ್ರೀಗಳು ಕಾವಿ ಧರಿಸುತ್ತಿದ್ದರಿಂದ ಪೊಲೀಸರು ಆಪರೇಷನ್ ಆರೆಂಜ್ ಅಂತ ಯಾಕೆ ಹೆಸರಿಟ್ಟಿದ್ದಾರೆ. ಶ್ರೀಗಳೀಗೆ ಸಾವಿರಾರು ಭಕ್ತರಿದ್ದುದರಿಂದ ಭದ್ರೆತಯ ನಿಟ್ಟಿನಲ್ಲಿ 1 ತಿಂಗಳ ಮುಂಚಿತವಾಗಿಯೇ ಪೊಲೀಸರು ಈ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

    ಪ್ರಧಾನಿ, ರಾಷ್ಟ್ರಪತಿಗಳಿಲ್ಲದೇ ಈ ದೇಶದ 10-20 ಪ್ರಧಾನಿಗಳು ಕಾರ್ಯಕ್ರಮಕ್ಕೆ ಬರಬಹುದೆಂದು ಮೊದಲೇ ಭದ್ರತೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದರು. ಆದ್ರೆ ಮೋದಿ ಬರದೇ ಸೆಕ್ಯೂರಿಟಿ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿರುವುದು ಸುಳ್ಳು ಎಂಬ ಮಾತುಗಳು ಪೊಲೀಸ್ ವಲಯದಲ್ಲಿ ಕೇಳಿಬರುತ್ತಿವೆ. ಪ್ರಧಾನಿಗಳ ಜೊತೆಗೆ ಬೇರೆ ದೇಶದ ಪ್ರಧಾನಿಗಳು ಬಂದಿದ್ದರೂ ಕೂಡ ನಾವು ಯಾವುದೇ ಲೋಪಗಳಿಲ್ಲದೇ ಅಚ್ಚುಕಟ್ಟಾಗಿ ಭದ್ರತೆ ಒದಗಿಸುತ್ತಿದ್ದೆವು. ಹೀಗಾಗಿ ಪ್ರಧಾನಿಯವರು ಪೊಲೀಸರ ಮೇಲೆ ಬೆರಳು ತೋರಿಸಿರುವುದು ಎಷ್ಟು ಸರಿ ಅನ್ನೋದು ಪೊಲೀಸರ ಪ್ರಶ್ನೆಯಾಗಿದೆ.

    ಎರಡು ದಿನದಲ್ಲಿ ದೇವರ ದರ್ಶನಕ್ಕೆ ಸರಿಸುಮಾರು 8 ರಿಂದ 10 ಲಕ್ಷ ಜನ ಬಂದಿದ್ದರು. ಎಲ್ಲರಿಗೂ ಎಲ್ಲೂ ಅಡಚಣೆಯಾಗದಂತೆ ಕೆಲಸ ನಿರ್ವಹಿಸಿದ್ದೇವೆ ಅಂತ ಪೊಲೀಸರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ್ರೆ ಶ್ರೀಗಳ ಅಂತಿಮ ದರ್ಶನಕ್ಕೆ ಬರಬೇಕು ಎಂದು ಪ್ರಧಾನಿಗಳು ನುಣುಚಿಕೊಂಡ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ ಅಂದೇ ಪ್ರಧಾನಿಗಳು ವಾರಣಾಸಿಯಲ್ಲಿ ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮವಿತ್ತು. ಅಲ್ಲಿಗೆ ಪ್ರಧಾನಿ ಭೇಟಿ ನೀಡಿದ್ದರು. ಈ ವಿಚಾರ ಸಂಬಂಧ ಪ್ರಧಾನಿಗಳು ಸಾಕಷ್ಟು ಟೀಕೆಗೂ ಗುರಿಯಾಗಿದ್ದರು.

    https://www.youtube.com/watch?v=tap2rc83m7s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಉಡುಪಿ: ಇಲ್ಲಿನ ಮಲ್ಪೆಯಿಂದ ಹೊರಟ ಬೋಟ್ ಸಮೇತ ಏಳು ಮಂದಿ ಮೀನುಗಾರರ ನಾಪತ್ತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಉಡುಪಿಯ ಪೇಜಾವರಶ್ರೀ ಪತ್ರ ಬರೆದಿದ್ದಾರೆ. ಇತ್ತ 3 ರಾಜ್ಯಕ್ಕೆ 6 ಮಂದಿಯ ಪೊಲೀಸ್ ಟೀಂ ನಿಯೋಜಿಸಲಾಗಿದೆ.

    ಮೀನುಗಾರರು ನಾಪತ್ತೆಯಾಗಿ ತಿಂಗಳು ಹತ್ತಿರವಾಗುತ್ತಿದೆ. ಶೀಘ್ರ ಪತ್ತೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಪೇಜಾವರ ಶ್ರೀಗಳು ಪ್ರಧಾನಿಗೆ ಒತ್ತಾಯಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಕಾಣೆಯಾದ ಮೀನುಗಾರರ ಶೀಘ್ರ ಪತ್ತೆಗೆ ತಾವು ಕ್ರಮ ಕೈಗೊಳ್ಳಬೇಕು. ಉನ್ನತ ಮಟ್ಟದ ಎಲ್ಲಾ ತಂತ್ರಜ್ಞಾನ, ಸಾಮಥ್ರ್ಯ ಬಳಸುವಂತೆ ಪತ್ರದಲ್ಲಿ ಪೇಜಾವರಶ್ರೀ ಒತ್ತಾಯಿಸಿದ್ದಾರೆ.

    ಸ್ವಾಮೀಜಿ ಪತ್ರ ಬರೆದು ಅದನ್ನು ಈಮೇಲ್ ಮೂಲಕ ರವಾನೆ ಮಾಡಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರದ ಪ್ರತಿಯನ್ನು ರವಾನೆ ಮಾಡಿದ್ದಾರೆ.  ಇದನ್ನೂ ಓದಿ: ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

    ಪೊಲೀಸ್ ಟೀಂ:
    ಅರಬ್ಬೀ ಸಮುದ್ರದಲ್ಲಿ ಏನಾದರೂ ಅವಘಡ ಸಂಭವಿಸಿ ಮೀನುಗಾರರು ನಾಪತ್ತೆಯಾಗಿರಬಹುದೇ ಎಂಬ ಆಯಾಮದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಲು ಕೇರಳಕ್ಕೆ ಎರಡು ತಂಡಗಳನ್ನು ರವಾನಿಸಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರಕ್ಕೆ ನಾಲ್ಕು ಟೀಂ ತೆರಳಿದ್ದು ಕಣ್ಮರೆಯಾದವರ ತನಿಖೆ ಮಾಡುತ್ತಿದೆ.

    ಮಹಾರಾಷ್ಟ್ರದ ಮರಾಠಿ ಪತ್ರಿಕೆಯೊಂದರಲ್ಲಿ ಆಚ್ರಾ ಮತ್ತು ಮೆಲ್ವಾನ್ ನಲ್ಲಿ ಬೋಟಿನ ಟ್ರೇಗಳು ದೊರಕಿವೆ ಎಂದು ವರದಿಯಾಗಿತ್ತು. ಇವು ಸುವರ್ಣ ತ್ರಿಭುಜ ಬೋಟಿಗೆ ಸೇರಿದ ಟ್ರೇಗಳಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರಕರಣದ ಗಂಭೀರತೆ ಹೆಚ್ಚಿದ್ದು ಪೊಲೀಸರು ಶೀಘ್ರವೇ ಪ್ರಕರಣ ಬೇಧಿಸುವ ಒತ್ತಡದಲ್ಲಿದ್ದಾರೆ. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಗೋವಾ ಮೀನುಗಾರನದ್ದು ಎನ್ನಲಾದ ವಾಯ್ಸ್ ನೋಟ್ ನ ಜಾಡು ಹಿಡಿದಿರುವ ಪೊಲೀಸರು ಗೋವಾದಲ್ಲೂ ತನಿಖೆ ಆರಂಭಿಸಿದ್ದಾರೆ. ಮಹಾರಾಷ್ಟ್ರ ದಾಟಿ ಗೋವಾ ಗಡಿ ಕಡೆ ಸುವರ್ಣ ತ್ರಿಭುಜ ಬೋಟ್ ಹೋಗಿದ್ಯಾ? ಪಾಕ್ ಗಡಿಯಲ್ಲಿ ಬೋಟ್ ಅಪಹರಣವಾಯ್ತಾ ಆನ್ನೋ ಸಂಶಯವೂ ಮೀನುಗಾರರಿಂದ ಬಂದಿದ್ದು ಕೇಂದ್ರ ಗೃಹ ಇಲಾಖೆ ಈ ನಿಟ್ಟಿನಲ್ಲಿ ತನಿಖೆ ಶುರುಮಾಡಿದೆ.

    ಡಿಸೆಂಬರ್13 ಕ್ಕೆ ಉಡುಪಿಯ ಮಲ್ಪೆಯಿಂದ ಸುವರ್ಣ ತ್ರಿಭುಜ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಡಿ. 15 ರಿಂದ ಜಿಪಿಎಸ್- ಫೋನ್ ಸಂಪರ್ಕ ಕಡಿತಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ.9ರಂದು ರಾಜ್ಯಕ್ಕೆ ಮೋದಿ, ಅಮಿತ್ ಶಾ ಆಗಮನ

    ಜ.9ರಂದು ರಾಜ್ಯಕ್ಕೆ ಮೋದಿ, ಅಮಿತ್ ಶಾ ಆಗಮನ

    ಬೆಂಗಳೂರು: ಹೊಸ ವರ್ಷದ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಜನವರಿ 9 ರಂದು ಮೋದಿ ಮತ್ತು ಶಾ ತುಮಕೂರಿಗೆ ಆಗಮಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಒಂದೇ ದಿನದಲ್ಲಿ ಕೋಲಾರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹೀಗೆ 5 ಲೋಕಸಭೆ ಕ್ಷೇತ್ರಗಳ ಪ್ರಮುಖರ ಜೊತೆ ವಿಶೇಷ ಸಭೆ ನಡೆಸಲಿದ್ದಾರೆ. ಈ 5 ಲೋಕಸಭೆ ಕ್ಷೇತ್ರಗಳ ಬೂತ್ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು ವಿಶೇಷ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 20 ರಿಂದ 30 ಸಾವಿರ ಪ್ರಮುಖ ಕಾರ್ಯಕರ್ತರ ಜೊತೆ ವಿಶೇಷ ಸಭೆ ನಡೆಯಲಿದೆ ಎನ್ನಲಾಗಿದೆ.

    ವಿಶೇಷ ಸಭೆ ಮೂಲಕ ರಾಜ್ಯದ ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತುಮಕೂರಿನ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ವಿಶೇಷ ಸಭೆ ನಡೆಯಲಿದ್ದು, ಸಭೆಗೂ ಮುನ್ನ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಶೈಲ ಪೀಠದ ಸ್ವಾಮೀಜಿಗಳಿಂದ ಮೋದಿಗೆ ಅಭಿನಂದನೆ

    ಶ್ರೀಶೈಲ ಪೀಠದ ಸ್ವಾಮೀಜಿಗಳಿಂದ ಮೋದಿಗೆ ಅಭಿನಂದನೆ

    ಚಿಕ್ಕೋಡಿ(ಬೆಳಗಾವಿ): ಪ್ರಸಿದ್ಧ ಧಾರ್ಮಿಕ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಬರಲು ಪ್ರಧಾನಿ ಮೋದಿಯವರು ರೈಲ್ವೆ ಕೊಡುಗೆ ನೀಡಿದ್ದಕ್ಕೆ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಅಭಿನಂದಿಸಿದರು.

    ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಮ್ಯಾನೇಜರ್ ವಿನೋದ್ ಕುಮಾರ್ ಯಾದವ್ ಅವರು ಸಮೀಕ್ಷೆ ನಡೆಸಿ ಹೈದರಾಬಾದ್-ಜಡಚರ್ಲಾ-ಅಚ್ಛಂಪೇಠ ಮಾರ್ಗವಾಗಿ ಶ್ರೀಶೈಲಂ ತಲುಪುವ ರೈಲು ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿದೆ. 1, 307 ಕೋಟಿ ವೆಚ್ಚದಲ್ಲಿ 171 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ಮಾಡಿ ಶಂಕುಸ್ಥಾಪನೆಯನ್ನೂ ಸಹ ನೆರವೇರಿಸಲಾಗಿದೆ ಅಂತ ಹೇಳಿದ್ರು.

    ಈ ಯೋಜನೆಯಿಂದ ಶ್ರೀಶೈಲಕ್ಕೆ ಬರುವ ಕರ್ನಾಟಕ, ತೆಲಂಗಾಣ ಆಂಧ್ರ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಈ ಮಹತ್ವದ ಯೋಜನೆ ಜಾರಿಗೊಳಿಸಲು ಕಾರಣಿಕರ್ತರಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಯನ್ನ ಸ್ವಾಮೀಜಿ ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆದರೂ ಆಗಬಹುದು: ಸಿಎಂ ಎಚ್‍ಡಿಕೆ

    ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆದರೂ ಆಗಬಹುದು: ಸಿಎಂ ಎಚ್‍ಡಿಕೆ

    ಮಡಿಕೇರಿ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾಗಿರುವ ಎಚ್.ಡಿ.ದೇವೇಗೌಡ ಮತ್ತೊಮ್ಮೆ ಪ್ರಧಾನಿಯಾದರೂ, ಆಗಬಹುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಮಹಾ ಮಳೆಗೆ ಕೊಡಗು ತತ್ತರಿಸಿ ಹೋಗಿದ್ದು, ಇಂದು ಖುದ್ದು ಸಿಎಂ ಎಚ್‍ಡಿಕೆ ಪ್ರವಾಹ ಸಂತ್ರಸ್ತರ ಜೊತೆ ಸಂವಾದ ಕಾರ್ಯಕ್ರಮ ನಡೆಸಿದ್ದರು. ಸಂವಾದ ಕಾರ್ಯಕ್ರಮದ ನಂತರ ದೇವೇಗೌಡರು ಪ್ರಧಾನಿ ಆಗುತ್ತಾರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದವರು ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ಅಲ್ಲದೇ ದೇಶದಲ್ಲಿ ತೃತೀಯ ರಂಗ ಬರುವ ವಾತಾವರಣ ಕಾಣಿಸುತ್ತಿದೆ. ಹೀಗಾಗಿ ದೇವೇಗೌಡರೂ ಮತ್ತೊಮ್ಮೆ ಪ್ರಧಾನಿ ಆದರೂ ಆಗಬಹುದು. ಅಲ್ಲದೇ ಇದೇ ರೀತಿಯ ವಿಶ್ಲೇಷಣೆಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಸಂತ್ರಸ್ತರು ನೀಡಿದ್ದ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಆಶ್ವಾಸನೆ ನೀಡಿದ ಅವರು ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 6 ಲಕ್ಷ ರೂಪಾಯಿ ಮೌಲ್ಯದ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ. ಮನೆ ಕಾರ್ಯ ವಿಳಂಬವಾದರೆ, ಅಂತಹವರಿಗೆ ಮನೆ ಬಾಡಿಗೆಗೆ ಹಣವನ್ನು ಸಹ ನೀಡಲಾಗುವುದು. ಈಗಾಗಲೇ 122 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದೇವೆ. ಅಲ್ಲದೇ ಇಲ್ಲಿಯವರೆಗೂ ಸಿಎಂ ನಿಧಿಗೆ ಬಂದ ಹಣವನ್ನು ಕೊಡಗಿಗೆ ಕೊಟ್ಟಿಲ್ಲವೆಂದು ತಿಳಿಸಿದರು.

    ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ವಿಚಾರದ ಬಗ್ಗೆ ಮಾತನಾಡಿ, ಲೋಕಸಭಾ ಚುನಾವಣೆಯವರೆಗೂ, ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಆಗಬಾರದೆಂದು ಕೆಲವರು ಪಿತೂರಿ ಮಾಡುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ನವೆಂಬರ್ 1ರಿಂದ ಈ ಯೋಜನೆ ಕಡ್ಡಾಯವಾಗಿ ಜಾರಿಗೆ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಮ್ಮಿಶ್ರ ಸರ್ಕಾರದಿಂದ ವರ್ಗಾವಣೆ ದಂಧೆ ನಡೆಯುತ್ತಿದೆ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿಯವರಿಗೆ ಸಮ್ಮಿಶ್ರ ಸರ್ಕಾರ ಪೇಮೆಂಟ್ ಆಧಾರದ ಮೇಲೆ ವರ್ಗಾವಣೆ ನಡೆಯುತ್ತಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ನಮ್ಮ ಸರ್ಕಾರವು ಮೆರಿಟ್ ಆಧಾರದ ಮೇಲೆ ವರ್ಗಾವಣೆ ನಡೆಯುತ್ತಿದೆ ಎಂದ್ರು.

    ಮೊದಲು ಬೆಂಗಳೂರನ್ನು ಕ್ಲೀನ್ ಮಾಡಬೇಕಾಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡಿದ್ದೇನೆ. ಅಲ್ಲದೇ ಪ್ರಮುಖ ನಿಷ್ಠಾವಂತ ಅಧಿಕಾರಿಗಳನ್ನು ರಾಜಧಾನಿಗೆ ವರ್ಗಾಯಿಸಿದ್ದೇನೆ. ಯಡಿಯೂರಪ್ಪನವರ ಬಗ್ಗೆ ಏನೂ ಮಾತನಾಡಲ್ಲ, ಅವರ ಬಗ್ಗೆ ಮಾತನಾಡಿದರೆ, ಸುಮ್ಮನೆ ಸಮಯ ವ್ಯಥ್ರ್ಯ ಆಗುತ್ತೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದಿನಿಂದ ಮೋದಿ ಉಪವಾಸ- 9 ದಿನಗಳ ವ್ರತದ ಹಿಂದಿನ ರಹಸ್ಯ ಇಲ್ಲಿದೆ

    ಇಂದಿನಿಂದ ಮೋದಿ ಉಪವಾಸ- 9 ದಿನಗಳ ವ್ರತದ ಹಿಂದಿನ ರಹಸ್ಯ ಇಲ್ಲಿದೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಬಾರಿ ನವರಾತ್ರಿ ಉಪವಾಸ ಮಾಡ್ತಾರೆ. ಇದಾದ ಬಳಿಕ ಮಹತ್ವದ ಹೆಜ್ಜೆ ಇಡ್ತಾರೆ. ಈ ಬಾರಿ ಕೂಡ ಅಷ್ಟೇ ಪಂಚ ಸವಾಲುಗಳನ್ನ ಎದುರಿಸೋಕು ಮೊದಲೇ ನವರಾತ್ರಿ ಉಪವಾಸ ನಡೆಸ್ತಿದ್ದಾರೆ.

    ಈ ವರ್ಷದ ಶರದ್ ನವರಾತ್ರಿ ಇಂದಿನಿಂದ (ಅಕ್ಟೋಬರ್ 10)ರಿಂದ ಆರಂಭವಾಗಲಿದ್ದು, ಅ.18ರ ವರೆಗೆ ಅಂದರೆ 9 ದಿನಗಳ ಕಾಲ ಮೋದಿಜೀ ಕಟ್ಟುನಿಟ್ಟಿನ ಉಪವಾಸದಲ್ಲಿರಲಿದ್ದಾರೆ. ಇಡೀ ದಿನದಲ್ಲಿ ಬಿಸಿನೀರು, ಸ್ವಲ್ಪ ಫಲಾಹಾರ ಸೇವಿಸುವ ಪ್ರಧಾನಿ, ಸಂಜೆ ಒಂದು ಲೋಟ ನಿಂಬೆಹಣ್ಣಿನ ರಸ ಬೆರೆಸಿದ ನೀರನ್ನು ಮಾತ್ರ ಕುಡಿಯುವರು. ಕಳೆದ 36 ವರ್ಷಗಳಿಂದ ನವರಾತ್ರಿ ವ್ರತವನ್ನು ಆಚರಿಸುತ್ತಿರುವ ಮೋದಿಯವರು ಇದೇ ವರ್ಷ ಚೈತ್ರ ನವರಾತ್ರಿಯನ್ನೂ ಸಹ ಶ್ರದ್ಧೆಯಿಂದ ಆಚರಿಸಿದ್ದರು. ಈಗ ಶರದ್ ನವರಾತ್ರಿ ಆಚರಿಸ್ತಿದ್ದಾರೆ.

    ವ್ರತ ಹಿಂದಿನ ರಹಸ್ಯವೇನು?
    ಮೋದಿಯವರು ನವರಾತ್ರಿಯನ್ನು ಈ ವಯಸ್ಸಿನಲ್ಲೂ ಕಠಿಣ ರೀತಿಯಲ್ಲಿ ಆಚರಿಸುವುದರ ಹಿಂದೆ ಒಂದು ರಹಸ್ಯವಿದೆ. ನವರಾತ್ರಿ ವ್ರತ ಕೈಗೊಳ್ಳುವುದಕ್ಕೂ ಮುನ್ನ ಮೋದಿಯವರು ಒಂದು ಅತ್ಯಂತ ಪ್ರಮುಖ ನಿರ್ಣಯದ ಸಾಫಲ್ಯತೆಗಾಗಿ ಅಂಬಾದೇವಿಯಲ್ಲಿ ಬೇಡುವರಂತೆ. ನವರಾತ್ರಿಯ ವ್ರತವನ್ನು ಪರಿಪೂರ್ಣವಾಗಿ ನಡೆಸಿ, ತನ್ನ ಬೇಡಿಕೆ ಸಫಲಗೊಳ್ಳುವಂತೆ ಬೇಡಿದ್ರೆ ಆ ದುರ್ಗಾಮಾತೆ ಕರುಣಿಸದೆ ಇರೋದಿಲ್ಲ ಅಂತ ಭಾವಿಸಲಾಗುತ್ತದೆ. ಅಂತೆಯೇ ಚೈತ್ರ ನವರಾತ್ರಿ ವ್ರತದ ಬಳಿಕವೇ ಮೋದಿ ಜಿಎಸ್‍ಟಿ ಜಾರಿಗೆ ತಂದಿದ್ದರು. ಈಗ ಪಂಚ ರಾಜ್ಯಗಳ ಚುನವಾಣೆ ಇದ್ದು ಯಶಸ್ಸಿಗಾಗಿ ಬೇಡಲಿದ್ದಾರೆ.

    2014ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ್ಲೂ ಮೋದಿ ತಮ್ಮ ನವರಾತ್ರಿ ಉಪವಾಸಕ್ಕೆ ಭಂಗ ತಂದುಕೊಳ್ಳಲಿಲ್ಲ. ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮೋದಿಯವ್ರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಿದ್ದಾಗ್ಲೂ ಮೋದಿ ಕೇವಲ ನಿಂಬೆ ಪಾನೀಯ ಸ್ವೀಕರಿಸಿ ತಮ್ಮ ವ್ರತ ಪಾಲಿಸಿದ್ದರು. ಕಳೆದ ವರ್ಷ ನವರಾತ್ರಿ ಸಂದರ್ಭ ಮೋದಿಯವರು ತಮ್ಮ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದರು. ತಮ್ಮ ಗೆಲುವಿನ ಅಭಿಯಾನಕ್ಕೆ ಪ್ರಥಮ ಭಾಷ್ಯ ಬರೆದ ಪುಣ್ಯಕ್ಷೇತ್ರದಲ್ಲಿ ಸಮಯ ಕಳೆದಿದ್ದರು.

    ಈ ಬಾರಿ ಐದು ರಾಜ್ಯಗಳ ಚುನಾವಣೆ ಇರೋದ್ರಿಂದ ನವರಾತ್ರಿ ಉಪವಾಸ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲೂ ನವರಾತ್ರಿಯ 2ನೇ ದಿನ ಮಾತೆ ದುರ್ಗಿಯನ್ನು, ಪ್ರೀತಿ, ನಿಷ್ಠೆ ಮತ್ತು ಜ್ಞಾನದ ಧ್ಯೋತಕವಾದ ಬ್ರಹ್ಮಚಾರಿಣಿ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ತಾಯಿ ಬ್ರಹ್ಮಚಾರಣಿಯು ಅಪಾರ ಭಾವನಾತ್ಮಕ ಶಕ್ತಿಯನ್ನು ಕೊಡುವಳಂತೆ. ಒಬ್ಬ ವ್ಯಕ್ತಿಯ ಬ್ರಹ್ಮಚರ್ಯದ ಕಾಲವನ್ನು ಪ್ರತಿನಿಧಿಸುವ ಆಕೆ ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲೂ ಮನೋಸ್ಥೈರ್ಯ ಕುಗ್ಗದಂತೆ ಕಾಪಾಡುತ್ತಾಳೆ ಅನ್ನೋದು ಮೋದಿ ನಂಬಿಕೆ. ಇಂಥ ಬ್ರಹ್ಮಾಚಾರಣಿ ಅವತಾರದ ದುರ್ಗಿಯನ್ನು ಆರಾಧಿಸುವ ತಾಯಿ ಬ್ರಹ್ಮಚಾರಣಿಯ ಕೃಪೆಗೆ ಪಾತ್ರರಾಗಲು ಸಜ್ಜಾಗಿದ್ದಾರೆ. ಪ್ರತಿಸಲ ನವರಾತ್ರಿ ಆಚರಿಸಿದಾಗ್ಲೂ ಮೋದಿಯವ್ರಿಗೆ ಒಳಿತಾಗಿದೆ ಅಂತ ಹೇಳಲಾಗುತ್ತಿದ್ದು, ಈ ಬಾರಿ ಮೋದಿಯವರ ಮುಂದೆ ಅತಿ ಕಠಿಣ ಸವಾಲೇ ಇದೆ.

    ಹೀಗೆ ಅತಿದೊಡ್ಡ ಸವಾಲನ್ನ ಇಟ್ಕೊಂಡು ಮೋದಿ ಕಠಿಣ ಉಪವಾಸ ಶುರುಮಾಡ್ತಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಉಪವಾಸ ಶುರು. ಇನ್ನು ಮುಂದಿನ ಒಂಬತ್ತು ದಿನಗಳ ಕಾಲ ಮೋದಿಯವರದ್ದು ಶುದ್ಧ ಉಪವಾಸ ಕೈಗೊಳ್ತಾರೆ. ವ್ರತಾಚರಣೆ ಮಾಡೊ ಮೊದಲು ಕೆಲವೊಂದು ಸಂಕಲ್ಪಗಳನ್ನೂ ಮಾಡಲಾಗುತ್ತೆ. ಆ ಉದ್ದೇಶ ಈಡೇರಿಸುವಂತೆ ಆದಿಮಾಯೆಯಯಲ್ಲಿ ಬೇಡಿಕೊಳ್ಳೋದು ವಾಡಿಕೆ. ಅದೇ ರೀತಿ ಮೋದಿ ಕೂಡ ಆ ಕೆಲವೊಂದು ಉದ್ದೇಶ ಇಟ್ಕೊಂಡೇ ವ್ರತಾಚರಣೆ ಮಾಡ್ತಿದ್ದಾರೆ.

    ಸದ್ಯ ನವರಾತ್ರಿ ಹಬ್ಬ ಆರಂಭವಾಗುತ್ತಿರಬೇಕಾದ್ರೆ ಇಡೀ ದೇಶವೇ ಆದಿಶಕ್ತಿಯ ಆರಾಧನೆಯಲ್ಲಿ ತೊಡಗಿದೆ. ಅದೇ ರೀತಿ ಮೋದಿ ಕೂಡ ವ್ರತಾಚರಣೆಯಲ್ಲಿ ತೊಡಗ್ತಿದ್ದಾರೆ. ಈ ಬಾರಿ ಮಾತ್ರ ತುಂಬಾ ವಿಶೇಷವಾದ ಉದ್ದೇಶ ಇಟ್ಟುಕೊಂಡೇ ಮೋದಿ ತಪ್ಪಸ್ಸು ನಡೆಸಲಿದ್ದಾರೆ. ಯಾಕಂದ್ರೆ ಮುಂಬರುವ ಪಂಚ ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಮೋದಿಗಿದೆ. ಹೀಗಾಗಿ ಇವೆಲ್ಲವನ್ನ ಮನಸ್ಸಲ್ಲಿಟ್ಟುಕೊಂಡೇ ಮೋದಿ ಈ ಬಾರಿ ಆದಿಶಕ್ತಿಯ ಆರಾಧನೆ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿಜೀ ನಿಮ್ಮ ಗುರಿ ಕೊನೆತನಕ ಇರಲಿ ಅಂದ್ರು ಜಗ್ಗೇಶ್

    ಮೋದಿಜೀ ನಿಮ್ಮ ಗುರಿ ಕೊನೆತನಕ ಇರಲಿ ಅಂದ್ರು ಜಗ್ಗೇಶ್

    ಬೆಂಗಳೂರು: ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ ಎನಿಸಿಕೊಂಡಿರುವ ಚಾಂಪಿಯನ್ಸ್ ಆಫ್ ಅರ್ತ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರೋ ಪ್ರಧಾನಿ ನರೇಂದ್ರ ಮೋದಿಯವರಿಗೆ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಮೋದಿಜೀ ನಿಮ್ಮ ಗುರು ಕೊನೆತೆಕ ಇರಲಿ ಅಂತ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, “2018ರ ಚಾಂಪಿಯನ್ಸ್ ಆಫ್ ಅರ್ತ್ ಗೌರವಕ್ಕೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳು. ನೀವು ದೇಶದ ಅಭಿವೃದ್ಧಿಗೆ ನೀಡುವ ಕೊಡುಗೆಗಳಿಂದಾಗಿ ಸ್ವಾಭಿಮಾನಿ ಭಾರತೀಯರು ನಿಮ್ಮ ಜೊತೆ ಎಂದಿಗೂ ಇರುತ್ತಾರೆ. ನೀವು ಹೀಗೆಯೇ ಮುಂದುವರಿಯುತ್ತಾ ಇರಿ. ಈ ಮೂಲಕ ನಿಮ್ಮ ಗುರಿ ಕೊನೆತನಕ ಇರಲಿ” ಅಂತ ಶುಭಹಾರೈಸಿದ್ದಾರೆ.

    1018ರ ಚಾಂಪಿಯನ್ಸ್ ಆಫ್ ಅರ್ತ್ ಗೌರವವನ್ನು ಪ್ರಧಾನಿಯವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರ ಜೊತೆ ಹಂಚಿಕೊಳ್ಳಲಿದ್ದಾರೆ. ಮೋದಿಯವರಿಗೆ ಪಾಲಿಸಿ ಆಫ್ ಲೀಡರ್ ಶಿಪ್ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಮೋದಿಗೆ ಈ ಗೌರವ ನೀಡಲಾಗಿದೆ. ಇದೇ ವೇಳೆ 2022ಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ವಾಗ್ದಾನವನ್ನು ಕೂಡ ಗೌರವವನ್ನು ಘೋಷಿಸುವಾಗ ವಿಶೇಷವಾಗಿ ಉಲ್ಲೇಖಿಸಲಾಗಿದೆ.

    ಏನಿದು ಸೌರ ಒಕ್ಕೂಟ?
    ಅತಿ ಹೆಚ್ಚು ಸೂರ್ಯನ ಬೆಳಕನ್ನು ಪಡೆಯುವ ದೇಶಗಳ ಒಕ್ಕೂಟವನ್ನು ಸ್ಥಾಪಿಸಿ, ಸೌರ ವಿದ್ಯುತ್ ಬಳಕೆಯ ತಂತ್ರಜ್ಞಾನ, ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ 2015ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನ ಲಂಡನ್ ನಲ್ಲಿರುವ ವೆಂಬ್ಲೆ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಈ ದೇಶಗಳನ್ನು ಸೂರ್ಯನ ಮಕ್ಕಳು ಎಂದು ಮೋದಿ ಉಲ್ಲೇಖಿಸಿದ್ದರು. 2016ರಲ್ಲಿ ಈ ಬಗ್ಗೆ ರೂಪುರೇಷೆ ಸಿದ್ಧವಾಗಿದ್ದು, ಈ ಒಪ್ಪಂದಕ್ಕೆ ಒಳಪಡಲು ಅಂದಿನಿಂದ 121 ದೇಶಗಳು ಸಹಿ ಹಾಕಿವೆ. 2018ರ ಮಾರ್ಚ್ ನಲ್ಲಿ ನವದೆಹಲಿಯಲ್ಲಿ ಮೊದಲ ಸಮ್ಮೇಳನ ಆಯೋಜನೆಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್‍ನವರಿಗೆ ಆತಂಕ ಯಾಕೋ ಭಗವಂತನಿಗೇ ಗೊತ್ತು- ಬಿಎಸ್‍ವೈ

    ಕಾಂಗ್ರೆಸ್‍ನವರಿಗೆ ಆತಂಕ ಯಾಕೋ ಭಗವಂತನಿಗೇ ಗೊತ್ತು- ಬಿಎಸ್‍ವೈ

    – ದೆಹಲಿಗೆ ಹೋಗಲ್ಲ ಅಂದ್ರು ಮಾಜಿ ಸಿಎಂ

    ಬೆಂಗಳೂರು: ಬಿಜೆಪಿಯಿಂದ ನಮ್ಮ ಸರ್ಕಾರ ಕೆಡವಲು ಬಿಜೆಪಿ ಯತ್ನ ಎಂಬ ಕಾಂಗ್ರೆಸ್ ಆರೋಪ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರ ಬೀಳಿಸೋ ಯತ್ನ ಮಾಡಿಲ್ಲ. ಕಾಂಗ್ರೆಸ್ ನವರಿಗೆ ಆತಂಕ ಯಾಕಿದೆಯೋ ಭಗವಂತನಿಗೆ ಗೊತ್ತು. ಬೇರೆ ಬೇರೆಯವರು ಪಕ್ಷಕ್ಕೆ ಸೇರಲು ಸಜ್ಜಾಗ್ತಿದ್ದಾರೆ ಅಂದ್ರು.

    ನಾನು ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿಗೆ ಹೋಗೋದಿಲ್ಲ. ಲೋಕಸಭಾ ಚುನಾವಣೆಗೆ ಸಜ್ಜಾಗ್ತಿದ್ದೀವಿ, ಪ್ರವಾಸ ಶುರು ಮಾಡಬೇಕು. ಕಳೆದ ಬಾರಿ ಎಲ್ಲೆಲ್ಲಿ ವೀಕ್ ಇದ್ದ ಕಡೆ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕೋದಕ್ಕೆ ಪ್ಲಾನ್ ಮಾಡ್ತಿದ್ದೀವಿ ಅಂತ ಅವರು ಹೇಳಿದ್ರು.

    ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಪ್ರಧಾನ ಮಂತ್ರಿಗಳ ಭೇಟಿ ಮಾಡಲಿದ್ದು, ಈ ವೇಳೆ ಸಂಸದರು, ಸಚಿವರು, ವಿರೋಧ ಪಕ್ಷದ ನಾಯಕರು ಕೂಡ ಸಾಥ್ ನೀಡಲಿದ್ದಾರೆ. ಸೋಮವಾರ ಬೆಳಗ್ಗೆ 11.15 ಕ್ಕೆ ಪ್ರಧಾನ ಮಂತ್ರಿಗಳ ಭೇಟಿ ನಿಗಧಿಯಾಗಿದೆ. ಅತಿವೃಷ್ಟಿ ಸಂಬಂಧ ಪರಿಹಾರ ಕೋರಿ ನಿಯೋಗ ಮನವಿ ಸಲ್ಲಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv