Tag: Players

  • ಟಿ20 ವಿಶ್ವಕಪ್‍ಗೆ ಅಚ್ಚರಿಯಾಗಿ ಆಯ್ಕೆಗೊಂಡ ಆಟಗಾರರಿವರು

    ಟಿ20 ವಿಶ್ವಕಪ್‍ಗೆ ಅಚ್ಚರಿಯಾಗಿ ಆಯ್ಕೆಗೊಂಡ ಆಟಗಾರರಿವರು

    ದುಬೈ: ಟಿ20 ವಿಶ್ವಕಪ್‍ಗಾಗಿ ಪ್ರತಿ ದೇಶದ ತಂಡಗಳು ಕೂಡ ತಯಾರಿಯಲ್ಲಿ ತೊಡಗಿಕೊಂಡಿದೆ. ಈಗಾಗಲೇ ಟೂರ್ನಿಗೆ ಪ್ರತಿ ದೇಶದ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಕೆಲ ಆಟಗಾರರ ಆಯ್ಕೆ ಅಚ್ಚರಿ ಮೂಡಿಸುತ್ತಿದೆ.

    ಪ್ರತಿ ದೇಶಗಳು ಕೂಡ 15 ಸದಸ್ಯರ ತಂಡವನ್ನು ದುಬೈಗೆ ಕಳುಹಿಸಿಕೊಡಲು ತಂಡವನ್ನು ಆಯ್ಕೆ ಮಾಡಿದೆ. ಈ ನಡುವೆ ಕೆಲ ದೇಶಗಳ ಹಿರಿಯ ಆಟಗಾರರು ಮತ್ತು ಕಳಪೆ ಫಾರ್ಮ್‍ನಲ್ಲಿರುವವರು ಕೂಡ ತಂಡದಲ್ಲಿ ಸ್ಥಾನ ಪಡೆದು ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ.

    ಅಚ್ಚರಿಯ ಆಯ್ಕೆ ಕಂಡವರಲ್ಲಿ ಮೊದಲಿಗರಾಗಿ ಕಾಣ ಸಿಗುವುದು ಭಾರತ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಭಾರತ ತಂಡಕ್ಕೆ ಕಳೆದ 4 ವರ್ಷಗಳಿಂದ ಸ್ಥಾನ ಪಡೆಯಲು ವಿಫಲರಾಗಿದ್ದರು. ಆದರೆ ಇದೀಗ ಅಶ್ವಿನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಆಡಲ್ಲವೆಂದ ಇಂಗ್ಲೆಂಡ್ ಸ್ಟಾರ್ ಆಟಗಾರ..!

    ಅಶ್ವಿನ್‍ರಂತೆ ಅಚ್ಚರಿಯಾಗಿ ಆಯ್ಕೆಗೊಂಡವರಲ್ಲಿ ವೆಸ್ಟ್ ಇಂಡೀಸ್ ತಂಡದ ರವಿ ರಾಂಪಾಲ್ ಕೂಡ ಒಬ್ಬರು. ಅವರು ವೆಸ್ಟ್ ಇಂಡೀಸ್ ತಂಡದಿಂದ ಹೊರ ಬಿದ್ದು ಈಗಾಗಲೇ 6 ವರ್ಷ ಕಳೆದು ಹೋಗಿತ್ತು. ಆದರೆ ಇದೀಗ ನಡೆಯುತ್ತಿರುವ ಸಿಪಿಎಲ್‍ನಲ್ಲಿ ಭರ್ಜರಿ ಫಾರ್ಮ್ ಕಂಡುಕೊಂಡಿರುವ ರಾಂಪಾಲ್ ಮತ್ತೊಮ್ಮೆ ವೆಸ್ಟ್ ಇಂಡೀಸ್ ತಂಡ ಸೇರಿಕೊಂಡಿದ್ದಾರೆ.

    ತಾಲಿಬಾನಿಗಳಿಗಳ ಅಟ್ಟಹಾಸದಿಂದಾಗಿ ನಲುಗಿ ಹೋಗಿರುವ ಅಘ್ಘಾನಿಸ್ತಾನ ದೇಶ ಇದೀಗ ಟಿ20 ವಿಶ್ವಕಪ್‍ಗೆ ತಮ್ಮ ತಂಡವನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಈಗಾಗಲೇ ತಂಡವನ್ನು ಕೂಡ ಆಯ್ಕೆ ಮಾಡಲಾಗಿದೆ. ತಂಡದಲ್ಲಿ 2 ವರ್ಷಗಳ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಮೊಹಮ್ಮದ್ ಶಹಜಾದ್ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ತಂಡದಿಂದ ಹೊರ ಬಿದ್ದಿದ್ದ ಶಹಜಾದ್ ಟಿ20 ವಿಶ್ವಕಪ್‍ಗಾಗಿ ತಂಡಕ್ಕೆ ಮರಳಿದ್ದಾರೆ. ಇದನ್ನೂ ಓದಿ: ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

    ದೇಶಿ ಟೂರ್ನಿಯಲ್ಲಿ ಮಿಂಚಿದ ಇಂಗ್ಲೆಂಡ್ ತಂಡದ ವೇಗದ ಬೌಲರ್ ಟೈಮಲ್ ಮಿಲ್ಸ್ 2 ವರ್ಷಗಳ ಬಳಿಕ ಮತ್ತೆ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದು, ರಾಷ್ಟ್ರೀಯ ತಂಡಕ್ಕಾಗಿ ಈ ಬಾರಿ ಟಿ20 ವಿಶ್ವಕಪ್ ಗೆಲ್ಲಿಸಿಕೊಡುವ ಇರಾದೆಯಲ್ಲಿದ್ದಾರೆ.

    ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡೇವಿಡ್ ವೈಸ್ ಇದೀಗ ನಮೀಬಿಯಾ ತಂಡದ ಪರ ಆಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಿಂದ ಹೊರ ಬಿದ್ದ ಬಳಿಕ ನಮೀಬಿಯಾ ತಂಡ ಸೇರಿಕೊಂಡ ವೈಸ್ ಇದೀಗ ಟಿ20 ವಿಶ್ವಕಪ್‍ನ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ಮತೊಮ್ಮೆ ಮಿಂಚಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    ಈ ಎಲ್ಲಾ ಆಟಗಾರರು ಕೂಡ ಹಿರಿಯ ಅಟಗಾರಾಗಿದ್ದರೂ ಕೂಡ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ರಾಷ್ಟ್ರೀಯ ತಂಡದಲ್ಲಿ ಮಿಂಚುಹರಿಸಲು ಸಿದ್ಧರಾಗಿದ್ದಾರೆ. ಆದರೆ ಇವೆಲ್ಲರಿಗೂ ಆಡುವ 11ರ ಬಳಗದಲ್ಲಿ ಸ್ಥಾನ ಸಿಗುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

  • ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು

    ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು

    ದುಬೈ: ಐಪಿಎಲ್‍ನ ಮುಂದಿನ ಪಂದ್ಯಗಳಿಗೆ ಯುಎಇ ವೇದಿಕೆಯಾಗಲು ಸಜ್ಜಾಗಿದೆ. ಈ ನಡುವೆ ಕೆಲ ವಿದೇಶಿ ಸ್ಟಾರ್ ಆಟಗಾರರು ಮುಂದಿನ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

    ಐಪಿಎಲ್‍ನ ಸೆಕೆಂಡ್ ಇನ್ನಿಂಗ್ಸ್ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದೆ. ಈಗಾಗಲೇ ದುಬೈನಲ್ಲಿ ಐಪಿಎಲ್‍ಗಾಗಿ ಭರದ ಸಿದ್ಧತೆ ನಡೆಯುತ್ತಿದೆ. ಇತ್ತ ಅಭಿಮಾನಿಗಳು ಕೂಡ ಕಾತರತೆಯಿಂದ ಐಪಿಎಲ್‍ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಕೆಲ ತಂಡ ಯುಎಇ ತಲುಪಿ ಅಭ್ಯಾಸ ಆರಂಭಿಸಿದೆ. ಈ ಎಲ್ಲದರ ನಡುವೆ ಕೆಲ ಸ್ಟಾರ್ ಆಟಗಾರರು ಮುಂದಿನ ಪಂದ್ಯಗಳಲ್ಲಿ ನಾವು ಆಡುವುದಿಲ್ಲ ಎಂದು ತಂಡಗಳಿಗೆ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ‘ಯಶಸ್ವಿ’ಯ ಯಶಸ್ಸಿಗೆ ವಿಶೇಷ ಉಡುಗೊರೆ ನೀಡಿದ ಬಟ್ಲರ್

    14ನೇ ಆವೃತ್ತಿಯ ಐಪಿಎಲ್‍ನ ಮೊದಲ ಭಾಗದಲ್ಲಿ ಭಾಗವಹಿಸಿದ ಕೆಲ ಆಟಗಾರರು ಇದೀಗ ಎರಡನೇ ಭಾಗದಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರದಿಂದಾಗಿ ಕೆಲ ತಂಡಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಮೊದಲನೇಯದಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಐಪಿಎಲ್‍ನ ಮುಂದಿನ ಪಂದ್ಯದಲ್ಲಿ ಆಡುವುದಿಲ್ಲ ಎಂದಿದ್ದಾರೆ. ತಮ್ಮ ವೈಯಕ್ತಿಕ ಕಾರಣದಿಂದಾಗಿ ಹಿಂದೆ ಸರಿದಿರುವ ಬಗ್ಗೆ ಫ್ರಾಂಚೈಸಿಗೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಟ್ರೋಫಿಯ ಆನ್‍ಲೈನ್ ವಿಶ್ವದರ್ಶನ ಪ್ರಾರಂಭ

    ಮೊದಲ ಭಾಗದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮಿಂಚಿದ್ದ ಪ್ಯಾಟ್ ಕಮ್ಮಿನ್ಸ್ ಎರಡನೇ ಭಾಗದಿಂದ ದೂರ ಉಳಿಯಲು ನಿರ್ಧರಿಸಿರುವ ಇನ್ನೋರ್ವ ಸ್ಟಾರ್ ಆಟಗಾರ. ಅವರೂ ಕೂಡ ವೈಯಕ್ತಿಕ ಕಾರಣದಿಂದಾಗಿ ಹಿಂದೆ ಸರಿದ್ದಾರೆ. ಇದನ್ನೂ ಓದಿ: ಆರ್​ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

    ಆರ್​ಸಿಬಿ ತಂಡದ ಸ್ಪಿನ್ನರ್ ಆ್ಯಡಂ ಜಂಪಾ, ಪಂಜಾಬ್ ತಂಡದ ಬೌಲರ್‍ ಗಲಾದ ರಿಲೇ ಮೆರಿಡಿತ್ ಹಾಗೂ ಜೇ ರಿಚಡ್ರ್ಸ್‍ನ್ ಕೂಡ ತಾವು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದೇವೆ ಎಂದು ಈಗಾಗಲೇ ತಿಳಿಸಿದ್ದಾರೆ. ಐಪಿಎಲ್ ಆರಂಭಕ್ಕೆ ಒಂದು ತಿಂಗಳು ಬಾಕಿ ಇರುವಂತೆ ಆಟಗಾರರು ಹಿಂದೆ ಸರಿಯುತ್ತಿರುವುದು ಕೆಲ ಫ್ರಾಂಚೈಸ್‍ಗಳಿಗೆ ಮುಳುವಾಗಿದೆ.

  • ಟೀಂ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್ ಬಳಿ ವಿಮಾನ ಪತನ

    ಟೀಂ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್ ಬಳಿ ವಿಮಾನ ಪತನ

    – ಮೈದಾನದಿಂದ ಒಳಗೆ ಓಡಿದ ಕ್ರಿಕೆಟ್, ಫುಟ್‍ಬಾಲ್ ಆಟಗಾರರು

    ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಆಟಗಾರು ತಂಗಿರುವ ಹೋಟಿಲಿನಿಂದ 30 ಕಿಲೋ ಮೀಟರ್ ದೂರದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದೆ.

    ಸದ್ಯ ಭಾರತ ಕ್ರಿಕೆಟ್ ತಂಡ ಮೂರು ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲು ಆಸ್ಟ್ರೇಲಿಯಾಗೆ ಹೋಗಿದೆ. ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಸದ್ಯ ಅಭ್ಯಾಸ ಮಾಡುತ್ತಿದ್ದಾರೆ. ಇಂಡಿಯಾ ಆಟಗಾರರು ತಂಗಿರುವ ಸಿಡ್ನಿ ಒಲಿಂಪಿಕ್ ಪಾರ್ಕಿನಿಂದ 30 ಕಿಲೋ ಮೀಟರ್ ದೂರದ ಮೈದಾನವೊಂದರಲ್ಲಿ ವಿಮಾನ ಪತನವಾಗಿದೆ.

    ಕ್ರೋಮರ್ ಪಾರ್ಕ್ ಮೈದಾನದಲ್ಲಿ ಲಘು ವಿಮಾನವೊಂದು ನೆಲಕ್ಕಪ್ಪಳಿಸಿದ್ದು, ಆ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಆಟಗಾರರು ಮತ್ತು ಫುಟ್‍ಬಾಲ್ ಪ್ಲೇಯರ್ಸ್ ವಿಮಾನ ಬಿದ್ದ ರಭಸಕ್ಕೆ ಹೆದರಿ ಮೈದಾನದಿಂದ ಓಡಿ ಹೋಗಿದ್ದಾರೆ. ಲಘು ವಿಮಾನವಾದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನದಲ್ಲಿ ಇದ್ದ ಇಬ್ಬರು ತರಬೇತಿ ಪೈಲೆಟ್‍ಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.

    ವಿಮಾನ ಪತನವಾದಾಗ ಸ್ಥಳದಲ್ಲಿ ಫುಟ್‍ಬಾಲ್ ಮ್ಯಾಚ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ವಿಮಾನ ಬೀಳುವುದನ್ನು ಗಮನಿಸಿದ ಆಟಗಾರರು ಒಳಗೆ ಓಡಿ ಹೋಗಿದ್ದಾರೆ. ಈ ಕಾರಣದಿಂದ ಯಾವುದೇ ಸಾವು ಸಂಭವಿಸಿಲ್ಲ. ಅಪಘಾತವಾದ ವಿಮಾನ ಟ್ರೈನಿಂಗ್ ಸ್ಕೂಲ್‍ಗೆ ಸೇರಿದ್ದಾಗಿದ್ದು, ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡುವಾಗ ವಿಮಾನ ಎಂಜಿನ್ ಕೈಕೊಟ್ಟು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

    ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ.

  • ಆಸ್ಟ್ರೇಲಿಯಾ ಪ್ರವಾಸ – ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್

    ಆಸ್ಟ್ರೇಲಿಯಾ ಪ್ರವಾಸ – ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್

    ಸಿಡ್ನಿ: ಮೂರು ಮಾದರಿಯ ಸರಣಿಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸ ತೆರಳಿರುವ ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ಬಂದಿದ್ದು, ಎಲ್ಲ ಆಟಗಾರರ ರಿಪೋರ್ಟ್ ನೆಗೆಟಿವ್ ಬಂದಿದೆ.

    ಕಳೆದ ಎರಡು ತಿಂಗಳಿಂದ ಯುಎಇಯಲ್ಲಿ ನಡೆದ ಐಪಿಎಎಲ್-2020ಯಲ್ಲಿ ನಿರತರಾಗಿದ್ದ ಭಾರತದ ಆಟಗಾರರು, ವಾಪಸ್ ತವರಿಗೂ ಬಾರದೇ ಯುಎಇಯಿಂದಲೇ ಆಸ್ಟ್ರೇಲಿಯಾಕ್ಕೆ ಹಾರಿದ್ದರು. ಆಸ್ಟ್ರೇಲಿಯಾ ತಲುಪಿದ ಬಳಿಕ ಪ್ರತ್ಯೇಕ ರೂಮಿನಲ್ಲಿ ಕ್ವಾರಂಟೈನ್ ಕೂಡ ಆಗಿದ್ದರು. ಈಗ ಆಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿದೆ.

    ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದೆ. ಜೊತೆಗೆ ಎರಡು ದಿನದ ಬಳಿಕ ಟೀಂ ಇಂಡಿಯಾ ಮೊದಲ ಹೊರಾಂಗಣ ಅಭ್ಯಾಸವನ್ನು ಆರಂಭ ಮಾಡಿದೆ ಎಂದು ಟ್ವೀಟ್ ಮಾಡಿ, ಆಟಗಾರರು ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ. ಜೊತೆಗೆ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಟ್ವೀಟ್ ಮಾಡಿ ಬ್ಯಾಕ್ ಟೂ ನ್ಯಾಷನಲ್ ಡ್ಯೂಟಿ ಎಂದು ಬರೆದುಕೊಂಡಿದ್ದಾರೆ.

    ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ. ಐಪಿಎಲ್ ಮುಗಿಯುವ ಮುನ್ನವೇ ಬಿಸಿಸಿಐ ಮೂರು ಮಾದರಿ ಕ್ರಿಕೆಟ್‍ಗೆ ತಂಡಗಳನ್ನು ಘೋಷಣೆ ಮಾಡಿತ್ತು.

  • ಅಭಿಮಾನಿಗಳಂತೆ ಮೈದಾನದಲ್ಲಿ ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟ್ ಆಟಗಾರರು

    ಅಭಿಮಾನಿಗಳಂತೆ ಮೈದಾನದಲ್ಲಿ ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟ್ ಆಟಗಾರರು

    ನವದೆಹಲಿ: ಕ್ರಿಕೆಟ್ ಆಟವನ್ನು ಕೆಲ ಅಭಿಮಾನಿಗಳು ಜೀವನದ ಒಂದು ಭಾಗದಂತೆ ನೋಡುತ್ತಾರೆ. ನೆಚ್ಚಿನ ತಂಡ ಸೋತರೇ ಕಣ್ಣೀರು ಹಾಕುತ್ತಾರೆ. ಗೆಲ್ಲಲಿ ಎಂದು ದೇವರ ಮೊರೆ ಹೋಗುತ್ತಾರೆ. ಅಂತೆಯೇ ಸ್ಟಾರ್ ಕ್ರಿಕೆಟಿಗರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿರುವ ಪ್ರಸಂಗಗಳು ನಡೆದಿವೆ.

    ಕ್ರಿಕೆಟ್ ಆಟದಲ್ಲಿ ಒಂದು ಪಂದ್ಯ ಎಂದರೆ ಸೋಲು ಗೆಲವು ಕಾಮನ್ ಇದನ್ನೂ ಆಟಗಾರರೂ ಕ್ರೀಡಾಮನೋಭಾವದಿಂದ ನೋಡಿ ಸುಮ್ಮನಗುತ್ತಾರೆ. ಆದರೆ ಕೆಲ ಆಟಗಾರರು ಪಂದ್ಯಗಳನ್ನು ಸೋತಾಗ ಮೈದಾನದಲ್ಲೇ ಕಣ್ಣೀರು ಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್, ಸಚಿನ್, ಯುವರಾಜ್ ಸಿಂಗ್ ಹೀಗೆ ಕ್ರಿಕೆಟ್ ದಿಗ್ಗಜರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದಾರೆ.

    ಇದರಲ್ಲಿ ನಮಗೆ ಮೊದಲಿಗೆ ನೆನಪಿಗೆ ಬರುವುದು ಯುವರಾಜ್ ಸಿಂಗ್ ಅವರು, 2011ರಲ್ಲಿ 28 ವರ್ಷದ ಬಳಿಕ ಭಾರತ ವಿಶ್ವಕಪ್ ಗೆದ್ದು ಬೀಗಿತ್ತು. ಈ ಟೂರ್ನಿಯಲ್ಲಿ ಕ್ಯಾನ್ಸರ್ ಇದ್ದರೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯುವಿ ಭಾರತ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊನೆಗೆ ಫೈನಲ್‍ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದಾಗ ಮೈದಾನದಲ್ಲಿ ಇದ್ದ ಯುವರಾಜ್ ಕಣ್ಣೀರು ಹಾಕಿದ್ದರು.

    ಇದಾದ ನಂತರ 2015ರ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿಡಿ ವಿಲಿಯರ್ಸ್ ಕೂಡ ಕಣ್ಣೀರು ಹಾಕಿದ್ದರು. 2015ರ ವಿಶ್ವಕಪ್‍ನಲ್ಲಿ ಎಬಿಡಿ ನೇತೃತ್ವದ ತಂಡ ಬಹಳ ಚೆನ್ನಾಗಿ ಆಡಿತ್ತು. ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಸೋತಿತ್ತು. ಈ ಸಮಯದಲ್ಲಿ ತಂಡದ ನಾಯಕ ಡಿವಿಲಿಯರ್ಸ್ ಮೈದಾನದಲ್ಲೇ ಬೇಸರಗೊಂಡು ಕಣ್ಣೀರು ಹಾಕಿದ್ದರು. ಅಂದು ಸೌತ್ ಆಫ್ರಿಕಾದ ಹಲವು ಆಟಗಾರರು ಮೈದಾನದಲ್ಲೇ ಕುಳಿತುಕೊಂಡು ಅತ್ತಿದ್ದರು.

    ಮೈದಾನದಲ್ಲಿ ಅಕ್ರಮಣಕಾರಿಯಾಗಿ ಕಾಣಿಸಿಕೊಳ್ಳುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮೈದಾನದಲ್ಲಿ ಭಾವುಕರಾಗಿದ್ದಾರೆ. 2012ರ ಟಿ-20 ವಿಶ್ವಕಪ್ ವೇಳೆ ಭಾರತ ಬಹಳ ಚೆನ್ನಾಗಿ ಆಡಿತ್ತು. ಅಂದು ಉತ್ತಮ ಲಯದಲ್ಲಿ ಇದ್ದ ಕೊಹ್ಲಿ ಟೂರ್ನಿಯುದ್ದಕ್ಕೂ ಸಖತ್ ಆಗಿ ಬ್ಯಾಟ್ ಬೀಸಿದ್ದರು. ಆದರೆ ಸೆಮಿಫೈನಲ್ ತಲುಪುವಲ್ಲಿ ಭಾರತ ಎಡವಿತ್ತು. ಈ ಸಮಯದಲ್ಲಿ ಕೊಹ್ಲಿ ಅವರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದರು.

    ಕ್ರಿಕೆಟ್‍ನಲ್ಲಿ ಹಲವಾರು ದಾಖಲೆಗಳನ್ನು ಮಾಡಿರುವ ಕ್ರಿಕೆಟ್ ದೇವರು ಸಚಿನ್ ಅವರು ಕೂಡ ಮೈದಾನಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತನ್ನ ವೃತ್ತಿ ಜೀವನದ 100ನೇ ಶತಕದ ಸನಿಹದಲ್ಲಿ ಇದ್ದ ಸಚಿನ್ 2011ರ ವಿಶ್ವಕಪ್ ವೇಳೆ 100ನೇ ಶತಕವನ್ನು ಗಳಿಸಲು ವಿಫಲರಾಗಿದ್ದರು. ಆದರೆ 2012ರಲ್ಲಿ ನಡೆದ ಏಷ್ಯಾ ಕಪ್‍ನ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ತನ್ನ ನೂರನೇ ಶತಕ ಸಿಡಿಸಿ ಅಂದು ಮೈದಾನದಲ್ಲಿ ಭಾವುಕರಾಗಿದ್ದರು.

    ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕಿಬ್-ಅಲ್-ಹಸನ್ ಕೂಡ ಮೈದಾನದಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. 2012 ಏಷ್ಯಾ ಕಪ್‍ನಲ್ಲಿ ಉತ್ತಮವಾಗಿ ಆಡಿದ್ದ ಬಾಂಗ್ಲಾ ದೇಶ ಫೈನಲ್ ತಲುಪಿತ್ತು. ಶ್ರೀಲಂಕಾ ಮತ್ತು ಇಂಡಿಯಾದಂತಹ ಪ್ರಬಲ ತಂಡಗಳಿಗೆ ಸೋಲುಣಿಸಿ ಫೈನಲ್‍ಗೇರಿದ್ದ ಬಾಂಗ್ಲಾ, ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯವನ್ನು ಸೋತಿತ್ತು. ಈ ವೇಳೆ ಟೂರ್ನಿಯುದ್ದಕ್ಕೂ ಸೂಪರ್ ಆಗಿ ಆಡಿದ್ದ ಶಕಿಬ್ ಮೈದಾನದಲ್ಲಿ ಅತ್ತಿದ್ದರು. ಜೊತೆಗೆ ಬಾಂಗ್ಲಾದ ಇತರ ಆಟಗಾರರು ಕೂಡ ತಬ್ಬಿಕೊಂಡು ದುಃಖ ಪಟ್ಟಿದ್ದರು.

  • ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ  ಹಿಂದಿದೆ ಕಥೆ

    ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ ಹಿಂದಿದೆ ಕಥೆ

    ಬೆಂಗಳೂರು: ನಾವು ಕ್ರಿಕೆಟ್ ಅಭಿಮಾನಿಗಳು. ಅದರಲ್ಲೂ ಟೀಂ ಇಂಡಿಯಾ ಮ್ಯಾಚ್ ಇದ್ರೆ ಸಾಕು ಎಷ್ಟೇ ಕೆಲಸ ಇದ್ದರೂ ಕೊಂಚ ಬಿಡುವು ಮಾಡಿಕೊಂಡು ಮ್ಯಾಚ್ ನೋಡುತ್ತೇವೆ. ಆದರೆ ಕೆಲವರಿಗೆ ಕೆಲವು ವಿಚಾರಗಳೇ ಗೊತ್ತಿರುವುದಿಲ್ಲ.

    ಟೀಂ ಇಂಡಿಯಾ ಆಟಗಾರರ ಜರ್ಸಿಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇರುತ್ತದೆ. ಅದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಮೇಲೆ ಮೂರು ಸ್ಟಾರ್‌ಗಳೂ ಇರುತ್ತವೆ. ಆದರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಆಟಗಾರರ ಜರ್ಸಿಯ ಮೇಲೆ ಎರಡು ಸ್ಟಾರ್ ಮಾತ್ರ ಇದ್ವು. ಹಾಗಾದ್ರೆ ಈ ಸ್ಟಾರ್‌ಗಳು ಏನನ್ನ ಪ್ರತಿನಿಧಿಸುತ್ತವೆ? ಯಾರು ನೀಡುತ್ತಾರೆ ಗೊತ್ತಾ?

    ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ನಡೆಸುತ್ತದೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಟೆಸ್ಟ್ ವರ್ಲ್ಡ್ ಚಾಂಪಿಯನ್‍ಶಿಪ್ ಕೂಡ ಆರಂಭಿಸಿದೆ. ಈ ಪೈಕಿ ಟೀಂ ಇಂಡಿಯಾ ಎರಡು ಬಾರಿ ಏಕದಿನ ವಿಶ್ವಕಪ್ ಹಾಗೂ ಒಂದು ಬಾರಿ ಟಿ20 ವಿಶ್ವಕಪ್ ಗೆದ್ದುಗೊಂಡಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಅದಾದ 28 ವರ್ಷಗಳ ಬಳಿಕ ಅಂದ್ರೆ 2011ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಅಷ್ಟೇ ಅಲ್ಲದೆ 2007ರಲ್ಲಿ ಐಸಿಸಿ ಆರಂಭಿಸಿದ್ದ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಭಾರತ ಧೋನಿ ನಾಯಕತ್ವದಲ್ಲಿ ತನ್ನ ಮುಡಿಗೆ ಏರಿಸಿಕೊಂಡಿತ್ತು.

    ಇದನ್ನೆಲ್ಲ ಯಾಕೆ ತಿಳಿಯಬೇಕು ಗೊತ್ತಾ? ಟೀಂ ಇಂಡಿಯಾ ಜರ್ಸಿ ಮೇಲೆ ಇರುವ ಸ್ಟಾರ್ ಗಳಿಗೂ ವಿಶ್ವಕಪ್ ಚಾಂಪಿಯನ್‍ಶಿಪ್‍ಗೂ ನಂಟಿದೆ. ಹೌದು, ಐಸಿಸಿ ನಡೆಸುವ ಎರಡು ಮಾದರಿಯ ವಿಶ್ವಕಪ್‍ನಲ್ಲಿ ಭಾರತ ಇದುವರೆಗೂ ಮೂರು ಬಾರಿ ಚಾಂಪಿಯನ್‍ಶಿಪ್ ಆಗಿದೆ. ಹೀಗಾಗಿ ಮೂರು ಸ್ಟಾರ್‌ಗಳು ಟೀಂ ಇಂಡಿಯಾ ಜರ್ಸಿ ಮೇಲಿವೆ.

    ಹಾಗಾದ್ರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಭಾರತದ ಆಟಗಾರರು ಎರಡು ಸ್ಟಾರ್‌ಗಳಿರುವ ಜರ್ಸಿಯನ್ನು ಧರಿಸಿದ್ದು ಯಾಕೆ ಗೊತ್ತಾ? ಟೀಂ ಇಂಡಿಯಾ ಇದುವೆರೆಗೂ ಎರಡು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿದೆ. ಹೀಗಾಗಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಟಗಾರರು ಎರಡು ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಇದೇ ಸಮಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಆಟಗಾರರು 5 ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಎರಡು ಬಾರಿ ಚಾಂಪಿಯನ್ ಗರಿಮೆ ಪಡೆದಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರರು 2 ಸ್ಟಾರ್ ಹಾಗೂ ತಲಾ ಒಂದು ಬಾರಿ ಚಾಂಪಿಯನ್ ಆಗಿರುವ ಶ್ರೀಲಂಕಾ ಮತ್ತು ಪಾಕಿಸ್ತಾನದ ಆಟಗಾರರು ಒಂದು ಸ್ಟಾರ್ ಹೊಂದಿದ್ದ ಜರ್ಸಿ ಧರಿಸಿದ್ದರು.

  • ಡಿ.19 ರಂದು ಐಪಿಎಲ್ ಹರಾಜು- ಮೊದ್ಲ ಪಟ್ಟಿಯಲ್ಲಿ 332 ಆಟಗಾರರು

    ಡಿ.19 ರಂದು ಐಪಿಎಲ್ ಹರಾಜು- ಮೊದ್ಲ ಪಟ್ಟಿಯಲ್ಲಿ 332 ಆಟಗಾರರು

    – ಕೋಟಿ ವೀರರ ಪಟ್ಟಿ ಇಂತಿದೆ

    ಕೋಲ್ಕತ್ತಾ: ಐಪಿಎಲ್ 2020ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಎಲ್ಲಾ ತಂಡದ ಮಾಲೀಕರು ಆಲ್‍ರೌಂಡರ್ ಗಳನ್ನು ಕೋಟಿ ಕೋಟಿ ನೀಡಿ ಖರೀದಿ ಮಾಡಲು ತಯಾರಿ ನಡೆಸಿದ್ದಾರೆ. ಆಸೀಸ್‍ನ ಮ್ಯಾಕ್ಸ್ ವೆಲ್, ಪ್ಯಾಟ್ ಕಮ್ಮಿನ್ಸ್, ದಕ್ಷಿಣ ಆಫ್ರಿಕಾ ತಂಡದ ಕ್ರಿಸ್ ಮೋರಿಸ್ ರಂತಹ ವಿದೇಶಿ ಆಟಗಾರರು ಭಾರೀ ಮೊತ್ತ ಪಡೆಯಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಡಿ.19 ರಂದು ಕೋಲ್ಕತ್ತಾದಲ್ಲಿ ಐಪಿಎಲ್ 2020 ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಯಲಿದ್ದು, 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ. ಪ್ರಮುಖವಾಗಿ ವಿಂಡೀಸ್ ಬೌಲರ್ ಕೆಸ್ರಿಕ್ ವಿಲಿಯಮ್ಸ್, ಆಲ್‍ರೌಂಡರ್ ಕ್ರಿಸ್ಟಿಯನ್, ಲೆಗ್ ಸ್ಪಿನ್ನರ್ ಜಂಪಾ, ಮುಶ್ಫಿಕರ್ ರಹೀಂ, ಯುವ ಆಟಗಾರ ವಿಲ್ ಜಾಕ್ಸ್ ರಂತಹ ಆಟಗಾರರಿದ್ದಾರೆ.

    ಹರಾಜು ಪ್ರಕ್ರಿಯೆಯಲ್ಲಿ ಮೊದಲು ಬ್ಯಾಟ್ಸ್ ಮನ್‍ಗಳು ಆ ಬಳಿಕ ಆಲ್‍ರೌಂಡರ್, ವಿಕೆಟ್ ಕೀಪರ್, ವೇಗದ ಬೌಲರ್, ಸ್ಪಿನ್ ಬೌಲರ್ ಗಳನ್ನು ಹರಾಜು ಮಾಡಲಾಗುತ್ತದೆ. ಪ್ಯಾಟ್ ಕಮ್ಮಿನ್ಸ್, ಮ್ಯಾಕ್ಸ್ ವೆಲ್, ಕೆಸ್ರಿಕ್ ವಿಲಿಯಮ್ಸ್, ಆ್ಯಡಂ ಜಾಂಪಾ, ಜೋಶ್ ಹೇಜಲ್‍ವುಡ್, ಕ್ರಿಸ್ ಲಿನ್, ಮಿಚೆಲ್ ಮಾರ್ಷ್, ಡೇಲ್ ಸ್ಟೇನ್, ಏಂಜೆಲೊ ಮ್ಯಾಥ್ಯೂಸ್ 2 ಕೋಟಿ ರೂ. ಮೂಲ ಬೆಲೆಯನ್ನು ಹೊಂದಿದ್ದಾರೆ. ಉಳಿದಂತೆ ರಾಬಿನ್ ಉತ್ತಪ್ಪ, ಇಂಗ್ಲೆಂಡ್ ವಿಶ್ವಕಪ್ ಗೆದ್ದ ತಂಡದ ನಾಯಕ ಇಯಾನ್ ಮಾರ್ಗನ್, ಕ್ರಿಸ್ ವೋಕ್ಸ್ ಸೇರಿದಂತೆ ಇತರ ಕೆಲ ಆಟಗಾರರು 1.5 ಕೋಟಿ ರೂ. ಮೂಲ ಬೆಲೆಯನ್ನು ಪಡೆದಿದ್ದಾರೆ.

  • ಆಸೀಸ್ ಕ್ರಿಕೆಟಿಗರಿಗೆ ಪಾಕಿಸ್ತಾನದ ಪ್ರಧಾನಿ ಹೆಸರೇ ಗೊತ್ತಿಲ್ಲ: ವಿಡಿಯೋ

    ಆಸೀಸ್ ಕ್ರಿಕೆಟಿಗರಿಗೆ ಪಾಕಿಸ್ತಾನದ ಪ್ರಧಾನಿ ಹೆಸರೇ ಗೊತ್ತಿಲ್ಲ: ವಿಡಿಯೋ

    ಬ್ರಿಸ್ಬೇನ್‍: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಪಾಕಿಸ್ತಾನದ ಪ್ರಧಾನಿ ಹೆಸರನ್ನು ಹೇಳಲು ಪೇಚಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಟಿ-20 ಸರಣಿಯನ್ನು 2-0ರಿಂದ ಸೋಲು ಕಂಡಿದೆ. ಈ ಬೆನ್ನಲ್ಲೇ 2 ಪಂದ್ಯಗಳ ಟೆಸ್ಟ್ ಸರಣಿಗೆ ಉಭಯ ತಂಡಗಳು ಸಿದ್ಧತೆ ನಡೆಸಿವೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಟಿವಿ ಚಾನೆಲ್, ಆಸೀಸ್ ತಂಡದ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲು ಪ್ರಯತ್ನಿಸಿತ್ತು. ಈ ವೇಳೆ ಆಟಗಾರರಿಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯ ಹೆಸರನ್ನು ಕೇಳಲಾಗಿತ್ತು. ಈ ಪೈಕಿ ಶೇ. 90ರಷ್ಟು ಆಟಗಾರರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಂದು ಹೇಳಲು ಸಾಧ್ಯವಾಗಲಿಲ್ಲ.

    ಆಶ್ಚರ್ಯವೆಂದರೆ ಪಾಕಿಸ್ತಾನವು ಇಮ್ರಾನ್ ಖಾನ್ ನಾಯಕತ್ವದಲ್ಲಿ 1992ರ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದಿತು. ಈ ಕುತೂಹಲಕಾರಿ ವಿಡಿಯೋ ಈಗ ಈ ವಿಟಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಅಧಿಕೃತ ಟಿವಿ ಚಾನೆಲ್ ಆಸ್ಟ್ರೇಲಿಯಾ ಬ್ರಾಡ್‍ಕಾಸ್ಟಿಂಗ್ ಕಂಪನಿ ಈ ತಮಾಷೆಯ ವಿಡಿಯೋವನ್ನು ಮಾಡಿದೆ. ಇದರಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಘೋಷಿಸಲಾದ 15 ಮಂದಿಯ ತಂಡದಲ್ಲಿರುವ ಆಟಗಾರರು ಸೇರಿದ್ದಾರೆ. ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಯಾರು ಎಂದು ಎಲ್ಲರಿಗೂ ಒಂದೇ ಪ್ರಶ್ನೆ ಕೇಳಲಾಗಿತ್ತು. ಉಸ್ಮಾನ್ ಖವಾಜಾ ಮತ್ತು ವೇಗದ ಬೌಲರ್ ಜೋಸ್ ಹ್ಯಾಜೆಲ್‍ವುಡ್ ಹೊರತುಪಡಿಸಿ ಬೇರೆ ಯಾವ ಆಟಗಾರರೂ ಸರಿಯಾದ ಉತ್ತರ ನೀಡಲಿಲ್ಲ.

    ಆಸ್ಟ್ರೇಲಿಯಾದ ವಿರುದ್ಧ ಪಾಕಿಸ್ತಾನವು ಒಟ್ಟು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲನೆಯ ಪಂದ್ಯವು ಬ್ರಿಸ್ಬೇನ್‍ನಲ್ಲಿ ನವೆಂಬರ್ 21ರಿಂದ 25ರವರೆಗೆ ನಡೆಯಲಿದೆ.

  • ಮತ್ತೆ ಐಪಿಎಲ್ ಹರಾಜು ಎದುರಿಸುತ್ತಾರಾ ಯುವಿ, ಉತ್ತಪ್ಪ?

    ಮತ್ತೆ ಐಪಿಎಲ್ ಹರಾಜು ಎದುರಿಸುತ್ತಾರಾ ಯುವಿ, ಉತ್ತಪ್ಪ?

    – 2020ರ ಆವೃತ್ತಿಯ ಹರಾಜು ಡಿಸೆಂಬರ್ 19ಕ್ಕೆ ಫಿಕ್ಸ್
    – 12 ಆಟಗಾರರನ್ನು ಕೈಬಿಟ್ಟ ಆರ್‌ಸಿಬಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದ್ದು, 2020ರ ಆವೃತ್ತಿಯ ಆಟಗಾರರ ಹರಾಜು ಕೋಲ್ಕತ್ತಾದಲ್ಲಿ ಡಿಸೆಂಬರ್ 19 ರಂದು ನಡೆಯಲಿದೆ. ಆದರೆ ಅತ್ಯಂತ ಆಶ್ಚರ್ಯವೆಂದರೆ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಯುವರಾಜ್ ಸಿಂಗ್, ಕ್ರಿಸ್ ಲೀನ್, ಡೇವಿಡ್ ಮಿಲ್ಲರ್ ಅವರನ್ನು ತಂಡಗಳು ಕೈಬಿಟ್ಟಿವೆ.

    ಐಪಿಎಲ್‍ನ 8 ತಂಡಗಳ ಫ್ರಾಂಚೈಸ್ ಗಳು ಒಟ್ಟು 71 ಆಟಗಾರರನ್ನು ಕೈಬಿಟ್ಟಿದ್ದು, 127 ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಈ ಪೈಕಿ ಮುಂಬೈ ಇಂಡಿಯನ್ಸ್ ನಿಂದ ಹೊರಬಿದ್ದ ಯುವರಾಜ್ ಸಿಂಗ್ ಹಾಗೂ ಕೋಲ್ಕತ್ತಾದಿಂದ ಕೈಬಿಟ್ಟ ರಾಬಿನ್ ಉತ್ತಪ್ಪ 2020ರ ಆವೃತ್ತಿಯ ಹರಾಜು ಎದುರಿಸುತ್ತಾರಾ ಎನ್ನುವ ಚರ್ಚೆ ಶುರುವಾಗಿದೆ. ಇದನ್ನೂ ಓದಿ: 9 ವರ್ಷದ ರಾಜಸ್ಥಾನ್ ನಂಟು ಮುರಿದು ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ ರಹಾನೆ

    2019ರಲ್ಲಿ ಕೆಕೆಆರ್ ಪರ ಉತ್ತಪ್ಪ 12 ಪಂದ್ಯಗಳನ್ನು ಆಡಿದ್ದರು. ಆದರೆ ಉತ್ತಪ್ಪ ಒಂದು ಬಾರಿ ಮಾತ್ರ ಅರ್ಧ ಶತಕ ಬಾರಿಸಿದ್ದರು. ಅವರ ಸ್ಟ್ರೈಕ್ ರೇಟ್ ಕಳೆದ 5 ವರ್ಷಗಳಲ್ಲಿ 115.10 ರಷ್ಟಿತ್ತು. ಈ ಕಾರಣದಿಂದಾಗಿ ಕೆಕೆಆರ್ ರಾಬಿನ್ ಉತ್ತಪ್ಪ ಅವರನ್ನು ಕೈಬಿಟ್ಟಿದೆ. 2019ರ ಆವೃತ್ತಿಯಲ್ಲಿ ಕೆಕೆಆರ್ ಅವರಿಗೆ 6.4 ಕೋಟಿ ಪಾವತಿಸಿತ್ತು. ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ‘ವೇಸ್ಟ್ ಆಫ್ ಮನಿ’ ಎಂದ ಬಿಸಿಸಿಐ

    ಯಾವ ತಂಡ? ಯಾರು ಹೊರಕ್ಕೆ?:
    ಕೋಲ್ಕತಾ ನೈಟ್ ರೈಡರ್ಸ್: ರಾಬಿನ್ ಉತ್ತಪ್ಪ, ಕ್ರಿಸ್ ಲೀನ್, ಜೋ ಡೆನಾಲಿ, ಎನ್ರಿಚ್ ನಾರ್ಟೇಜ್, ಪಿಯೂಷ್ ಚಾವ್ಲಾ, ಕಾರ್ಲೋಸ್ ಬ್ರಾಥ್‍ವೈಟ್, ಪೃಥ್ವಿರಾಜ್, ನಿಖಿಲ್ ನಾಯಕ್, ಕರಿಯಪ್ಪ, ಮ್ಯಾಥ್ಯೂ ಕೆಲ್ಲಿ, ಎಸ್ ಮುಂಡೆ.

    ಮುಂಬೈ ಇಂಡಿಯನ್ಸ್: ಯುವರಾಜ್ ಸಿಂಗ್, ಆಡಮ್ ಮಿಲ್ನೆ, ಎಲ್ಜಾರಿ ಜೋಸೆಫ್, ಬರೀಂದರ್ ಸರನ್, ಬೆನ್ ಕಟಿಂಗ್, ಬುರೆನ್ ಹೆಂಡ್ರಿಕ್ಸ್, ಎವಿನ್ ಲೂಯಿಸ್, ಜೇಸನ್ ಬೆಹ್ರೆಂಡ್ರೂಫ್, ಪಂಕಜ್ ಜೈಸ್ವಾಲ್, ರಾಸಿಕ್ ಧಾರ್. ಇದನ್ನೂ ಓದಿ: ಬುಮ್ರಾ ಆರ್‌ಸಿಬಿಗೆ ಹೋಗ್ತಾರಾ? ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಮುಂಬೈ ಇಂಡಿಯನ್ಸ್

    ಚೆನ್ನೈ ಸೂಪರ್ ಕಿಂಗ್ಸ್: ಚೈತನ್ಯ ಬಿಶ್ನಾಯ್, ಡೇವಿಡ್ ವಿಲ್ಲಿ, ಧ್ರುವ ಶೌರಿ, ಮೋಹಿತ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಸ್ಕಾಟ್

    ಸನ್‍ರೈಸರ್ಸ್ ಹೈದರಾಬಾದ್: ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್, ಮಾರ್ಟಿನ್ ಗುಪ್ಟಿಲ್, ದೀಪಕ್ ಹೂಡಾ, ರಿಕಿ ಭೂಯಿ.

    ದೆಹಲಿ ಕ್ಯಾಪಿಟಲ್ಸ್: ಅಂಕುಶ್ ಬೈಸ್, ಬಿ ಅಯ್ಯಪ್ಪ, ಕ್ರಿಸ್ ಮೋರಿಸ್, ಕಾಲಿನ್ ಇಂಗ್ರಾಮ್, ಕಾಲಿನ್ ಮುನ್ರೋ, ಹನುಮಾ ವಿಹಾರಿ, ಜಲಜ್ ಸಕ್ಸೇನಾ, ಮಂಜೋತ್ ಕಲ್ರಾ, ನಾಥು ಸಿಂಗ್.

    ಕಿಂಗ್ಸ್ ಇಲೆವೆನ್ ಪಂಜಾಬ್: ಅಗ್ನಿವೇಶ್ ಅಯಾಚಿ, ಆಂಡ್ರ್ಯೂ ಟೈ, ಡೇವಿಡ್ ಮಿಲ್ಲರ್, ಹೆನ್ರಿಕ್ಸ್, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕುರನ್, ವರುಣ್ ಚಕ್ರವರ್ತಿ.

    ರಾಜಸ್ಥಾನ್ ರಾಯಲ್ಸ್: ಆರ್ಯಮನ್ ಬಿರ್ಲಾ, ಆಷ್ಟನ್ ಟರ್ನರ್, ಇಶ್ ಸೋಧಿ, ಜಯದೇವ್ ಉನಾದ್ಕಟ್, ಲಿಯಾಮ್ ಲಿವಿಂಗ್ಸ್ಟೋನ್, ಓಶೆನ್ ಥಾಮಸ್, ಪ್ರಶಾಂತ್ ಚೋಪ್ರಾ, ರಾಹುಲ್ ತ್ರಿಪಾಠಿ, ಶುಭಮ್ ರಂಜನೆ, ಸ್ಟುವರ್ಟ್ ಬಿನ್ನಿ, ಸುದೇಶನ್ ಮಿಥುನ್.

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆಕ್ಸ್‍ದೀಪ್ ನಾಥ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಡೇಲ್ ಸ್ಟೇನ್, ಹೆನ್ರಿಕ್ ಕ್ಲಾಸೆನ್, ಹಿಮ್ಮತ್ ಸಿಂಗ್, ಕುಲ್ವಂತ್ ಕಜ್ರೋಲಿಯಾ, ಮಾರ್ಕಸ್ ಸ್ಟೊಯಿನಿಸ್, ನಾಥನ್ ಕೌಲ್ಟರ್ ನೈಲ್, ಮಿಲಿಂದ್ ಕುಮಾರ್, ಪ್ರಯಾಸ್, ಶಿಮ್ರಾನ್ ಹೆಟ್ಮಿಯರ್, ಟಿಮ್ ಸೌಥಿ.

    ಆಟಗಾರರ ಖರೀದಿಯ ಬಜೆಟ್ ಏರಿಕೆ:
    ಐಪಿಎಲ್ 2019ರಲ್ಲಿ, ಪ್ರತಿ ಫ್ರ್ಯಾಂಚೈಸ್ ಆಟಗಾರರನ್ನು ಖರೀದಿಸಲು 82 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಈ ಮೊತ್ತದಲ್ಲಿ ಏರಿಕೆಯಾಗಿದ್ದು, 2020ರ ಆವೃತ್ತಿಯ ಹರಾಜಿನಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಲು 85 ಕೋಟಿ ರೂ. ಬಜೆಟ್ ಹೊಂದಬಹುದಾಗಿದೆ.

    ಡಿಸೆಂಬರ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೆಚ್ಚಿನ ಆಟಗಾರರನ್ನು ಖರೀದಿಸಲು ಅತಿ ಹೆಚ್ಚು, 42.70 ಕೋಟಿ ರೂ. ಹೊಂದಿದೆ. ಇದರ ನಂತರದ ಬಿಗ್ ಬಜೆಟ್‍ನಲ್ಲಿ ಕೆಕೆಆರ್ 35.65 ಕೋಟಿ ರೂ. ಮತ್ತು ರಾಜಸ್ಥಾನ್ ರಾಯಲ್ಸ್ 28.90 ಕೋಟಿ ರೂ. ಗಳನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನ ಮೊದಲು ಗರಿಷ್ಠ 12 ಆಟಗಾರರನ್ನು ಬಿಡುಗಡೆ ಮಾಡಿದೆ. ಸನ್‍ರೈಸರ್ಸ್ ಹೈದರಾಬಾದ್ ಹರಾಜಿನ ಮೊದಲು ಐಪಿಎಲ್ 2020ರ ಆವೃತ್ತಿಗಾಗಿ ಅತಿ ಕಡಿಮೆ 5 ಆಟಗಾರರನ್ನು ಬಿಟ್ಟಿದೆ.

  • ಪಾಕ್ ಸಚಿವರ ಹೇಳಿಕೆಗೆ ಶ್ರೀಲಂಕಾ ಟಾಂಗ್

    ಪಾಕ್ ಸಚಿವರ ಹೇಳಿಕೆಗೆ ಶ್ರೀಲಂಕಾ ಟಾಂಗ್

    ಕೊಂಲಬೋ: ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಶ್ರೀಲಂಕಾ ಕ್ರಿಕೆಟಿಗರು ಭಾಗವಹಿಸದಿರಲು ಭಾರತ ಕಾರಣ ಎಂದು ಆರೋಪ ಮಾಡಿದ್ದ ಪಾಕ್‍ಗೆ ಶ್ರೀಲಂಕಾ ಕ್ರೀಡಾ ಸಚಿವರು ತಿರುಗೇಟು ನೀಡಿದ್ದು, ಆಟಗಾರರು ಸರಣಯಿಂದ ಹಿಂದೆ ಸರಿಯಲು ನೀವೇ ಕಾರಣ ಎಂದು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಟೂರ್ನಿಯಲ್ಲಿ ನಾವು ಆಡಲ್ಲ ಎಂದು ಶ್ರೀಲಂಕಾದ ಕೆಲ ಆಟಗಾರ ಹೇಳಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿ ಕುತಂತ್ರಿ ಬುದ್ಧಿ ತೋರಿದ್ದ ಪಾಕ್ ಸಚಿವ ಫವಾದ್ ಹುಸೇನ್ ಚೌಧರಿ ಲಂಕಾ ಆಟಗಾರ ಈ ನಿಲುವಿಗೆ ಭಾರತ ಕಾರಣ ಎಂದು ಆರೋಪ ಮಾಡಿದ್ದರು.

    ಪಾಕ್ ಸಚಿವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಕ್ರೀಡಾ ಸಚಿವ ಹರಿನ್ ಫರ್ನಾಂಡೊ, ನಮ್ಮ ದೇಶದ ಆಟಗಾರರು ತೆಗೆದುಕೊಂಡಿರುವ ನಿರ್ಧಾರದ ಮೇಲೆ ಭಾರತ ಯಾವುದೇ ರೀತಿಯ ಪ್ರಭಾವ ಬೀರಿಲ್ಲ. ನಮ್ಮ ಆಟಗಾರ ನಿಲುವಿಗೆ ಪಾಕಿಸ್ತಾನವೇ ಕಾರಣ. 2009 ರಲ್ಲಿ ಆದ ಘಟನೆಯನ್ನು ಮುಂದೆ ಇಟ್ಟಿಕೊಂಡು ಪಾಕಿಸ್ತಾನದಲ್ಲಿ ಟೂರ್ನಿ ಆಡಲು ಕೆಲ ಆಟಗಾರರು ಸಮ್ಮತಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಹರಿನ್, ಪಾಕಿಸ್ತಾನದಲ್ಲಿ ಆಡಬಾರದೆಂದು ಶ್ರೀಲಂಕಾದ ಆಟಗಾರರನ್ನು ಭಾರತ ಪ್ರಭಾವಿಸಿದೆ ಎಂಬುದರಲ್ಲಿ ಸತ್ಯವಿಲ್ಲ. 2009ರ ಘಟನೆಯ ಆಧಾರದ ಮೇಲೆ ಸಂಪೂರ್ಣವಾಗಿ ನಾವು ಆಡುವುದಿಲ್ಲ ಎಂದು ಕೆಲವರು ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ಗೌರವಿಸಿ ನಾವು ಪಾಕ್‍ನಲ್ಲಿ ಆಟವಾಡಲು ಸಿದ್ಧರಿರುವ ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ನಮ್ಮಲ್ಲಿ ಇರುವ ಆಟಗಾರಲ್ಲಿ ಒಳ್ಳೆಯ ಮತ್ತು ಶಕ್ತಿಯೂತ ತಂಡವನ್ನು ಆಯ್ಕೆ ಮಾಡಿದ್ದೇವೆ ಮತ್ತು ಪಾಕಿಸ್ತಾನದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಭರವಸೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

    2009 ರಲ್ಲಿ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಶ್ರೀಲಂಕಾ ಕ್ರಿಕೆಟ್ ಟಿ20 ತಂಡದ ನಾಯಕ ಲಸಿತ್ ಮಾಲಿಂಗ, ಏಕದಿನ ತಂಡದ ನಾಯಕ ದಿಮುತ ಕರುಣಾರತ್ನೆ ಸೇರಿದಂತೆ 10 ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿ ಭದ್ರತಾ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಆಟಗಾರರ ಈ ತೀರ್ಮಾನದಿಂದ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯಾಗಿತ್ತು. ಪಾಕ್ ಸಚಿವ ಭಾರತ ವಿರುದ್ಧ ಟ್ವೀಟ್ ಮಾಡಿ ಈಗ ಪೆಟ್ಟು ತಿಂದಿದ್ದಾರೆ.

    ಪಾಕ್ ಸಚಿವ ಹೇಳಿದ್ದೇನು?
    ಪಾಕಿಸ್ತಾನದಲ್ಲಿ ಟೂರ್ನಿ ಆಡಿದರೆ ಶ್ರೀಲಂಕಾ ಆಟಗಾರನ್ನು ಐಪಿಎಲ್ ನಿಂದ ಹೊರ ಹಾಕುತ್ತೇವೆ ಎಂದು ಭಾರತ ಲಂಕಾ ಆಟಗಾರರ ಮೇಲೆ ಒತ್ತಡ ಹಾಕುತ್ತಿದೆ ಎಂದು ನಮಗೆ ಮಾಹಿತಿ ಬಂದಿದೆ. ಈ ರೀತಿ ಮಾಡುತ್ತಿರುವುದು ಭಾರತ ಕ್ರೀಡಾಧಿಕಾರಿಗಳ ನೀಚ ಕೃತ್ಯ ಎಂದು ಪಾಕ್‍ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ ಟ್ವೀಟ್ ಮಾಡಿದ್ದರು.

    ಭಯೋತ್ಪಾದಕ ದಾಳಿ: 2009 ರ ಮಾರ್ಚ್‍ನಲ್ಲಿ ಪಾಕಿಸ್ತಾನದ ಲಹೋರಿನ ಗಡಾಫಿ ಮೈದಾನದಲ್ಲಿ ಪಾಕಿಸ್ತಾನ ಮತ್ತು ಲಂಕಾ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ 12 ಮಂದಿ ಭಯೋತ್ಪಾದಕರು ಶ್ರೀಲಂಕಾ ಆಟಗಾರರು ತೆರಳುತ್ತಿದ್ದ ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 8 ಮಂದಿ ಪೊಲೀಸರು ಸಾವನ್ನಪ್ಪಿ 6 ಮಂದಿ ಗಾಯಗೊಂಡಿದ್ದರು. ಈ ವೇಳೆ ಶ್ರೀಲಂಕಾ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿಯೂ ಗಾಯಗೊಂಡಿದ್ದರು.

    ಆ ಬಳಿಕ 2017 ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆದರೆ ಈ ಭಾರಿಯ ಪಾಕ್ ಸರಣಿ ಆಡಲು ಕೆಲ ಆಟಗಾರರು ನಿರಾಕರಿಸಿದ್ದಾರೆ. ಸೆಪ್ಟೆಂಬರ್ 27, 29 ಮತ್ತು ಅಕ್ಟೋಬರ್ 3 ರಂದು ಕರಾಚಿಯಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 5, 7 ಮತ್ತು 9 ರಂದು ಲಾಹೋರ್‍ನಲ್ಲಿ 3 ಟಿ-20 ಪಂದ್ಯಗಳು ನಡೆಯಲಿದೆ.