Tag: plant

  • ಹುಟ್ಟುಹಬ್ಬದಂದು ಧನ್ವಂತರಿ ಹೋಮ – ಬಂಡಿ ಮಹಾಕಾಳಿ ದೇವಸ್ಥಾನಕ್ಕೆ ಸೃಜನ್ ರಿಂದ ವಿಶೇಷ ಉಡುಗೊರೆ

    ಹುಟ್ಟುಹಬ್ಬದಂದು ಧನ್ವಂತರಿ ಹೋಮ – ಬಂಡಿ ಮಹಾಕಾಳಿ ದೇವಸ್ಥಾನಕ್ಕೆ ಸೃಜನ್ ರಿಂದ ವಿಶೇಷ ಉಡುಗೊರೆ

    ಬೆಂಗಳೂರು: ಇಂದು ನಟ ಸೃಜನ್ ಲೋಕೇಶ್ 38ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

    ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಸೃಜನ್ ಮತ್ತು ಪತ್ನಿ ಗ್ರೀಷ್ಮಾ ಧನ್ವಂತರಿ ಹೋಮವನ್ನು ಮಾಡಿದ್ದಾರೆ. ಈ ಹೋಮದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.

    ಈ ಹಿಂದೆ ಈ ದೇವಸ್ಥಾನಕ್ಕೆ ಸೃಜನ್ ಬಂದಿದ್ದರು. ಆಗ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆಗ ಸೃಜನ್ ಬಂಡಿ ಮಹಾಕಾಳಿ ದೇವಸ್ಥಾನದ ಪೂರ್ವ ದಿಕ್ಕಿನ ಮಹಾದ್ವಾರವನ್ನು ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಅದರಂತೆಯೇ ಇಂದು ಸೃಜನ್ ಹುಟ್ಟುಹಬ್ಬದ ಪ್ರಯುಕ್ತ ದೇವಾಲಯದ ದ್ವಾರದ ಉದ್ಘಾಟನೆಯನ್ನು ಮಾಡಿದ್ದಾರೆ. ವಿಶೇಷ ಎಂದರೆ ಈ ದ್ವಾರಕ್ಕೆ ನಟ ದರ್ಶನ್ ಪೇಂಟಿಂಗ್ ಮಾಡಿಸುವುದಾಗಿ ಒಪ್ಪಿಕೊಂಡಿದ್ದರು. ಅವರು ಕೂಡ ಸೃಜನ್ ಬರ್ತ್ ಡೇ ದಿನದೊಳಗೆ ದ್ವಾರದ ಉದ್ಘಾಟನೆ ಮಾಡಬೇಕು ಅಷ್ಟರಲ್ಲಿ ಬೇಗ ಕೆಲಸ ಮುಗಿಸಬೇಕು ಎಂದು ತಿಳಿಸಿದ್ದರು.

    ಹೋಮ ಮಾಡಿ, ದೇವಾಲಯದ ದ್ವಾರವನ್ನು ಉದ್ಘಾಟನೆ ಮಾಡಿ ಬಳಿಕ ಸೃಜ ಮತ್ತು ಗಜ ಎಂಬ ಹೆಸರಲ್ಲಿ ಸಾಂಕೇತಿಕವಾಗಿ ದೇವಸ್ಥಾನದ ಹಿಂಬದಿಯಲ್ಲಿ ಶ್ರೀ ಗಂಧದ ಎರಡು ಗಿಡವನ್ನು ನೆಟ್ಟಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸೃಜನ್, ನನಗೆ ಬಂಡಿ ಮಹಾಕಾಳಿ ದೇವಸ್ಥಾನದ ಮೇಲೆ ತುಂಬಾ ನಂಬಿಕೆ ಇದೆ. ಬಂಡಿ ಮಹಾಕಾಳಿ ದೇವಿಯನ್ನು ನಾನು ನಂಬಿದ್ದೇನೆ. ನಾನು ಅಂದುಕೊಂಡಿದ್ದೆಲ್ಲ ಇಲ್ಲಿ ಬಂದು ಹೋದ ಮೇಲೆ ಸಲೀಸಾಗಿ ಆಗಿದೆ. ಕೆಲ ದಿನದ ಹಿಂದೆ ಬಂದಾಗ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತಿತ್ತು. ಅವಾಗ ನಾನು ಪೂರ್ವ ದ್ವಾರ ಮಾಡಿಕೊಡುವುದಾಗಿ ಹೇಳಿದ್ದೆ. ಹೀಗಾಗಿ ಈ ಮಹಾತ್ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

    ದರ್ಶನ್ ಕೂಡ ಇದಕ್ಕೆ ಕೈ ಜೋಡಿಸಿದ್ದು ಬಹಳ ಖುಷಿ ಇದೆ. ದರ್ಶನ್ ಕೂಡ ಈ ದೇವಸ್ಥಾನಕ್ಕೆ ಬಂದರೆ ರಿಫ್ರೆಶ್ ಆಗುತ್ತಾರೆ. ಬರ್ತ್ ಡೇ ಹಿನ್ನೆಲೆಯಲ್ಲಿ ಸುಮಾರು 500 ಗಿಡಗಳನ್ನ ಉಚಿತವಾಗಿ ನೀಡುತ್ತಿದ್ದೇವೆ. ದರ್ಶನ್ ಕೂಡ ಗಿಡಗಳನ್ನು ನೀಡಿದ್ದಾರೆ. ನಗರದಲ್ಲಿ ಮರಗಳು ಕಮ್ಮಿ ಆಗಿದೆ. ಇದರಿಂದ ತುಂಬಾ ಬೇಸರ ಮೂಡಿಸಿದೆ. ಮನೆಗೆ ಹೋದ ಮೇಲೆಯೂ ಅಕ್ಕ ಪಕ್ಕದ ಮನೆಯವರಿಗೆಲ್ಲ ಸ್ವತಃ ನಾವೇ ಹೋಗಿ ಗಿಡಗಳನ್ನ ಹಂಚಲಿದ್ದೇವೆ ಎಂದು ತಿಳಿಸಿದರು.

    ಲೋಕೇಶ್ ಪ್ರೊಡಕ್ಷನ್ ನಿಂದ ಈ ವರ್ಷದಿಂದ ಸಾಕಷ್ಟು ಕೆಲಸಗಳು ನಡೆಯಲಿದೆ. ಹೊಸಬರಿಗೆ ಹೆಚ್ಚಿನ ಅವಕಾಶ ಇದೆ. ಹಾಗೆ ಸ್ಟಾರ್ ನಟರ ಸಿನಿಮಾಗಳು ಕೂಡ ಈ ಪ್ರೊಡಕ್ಷನ್ ಹೌಸ್ ನಿಂದ ನಡೆಯಲಿದೆ. ಸದ್ಯದಲ್ಲಿಯೇ ಖಾಸಗಿ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ನಡೆಯಲಿದೆ. ಅದರಿಂದ ಸಾಕಷ್ಟು ಜನರಿಗೆ ಸಹಾಯ ಆಗಲಿದೆ. ದರ್ಶನ್ ಜೊತೆ ಸಿನಿಮಾ ಆದಷ್ಟು ಬೇಗ ಮಾಡುತ್ತೇನೆ. ದರ್ಶನ್ ನನ್ನ ಜೋತೆಯಲ್ಲಿ ಇರುವುದೆ ನನ್ನ ಉಡುಗೊರೆ ಎಂದು ಸಂತಸದಿಂದ ಹೇಳಿದರು.

  • ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಮಂಗಳೂರು: ಮದುವೆ ಸಮಾರಂಭಗಳಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದ್ದು, ಮಂಗಳೂರಿನಲ್ಲಿ ನೂತನ ದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ.

    ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಇಂದು ನಡೆದ ಮದುವೆ ಎಲ್ಲರ ಗಮನ ಸೆಳೆಯಿತು. ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ ಎಂಬವರ ವಿವಾಹವು ಪುಣಚದ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ದಂಪತಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧ ಹಾಗೂ ಅನೇಕ ಮರದ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ದೃಷ್ಠಿಯಿಂದ ದಂಪತಿಯು ಈ ಯೋಜನೆಯನ್ನು ಹಾಕಿಕೊಂಡಿದ್ದರು. ಈ ವೇಳೆ ಅತಿಥಿಗಳಿಗೆ ಗಿಡಗಳನ್ನು ಕೊಟ್ಟು ಪೋಷಿಸಲು ಪ್ರೇರೆಪಿಸಿದ್ದಾರೆ. ಇವರ ಈ ಕಾರ್ಯವು ಪರಿಸರ ರಕ್ಷಣೆಗೆ ಮಾದರಿಯಾಗಿದೆ. ಮದುವೆಗೆ ಬಂದ ಸಾವಿರಾರು ಅತಿಥಿಗಳು ಗಿಡಗಳನ್ನು ಹೊತ್ತೊಯ್ದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ

  • ಪರಿಸರ ಉಳಿಸೋಕೆ ಕೊಪ್ಪಳ ಗೆಳೆಯರ ಬಳಗದಿಂದ ಮಹತ್ವದ ಕಾರ್ಯ!

    ಪರಿಸರ ಉಳಿಸೋಕೆ ಕೊಪ್ಪಳ ಗೆಳೆಯರ ಬಳಗದಿಂದ ಮಹತ್ವದ ಕಾರ್ಯ!

    ಕೊಪ್ಪಳ: ಪರಿಸರ ದಿನಾಚರಣೆ ದಿನ ಒಂದು ಸಸಿ ನೆಟ್ಟು ಫೋಟೋಗೆ ಫೋಸ್ ಕೊಟ್ಟು ಕೆಲವರು ಸುಮ್ನಾಗ್ಬಿಡ್ತಾರೆ. ಆದ್ರೆ ಈ ಗೆಳೆಯರ ಬಳಗ ಪರಿಸರ ಉಳಿಸೋಕೆ ಬೆಳೆಸೋಕೆ ಪರಿಸರ ದಿನಾಚರಣೆ ಅಗತ್ಯವಿಲ್ಲಾ ಎನ್ನುವಂತೆ ಕೆಲಸ ಮಾಡ್ತಿದೆ.

    ಹೌದು. ಕೊಪ್ಪಳದ ಗಂಗಾವತಿಯಲ್ಲಿ ಈ ಗೆಳೆಯರ ಬಳಗದ ಕೆಲಸ ಇದೀಗ ಎಲ್ಲರ ಗಮನ ಸೆಳೆದಿದೆ. ಪ್ರತೀ ದಿನ ಗೆಳೆಯರೆಲ್ಲಾ ಒಂದು ಕಡೆ ಸೇರಿ ಟೀ ಕುಡಿದು ಮಾತಾಡಿ ಟೈಮ್ ಪಾಸ್ ಮಾಡಿ ಹೋಗ್ತಿದ್ದರು ಅಂತಾ ಎಲ್ಲರೂ ಅನ್ಕೊಂಡಿದ್ರು. ಆದ್ರೆ ಇವತ್ತು ಇವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ನಿಸರ್ಗ ರಕ್ಷಣೆಗೆ ಪಣತೊಟ್ಟ ನರಗುಂದ ಯುವಕರು

    ಸುಮ್ನೆ ಕೂತ್ಕೊಂಡು ಟೈಮ್ ಪಾಸ್ ಮಾಡಿ ಮನೆಗೆ ಹೋಗುವುದಕ್ಕಿಂತ ಏನಾದ್ರೂ ಮಾಡ್ಬೇಕು ಅಂತಾ ಡಿಸೈಡ್ ಮಾಡಿ. ಟೀ ಕುಡಿಯೋಕೆ ಬರುವ ಎಲ್ಲರೂ ಸೇರಿ ಅರಣ್ಯ ಪ್ರದೇಶದಲ್ಲಿ ಬೀಜವನ್ನು ಬಿತ್ತಿ, ಸಸಿ ಬೆಳಸುವ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ. ಇಷ್ಟಕ್ಕೂ ಈ ಟೀ ಕುಡಿದು ಟೈಮ್ ಪಾಸ್ ಮಾಡಿ ಹೋಗುತ್ತಿದ್ದವರು ಪೊಲೀಸರು, ಶಿಕ್ಷಕರು, ಪತ್ರಕರ್ತರು, ಸಂಘ ಸಂಸ್ಥೆ ಹೀಗೆ ಹಲವಾರು ಗೆಳೆಯರ ಬಳಗದವರು ಸೇರಿ ಈ ಮಹತ್ವದ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಅಭಿಮಾನಿಗಳು ಗಿಡ ನೆಡೋದರಲ್ಲಿ ಬ್ಯುಸಿ!

    ನಾವು ಹಚ್ಚುವ 500 ಬೀಜಗಳಲ್ಲಿ 50 ಆದ್ರೂ ಬೆಳೆದು ಮರವಾದ್ರೆ ಅದೇ ಖುಷಿ ಅಂತ ಅವರು ಹೇಳುತ್ತಿದ್ದಾರೆ.

  • ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ ನಿರ್ಮಿಸಬೇಡಿ, ನಾನು ಮೃತಪಟ್ಟ ಬಳಿಕ  ಸಸಿಗಳನ್ನು ನೆಡಿ: ಅನಿಲ್ ಮಾಧವ್ ದವೆ ವಿಲ್

    ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ ನಿರ್ಮಿಸಬೇಡಿ, ನಾನು ಮೃತಪಟ್ಟ ಬಳಿಕ ಸಸಿಗಳನ್ನು ನೆಡಿ: ಅನಿಲ್ ಮಾಧವ್ ದವೆ ವಿಲ್

    ನವದೆಹಲಿ: “ನಾನು ಮೃತಪಟ್ಟ ಬಳಿಕ ಸಸಿಗಳನ್ನು ನೆಡಿ, ನದಿಗಳನ್ನು ರಕ್ಷಿಸಿ ಆದರೆ ಎಲ್ಲಿಯೂ ನನ್ನ ಹೆಸರನ್ನು ಬಳಸಬೇಡಿ”

    ಇದು ಇಂದು ನಿಧನರಾದ  ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಅನಿಲ್ ಮಾಧವ್ ದವೆ ಅವರ ಬರೆದಿದ್ದ ವಿಲ್ ನಲ್ಲಿರುವ ಸಾಲುಗಳು.

    ಈ ವಿಲ್ ಇತ್ತೀಚಿಗೆ ಬರೆದಿದ್ದು ಅಲ್ಲ. ಇದು ದವೆ ಅವರು 2012ರಲ್ಲಿ ಬರೆದಿದ್ದ ವಿಲ್. ಈ ವಿಲ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಸ್ನೇಹಿತ ಮಧ್ಯಪ್ರದೇಶ ಬಿಜೆಪಿಯ ಉಪಾಧ್ಯಕ್ಷ ವಿಜೇಶ್ ಲುನಾತ್, ದವೆ ಅವರು 2012ರ ಡಿಸೆಂಬರ್ ನಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು. ಈ ವೇಳೆ ಈ ವಿಲ್ ಅನ್ನು ಬರೆದು ಸಹಿ ಹಾಕಿದ್ದರು ಎಂದು ತಿಳಿಸಿದ್ದಾರೆ.

    ತನ್ನ ಅಂತ್ಯಸಂಸ್ಕಾರವನ್ನು ಮಧ್ಯಪ್ರದೇಶದ ಹೊಸಂಗದಬಾದ್ ಜಿಲ್ಲೆಯ ನರ್ಮದಾ ನದಿಯ ದಂಡೆಯಲ್ಲಿರುವ ಭಂದ್ರಾಭನ್‍ದಲ್ಲಿ ನಡೆಯಬೇಕೆಂದು ಎಂದು ಅನಿಲ್ ಮಾಧವ್ ಹೇಳಿಕೊಂಡಿದ್ದರು.

    ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ, ಸ್ಪರ್ಧೆ, ಪ್ರತಿಮೆಗಳನ್ನು ನಿರ್ಮಿಸಬೇಡಿ. ನನ್ನ ಬಗ್ಗೆ ಯಾರದ್ರೂ ಏನಾದರೂ ಮಾಡಬೇಕು ಎಂದಿದ್ದರೆ ಸಸಿಗಳನ್ನು ನೆಡಿ, ನದಿಯನ್ನು ರಕ್ಷಿಸಿ. ಅದು ನನಗೆ ಸಂತೋಷವನ್ನು ನೀಡುತ್ತದೆ ಎಂದು ಹಿಂದಿಯಲ್ಲಿ ದವೆ ವಿಲ್ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಲ್ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

    61 ವರ್ಷದ ಅನಿಲ್ ಮಾಧವ್ ದವೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತವಾಗಿ, ಇಂದು ಮೃತಪಟ್ಟಿದ್ದಾರೆ.

    2009ರಿಂದ ರಾಜ್ಯಸಭಾ ಸದಸ್ಯರಾಗಿರುವ ಇವರು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಸಚಿವರ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಸಚಿವರ ಅಕಾಲಿಕ ನಿಧನ ನಿಜಕ್ಕೂ ಆಘಾತ ತಂದಿದೆ. ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸೋ ಶಕ್ತಿ ನೀಡಲಿ ಅಂತಾ ರಾಷ್ಟ್ರಪತಿಯವರು ಸಂತಾಪ ಸೂಚಿಸಿದ್ದಾರೆ.

    `ಗೌರವಾನ್ವಿತ ಸಹೋದ್ಯೋಗಿ, ಸ್ನೇಹಿತ, ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರ ನಿಧನದಿಂದ ಆಘಾತವಾಗಿದೆ. ಸಂತಾಪಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    `ದವೆ ಅವರೊಬ್ಬ ಉತ್ತಮ ಸಾರ್ವಜನಿಕ ಸೇವಕ. ಪರಿಸರ ರಕ್ಷಣೆಯ ಬಗ್ಗೆ ಅವರಿಗೆ ಅತೀವ ಕಾಳಜಿ ಇತ್ತು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

    `ನಿನ್ನೆ ಸಂಜೆಯಷ್ಟೇ ಅವರ ಬಳಿ ಪ್ರಮುಖ ವಿಷಯಗಳ ಬಗ್ಗೆ ಅವರ ಜತೆ ಮಾತುಕತೆ ನಡೆಸಿದ್ದೆ. ಅವರ ನಿಧನದಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ’ ಎಂದು ಮೋದಿ ಹೇಳಿದ್ದಾರೆ.

    ಕೇಂದ್ರ ಸಚಿವ ಅನಿಲ್ ದವೆ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸಂತಾಪ ಸೂಚಿಸಿದ್ದು, `ಅನಿಲ್ ದವೆ ನಿಧನ ಆಘಾತ ತಂದಿದೆ. ಪ್ರಬುದ್ಧ ಮಾತುಗಾರ, ಮಾನವೀಯ ವ್ಯಕ್ತಿಯಾಗಿದ್ರು ದವೆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಅಂತಾ ಪತ್ರದ ಮೂಲಕ ತಿಳಿಸಿದ್ದಾರೆ.

    ಅನಿಲ್ ಮಾಧವ್ ದವೆ ಅವರು ಜುಲೈ 6, 1956 ರಂದು ಮಧ್ಯಪ್ರದೇಶದ ಬದ್ ನಗರ್ ನಲ್ಲಿ ಜನಿಸಿದ್ದರು.