Tag: Pizza

  • ಆರ್ಡರ್ ಮಾಡಿದ್ದ ಪಿಜ್ಜಾದಲ್ಲಿ ಸಿಕ್ತು  ನಟ್ಟು, ಬೋಲ್ಟ್ – ಮಹಿಳೆ ಶಾಕ್

    ಆರ್ಡರ್ ಮಾಡಿದ್ದ ಪಿಜ್ಜಾದಲ್ಲಿ ಸಿಕ್ತು ನಟ್ಟು, ಬೋಲ್ಟ್ – ಮಹಿಳೆ ಶಾಕ್

    ಲಂಡನ್: ಇಂಗ್ಲೆಂಡ್‍ನ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಆರ್ಡರ್ ಮಾಡಿದ್ದ ಡೊಮಿನೊಸ್‍ನಿಂದ ಪಿಜ್ಜಾದಲ್ಲಿ ಕಬ್ಬಿಣದ ಬೋಲ್ಡ್ ಹಾಗೂ ನಟ್ಟನ್ನು ಕಂಡು ಶಾಕ್ ಆಗಿದ್ದಾರೆ.

    ಇದರಿಂದ ಕೋಪಗೊಂಡ ಮಹಿಳೆ ಆರ್ಡರ್ ಮಾಡಿದ್ದ ಡೊಮಿನೊಸ್ ಪಿಜ್ಜಾದ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡೊಮಿನೊಸ್ ಪಿಜ್ಜಾ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ಪಿಜ್ಜಾವನು ಸೇವಿಸುವುದಕ್ಕೂ ಮುನ್ನ ಪರೀಕ್ಷಿಸಿ ತಿನ್ನುವಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ವೆಜ್ ಬದಲು ನಾನ್‍ವೆಜ್ ಪಿಜ್ಜಾ ಬಂತು- 1 ಕೋಟಿ ಪರಿಹಾರ ಕೇಳಿದ ಮಹಿಳೆ

    ಈ ಕುರಿತಂತೆ ಫೇಸ್‍ಬುಕ್‍ನಲ್ಲಿ ಫೋಟೋ ಜೊತೆಗೆ, ಅಂದು ರಾತ್ರಿ ಆರ್ಡರ್ ಮಾಡಿದ್ದ ಡೊಮಿನೊಸ್ ಪಿಜ್ಜಾದಲ್ಲಿ ಬೋಲ್ಟ್ ಹಾಗೂ ನಟ್ ಕಂಡು ಗಾಬರಿಗೊಂಡೆ. ಅದರ ಅರ್ಧವನ್ನು ನಾನು ತಿಂದಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಡೊಮಿನೊಸ್ ಪಿಜ್ಜಾದ ಗುಣಮಟ್ಟವನು ಪರಿಶೀಲಿಸುತ್ತಾರೋ ಇಲ್ವೋ? ಪಿಜ್ಜಾದಲ್ಲಿ ಬೋಲ್ಟ್, ನಟ್ ಸಿಕ್ಕಿದೆ. ದಯವಿಟ್ಟು ಪಿಜ್ಜಾ ತಿನ್ನುವ ಮೊದಲು ಎರಡು ಬಾರಿ ಪರೀಕ್ಷಿಸಿ, ನಾನಗಲಿ, ಯಾರಾದರೂ ಈ ಪಿಜ್ಜಾವನ್ನು ಸೇವಿಸಿದನ್ನು ದ್ವೇಷಿಸುತ್ತೇನೆ. ಫ್ಲೀಟ್ವುಡ್ ಆರ್ಡಿ ನಾರ್ತ್‍ನಲ್ಲಿರುವ ಥಾನ್ರ್ಟನ್-ಕ್ಲೆವೆಲೀಸ್ ಶಾಖೆಯಲ್ಲಿರುವ ಡೊಮಿನೋಸ್‍ನಿಂದ ಪಿಜ್ಜಾ ಆರ್ಡರ್ ಮಾಡುವಾಗ ಜಾಗರೂಕರಾಗಿರಿ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

    ನಂತರ ಮಹಿಳೆ ರೆಸ್ಟೋರೆಂಟ್‍ಗೆ ಕರೆ ಮಾಡಿ ದೂರು ನೀಡಿ, ಪಿಜ್ಜಾವನ್ನು ಹಿಂದಿರುಗಿಸಿದ್ದಾರೆ. ನಂತರ ಈ ಕುರಿತಂತೆ ಡೊಮಿನೊಸ್ ಮಹಿಳೆಗೆ ಕ್ಷಮೆಯಾಚಿಸಿ, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ:ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

  • ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

    ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್

    ಕ್ಯಾನ್ಬೆರಾ: ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಅದರಲ್ಲಿಯೂ ಈಗ ಹಲವು ವಿಭಿನ್ನ ಟೇಸ್ಟಿ ಪಿಜ್ಜಾಗಳಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ  ಇಷ್ಟ ಪಡುತ್ತಾರೆ. ಸದ್ಯ ವ್ಯಕ್ತಿಯೋರ್ವ ಕಲ್ಲಂಗಡಿ ಹಣ್ಣಿನಿಂದ ಪಿಜ್ಜಾ ತಯಾರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ಓಲಿ ಪ್ಯಾಟರ್ಸನ್ ಎಂಬವರು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಮೊದಲಿಗೆ ಕಲ್ಲಂಗಡಿ ಹಣ್ಣನ್ನು ಕತ್ತರಿಸುತ್ತಾರೆ. ಬಳಿಕ ಅದನ್ನು ಗ್ರಿಲ್ ಮೇಲೆ ಬೇಯಿಸಿಕೊಳ್ಳುತ್ತಾರೆ. ನಂತರ ಅದನ್ನು ಪಕ್ಕಕ್ಕೆ ತೆಗೆದುಕೊಂಡು ಬಾರ್ಬೆಕ್ಯೂ ಸಾಸ್‍ನನ್ನು ಹಚ್ಚಿ, ಅದರ ಸುತ್ತಾ ಚೀಸ್ ಉದುರಿಸುತ್ತಾರೆ ಮತ್ತು ಪೆಪ್ಪೆರೋನಿ ಹರಡಿ, ಚೀಸ್ ಕರಗುವವರೆಗೂ ಓವೆನ್‍ನಲ್ಲಿಟ್ಟು ಬೇಯಿಸಿದ್ದಾರೆ. ಕೊನೆಗೆ ತಯಾರಾದ ಕಲ್ಲಂಗಡಿ ಪಿಜ್ಜಾವನ್ನು ಹೊರ ತೆಗೆದು ಕಟ್ ಮಾಡಿ ಪಿಜ್ಜಾ ಸವಿದಿದ್ದಾರೆ.ಇದನ್ನೂ ಓದಿ:ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸ್ತಿದ್ದ ಆಂಟಿ ವಿರುದ್ಧ FIR

    ಸದ್ಯ ಓಲಿ ಪ್ಯಾಟರ್ಸನ್ ಪಿಜ್ಜಾ ರೆಸಿಪಿ ವೀಡಿಯೋ ನೋಡಿ ಡೊಮಿನೋಸ್ ಆಸ್ಟ್ರೇಲಿಯಾ ಪ್ರೇರಿತಗೊಂಡು ಇದನ್ನು ಟ್ರೈ ಮಾಡಲು ಪ್ರಯತ್ನಿಸಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ:ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

     

    View this post on Instagram

     

    A post shared by Oli Paterson (@elburritomonster)

  • ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್  ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    ಟೋಕಿಯೋ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಮೀರಾಬಾಯಿ ಅವರಿಗೆ ಡೊಮಿನೊಸ್ ಪಿಜ್ಜಾವನ್ನು ಜೀವನ ಪೂರ್ತಿಯಾಗಿ ಉಚಿತವಾಗಿ ಕೊಡುವುದಾಗಿ ಡೊಮಿನೊಸ್ ಇಂಡಿಯಾ ಟ್ವೀಟ್ ಮಾಡಿದೆ.

    ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಇಷ್ಟದ ತಿನಿಸಿನ ಬಗ್ಗೆ ಮಾತನಾಡಿದ್ದಾರೆ. ಈ ಮೆಡಲ್ ಸಿಕ್ಕ ಬಳಿಕ ನಿಮ್ಮ ಮೊದಲ ಕೆಲಸ ಏನಾಗಿರುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮೀರಾಬಾಯಿ ಪಿಜ್ಜಾ ತಿನ್ನೋದೇ ನನ್ನ ಮೊದಲ ಅಸೆ ಅಂತ ಹೇಳಿದ್ದಾರೆ. ನನಗೆ ಪಿಜ್ಜಾ ಅಂದ್ರೆ ತುಂಬಾನೇ ಇಷ್ಟ. ಆದರೆ ಕೆಲ ದಿನಗಳಿಂದ ಪಿಜ್ಜಾ ತಿನ್ನದೇ ಇರೋದ್ರಿಂದ ಕೊಂಚ ಜಾಸ್ತಿನೇ ತಿಂತೀನಿ ಅಂತ ಮೀರಾ ನಗೆ ಚಟಾಕಿ ಹಾರಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೊಮಿನೊಸ್ ಇಂಡಿಯಾ ಮೀರಾಬಾಯಿ ಚಾನು ಹೇಳಿದ್ದು ನಮಗೆ ಕೇಳಿಸಿದೆ. ಇನ್ನು ಮುಂದೆ ಮೀರಾಬಾಯಿ ಚಾನು ಪಿಜ್ಜಾಗಾಗಿ ಕಾಯುವುದು ಬೇಡ. ಅವರಿಗೆ ಜೀವನ ಪೂರ್ತಿ ಉಚಿತ ಪಿಜ್ಜಾವನ್ನು ನೀಡಲಿದ್ದೇವೆ ಎಂದು ಹೇಳಿದೆ. ಈ ಕುರಿತು ಟ್ವಿಟರ್‍ನಲ್ಲಿ ಡೊಮಿನೊಸ್ ಇಂಡಿಯಾ ಬರೆದುಕೊಂಡಿದೆ. ಅಲ್ಲದೇ ಇಂಫಾಲ್‍ನಲ್ಲಿರುವ ಅವರ ಮನೆಗೆ ಚಾನು ಅವರ ಗೆಲುವನ್ನು ಸಂಭ್ರಮಿಸಲು ಪಿಜ್ಜಾ ಕಳುಹಿಸಿಕೊಟ್ಟಿದೆ. ಡೊಮಿನೊಸ್ ಸಂಸ್ಥೆ ಮಾಡಿರೋ ಟ್ವೀಟ್‍ಗೆ ಸಾವಿರಾರು ಜನ ಪ್ರತಿಕ್ರಿಯೆ ನೀಡಿದ್ದು, ದೇಶಕ್ಕೆ ಕೀರ್ತಿ ತಂದ ಮೀರಾಬಾಯಿ ಚಾನು ಅವರ ಆಸೆಯನ್ನ ಪೂರ್ತಿ ಮಾಡೋ ನಿಟ್ಟಿನ ಕೆಲಸ ಮಾಡುತ್ತಿರೋದಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು

    ಮೀರಾಬಾಯಿ ಚಾನು ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಭಾರತೀಯರ ನಿರೀಕ್ಷೆ ಹುಸಿಗೊಳಿಸದ ಮೀರಾ ಅವರು ಮೊದಲ ದಿನವೇ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದಾರೆ. ಮೀರಾ ಅವರ ಗೆಲುವು ಭಾರತದ ಎಲ್ಲ ಕ್ರೀಡಾಪಟುಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬುವಂತೆ ಮಾಡಿದೆ. ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮೀರಾಬಾಯಿ ಚಾನು ಅವರು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟಿದ್ದಾರೆ. ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದರು.

    84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಣರ್ಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕಣರ್ಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.

  • ಟಾಸ್ಕ್ ಗೆದ್ದು ಪಿಜ್ಜಾ ಸವಿದ ಬಿಗ್‍ಬಾಸ್ ಮನೆಯ ಮಹಿಳೆಯರು

    ಟಾಸ್ಕ್ ಗೆದ್ದು ಪಿಜ್ಜಾ ಸವಿದ ಬಿಗ್‍ಬಾಸ್ ಮನೆಯ ಮಹಿಳೆಯರು

    ಸದಾ ಫಿಸಿಕಲ್ ಟಾಸ್ಕ್ ಕೊಡುತ್ತಿದ್ದ ಬಿಗ್‍ಬಾಸ್ ನಿನ್ನೆ ಮನೆ ಸದಸ್ಯರಿಗೆ ಹಾಸ್ಯಮಯ ಚಟುವಟಿಕೆಯೊಂದನ್ನು ನೀಡಿದರು. ಅದುವೇ ನಗುವುದೋ, ಅಳುವುದೋ ನೀವೇ ಹೇಳಿ. ಇದರ ಅನುಸಾರ ಮನೆಯ ಪುರುಷರೆಲ್ಲರೂ ಮನೆಯಲ್ಲಿರುವ ನಾಲ್ಕು ಮಹಿಳೆಯರ ಪ್ರತಿಕ್ರಿಯೆಯನ್ನು ಪಡೆಯಬೇಕಿತ್ತು. ಅಂದರೆ ಒಂದು ನಗಿಸಬೇಕು, ಇಲ್ಲ ಅಳಿಸಬೇಕು. ನೀಡುವ ನಿಗದಿತ ಅವಧಿಯೊಳಗೆ ನಾಲ್ಕು ಮಹಿಳಾ ಸದಸ್ಯರನ್ನು ನಗಿಸಿದರೆ ಅಥವಾ ಅಳಿಸಿದರೆ ಪುರುಷರು ವಿಜೇತರಾಗುತ್ತಾರೆ. ಒಂದು ವೇಳೆ ಮಹಿಳಾ ಸದಸ್ಯರ ತಂಡದಲ್ಲಿ ಒಬ್ಬ ಸದಸ್ಯ ನಗದೇ ಅಥವಾ ಅಳದೇ ಉಳಿದರು ಮಹಿಳೆಯರ ತಂಡ ಗೆಲ್ಲುತ್ತದೆ ಹಾಗೂ ಗೆಲ್ಲುವ ತಂಡಕ್ಕೆ ವಿಶೇಷವಾಗಿ ಪಿಜ್ಜಾ ನೀಡಲಾಗುತ್ತದೆ ಎಂದು ತಿಳಿಸಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲಾ ಫುಲ್ ಖುಷ್ ಆಗುತ್ತಾರೆ.

    ಗೆಲ್ಲಲೇ ಬೇಕೆಂದು ನಿರ್ಧರಿಸಿದ ಪುರುಷರು ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಶುಭ ಪೂಂಜಾ, ನಿಧಿ ಸುಬ್ಬರನ್ನು ಟಾರ್ಗೆಟ್ ಮಾಡಿ ನಗಿಸಲು ಪ್ಲಾನ್ ಮಾಡುತ್ತಾರೆ. ನಂತರ ಮಹಿಳಾ ಸದಸ್ಯರು ಊಟ ಮಾಡಲು ಡೈನಿಂಗ್ ಹಾಲ್‍ನಲ್ಲಿ ಕುಳಿತಿರುವ ವೇಳೆ ಲ್ಯಾಗ್ ಮಂಜು ದಿವ್ಯಾ ಉರುಡುಗರನ್ನು ನಗಿಸಲು ಪ್ರಾರಂಭಿಸುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಊಟದಿಂದ ಎದ್ದು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಾರೆ. ಆದರೂ ಹಠ ಬಿಡದ ಮಂಜು ವಾಶ್ ರೂಮ್‍ಗೆ ತಲುಪಿದ ದಿವ್ಯಾ ಉರುಡುಗರನ್ನು ಬೆನ್ನು ಬೇಡದೇ ಕಾಡುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾ, ಮಂಜು ಬಟ್ಟೆ ಒಗೆಯಲು ಏಕೆ ಬಿಡುತ್ತಿಲ್ಲ ನೀನು ಎಂದು ಪ್ರಶ್ನಿಸುತ್ತಾರೆ. ದಿವ್ಯಾ ಕೈ ಹಿಡಿದು ಎಳೆದು ನಗಿಸಲು ಪ್ರಯತ್ನಿಸುತ್ತಾರೆ. ಆದರೂ ದಿವ್ಯಾ ದೃತಿಗೆಡದೇ ಆಟದ ಮೇಲೆ ಗಮನ ಹರಿಸಲೇಬೇಕೆಂದು ನಗುವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾರೆ.

    ನಂತರ ಬಾತ್ ರೂಮ್‍ನಿಂದ ಹೊರ ಬರುತ್ತಿದ್ದ ದಿವ್ಯಾ ಸುರೇಶ್ ಬೆನ್ನತ್ತಿದ ಲ್ಯಾಗ್ ಮಂಜು, ಆಕೆಯನ್ನು ನಗಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ದಿವ್ಯಾ ನನ್ನ ಬಾಯಲ್ಲಿ ನೀರಿದೆ ನಾನು ಉಗುಳಿ ಬಿಡುತ್ತೇನೆ, ನನ್ನ ಕೈ ಬಿಡು ಎಂದು ಸನ್ನೆ ಮಾಡುವ ಮೂಲಕ ತಿಳಿಸುತ್ತಾರೆ. ಆಗ ಮಂಜು ಆಗಿದ್ದೆಲ್ಲಾ ಆಗಿಲಿ ನೀನು ಉಗುಳಿದರು ಪರವಾಗಿಲ್ಲ ಎಂದು ಹೇಳುವ ಮೂಲಕ ನಗಿಸಲು ಮುಂದಾಗುತ್ತಾರೆ. ಆದರೂ ನಗಬಾರದೆಂದು ದಿವ್ಯಾ ಬಾಯಿಯಲ್ಲಿದ್ದ ನೀರನ್ನು ಉಗುಳದೇ ಹಾಗೇಯೇ ಮೈನ್‍ಟೈನ್ ಮಾಡುತ್ತಾರೆ. ನಗಿಸಲೇ ಬೇಕೆಂದು ಹಠ ಬಿಡದ ಮಂಜು ದಿವ್ಯಾರ ಕೈ ಹಿಡಿದು ಎಳೆದಾಡುತ್ತಾರೆ. ಈ ವೇಳೆ ಕೊನೆಗೂ ದಿವ್ಯಾ ಕೊಂಚ ನಗೆ ಬೀರಿಬಿಡುತ್ತಾರೆ. ಇದನ್ನು ಗಮನಿಸಿದ ಬಿಗ್‍ಬಾಸ್ ದಿವ್ಯಾ ಸುರೇಶ್ ಔಟ್ ಎಂದು ಘೋಷಿಸುತ್ತಾರೆ.

    ಬಳಿಕ ಉಳಿದ ಮಹಿಳೆಯರ ಬೆನ್ನಟ್ಟಿದ ಪುರುಷ ಸದಸ್ಯರು ಎಷ್ಟೇ ಪ್ರಯತ್ನಿಸಿದರು ಮಹಿಳೆಯರು ನಗದೇ ಟಾಸ್ಕ್ ಕಂಪ್ಲೀಟ್ ಮಾಡಿ ವಿಜಯ ಶಾಲಿಯಾಗುತ್ತಾರೆ. ಹೀಗಾಗಿ ಬಿಗ್‍ಬಾಸ್ ಮನೆಯ ಮಹಿಳಾ ಸದಸ್ಯರಿಗೆ ಸವಿಯಲು ಪಿಜ್ಜಾ ಕಳುಹಿಸಿಕೊಡುತ್ತಾರೆ. ಎಷ್ಟೋ ದಿನಗಳಿಂದ ಪಿಜ್ಜಾ ನೋಡದ ಮಹಿಳೆಯರು ನಿನ್ನೆ ಪಿಜ್ಜಾ ತಿಂದು ಸಖತ್ ಎಂಜಾಯ್ ಮಾಡುತ್ತಾರೆ.

  • ವೆಜ್ ಬದಲು ನಾನ್‍ವೆಜ್ ಪಿಜ್ಜಾ ಬಂತು- 1 ಕೋಟಿ ಪರಿಹಾರ ಕೇಳಿದ ಮಹಿಳೆ

    ವೆಜ್ ಬದಲು ನಾನ್‍ವೆಜ್ ಪಿಜ್ಜಾ ಬಂತು- 1 ಕೋಟಿ ಪರಿಹಾರ ಕೇಳಿದ ಮಹಿಳೆ

    ಲಕ್ನೋ: ಆರ್ಡರ್ ಮಾಡಿದ್ದ ವೆಜ್ ಪಿಜ್ಜಾ ಬದಲಾಗಿ ನಾನ್‍ವೆಜ್ ಪಿಜ್ಜಾ ಕಳುಹಿಸಿದ ತಪ್ಪಿಗಾಗಿ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ದೀಪಾಲಿ ತ್ಯಾಗ್ ಅನ್‍ಲೈನ್‍ನಲ್ಲಿ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಈ ಬದಲಿಗೆ ಅವರಿಗೆ ನಾನ್‍ವೆಜ್ ಪಿಜ್ಜಾ ಬಂದಿದೆ. ಈ ಸಂಬಂಧ ನ್ಯಾಯಾಲಯ ಮೊರೆ ಹೋಗಿದ್ದಾರೆ.

    2019ಮಾರ್ಚ್, 21ರಂದು ನಾನು ಅಮೆರಿಕನ್ ಪಿಜ್ಜಾ ಔಟ್‍ಲೆಟ್‍ನಲ್ಲಿ ಆನ್‍ಲೈನ್ ಮೂಲಕವಾಗಿ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದೆ. ಬದಲಾಗಿ ನನಗೆ ನಾನ್ ವೆಜ್ ಪಿಜ್ಜಾ ಕಳುಹಿಸಿಕೊಟ್ಟಿದ್ದಾರೆ. ತುಂಬಾ ಹಸಿವಾದ್ದರಿಂದ ನಾನು ಈ ವಿಚಾರ ತಿಳಿಯದೆ ಹಾಗೇ ತಿಂದಿದ್ದೇನೆ. ಹುಟ್ಟಿದಾಗಿನಿಂದಲೂ ಶುದ್ಧ ಸಸ್ಯಹಾರಿಯಾಗಿರುವ ನನಗೆ ಹಾಗೂ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಹೀಗಾಗಿ ನನಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನ್ಯಾಯಾಲದ ಮೊರೆ ಹೋಗಿದ್ದೇನೆ ಎಂದಿದ್ದಾರೆ. ರೆಸ್ಟೋರೆಂಟ್‍ನವರು ನಿಲಕ್ಷ್ಯದ ವಿರುದ್ಧ ದೂರು ನೀಡಿದ್ದರೆಂದು ಗ್ರಾಹಕ ನ್ಯಾಯಾಲಯಕ್ಕೆ ತ್ಯಾಗಿ ವಕೀಲ ಫರ್ಹಾತ್ ವಾರ್ಸಿ ಸಿಳಿಸಿದ್ದಾರೆ.

    ಘಟನೆಯ ಬಳಿಕ 2019ರ ಮಾರ್ಚ್ 26 ರಂದು ಪಿಜ್ಜಾ ರೆಸ್ಟರೋರೆಂಟ್‍ನ ಮ್ಯಾನೇಜರ್ ಎಂದು ಹೇಳಿಕೊಂಡು ತ್ಯಾಗಿ ಅವರಿಗೆ ಕರೆಮಾಡಿ ನಿಮ್ಮಿಂದ ಯಾವುದೇ ಹಣ ಪಡೆಯದೆ ನಿಮ್ಮ ಕುಟುಂಬಕ್ಕೆ ನಾವು ಪಿಜ್ಜಾ ನೀಡುತ್ತೇವೆ ಎಂದು ಹೇಳಿದ್ದಾರೆ. ಆಗ ತ್ಯಾಗಿ ಅವರು ಇದು ಸಾಮಾನ್ಯವಾದ ಪ್ರಕರಣವಲ್ಲ. ನಿಮ್ಮ ಕಂಪನಿ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದೆ. ಮಾನಸಿಕ ನೆಮ್ಮದಿ ಹಾಳಾಗಿದೆ. ಹಲವಾರು ದುಬಾರಿ ಆಚರಣೆಗಳ ಮೂಲಕವಾಗಿ ಹೋಗಬೇಕಾಗುತ್ತದೆ. ಇದಕ್ಕೆ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

    ದೆಹಲಿ ಜಿಲ್ಲಾ ಗ್ರಾಹಕ ವಿವಾದ ನಿವಾರಣಾ ಆಯೋಗವು ಮಹಿಳೆಯ ದೂರಿಗೆ ಉತ್ತರವನ್ನು ಸಲ್ಲಿಸುವಂತೆ ಪಿಜ್ಜಾ ಕಂಪನಿಗೆ ಸೂಚಿಸಿದೆ. ಮಾರ್ಚ್ 17 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

  • ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

    ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ

    – ಒಮ್ಮೆ 14 ಪಿಜ್ಜಾ ಡೆಲಿವರಿ

    ಬ್ರಸೆಲ್ಸ್: ಸಾಮಾನ್ಯವಾಗಿ ಪಿಜ್ಜಾ ಆರ್ಡರ್ ಮಾಡಿದರೆ ಒಮ್ಮೆ ವಿಳಂಬವಾಗಿ ಬರುತ್ತದೆ. ಆದರೆ 65 ವರ್ಷದ ವೃದ್ಧರೊಬ್ಬರು ಆರ್ಡರ್ ಮಾಡದಿದ್ದರೂ ಸುಮಾರು ಒಂಬತ್ತು ವರ್ಷಗಳಿಂದ ಅವರ ಮನೆಗೆ ಪಿಜ್ಜಾ ಬರುತ್ತಿರುವ ಘಟನೆ ನಡೆದಿದೆ.

    ಬೆಲ್ಜಿಯಂನ ಆಂಟ್‍ವರ್ಪ್ ನ 65 ವರ್ಷದ ಜೆನ್ ವ್ಯಾನ್ ಲ್ಯಾಂಡೆಘೇಮ್ ಮನೆಗೆ ಪಿಜ್ಜಾ ಬರುತ್ತಿದೆ. ಒಂಬತ್ತು ವರ್ಷಗಳಿಂದ ನಮ್ಮ ಮನೆಗೆ ಡೆಲಿವರಿ ಬಾಯ್‍ಗಳು ಪಿಜ್ಜಾ ಹಿಡಿದುಕೊಂಡು ಬರುತ್ತಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಡೋರ್ ಬೆಲ್ ಬಾರಿಸಿದರು. ಬಾಗಿಲು ತೆಗೆದು ನೋಡಿದಾಗ ಪಿಜ್ಜಾ ಡೆಲಿವರಿ ಬಾಯ್ ನಿಂತಿದ್ದನು. ಆಗ ನಾನು ಯಾವುದೇ ಪಿಜ್ಜಾವನ್ನು ಆರ್ಡರ್ ಮಾಡಿಲ್ಲ ಅಂತ ಹೇಳಿದೆ. ಆದರೂ ಅವರು ಕೊಟ್ಟರು. ಅಂದಿನಿಂದ ನಿರಂತರವಾಗಿ ಪಿಜ್ಜಾ ಡೆಲಿವರಿ ಬರುತ್ತಿದೆ ಎಂದು ಜೆನ್ ಹೇಳಿದ್ದಾರೆ.

    ಸ್ಥಳೀಯ ಆಹಾರ ಮಳಿಗೆಯಿಂದ ರುಚಿ-ರುಚಿಯಾದ ಪಿಜ್ಜಾ ಬರುತ್ತಿದ್ದಾವೆ. ವಾರದ ದಿನದಂದು ಅಥವಾ ವಾರಾಂತ್ಯದಲ್ಲಿ ಪಿಜ್ಜಾ ಬರುತ್ತಿದೆ. ಅಲ್ಲದೇ ಒಂದೆರಡು ಬಾರಿ ರಾತ್ರಿ 2 ಗಂಟೆಗೂ ಪಿಜ್ಜಾ ಬಂದಿದೆ. ನಾನು ಒಮ್ಮೆಯೂ ಡೆಲಿವರಿ ಬಾಯ್‍ನನ್ನು ವಾಪಸ್ ಕಳುಹಿಸಲಿಲ್ಲ. ಎಲ್ಲವನ್ನು ಖರೀದಿಸುತ್ತಿದ್ದೆ. ಜನವರಿ 2019 ರಲ್ಲಿ ಒಮ್ಮೆಲೆ 14 ಪಿಜ್ಜಾಗಳು ಬಂದಿದ್ದವು. ಅನಿರೀಕ್ಷಿತವಾಗಿ ಬರುತ್ತಿದ್ದ ಪಿಜ್ಜಾದಿಂದ ತುಂಬಾ ಹಣ ಖರ್ಚಾಗಿದೆ. ಒಮ್ಮೆ 14 ಪಿಜ್ಜಾಗಳಿಗೆ ಸುಮಾರು 450 ಡಾಲರ್ (38 ಸಾವಿರ ರೂ.) ಅನ್ನು ನೀಡಿದ್ದೇನೆ. ಒಂದು ವೇಳೆ ನಾನು ಪಿಜ್ಜಾ ಖರೀದಿಸದಿದ್ದರೆ ತಂದ ಪಿಜ್ಜಾ ವ್ಯರ್ಥವಾಗಿ ಎಸೆಯಬೇಕಿತ್ತು. ಆದ್ದರಿಂದ ನಾನು ಪಿಜ್ಜಾ ಖರೀದಿಸುತ್ತಿದ್ದೆ ಎಂದಿದ್ದಾರೆ.

    ಈಗ ನಾನು ಮಲಗಲು ಭಯಪಡುತ್ತೇನೆ. ಯಾಕೆಂದರೆ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಹೋಗುವಾಗ ಯಾರಾದರೂ ಮತ್ತೆ ಬಿಸಿ ಪಿಜ್ಜಾ ಕೊಡಲು ಬಂದು ಬಿಟ್ಟರೆ ಎಂದು ಆತಂಕವಾಗುತ್ತದೆ. ನಾನು ಪೊಲೀಸರನ್ನು ಸಹ ಸಂಪರ್ಕಿಸಿ ಈ ಬಗ್ಗೆ ಮಾತನಾಡಿದ್ದೆ. ಆದರೆ ಪೊಲೀಸರು ಕೂಡ ಯಾವುದೇ ಸಹಾಯ ಮಾಡಲಿಲ್ಲ ಎಂದು ಜೆನ್ ಹೇಳಿದರು.

    ಜೆನ್ ಮಾತ್ರವಲ್ಲದೇ ಅವರ ನಿವಾಸದಿಂದ 15 ಮೈಲಿ ದೂರದಲ್ಲಿರುವ ಫ್ಲಾಂಡರ್ಸ್ ಪಟ್ಟಣದಲ್ಲಿ ವಾಸಿಸುವ ಅವರ ಸ್ನೇಹಿತರೊಬ್ಬರಿಗು ಇದೇ ರೀತಿ ಪಿಜ್ಜಾ ಬರುತ್ತಿಯಂತೆ. ಕೆಲವೊಮ್ಮೆ ನಮ್ಮಿಬ್ಬರಿಗೂ ಒಂದೇ ದಿನ ಪಿಜ್ಜಾ ಬಂದಿದ್ದವು. ಈ ಬಗ್ಗೆ ನಾವು ಚರ್ಚೆ ಕೂಡ ಮಾಡಿದ್ದೇವೆ ಎಂದು ಹೇಳಿದರು.

  • ಪಿಜ್ಜಾ ತಂದ ಆಪತ್ತು – ಡೆಲಿವರಿ ಬಾಯ್‍ಗೆ ಕೊರೊನಾ, ಕ್ವಾರಂಟೈನ್ ಆಯ್ತು 72 ಕುಟುಂಬ

    ಪಿಜ್ಜಾ ತಂದ ಆಪತ್ತು – ಡೆಲಿವರಿ ಬಾಯ್‍ಗೆ ಕೊರೊನಾ, ಕ್ವಾರಂಟೈನ್ ಆಯ್ತು 72 ಕುಟುಂಬ

    ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಹೆಸರಾಂತ ಪಿಜ್ಜಾ ಡೆಲಿವರಿ ಮಾಡುವ ರೆಸ್ಟೋರೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್‍ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಯುವಕನ ಸಂಪರ್ಕದಲ್ಲಿದ್ದ ಸಹೋದ್ಯೊಗಿಗಳು ಹಾಗೂ ಪಿಜ್ಜಾ ಡೆಲಿವರಿ ಪಡೆದಿದ್ದ 72 ಕುಟುಂಬಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

    ಬುಧವಾರ ದಕ್ಷಿಣ ದೆಹಲಿಯ ಡಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಲ್ವಿಯಾ ನಗರದಲ್ಲಿ ಇರುವ ಪಿಜ್ಜಾ ಡೆಲಿವರಿ ಮಾಡುವ ರೆಸ್ಟೋರೆಂಟ್‍ನಲ್ಲಿ ಡೆಲಿವರಿ ಬಾಯ್ ಕರ್ತವ್ಯ ನಿರ್ವಹಿಸುತ್ತಿದ್ದನು. ಈತನಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ಬಂದ ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ತಕ್ಷಣ ಸೋಂಕಿತನ ಸಂಪರ್ಕದಲ್ಲಿದ್ದ 16 ಮಂದಿ ರೆಸ್ಟೋರೆಂಟ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಇಲ್ಲಿಂದ ಆಹಾರ ಡೆಲಿವರಿ ಪಡೆದ ಪ್ರತಿಯೊಂದ ಮನೆಯ ಮಾಹಿತಿ ಪಡೆಯಲಾಗಿದ್ದು, ಸುಮಾರು 72 ಕುಟುಂಬಗಳನ್ನು ಕ್ವಾರಂಟೈನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಇದರಿಂದ ಭಯಪಡುವ ಅಗತ್ಯವಿಲ್ಲ. ಎಲ್ಲಾ ಡೆಲಿವರಿ ಬಾಯ್‍ಗಳು ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಹಾಕಿಕೊಂಡು ಪಿಜ್ಜಾ, ಆಹಾರ ಡೆಲಿವರಿ ಮಾಡಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ 16 ಸಿಬ್ಬಂದಿ ಹಾಗೂ 72 ಕುಟುಂಬಗಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.

    ಸದ್ಯ ಸೋಂಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೆ ಇನ್ನು ಬೇರೆ ಯಾರದರೂ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರಾ ಎಂದು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಹೇಳಿದರು.

    ಡೆಲಿವರಿ ಬಾಯ್‍ಯ ಸಹೋದ್ಯೊಗಿಗಳ ಪರೀಕ್ಷೆ ನಡೆಸಿದಾಗ ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಪಿಜ್ಜಾ ಡೆಲಿವರಿ ಮಾಡಿದ ರೆಸ್ಟೋರೆಂಟ್ ಅನ್ನು ಬಂದ್ ಮಾಲಾಗಿದೆ.

    ಈ ರೆಸ್ಟೋರೆಂಟ್‍ನಿಂದ ಅನೇಕ ಆರ್ಡರ್ ಗಳನ್ನು ಝೊಮಾಟೊ ಆ್ಯಪ್ ಮೂಕಲ ಮಾಡಲಾಗಿದೆ. ಹೀಗಾಗಿ ಈ ರೆಸ್ಟೋರೆಂಟ್‍ನಿಂದ ಆರ್ಡರ್ ಪಡೆದು ಡೆಲಿವರಿ ಮಾಡಿದ ನಮ್ಮ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಝೊಮಾಟೊ ತಿಳಿಸಿದೆ.

  • ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

    ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

    ವಾಷಿಂಗ್ಟನ್: ನಾವು ವಾಸಿಸುವ ನಗರಗಳಲ್ಲಿ ಪ್ರತಿನಿತ್ಯ ಬಹುತೇಕ ಭಿಕ್ಷುಕರು ಮತ್ತು ನಿರಾಶ್ರಿತರನ್ನು ನೋಡುತ್ತಿರುತ್ತೇವೆ. ಅವರು ಆಹಾರಕ್ಕಾಗಿ ಟ್ರಾಫಿಕ್ ಸಿಗ್ನಲ್ ನಿಂದ ರೆಸ್ಟೋರೆಂಟ್ ಗಳ ಮುಂದೆಯೂ ಇರುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಭಿಕ್ಷುಕರಿಗಾಗಿ ಒಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.

    ಮಿಶೆಲ್ ಲುಸಿಯರ್ ಎಂಬ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಅಂಗಡಿಗೆ ನಿತ್ಯವೂ ನೂರಾರು ಜನರು ಪಿಜ್ಜಾ ತಿನ್ನಲು ಬರುತ್ತಿದ್ದರು. ಅವರು ಪಿಜ್ಜಾವನ್ನು ಅರ್ಧಂಬರ್ಧ ತಿಂದು ಉಳಿದನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗುತ್ತಿದ್ದರು. ಇದೇ ವೇಳೆ ಆಹಾರಕ್ಕಾಗಿ ಕಾಯುತ್ತಿದ್ದ ಭಿಕ್ಷುಕರು ಕಸದ ತೊಟ್ಟಿಯಿಂದ ಅದನ್ನು ಎತ್ತಿಕೊಂಡು ತಿನ್ನುತ್ತಿದ್ದರು.

    ಕೆಲವು ನಿರಾಶ್ರಿತರು ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ತುಂಡುಗಳನ್ನು ಎತ್ತಿಕೊಂಡು ತಿನ್ನುತ್ತಿದ್ದರು. ಇದನ್ನು ಗಮನಿಸಿದ ಮಿಶೆಲ್ ಲುಸಿಯರ್ ಅವರು ಭಿಕ್ಷುಕರಿಗಾಗಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಮಿಶೆಲ್ ಅವರು ಕೂಡಲೇ ತಮ್ಮ ಅಂಗಡಿ ಹೊರಗೆ ಬೋರ್ಡ್ ಹಾಕಿ, ಪಿಜ್ಜಾವನ್ನು ನಿರಾಶ್ರಿತರಿಗೆ ಉಚಿತವಾಗಿ ನೀಡಲಾರಂಭಿಸಿದ್ದರು. ಆ ಬೋರ್ಡಿ ನಲ್ಲಿ “ಕಸದ ತೊಟ್ಟಿಯಲ್ಲಿ ಎತ್ತಿಕೊಂಡು ತಿನ್ನುವ ವ್ಯಕ್ತಿಗಳೇ, ನೀವೂ ನಮ್ಮಂತೆ ಮನುಷ್ಯರು, ಆದ್ದರಿಂದ ಕಸದ ಬುಟ್ಟಿಯಲ್ಲಿ ಹಾಕಿರುವ ಆಹಾರಕ್ಕಿಂತ ಉತ್ತಮ ಆಹಾರ ತಿನ್ನಲು ನೀವು ಯೋಗ್ಯರಾಗಿದ್ದೀರಿ. ನೀವು ಬೇರೊಬ್ಬರ ಪಿಜ್ಜಾ ತಿನ್ನಬೇಡಿ, ನಮ್ಮ ಅಂಗಡಿಯೊಳಗೆ ಬಂದು ಉಚಿತವಾಗಿ ಪಿಜ್ಜಾ ಮತ್ತು ನೀರನ್ನು ತೆಗೆದುಕೊಂಡು ಹೋಗಿ” ಎಂದು ಮನವಿ ಮಾಡಿಕೊಂಡಿದ್ದಾರೆ.

    ಯಾವುದೇ ಹಿಂಜರಿತ ಸಂಕೋಚವಿಲ್ಲದೇ ನಮ್ಮ ಅಂಗಡಿಗೆ ಬಂದು ಪಿಜ್ಜಾ ತಿಂದು ಹೋಗಿ. ನೀವು ಅಂಗಡಿಗೆ ಬಂದರೆ ನಿಮ್ಮನ್ನು ಇಲ್ಲಿ ಯಾರೂ ಪ್ರಶ್ನೆ ಮಾಡಲ್ಲ ಎಂದು ಮಿಶೆಲ್ ಬೋರ್ಡ್ ಹಾಕಿದ್ದಾರೆ. ಈ ರೀತಿ ಬರೆದಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಿಜ್ಜಾ ವಿತರಿಸಲು ಕುದುರೆ ಏರಿ ಬಂದ ಡೆಲಿವರಿ ಬಾಯಿ- ಫೋಟೋ ವೈರಲ್

    ಪಿಜ್ಜಾ ವಿತರಿಸಲು ಕುದುರೆ ಏರಿ ಬಂದ ಡೆಲಿವರಿ ಬಾಯಿ- ಫೋಟೋ ವೈರಲ್

    ರಿಯೋ ಡಿ ಜನೈರೋ: ಬೆಲೆ ಏರಿಕೆ ಖಂಡಿಸಿ ರೈತರು ತರಕಾರಿ, ಹಾಲು ಗಳನ್ನು ರಸ್ತೆಗೆ ಚೆಲ್ಲುವುದರ ಮೂಲಕ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುವುದು ನಮ್ಮಲ್ಲಿ ಸಾಮಾನ್ಯ. ಆದರೆ ದೂರದ ಬ್ರೆಜಿಲ್ ನಲ್ಲಿ ಪಿಜ್ಜಾ ವಿತರಿಸಲು ಯುವಕನೊಬ್ಬ ಕುದುರೆ ಏರಿ ಬಂದ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿ ವಿಶ್ವದೆಲ್ಲೆಡೆ ಸುದ್ದಿಯಾಗಿದ್ದಾನೆ.

    ಪಿಜ್ಜಾ ಬಾಯ್ ಕುದುರೆ ಏರಿ ಬಂದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ. ಇದನ್ನೂ ಓದಿ: ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

    ಬ್ರೆಜಿಲ್‍ನಲ್ಲಿ ಈಗ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಬ್ರೆಜಿಲ್ ತೈಲ ಕಂಪೆನಿಯ ಸಿಇಓ ಪೆಡ್ರೂ ಎಂಬವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ಆರಂಭವಾಗಿವೆ. ಈ ಎಲ್ಲದರ ನಡುವೆ ಬ್ರೆಜಿಲ್ ಪೆಟ್ರೋಲ್ ಮತ್ತು ಡಿಸೇಲ್ ಸಹ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಎನ್ನುವ ಆರೋಪ ಕೇಳಿ ಬಂದಿದೆ.

    ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪಿಜ್ಜಾ ಬಾಯ್ ಕುದುರೆ ಬಳಸಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಕುದುರೆ ಏರಿ ಬಂದು ಮನೆಯೊಂದಕ್ಕೆ ಬಂದಿದ್ದ ಪಿಜ್ಜಾ ಬಾಯ್ ಫೋಟೋವನ್ನು ಸ್ಥಳೀಯರು ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.