Tag: Pilot Abhinandan

  • ಭಾರತೀಯನೆಂದು ತಮ್ಮ ಎಫ್16 ಪೈಲಟ್‍ನನ್ನೇ ಕೊಂದ ಪಾಕಿಸ್ತಾನಿಗಳು

    ಭಾರತೀಯನೆಂದು ತಮ್ಮ ಎಫ್16 ಪೈಲಟ್‍ನನ್ನೇ ಕೊಂದ ಪಾಕಿಸ್ತಾನಿಗಳು

    ಇಸ್ಲಾಮಾಬಾದ್: ಪಾಕಿಸ್ತಾನ ಭಾರತವನ್ನು ಕೆನಕಿ ಪದೇ ಪದೇ ಹಿನ್ನಡೆ ಅನುಭವಿಸುತ್ತಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಮುಜುಗುರಕ್ಕೆ ಒಳಗಾಗುತ್ತಿದೆ. ಭಾರತೀಯ ಪೈಲಟ್ ಎಂದು ತಿಳಿದು ತನ್ನ ದೇಶದ ಪೈಲಟ್‍ನನ್ನೇ ಪಾಕ್ ಪ್ರಜೆಗಳು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

    ಪಾಕಿಸ್ತಾನದ ಶಹಾಜ್-ಉದ್-ದಿನ್ ಹತ್ಯೆಯಾದ ಪಾಕ್ ವಾಯು ಪಡೆಯ ಪೈಲಟ್. ವಿಮಾನ ಪತನಗೊಂಡು ಕೆಳಗೆ ಬಿದ್ದಿದ್ದ ಶಹಾಜ್-ಉದ್-ದಿನ್ ಅನ್ನು ಭಾರತೀಯ ಪೈಲಟ್ ಎಂದು ತಿಳಿದು ಸ್ಥಳೀಯರೇ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

    ಆಗಿದ್ದೇನು?:
    ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಮಿಗ್-21ನಿಂದ ಪಾಕಿಸ್ತಾನದ ಎಫ್ 16 ವಿಮಾನವೊಂದನ್ನು ಬುಧವಾರ ಬೆಳಗ್ಗೆ ಹೊಡೆದುರುಳಿಸಿದ್ದರು. ತಕ್ಷಣವೇ ಅಭಿನಂದನ್ ಹಾಗೂ ಪಾಕ್ ಪೈಲಟ್ ಶಹಾಜ್-ಉದ್-ದಿನ್ ಪ್ಯಾರಾಚೂಟ್ ಸಹಾಯದಿಂದ ಕೆಳಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದರು.

    ಪಾಕ್ ಪೈಲಟ್ ಶಹಾಜ್-ಉದ್-ದಿನ್ ಪಾಕಿಸ್ತಾನದ ನೌಶೇರ್ ಪ್ರದೇಶದಲ್ಲಿ ಬಿದ್ದಿದ್ದ. ಈ ವೇಳೆ ಶಹಾಜ್ ಬಳಿಗೆ ಬಂದ ಸ್ಥಳೀಯರು ಆತ ಭಾರತೀಯ ಪೈಲಟ್ ಎಂದು ಭಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪಾಕ್ ಪೈಲಟ್‍ನನ್ನು ವಿಚಾರಿಸಿದೇ ಎಲ್ಲರೂ ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಪಾಕಿಸ್ತಾನ ಯೋಧರು ತಮ್ಮ ಪೈಲಟ್ ರಕ್ಷಣೆಗಾಗಿ ಓಡೋಡಿ ಸ್ಥಳಕ್ಕೆ ಬಂದಿದ್ದಾರೆ. ಆದರೆ ಸ್ಥಳೀಯರು ನಡೆಸಿ ಹಲ್ಲೆಯಿಂದ ಶಹಾಜ್-ಉದ್-ದಿನ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಹಾಜ್-ಉದ್-ದಿನ್ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

    ಪೈಲಟ್ ಅಭಿನಂದ್ ಅವರ ತಂದೆ ನಿವೃತ್ತ ಭಾರತೀಯ ವಾಯು ಪಡೆಯ ಅಧಿಕಾರಿ. ಹೀಗೆ ಶಹಾಜ್-ಉದ್-ದಿನ್ ಕುಟುಂಬವು ಪಾಕ್ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿದೆ. ಶಹಾಜ್-ಉದ್-ದಿನ್ ತಂದೆ ವಾಸೀಮ್-ಉದ್-ದಿನ್ ಕೂಡ ಪಾಕ್ ವಾಯು ಪಡೆಯ ಪೈಲಟ್.

    ವಿಮಾನ ಪತನವಾದ ಕೆಲ ಸಮಯದ ಬಳಿಕ ಪಾಕ್ ಸೇನೆಯ ಅಧಿಕಾರಿ ತಮ್ಮ ಬಳಿ ಇಬ್ಬರು ಭಾರತೀಯ ಪೈಲಟ್‍ಗಳಿದ್ದಾರೆ ಎಂದು ಸುಳ್ಳು ಹೇಳಿತ್ತು. ಸ್ವಲ್ಪ ಸಮಯದ ಬಳಿಕ ಅಭಿನಂದನ್ ಅವರು ಮಾತ್ರ ನಮ್ಮ ಬಂಧನದಲ್ಲಿದ್ದಾರೆ ಎಂದು ಸತ್ಯ ಒಪ್ಪಿಕೊಂಡಿತ್ತು. ಎರಡು ದಿನಗಳ ಕಾಲ ಪಾಕ್ ಸರ್ಕಾರವು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 60 ವರ್ಷದ ಕಾರು ಲೇಟೆಸ್ಟ್ ಸ್ಪೋರ್ಟ್ಸ್ ಕಾರನ್ನು ಸೋಲಿಸಿದೆ. ವಾಟ್ ಎ ಡ್ರೈವಿಂಗ್ – ಅಭಿ ಸಾಧನೆಗೆ ಎಲ್ಲೆಡೆ ಪ್ರಶಂಸೆ

    60 ವರ್ಷದ ಕಾರು ಲೇಟೆಸ್ಟ್ ಸ್ಪೋರ್ಟ್ಸ್ ಕಾರನ್ನು ಸೋಲಿಸಿದೆ. ವಾಟ್ ಎ ಡ್ರೈವಿಂಗ್ – ಅಭಿ ಸಾಧನೆಗೆ ಎಲ್ಲೆಡೆ ಪ್ರಶಂಸೆ

    ಬೆಂಗಳೂರು: ಭಾರತ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬೀಳುವ ಮುನ್ನ ಅತ್ಯುತ್ತಮ ಸಾಧನೆ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

    ಹೌದು. ಅಭಿನಂದನ್ ಅವರು ಹಾರಿಸುತ್ತಿದ್ದ ವಿಮಾನ ರಷ್ಯಾ ನಿರ್ಮಿತ ಮಿಗ್ 21 ಬೈಸನ್. ಎಫ್ 16ಗೆ ಹೋಲಿಕೆ ಮಾಡಿದರೆ ಇದರ ಸಾಮಥ್ರ್ಯ ತುಂಬಾ ಕಡಿಮೆ. ಅಮೆರಿಕದ ಜನರಲ್ ಡೈನಾಮಿಕ್ಸ್ ಲಾಕ್ ಹಿಡ್ ಮಾರ್ಟಿನ್ ಕಂಪನಿ ಎಫ್ 16 ಫೈಟಿಂಗ್ ಫಾಲ್ಕನ್ 1974 ರಲ್ಲಿ ತಯಾರಿಸಿದ್ದು ಸದ್ಯ ಜಗತ್ತಿನ ಅತ್ಯುತ್ತಮ ವಿಮಾನಗಳ ಪೈಕಿ ಒಂದಾಗಿದೆ.

    ಆದರೆ ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟ 874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಸದ್ಯ ಭಾರತದಲ್ಲಿ 122 ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸಿ ಈಗ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

    ಜನ ಹೇಳೋದು ಏನು?
    – “1960ಕ್ಕೆ ಸೇರಿದ ಎರಡನೇ ತಲೆಮಾರಿನ ಯುದ್ಧವಿಮಾನವೊಂದು 5ನೇ ತಲೆಮಾರಿನ ಅಮೆರಿಕ ನಿರ್ಮಿತ ವಿಮಾನವನ್ನು ಹೊಡೆದಿದೆ ಎಂದು ನಂಬುವುದೇ ಅಸಾಧ್ಯ. ಭಾರತೀಯ ವಾಯುಸೇನೆ ಜಗತ್ತಿನಲ್ಲೇ ಶ್ರೇಷ್ಠ ವಾಯುಸೇನೆಯಾಗಿದೆ”.
    – “ಮಿಗ್ ವಿಮಾನವೊಂದು ಎಫ್ 16 ಹೊಡೆದಿದ್ದು ವಿಶ್ವದಲ್ಲೇ ಮೊದಲು. ಈ ರೀತಿಯ ಸೈನಿಕರನ್ನು ಪಡೆದಿರುವ ಭಾರತ ನಿಜವಾಗಿ ಗ್ರೇಟ್”

    – “ಗಾಡಿ ಹೊಸದೇ ಇರಲಿ ಹಳೆಯದೇ ಇರಲಿ. ಅದನ್ನು ಓಡಿಸುವ ವ್ಯಕ್ತಿಯೇ ಮುಖ್ಯ. ಭಾರತೀಯರಿಗೆ ಸರಿಯಾಗಿ ತರಬೇತಿ ನೀಡಿದರೆ ಏನು ಬೇಕಾದರೂ ಮಾಡುವ ಸಾಮಥ್ರ್ಯ ಹೊಂದಿದ್ದಾರೆ ಎನ್ನುವುದು ಇದರಿಂದಲೇ ತಿಳಿಯುತ್ತದೆ. ವೆಲ್‍ಡನ್ ಅಭಿ”
    -“ಹಳೆಯ ಸ್ಕೂಟರ್ ಈಗಿನ ಲೇಟೆಸ್ಟ್ 200 ಎನ್‍ಎಸ್ ಎಬಿಎಸ್ ಹೊಂದಿರುವ ಬೈಕನ್ನು ರೇಸಿನಲ್ಲಿ ಸೋಲಿಸಿದಂತೆ ನಮ್ಮ ಹಳೇಯ ವಿಮಾನ ಪಾಕಿಸ್ತಾನ ಎಫ್ 16 ವಿಮಾನವನ್ನು ಸೋಲಿಸಿದೆ”.

    – “ಶವಪೆಟ್ಟಿಗೆಯಲ್ಲೇ ನಮ್ಮ ಪೈಲಟ್‍ಗಳು ಈ ಸಾಹಸ ಮಾಡಿದ್ದಾರೆ. ಒಂದು ವೇಳೆ ರಫೇಲ್ ಸಿಕ್ಕಿದ್ದರೆ?”
    – “ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಮತ್ತು ರಷ್ಯಾ ಯುದ್ಧ ಮಾಡುವುದಿಲ್ಲ. ಆದರೆ ಭಾರತ ರಷ್ಯಾ ನಿರ್ಮಿತ ಮಿಗ್ ಬಳಸಿ ಎಫ್ 16 ವಿಮಾನವನ್ನು ಹೊಡೆಯುವ ಮೂಲಕ ಅಮೆರಿಕವನ್ನು ಸೋಲಿಸಿದೆ. ಈ ಸಂತೋಷಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನರೇಂದ್ರ ಮೋದಿ ಕರೆ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ”

    – “60 ವರ್ಷದ ಹಳೆಯ ಕಾರು ಲೇಟೆಸ್ಟ್ ಸ್ಪೋರ್ಟ್ಸ್ ಕಾರನ್ನು ಸೋಲಿಸಿದೆ. ವಾಟ್ ಎ ಡ್ರೈವಿಂಗ್ ಅಭಿ”
    – “ಭಾರತೀಯ ವಾಯುಸೇನೆಯ ಈ ಸಾಹಸ ಭವಿಷ್ಯದಲ್ಲಿ ಎಲ್ಲ ದೇಶಗಳ ವಾಯು ಸೈನಿಕರಿಗೆ ಪಠ್ಯವಾಗಲಿದೆ”

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿನಂದನ್ ಸ್ವಾಗತಿಸಲು ವಾಘಾ ಗಡಿಗೆ ಬನ್ನಿ – ಮೋದಿಗೆ ಪಂಜಾಬ್ ಸಿಎಂ ಮನವಿ

    ಅಭಿನಂದನ್ ಸ್ವಾಗತಿಸಲು ವಾಘಾ ಗಡಿಗೆ ಬನ್ನಿ – ಮೋದಿಗೆ ಪಂಜಾಬ್ ಸಿಎಂ ಮನವಿ

    ನವದೆಹಲಿ: ಪಾಕ್ ವಶದಿಂದ ಮಾತೃ ಭೂಮಿಗೆ ಮರಳುತ್ತಿರುವ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ವಾಘಾ ಗಡಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

    ಟ್ವೀಟ್ ಮೂಲಕ ಮನವಿ ಸಲ್ಲಿಸಿದ ಅಮರೀಂದರ್ ಸಿಂಗ್ ಅವರು, ಸದ್ಯ ನಾನು ಅಮೃತ್‍ಸರದಲ್ಲಿದ್ದೇನೆ. ಈಗ ಪಂಜಾಬಿನ ಗಡಿ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಿರುವೆ. ಪೈಲಟ್ ಅಭಿನಂದನ್ ಅವರನ್ನು ವಾಘಾ ಗಡಿಯಿಂದ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ. ನಮ್ಮ ರಾಜ್ಯದ ಗಡಿ ಪ್ರದೇಶದಿಂದ ವೀರ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ. ನಾನು ಹಾಗೂ ಅಭಿನಂದನ್ ತಂದೆ ಇಬ್ಬರೂ ರಾಷ್ಟ್ರೀಯ ಭದ್ರತಾ ಅಕಾಡೆಮಿಯ (ಎನ್‍ಡಿಎ) ನಿವೃತ್ತ ಉದ್ಯೋಗಿಗಳು ಎಂದು ತಿಳಿಸಿದ್ದಾರೆ.

    ಪೈಲಟ್ ಅಭಿನಂದನ್ ಅವರು ಫೆಬ್ರವರಿ 27ರಂದು ಪಾಕಿಸ್ತಾನ ಸೇನೆಯ ಬಂಧನಕ್ಕೆ ಒಳಗಾಗಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಗುರುವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡಿ ಅಭಿನಂದನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ಮಾತೃ ಭೂಮಿಗೆ ಮರಳುತ್ತಿರುವ ಅಭಿನಂದನ್ ಅವರನ್ನು ಸ್ವಾಗತಿಸಲು ಪಂಚಾಬ್‍ನ ವಾಘಾ ಗಡಿಯಲ್ಲಿ ಸಾವಿರಾರು ಜನರು ಸೇರಿದ್ದಾರೆ. ವೀರ ಯೋಧನ ಸ್ವಾಗತಕ್ಕೆ ದೇಶದ ಜನತೆ ಕಾತರದಲ್ಲಿದ್ದಾರೆ.

    ನಮ್ಮ ಬಂಧನದಲ್ಲಿ ಭಾರತೀಯ ಪೈಲಟ್ ಇದ್ದಾರೆ. ಉಭಯ ದೇಶಗಳ ಮಧ್ಯೆ ಶಾಂತಿ ಕಾಪಾಡುವ ಉದ್ದೇಶದಿಂದ ಶುಕ್ರವಾರ ಅವರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದ ಪಾಕ್ ಸರ್ಕಾರ ಗುರುವಾರ ಸಂಜೆ ಅಧಿಕೃತವಾಗಿ ಮಾಹಿತಿ ನೀಡಿತ್ತು.

    ಪೈಲಟ್ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ದಮಾನ್ ಸೇರಿದಂತೆ ಸಂಬಂಧಿಕರು ವಾಘಾ ಗಡಿಯಲ್ಲಿ ಅಭಿನಂದನ್ ಅವರ ಆಗಮನಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಅಭಿನಂದನ್ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಾಘಾ ಗಡಿ ಪ್ರದೇಶಕ್ಕೆ ಬರಬೇಕು ಎಂದು ಪಂಚಾಬ್ ಸಿಎಂ ಅಮರೀಂದರ್ ಸಿಂಗ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=V3v7nPlplzo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೈಲಟ್ ಅಭಿನಂದನ್‍ಗಾಗಿ ಪುಟ್ಟ ಶಾಲಾ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ

    ಪೈಲಟ್ ಅಭಿನಂದನ್‍ಗಾಗಿ ಪುಟ್ಟ ಶಾಲಾ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ

    ಬೆಳಗಾವಿ: ಪಾಕ್ ವಶದಲ್ಲಿರುವ ಪೈಲಟ್ ಅಭಿನಂದನ್ ಅವರಿಗಾಗಿ ಪುಟ್ಟ ಶಾಲಾ ಮಕ್ಕಳು ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ವಿಶೇಷವಾ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.

    ಹುಕ್ಕೇರಿ ಪಟ್ಟಣದ ಮಹಾವೀರ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ವಿಶೇಷ ಪ್ರಾರ್ಥನೆ ನಡೆಸಲಾಯಿತು. ನಮ್ಮ ದೇಶದ ವೀರ ಯೋಧ ಪೈಲಟ್ ಅಭಿನಂದನ್ ಸುರಕ್ಷಿತವಾಗಿ ನಮ್ಮ ತಾಯ್ನಾಡಿಗೆ ವಾಪಸ್ ಬರಬೇಕು ಎಂದು ಮಕ್ಕಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಯೋಧ ಅಭಿನಂದನ್ ಹೆಸರಲ್ಲಿ ವಿಶೇಷ ಪ್ರಾರ್ಥನೆ ಮಾಡಿದ ನೂರಾರು ಮಕ್ಕಳು ವೀರ ಯೋಧ ಸುರಕ್ಷಿತವಾಗಿರಲಿ ಹಾಗೂ ಆದಷ್ಟು ಬೇಗ ನಮ್ಮ ದೇಶಕ್ಕೆ ಮರಳುವಂತಾಗಲಿ ಎಂದು ಪ್ರಾರ್ಥಿಸಿದರು. ಶಾಲಾ ಮಕ್ಕಳ ಜೊತೆಗೆ ಶಾಲೆಯ ಚೇರ್ಮನ್ ಮಹಾವೀರ ನಿಲಜಗಿ, ಆಡಳಿತ ಮಂಡಳಿ ಹಾಗೂ ಶಿಕ್ಷಕರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

    ಅಭಿನಂದನ್ ಪಾಕ್ ವಶವಾಗಿದ್ದು ಹೇಗೆ..?
    ಪಾಕಿಸ್ತಾನ ಮಂಗಳವಾರ ಭಾರತದ ಗಡಿಯೊಳಗೆ ಯುದ್ಧ ವಿಮಾನಗಳನ್ನು ನುಗ್ಗಿಸಿ ದುಸ್ಸಾಹಸ ಮಾಡಿತ್ತು. ಭಾರತದ ಗಡಿ ದಾಟಿದ 3 ವಿಮಾನಗಳ ಪೈಕಿ, ಪಾಕಿಸ್ತಾನದ ಎಫ್-16 ಒಂದು ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ. ಇನ್ನೆರಡು ವಿಮಾನಗಳನ್ನು ಮಿಗ್-21 ವಿಮಾನವನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವೇಳೆ ಪಾಕ್ ನೆಲದಲ್ಲಿ ಮಿಗ್ 22 ನೆಲಕ್ಕುರುಳಿದೆ. ಈ ವೇಳೆ ಅಭಿನಂದನೆ ಪ್ಯಾರಾಚೂಟ್‍ನಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ. ತಮ್ಮ ನೆಲದಲ್ಲಿ ಅಭಿನಂದನ್ ಇರುವುದನ್ನು ಗಮನಿಸಿದ ಸ್ಥಳಿಯರು ಪಾಕಿಸ್ತಾನ ಸೇನೆಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪಾಕ್ ಸೈನಿಕರು ಅಭಿನಂದನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv