Tag: Pig

  • ಹಂದಿ ಮಾಂಸ ಸೇವನೆ ಹೆಚ್ಚಳ – ಶಟಲ್‌ ಕಾಕ್‌ಗೆ ಬಂತು ಬರ, ಬೆಲೆ ದಿಢೀರ್‌ ಏರಿಕೆ!

    ಹಂದಿ ಮಾಂಸ ಸೇವನೆ ಹೆಚ್ಚಳ – ಶಟಲ್‌ ಕಾಕ್‌ಗೆ ಬಂತು ಬರ, ಬೆಲೆ ದಿಢೀರ್‌ ಏರಿಕೆ!

    ವಿಶ್ವದಲ್ಲಿ ಅತಿವೇಗವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್‌ ಕೂಡ ಒಂದು. ಭಾರತದಲ್ಲೂ ಬ್ಯಾಡ್ಮಿಂಟನ್‌ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕ್ರಿಕೆಟ್‌ನ ಬಳಿಕ ಭಾರತದಲ್ಲಿ ಬ್ಯಾಡ್ಮಿಂಟನ್ ಆಟ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲೇ ಶಟಲ್‌ ಕಾಕ್‌ನ ಬೆಲೆ ಗಗನಕ್ಕೇರುತ್ತಿದೆ. ಕಳೆದ 1 ವರ್ಷದ ಅವಧಿಯಲ್ಲಿ ಇದರ ಬೆಲೆ ದುಪ್ಪಟ್ಟಾಗಿದೆ. ಹಂದಿ ಮಾಂಸ ಸೇವನೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅರೇ ಇದೇನಪ್ಪಾ? ಹಂದಿ ಮಾಂಸ ಸೇವನೆಗೂ ಶಟಲ್‌ ಕಾಕ್‌ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲಿ ಮೂಡುತ್ತದೆ. ಹಾಗಿದ್ರೆ ಶಟಲ್‌ ಕಾಕ್‌ ಬೆಲೆ ಏರಲು ಕಾರಣವೇನು? ಹಂದಿ ಮಾಂಸ ಸೇವನೆಗೂ ಶಟಲ್‌ ಕಾಕ್‌ ಬೆಲೆ ಏರಿಕೆಗೂ ಇರುವ ನಂಟೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಶಟಲ್ ಕಾಕ್ ಬೆಲೆ ಏಕಾಏಕಿ ಏರಿಕೆ:
    ಬ್ಯಾಡ್ಮಿಂಟನ್ ಆಟದಲ್ಲಿ ಬಳಕೆಯಾಗುವ ಹಕ್ಕಿ ಪುಕ್ಕದ ಶಟಲ್‌ನ ಬೆಲೆ ಕಳೆದ 1 ವರ್ಷದಲ್ಲಿ ದುಪ್ಪಟ್ಟಾಗಿದೆ. ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಬಳಕೆ ಮಾಡುತ್ತಿದ್ದ ಶಟಲ್‌ ಕಾಕ್‌ಗಳು ಸುಮಾರು 150 ರೂ.ಗೆ ಲಭ್ಯವಾಗುತ್ತಿದ್ದವು. ಈಗ ಇವುಗಳ ಬೆಲೆ 300 ರೂ. ದಾಟಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಶಟಲ್‌ ಕಾಕ್‌ಗಳ ಉತ್ಪಾದನೆಯಲ್ಲಾಗಿರುವ ಕೊರತೆ. ಪ್ರಮುಖ ಪಂದ್ಯಾವಳಿಗಳಿಗಾಗಿ ಪ್ರತೀ ವರ್ಷ ಸುಮಾರು 21 ಕೋಟಿ ಶಟಲ್‌ ಕಾಕ್ ಬಳಕೆಯಾಗುತ್ತವೆ. ಆದರೆ ಇಷ್ಟೊಂದು ಶಟಲ್‌ ಕಾಕ್‌ಗ‌ಳನ್ನು ಒದಗಿಸಲು ಉತ್ಪಾದಕಾ ಕಂಪನಿಗಳು ವಿಫಲವಾಗಿರುವುದರಿಂದ ಶಟಲ್‌ ಕಾಕ್ ಬೆಲೆಯು ಚಿನ್ನದಂತೆ ದಿಢೀರ್ ಏರಿಕೆ ಕಂಡಿದೆ.

    ಭಾರತದ ಪ್ರತಿಷ್ಠಿತ ಪುಲ್ಲೇಲಾ ಗೋಪಿಚಂದ್‌ ಅಕಾಡೆಮಿ ಸೇರಿ ವಿಶ್ವದ ಕೆಲ ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ಕೇವಲ ಎರಡು ವಾರಕ್ಕೆ ಆಗುವಷ್ಟು ಶಟಲ್‌ ಕಾಕ್ ಮಾತ್ರ ಸ್ಟಾಕ್‌ ಇದೆಯಂತೆ. ಶಟಲ್‌ ಕಾಕ್ ಕೊರತೆ ಆಗಲು ಚೀನಾದಲ್ಲಿ ಜನ ಬಾತುಕೋಳಿ, ಹೆಬ್ಬಾತು ಬಿಟ್ಟು ಹಂದಿ ಮಾಂಸವನ್ನು ಹೆಚ್ಚಾಗಿ ಸೇವಿಸುತ್ತಿರುವುದೇ ಕಾರಣ‌ ಎನ್ನಲಾಗುತ್ತಿದೆ. ಕೇಳಲು ಆಶ್ಚರ್ಯ ಎನಿಸಿದರೂ ಇದು ಸತ್ಯ.‌

    ಶಟಲ್ ಉತ್ಪಾದನೆಯಲ್ಲಿ ಚೀನ ಪ್ರಾಬಲ್ಯ:
    ಶಟಲ್ ಉತ್ಪಾದನೆಯ ಜಾಗತಿಕ ಕೇಂದ್ರ ಎನಿಸಿಕೊಂಡಿರುವ ಚೀನದ ಗೈಝ ಪ್ರಾಂತದಲ್ಲಿ ಉತ್ಪಾದನೆಯ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಇಲ್ಲಿರುವ ಶಟಲ್ ಕಾಕ್ ಉತ್ಪಾದಕ ಕೇಂದ್ರಗಳು ಕಳೆದ ವರ್ಷ ತಿಂಗಳಿಗೆ 30 ಲಕ್ಷ ಶಟಲ್ ಕಾಕ್‌ ಉತ್ಪಾದನೆಯನ್ನು ಮಾಡುತ್ತಿದ್ದವು. ಆದರೆ, ಇದರ ಪ್ರಮಾಣ ಈ ವರ್ಷ 20 ಲಕ್ಷಕ್ಕೆ ಕುಸಿತ ಕಂಡಿದೆ. ಇಲ್ಲಿ ಶಟಲ್‌ ಕಾಕ್ ಉತ್ಪಾದನೆಗೆ ಬಾಡಿಗೆ ರಹಿತ ಭೂಮಿಯನ್ನು ಸರ್ಕಾರ ಒದಗಿಸಿರುವುದರಿಂದ ಕಂಪನಿಗಳು ನಷ್ಟಕ್ಕೀಡಾಗದೇ ಉಳಿದುಕೊಂಡಿವೆ. ಶಟಲ್‌ ಕಾಕ್‌ಗಳನ್ನು ತಯಾರು ಮಾಡಲು ಬೇಕಾದ ಪುಕ್ಕಗಳ ಕೊರತೆ ಉಂಟಾಗಿರುವುದೇ ಕಾಕ್ ಉತ್ಪಾದನೆ ಕುಂಠಿತವಾಗಲು ಕಾರಣ ಎನ್ನಲಾಗಿದೆ.

    ಶಟಲ್‌ ಕಾಕ್‌ ತಯಾರಿಕೆ ಹೇಗೆ?
    ಬ್ಯಾಡ್ಮಿಂಟನ್‌ನಲ್ಲಿ ಬಳಸುವ ಶಟಲ್‌‌ ಕಾಕ್ ತಯಾರಿಸಲು ಹೆಬ್ಬಾತು (ಗೂಸ್‌) ಹಾಗೂ ಬಾತುಕೋಳಿಯ ಪುಕ್ಕಗಳನ್ನು ಬಳಸಲಾಗುತ್ತದೆ. ಚೀನಾದಲ್ಲಿ ಸಂಪ್ರದಾಯಿಕವಾಗಿ ಈ ಎರಡರ ಮಾಂಸಕ್ಕೆ ಭಾರೀ ಬೇಡಿಕೆ ಇರುವ ಕಾರಣ, ಅಲ್ಲಿನ ರೈತರು ಹೆಚ್ಚಾಗಿ ಸಾಕಣಿಕೆ ಮಾಡುತ್ತಾರೆ.

    ಒಂದು ಶಟಲ್‌‌ ಕಾಕ್ ತಯಾರಿಸಲು 16 ಪುಕ್ಕಗಳು ಬೇಕಾಗುತ್ತವೆ. ಸಣ್ಣ ಪುಟ್ಟ ಟೂರ್ನಿಗಳಲ್ಲಿ, ಹವ್ಯಾಸಕ್ಕಾಗಿ ಬ್ಯಾಡ್ಮಿಂಟನ್‌ ಆಡುವವರ ಬಳಕೆಗೆ ಬಾತುಕೋಳಿಯ ಪುಕ್ಕದಿಂದ ತಯಾರಿಸಿದ ಕಾಕ್‌ಗಳು ಸಾಕು. ಆದರೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹೆಬ್ಬಾತುವಿನ ಪುಕ್ಕದಿಂದ ತಯಾರಿಸಿದ ಕಾಕ್‌ಗಳು ಬಳಕೆಯಾಗುತ್ತದೆ. ಅಂ.ರಾ. ಸಿಂಗಲ್ಸ್‌ ಪಂದ್ಯವೊಂದರಲ್ಲಿ ಸಾಮಾನ್ಯವಾಗಿ 2 ಡಜನ್‌ ಶಟಲ್‌ ಕಾಕ್‌ಗಳು ಬಳಕೆಯಾಗುತ್ತವೆ.

    ಶಟಲ್‌ ಕಾಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ (ಬಿಡ್ಲ್ಯುಎಫ್‌), ಶಟಲ್‌‌ ಕಾಕ್ ತಯಾರಿಕ ಸಂಸ್ಥೆಗಳಿಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದೆ. ಆದರೆ, ಪುಕ್ಕಗಳ ಕೊರತೆಯಿಂದಾಗಿ ಅಗತ್ಯಕ್ಕೆ ತಕ್ಕಂತೆ ಶಟಲ್‌ ಕಾಕ್‌ ಪೂರೈಕೆ ಕಷ್ಟ ಎಂದು ತಯಾರಿಕ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ, ಶಟಲ್‌ ಕಾಕ್‌ಗಳ ಬೆಲೆ 30%ರಿಂದ 40%ರಷ್ಟು ಹೆಚ್ಚಳವಾಗಿದೆ.

    ಶಟಲ್‌ ಕಾಕ್‌ ಬೆಲೆ ಏರಿಕೆಗೆ ಕಾರಣವೇನು?
    ಚೀನಿಯರಿಗೆ ಹಂದಿ ಮಾಂಸ ಎಂದರೆ ಎಲ್ಲಿಲ್ಲದ ಪ್ರೀತಿ. ಜಗತ್ತಿನಲ್ಲಿ ಅತಿಹೆಚ್ಚು ಹಂದಿ ಮಾಂಸ ಸೇವಿಸುವ, ರಫ್ತು ಮಾಡುವ ದೇಶ ಚೀನಾ. ಕಳೆದ 6 ತಿಂಗಳಿಂದ ಹಂದಿ ಮಾಂಸದ ಬೆಲೆ ನಿರಂತರವಾಗಿ ಕುಸಿಯುತ್ತಿದ್ದು, ಜನ ಹೆಚ್ಚಾಗಿ ಹಂದಿ ಮಾಂಸವನ್ನೇ ಸೇವಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ರೈತರು, ಬಾತುಕೋಳಿ ಹಾಗೂ ಹೆಬ್ಬಾತು ಸಾಕುವುದನ್ನು ನಿಲ್ಲಿಸಿ ಹಂದಿ ಸಾಕಣೆ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಶಟಲ್‌ ಕಾಕ್‌ ಕೊರತೆಯಾಗಲು ಇದು ಕಾರಣವಾಗಿದೆ.

    ವಿಶ್ವದ 57.7%ರಷ್ಟು ಹಂದಿ ಮಾಂಸ ಚೀನದಲ್ಲೇ ಸೇವಿಸಲಾಗುತ್ತಿದೆ.ಇದಕ್ಕೂ ಮುನ್ನ ಚೀನದಲ್ಲಿ ಬಾತುಕೋಳಿಯನ್ನು ಹೆಚ್ಚು ಸೇವಿಸಲಾಗುತ್ತಿತ್ತು. 2023ರಲ್ಲಿ 1.1 ಕೋಟಿ ಇದ್ದ ಬಾತುಕೋಳಿ ಸಾಕಾಣಿಕೆ 2024ರಲ್ಲಿ 90 ಲಕ್ಷಕ್ಕೆ ಕುಸಿದಿದೆ. 2025ರಲ್ಲಿ ಇನ್ನೂ ಕುಸಿದಿದ್ದು, ಶಟಲ್ ಕಾಕ್‌ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ.

    ಪುಕ್ಕ ಉತ್ಪಾದನೆಯಲ್ಲಿ 35% ಕುಸಿತ:
    ಚೀನದಲ್ಲಿ ಬಾತುಕೋಳಿ ಪುಕ್ಕದ ಉತ್ಪಾದನೆಯಲ್ಲಿ ಒಂದೇ ವರ್ಷದಲ್ಲಿ 35%ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಹೀಗಾಗಿ ಬೆಲೆ ಗಗನಕ್ಕೇರುತ್ತಿದೆ. 2019ರಲ್ಲಿ ಚೀನದಲ್ಲಿ 400 ಕೋಟಿ ಬಾತುಕೋಳಿಗಳಿವೆ ಎಂದು ಅಂದಾಜಿಸಲಾಗಿತ್ತು. ಇದು ಈಗ 200 ಕೋಟಿಗೆ ಇಳಿಕೆಯಾಗಿದೆ. ಆದರೂ 80%ರಷ್ಟು ಬೇಡಿಕೆಯನ್ನು ಪೂರೈಸಲು ಚೀನ ಸಫಲವಾಗಿದ್ದು, ಪೂರ್ಣ ಬೇಡಿಕೆಯನ್ನು ಪೂರೈಸಲಾಗದ ಕಾರಣ ಬೆಲೆ ಏರಿಕೆಯಾಗುತ್ತಿದೆ.

    ಭಾರತದಲ್ಲೂ ಇವೆ ಉತ್ಪಾದನಾ ಘಟಕಗಳು:
    ಶಟಲ್ ಕಾಕ್‌ ಉತ್ಪಾದನೆಯಲ್ಲಿ ಚೀನದ ಏಕಸ್ವಾಮ್ಯತೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿರುವ ದೇಶವೆಂದರೆ ಅದು ಭಾರತ. ಆದರೂ ವಿಶ್ವದ ಬೇಡಿಕೆಗೆ ಸಾಕಾಗುವಷ್ಟು ಪುಕ್ಕದ ಶಟಲ್‌ ಕಾಕ್‌ಗಳನ್ನು ಉತ್ಪಾದನೆ ಮಾಡಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಳದ ಉಲುಬೇರಿಯಾದ ಸುತ್ತಮುತ್ತ ಸುಮಾರು 150ಕ್ಕೂ ಹೆಚ್ಚು ಸಣ್ಣ ಸಣ್ಣ ಉತ್ಪಾದನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಭಾರತಕ್ಕೆ ಬೇಕಿರುವ 65%ರಷ್ಟು ಕಾಕ್ ಇಲ್ಲಿ ಉತ್ಪಾದನೆಯಾಗುತ್ತದೆ. ಇದಲ್ಲದೆ ಪಂಜಾಬ್‌ನ ಜಲಂಧರ್‌ನಲ್ಲೂ ಉತ್ಪಾದನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಕಾಕ್ ಉತ್ಪಾದನೆ ಮಾಡುವಷ್ಟು ಬಾತುಕೋಳಿಗಳನ್ನು ಭಾರತದಲ್ಲಿ ಸಾಕಾಣಿಕೆ ಮಾಡುತ್ತಿಲ್ಲ.

    ಪರ್ಯಾಯ ಮಾರ್ಗಗಳೇನು?
    -ನೈಲಾನ್‌ನಿಂದ ತಯಾರಿಸಿದ ಶಟಲ್‌ ಕಾಕ್‌ಗಳನ್ನು ಜಾಗತಿಕವಾಗಿ ಒಪ್ಪಿಕೊಳ್ಳುವುದು
    -ಸಿಂಥೆಟಿಕ್ ಶಟಲ್‌ ಕಾಕ್‌ಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಸುವುದು
    -ಆರಂಭದಲ್ಲಿ ಪುಕ್ಕ ಹಾಗೂ ಸಿಂಥೆಟಿಕ್ ಮಿಶ್ರ ಕಾಕ್‌ಗಳನ್ನು ಬಳಸುವುದು
    -ಬಾತುಕೋಳಿಗಳ ಸಾಕಣೆ ಮತ್ತು ಪುಕ್ಕದ ಸಂಗ್ರಹಣೆಯನ್ನು ಹೆಚ್ಚಿಸುವುದು
    -ಚೀನದಿಂದ ಹೊರಗೆ ಉತ್ಪಾದನಾ ಘಟಕಗಳನ್ನು ಹೆಚ್ಚು ಮಾಡುವುದು

    ಪ್ಲಾಸ್ಟಿಕ್ ಕಾಕ್‌ಗೆ ಬ್ಯಾಡ್ಮಿಂಟನ್ ಪಟುಗಳ ವಿರೋಧ:
    2018ರ ವೇಳೆಯಲ್ಲಿ ಚೀನದಲ್ಲಿ ಭಾರೀ ಪ್ರಮಾಣದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ ಶಟಲ್ ಕಾಕ್ ಉತ್ಪಾದನೆ ಕುಂಠಿತಗೊಂಡಿತ್ತು. ಹೀಗಾಗಿ ಪ್ಲಾಸ್ಟಿಕ್ ಶಟಲ್‌‌ ಕಾಕ್‌ಗಳನ್ನು ಪಂದ್ಯಾವಳಿಗಳಲ್ಲಿ ಬಳಕೆ ಮಾಡಲು ಆರಂಭಿಸಲಾಗಿತ್ತು. ಆದರೆ ಇದಕ್ಕೆ ಬಹುತೇಕ ಬ್ಯಾಡ್ಮಿಂಟನ್ ಪಟುಗಳು ವಿರೋಧ ವ್ಯಕ್ತಪಡಿಸಿದ್ದು, ಈ ಶಟಲ್‌ ಕಾಕ್‌ಗೆ ನಿಖರತೆ ಕಡಿಮೆ ಎಂದು ವಾದಿಸಿದ್ದರು. ಆದರೆ ಇದೀಗ ಪುಕ್ಕದ ಶಟಲ್‌ ಕಾಕ್‌ಗಳ ಕೊರತೆ ಉಂಟಾಗಿರುವುದರಿಂದ ಮತ್ತೊಮ್ಮೆ ಪರ್ಯಾಯದ ಕಡೆಗೆ ಜಗತ್ತು ಚಿಂತಿಸಲು ಆರಂಭಿಸಿದೆ.

  • ರಾಯಚೂರಿನ ರಿಮ್ಸ್‌ನಲ್ಲಿ ಹಂದಿಗಳ ಕಾಟ- ಬಾಣಂತಿಯರು, ಶಿಶುಗಳ ವಾರ್ಡ್‍ನಲ್ಲಿ ಆತಂಕ

    ರಾಯಚೂರಿನ ರಿಮ್ಸ್‌ನಲ್ಲಿ ಹಂದಿಗಳ ಕಾಟ- ಬಾಣಂತಿಯರು, ಶಿಶುಗಳ ವಾರ್ಡ್‍ನಲ್ಲಿ ಆತಂಕ

    ರಾಯಚೂರು: ಕೋವಿಡ್ (COVID 19) ನಾಲ್ಕನೇ ಅಲೆ ಆತಂಕ ಹಿನ್ನೆಲೆ ರಾಯಚೂರಿನಲ್ಲಿ ರಿಮ್ಸ್ ಆಸ್ಪತ್ರೆ ಅಗತ್ಯ ಸಿದ್ಧತೆಗಳನ್ನ ಮಾಡುಕೊಳ್ಳುತ್ತಿದೆ. ಆಡಳಿತ ಅಧಿಕಾರಿಗಳು ಈಗಾಗಲೇ ಮಾಕ್ ಡ್ರಿಲ್ ನಡೆಸಿ ಸಿಬ್ಬಂದಿಯನ್ನ ಚುರುಕುಗೊಳಿಸಿದ್ದಾರೆ. ಆದರೆ ಪ್ರತಿಷ್ಠಿತ ರಿಮ್ಸ್ (RIMS Hospital) ಹಾಗೂ ಓಪೆಕ್ ಆಸ್ಪತ್ರೆ (Opec Rajivgandhi Memorial Hospital) ಗೆ ಬರಲು ಸಾಮಾನ್ಯ ರೋಗಿಗಳು ಹೆದರುತ್ತಿದ್ದಾರೆ.

    ಇಡೀ ರಾಜ್ಯದಲ್ಲಿ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಗಳಲ್ಲಿ ಟಾಪ್ 10 ನಲ್ಲಿರೋ ರಾಯಚೂರಿನ ರಿಮ್ಸ್ ಆಸ್ಪತ್ರೆ ಅಂದ್ರೆ ಇತ್ತೀಚಿಗೆ ರೋಗಿಗಳಿಗೆ ಭಯ ಹುಟ್ಟುತ್ತಿದೆ. ನಮ್ಮಲ್ಲಿ ಎಲ್ಲಾ ಸೌಲಭ್ಯಗಳಿವೆ, ಕೋವಿಡ್ ನಾಲ್ಕನೇ ಅಲೆ ಎದುರಿಸಲು ಸಹ ಸನ್ನದ್ದರಾಗಿದ್ದೇವೆ ಅಂತ ಇಲ್ಲಿನ ಆಡಳಿತ ಮಂಡಳಿ ಹೇಳಿಕೊಳ್ಳುತ್ತಿದೆ. ಆದರೆ ಇಲ್ಲಿಗೆ ಬರುವ ರೋಗಿಗಳಿಗೆ ನಾಯಿ, ಕೋತಿ, ಹಂದಿಗಳ ಕಾಟ ವಿಪರೀತವಾಗಿದೆ. ಇಲ್ಲಿನ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ಟಿವಿ ಸಹ ಈಗಾಗಲೇ ವರದಿಯನ್ನೂ ಮಾಡಿತ್ತು. ಆದ್ರೆ ಓಪೆಕ್ ಹಾಗೂ ರಿಮ್ಸ್ ಆಡಳಿತ ಮಂಡಳಿ ಮಾತ್ರ ಎಚ್ಚೆತ್ತುಕೊಂಡಿಲ್ಲ. ಹಂದಿಗಳಂತೂ ರಿಮ್ಸ್ ಆಸ್ಪತ್ರೆ ಆವರಣವನ್ನೇ ಆವಾಸಸ್ಥಾನ ಮಾಡಿಕೊಂಡಿವೆ. ಆಗಾಗ ಆಸ್ಪತ್ರೆ ವಾರ್ಡ್‍ಗಳಿಗೆ ವಿಸಿಟ್ ನೀಡುತ್ತವೆ.

    ನಾಯಿ ಕೋತಿಗಳಂತು ನೇರವಾಗಿ ಆಸ್ಪತ್ರೆಗೆ ನುಗ್ಗಿ ರೋಗಿಗಳನ್ನ, ರೋಗಿಗಳ ಕಡೆಯವರನ್ನ ಹೆದರಿಸುತ್ತವೆ. ಇಲ್ಲಿ ನಾಯಿ ಕಚ್ಚಿದರೆ ಆರೋಗ್ಯವಾಗಿದ್ದವರೂ ಸಹ ಪುನಃ ಆಸ್ಪತ್ರೆಗೆ ದಾಖಲಾಗಬೇಕಾದ ಪರಸ್ಥಿತಿಯಿದೆ. ಚಿಕ್ಕಮಕ್ಕಳು, ನವಜಾತ ಶಿಶುಗಳ, ಬಾಣಂತಿಯರ ವಾರ್ಡ್‍ಗಳ ಬಳಿ ನಾಯಿ, ಕೋತಿಗಳು ಓಡಾಡುವುದರಿಂದ ಆತಂಕ ಹೆಚ್ಚಾಗಿದೆ. ಸಾರ್ವಜನಿಕರು ಎಷ್ಟೇ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಪತ್ನಿ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!

    ಒಟ್ಟು 520 ಬೆಡ್‍ಗಳ ರಿಮ್ಸ್ ಆಸ್ಪತ್ರೆಗೆ ಪ್ರತಿನಿತ್ಯ ಜಿಲ್ಲೆ ಹೊರಜಿಲ್ಲೆ, ತೆಲಂಗಾಣ ಆಂಧ್ರಪ್ರದೇಶದ ಗಡಿಭಾಗದಿಂದ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ ಈ ಆಸ್ಪತ್ರೆ ಸಮಸ್ಯೆಯೇ ಬೇರೆಯಾಗಿದೆ. ಇಲ್ಲಿನ ಆಡಳಿತ ಮಂಡಳಿ ಮಾತ್ರ ನಗರಸಭೆ, ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ, ಶಾಸಕರ ಗಮನಕ್ಕೂ ತಂದಿದ್ದೇವೆ ಅಂತಿದ್ದಾರೆ. ಆದ್ರೆ ಹಂದಿ, ನಾಯಿ, ಕೋತಿಗಳ ನಿಯಂತ್ರಣ ಮಾತ್ರ ಅಸಾಧ್ಯವಾಗಿದೆ.

    ಈ ಆಸ್ಪತ್ರೆಯಲ್ಲಿನ ವಾಸ್ತವ ಚಿತ್ರೀಕರಣ ಮಾಡಲು ಮಾಧ್ಯಮದವರು ಇಲ್ಲಿನ ಅಧಿಕಾರಿಗಳ ಅನುಮತಿ ಪಡೆದು ಒಳಗೆ ಹೋಗಬೇಕು. ಆದರೆ ಹಂದಿ, ನಾಯಿ, ಕೋತಿಗಳ ಪ್ರವೇಶಕ್ಕೆ ಮಾತ್ರ ಯಾವ ಅನುಮತಿಯೂ ಇಲ್ಲಾ, ನಿಯಂತ್ರಣವೂ ಇಲ್ಲಾ. ಇದು ಇಲ್ಲಿನ ಅವ್ಯವಸ್ಥೆ ಹಿಡಿದ ಕನ್ನಡಿಯಾಗಿದೆ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ಕಾಣಿಸಿಕೊಂಡ ಆಫ್ರಿಕನ್ ವೈರಸ್ – ಹಂದಿಗಳ ಮಾರಣಹೋಮದಿಂದ ಟೆನ್ಷನ್

    ಕೊಡಗಿನಲ್ಲಿ ಕಾಣಿಸಿಕೊಂಡ ಆಫ್ರಿಕನ್ ವೈರಸ್ – ಹಂದಿಗಳ ಮಾರಣಹೋಮದಿಂದ ಟೆನ್ಷನ್

    ಮಡಿಕೇರಿ: ಭಾಗದಲ್ಲಿ ಅಕಾಲಿಕ ಮಳೆ ಕಾಫಿ, ಕರಿಮೆಣಸಿನ ಬೆಳೆಗೆ ಹೊಡೆತ ನೀಡಿತ್ತು. ಇದರ ಬೆನ್ನಲ್ಲೆ ರೈತರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹಂದಿಸಾಕಾಣಿಕೆಗೆ ಮುಂದಾಗಿದ್ದ ಯುವ ರೈತ ಉದ್ಯಮಿಗಳಿಗೆ ಆಫ್ರಿಕನ್ ಹಂದಿ ಜ್ವರ (African Swine Fever) ಬರಸಿಡಿಲಿನಂತೆ ಎರಗಿದ್ದು, ಹಂದಿಗಳ ಮಾರಣ ಹೋಮವೇ ನಡೆದು ಹೋಗಿದೆ.

    ಮಡಿಕೇರಿಯಲ್ಲಿ ಈಗ ಆಫ್ರಿಕನ್ ಹಂದಿಜ್ವರದ ಟೆನ್ಷನ್ ಶುರುವಾಗಿದೆ. ಕಳೆದ 2 ತಿಂಗಳ ಅವಧಿಯಲ್ಲೇ ಇಲ್ಲಿನ ಗಾಳಿಬೀಡು ಗ್ರಾಮದ ಪ್ರಶಾಂತ್ ಮತ್ತು ಗಣಪತಿ ಎಂಬವರ ಹಂದಿ ಸಾಕಾಣಿಕೆ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಹಂದಿಗಳು ಈ ಮಾರಕ ರೋಗಕ್ಕೆ ಬಲಿಯಾಗಿವೆ. ಇದರಿಂದ ಹಂದಿ ಸಾಗಾಣಿಕೆ ಕೇಂದ್ರಗಳು, ಸುತ್ತಮತ್ತಲ ರೈತರಲ್ಲಿ ಆತಂಕ ಎದುರಾಗಿದೆ.

    ಹೌದು. ಮೊದಲಿಗೆ ಹಂದಿಗಳ ಸರಣಿ ಸಾವು ಕಂಡ ಪಶು ವೈದ್ಯಕೀಯ ಇಲಾಖೆ ಅವುಗಳ ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದಿಗೆ ಕಳುಹಿಸಿತ್ತು. ಬಳಿಕ ಹೈದರಾಬಾದ್ ಲ್ಯಾಬಿನಲ್ಲಿ ಅದನ್ನ ಪರೀಕ್ಷೆಗೆ ಒಳಪಡಿಸಿದಾಗ ಸಾವನ್ನಪ್ಪಿದ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಆದ್ರೆ ಲ್ಯಾಬ್ ರಿಪೋರ್ಟ್ (Lab Report) ಬರುವಷ್ಟರಲ್ಲಿ ಗಣಪತಿ ಅವರ ಎಲ್ಲಾ 21 ಹಂದಿಗಳು ಮೃತಪಟ್ಟಿದ್ವು. ಇನ್ನು ಪ್ರಶಾಂತ್ ಅವರು ತಮ್ಮ ಹಂದಿಗಳಿಗೆ ವ್ಯಾಕ್ಸಿನ್ ಕೊಡಿಸಿದ್ರು 9ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ. ಇದರಿಂದ ಲಕ್ಷಾಂತರ ರೂಪಾಯಿ ಲಾಸ್ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಎಷ್ಟು ದಿನ ಪ್ರಧಾನಿ ಹುದ್ದೆಯಲ್ಲಿರ್ತಾರೆ? – ಸುನಾಕ್ ಬಗ್ಗೆ ಬ್ರಿಟನ್‌ ಪತ್ರಿಕೆಗಳ ಅಸಮಾಧಾನ

    ಇನ್ನು ಈ ಗ್ರಾಮದಲ್ಲಿ ಐದಾರು ವರ್ಷಗಳಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿದ್ದ ರೈತರು ಮಾರಾಟಕ್ಕೆ ಸಿದ್ಧವಾಗಿದ್ದ ಹಂದಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಅತ್ತ ಆಪ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನೆಲೆ ಮತ್ತಷ್ಟು ರೋಗ ಹರಡದಂತೆ ತಡೆಯಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ. ಹಂದಿ ಸಾಕಾಣಿಕಾ ಕೇಂದ್ರದ 1 ಕಿಲೋ ಮೀಟರ್ ವ್ಯಾಪ್ತಿ ರೋಗ ಪೀಡಿತ ವಲಯವೆಂದು ಘೋಷಣೆ ಮಾಡಿದ್ದು, ಸೋಂಕಿಗೆ ತುತ್ತಾದ ಹಂದಿಗಳ ವೈಜ್ಞಾನಿಕ ವಧೆ, ಸಂಸ್ಕಾರಕ್ಕೆ ಸೂಚನೆ ನೀಡಿದೆ.

    ಒಟ್ನಲ್ಲಿ ಮೊದಲೇ ಅಕಾಲಿಕ ಮಳೆಯಿಂದ ಕಾಫಿ, ಕರಿಮೆಣಸು ಬೆಳೆ ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದ ಮಂದಿ, ಪರ್ಯಾಯವಾಗಿ ಹಂದಿ ಸಾಕಾಣಿಕೆ ಮಾಡಲು ಮುಂದಾಗಿದ್ರು. ಆದ್ರೆ ಈಗ ಇದಕ್ಕೂ ಸಂಕಷ್ಟ ಶುರುವಾಗಿರೋದು ಆತಂಕಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಸ ಎಸೆಯಲು ಹೋದ ಮಹಿಳೆ ಮೇಲೆ ಹಂದಿ ದಾಳಿ

    ಕಸ ಎಸೆಯಲು ಹೋದ ಮಹಿಳೆ ಮೇಲೆ ಹಂದಿ ದಾಳಿ

    ಧಾರವಾಡ: ಕಸ ಎಸೆಯಲೆಂದು ಹೋದಾಗ ಮಹಿಳೆಯೊಬ್ಬರ ಮೇಲೆ ಹಂದಿ ದಾಳಿ ನಡೆಸಿದ ಪರಿಣಾಮ ಕಾಲಿಗೆ ತೀವ್ರ ಗಾಯವಾಗಿರುವ ಘಟನೆ ಧಾರವಾಡ ನಗರದ ಗೌಳಿ ಗಲ್ಲಿಯಲ್ಲಿ ಸಂಭವಿಸಿದೆ.

    ಸಾಂದರ್ಭಿಕ ಚಿತ್ರ

    ಅನಿತಾ ಜಮಾದಾರ ಎಂಬವರು ಕಸ ಎಸೆಯಲೆಂದು ಹೋದಾಗ ಹಂದಿ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಅವರ ಕೈ ಹಾಗೂ ಕಾಲಿಗೆ ತೀವ್ರ ಪರಿಚಿದ ಗಾಯಗಳಾಗಿವೆ. ಅವರಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹಾರಾಡಿದ ಮಾನವರಹಿತ ಯುದ್ಧ ವಿಮಾನ – DRDO ಪರೀಕ್ಷೆ ಯಶಸ್ವಿ

    ಗೌಳಿ ಗಲ್ಲಿಯಲ್ಲಿ ಹಂದಿಗಳ ಕಾಟ ಜೋರಾಗಿದ್ದು, ಸದ್ಯ ಅನಿತಾ ಅವರ ಮೇಲೆ ಹಂದಿ ದಾಳಿ ನಡೆಸಿದ್ದರಿಂದ ಅಲ್ಲಿನ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಮಹಾನಗರ ಪಾಲಿಕೆ ಹಂದಿ ಕಾಟಕ್ಕೆ ಮುಕ್ತಿ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ

    Live Tv

  • ಮೂವರ ಸಾವಿಗೆ ಕಾರಣವಾಯ್ತು ಕಾಡುಹಂದಿ..!

    ಮೂವರ ಸಾವಿಗೆ ಕಾರಣವಾಯ್ತು ಕಾಡುಹಂದಿ..!

    ಚಿತ್ರದುರ್ಗ: ಜಿಲ್ಲೆಯ ಐಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ. ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಅಪಘಾತಕ್ಕೀಡಾದ ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು 6 ಮಂದಿ ಇದ್ದರು. ಇವರು ಬೆಂಗಳೂರಿನಿಂದ ದಾವಣಗೆರೆ, ದುರ್ಗದೇವಿ ಜಾತ್ರೆಗಾಗಿ ತೆರಳುತ್ತಿದ್ದರು. ಈ ವೇಳೆ ಐಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾಡುಹಂದಿಗೆ ಕಾರು ಡಿಕ್ಕಿ ಆಗಿದೆ. ಬಳಿಕ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ತಡರಾತ್ರಿ ಕಾರು ಅಪಘಾತ- ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

    ರವಿಚಂದ್ರ, ವಿಜಯ್ ಕುಮಾರ್ ಇಬ್ಬರ ಗುರುತು ಪತ್ತೆ ಆಗಿದ್ದು, 59 ವರ್ಷದ ಮಹಿಳೆಯ ಹೆಸರು ಪತ್ತೆ ಆಗಿಲ್ಲ. ಸ್ಥಳಕ್ಕೆ ಡಿವೈಎಸ್ಪಿ ರೋಷರ್ ಜಮೀರ್, ವೃತ್ತ ನಿರೀಕ್ಷಕ ರಾಘವೇಂದ್ರ ಭೇಟಿ ಪರಿಶೀಲನೆ ನಡೆಸಿದ್ರು. ಅಪಘಾತ ಸಂಬಂಧ ಐಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಚಿಕಾಗೋ: ಇದೇ ಮೊದಲ ಬಾರಿ ಮನುಷ್ಯನಿಗೆ ಹಂದಿ ಹೃದಯದ ಕಸಿ ಮಾಡಿದ್ದು, ಈಗ ಆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

    ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕ ವ್ಯಕ್ತಿಗೆ ಹಂದಿ ಹೃದಯವನ್ನು ಅಳವಡಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸುತ್ತ ಈ ಚಿಕಿತ್ಸೆ ಯಶಸ್ವಿಯಾಗಿದ್ದು, ಚಿಕಿತ್ಸೆಯಾದ ಮೂರು ದಿನಗಳ ನಂತರ ರೋಗಿಯು ಚೇತರಿಸಿಕೊಂಡಿದ್ದಾರೆ. ಅವರಿಗೆ ಅಳವಡಿಸಲಾದ ಹೃದಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಸಿನ್ ತಂಡವು ನಡೆಸಿದ ಶಸ್ತ್ರಚಿಕಿತ್ಸೆಯು ಹಂದಿಯಿಂದ ಮನುಷ್ಯನಿಗೆ ಮೊದಲ ಬಾರಿಗೆ ಹೃದಯ ಕಸಿ ಮಾಡಿದ್ದು, ಯಶಸ್ವಿಯಾಗಿದೆ. ಹೊಸ ಜೀನ್ ಎಡಿಟಿಂಗ್ ಉಪಕರಣಗಳಿಂದ ಶಸ್ತ್ರ ಚಿಕಿತ್ಸೆ ಸಾಧ್ಯವಾಯಿತು.

    ಮೇರಿಲ್ಯಾಂಡ್‍ನ 57 ವರ್ಷದ ಡೇವಿಡ್ ಬೆನೆಟ್‍ಗೆ, ಹೃದಯ ಕಸಿ ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಾಯುವುದು ಅಥವಾ ಈ ಕಸಿ ಮಾಡಿಸಿಕೊಳ್ಳುವುದು ನನ್ನ ಕೊನೆಯ ಆಯ್ಕೆಯಾಗಿತ್ತು. ಆದರೆ ನಾನು ಬದುಕಲು ಬಯಸುತ್ತೇನೆ. ಬದುಕಲು ನನಗೆ ಇದು ಒಂದೇ ಆಯ್ಕೆಯಾಗಿತ್ತು ಎಂದು ವಿವರಿಸಿದರು.

    Surgeon Muhammad M. Mohiuddin, MD leads a team placing a genetically-modified pig heart into a storage device at the Xenotransplant lab before its transplant on David Bennett, a 57-year-old patient with terminal heart disease, at University of Maryland Medical Center in Baltimore, Maryland, U.S. January 7, 2022. Picture taken January 7, 2022. University of Maryland School of Medicine (UMSOM)/Handout via REUTERS.

    ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಗೆ ಕಸಿ ಮಾಡಿದ ಡಾ.ಬಾಟ್ರ್ಲಿ ಗ್ರಿಫಿತ್ ಈ ಕುರಿತು ಮಾತನಾಡಿದ್ದು, ಇದು ಒಂದು ಮಹತ್ವದ ಶಸ್ತ್ರಚಿಕಿತ್ಸೆಯಾಗಿದೆ. ಅಂಗಗ ದಾನ ಮಾಡುವ ಹಲವು ದಾನಿಗಳಿದ್ದರೂ, ಹೃದಯ ದಾನ ಮಾಡುವವರು ತುಂಬಾ ಕಡಿಮೆ. ಈಗ ಈ ರೀತಿಯ ಹೊಸ ಪ್ರಯೋಗದಿಂದ ಅಂಗಗಳ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ವಿವರಿಸಿದರು.

    ಈ ರೀತಿ ಪ್ರಯೋಗ ಮಾಡಬೇಕಾದರೆ ನಾವು ಜಾಗರೂಕತೆಯಿಂದ ಮುಂದುವರಿಯಬೇಕು. ಆದರೆ ಈ ಶಸ್ತ್ರಚಿಕಿತ್ಸೆ ಪ್ರಪಂಚದಲ್ಲಿ ಮೊದಲ ಬಾರಿಗೆ ಮಾಡಲಾಗಿದೆ. ಇದು ಯಶಸ್ವಿಯಾಗಿರುವುದರಿಂದ ಇನ್ನೂ ಹೊಸ ರೀತಿಯ ಪ್ರಯೋಗ ಮಾಡುವುದಕ್ಕೆ ನಾವು ಆಶಾವಾದಿಯಾಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಹಂದಿಗಳು ಬಹಳ ಹಿಂದಿನಿಂದಲೂ ಮನುಷ್ಯನಿಗೆ ಕಸಿ ಮಾಡುವ ಮೂಲವಾಗಿದೆ. ಏಕೆಂದರೆ ಅವುಗಳ ಅಂಗಗಳು ಮನುಷ್ಯರಿಗೆ ಹೋಲುತ್ತವೆ. ಅದರಲ್ಲಿಯೂ ಮನುಷ್ಯನ ಹೃದಯ ಮತ್ತು ಹಂದಿ ಹೃದಯ ಒಂದೇ ಗಾತ್ರವನ್ನು ಹೊಂದಿರುತ್ತೆ. ಪ್ರಸ್ತುತ ಹಂದಿಗಳಿಂದ ಮಾನವರಿಗೆ ಮೂತ್ರಪಿಂಡಗಳು, ಯಕೃತ್ತು ಮತ್ತು ಶ್ವಾಸಕೋಶಗಳನ್ನು ಕಸಿ ಮಾಡಲು ಸಂಶೋಧನೆ ನಡೆಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ:  : Mekedatu Padyatra: ಮಕ್ಕಳನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್‌

    ಹಿಂದೆಯೂ ಈ ರೀತಿ ಕೆಲವು ಪ್ರಯೋಗಗಳನ್ನು ಮಾಡಲಾಗಿದ್ದು, ಹಂದಿಯ ಸೋಂಕಿನ ಅಪಾಯದಿಂದ ಮನುಷ್ಯನಿಗೆ ಕಸಿ ಮಾಡಿದ ಹಿಂದಿನ ಪ್ರಯತ್ನಗಳು ವಿಫಲವಾಗಿತ್ತು. ಆದರೆ ಈ ಪ್ರಯೋಗದಲ್ಲಿ ದಾನಿ ಹಂದಿಯ ಹೃದಯ ಅತಿಯಾದ ಬೆಳವಣಿಗೆಯನ್ನು ತಡೆಯಲು ನಾವು ಹಂದಿ ಜೀನ್ ಅನ್ನು ತೆಗೆದಿದ್ದೇವೆ. ನಮ್ಮ ಎಲ್ಲ ಪ್ರಯತ್ನಗಳಿಗೆ ಇಂದು ಯಶಸ್ಸು ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ಮಂಡ್ಯದಲ್ಲಿ 150 ಹಂದಿಗಳ ಸಜೀವ ದಹನ ಮಾಡಿದ ದುಷ್ಕರ್ಮಿಗಳು!

    ಮಂಡ್ಯದಲ್ಲಿ 150 ಹಂದಿಗಳ ಸಜೀವ ದಹನ ಮಾಡಿದ ದುಷ್ಕರ್ಮಿಗಳು!

    ಮಂಡ್ಯ: ಹಂದಿ ಸಾಕಾಣಿಕೆ ಗೂಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ 150 ಹಂದಿಗಳು ಸಜೀವ ದಹನವಾಗಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಹೊರವಲಯದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಪಾಂಡವಪುರದ ಮಹಾತ್ಮಗಾಂಧಿ ನಗರ ಬಡಾವಣೆಯ ಶಿವರಾಜು ಎಂಬವರಿಗೆ ಸೇರಿದ ಹಂದಿ ಗೂಡು ಇದಾಗಿದೆ. ಇದನ್ನೂ ಓದಿ: ಭೀಕರ ಅಪಘಾತ – ಬೈಕಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

    ಶಿವರಾಜು ಅವರು ಹೊರವಲಯದಲ್ಲಿ ಗೂಡು ನಿರ್ಮಿಸಿಕೊಂಡು ಹಂದಿ ಸಾಕಾಣಿಕೆ ಮಾಡುತ್ತಿದ್ದರು. ಯಾರು ಇಲ್ಲದಿದ್ದನ್ನ ಗಮನಿಸಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ಶಿವರಾಜು ಅವರು ಸುಮಾರು 15 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ.

    ದುಷ್ಕರ್ಮಿಗಳ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಾದಗಿರಿ ನಗರದಲ್ಲಿ ಆಪರೇಶನ್ ಪಿಗ್ ಆರಂಭ

    ಯಾದಗಿರಿ ನಗರದಲ್ಲಿ ಆಪರೇಶನ್ ಪಿಗ್ ಆರಂಭ

    – ಚೆನ್ನೈ ಮೂಲದ ಪರಿಣಿತರಿಂದ ಹಂದಿ ಹಿಡಿಯುವ ಕಾರ್ಯಾಚರಣೆ

    ಯಾದಗಿರಿ: ಹಂದಿಗಳ ಹಾವಳಿಗೆ ಯಾದಗಿರಿ ನಗರದ ಜನರು ಇಷ್ಟು ದಿನ ತತ್ತರಿಸಿ ಹೋಗಿದ್ದರು. ನಗರದ ಜನರು ಹಂದಿಗಳ ಸ್ಥಳಾಂತರ ಮಾಡುವಂತೆ ಒತ್ತಾಯ ಮಾಡಿದ ಹಿನ್ನೆಲೆ ಇಂದು ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ.

    ಗಾಂಧಿನಗರ, ತಾಂಡಾ, ಮದನಪುರ ಸೇರಿದಂತೆ ಹಲವು ಕಡೆ ಹಂದಿಗಳ ಹಾವಳಿ ಹೆಚ್ಚಾಗಿತ್ತು. ಕೆಲದಿನಗಳ ಹಿಂದೆ ಹಂದಿಗಳು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ್ದವು. ಪರಿಣಾಮ ಯಾದಗಿರಿ ನಗರದ ಜನರು ಹಂದಿಗಳನ್ನು ಸ್ಥಳಾಂತರ ಮಾಡುವಂತೆ ನಗರಸಭೆಗೆ ಒತ್ತಾಯ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳು ಹಂದಿಗಳ ಸಾಕಾಣಿಕೆ ಮಾಡುವ ಮಾಲಿಕರಿಗೆ ನೊಟೀಸ್ ನೀಡಿ ಎಚ್ಚರಿಕೆ ನೀಡಿದ್ದರು. ಆದರೂ ಹಂದಿಗಳು ತಮ್ಮ ಉಪಟಳ ಮುಂದುವರಿಸಿದ್ದವು.

    ಇದರಿಂದ ಬೇಸರಗೊಂಡ ನಗರಸಭೆ ಅಧಿಕಾರಿಗಳು ಹಂದಿಗಳ ಸ್ಥಳಾಂತರ ಮಾಡಲು ಟೆಂಡರ್ ಕರೆದಿದ್ದರು. ಚೆನ್ನೈ ಮೂಲದ ಗುತ್ತಿಗೆದಾರನಿಗೆ ಹಂದಿ ಹಿಡಿಯುವ ಟೆಂಡರ್ ಆಗಿದ್ದು, ಇಂದು ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ, ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡುವ ಕೆಲಸವನ್ನು ಮಾಡಲಾಗಿದೆ. ಚೆನ್ನೈ ಮೂಲದ 20 ನುರಿತ ವ್ಯಕ್ತಿಗಳು ಈ ಹಂದಿ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

  • ಹಂದಿ ಮಾರಾಟದಿಂದ 90 ಸಾವಿರ ರೂ. ಗಳಿಸಿದ ಬಿಬಿಎಂಪಿ

    ಹಂದಿ ಮಾರಾಟದಿಂದ 90 ಸಾವಿರ ರೂ. ಗಳಿಸಿದ ಬಿಬಿಎಂಪಿ

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಬೀಡುಬಿಟ್ಟ ಹಂದಿಗಳನ್ನು ಮಾರಾಟ ಮಾಡುವ ಮೂಲಕ ಬಿಬಿಎಂಪಿ ಪಶುಪಾಲನ ವಿಭಾಗವು ಸುಮಾರು 90 ಸಾವಿರ ರೂಪಾಯಿ ಹಣ ಗಳಿಸಿದೆ.

    ಬೀಡಾಡಿ ಹಂದಿಗಳನ್ನು ಹಂದಿ ಮಾರಾಟಗಾರರೇ ಹಿಡಿದು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನ ಪಾಲಿಕೆಗೆ ನೀಡುವ ಯೋಜನೆ ಇದಾಗಿದೆ. ಈ ಪ್ರಕ್ರಿಯೆ ಕಳೆದ 3 ತಿಂಗಳಿಂದ ನಡೆಯುತ್ತಿದೆ. ಸದ್ಯ ಬೊಮ್ಮನಹಳ್ಳಿ ಸುತ್ತಮುತ್ತ ಇದ್ದ ಬೀಡಾಡಿ ಹಂದಿಗಳನ್ನು ಹಿಡಿದು ಮಾರಾಟ ಮಾಡಿ, ಹಣ ಗಳಿಕೆ ಮಾಡಲಾಗಿದೆ.

    ಈ ಹಂದಿಗಳನ್ನು ಹಿಡಿಯಲು ಟೆಂಡರ್ ಮಾಡಿ ಅನುಮತಿ ಪಡೆದಿರಬೇಕು ಎಂದು ಬಿಬಿಎಂಪಿ ತಿಳಿಸಿದೆ. ಅಷ್ಟೇ ಅಲ್ಲದೆ ಅನಧಿಕೃತ ಹಂದಿ ಸಾಕಾಣಿಕೆ ಜಾಲದ ಮೇಲೆ ಪಾಲಿಕೆ ಕಣ್ಣು ಇಟ್ಟಿದ್ದು, ನಗರದಲ್ಲಿ ಬೀಡಾಡಿ ಹಂದಿ ಮಾರಾಟ ಮಾಡಲು ಅವಕಾಶ ಇಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ.

  • ದಾವಣಗೆರೆಯಲ್ಲಿ ಹಂದಿ ದಾಳಿ- 3 ವರ್ಷದ ಕಂದಮ್ಮ ಗಂಭೀರ ಗಾಯ

    ದಾವಣಗೆರೆಯಲ್ಲಿ ಹಂದಿ ದಾಳಿ- 3 ವರ್ಷದ ಕಂದಮ್ಮ ಗಂಭೀರ ಗಾಯ

    ದಾವಣಗೆರೆ: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ದಾಳಿಯಾದ್ರೆ, ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಕ್ಕಳು ಹಂದಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ಶನಿವಾರ ಸಂಜೆ ನಗರದ ಬೇತೂರು ರಸ್ತೆಯ ಮುದ್ದ ಬೋವಿ ಕಾಲೋನಿಯಲ್ಲಿ ಹಂದಿ ದಾಳಿಗೆ ಮೂರು ವರ್ಷದ ಕಂದಮ್ಮ ಗಂಭೀರವಾಗಿ ಗಾಯಗೊಂಡಿದೆ.

    ಸೃಜನ್ ಎಂಬ ಪುಟ್ಟ ಕಂದಮ್ಮ ಹಂದಿ ದಾಳಿಗೆ ಒಳಗಾಗಿದ್ದಾನೆ. ಮುದ್ದ ಬೋವಿ ಕಾಲೋನಿ ನಿವಾಸಿ ಗಣೇಶ್ ಮತ್ತು ಶಾರದ ದಂಪತಿ ಪುತ್ರ ಸೃಜನ್ ಶನಿವಾರ ಸಂಹೆ ಮನೆಯ ಮುಂದೆ ಆಟವಾಡುತ್ತಿದ್ದನು. ಏಕಾಏಕಿ ಬಾಲಕನ ಮೇಲೆ ಎಗರಿದ ಹಂದಿ ಆತನ ಕಿವಿ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಎರಡು ತಿಂಗಳ ಹಿಂದೆ ಇದೇ ದಂಪತಿಯ ಹಿರಿಯ ಪುತ್ರ ಚಂದ್ರು ಮೇಲೆಯೂ ಹಂದಿಗಳು ದಾಳಿ ನಡೆಸಿದ್ದವು.

    ಕಳೆದ ಮೂರು ತಿಂಗಳಲ್ಲಿ ಇದು ನಾಲ್ಕನೇ ದಾಳಿಯಾಗಿದೆ. ಬಿಡಾಡಿ ಹಂದಿಗಳ ಹಾವಳಿ ತಪ್ಪಿಸುವಂತೆ ಸ್ಥಳೀಯ ನಿವಾಸಿಗಳು ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಮಹಾನಗರ ಪಾಲಿಕೆ ಹಂದಿಗಳ ಹಾವಳಿ ತಡೆಯುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv