Tag: Pickup Vehicles

  • ಗೋಣಿಚೀಲದಲ್ಲಿ ಬಚ್ಚಿಟ್ಟುಕೊಂಡು ಗ್ರಾಮಕ್ಕೆ ಹೋಗುತ್ತಿದ್ದವರು ಕ್ವಾರಂಟೈನ್ ಘಟಕಕ್ಕೆ ಶಿಫ್ಟ್

    ಗೋಣಿಚೀಲದಲ್ಲಿ ಬಚ್ಚಿಟ್ಟುಕೊಂಡು ಗ್ರಾಮಕ್ಕೆ ಹೋಗುತ್ತಿದ್ದವರು ಕ್ವಾರಂಟೈನ್ ಘಟಕಕ್ಕೆ ಶಿಫ್ಟ್

    – ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದ ಮಾಲೀಕ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಪಿಕ್‍ಅಪ್ ವಾಹನದಲ್ಲಿ ಗೋಣಿಚೀಲದೊಳಗೆ ಬಚ್ಚಿಟ್ಟುಕೊಂಡು ಊರಿಗೆ ಹೋಗುತ್ತಿದ್ದ 30ಕ್ಕೂ ಹೆಚ್ಚು ಜನರನ್ನ ಕ್ವಾರಂಟೈನ್ ಘಟಕಕ್ಕೆ ಶಿಫ್ಟ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಕೊರೊನಾ ಆತಂಕದಿಂದ ಇಡೀ ದೇಶವೇ ಕಂಗಾಲಾಗಿದೆ. ಊರಿಗೆ ಹೋಗಲಾಗದೆ ಲಕ್ಷಾಂತರ ಜನ ಇದ್ದಲ್ಲೇ ದಿನ ದೂಡುತ್ತಿದ್ದಾರೆ. ಕೆಲವರು ನಡೆದೇ ಊರು ಸೇರಿದ್ದಾರೆ. ಆದರೆ ಕಳೆದ ಹತ್ತು ದಿನಗಳಿಂದ ಮಾಲೀಕನೂ ಕೈ ಬಿಟ್ಟು, ಕೂಲಿಯೂ ಇಲ್ಲದೆ ಆತಂಕದಲ್ಲಿ ಬದುಕುತ್ತಿದ್ದ ಬಳ್ಳಾರಿ ಜಿಲ್ಲೆಯ ಹಗರಿಮೊಮ್ಮನಹಳ್ಳಿ ಮೂಲದ 30ಕ್ಕೂ ಹೆಚ್ಚು ಕಾರ್ಮಿಕರು ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ಬಂದಿದ್ದ ಪಿಕ್‍ಅಪ್ ವಾಹನದಲ್ಲಿ ಹೋಗಲು ಯತ್ನಿಸಿದ್ದರು.

    ಈ ಕೂಲಿ ಕಾರ್ಮಿಕರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಎಸ್ಟೇಟ್‍ವೊಂದರಲ್ಲಿ ಮೆಣಸು ಕೊಯ್ಯುವುದಕ್ಕೆ ಬಂದಿದ್ದರು. ಮೆಣಸನ್ನು ಕೊಯ್ದ ಬಳಿಕ ತೋಟದ ಮಾಲೀಕ ಕೆಲಸ ಮುಗಿತು ನೀವು ಹೊರಡಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಬೇರೆ ಕೆಲಸದವರು ಬರುತ್ತಾರೆ ಲೈನ್ ಮನೆ ಖಾಲಿ ಮಾಡಿ ಎಂದು ಸೂಚಿಸಿದ್ದರು. ಅದೇ ಆತಂಕದಲ್ಲಿದ್ದ ಕಾರ್ಮಿಕರು ಮಕ್ಕಳು-ಮರಿಗಳ ಜೊತೆ ಲೈನ್ ಮನೆಯಲ್ಲಿ ದಿನ ದೂಡುತ್ತಿದ್ದರು. ತೋಟದ ಮಾಲೀಕ ಹೋಗುತ್ತಿರೋ ಇಲ್ಲೋ ನಾನೇ ಹೊರ ಹಾಕಬೇಕೋ ಎಂದು ಗದರಿದ್ದಕ್ಕೆ ಊರಿಗೆ ಹೋಗಲು ಪಿಕ್‍ಅಪ್ ವಾಹನದಲ್ಲಿ ಕುರಿಯಂತೆ ಕದ್ದು ಕೂತು ಬಳ್ಳಾರಿಗೆ ಹೊರಟಿದ್ದರು.

    ಬೇಲೂರು ಚೆಕ್‍ಪೋಸ್ಟ್ ದಾಟಿ ಚಿಕ್ಕಮಗಳೂರಿಗೆ ಬರ್ತಿದ್ದಂತೆ ನಗರ ಪೊಲೀಸರು ಗಾಡಿಯನ್ನ ಚೆಕ್ ಮಾಡಿದಾಗ ಎಲ್ಲರೂ ಸಿಕ್ಕಿದ್ದಾರೆ. ಇದೀಗ ಎಲ್ಲರನ್ನೂ ನಗರದ ನರಿಗುಡ್ಡನಹಳ್ಳಿಯ ಬಳಿ ಇರುವ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ. ಆದರೆ ಬೆಂಗಳೂರಿನಲ್ಲಿ ವೈದ್ಯನಾಗಿರುವ ತೋಟದ ಮಾಲೀಕ ಕೂಲಿ ಕಾರ್ಮಿಕರಿಗೆ ಹಣವನ್ನೂ ನೀಡಿಲ್ಲ. ಕಳೆದ ಎಂಟತ್ತು ದಿನಗಳಿಂದ ಊಟದ ವ್ಯವಸ್ಥೆಯನ್ನೂ ಮಾಡಿಲ್ಲ. ಇವರೇ ಅಡುಗೆ ಮಾಡಿಕೊಳ್ಳಲು ತೋಟದಲ್ಲಿ ಸ್ವಲ್ಪ ಸೌಧೆಯನ್ನ ಬಳಸಿಕೊಂಡಿದ್ದಕ್ಕೆ ಐದು ಸಾವಿರ ರೂ. ಕೂಲಿ ಹಣದಲ್ಲಿ ಮುರಿದು ಕೊಟ್ಟಿದ್ದಾರೆ ಎಂದು ಕೂಲಿ ಕಾರ್ಮಿಕರು ದೂರಿದ್ದಾರೆ.

    ಪಿಕ್‍ಅಪ್ ವಾಹನದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಜನರಿದ್ದರು. ಅವರೆಲ್ಲಾರಿಗೂ ಚಿಕ್ಕಮಗಳೂರು ಜಿಲ್ಲಾಡಳಿತ ವಸತಿ-ಊಟದ ಸೌಲಭ್ಯ ಕಲ್ಪಿಸಿದೆ.

  • ಅಪರಿಚಿತ ವಾಹನ ಡಿಕ್ಕಿ – ಮದ್ವೆಯಿಂದ ವಾಪಸ್ ಬರ್ತಿದ್ದ 9 ಮಂದಿ ಸಾವು

    ಅಪರಿಚಿತ ವಾಹನ ಡಿಕ್ಕಿ – ಮದ್ವೆಯಿಂದ ವಾಪಸ್ ಬರ್ತಿದ್ದ 9 ಮಂದಿ ಸಾವು

    ಲಕ್ನೋ: ಪಿಕಪ್ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹಫೀಜ್‍ಪುರ್ ನಲ್ಲಿ ನಡೆದಿದೆ.

    ಪಿಕಪ್ ವಾಹನದಲ್ಲಿದ್ದ ಪ್ರಯಾಣಿಕರು ಮದುವೆಗೆ ಹೋಗಿದ್ದು, ವಿವಾಹ ಕಾರ್ಯಕ್ರಮವನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ಈ ವೇಳೆ ಉತ್ತರ ಪ್ರದೇಶದ ಹಫೀಜ್‍ಪುರ್ ಬಳಿ ವೇಗವಾಗಿ ಬಂದಂತಹ ವಾಹವೊಂದು ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದ 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಗಾಯಗೊಂಡವರನ್ನು ರಕ್ಷಣೆ ಮಾಡಿದ್ದಾರೆ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರನ್ನು ಮೀರತ್‍ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಎಎಸ್‍ಪಿ ಸರ್ವೇಶ್ ಕುಮಾರ್ ಹೇಳಿದ್ದಾರೆ.

    ಸದ್ಯಕ್ಕೆ ಈ ಕುರಿತು ಪೊಲೀಸರು ತನಿಖೆ ಶುರುಮಾಡಿದ್ದು, ಅಪರಿಚಿತ ವಾಹನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.