Tag: Physician

  • ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ

    ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ

    ಚಿತ್ರದುರ್ಗ: ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ತಿಳಿಸಿದ್ದಾರೆ.

    ಕರ್ನಾಟಕ ಕಿವಿ, ಮೂಗು ಆಸ್ಪತ್ರೆಯಲ್ಲಿ ಕೋವಿಡ್-19ಗೆ ಚಿಕಿತ್ಸೆ ಪಡೆದಿದ್ದ ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ 50 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಗುಣಮುಖರಾದ ಒಂದು ತಿಂಗಳ ಬಳಿಕ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಪ್ರತಿದಿನ ಮಾಸ್ಕ್ ಧರಿಸಿ ಗಾಯವಾಗಿರುವ ಪರಿಣಾಮ, ಅವರ ಕಿವಿ ಭಾಗದಲ್ಲಿ ಬ್ಲಾಕ್ ಫಂಗಸ್ ಸೋಂಕು ಪತ್ತೆಯಾಗಿದೆ. ಆ ವ್ಯಕ್ತಿ ಹೆಚ್ಚು ಸ್ಟಿರಾಯ್ಡ್ ಬಳಸಿರುವುದರಿಂದ ಬ್ಲಾಕ್ ಫಂಗಸ್ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.

    ಚರ್ಮದಲ್ಲಿ ಪತ್ತೆಯಾಗಿರುವ ಈ ಬ್ಲಾಕ್ ಫಂಗಸ್ ಹೆಚ್ಚು ಮಧುಮೇಹವಿರುವ ರೋಗಿಗಳಲ್ಲಿ ಪತ್ತೆಯಾಗಲಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಈ ಸೋಂಕಿಗೆ ಸರ್ಜರಿ ಮೂಲಕ ಗುಣ ಮಾಡಲು ಸಿದ್ಧತೆಗಳಾಗಿವೆ. ಬ್ಲಾಕ್ ಫಂಗಸ್ ಆಗಿರುವ ಜಾಗವನ್ನು ಸಂಪೂರ್ಣ ಸರ್ಜರಿ ಮೂಲಕ ತೆಗೆದು ಹಾಕಲಾಗುತ್ತದೆ. ಬಳಿಕ ಬೇರೆಡೆಯ ಚರ್ಮವನ್ನು ಆ ಜಾಗಕ್ಕೆ ಹಾಕಿ ಸರ್ಜರಿ ಮಾಡುವ ಮೂಲಕ ಬ್ಲಾಕ್ ಫಂಗಸ್ ಸೋಂಕನ್ನು ಗುಣಪಡಿಸುವ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಇದನ್ನು ಓದಿ: ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ವಾರ್ಡ್ ಬಾಯ್ ಅರೆಸ್ಟ್

  • ಹುಟ್ಟುಹಬ್ಬಕ್ಕೆ ಗಿಫ್ಟ್ ಬೇಡ, ರಕ್ತದಾನ ಮಾಡಿ – 6ರ ಬಾಲಕಿಯ ಮನವಿ

    ಹುಟ್ಟುಹಬ್ಬಕ್ಕೆ ಗಿಫ್ಟ್ ಬೇಡ, ರಕ್ತದಾನ ಮಾಡಿ – 6ರ ಬಾಲಕಿಯ ಮನವಿ

    ಮುಂಬೈ: ಮಹಾರಷ್ಟ್ರದ ಪಾಲಗಢದ ಆರು ವರ್ಷದ ಬಾಲಕಿ ತನ್ನ ಜನ್ಮದಿನಾಚರಣೆಯನ್ನು ಆಚರಿಸದಿರಲು ನಿರ್ಧರಿಸಿ, ಕೊರೊನಾ ಬಿಕ್ಕಟ್ಟಿನ ನಡುವೆ ರಕ್ತದಾನ ಮಾಡುವಂತೆ ಮನವಿ ಮಾ ಸುದ್ದಿಯಾಗಿದ್ದಾಳೆ.

    ಮಹಾರಾಷ್ಟ್ರದ ಪಾಲಗಢ ಜಿಲ್ಲೆಯ ವಾಡಾ ತಾಲ್ಲೂಕಿನ ಗಂಡ್ರೆ ಗ್ರಾಮದ ನಿವಾಸಿಯಾಗಿರುವ ಯುಗ ಅಮೋಲ್ ಠಾಕ್ರೆ ಎಂಬ ಬಾಲಕಿಗೆ ಶನಿವಾರ 6 ವರ್ಷ ತುಂಬಿದೆ. ಮಾಧ್ಯಮವೊಂದರಲ್ಲಿ ರಕ್ತದಾನ ಮಾಡುವಂತೆ ಮನವಿ ಮಾಡಿರುವುದನ್ನು ನೋಡಿದ ಬಾಲಕಿ ತನ್ನ ಕುಟುಂಬಸ್ಥರಿಗೆ ಈ ಬಾರಿ ತನ್ನ ಹುಟ್ಟುಹಬ್ಬವನ್ನು ಆಚರಿಸದಂತೆ ಹಾಗೂ ಉಡುಗೊರೆ ನೀಡದಂತೆ ಕೇಳಿಕೊಂಡಿದ್ದಾಳೆ. ಬಳಿಕ ಅಂದು ರಕ್ತದಾನ ಮಾಡಿ ಎಂದು ಕೇಳಿಕೊಂಡಿದ್ದಾಳೆ.

    ಬಾಲಕಿ ಮನವಿಗೆ ಸ್ಪಂದಿಸಿದ ಕುಟುಂಬ ಸದಸ್ಯರು ಮತ್ತು ಸಂಬಂಧಿಗಳು, ಸ್ನೇಹಿತರು ಸೇರಿದಂತೆ 36 ಮಂದಿ ಶನಿವಾರ ಕಲ್ಯಾಣಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ.

    ಈ ಕುರಿತಂತೆ ಡಾ. ವೈಭವ್ ಠಾಕ್ರೆ, ಇದು ನಿಜವಾಗಿಯೂ ಉತ್ತಮವಾದ ಆಲೋಚನೆಯಾಗಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಗುವಿನ ಕಾರ್ಯ ಬಗ್ಗೆ ನಮಗೆ ಹೆಮ್ಮೆ ಇದೆ. ಸದ್ಯ ದಾನ ಮಾಡಿದ ರಕ್ತವನ್ನು ನೆರೆಯ ಥಾಣೆಯಲ್ಲಿರುವ ವಾಮನ್‍ರಾಕ್ ಓಕ್ ಬ್ಲಡ್ ಬ್ಯಾಂಕ್‍ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

  • ಕೊರೊನಾ ಚಿಕಿತ್ಸೆ ನೀಡಿದ್ದ ಡಾಕ್ಟರ್​​ಗೆ ಸೋಂಕು – ಶ್ವಾಸಕೋಶ ಸಮಸ್ಯೆಯಿಂದ ನರಳಾಟ

    ಕೊರೊನಾ ಚಿಕಿತ್ಸೆ ನೀಡಿದ್ದ ಡಾಕ್ಟರ್​​ಗೆ ಸೋಂಕು – ಶ್ವಾಸಕೋಶ ಸಮಸ್ಯೆಯಿಂದ ನರಳಾಟ

    – ಲಾಕ್‍ಡೌನ್ ವೇಳೆ ಹಲವು ಸೋಂಕಿತರಿಗೆ ಚಿಕಿತ್ಸೆ ನೀಡಿರುವ ವೈದ್ಯ
    – ಚಿಕಿತ್ಸಾ ವೆಚ್ಚ ಭರಿಸಲಾಗಿದೆ ಸಂಕಷ್ಟ

    ಬೆಂಗಳೂರು: ಕೊರೊನಾ ವಾರಿಯರ್ಸ್‍ಗೆ ಸೋಂಕಿನ ಕಾಟ ಶುರುವಾಗಿದ್ದು, ಮಹಾಮಾರಿ ಜೊತೆಗೆ ಇತರೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದೀಗ ವೈದ್ಯರೊಬ್ಬರಿಗೆ ಕೊರೊನಾ ಸೋಂಕಿನ ಜೊತೆಗೆ ಶ್ವಾಸಕೋಶ ಸಮಸ್ಯೆ ಸಹ ಎದುರಾಗಿದೆ.

    ಇಷ್ಟು ದಿನ ಹಲವರನ್ನು ಕೊರೊನಾದಿಂದ ಕಾಪಾಡಿದ ಮೂತ್ರಪಿಂಡ ತಜ್ಞ ವೈದ್ಯ ಡಾ.ಬಾಲಾಜಿ ಪ್ರಸಾದ್‍ಗೆ ಕೊರೊನಾ ಸೋಂಕು ತಗುಲಿದ್ದು ಇದರ ಜೊತೆಗೆ ಶ್ವಾಸಕೋಶ ಸಮಸ್ಯೆ ಸಹ ಎದುರಾಗಿದೆ. ಹೀಗಾಗಿ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವ ಉಳಿಸಿದ ವೈದ್ಯನಿಗೆ ಈಗ ಹಣದ ನೆರವಿನ ಅಗತ್ಯವಿದ್ದು, ನಿತ್ಯ ಚಿಕಿತ್ಸೆಗೆ ಲಕ್ಷ ರೂ. ಭರಿಸುತ್ತಿದ್ದಾರೆ. ಅಲ್ಲದೆ ಶ್ವಾಸಕೋಶ ಟ್ರಾನ್ಸ್‍ಫರ್ ಆಗಬೇಕಿದ್ದು, ಇದರ ವೆಚ್ಚವೇ ಬರೋಬ್ಬರಿ 1.20 ಕೋಟಿ ರೂ. ಆಗಿದೆ.

    ಇಕೋಮೊ ಟ್ರಿಟ್‍ಮೆಂಟ್ ಹಾಗೂ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 26 ದಿನಗಳಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮಕ್ಕಳು ಹಾಗೂ ಪತ್ನಿಗೆ ಇವರ ಚಿಕಿತ್ಸಾ ವೆಚ್ಚ ಭರಿಸುವುದು ದೊಡ್ಡ ಸವಾಲಾಗಿದೆ. ಲಾಕ್‍ಡೌನ್ ವೇಳೆ 100ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ವೈದ್ಯ ಚಿಕಿತ್ಸೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಈಗ ಸಮಸ್ಯೆ ಎದುರಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ.

  • ಕಾಫಿನಾಡಲ್ಲಿ ವೈದ್ಯ, ಕಂಡಕ್ಟರ್, ಪೇದೆಗೆ ಕೊರೊನಾ

    ಕಾಫಿನಾಡಲ್ಲಿ ವೈದ್ಯ, ಕಂಡಕ್ಟರ್, ಪೇದೆಗೆ ಕೊರೊನಾ

    ಚಿಕ್ಕಮಗಳೂರು: ಕಳೆದ 45 ದಿನಗಳಿಂದ ಬರುತ್ತಿರುವ ಒಂದು-ಎರಡು ಕೇಸ್ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85ರ ಗಡಿ ತಲುಪಿದ್ದು, ದಿನ ಕಳೆದಂತೆ ಜಿಲ್ಲೆಯ ಜನರ ಆತಂಕ ಕೂಡ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

    ಮೂರು ಹೊಸ ಪ್ರಕರಣಗಳಲ್ಲಿ ಓರ್ವ ವೈದ್ಯ, ಮತ್ತೋರ್ವ ಸರ್ಕಾರಿ ಬಸ್ ಕಂಡಕ್ಟರ್, ಮಗದೊಬ್ಬ ಬೆಂಗಳೂರಿನಿಂದ ಹಿಂದಿರುಗಿದ ಪೇದೆ. ವೈದ್ಯ ಹಾಗೂ ಕಂಡಕ್ಟರ್ ಈ ಎರಡೂ ಪ್ರಕರಣಗಳು ಜಿಲ್ಲಾಡಳಿತ ಹಾಗೂ ಜನರ ಆತಂಕವನ್ನು ಹೆಚ್ಚಾಗಿಸಿವೆ. ವೈದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯ ಕೆಲಸ ಮಾಡುತ್ತಿದ್ದು, ಇದೀಗ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.

    ವೈದ್ಯಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಕಂಡಕ್ಟರ್ ಕೂಡ ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರಿನವರು. ಪ್ರತಿದಿನ ಅರಸೀಕೆರೆಯಿಂದ ಹಾಸನ ಮಾರ್ಗವಾಗಿ ಓಡಾಡುತ್ತಿದ್ದರು. ಕೆಲಸ ಮುಗಿಸಿ ಅರಸೀಕೆರೆಯಿಂದ ಚೌಳಹಿರಿಯೂರಿನ ಮನೆಗೆ ಬೈಕ್ ಮೂಲಕ ಬರುತ್ತಿದ್ದರು. ಇದೀಗ ಕಂಡಕ್ಟರ್‍ ಗೂ ಕೊರೊನಾ ಸೋಂಕು ತಗುಲಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

    ಕಂಡಕ್ಟರ್ ಗೆ ಕೊರೊನಾ ಹೇಗೆ ಬಂದಿತು ಎಂಬುದರ ಜೊತೆಗೆ ಇವರು ಎಷ್ಟು ಜನರಿಗೆ ಸೋಂಕು ಹಚ್ಚಿದ್ದಾರೆ ಎಂಬ ಭಯ ಸಹ ಹೆಚ್ಚಾಗಿದೆ. ಕಂಡಕ್ಟರ್ ಗ್ರಾಮದಲ್ಲಿ ತೋಟ-ಮನೆಗೆಲ್ಲ ಓಡಾಡಿದ್ದಾರೆ. ಈಗಾಗಲೇ ತಾಲೂಕು ಆಡಳಿತ ಕಂಡಕ್ಟರ್ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಹನ್ನೆರಡಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲು ಸೂಚಿಸಿದೆ. ಬೆಂಗಳೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿನ ಪೇದೆಗೂ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕದವರನ್ನು ಪತ್ತೆ ಹಚ್ಚಲಾಗುತ್ತಿದೆ.

  • ಕಂಠಪೂರ್ತಿ ಕುಡಿದು ರೋಗಿಯ ಮೇಲೆ ಬಿದ್ದು ಗೂಸಾ ತಿಂದ ವೈದ್ಯ

    ಕಂಠಪೂರ್ತಿ ಕುಡಿದು ರೋಗಿಯ ಮೇಲೆ ಬಿದ್ದು ಗೂಸಾ ತಿಂದ ವೈದ್ಯ

    ಲಕ್ನೋ: ಕಂಠಪೂರ್ತಿ ಕುಡಿದು ಪರೀಕ್ಷಿಸುತ್ತಿರುವುದನ್ನು ಕಂಡು ರೋಗಿಯ ಕುಟುಂಬಸ್ಥರು ವೈದ್ಯನನ್ನು ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮದನ್ ಎಂಬುವರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಕುಟುಂಬಸ್ಥರು ರೋಗಿಯನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆಸ್ಪತ್ರೆಯ ವೈದ್ಯ ರೋಗಿಯನ್ನು ಪರೀಕ್ಷಿಸುವ ವೇಳೆ ರೋಗಿಯ ಮೇಲೆಯೇ ಬಿದ್ದಿದ್ದಾನೆ. ಇದನ್ನು ಕಂಡ ರೋಗಿಯ ಸಂಬಂಧಿಕರು ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಅಪಘಾತದಿಂದ ತೀವ್ರ ಗೊಂಡಿದ್ದ ಮದನ್‍ನನ್ನು ಆಸ್ಪತ್ರೆಗೆ ಕರೆ ತಂದೆವು. ಆಸ್ಪತ್ರೆಗೆ ಬರುತ್ತಿದ್ದಂತೆ ವೈದ್ಯರು ರೋಗಿಯನ್ನು ದಾಖಲಿಸಲು 10 ಸಾವಿರ ರೂ. ನೀಡುವಂತೆ ಕೇಳಿದರು. ಆದರೂ ರೋಗಿ ತೀವ್ರ ಗಾಯಗೊಂಡಿದ್ದರಿಂದ ಹೇಗೋ ಮಾಡಿ 5 ಸಾವಿರ ರೂ. ನೀಡಿದೆವು. ವೈದ್ಯರು ಉಳಿದ ಹಣವನ್ನೂ ನೀಡುವಂತೆ ಬೇಡಿಕೆ ಇಟ್ಟರು. ಅಲ್ಲದೆ, ಉಳಿದ ಹಣ ನೀಡದಿದ್ದಲ್ಲಿ ಬೇರೆ ಆಸ್ಪತ್ರೆಯನ್ನು ಸೂಚಿಸುವುದಿಲ್ಲ ಎಂದು ಹೆದರಿಸಿದರು ಎಂದು ರೋಗಿ ಮದನ್ ಸಹೋದರ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

    ನಾನು ದಯಾಮಾಡಿ ಬೇರೆ ಆಸ್ಪತ್ರೆಯನ್ನು ಸೂಚಿಸಿ ಎಂದು ಕೇಳಿದಾಗ ವೈದ್ಯರು ನನಗೆ ಹೊಡೆದರು. ನಂತರ ಜಗಳ ಪ್ರಾರಂಭವಾಯಿತು. ಅಲ್ಲದೆ, ವೈದ್ಯರು ತುಂಬಾ ಕುಡಿದಿದ್ದರು. ನಿಲ್ಲಲು ಸಾಧ್ಯವಾಗದೆ ನನ್ನ ತಮ್ಮನ ಮೇಲೂ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಕುಟುಂಬದ ಇತರ ಸದಸ್ಯರು ಸಹ ಇದೇ ರೀತಿ ಆರೋಪ ಮಾಡಿದ್ದಾರೆ.

  • ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಶಿಮ್ಲಾ: ಮನುಷ್ಯನೊಬ್ಬನ ಹೊಟ್ಟೆಯೊಳಗೆ 8 ಸ್ಪೂನ್ಸ್ ಮತ್ತು 2 ಸ್ಕ್ರೂ ಡ್ರೈವರ್, 2 ಟೂತ್‍ಬ್ರೆಶ್ ಮತ್ತು ಚಾಕುವನ್ನು ನೋಡಿದ ಡಾಕ್ಟರ್‍ಗಳು ಶಾಕ್ ಆಗಿದ್ದಾರೆ.

    ಈ ಘಟನೆ ಮಂಡಿ ಎಂಬ ನಗರದಲ್ಲಿ ನಡೆದಿದೆ. ಇಲ್ಲಿನ ಕರ್ನ್ ಸೇನ್ ಎಂಬ 35 ವರ್ಷದ ವ್ಯಕ್ತಿಯು ಅಡುಗೆ ಮನೆಯಲ್ಲಿ ಇರಬೇಕಾದ ಸ್ಪೂನ್ಸ್, ಸ್ಕ್ರೂ ಡ್ರೈವರ್, ಟೂತ್‍ಬ್ರೆಶ್ ಮತ್ತು ಚಾಕು ಎಲ್ಲಾ ವಸ್ತುಗಳನ್ನು ಹೊಟ್ಟೆಯಲ್ಲೇ ಇಟ್ಟಕೊಂಡಿದ್ದಾನೆ.

    ಕೆಲ ದಿನಗಳ ಹಿಂದೆ ಕರ್ನ್ ಸೇನ್ ಹೊಟ್ಟೆಯಲ್ಲಿ ಹುಣ್ಣಿದೆ ಎಂದು ಹೇಳಿದ್ದನು. ಇದರಿಂದ ಮನೆಯವರು ಅವನನ್ನು ಸುಂದರ್ ನಗರದ ಅಸ್ಪತ್ರೆಗೆ ಕೆರದುಕೊಂಡು ಬಂದಿದ್ದಾರೆ. ಪ್ರಾಥಮಿಕ ಪರೀಕ್ಷೆಯ ನಂತರ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಅಸ್ಪತ್ರೆಗೆ ಕಳುಹಿಸಲಾಗಿದೆ.

    ಇಲ್ಲಿ ಅವರಿಗೆ ಎಕ್ಸ್-ರೇ ಮಾಡಲಾಗಿದೆ. ಈ ವೇಳೆ ಅವರ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡು ಬಂದಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಮೂರು ಜನ ವೈದ್ಯರ ತಂಡ 4 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರಕ್ಕೆ ತೆಗೆದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಾಕ್ಟರ್, ಇದು ತಂಬ ಅಪರೂಪದ ಪ್ರಕರಣ ಎಕ್ಸ್-ರೇ ಯಲ್ಲಿ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡುಬಂದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದೇವೆ. ಈ ರೋಗಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ. ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.

  • ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ: ಮಠದ ವೈದ್ಯ ಪರಮೇಶ್ ಸ್ಪಷ್ಟನೆ

    ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ: ಮಠದ ವೈದ್ಯ ಪರಮೇಶ್ ಸ್ಪಷ್ಟನೆ

    ತುಮಕೂರು: ಶ್ರೀ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಕ್ತಾದಿಗಳು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಮಠದ ವೈದ್ಯರಾದ ಡಾ. ಪರಮೇಶ್ ಹೇಳಿದ್ದಾರೆ.

    ಶ್ರೀಗಳ ಆರೋಗ್ಯದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೈದ್ಯರು, ಪ್ರತಿದಿನ ಶ್ರೀಗಳ ರಕ್ತತಪಾಸಣೆ ಮಾಡುತ್ತಿದ್ದೇವೆ. ಎರಡು ದಿನಗಳ ಹಿಂದೆ ರಕ್ತದಲ್ಲಿ ಸೋಂಕು ಇದೆ ಎಂಬ ಅಂಶ ಪತ್ತೆಯಾಗಿತ್ತು. ಈ ಸಂಂಬಂಧ ನಾವು ಈಗಾಗಲೇ ಚಿಕಿತ್ಸೆ ನೀಡಿದ್ದೇವೆ. ಚಿಕಿತ್ಸೆಯಿಂದಾಗಿ ಸೋಂಕಿನ ಪರಿಣಾಮ ಕಡಿಮೆ ಆಗುತ್ತಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ನೀಡಿದ್ರೆ ಸಂಪೂರ್ಣ ಸೋಂಕು ನಿವಾರಣೆ ಆಗಲಿದೆ. ಇಂದು ಬೆಳಗ್ಗೆ ಇಷ್ಟಲಿಂಗ ಪೂಜೆ ನರೆವೇರಿಸಿ ದ್ರವ ಆಹಾರ ಸೇವನೆ ಮಾಡಿದ್ದಾರೆ ಎಂದು ತಿಳಿಸಿದರು.

    ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ 4ರಿಂದ 5 ವಾರ ಐಸಿಯುನಲ್ಲಿಯೇ ವಿಶ್ರಾಂತಿ ಮಾಡಬೇಕೆಂದು ಡಾ.ರೇಲಾ ಸಲಹೆ ನೀಡಿದ್ದರು. ಆದ್ರೆ ಶ್ರೀಗಳು ಮಠಕ್ಕೆ ಹೋಗಬೇಕೆಂದು ಹಠ ಹಿಡಿದ್ದರಿಂದ ಕರೆತರಲಾಯ್ತು. ಹಳೆ ಮಠದ ಕೊಠಡಿಯನ್ನು ಐಸಿಯು ಮಾದರಿಯಲ್ಲಿ ಬದಲಾಯಿಸಲಾಗಿದೆ. ಶ್ರೀಗಳಿಗೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಭಕ್ತಾದಿಗಳಲ್ಲಿ ವೈದ್ಯರು ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೆದುಳಿನಲ್ಲಿ ಈಜಾಡ್ತಿದ್ದ 10 ಸೆಂ.ಮೀ. ಉದ್ದದ ಜೀವಂತ ಕೀಟವನ್ನ ಹೊರ ತೆಗೆದ ವೈದ್ಯರು

    ಮೆದುಳಿನಲ್ಲಿ ಈಜಾಡ್ತಿದ್ದ 10 ಸೆಂ.ಮೀ. ಉದ್ದದ ಜೀವಂತ ಕೀಟವನ್ನ ಹೊರ ತೆಗೆದ ವೈದ್ಯರು

    ಬೀಜಿಂಗ್: ಮೆದುಳಿನಲ್ಲಿ ಈಜಾಡುತ್ತಿದ್ದ 10 ಸೆಂ.ಮೀ. ಉದ್ದದ ಕೀಟವನ್ನು ವೈದ್ಯರು ಹೊರತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಕೀಟವನ್ನು ಹೊರತೆಗೆದಾಗಲೂ ಅದು ಜೀವಂತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

    ಆಗ್ನೇಯ ಚೀನಾದ ನಾಂಚಂಗ್ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಈ ವಿಶೇಷ ಶಸ್ತ್ರ ಚಿಕಿತ್ಸೆ ನಡೆದಿದೆ. 26 ವರ್ಷದ ಲಿಯು ಎಂಬ ಯುವಕ ಮೂರ್ಛೆ ರೋಗಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿದ್ದ. ಯುವಕನನ್ನು ಪರೀಕ್ಷಿಸಿದ ವೈದ್ಯರು, ಆತನನ್ನು ಎಕ್ಸ್-ರೇ ಗೆ ಒಳಪಡಿಸಿದಾಗ ಮೆದುಳಿನಲ್ಲಿ ಕೀಟ ಕಂಡು ಬಂದಿದೆ.

    ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮೆದುಳಿನಲ್ಲಿದ್ದ ಜೀವಂತ ಕೀಟವನ್ನು ಹೊರತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಮಾತನಾಡಿದ ಡಾ. ವಾಂಗ್ ಚುನ್ಲಿಯಾಂಗ್, ಯುವಕನ ತಲೆಯಲ್ಲಿ ಕೀಟವನ್ನು ನೋಡಿದಾಗ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದೇವು. ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಆಪರೇಷನ್ ನಡೆಸಿ ಜೀವಂತವಾಗಿ ಬಿಳಿ ಬಣ್ಣದ ಕೀಟವನ್ನು ಹೊರತೆಗೆಯಲಾಗಿದೆ ಎಂದು ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ.

    ದೇಹ ಸೇರಿದ್ದು ಹೇಗೆ?
    ಈ ಕುರಿತು ಪ್ರತಿಕ್ರಿಯಿಸಿರುವ ಶಾಂಘೈನಲ್ಲಿರುವ ನ್ಯೂರೋಮೆಡಿಕಲ್ ಕೇಂದ್ರದ ತಜ್ಞ ವೈದ್ಯರಾದ ಗುವು ಹೋ, ಹಸಿಯಾದ ಅಥವಾ ಬೇಯಿಸದ ಆಹಾರ ಸೇವಿಸುವ ವೇಳೆ ಈ ರೀತಿಯಾದ ಕೀಟಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಮಾಂಸ ಮತ್ತು ಸಮುದ್ರ ಆಹಾರದಲ್ಲಿ ಈ ರೀತಿಯ ಕೀಟಗಳಿರುತ್ತೇವೆ. ಪ್ರತಿಯೊಬ್ಬರು ತಾವು ಸೇವಿಸುವ ಆಹಾರ ಬಗೆಗೆ ಎಚ್ಚರಿಕೆಯಿಂದ ಇರಬೇಕು. ಲಿಯು ದೇಹದಲ್ಲಿ ಸೇರಿದ ಕೀಟ ರಕ್ತದಲ್ಲಿ ತೇಲಾಡುತ್ತಾ ಮೆದುಳು ಸೇರಿದಂತೆ ಇತರ ಭಾಗ ತಲುಪಿದ್ದರಿಂದ ಆತನಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಶಸ್ತ್ರಚಿಕಿತ್ಸೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲಿಯು, ಇನ್ನು ಮುಂದೆ ಚೆನ್ನಾಗಿ ಬೇಯಿಸಿದ ಶುಚಿ-ರುಚಿಯಾದ ಆಹಾರವನ್ನು ಸೇವಿಸುತ್ತೇನೆ. ಎಲ್ಲರೂ ಸಹ ಬೇಯಿಸಿದ ಆಹಾರ ಸೇವನೆ ಮಾಡೋದು ಒಳ್ಳೆಯದು ಅಂತಾ ಸಲಹೆ ನೀಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಹಾವೇರಿ: ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ನಕಲಿ ವೈದ್ಯ ಬಾನಪ್ಪ ವಾಲ್ಮೀಕಿ ಮನೆ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಚಿಕ್ಕಣ್ಣವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ ಅಧಿಕಾರಿಗಳನ್ನು ಕಂಡ ನಕಲಿ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಅಧಿಕಾರಿಗಳು ಮನೆಯನ್ನು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಸ್ಕೆತಾಸ್ಕೋಪ್, ಸಿರಿಂಜ್, ಔಷಧಿ ಬರೆಯಲು ಉಪಯೋಗಿಸುತ್ತಿದ್ದ ಚೀಟಿ ಮತ್ತು ವಿವಿಧ ಕಂಪೆನಿಯ ಔಷಧಿಗಳು ಪತ್ತೆಯಾಗಿವೆ.

    ಔಷಧಿಗಳು ಮತ್ತು ದಾಳಿ ವೇಳೆ ಸಿಕ್ಕ ವಸ್ತುಗಳನ್ನು ತಾಲೂಕು ವೈದ್ಯಾಧಿಕಾರಿಗಳು ವಶಪಡಿಸಿಕೊಂಡು ಸೀಜ್ ಮಾಡಿದ್ದಾರೆ. ಈ ಎಣ್ಣೆ ಡಾಕ್ಟರ್ ಕಳೆದ ಕೆಲವು ವರ್ಷಗಳಿಂದ ಮನೆಯಲ್ಲೇ ರಾಜಾರೋಷವಾಗಿ ಕ್ಲಿನಿಕ್ ನಡೆಸ್ತಿದ್ದನು. ಯಾವುದೇ ಕೋರ್ಸ್ ಕಲಿಯದೆ ಬಾನಪ್ಪ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಈ ವ್ಯಕ್ತಿಯ ದೇಹದಲ್ಲಿ ಎಷ್ಟು ಸೂಜಿಗಳು ಸಿಕ್ಕಿಕೊಂಡಿವೆ ಗೊತ್ತಾ?

    ಈ ವ್ಯಕ್ತಿಯ ದೇಹದಲ್ಲಿ ಎಷ್ಟು ಸೂಜಿಗಳು ಸಿಕ್ಕಿಕೊಂಡಿವೆ ಗೊತ್ತಾ?

    ಜೈಪುರ: ಈ ವ್ಯಕ್ತಿಯನ್ನು ನೋಡಿ ವ್ಯದ್ಯರೇ ಶಾಕ್ ಆಗಿದ್ದಾರೆ. ಈದುವರೆಗೂ ಇಂಥ ವ್ಯಕ್ತಿಯನ್ನು ಯಾರೂ ನೋಡಿಯೇ ಇಲ್ಲ. ಇಂತಹದೊಂದು ಅಚ್ಚರಿಪಡುವಂತಹ ಘಟನೆ ರಾಜಸ್ತಾನದಲ್ಲಿ ನಡೆದಿದೆ.

    ಹೌದು, ಕೋಟಾದಲ್ಲಿ 56 ವರ್ಷದ ಬದ್ರಿಲಾಲ್ ಎಂಬವರ ದೇಹದಲ್ಲಿ ಬರೋಬ್ಬರಿ 150 ಗುಂಡು ಸೂಜಿಗಳು ಸಿಕ್ಕಿವೆ. ಆದರೆ ಈ ಸೂಜಿಗಳು ನನ್ನ ದೇಹದೊಳಗೆ ಹೇಗೆ ಹೋಗಿದೆ ಅನ್ನುವುದೆ ಗೊತ್ತಿಲ್ಲ ಅಂತ ಬದ್ರಿಲಾಲ್ ಹೇಳಿದ್ದಾರೆ.

    ದೇಹದ ಕೆಲವು ಕಡೆ ಅಂದರೆ ಗಂಟಲು, ಪಾದ, ಕುತ್ತಿಗೆ ಹೀಗೆ ಹಲವಾರು ಭಾಗಗಳಿಗೆ ಸೂಜಿ ಸಿಕ್ಕಿಕೊಂಡಿರುವುದು ಕಂಡು ಬಂದಿದೆ. ದೇಹದಲ್ಲಿ ಸಿಕ್ಕಿಕೊಂಡಿರುವ ಎಲ್ಲ ಸೂಜಿಗಳಲ್ಲಿ ಒಂದು ಮಾತ್ರ ತುಕ್ಕು ಹಿಡಿದಿದೆ. ಈ ಸೂಜಿಗಳು 6 ತಿಂಗಳ ಹಿಂದೆಯೇ ದೇಹಕ್ಕೆ ಹೋಗಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

    ಇದೂವರೆಗೂ ಆಸ್ಪತ್ರೆಗಳಿಗೆ ಬದ್ರಿಲಾಲ್ ಅವರು ಆರು ಬಾರಿ ಹೋಗಿ ಬಂದಿದ್ದಾರೆ. ಆದರೆ ಇಷ್ಟೆಲ್ಲಾ ಸೂಜಿಗಳು ದೇಹದಲ್ಲಿದ್ದರೂ ಇವರು ಬದುಕಿದ್ದೆ ಹೆಚ್ಚು ಎಂದು ವೈದ್ಯರು ಹೇಳಿದ್ದಾರೆ. ಈಗ 91 ಸೂಜಿಗಳನ್ನು ಹೊರ ತಗೆಯಲಾಗಿದೆ. ದೇಹದ ಸೂಕ್ಷ್ಮವಾದ ಜಾಗಗಳಲ್ಲಿ ಸೂಜಿಗಳು ಚುಚ್ಚಿಕೊಂಡಿದ್ದರಿಂದ ಹೊರ ತಗೆಯಲು ವೈದ್ಯರು ಹರ ಸಾಹಸಪಡುತ್ತಿದ್ದಾರೆ.