Tag: Photos

  • ಬಾತ್‍ಟಬ್‍ನಲ್ಲಿ ಕುಳಿತು ಹಾಟ್ ಫೋಟೋ ಕ್ಲಿಕ್ಕಿಸಿಕೊಂಡ ದಿಶಾ ಪಠಾಣಿ

    ಬಾತ್‍ಟಬ್‍ನಲ್ಲಿ ಕುಳಿತು ಹಾಟ್ ಫೋಟೋ ಕ್ಲಿಕ್ಕಿಸಿಕೊಂಡ ದಿಶಾ ಪಠಾಣಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟರ್ ಎಂಎಸ್ ಧೋನಿ ಅವರ ಬಯೋಪಿಕ್ ‘ದ ಅನ್‍ಟೋಲ್ಡ್ ಸ್ಟೋರಿ’ ಸಿನಿಮಾ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿರುವ ನಟಿ ದಿಶಾ ಪಠಾಣಿ ಸದ್ಯಕ್ಕೆ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆಗಿದ್ದಾರೆ.

    ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗಿಂದ ತಮ್ಮ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿ ನೀಡುತ್ತಲೇ ಬಂದಿರುವ ನಟಿ ದಿಶಾ ಪಠಾಣಿ, ಇದೀಗ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

    https://www.instagram.com/p/B0-Nc3UARfr/

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದಿಶಾ ಪಠಾಣಿ ಅವರು ಬಿಕಿನಿ ತೊಟ್ಟ ಹಾಟ್ ಫೋಟೊಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹರಿಯಬಿಟ್ಟಿದ್ದರು. ಇದೀಗ ದಿಶಾ ‘ಬಾತ್ ಟಬ್’ನಲ್ಲಿ ಕುಳಿತು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಬ್ಲಾಕ್ ಡ್ರೆಸ್‍ನಲ್ಲಿ ದಿಶಾ ಪಠಾಣಿ ಮಿಂಚಿದ್ದು, ಮತ್ತೊಂದು ಫೋಟೋದಲ್ಲಿ ಅವರು ಧರಿಸಿದ್ದ ಉಂಗುರ ಹಾಗೂ ಆಭರಣ ಹೈಲೆಟ್ ಆಗಿವೆ. ಬಾಲಿವುಟ್ ಹಾಟ್ ನಟಿ ದಿಶಾ ಅವರ ಫೋಟೋ ನೋಡಿರುವ ಅಭಿಮಾನಿಗಳು ತಮ್ಮದೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

    ಇತ್ತೀಚೆಗೆ ರಿಲೀಸ್ ಆಗಿ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಮನ ಗೆದ್ದ ಸಲ್ಮಾನ್ ಖಾನ್ ನಾಯಕತ್ವದ ‘ಭಾರತ್’ ಚಿತ್ರದಲ್ಲಿ ದಿಶಾ ಅವರು ‘ರಾಧಾ’ ಪಾತ್ರದಲ್ಲಿ ಮಿಂಚಿದ್ದಾರೆ. ದಿಶಾ ಪಠಾಣಿ ಅವರು ಸದ್ಯಕ್ಕೆ ಮೋಹಿತ್ ಸೂರಿ ನಿರ್ದೇಶನದ ‘ಮಲಾಂಗ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    https://www.instagram.com/p/B0-Ms8HgTFn/

  • ಟಿಎಂಸಿ ಸಂಸದೆಯ ಹನಿಮೂನ್ ಫೋಟೋಗಳು ವೈರಲ್

    ಟಿಎಂಸಿ ಸಂಸದೆಯ ಹನಿಮೂನ್ ಫೋಟೋಗಳು ವೈರಲ್

    ನವದೆಹಲಿ: ಮೊದಲ ಬಾರಿಗೆ ಸಂಸದೆ ಆಗಿ ಆಯ್ಕೆಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ(ಟಿಎಂಸಿ) ನುಸ್ರತ್ ಜಹಾನ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಈ ಬಾರಿ ಅವರು ರೊಮ್ಯಾಂಟಿಕ್ ಲುಕ್‍ನಲ್ಲಿ ಪತಿ ಜೊತೆ ಕಾಣಿಸಿಕೊಂಡಿರುವ ಫೋಟೋಗಳ ಮೂಲಕ ಸುದ್ದಿಯಾಗಿದ್ದಾರೆ.

    ಬಂಗಾಳಿ ನಟಿ ಹಾಗೂ ಸಂಸದೆ ನುಸ್ರತ್ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ನಿರಂತರ ಚರ್ಚೆಯಲ್ಲಿದ್ದಾರೆ. ಮೊದಲು ಡ್ರೆಸ್ ವಿಚಾರಕ್ಕೆ ನುಸ್ರತ್ ಚರ್ಚೆಗೆ ಬಂದಿದ್ದರು. ನಂತರ ಹಣೆಗೆ ಸಿಂಧೂರ, ಕೈಗೆ ಬಳೆ ತೊಟ್ಟು ಕಲಾಪಕ್ಕೆ ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇತ್ತೀಚಿಗಷ್ಟೆ ನುಸ್ರತ್ ಅವರು ತಮ್ಮ ಬಹುಕಾಲದ ಗೆಳೆಯ ನಿಖಿಲ್ ಜೈನ್ ಅವರನ್ನು ವರಿಸಿದ್ದರು. ಆದರೆ ರಾಜಕೀಯದಲ್ಲಿ ಬ್ಯುಸಿಯಿದ್ದ ಕಾರಣಕ್ಕೆ ಮದುವೆಯಾದ ಎರಡು ತಿಂಗಳ ಬಳಿಕ ಬ್ರೆಕ್ ತೆಗೆದುಕೊಂಡು ನುಸ್ರತ್ ಪತಿಯೊಂದಿಗೆ ಹನಿಮೂನ್‍ಗೆ ಹೋಗಿದ್ದಾರೆ. ಅಲ್ಲಿ ನುಸ್ರತ್ ಅವರು ಪತಿಯೊಂದಿಗೆ ತೆಗೆಸಿಕೊಂಡಿರುವ ರೊಮ್ಯಾಂಟಿಕ್ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.instagram.com/p/B0nSOhnHZ_-/?utm_source=ig_embed

    ಪತಿಯೊಂದಿಗೆ ನುಸ್ರತ್ ಕಳೆದಿರುವ ಮಧುರ ಕ್ಷಣಗಳ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಪತಿ ನಿಖಿಲ್ ಅವರು ಕೂಡ ಕೆಲ ಫೋಟೋಗಳನ್ನು ತಮ್ಮ ಇನ್‍ಸ್ಟಾ ಹಾಗೂ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ನುಸ್ರತ್ ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಅವರು ಕಪ್ಪು ಹಾಗೂ ಬಿಳಿ ಬಣ್ಣದ ಸ್ಟ್ರೈಪ್ಸ್ ಇರುವ ಟಾಪ್ ಹಾಗೂ ಬಿಳಿ ಶಾಟ್ಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ನುಸ್ರತ್ ಜಹಾನ್ ಅವರು ಅಂತರ ಧರ್ಮ ವಿವಾಹವಾಗಿರುವುದು ಈ ಹಿಂದೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಆಗ ಧೈರ್ಯದಿಂದ ನುಸ್ರತ್ ಅವರು ಇದು ನನ್ನ ವೈಯಕ್ತಿಕ ವಿಚಾರ, ಬೇರೆಯವರು ತಲೆಹಾಕುವುದು ಸರಿಯಲ್ಲ. ನನ್ನ ಜೀವನದ ನಿರ್ಧಾರವನ್ನು ಯಾರು ತೆಗೆದುಕೊಳ್ಳಲು ಆಗುವುದಿಲ್ಲ. ನಾನು ಜನರನ್ನು ಮನುಷ್ಯತ್ವದಿಂದ ಅಳಿಯುತ್ತೇನೆ. ನಿಖಿಲ್ ಅವರು ಒಳ್ಳೆಯ ಮನುಷ್ಯ, ಆದ್ದರಿಂದ ನಾನು ಈ ನಿರ್ಧಾರಕ್ಕೆ ಬಂದೆ. ಈಗಿನ ಕಾಲದಲ್ಲೂ ಜನ ಧರ್ಮದ ಚೌಕಟ್ಟಿನಲ್ಲಿ ಬದುಕುತ್ತಿದ್ದಾರೆ ಎಂದರೆ ಅಚ್ಚರಿಯಾಗುತ್ತೆ ಎಂದು ತಿರುಗೇಟು ನೀಡಿದ್ದರು.

    ನುಸ್ರತ್ ಅವರು ಸಂಸದೆಯಾದ ಬಳಿಕ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಅವರ ಉಡುಗೆ, ತೊಡುಗೆ, ಮದುವೆಯಾದ ಬಳಿಕ ಪತಿಯ ಜೈನ್ ಕುಟುಂಬಕ್ಕೆ ಸೇರಿದ್ದು ಹಾಗೂ ಹಿಂದೂ ಸಂಪ್ರದಾಯಗಳಲ್ಲಿ ಭಾಗಿಯಾಗಿರುವುದು ಸಖತ್ ಸುದ್ದಿಯಾಗಿತ್ತು. ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದರು.

  • ಸಂಸತ್‍ನಲ್ಲಿ ಪ್ರಧಾನಿ ಮೋದಿ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ವೈರಲ್

    ಸಂಸತ್‍ನಲ್ಲಿ ಪ್ರಧಾನಿ ಮೋದಿ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ವೈರಲ್

    – 30 ನಿಮಿಷದಲ್ಲಿ 5 ಲಕ್ಷಕ್ಕೂ ಅಧಿಕ ಲೈಕ್

    ನವದೆಹಲಿ: ಸಂಸತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪ್ರಧಾನಿ ಮೋದಿ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಗುವಿನ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದು, ನನ್ನನ್ನು ಭೇಟಿಯಾಗಲು ಸಂಸತ್‍ಗೆ ವಿಶೇಷ ಸ್ನೇಹಿತರೊಬ್ಬರು ಬಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಮಹಾರಾಷ್ಟ್ರದ ಉಜ್ಜೈನಿ ಬಿಜೆಪಿ ಸಂಸದ ಸತ್ಯನಾರಾಯಣ ಜಾಟಿಯಾ ಕುಟುಂಬ ಇಂದು ಸಂಸತ್ತು ನೋಡಲು ಆಗಮಿಸಿತ್ತು. ಈ ವೇಳೆ ಸದಸ್ಯರು ಪ್ರಧಾನಿ ಕಚೇರಿಗೆ ಭೇಟಿ ನೀಡಿದಾಗ ಈ  ಮೋದಿ ಸತ್ಯನಾರಾಯಣ ಜಾಟಿಯಾ ಅವರ ಮೊಮ್ಮಗನನ್ನು ಎತ್ತಿ ಆಡಿಸಿದ್ದರು.

    https://www.instagram.com/p/B0QPjPLFlUo/

    ಈ ಫೋಟೋ ಅಪ್‍ಲೋಡ್ ಆದ ಕೇವಲ 30 ನಿಮಿಷದಲ್ಲಿ 5 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟರ್, ಫೇಸ್‍ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೆಲವರು ಕಮೆಂಟ್ ಮಗು ಯಾರದ್ದು ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.

    ನರೇಂದ್ರ ಮೋದಿ ಅವರು ಮುದ್ದಾದ ಮಗುವನ್ನು ಎತ್ತಿಕೊಂಡು ಆಟವಾಗಿದ್ದಾರೆ. ಒಟ್ಟು ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಮೋದಿ ಅವರು ಮಗುವಿನ ಕಾಲು ಹಿಡಿದು ತೋಳುಗಳಲ್ಲಿ ಆಟ ಆಡುವ ಕಂದನ ನಗುವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗು ಟೇಬಲ್ ಮೇಲೆ ಇಟ್ಟಿರುವ ಚಾಕೋಲೆಟ್‍ಗಳನ್ನು ಕಂಡು ಖುಷಿ ಪಡುತ್ತಿರುವ ಕ್ಷಣವನ್ನು ನಗುವಿನೊಂದಿಗೆ ಗಮನಿಸುತ್ತಿದ್ದಾರೆ.

    ಪ್ರಧಾನಿ ಮೋದಿ ಅವರು ಮಕ್ಕಳನ್ನು ಎತ್ತಿ ಮುದ್ದಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಸಂದರ್ಶನ, ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಮುದ್ದಾಡಿದ್ದಾರೆ. ಆದರೆ ಈ ಬಾರಿ ವಿಶೇಷ ಅತಿ ಎಂದು ಹೇಳಿರುವುದು ನೆಟ್ಟಿಗರ ಕುತೂಹಲಕ್ಕೆ ಕಾರಣಂವಾಗಿದೆ.

  • ಮುಂಗಾರಿಗೆ ಮುನ್ನ ಬಾನಲ್ಲಿ ರಂಗಿನೋಕುಳಿ- ಉಡುಪಿಯ ಪಶ್ಚಿಮ ಆಗಸದ ಚಿತ್ತಾರ ಬಲು ಆಕರ್ಷಕ

    ಮುಂಗಾರಿಗೆ ಮುನ್ನ ಬಾನಲ್ಲಿ ರಂಗಿನೋಕುಳಿ- ಉಡುಪಿಯ ಪಶ್ಚಿಮ ಆಗಸದ ಚಿತ್ತಾರ ಬಲು ಆಕರ್ಷಕ

    ಉಡುಪಿ: ಮುಂಗಾರು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರಾವಳಿಯಲ್ಲಿ ಮಳೆ ಬರುವಂತಾಗಿದ್ದು, ಕಾರ್ಮೋಡ ಬಾನಲ್ಲಿ ಚಿತ್ತಾರ ಮೂಡಿಸಿದ್ದು ರಂಗಿನೋಕುಳಿ ಚೆಲ್ಲಿದೆ.

    ಕೇರಳ ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು, ಕರ್ನಾಟಕ ಕರಾವಳಿ ಮೂಲಕ ನಮ್ಮ ರಾಜ್ಯದಲ್ಲಿ ಮಳೆಯಾಗಲು ಕ್ಷಣಗಣನೆ ಆರಂಭವಾಗಿದೆ. ಉಡುಪಿಯಲ್ಲಿ ಭಾನುವಾರ ಸಂಜೆಯ ಬಾನು ಎಲ್ಲರನ್ನೂ ಆಕರ್ಷಿಸಿದೆ. ನೆರಳು ಬೆಳಕಿನಾಟದ ಚಂದ ಜನರ ಮನ ತಣಿಸಿದೆ.

    ಸಂಜೆ ಸೂರ್ಯ ಸಮುದ್ರಕ್ಕೆ ಇಳಿಯುತ್ತಿದ್ದಂತೆ ಬಾನಲ್ಲಿ ಹಳದಿ, ಕೆಂಪು, ನೀಲಿ, ಕಪ್ಪು, ಬಿಳಿ ಹೀಗೆ ನಾನಾ ಬಣ್ಣಗಳು ತುಂಬಿಕೊಂಡಿದೆ. ಛಾಯಾಗ್ರಾಹಕರಂತೂ ವಾರಾಂತ್ಯ ಆಗಸವನ್ನು ಸಂಪೂರ್ಣ ಆವರಿಸಿಕೊಂಡು ಬಿಟ್ಟಿದ್ದು ಕ್ಯಾಮೆರಾದಲ್ಲಿ ಮೋಡದ ವಿವಿಧ ಆಕಾರವನ್ನು ಸೆರೆ ಮಾಡಿಕೊಂಡಿದ್ದಾರೆ.

    ಪಶ್ಚಿಮ ಘಟ್ಟದಲ್ಲಿ ಕೆಲಕಾಲ ಧಾರಾಕಾರ ಮಳೆ ಸುರಿದಿದ್ದು ತಂಗಾಳಿ ಸಮುದ್ರದತ್ತ ಬೀಸಿ ವಾತಾಚರಣವನ್ನು ಕೂಲ್ ಮಾಡಿದೆ. ಇಂದು ರಾತ್ರಿ ಅಥವಾ ನಾಳೆ ಮುಂಗಾರಿನ ಮೊದಲ ಮಳೆ ಬೀಳುವ ಸಾಧ್ಯತೆಯಿದೆ.

  • ಕಾಫಿನಾಡಿನಲ್ಲಿ ಒಂದೆಡೆ ಮಳೆ, ಇನ್ನೊಂದೆಡೆ ಬರ- ಎರಡಕ್ಕೂ ಪ್ರತ್ಯಕ್ಷ ಸಾಕ್ಷಿಯಾದ ಫೋಟೋಗಳು

    ಕಾಫಿನಾಡಿನಲ್ಲಿ ಒಂದೆಡೆ ಮಳೆ, ಇನ್ನೊಂದೆಡೆ ಬರ- ಎರಡಕ್ಕೂ ಪ್ರತ್ಯಕ್ಷ ಸಾಕ್ಷಿಯಾದ ಫೋಟೋಗಳು

    ಚಿಕ್ಕಮಗಳೂರು: ಸಾವಿರ ಪದಗಳಲ್ಲಿ ಹೇಳಲಾಗದ್ದನ್ನ ಒಂದು ಫೋಟೋ ಹೇಳುತ್ತೆ ಅನ್ನೋದು ಅಕ್ಷರಶಃ ಸತ್ಯ. ಯಾಕೆಂದರೆ, ಅಂತಹ ಅಪರೂಪದ ಫೋಟೋಗಳಿಗೆ ಕಾಫಿನಾಡಿನ ಮಲೆನಾಡು ಹಾಗೂ ಬಯಲುಸೀಮೆ ಭಾಗ ಸಾಕ್ಷಿಯಾಗಿದೆ.

    ಹೌದು. ಕಳೆದ ಎರಡು ದಶಕಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿರೋ ಕಡೂರು ತಾಲೂಕಿನಲ್ಲಿ ಹನಿ ನೀರಿಗೂ ಹಾಹಾಕಾರವಿದೆ. ಜಾನುವಾರುಗಳ ಸ್ಥಿತಿಯಂತೂ ಶೋಷಣೀಯ ಆಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಮತಿಘಟ್ಟ ಗ್ರಾಮದಲ್ಲಿ ನೀರಿಗಾಗಿ ಇಟ್ಟಿದ್ದ ಖಾಲಿಕೊಡಗಳಲ್ಲಿ ಜಾನುವಾರು ನೀರು ಕುಡಿಯಲು ಪ್ರಯತ್ನಿಸ್ತಿರೋ ಫೋಟೋ ಭಾವನಾತ್ಮಕವಾಗಿದ್ದು, ಕಲ್ಲು ಮನಸ್ಸಿನವರನ್ನು ಕರಗಸುವಂತಿದೆ.

    ಅಲ್ಲದೆ ಅಪ್ಪಟ ಮಲೆನಾಡು ಎನ್.ಆರ್.ಪುರ ತಾಲೂಕಿನ ಖಾಂಡ್ಯದಲ್ಲಿ ಎರಡು ದಿನ ಹಿಂದೆ ಸುರಿದ ಮಳೆ-ಗಾಳಿಗೆ ಬೃಹತ್ ಮರವೊಂದು ಮನೆ ಮೇಲೆ ಬಿದ್ದಿದ್ದು, ಆ ಮನೆಯ ಹೊರಭಾಗದಲ್ಲಿ ಇಬ್ಬರು ಪುಟ್ಟ ಮಕ್ಕಳು ನಿಂತು ಮನೆಯನ್ನ ನೋಡ್ತಿರೋ ದೃಶ್ಯ ಕೂಡ ಮನಮುಟ್ಟುವಂತಿದೆ. ಇಂತಹ ಫೋಟೋಗಳು ಸಾಮಾನ್ಯವಾಗಿದ್ದರು ಅದರ ಹಿಂದಿನ ಭಾವನೆ, ನೋವು, ಕಷ್ಟ-ಕಾರ್ಪಣ್ಯಗಳು ಮಾತ್ರ ಬಹುದೊಡ್ಡದಾಗಿದೆ.

  • ಸಮುದ್ರದಲ್ಲಿ ಮುಳುಗಡೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಚಿತ್ರ ಬಿಡುಗಡೆ

    ಸಮುದ್ರದಲ್ಲಿ ಮುಳುಗಡೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಚಿತ್ರ ಬಿಡುಗಡೆ

    ಕಾರವಾರ: ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿದ್ದ ಅವಶೇಷಗಳ ಚಿತ್ರಗಳನ್ನು ಭಾರತೀಯ ನೌಕಾಸೇನೆಯು ಇಂದು ಬಿಡುಗಡೆಗೊಳಿಸಿದೆ.

    ಮಲ್ಪೆಯಿಂದ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ಮಾಲ್ವಾನ್‍ನ ಅರಬ್ಬೀ ಸಮುದ್ರದಲ್ಲಿ ಡಿಸೆಂಬರ್ 16 ರಂದು ಮುಳುಗಡೆಯಾಗಿ ನಾಪತ್ತೆಯಾಗಿತ್ತು. ನಾಲ್ಕು ತಿಂಗಳ ಹುಡುಕಾಟದ ನಂತರ ಕೆಲ ದಿನಗಳ ಹಿಂದಷ್ಟೇ ಬೋಟಿನ ಅವಶೇಷಗಳು ನೌಕಾಸೇನೆ ಮಲ್ಪೆಯ ಮೀನುಗಾರರೊಂದಿಗೆ ತೆರಳಿ ಪತ್ತೆ ಹಚ್ಚಿತ್ತು.

    ಉಡುಪಿಯ ಮಲ್ಪೆ ಬಂದರಿನಿಂದ ಹೊರಟಿದ್ದ ಬೋಟ್ ನಲ್ಲಿ ಉತ್ತರಕನ್ನಡ ಜಿಲ್ಲೆಯ 5, ಉಡುಪಿಯ ಇಬ್ಬರು ಸೇರಿ 7 ಮಂದಿ ಮೀನುಗಾರಿಕೆಗೆ ತೆರಳಿದ್ದು, ಎಲ್ಲರೂ ಬೋಟ್ ನಲ್ಲಿ ಜಲಸಮಾಧಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ನೌಕಾದಳದವರು ಮಾಹಿತಿಯನ್ನು ಹೊರಹಾಕಬೇಕಿದೆ.

    ಡಿಸೆಂಬರ್ 13 ರಂದು ಉಡುಪಿಯ ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿ ಪ್ರದೇಶದ ಸಮುದ್ರದಲ್ಲಿ ಡಿಸೆಂಬರ್ 15 ರ ರಾತ್ರಿ 1 ಘಂಟೆ ವರೆಗೆ ಸಂಪರ್ಕದಲ್ಲಿತ್ತು. ನಂತರ ಸಂಪರ್ಕ ಕಳೆದುಕೊಂಡಿತ್ತು. ಸಹಜವಾಗಿ ಮೀನುಗಾರರು ಅಪಾಯದಲ್ಲಿ ಸಿಲುಕಿದಾಗ ಜಿಪಿಎಸ್ ಅಥವಾ ಮೊಬೈಲ್ ಸಂಪರ್ಕ ದಲ್ಲಿ ಒಬ್ಬರಿಗೊಬ್ಬರು ಸಂಪರ್ಕದಲ್ಲಿರುತ್ತಾರೆ. ಆದರೆ ಸುವರ್ಣ ತ್ರಿಭುಜ ಬೋಟ್ ನ ಯಾವೊಬ್ಬ ಮೀನುಗಾರರೂ ಬೇರೆ ಮೀನುಗಾರರ ಸಂಪರ್ಕ ಮಾಡಿಲ್ಲ. ಇದಲ್ಲದೇ ಜಿಪಿಎಸ್ ಮೊಬೈಲ್ ಸಿಗ್ನಲ್ ಸಹ ಸಂಪರ್ಕ ಕಳೆದುಕೊಂಡಿತ್ತು. ಈ ಕಾರಣದಿಂದ ಯಾವುದೋ ಕಡಲಗಳ್ಳರು ಬೋಟನ್ನು ಅಪಹರಿಸಿರಬಹುದು ಎಂದು ಹೇಳಲಾಗಿತ್ತು.

    ಕಾಣೆಯಾದ ಒಂದೂವರೆ ತಿಂಗಳಲ್ಲಿ ಬೋಟಿನ ಮೀನು ತುಂಬುವ ಬಾಕ್ಸ್ ಸಿಕ್ಕಿದ್ದು ಯಾವುದೋ ಹಡಗು ಡಿಕ್ಕಿ ಹೊಡೆದಿದೆ ಎನ್ನಲಾಗಿತ್ತು. ಇದರ ಅವಶೇಷಗಳು ಅಥವಾ ಮೀನುಗಾರರ ಶವವಾದರೂ ಸಿಗಬೇಕಿತ್ತು, ಅದೂ ಕೂಡ ದೊರೆಯದೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ನೌಕಾದಳ ನಿರಂತರ ಐದು ತಿಂಗಳಿಂದ ಹುಡುಕಾಟ ನಡೆಸಿ ಮಹಾರಾಷ್ಟ್ರದ ಮಲ್ವಾನ್ ನ ಕಡಲತೀರದಿಂದ ಅರಬ್ಬೀ ಸಮುದ್ರದ 33 ಕಿಲೋಮೀಟರ್ ದೂರದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದೆ.

  • ಬಾಲಿವುಡ್ ಬಾದ್‍ಶಾ ಮನೆಯಲ್ಲಿ ದೀಪಾವಳಿ ಸಂಭ್ರಮ: ಫೋಟೋಗಳಲ್ಲಿ ನೋಡಿ

    ಬಾಲಿವುಡ್ ಬಾದ್‍ಶಾ ಮನೆಯಲ್ಲಿ ದೀಪಾವಳಿ ಸಂಭ್ರಮ: ಫೋಟೋಗಳಲ್ಲಿ ನೋಡಿ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಶನಿವಾರ ತಮ್ಮ ಮನೆಯಲ್ಲಿ ಬಾಲಿವುಡ್‍ನ ಎಲ್ಲ ಕಲಾವಿದರ ಜೊತೆ ಸೇರಿ ದೀಪಾವಳಿ ಹಬ್ಬದ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ್ದಾರೆ. ಈಗ ದೀಪಾವಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಕಲಾವಿದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಶಾರೂಕ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಶನಿವಾರ ರಾತ್ರಿ ದೀಪಾವಳಿ ಪಾರ್ಟಿಗೆ ನಿರೂಪಕರಾಗಿ ಮಿಂಚಿದ್ದಾರೆ. ಈ ಪಾರ್ಟಿಯಲ್ಲಿ ನಟಿ ಕತ್ರಿನಾ ಕೈಫ್, ಕರೀನಾ ಕಪೂರ್ ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಇನ್ನೂ ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಕ್ಯಾಶುಯಲ್ ಉಡುಪಿನಲ್ಲಿ ಮಿಂಚಿದ್ದಾರೆ.

    ಶಾರೂಕ್ ಅವರ ದೀಪಾವಳಿ ಪಾರ್ಟಿಯಲ್ಲಿ ಶಾಹಿದ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಶಾಹಿದ್ ತಮ್ಮ ಪತ್ನಿ ಮೀರಾ ರಜ್‍ಪುತ್ ಹಾಗೂ ತಮ್ಮ ಸಹೋದರ ಇಶಾನ್ ಕತ್ತರ್ ಬಿಳಿ ಶರ್ಟ್ ಧರಿಸಿದ್ದರು. ಶಾರೂಕ್ ಹಾಗೂ ಅವರ ಪತ್ನಿ ಗೌರಿ ಈ ಪಾರ್ಟಿಯಲ್ಲಿ ಕಪ್ಪು ಹಾಗೂ ಗೋಲ್ಡನ್ ಬಣ್ಣದ ಔಟ್‍ಫಿಟ್ ಧರಿಸಿದ್ದರು.

    ಗೌರಿ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪತಿ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ಆಕಾಶದಲ್ಲಿ ನಕ್ಷತ್ರಗಳು. ದೀಪಾವಳಿಯ ಶುಭವಾಗಲಿ” ಎಂದು ಪೋಸ್ಟ್ ಮಾಡಿದ್ದಾರೆ. ಶಾರೂಕ್ ಅವರ ಸ್ನೇಹಿತರಾದ ಕರಣ್ ಜೋಹರ್, ಅಲಿಯಾ ಭಟ್, ಕಾಜೋಲ್, ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ, ವಿದ್ಯಾ ಬಾಲನ್ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

     

    View this post on Instagram

     

    Stars in the sky… Happy Diwali!

    A post shared by Gauri Khan (@gaurikhan) on

     

    View this post on Instagram

     

    Abundant love and affection always….

    A post shared by Kajol Devgan (@kajol) on

     

    View this post on Instagram

     

    How does this get any better!?? ???????? ♥️Sandwiched between the 2 SRKs ♥️!! #SiddharthRoyKapur & @iamsrk

    A post shared by Vidya Balan (@balanvidya) on

  • ಪ್ರಿಯತಮೆಯ ಬೆತ್ತಲೆ ಫೋಟೋ, ವೀಡಿಯೋ ತೆಗೆದು ಫೇಸ್‍ಬುಕ್ ನಲ್ಲಿ ಹಾಕೋದಾಗಿ ಪ್ರಿಯಕರನಿಂದ ಬೆದರಿಕೆ!

    ಪ್ರಿಯತಮೆಯ ಬೆತ್ತಲೆ ಫೋಟೋ, ವೀಡಿಯೋ ತೆಗೆದು ಫೇಸ್‍ಬುಕ್ ನಲ್ಲಿ ಹಾಕೋದಾಗಿ ಪ್ರಿಯಕರನಿಂದ ಬೆದರಿಕೆ!

    ಬೆಂಗಳೂರು: ಪ್ರಿಯತಮೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕೋದಾಗಿ ಪ್ರಿಯಕರ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಅರ್ಜುನ್ ಎಂಬಾತ ತನ್ನ ಪ್ರಿಯತಮೆಗೆ ಬೆದರಿಕೆ ಹಾಕಿದ್ದಾನೆ. ಒಂದು ವರ್ಷದಿಂದ ಅರ್ಜುನ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದು ಹಣ ನೀಡದಿದ್ದರೆ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದನು.

    ಈ ಹಿಂದೆಯೂ ಯುವತಿ ಅರ್ಜುನ್ ಬೆದರಿಕೆಗೆ ಹೆದರಿ 50 ಸಾವಿರ ರೂ. ಹಣ ನೀಡಿದ್ದಳು. ನಂತರ ಅರ್ಜುನ್ ಮತ್ತೆ 50 ಸಾವಿರ ರೂ. ಹಣವನ್ನು ಕೇಳಿದ್ದಾನೆ. ಆಗ ಯುವತಿ ಹಣ ನೀಡಲು ನಿರಾಕರಿಸಿದ್ದಾಳೆ.

    ಈ ಹಿನ್ನೆಲೆಯಲ್ಲಿ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಅರ್ಜುನ್ ಬೆದರಿಕೆ ಹಾಕಿದ್ದು, ಇದರಿಂದ ಬೇಸತ್ತ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

  • ಯಾವುದೇ ಸ್ವರ್ಗಕ್ಕಿಂತ ಕಮ್ಮಿಯಿಲ್ವಂತೆ ಜಾನ್ ಅಬ್ರಹಾಂ ಮನೆ: ಫೋಟೋಗಳಲ್ಲಿ ನೋಡಿ

    ಯಾವುದೇ ಸ್ವರ್ಗಕ್ಕಿಂತ ಕಮ್ಮಿಯಿಲ್ವಂತೆ ಜಾನ್ ಅಬ್ರಹಾಂ ಮನೆ: ಫೋಟೋಗಳಲ್ಲಿ ನೋಡಿ

    ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಹಾಂ ಯಾವುದೇ ಸೂಪರ್ ಸ್ಟಾರ್ ಗೆ ಕಡಿಮೆಯಿಲ್ಲ. ಅವರ ಆಕ್ಟಿಂಗ್ ಹಾಗೂ ಸಿಕ್ಸ್ ಪ್ಯಾಕ್ ಗೆ ಯುವತಿಯರು ಮನಸೋತಿರುವುದು ಹಳೆಯ ಸುದ್ದಿ. ಈಗ ಅವರ ಮನೆಗೆ ಸಂಬಂಧಿಸಿದಂತೆ ಹೊಸ ಸುದ್ದಿ ಬಂದಿದೆ.

    ಜಾನ್ ತಮ್ಮ ಗೆಳತಿ ಪ್ರಿಯಾ ರೂಚಾಲ್ ಜೊತೆ ಸಂತೋಷದಿಂದಿದ್ದು, ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಯನ್ನು ನೋಡಿದ್ದರೆ ನೀವು ಆಶ್ಚರ್ಯ ಪಡುತ್ತೀರಿ. ತಮ್ಮ ನಿವಾಸವನ್ನು ಜಾನ್ ತಮ್ಮ ಮನೆಯನ್ನು ತಮ್ಮ ಸಹೋದರ ಎಲಾನ್ ಜೊತೆ ಸೇರಿಕೊಂಡು ಡಿಸೈನ್ ಮಾಡಿದ್ದು, ‘ವಿಲ್ಲಾ ಇನ್ ದಿ ಸ್ಕೈ’ ಎಂದು ಹೆಸರಿಟ್ಟಿದ್ದಾರೆ.

    5000 ಚದರ ಅಡಿ ವಿಸ್ತೀರ್ಣದಲ್ಲಿ ಹೈಕ್ಲಾಸ್ ವಸ್ತುಗಳನ್ನು ಬಳಸಿ 14 ತಿಂಗಳಿನಲ್ಲಿ ವಿಲ್ಲಾ ನಿರ್ಮಾಣಗೊಂಡಿದೆ. ಬೆಡ್ ರೂಮ್‍ನಿಂದ ಪೇಂಟಿಂಗ್ ರೂಮ್‍ ವರೆಗೂ ಎಲ್ಲವೂ ಸುಂದರವಾಗಿ ನಿರ್ಮಾಣವಾಗಿದ್ದು, ಮುಂದುಗಡೆ ಸಮುದ್ರವನ್ನು ನೋಡಬಹುದಾಗಿದೆ.

    ಈ ಹಿಂದೆ ನಟ ಅಭಿಷೇಕ್ ಬಚ್ಚನ್ ತಮ್ಮ ಸುಂದರ ಪತ್ನಿ ಐಶ್ವರ್ಯ ರೈಗೆ 21 ಕೋಟಿ ರೂ. ಬೆಲೆ ಬಾಳುವ ಹೊಸ ಅಪಾರ್ಟ್ ಮೆಂಟ್ ಗಿಫ್ಟ್ ನೀಡಿದ್ದರು. ಆ ಹೊಸ ಅಪಾರ್ಟ್ ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

    ಅಭಿಷೇಕ್ ಮತ್ತು ಐಶ್ವರ್ಯ ರೈ, ಬಚ್ಚನ್ ಕುಟುಂಬದೊಂದಿಗೆ ಮುಂಬೈನ `ಜಲ್ಸಾ’ ನಿವಾಸದಲ್ಲಿ ವಾಸವಾಗಿದ್ದರು. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಹತ್ತಿರದ `ಹೈ ಎಂಡ್ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್, ಸಿಂಗಾನಿಯಾ ಐಸೆಲ್‍ನಲ್ಲಿ ಹೊಸ ಅಪಾರ್ಟ್ ಮೆಂಟ್ ಖರೀದಿಸಿದ್ದರು.

     

  • ಮಂತ್ರಾಲಯ: ಗುರುರಾಯರ ಸನ್ನಿಧಿಯಲ್ಲಿ ರಾಯರ ಆರಾಧನೆ- ಫೋಟೋಗಳಲ್ಲಿ ನೋಡಿ

    ಮಂತ್ರಾಲಯ: ಗುರುರಾಯರ ಸನ್ನಿಧಿಯಲ್ಲಿ ರಾಯರ ಆರಾಧನೆ- ಫೋಟೋಗಳಲ್ಲಿ ನೋಡಿ

    ರಾಯಚೂರು: ಗುರುರಾಯರ ಆರಾಧನೆಯ ಕೊನೆಯ ದಿನವಾದ ಇಂದು ಮಂತ್ರಾಲಯದಲ್ಲಿ ಉತ್ತರಾರಾಧನೆ ಅದ್ಧೂರಿಯಾಗಿ ನಡೆಯಲಿದೆ.

    ಬೆಳಗ್ಗೆ 10 ಗಂಟೆ ವೇಳೆಗೆ ಮಹಾರಥೋತ್ಸವ ಜರುಗಲಿದೆ. ಮಠದ ಬೀದಿಯಲ್ಲಿ ಮೆರವಣಿಗೆ ನಡೆಯಲಿದ್ದು, ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.

    ಮಹಾರಥೋತ್ಸವದ ವೇಳೆ ರಥಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಪ್ಪವೃಷ್ಠಿ ನಡೆಯಲಿದೆ. ಪ್ರಹಲ್ಲಾದರಾಜರಾಗಿ ರಾಯರು ಇಂದು ಭಕ್ತರಿಗೆ ಬಹಿರ್ಮುಖವಾಗಿ ದರ್ಶನ ಕೊಡುತ್ತಾರೆ ಅನ್ನೋ ನಂಬಿಕೆಯಿದೆ. ರಥೋತ್ಸವಕ್ಕೂ ಮುನ್ನ ಪ್ರಹ್ಲಾದರಾಯರಿಗೆ ಶ್ರೀಗಳು ಅಡ್ಡ ಮಲಗಿ ಸಮಸ್ಕಾರ ಹಾಕುವ ಮೂಲಕ ಪ್ರಾರ್ಥನೆ ಸಲ್ಲಿಸಲಿದ್ದಾರೆ.

    ಮಹಾ ರಥೋತ್ಸವದ ಮೂಲಕ ಮೂರು ದಿನಗಳ ಆರಾಧನಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ತೆರೆ ಬೀಳಲಿದೆ. ಆದರೆ ಸಪ್ತರಾತ್ರೋತ್ಸವ ಅಂಗವಾಗಿ ಇನ್ನೂ ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ.