Tag: phone

  • `ಮಹಾ’ ಪೆಟ್ಟಿಗೆ ತತ್ತರ- ಬಿಎಸ್‍ವೈ ಬಳಿ ವರಸೆ ಬದಲಿಸಿದ ಬಿಜೆಪಿ ಹೈಕಮಾಂಡ್

    `ಮಹಾ’ ಪೆಟ್ಟಿಗೆ ತತ್ತರ- ಬಿಎಸ್‍ವೈ ಬಳಿ ವರಸೆ ಬದಲಿಸಿದ ಬಿಜೆಪಿ ಹೈಕಮಾಂಡ್

    ಬೆಂಗಳೂರು: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಬಿಜೆಪಿ ಹೈಕಮಾಂಡ್ ಈಗ ತನ್ನ ಕರ್ನಾಟಕದ ನಿಲುವಿನಲ್ಲಿ ಬದಲಾಗಿದೆ. ಕರ್ನಾಟಕದಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ತನ್ನ ವರಸೆಯನ್ನು ಬದಲಿಸಿದೆ.

    ಮಹಾರಾಷ್ಟ್ರದಲ್ಲಿ ಮಹಾ ಹೊಡೆತ ಬಿಜೆಪಿ ಹೈಕಮಾಂಡ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕಮಲ ಮಾಯವಾಗಿದೆ. ಈಗ ಅಧಿಕಾರದಲ್ಲಿರುವ ಕರ್ನಾಟಕವನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಪ್ಲ್ಯಾನ್ ಅನ್ನು ಬಿಜೆಪಿ ರೂಪಿಸಿದೆ. ಇದಕ್ಕಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಬಳಿ ವರಸೆ ಬದಲಿಸಿದೆ. ಮೊದಲೆಲ್ಲ ಹೆಜ್ಜೆ ಹೆಜ್ಜೆಗೂ ಬಿಎಸ್‍ವೈಗೆ ಕಡಿವಾಣ ಹಾಕುತ್ತಿದ್ದ ಹೈಕಮಾಂಡ್ ಈಗ ಕೂಲ್ ಆಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಕರ್ನಾಟಕ ವಿಧಾನಸಭೆ ಉಪ ಚುನಾವಣೆ ಮೇಲೆ ಮಹಾರಾಷ್ಟ್ರದ ಹಿನ್ನಡೆ ಪರಿಣಾಮ ಬೀರುತ್ತಾ ಎಂಬ ಭಯ ಬಿಜೆಪಿ ಪಡೆಯಲ್ಲಿ ಮೂಡಿದೆ. ಹೀಗಾಗಿ ಇಷ್ಟು ದಿನ ‘ಹೈ’ಗೇಮ್ ಆಡುತ್ತಿದ್ದವರು ಈಗ ಕೂಲ್ ಆಗಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಯಡಿಯೂರಪ್ಪನವರೇ ನಿಮ್ಮ ಸರ್ಕಾರ ನಿಮ್ಮ ಕೈಯಲ್ಲಿ ಇದೆ. ಉಪ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಎಡವುದು ಬೇಡ. ಬೀ ಸೇಫ್, ಬೀ ಕೇರ್‍ಫುಲ್, ಡೋಂಟ್‍ವರಿ ನಾವಿದ್ದೇವೆ. ನಿಮ್ಮ ಸರ್ಕಾರಕ್ಕೆ ತೊಂದರೆ ಆಗಲ್ಲ ಎಂದು ಅಭಯ ನೀಡಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎಯ ಸರ್ಕಾರದ ರಚಿಸಿದ ಬಳಿಕ, ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಭರ್ಜರಿ ಗೆಲವು ಸಾಧಿಸಿತ್ತು. ಕೆಲವು ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಿದರೆ, ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜತೆಗೂಡಿ ಮೈತ್ರಿ ಸಾಧಿಸಿ ಅಧಿಕಾರ ಹಿಡಿದಿತ್ತು. ಆದರೆ 2018ರ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿತ್ತು.

  • ಮೊಬೈಲ್ ನೋಡ್ತಾ ರೈಲ್ವೇ ಟ್ರ್ಯಾಕ್ ಮೇಲೆ ಬಿದ್ದ

    ಮೊಬೈಲ್ ನೋಡ್ತಾ ರೈಲ್ವೇ ಟ್ರ್ಯಾಕ್ ಮೇಲೆ ಬಿದ್ದ

    ಅರ್ಜೆಂಟೀನಾ: ಮೊಬೈಲ್ ನೋಡುತ್ತಾ ವ್ಯಕ್ತಿಯೊಬ್ಬ ರೈಲ್ವೇ ಟ್ರ್ಯಾಕ್ ಮೇಲೆ ಬಿದ್ದ ಘಟನೆ ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‍ನಲ್ಲಿ ನಡೆದಿದೆ.

    ವ್ಯಕ್ತಿ ಮೊಬೈಲ್‍ನಲ್ಲಿ ಮಗ್ನನಾಗಿ ರೈಲ್ವೇ ಟ್ರ್ಯಾಕ್ ಮೇಲೆ ಬಿದ್ದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಅರ್ಜೆಂಟೀನಾ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ಡಿದ್ದು, ಸಖತ್ ವೈರಲ್ ಆಗಿದೆ.

    ಟ್ರ್ಯಾಕ್ ಮೇಲೆ ವ್ಯಕ್ತಿ ಬಿದ್ದಿದ್ದನ್ನು ನೋಡಿ ಓರ್ವ ಆತನ ಸಹಾಯಕ್ಕೆ ನಿಲ್ಲುತ್ತಾನೆ. ಬ್ಯಾಗ್, ಮೊಬೈಲ್ ಅನ್ನು ಪ್ಲ್ಯಾಟ್‍ಫಾರ್ಮ್ ಮೇಲೆ ಇಟ್ಟು ತಾನು ಮೇಲೆ ಹತ್ತುತ್ತಾನೆ. ಅದೃಷ್ಟವಶಾತ್ ವ್ಯಕ್ತಿ ಟ್ರ್ಯಾಕ್ ಮೇಲೆ ಬಿದ್ದಾಗ ಯಾವುದೇ ರೈಲು ಬರಲಿಲ್ಲ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ಲ್ಯಾಟ್‍ಫಾರ್ಮ್ ಮೇಲೆ ಹತ್ತಿದ ಕೆಲವೇ ನಿಮಿಷದಲ್ಲಿ ರೈಲು ಬಂದು ನಿಲ್ಲುತ್ತದೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದರು. ಬಳಿಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಜೊತೆಗೆ ವ್ಯಕ್ತಿಯ ರಕ್ಷಣೆಗೆ ನಿಂತ ಇಬ್ಬರು ಸ್ಥಳೀಯರು ರಿಯಲ್ ಹೀರೋಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ಇನ್ನುಮುಂದೆ ಆ ವ್ಯಕ್ತಿ ಮೊಬೈಲ್ ಹುಚ್ಚಿನಿಂದ ಹೊರ ಬರುತ್ತಾನೆ ಎಂದು ವ್ಯಂಗ್ಯವಾಡಿದ್ದಾರೆ.

    https://twitter.com/not_a_victim/status/1199819391472418817

  • ಬೆಂಗ್ಳೂರಿನಲ್ಲಿ ಮಿತಿಮೀರಿದ ಡೂಪ್ಲಿಕೇಟ್ ದುನಿಯಾ

    ಬೆಂಗ್ಳೂರಿನಲ್ಲಿ ಮಿತಿಮೀರಿದ ಡೂಪ್ಲಿಕೇಟ್ ದುನಿಯಾ

    – ಪೇಸ್ಟ್‌ನಿಂದ ಬಟ್ಟೆವರೆಗೆ ಎಲ್ಲವೂ ನಕಲಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೂಪ್ಲಿಕೇಟ್ ದುನಿಯಾ ಭರ್ಜರಿ ಸದ್ದು ಮಾಡುತ್ತಿದ್ದು, ಬ್ರ್ಯಾಂಡೆಂಡ್ ಕಂಪನಿಗಳ ಹೆಸರಲ್ಲಿ ದೋಖಾ ನಡೆಯುತ್ತಿದೆ.

    ಬೆಳಗ್ಗೆ ಎದ್ದ ತಕ್ಷಣ ಬಳಿಸುವ ಟೂತ್‍ಪೇಸ್ಟ್‌ನಿಂದ ಹಿಡಿದು, ರಾತ್ರಿ ಮಲಗುವಾಗ ಬಳಸುವ ಗುಡ್‍ನೈಟ್ ಕಾಯಿಲ್ ವರೆಗೂ ಎಲ್ಲಾ ವಸ್ತುಗಳು ಬ್ರ್ಯಾಂಡೆಂಡ್ ಆಗಿರಬೇಕು ಅಂತ ಬಯಸುತ್ತೇವೆ. ಅಷ್ಟೇ ಯಾಕೆ ಏನೇ ಖರೀದಿಸುವ ಮುನ್ನ ಬ್ರ್ಯಾಂಡ್ ಯಾವುದು ಎಂದು ನೋಡುತ್ತೇವೆ. ಇದನ್ನೇ ಟಾರ್ಗೆಟ್ ಮಾಡಿಕೊಂಡು ಬ್ರ್ಯಾಂಡ್  ನಕಲಿ ಮಾಡುತ್ತಿರುವ ಮಾರ್ಕೆಟ್ ವೀರರ ಜಾಲ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ವೇಳೆ ಬಯಲಾಗಿದೆ.

    ಚೀಪ್‍ರೇಟ್, ಹಾಫ್‍ರೇಟ್ ಎಂದು ಕೂಗುವ ಅನೇಕ ವ್ಯಾಪಾರಿಗಳ ಬಳಿ ಸ್ಟ್ಯಾಂಡರ್ಡ್ ಬ್ರ್ಯಾಂಡೆಡ್ ವಸ್ತುಗಳು ಕಾಣುತ್ತವೆ. ಆದರೆ ಕಡಿಮೆ ಬೆಲೆಗೆ ಸಿಗುತ್ತವೆ ಅಂತ ಖರೀದಿಸಿದರೆ ಭಾರೀ ದೋಖಾಗೆ ಗುರಿಯಾಗಬೇಕಾಗುತ್ತದೆ ಏಕೆಂದರೆ ಬೆಂಗಳೂರಿನ ಅನೇಕ ಮಾರ್ಕೆಟ್‍ಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ದೊಡ್ಡ ದೊಡ್ಡ ಬ್ರ್ಯಾಂಡ್‍ಗಳ ನಕಲಿ ವಸ್ತುಗಳು ಮಾರಾಟವಾಗುತ್ತಿವೆ.

    ಬೆಂಗಳೂರಿಗರ ನೆಚ್ಚಿನ ಶಾಪಿಂಗ್ ಸ್ಪಾಟ್ ಅಂದರೆ ಚಿಕ್ಕಪೇಟೆ. ಇಲ್ಲಿ ನಡೆಯುವ ಸಂಡೆ ಬಜಾರ್ ನಲ್ಲಿ ಗುಂಡು ಪಿನ್ನಿನಿಂದ ಹಿಡಿದು ಲಿಫ್ಟ್ ಬಿಡಿಭಾಗಗಳವರೆಗೂ ಎಲ್ಲಾ ವಸ್ತುಗಳು ಸಿಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಬ್ರ್ಯಾಂಡ್ ವಸ್ತುಗಳೇ ಸಿಗುತ್ತದೆ. ಅವುಗಳನ್ನು ನೀವೇನಾದರೂ ಖರೀದಿಸಿದರೆ ಮೋಸ ಹೋಗುವುದಂತೂ ಗ್ಯಾರಂಟಿ. ಏಕೆಂದರೆ ಇವೆಲ್ಲ ಅಸಲಿ ಬ್ರ್ಯಾಂಡ್‍ಗಳ ವಸ್ತುಗಳಲ್ಲ. ಇಷ್ಟು ಕಡಿಮೆ ದರದಲ್ಲಿ ಅಸಲಿ ಉತ್ಪನ್ನ ಸಿಗುವುದಿಲ್ಲ. ಕಡಿಮೆ ದರಕ್ಕೆ ಸಿಗುವ ವಸ್ತುಗಳು ಸೆಕೆಂಡ್ ಕಾಪಿ, ಒರಿಜಿನಲ್ ಅಲ್ಲ ಎಂದು ಸ್ವತಃ ವ್ಯಾಪಾರಿಗಳೇ ಒಪ್ಪಿಕೊಳ್ಳುತ್ತಾರೆ. ಬ್ರ್ಯಾಂಡ್ ಕ್ರೇಜ್ ಇರುವ ಗ್ರಾಹಕರಿಗೆ ವ್ಯಾಪಾರಿಗಳು ಚೆನ್ನಾಗಿ ಟೋಪಿ ಹಾಕುತ್ತಿದ್ದಾರೆ.

    ಎಸ್.ಪಿ.ರೋಡ್, ಕೆ.ಆರ್.ಮಾರ್ಕೆಟ್ ನಲ್ಲಿಯೂ ರಾಶಿ ರಾಶಿ ಎಲೆಕ್ಟ್ರಿಕ್ ವಸ್ತುಗಳನ್ನು ಕಾಣುತ್ತೇವೆ. ಪ್ರತಿಷ್ಠಿತ ಕಂಪನಿಗಳ ಹೆಸರು ಹೊಂದಿರುವ ಮೊಬೈಲ್ ಚಾರ್ಜರ್, ಇಯರ್ ಫೋನ್, ಸ್ಪೀಕರ್, ಹೆಡ್ ಫೋನ್‍ಗಳನ್ನು ಇಲ್ಲಿ ಸಿಗುತ್ತವೆ. ಸಾಮಾಜಿನ್ಯವಾಗಿ ಕಡಿಮೆ ದರಕ್ಕೆ ಸಿಗುವ ಈ ಎಲ್ಲ ವಸ್ತುಗಳು ನಕಲಿಯಾಗಿವೆ.

    ಶಿವಾಜಿ ನಗರದಲ್ಲಿ 32 ಜಿಬಿ ಪೆನ್ ಡ್ರೈವ್ ಕೇವಲ ನೂರು ರೂಪಾಯಿಗೆ, 2-3 ಸಾವಿರ ರೂ.ಗೆ ಎಲ್‍ಇಡಿ ಟಿವಿಗಳು, ಸ್ಪೀಕರ್, ಹೋಮ್ ಥೇಂಟರ್ ಗಳು ಸಿಗುತ್ತವೆ. ಮೆಜೆಸ್ಟಿಕ್‍ಗೆ ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ. ಇಲ್ಲಿನ ಅಂಡರ್ ಪಾಸ್‍ನಲ್ಲಿ ಮೊಬೈಲ್‍ಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಮಾರಾಟವಾಗುತ್ತವೆ. ಇವುಗಳಲ್ಲಿ ಹೆಚ್ಚಿನ ವಸ್ತುಗಳು ನಕಲಿ ವಸ್ತುಗಳೇ ಆಗಿದೆ ಎನ್ನಲಾಗಿದೆ.

    ಈ ನಕಲಿ ವಸ್ತುಗಳ ಮಾರಾಟ ಜಾಲ ಅವ್ಯಾಹತವಾಗಿ ಸಾಗಿದ್ದು, ಎಲ್ಲಾ ರೀತಿಯ ಮೊಬೈಲ್‍ಗೆ ಸಂಬಂಧಿಸಿದ ವಸ್ತುಗಳು, ವಾಚ್, ಗೃಹೋಪಯೋಗಿ ವಸ್ತುಗಳು ಮಾರಾಟವಾಗುತ್ತಿವೆ. ಇವುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿವೆ ಎಂದು ವೈದ್ಯರು ಹೇಳುತ್ತಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿರುವ ವೈದ್ಯರು ಆಂಜನಪ್ಪ, ನಕಲಿ ಬ್ರ್ಯಾಂಡ್ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇ ದುಷ್ಪರಿಣಾಮ ಬೀರುತ್ತದೆ. ಸ್ಮಾರ್ಟ್ ಫೋನ್‍ಗಳ ನಕಲಿ ಚಾರ್ಜರ್ ಗಳು ಸ್ಫೋಟವಾಗುವ ಸಾಧ್ಯತೆ ಹೆಚ್ಚು. ಹೀಗೆ ಸ್ಫೋಟವಾದಾಗ ಕಣ್ಣು ಸೇರಿದಂತೆ ದೇಹದ ಇತರೆ ಭಾಗಗಳಿಗೆ ಗಾಯವಾಗುತ್ತದೆ. ನಕಲಿ ಇಯರ್ ಫೋನ್, ಹೆಡ್ ಫೋನ್ ಹಾಕುವುದರಿಂದ ಕಿವಿಯಲ್ಲಿ ರಕ್ತ ಸೋರಬಹುದು ಎಂದು ತಿಳಿಸಿದ್ದಾರೆ.

  • ಫೋನ್ ಆರ್ಡರ್ ಮಾಡಿದ್ದ ಬಿಜೆಪಿ ಎಂಪಿಗೆ ಬಂದಿದ್ದು ಎರಡು ಕಲ್ಲು

    ಫೋನ್ ಆರ್ಡರ್ ಮಾಡಿದ್ದ ಬಿಜೆಪಿ ಎಂಪಿಗೆ ಬಂದಿದ್ದು ಎರಡು ಕಲ್ಲು

    ಕೋಲ್ಕತ್ತಾ: ದೀಪಾವಳಿ ಹಬ್ಬದ ಪ್ರಯುಕ್ತ ಫೋನ್ ಆರ್ಡರ್ ಮಾಡಿದ ಸಂಸದರೊಬ್ಬರಿಗೆ ಆನ್‍ಲೈನ್ ಸಂಸ್ಥೆ ಎರಡು ಕಲ್ಲನ್ನು ಕಳುಹಿಸಿದೆ.

    ಪಶ್ಚಿಮ ಬಂಗಾಳದ ಮಾಲ್ಡಾ ಕ್ಷೇತ್ರದ ಬಿಜೆಪಿ ಸಂಸದ ಖಾಗನ್ ಮುರ್ಮು ಅವರು ದೀಪಾವಳಿ ಹಬ್ಬಕ್ಕೆಂದು ಇ-ಕಾಮರ್ಸ್ ಎಂಬ ಆನ್‍ಲೈನ್ ಕಂಪನಿಯ ಮೂಲಕ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಫೋನಿನ ಬದಲು ಅವರಿಗೆ ಎರಡು ಕಲ್ಲನ್ನು ಪಾರ್ಸೆಲ್ ಮಾಡಲಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮುರ್ಮು ಅವರು ಸೋಮವಾರ ಬೆಳಗ್ಗೆ ಪಾರ್ಸೆಲ್ ಬಂದಿದೆ. ಆಗ ನಾನು ಮನೆಯಲ್ಲಿ ಇರಲಿಲ್ಲ. ನನ್ನ ಹೆಂಡತಿ ಪಾರ್ಸೆಲ್ ಪಡೆದು 11,999 ರೂ ಕ್ಯಾಶ್ ನೀಡಿದ್ದಾಳೆ. ನಂತರ ನಾನು ಮನೆಗೆ ಬಂದು ಬಾಕ್ಸ್ ತರೆದು ನೋಡಿದಾಗ ಅಲ್ಲಿ ಎರಡು ಕಲ್ಲುಗಳು ಮಾತ್ರ ಇದ್ದವು. ವಿಶೇಷವೆಂದರೆ ನಾವು ಸ್ಯಾಮ್ಸಂಗ್ ಮೊಬೈಲ್ ಬುಕ್ ಮಾಡಿದರೆ ಅವರು ರೆಡ್‍ಮಿ ಮೊಬೈಲ್ ಬಾಕ್ಸ್ ನಲ್ಲಿ ಕಲ್ಲನ್ನು ಪಾರ್ಸೆಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ನಾನು ಯಾವತ್ತು ಆನ್‍ಲೈನ್ ಅಲ್ಲಿ ವ್ಯಾಪಾರ ಮಾಡಿದ ವ್ಯಕ್ತಿ ಅಲ್ಲ. ಆದರೆ ಇದನ್ನು ನನ್ನ ಮಗ ನನಗಾಗಿ ಬುಕ್ ಮಾಡಿದ್ದ. ಆದರೆ ನಾವು ತೆಗೆಯುವ ಮುಂಚೆಯೇ ಯಾರೋ ಬಾಕ್ಸ್ ಓಪನ್ ಮಾಡಿದ್ದಾರೆ. ಬೇಕೆಂದೆ ಎರಡು ಕಲ್ಲು ಇಟ್ಟುಕೊಟ್ಟಿದ್ದಾರೆ. ಈ ಸಂಬಂಧ ನಾನು ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ವಿಷಯವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಿಗೆ ವರದಿ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮಾಲ್ಡಾ ಠಾಣೆಯ ಪೊಲೀಸ್ ಅಧಿಕಾರಿ ಅಲೋಕ್ ರಾಜೋರಿಯಾ, ಇದು ಸಂಸ್ಥೆಯಿಂದ ಆಗಿರುವ ಸಮಸ್ಯೆ ಅಲ್ಲ. ಇದರ ಮಧ್ಯೆ ಯಾರೋ ಬೇಕಂತಲೇ ಹೀಗೆ ಮಾಡಿದ್ದಾರೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಸಿದ್ದರಾಮಯ್ಯ ನನ್ನ ತಂದೆ ಸಮಾನ, ಅವರು ಹೊಡೆದಿದ್ದು ನನಗೆ ಬೇಜಾರಾಗಿಲ್ಲ: ಸಿದ್ದು ಅಪ್ತ

    ಸಿದ್ದರಾಮಯ್ಯ ನನ್ನ ತಂದೆ ಸಮಾನ, ಅವರು ಹೊಡೆದಿದ್ದು ನನಗೆ ಬೇಜಾರಾಗಿಲ್ಲ: ಸಿದ್ದು ಅಪ್ತ

    ಮೈಸೂರು: ಸಿದ್ದರಾಮಯ್ಯ ನನ್ನ ತಂದೆ ಸಮಾನ. ಅವರು ಹೊಡೆದಿದ್ದು ನನಗೆ ಬೇಜಾರಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಂದ ಕಪಾಳಮೋಕ್ಷ ಮಾಡಿಸಿಕೊಂಡ ಬೆಂಬಲಿಗ ನಾಡನಹಳ್ಳಿ ರವಿ ಸ್ಪಷ್ಟನೆ ನೀಡಿದ್ದಾರೆ.

    ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ರವಿಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಕೈ ಮುಖಂಡ ರವಿ, ತಮಾಷೆಗೆ ಅವರು ನನ್ನ ಕಪಾಳಕ್ಕೆ ಹೊಡೆದರು ಎಂದು ಹೇಳಿದ್ದಾರೆ.

    ಸಿದ್ದರಾಮಯ್ಯರನ್ನು ಪ್ರತಿಭಟನೆಗೆ ಆಹ್ವಾನಿಸಲು ಬಂದಿದ್ದೆ. ನಾನು ಕೇಳಿದ್ದಕ್ಕೆ ಬರೋಲ್ಲ ನೀವೇ ಪ್ರತಿಭಟನೆ ಮಾಡಿ ಅಂದರು. ಆದರೆ ಮರಿಗೌಡರು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ಕೊಡೋಕೆ ಹೇಳಿದ್ದರು. ಅದಕ್ಕೆ ಕೊಡೋಕೆ ಹೋದೆ. ಅದಕ್ಕೆ ತಮಾಷೆಗೆ ಅವರು ಕಪಾಳಕ್ಕೆ ಹೊಡೆದರು. ಇದರಲ್ಲಿ ಬೇರೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಸಿದ್ದರಾಮಯ್ಯ ಆಪ್ತ ಮತ್ತು ಗ್ರಾಮಪಂಚಾಯಿತಿ ಮಾಜಿ ಸದಸ್ಯ ನಾಡನಹಳ್ಳಿ ರವಿ ಹೇಳಿದ್ದಾರೆ.

    ನಡೆದಿದ್ದೇನು?
    ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ವಾಪಸ್ ಹೋಗುತ್ತಿದ್ದ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗ ಯಾರಿಗೋ ಫೋನ್ ಮಾಡಿ ಮಾತನಾಡುವಂತೆ ಅವರಿಗೆ ಕೊಟ್ಟಿದ್ದರು. ಇದಕ್ಕೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಮೊಬೈಲ್ ತಳ್ಳಿ, ಬೆಂಬಲಿಗನ ಕೆನ್ನೆಗೆ ಬಾರಿಸಿ, ನಡಿಯೋ ಎಂದು ಕರೆದುಕೊಂಡು ಹೋಗಿದ್ದರು. ಕೈ ಮುಖಂಡರ ಸಮ್ಮುಖದಲ್ಲೇ, ವಿಮಾನ ನಿಲ್ದಾಣದ ಆವರಣದಲ್ಲೇ ಬೆಂಬಲಿಗನ ಕೆನ್ನೆಗೆ ಸಿದ್ದರಾಮಯ್ಯ ಹೊಡೆದಿದ್ದು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

  • ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

    ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

    ಶ್ರೀನಗರ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಫೋನ್ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆ ಮತ್ತೆ ಆರಂಭವಾಗಿದೆ.

    ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಏನಾದರೂ ಹಿಂಸಾಚಾರ ನಡೆಯಬಹುದೆಂದು ಭದ್ರತಾ ಸಿಬ್ಬಂದಿ ಕಣಿವೆ ರಾಜ್ಯದ ಎಲ್ಲಾ ಕಡೆಗಳಲ್ಲು ಭದ್ರತೆ ಒದಗಿಸುತ್ತಿದ್ದಾರೆ.

    ಶ್ರೀನಗರದಲ್ಲಿರುವ ಮುಖ್ಯ ಜಾಮಾ ಮಸೀದಿಯ ಬಾಗಿಲನ್ನು ಮುಚ್ಚಲಾಗಿದೆ. ಆದರೆ ನಗರದ ಕೆಲ ಸಣ್ಣ ಮಸೀದಿಯಲ್ಲಿ ಮಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗೆಯೇ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಿ, ಯಾವುದೇ ಗಲಾಟೆಗಳು ನಡೆಯದಂತೆ ಜನರು ನೋಡಿಕೊಂಡರೆ ಮಸೀದಿ ಬಾಗಿಲನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿದಂತೆ ಸುಮಾರು 400 ರಾಜಕೀಯ ನಾಯಕರು ಗೃಹ ಬಂಧನದಲ್ಲೇ ಇದ್ದಾರೆ.

    ಗುರುವಾರದಂದು ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, ನಗರದಲ್ಲಿ ಶಾಂತಿಯನ್ನು ಜನರು ಹೀಗೆ ಕಾಯ್ದುಕೊಂಡು ಬಂದರೆ ಶುಕ್ರವಾರದ ಪ್ರಾರ್ಥನೆ ಹಾಗೂ ಈದ್ ಹಬ್ಬಕ್ಕೆ ಹೇರಿರುವ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ಹೇಳಿದ್ದಾರೆ.

    ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುವಾಗ, ಸೋಮವಾರ ನಡೆಯುವ ಈದ್ ಹಬ್ಬದ ಸಂಭ್ರಮಕ್ಕೆ ಸರ್ಕಾರ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ 370ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿರುವುದು ವಾಸ್ತವ್ಯ. ಆದರೆ ಈ ಹಿನ್ನೆಲೆ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು.

    ಕಾಶ್ಮೀರ ಕಣಿವೆಯಲ್ಲಿ ಕಫ್ರ್ಯೂ ಹಾಕಿದ್ದರೂ ಈದ್ ಹಬ್ಬದ ಹಿನ್ನೆಲೆ ರಾಜ್ಯದಿಂದ ಹೊರಗಿರುವ ಕಾಶ್ಮೀರಿ ನಿವಾಸಿಗಳು ಕುಟುಂಬಸ್ಥರ ಜೊತೆ ಹಬ್ಬ ಆಚರಿಸಲು ವಿಮಾನಗಳ ಮೂಲಕ ಶ್ರೀನಗರಕ್ಕೆ ಬರುತ್ತಿದ್ದಾರೆ.

  • 8 ದಿನದೊಳಗೆ ಕೊಲೆ ಮಾಡ್ತೀನಿ- ಮಹದಾಯಿ ಹೋರಾಟಗಾರನಿಗೆ ಬೆದರಿಕೆ ಕರೆ

    8 ದಿನದೊಳಗೆ ಕೊಲೆ ಮಾಡ್ತೀನಿ- ಮಹದಾಯಿ ಹೋರಾಟಗಾರನಿಗೆ ಬೆದರಿಕೆ ಕರೆ

    ಧಾರವಾಡ: ಮಹದಾಯಿ ಹೋರಾಟಗಾರ ಹಾಗೂ ರೈತ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರಿಗೆ ಅನಾಮಧೇಯ ವ್ಯಕ್ತಿಯೋರ್ವ ಫೋನ್ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ.

    ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಸೊಬರದಮಠ ಅವರು ನರಗುಂದದಲ್ಲಿ ಕಳೆದ ಐದು ವರ್ಷಗಳಿಂದ ಮಹದಾಯಿ ಹೋರಾಟ ಮಾಡುತ್ತಿದ್ದಾರೆ. ಆದರೆ ಶುಕ್ರವಾರ ರಾತ್ರಿ ವ್ಯಕ್ತಿಯೋರ್ವ ಅವರಿಗೆ ಮೊಬೈಲ್ ಕರೆ ಮಾಡಿ 8 ದಿನದೊಳಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಈ ಸಂಬಂಧ ಪ್ರತಿಕಾ ಪ್ರಕಟನೆ ನೀಡಿರುವ ವೀರೇಶ ಸೊಬರದಮಠ, ಫೋನ್ ಮಾಡಿದ ವ್ಯಕ್ತಿಯನ್ನು ನೀನು ಯಾರು ಪ್ರಶ್ನಿಸಿದೆ. ಆದರೆ ಅವನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಫೋನ್ ಕಟ್ ಮಾಡಿದ ಎಂದು ತಿಳಿಸಿದ್ದಾರೆ.

    ಈ ಕುರಿತು ವೀರೇಶ ಸೊಬರದಮಠ ಅವರು ನವಲಗುಂದ ಠಾಣೆಗೆ ದೂರು ನೀಡಿದ್ದಾರೆ. ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ನಂಬರ್ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

  • ಆಟವಾಡಲು ಮಗನಿಗೆ ಫೋನ್ ಕೊಟ್ಟು ಸಿಕ್ಕಾಕೊಂಡ ತಂದೆ

    ಆಟವಾಡಲು ಮಗನಿಗೆ ಫೋನ್ ಕೊಟ್ಟು ಸಿಕ್ಕಾಕೊಂಡ ತಂದೆ

    ಬೆಂಗಳೂರು: 43 ವರ್ಷದ ತಂದೆಯೊಬ್ಬ ಮಗನಿಗೆ ಆಡಲು ಮೊಬೈಲ್ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾನೆ. 14 ವರ್ಷದ ಮಗ ತನ್ನ ತಂದೆ ಲವ್ವರ್ ಜೊತೆ ಮಾತನಾಡಿದ್ದನ್ನು ಪತ್ತೆ ಮಾಡಿ ತಾಯಿಗೆ ತಿಳಿಸಿದ್ದಾನೆ. ಈ ಮೂಲಕ ತಂದೆ ತನ್ನ ಅಕ್ರಮ ಸಂಬಂಧವನ್ನು ತಾನೇ ಬಯಲು ಮಾಡಿಕೊಂಡಂತಾಗಿದೆ.

    ಬೆಂಗಳೂರಿನ ಬನಶಂಕರಿ ಮೂರನೇ ಹಂತದ ನಿವಾಸಿಯಾಗಿರುವ 39 ವರ್ಷದ ಮಹಿಳೆ ಮೀನಾಕ್ಷಿ(ಹೆಸರು ಬದಲಾಯಿಸಲಾಗಿದೆ) ಪತಿಯ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಹಲ್ಲೆ ಆರೋಪವನ್ನೂ ಮಾಡಿದ್ದಾರೆ.

    ಏನಿದು ಪ್ರಕರಣ?
    ಮೀನಾಕ್ಷಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಪತಿ ನಾಗರಾಜು, ಸಾಮಾಜಿಕ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದನು. ಜುಲೈ 11 ತನ್ನ ಮಗನಿಗೆ ಮೊಬೈಲ್ ಕೊಟ್ಟಿದ್ದು, ಮಗ ಆಟವಾಡುತ್ತಿದ್ದನು. ಆದರೆ ಆಕಸ್ಮಿಕವಾಗಿ ಫೋನ್ ರೆಕಾರ್ಡರ್ ಹಾಗೂ ವಾಟ್ಸಪ್ ಚಾಟ್ ಓಪನ್ ಆಗಿದೆ. ಈ ವೇಳೆ ವಾಟ್ಸಪ್‍ಗೆ ಅಶ್ಲೀಲ ಸಂದೇಶ, ಆಡಿಯೋ ಬಂದಿರುವುದನ್ನು ಮಗ ಗಮನಿಸಿದ್ದಾನೆ. ಅಷ್ಟೇ ಅಲ್ಲದೆ ತನ್ನ ತಂದೆ ಬೇರೊಬ್ಬ ಮಹಿಳೆ ಜೊತೆ ಮಾತನಾಡಿರುವ ಆಡಿಯೋವನ್ನು ಕೇಳಿಸಿಕೊಂಡಿದ್ದಾನೆ. ತಕ್ಷಣ ಮಗ ತನ್ನ ತಾಯಿಗೆ ಫೋನ್ ತೆಗೆದುಕೊಂಡು ಹೋಗಿ ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾನು ಈ ಬಗ್ಗೆ ಪತಿಯನ್ನು ಪ್ರಶ್ನೆ ಮಾಡಿದೆ. ಆದರೆ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೀನಾಕ್ಷಿ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ಬೇರೆ ಯಾರಿಗಾದರೂ ಹೇಳಿದರೆ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಮೀನಾಕ್ಷಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ವಿಚಾರಣೆ ಮಾಡಲು ಮೀನಾಕ್ಷಿಯನ್ನು ಪೊಲೀಸ್ ಠಾಣೆಗೆ ಕರೆದಿದ್ದಾರೆ. ಆದರೆ ಮಹಿಳೆ ಪೊಲೀಸ್ ಠಾಣೆಗೆ ಬರುವುದಕ್ಕೆ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಈ ಕೇಸಿನ ವಿಚಾರಣೆ ಇನ್ನೂ ನಡೆಸಿಲ್ಲ. ಮಹಿಳೆಗೆ ದೂರು ಹಿಂಪಡೆಯುವಂತೆ ನಾಗರಾಜ್ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

  • ಲ್ಯಾಂಡ್‍ಲೈನ್ ಫೋನನ್ನೇ ಎತ್ತಾಕೊಂಡು ಹೋದ ಕಪಿರಾಯ!

    ಲ್ಯಾಂಡ್‍ಲೈನ್ ಫೋನನ್ನೇ ಎತ್ತಾಕೊಂಡು ಹೋದ ಕಪಿರಾಯ!

    ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಕೋತಿಗಳ ಕಾಟ ಜೋರಾಗಿದ್ದು, ಕೋತಿಯೊಂದು ಕಚೇರಿಯಲ್ಲಿದ್ದ ಲ್ಯಾಂಡ್‍ಲೈನ್ ಫೋನನ್ನೇ ಹೊತ್ತೊಯ್ದಿದೆ.

    ಹೌದು. ಕಚೇರಿಯೊಳಗಿಂದ ಲ್ಯಾಂಡ್ ಲೈನ್ ಕಸಿದುಕೊಂಡು ಬಂದಿರೋ ಕೋತಿ ಜಿಲ್ಲಾಡಳಿತ ಭವನದ ಬೃಹತ್ ಕಟ್ಟಡ ಏರಿ ಆರಾಮಾಗಿ ಕೂತಿದೆ. ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರೋ ಕೋತಿಗಳು ಜಿಲ್ಲಾಡಳಿತ ಭವನವನ್ನೇ ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ.

    ಯಾರ ಅಂಜಿಕೆಯಿಲ್ಲದೆ ಕಚೇರಿಗೆ ನುಗ್ಗಿ ಕೈಗೆ ಸಿಗೋ ವಸ್ತುಗಳನ್ನೆಲ್ಲ ಈ ಕೋತಿಗಳು ಹೊತ್ತೊಯ್ಯುತ್ತಿದ್ದು ಸಖತ್ ತೊಂದರೆ ಕೊಡುತ್ತಿವೆ. ಒಟ್ಟಿನಲ್ಲಿ ದಿನೇ ದಿನೇ ಕೋತಿಗಳ ಉಪಟಳ ಮಿತಿ ಮೀರಿದ್ದು ಕೋತಿಗಳ ಕಾಟಕ್ಕೆ ಕಡಿವಾಣ ಹಾಕೋಕಾಗದೆ ಅಧಿಕಾರಿಗಳು ತಲೆ ಕೆಡೆಸಿಕೊಳ್ಳುವಂತಾಗಿದೆ.

  • ದಿನೇಶ್ ಗುಂಡೂರಾವ್‍ಗೆ ಸಿಎಂ ಹೆಚ್‍ಡಿಕೆ ಫುಲ್ ಕ್ಲಾಸ್!

    ದಿನೇಶ್ ಗುಂಡೂರಾವ್‍ಗೆ ಸಿಎಂ ಹೆಚ್‍ಡಿಕೆ ಫುಲ್ ಕ್ಲಾಸ್!

    ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮಂಡ್ಯ ಕಾಂಗ್ರೆಸ್ ನಾಯಕರ ಸಭೆಯ ವಿಡಿಯೋ ಲೀಕ್ ಮಾಡಿಸಿದ್ದಾರೆ ಎಂದು ಹೇಳಲಾಗಿದ್ದು, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಮೇಲೆ ಫುಲ್ ಗರಂ ಆಗಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ಫೋನ್ ಮಾಡಿ ಫುಲ್ ಕ್ಲಾಸ್ ತಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದುವರೆಗೆ ತೆರೆಮರೆಯಲ್ಲಿ ಆಟ ಆಡಿದ್ದವರೆಲ್ಲಾ ಈಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ನೀವೇನು ಮಾಡುತ್ತಿದ್ದೀರಾ ಎಂದು ದಿನೇಶ್ ಗುಂಡೂರಾವ್ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಮೈತ್ರಿ ಧರ್ಮ ಪಾಲಿಸದ ಕೈ ನಾಯಕರು ಮಂಡ್ಯದಲ್ಲಿ ಏನೇನು ಮಾಡಿದ್ದಾರೆ ಅನ್ನೋದು ಎಲ್ಲ ನನಗೆ ಗೊತ್ತಿದೆ. ಇನ್ನೂ ಚುನಾವಣಾ ಫಲಿತಾಂಶ ಬಂದಿಲ್ಲ. ಅಷ್ಟರಲ್ಲೇ ಎಲ್ಲ ಒಟ್ಟಿಗೆ ಕುಳಿತು ಸಭೆ ನಡೆಸುತ್ತಿದ್ದಾರೆ. ಯಾರು ಏನು ಆಟ ಆಡುತ್ತಿದ್ದಾರೆ ಎಲ್ಲವೂ ನನಗೆ ಗೊತ್ತಿದೆ. ಇಷ್ಟು ಬಹಿರಂಗವಾಗಿ ಮೈತ್ರಿ ಮುರಿದವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ನೇರವಾಗಿಯೇ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

    ಎಲ್ಲವನ್ನು ಕುಳಿತು ಮಾತನಾಡೋಣ, ನೀವು ಬೆಂಗಳೂರಿಗೆ ಬಂದ ಮೇಲೆ ಭೇಟಿಯಾಗೋಣ ಎಂದು ದಿನೇಶ್ ಗುಂಡೂರಾವ್ ಸಮಾಧಾನ ಪಡಿಸುವ ಯತ್ನ ಮಾಡಿದ್ದಾರೆ. ಆದರೆ ಸಿಎಂ ಏನು ಮಾಡುತ್ತೀರಾ ನೋಡಿ. ಹೀಗೆ ಆದರೆ ಮುಂದುವರಿಯಲು ಎಲ್ಲ ರೀತಿಯಲ್ಲೂ ಕಷ್ಟವಾಗುತ್ತೆ ಮಂಡ್ಯ ನಾಯಕರ ಮೇಲಿನ ಸಿಟ್ಟನ್ನು ಆಕ್ರೋಶ ಭರಿತರಾಗಿ ಸಿಎಂ ಹೊರಹಾಕಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.