Tag: pejawarashree

  • ಪೇಜಾವರಶ್ರೀ ರಾಮಮಂದಿರದ ಭೂಮಿಪೂಜೆ ಮಾಡಬೇಕು – ಮಂತ್ರಾಲಯ ಶ್ರೀ

    ಪೇಜಾವರಶ್ರೀ ರಾಮಮಂದಿರದ ಭೂಮಿಪೂಜೆ ಮಾಡಬೇಕು – ಮಂತ್ರಾಲಯ ಶ್ರೀ

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಉಸಿರಾಟ ಸಮಸ್ಯೆಯಿಂದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಮಂತ್ರಾಲಯ ಮಠಾಧೀಶ ಸುಬುಧೇದ್ರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಮಂತ್ರಾಲಯದಲ್ಲಿ ದೈನಂದಿನ ಪೂಜೆ ಮುಗಿಸಿ ಬಂದಿದ್ದೇವೆ. ಶ್ರೀಗಳನ್ನು ಕಣ್ಣಾರೆ ನೋಡಿ ಈಗ ತೃಪ್ತಿ ಆಯಿತು. ಕ್ರಮ ಕ್ರಮವಾಗಿ ಗುಣಮುಖ ಆಗ್ತಾಯಿದ್ದಾರೆ. ಮಠದ ವತಿಯಿಂದ ಹೋಮ, ಜಪ, ಧಾರ್ಮಿಕ ವಿಧಿ ವಿಧಾನ ಏರ್ಪಡಿಸಿದ್ದೇವೆ. ಶಾಖಾಮಠ, ಭಕ್ತರು ಮತ್ತು ವಿದ್ವಾಂಸರಿಗೆ ಕರೆ ಕೊಟ್ಟು ಪ್ರಾರ್ಥನೆಗಳನ್ನು ಮಾಡಿದ್ದೇವೆ. ವೈದ್ಯ ತಂಡ ತುಂಬಾ ಶ್ರಮ ವಹಿಸುತ್ತಿದೆ. ಕೆಎಂಸಿ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

    ಕಿರಿಯ ಸ್ವಾಮೀಜಿಗಳಿಗೂ ಧೈರ್ಯ ನೀಡಿದ್ದೇವೆ. ದೇವರು ಅವರನ್ನು ಬೇಗ ಗುಣಮುಖವಾಗುವಂತೆ ಮಾಡಲಿ. ಪೇಜಾವರ ಶ್ರೀ ರಾಮಮಂದಿರಕ್ಕೆ ಧಾರ್ಮಿಕ ಲೌಕಿಕ ಹೋರಾಟ ಮಾಡಿದ ಹಿರಿಯ ವ್ಯಕ್ತಿ. ರಾಮಮಂದಿರ ನಿರ್ಮಾಣವಾಗಲಿ, ಪೇಜಾವರ ಶ್ರೀಗಳೇ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿ ಎಂದು ಮಂತ್ರಾಲಯ ಸ್ವಾಮೀಜಿ ಹಾರೈಸಿದರು.

  • ಕುಮಾರಸ್ವಾಮಿ ಪೂರ್ಣಾವಧಿ ಸರ್ಕಾರ ಮಾಡಲಿ – ಪೇಜಾವರಶ್ರೀ ಹಾರೈಕೆ

    ಕುಮಾರಸ್ವಾಮಿ ಪೂರ್ಣಾವಧಿ ಸರ್ಕಾರ ಮಾಡಲಿ – ಪೇಜಾವರಶ್ರೀ ಹಾರೈಕೆ

    ಉಡುಪಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಬ್ಬ ಅನುಭವಿ ರಾಜಕಾರಣಿದ್ದು, ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹಾರೈಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವಿಕೃತಿಯಾಗಿವೆ. ರೆಸಾರ್ಟ್, ಆಪರೇಷನ್ ನಲ್ಲಿ ಜನಪ್ರತಿನಿಧಿಗಳು ತಲ್ಲೀನರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ನೈತಿಕತೆ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡೆಸಿದರು.

    ಕರ್ನಾಟಕ ರಾಜಕೀಯ ಪರಿಸ್ಥಿತಿಯಲ್ಲಿ ಗೊಂದಲ ನಿರ್ಮಾಣವಾದರೆ ರಾಷ್ಟ್ರಪತಿ ಆಡಳಿತದ ಬದಲು ಸರ್ವ ಪಕ್ಷ ಸರ್ಕಾರ ಜಾರಿಗೆ ಬರಬೇಕು. ಅಂತಹ ಪ್ರಯೋಗ ರಾಜ್ಯದಲ್ಲಿ ನಡೆಯಬೇಕಿದ್ದು, ಸರ್ವಪಕ್ಷದ ಆದರ್ಶ ಮಂತ್ರಿ ಮಂಡಲ ರಚನೆಯಾಗಬೇಕು. ವಿಪಕ್ಷ ಮುಕ್ತ ಸರ್ಕಾರ ಸರಿಯಲ್ಲ. ಆದರೆ ವಿಪಕ್ಷ ಇರಬೇಕು ಎನ್ನುವುದು ನನ್ನ ವಾದ ಎಂದು ಸ್ವಾಮಿಜಿ ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಪೂರ್ಣ ತೃಪ್ತಿ ತಂದಿಲ್ಲ. ಮೋದಿ ಅವರಿಂದ ಸಾಕಷ್ಟು ಕೆಲಸಗಳಾಗಿವೆ. ಆದರೆ ನಿರೀಕ್ಷೆಯಷ್ಟು ಸಾಧನೆ ಹಾಗೂ ಬದಲಾವಣೆಗಳಾಗಿಲ್ಲ ಎನ್ನುವ ಬೇಸರವಿದೆ. ರಾಮ ಮಂದಿರಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಗಂಗಾ ನದಿ ಶುದ್ಧೀಕರಣ, ವಿದೇಶದಲ್ಲಿರು ಕಪ್ಪು ಹಣ ದೇಶಕ್ಕೆ ಮರಳಿ ತರುವುದು ಸೇರಿದಂತೆ ಅನೇಕ ಆಶ್ವಾಸನೆಗಳು ಪೂರ್ಣವಾಗಿಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

  • ಉಡುಪಿ ಪೇಜಾವರ ಶ್ರೀ ವಿರುದ್ಧ ದೂರು ದಾಖಲು

    ಉಡುಪಿ ಪೇಜಾವರ ಶ್ರೀ ವಿರುದ್ಧ ದೂರು ದಾಖಲು

    ಬೆಂಗಳೂರು: ಉಡುಪಿ ಮಠದ ಪೇಜಾವರಶ್ರೀ ವಿರುದ್ಧ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಶನಿವಾರ ಉಡುಪಿಯಲ್ಲಿ ನಡೆದ ಧರ್ಮಸಂಸದ್ ನಲ್ಲಿ ಭಾರತೀಯ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ ಅನ್ನೋ ಹೇಳಿಕೆ ವಿರುದ್ಧ ಈ ದೂರು ದಾಖಲಾಗಿದೆ.

    ಇದನ್ನೂ ಓದಿ: ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲ ದೇವಾಲಯ ಸರ್ಕಾರೀಕರಣ ಆಗುತ್ತೆ: ಕಾಂಗ್ರೆಸ್ ವಿರುದ್ಧ ವಿಎಚ್‍ಪಿ ವಾಗ್ದಾಳಿ

    ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ, ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಒಂದು ಕಾನೂನು, ಬಹುಸಂಖ್ಯಾತರಿಗೆ ಒಂದು ಕಾನೂನಿದೆ ಅದ್ದರಿಂದ ಸಂವಿಧಾನವನ್ನು ತಿದ್ದುಪಡಿ ಮಾಡಿದ್ರೆ ತಪ್ಪೇನಿಲ್ಲ ಅಂತಾ ಹೇಳಿಕೆ ನೀಡಿದ್ದರು.

    ಇದನ್ನೂ ಓದಿ: 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    ಈ ಹೇಳಿಕೆಯನ್ನು ಖಂಡಿಸಿ ಇದೀಗ ಬೆಂಗಳೂರು ಸ್ನಾತಕೋತ್ತರ ವಿವಿ ವಿದ್ಯಾರ್ಥಿಗಳು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    https://twitter.com/ShobhaBJP/status/934479849241980928

    https://twitter.com/ShobhaBJP/status/934302285286457345

  • ಕೃಷ್ಣಮಠಕ್ಕೆ 1 ಬಾರಿಯೂ ಹೋಗಿಲ್ಲ, ಪೇಜಾವರಶ್ರೀಯನ್ನು ಮಾತಾಡ್ಸಿಲ್ಲ- 6ನೇ ಬಾರಿಗೆ ನಾಳೆ ಸಿಎಂ ಉಡುಪಿಗೆ

    ಕೃಷ್ಣಮಠಕ್ಕೆ 1 ಬಾರಿಯೂ ಹೋಗಿಲ್ಲ, ಪೇಜಾವರಶ್ರೀಯನ್ನು ಮಾತಾಡ್ಸಿಲ್ಲ- 6ನೇ ಬಾರಿಗೆ ನಾಳೆ ಸಿಎಂ ಉಡುಪಿಗೆ

    ಉಡುಪಿ: ಮುಖ್ಯಮಂತ್ರಿ ಸ್ಥಾನ ಅಲಂಕರಿಸಿಕೊಂಡ ಬಳಿಕ ಸಿಎಂ ಸಿದ್ದರಾಮಯ್ಯ 6ನೇ ಬಾರಿ ಉಡುಪಿಗೆ ಬರ್ತಾ ಇದ್ದಾರೆ. ಸಿಎಂ ಸಿದ್ದರಾಮಯ್ಯ ಉಡುಪಿಗೆ ಬಂದ್ರೂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲ್ಲ ಅನ್ನೋದು ಸದ್ಯ ಚರ್ಚೆಯಲ್ಲಿರುವ ವಿಚಾರವಾಗಿದೆ.

    ಭಾನುವಾರ ಸಿಎಂ ಮತ್ತೆ ಉಡುಪಿಗೆ ಆಗಮಿಸಲಿದ್ದು, ಸರ್ಕಾರ ಸಹಭಾಗಿತ್ವದ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಕೃಷ್ಣ ಮಠದಿಂದ ಈ ಆಸ್ಪತ್ರೆ ಉದ್ಘಾಟನೆ ಆಗುವ ಸ್ಥಳ ಕೇವಲ 200 ಮೀಟರ್ ಅಂತರದಲ್ಲಿದೆ. ಹೀಗಾಗಿ ಊರಿಗೆ ಬಂದವರು ನೀರಿಗೆ ಬರುವುದಿಲ್ಲವೇ ಎಂಬ ಚರ್ಚೆ ವಾಟ್ಸಪ್ ಫೇಸ್‍ಬುಕ್ ಗಳಲ್ಲಿ ಆರಂಭವಾಗಿದೆ.

    ಉಡುಪಿ ಶ್ರೀಕೃಷ್ಣಮಠ, ಇಲ್ಲಿರುವ ಆಚಾರ ವಿಚಾರ ಪದ್ಧತಿಗಳ ಬಗ್ಗೆ ಬಹಳ ವಿರೋಧವಿದ್ದ ಕಾಗಿನೆಲೆ ಸ್ವಾಮೀಜಿ ಅವರು ವಾರದ ಹಿಂದೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದರು. ಪೇಜಾವರ ಶ್ರೀಗಳಿಂದ ಸನ್ಮಾನ ಮಾಡಿಸಿ, ಪರ್ಯಾಯ ಪೇಜಾವರಶ್ರೀ ಮತ್ತು ಕಿರಿಯ ಶ್ರೀಗಳಿಗೆ ಕರಿ ಕಂಬಳಿ ಹೊದಿಸಿ ಗೌರವಾರ್ಪಣೆ ಸಲ್ಲಿಸಿದ್ದರು.

    ಅದೇ ಕುರುಬ ಸಮುದಾಯದ ಸಿಎಂ ಸಿದ್ದರಾಮಯ್ಯ ಕನಕನಿಗೆ ಒಲಿದ ಕೃಷ್ಣನ ನೋಡಲು ಯಾಕೆ ಉಡುಪಿಗೆ ಬರುತ್ತಿಲ್ಲ ಎಂಬುದು ಚರ್ಚೆಯ ವಿಚಾರ. ಪ್ರತಿ ಬಾರಿ ಉಡುಪಿಗೆ ಬಂದಾಗ ಕೃಷ್ಣ ಮಠಕ್ಕೆ ಹೋಗಲು, ಪೇಜಾವರ ಶ್ರೀಗಳನ್ನು ಭೇಟಿ ಮಾಡಲು ಕಾಲ ಕೂಡಿ ಬಂದಿಲ್ಲ ಎಂದು ಹೇಳುತ್ತಲೇ ಸಿಎಂ ಸಿದ್ದರಾಮಯ್ಯ ನುಣುಚಿಕೊಳ್ಳುತ್ತಿದ್ದರು.

    ನಾಳೆ ಉಡುಪಿಗೆ ಬರುವ ಸಿಎಂ ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಬರ್ತಾರಾ? ಪೇಜಾವರ ಶ್ರೀಗಳನ್ನು ಭೇಟಿ ಮಾಡ್ತಾರಾ? ಎನ್ನುವ ಪ್ರಶ್ನೆ ಈಗ ಮತ್ತೆ ಹುಟ್ಟಿಕೊಂಡಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರ ನಾಳಿನ ನಡೆಯ ಬಗ್ಗೆ ಕುತೂಹಲವಿದೆ.

    ಐದು ಬಾರಿ ಸಿಎಂ ಕಾರ್ಯಕ್ರಮ ಉಡುಪಿಯಲ್ಲಿ ನಿಗದಿಯಾದಾಗ ಮಠದಿಂದ ಆಮಂತ್ರಣ ನೀಡಿದ್ದೆವು. ಬರುತ್ತೇನೆ ಎಂದು ಹೇಳುತ್ತಾರೆ, ಆದ್ರೆ ಬಂದಿಲ್ಲ. ಪರ್ಯಾಯಕ್ಕೂ ಆಹ್ವಾನ ನೀಡಿದ್ದೆವು ಅದಕ್ಕೂ ಬರಲಿಲ್ಲ. ಐದು ಬಾರಿ ಬಾರದಿದ್ದಾಗ ಈ ಬಾರಿ ಆಹ್ವಾನ ನೀಡಿಲ್ಲ. ಬಂದರೆ ಸಂತೋಷ, ಬರದಿದ್ದರೆ ಬೇಸರ ಮಾಡಿಕೊಳ್ಳುವುದಿಲ್ಲ ಅಂತ ಪರ್ಯಾಯ ಮಠ ಹೇಳಿದೆ.