Tag: Pedistrian

  • ಜನತಾ ಕರ್ಫ್ಯೂ ವಿರೋಧಿಸಿ ಮನೆ ಹೊರಗೆ ಕೂತ ವಾಟಾಳ್ – ಬುದ್ಧಿ ಹೇಳಿದ ದಾರಿ ಹೋಕ

    ಜನತಾ ಕರ್ಫ್ಯೂ ವಿರೋಧಿಸಿ ಮನೆ ಹೊರಗೆ ಕೂತ ವಾಟಾಳ್ – ಬುದ್ಧಿ ಹೇಳಿದ ದಾರಿ ಹೋಕ

    ಬೆಂಗಳೂರು: ಇಡೀ ವಿಶ್ವವೇ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸಕ್ಕೆ ಆತಂಕಕ್ಕೊಳಗಾಗಿದೆ. ಇತ್ತ ಭಾರತದಲ್ಲೂ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ದೇಶಾದ್ಯಂತ ‘ಜತನಾ ಕರ್ಫ್ಯೂ’ ಜಾರಿಯಾಗಿದೆ. ಇದಕ್ಕೇ ರಾಜ್ಯದ ಜನತೆ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ತಮ್ಮ ಮನೆ ಗೇಟ್ ಮುಂದೆ ಖುರ್ಚಿ ಹಾಕಿಕೊಂಡು ಕುಳಿತು, ನಾನು ಮನೆ ಒಳಗೆ ಇರಲ್ಲ ಹೊರಗೆ ಇರ್ತಿನಿ ಎಂದು ಮುಖಕ್ಕೆ ಮಾಸ್ಕ್ ಧರಿಸಿ ವಾಟಾಳ್ ಕುಳಿತ್ತಿದ್ದಾರೆ. ಇದನ್ನು ನೋಡಿದ ದಾರಿ ಹೋಕರೊಬ್ಬರು ಜನತಾ ಕರ್ಫ್ಯೂ ಮಹತ್ವವನ್ನು ತಿಳಿಸಿ ವಾಟಾಳ್ ನಾಗರಾಜ್‍ಗೆ ಬುದ್ದಿ ಹೇಳಿದ್ದಾರೆ. ಈ ವೇಳೆ ತಮಗೆ ಬುದ್ಧಿ ಹೇಳಿದ ವ್ಯಕ್ತಿಗೆ ವಾಟಾಳ್ ನಾಗರಾಜ್ ವಾಪಾಸ್ ಬುದ್ದಿ ಹೇಳಿ ಕಳುಹಿಸಿದ್ದಾರೆ.

    ಜನತಾ ಕರ್ಫ್ಯೂಗೆ ಮನೆ ಹೊರಗಡೆ ಇದ್ದೇ ಸಪೋರ್ಟ್ ಮಾಡುತ್ತೇನೆ. ಮನೆ ಒಳಗೆ ಇರಲ್ಲ, ಹೊರಗೆ ಇರುತ್ತೇನೆ. ಇಗಲೂ ಮನೆ ಹೊರಗಿದ್ದೇನೆ. ಕೆಲವೇ ಕ್ಷಣಗಳಲ್ಲಿ ನಾನು ಬೀದಿಗೆ ಹೋಗುತ್ತೇನೆ. ಈ ಕರ್ಫ್ಯೂ ಬೇಕಿರಲಿಲ್ಲ ಬದಲಿಗೆ ಸ್ವಚ್ಛತಾ ದಿನ ಮಾಡಬೇಕಿತ್ತು. ಹೀಗೆ ಕರ್ಫ್ಯೂ ಘೋಷಿಸಿ ಜನರಲ್ಲಿ ಭಯದ ವಾತಾವರಣ ಮೂಡಿಸಲಾಗ್ತಿದೆ ಎಂದು ವಾಟಾಳ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಯುವಕರ ಜಾಲಿ ರೈಡ್ ಬೈಕ್ ಕ್ರೇಜ್‍ನಿಂದ ಪಾದಚಾರಿ ಜೀವಕ್ಕೆ ಕುತ್ತು

    ಯುವಕರ ಜಾಲಿ ರೈಡ್ ಬೈಕ್ ಕ್ರೇಜ್‍ನಿಂದ ಪಾದಚಾರಿ ಜೀವಕ್ಕೆ ಕುತ್ತು

    ಬೆಂಗಳೂರು: ವೀಕೆಂಡ್ ನಲ್ಲಿ ಮೋಜು ಮಸ್ತಿ ಮಾಡಲು ಬೆಂಗಳೂರು ನಗರದಿಂದ ಬರುವ ಯುವಕರ ಜಾಲಿ ರೈಡ್ ಬೈಕ್ ಕ್ರೇಜ್ ನಿಂದ ಪಾದಚಾರಿ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ ನೆಲಮಂಗಲ-ಮಂಗಳೂರು 48ರ ಕುಡ್ಲೂರು ಬಳಿ ಈ ಘಟನೆ ನಡೆದಿದೆ. ಪಾದಚಾರಿ ಸಿದ್ದಪ್ಪಗೆ ಕೆ.ಟಿ.ಎಂ ಐಶರಾಮಿ ಹಾಗೂ ಹೈ ಸ್ಪೀಡ್ ಬೈಕ್ ಡಿಕ್ಕಿ ಹೊಡೆದಿದೆ.

    ಸದ್ಯ ಸಿದ್ದಪ್ಪ ಚಿಂತಾಜನಕ ಸ್ಥಿತಿಯಲ್ಲಿದ್ದು, ಸ್ಥಳಿಯ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬೆಂಗಳೂರು ನಗರದಿಂದ ಸುಮಾರು 30 ಯುವಕರ ತಂಡ ಐಶಾರಾಮಿ ಬೈಕ್ ಗಳಲ್ಲಿ ಕುಣಿಗಲ್ ಮಾರ್ಗವಾಗಿ ಮೋಜು ಮಸ್ತಿನಲ್ಲಿ ಸುತ್ತಾಡುತ್ತಾರೆ ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

    ಸದ್ಯ ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv