Tag: peacock

  • ಕಾಫಿನಾಡಿನ ನಿಸರ್ಗದ ಮಡಿಲಿನಲ್ಲಿ ನವಿಲುಗಳ ಸಂಭಾಷಣೆ- ವಿಡಿಯೋ ನೋಡಿ

    ಕಾಫಿನಾಡಿನ ನಿಸರ್ಗದ ಮಡಿಲಿನಲ್ಲಿ ನವಿಲುಗಳ ಸಂಭಾಷಣೆ- ವಿಡಿಯೋ ನೋಡಿ

    ಚಿಕ್ಕಮಗಳೂರು : ನವಿಲೊಂದು ತನ್ನ ಪ್ರೇಯಸಿಯನ್ನ ಕರೆಯುತ್ತಿರೋ ವಿರಳಾತಿವಿರಳ ವಿಡಿಯೋ ಕಾಫಿನಾಡಿನ ವೈಲ್ಡ್ ಲೈಫ್ ಛಾಯಾಗ್ರಾಹಕರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ಸಂಚರಿಸುವಾಗ ಈ ಅತ್ಯಾಪರೂಪ ವಿಡಿಯೋ ಸೆರೆ ಸಿಕ್ಕಿದೆ.

    ವೈಲ್ಡ್ ಲೈಫ್ ಛಾಯಾಗ್ರಾಹಕ ಶಿವಕುಮಾರ್ ಮುತ್ತೋಡಿ ಅರಣ್ಯದಲ್ಲಿ ಸಂಚರಿಸುವಾಗ ಈ ಅದ್ಭುತ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಈಗಾಗಲೇ ಅಲ್ಪ-ಸ್ವಲ್ಪ ಮಳೆಯಾಗಿದೆ. ಮುತ್ತೋಡಿಯೊಳಗಿನ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಲ್ಲಿ ನೀರು ತುಂಬಿದೆ. ನೀರಲ್ಲಿ ಮಿಂದು ಮೇಲೆ ಬಂದಿರೋ ನವಿಲು ಮತ್ತೊಂದು ನವಿಲಿನ ಆಗಮನಕ್ಕೇ ಗೀಳಿಟ್ಟಿದೆ. ಈ ನವಿಲಿನ ಗೀಳನ್ನ ಆಲಿಸಿದ ಮತ್ತೊಂದು ನವಿಲು ಕೂಡ ಕೂಗುವ ಮೂಲಕ ಬರುವ ಸೂಚನೆ ನೀಡಿದೆ. ಈ ಎರಡೂ ನವಿಲುಗಳೂ ಮಾತನಾಡುವ ಅಪರೂಪದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಈ ಕಾಲ ನವಿಲುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವ ಸಮಯ. ಹೀಗಾಗಿ ಒಂದು ನವಿಲು ಮತ್ತೊಂದು ನವಿಲಿಗಾಗಿ ಈ ರೀತಿ ಗೀಳಿಡುತ್ತೆ ಅನ್ನೋದು ಪರಿಸರವಾದಿಗಳ ಮಾತಾಗಿದೆ. ಅದೇನೆ ಇದ್ದರೂ ಎರಡು ನವಿಲುಗಳ ಸಂಭಾಷಣೆ ಮಾತ್ರ ಅತ್ಯದ್ಭುತವಾಗಿದ್ದು, ವಿಡಿಯೋ ನೋಡಿದವರ ಮನ ಗೆದ್ದಿದೆ.

  • ತಂತಿ ಉರುಳಿಗೆ ಸಿಲುಕಿದ್ದ ನವಿಲಿನ ರಕ್ಷಣೆ

    ತಂತಿ ಉರುಳಿಗೆ ಸಿಲುಕಿದ್ದ ನವಿಲಿನ ರಕ್ಷಣೆ

    ಚಿತ್ರದುರ್ಗ: ಬೇಟೆಗಾರರ ತಂತಿ ಉರುಳಿಗೆ ಸಿಲುಕಿ ಪರದಾಡುತ್ತಿದ್ದ ನವಿಲನ್ನು ಚಿತ್ರದುರ್ಗದಲ್ಲಿ ರಕ್ಷಣೆ ಮಾಡಲಾಗಿದೆ.

    ಚಿತ್ರದುರ್ಗ ಹೊರವಲಯದ ಜೋಗಿಮಟ್ಟಿ ಅರಣ್ಯ ಸಮೀಪದ ಜಮೀನಿನಲ್ಲಿ ಬೇಟೆಗಾಗಿ ಹಾಕಿದ್ದ ತಂತಿಯಲ್ಲಿ ಸಿಲುಕಿ ನವಿಲು ಪ್ರಾಣಾಪಾಯದಲ್ಲಿತ್ತು. ನವಿಲು ಒದ್ದಾಡುತ್ತಿರುವುದನ್ನು ವಾಯುವಿಹಾರಿಗಳು ಗನಿಸಿದ್ದಾರೆ. ಅಲ್ಲದೇ ಅದನ್ನು ರಕ್ಷಣೆ ಮಾಡುವ ಮೂಲಕ ನಮ್ಮ ರಾಷ್ಟ್ರೀಯ ಪಕ್ಷಿಯ ಜೀವ ಉಳಿಸಿದ್ದಾರೆ. ಬಳಿಕ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

    ಜೋಗಿಮಟ್ಟಿ ಅರಣ್ಯ ಪ್ರದೇಶ ನವಿಲುಗಳ ಆವಾಸಸ್ಥಾನವಾಗಿದೆ. ಆದ್ರೆ ಇದೀಗ ನೀರು, ಆಹಾರ ಅರಸಿ ಕಾಡು ಪ್ರಾಣಿ-ಪಕ್ಷಿಗಳು ನಗರ ಪ್ರದೇಶದತ್ತ ಬರುತ್ತಿದ್ದು, ಬೇಟೆಗಾರರ ಬಲೆಗೆ ಸಿಲುಕಿ ಅವನತಿಯತ್ತ ಸಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲ್ಲು ಗಣಿಗಾರಿಕೆಗೆ ಬೆಚ್ಚಿಬಿದ್ದು ನಾಡಿಗೆ ದಾಂಗುಡಿಯಿಟ್ಟ ರಾಷ್ಟ್ರಪಕ್ಷಿಗಳು

    ಕಲ್ಲು ಗಣಿಗಾರಿಕೆಗೆ ಬೆಚ್ಚಿಬಿದ್ದು ನಾಡಿಗೆ ದಾಂಗುಡಿಯಿಟ್ಟ ರಾಷ್ಟ್ರಪಕ್ಷಿಗಳು

    – ಸೂಕ್ತ ರಕ್ಷಣೆಗೆ ಕೋಲಾರ ಜನರ ಪಟ್ಟು

    ಕೋಲಾರ: ನಮ್ಮ ರಾಷ್ಟ್ರಪಕ್ಷಿಯನ್ನ ಚಿತ್ರಗಳಲ್ಲಷ್ಟೆ ಕಾಣಬೇಕೆನ್ನುವಷ್ಟರ ಮಟ್ಟಿಗೆ ಅವುಗಳ ಸಂತತಿ ಕಡಿಮೆಯಾಗಿದೆ. ಆದ್ರೆ ಬಯಲು ಸೀಮೆಯಲ್ಲಿ ನೀರಿಲ್ಲದೆ ಬೆಳೆಗಳು ಒಣಗಿದ್ರೂ ರೈತರು ಪಕ್ಷಿಗಳನ್ನು ಉಳಿಸುತ್ತಿದ್ದಾರೆ. ಹಿಂಡು ಹಿಂಡಾಗಿ ಹಲವು ವರ್ಷಗಳಿಂದ ನೆಲೆ ನಿಂತಿರುವ ಪ್ರೀತಿಯ ಪಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅನ್ನೋ ಒತ್ತಾಯ ಕೇಳಿಬರುತ್ತಿದೆ.

    ಕೋಲಾರ, ಬಂಗಾರಪೇಟೆ, ಮಾಲೂರು ತಾಲೂಕಿನ ಹಲವು ಗ್ರಾಮಗಳಲ್ಲಿ ರಾಷ್ಟ್ರೀಯ ಪಕ್ಷಿಗಳು ಹಿಂಡು ಹಿಂಡಾಗಿ ಹುಳ-ಹುಪ್ಪಟೆಗಳನ್ನ ತಿನ್ನುತ್ತಾ, ಕಾಳು-ಕಡ್ಡಿಯನ್ನ ಆರಿಸುತ್ತಾ, ಓಡಾಡುತ್ತಾ ಹಲವು ವರ್ಷಗಳಿಂದ ನೂರಾರು ನವಿಲುಗಳು ಇಲ್ಲಿ ನೆಲೆ ನಿಂತಿವೆ. ಇದಕ್ಕೂ ಮೊದಲು ಈ ನವಿಲುಗಳು ಟೇಕಲ್ ಸುತ್ತ ಮುತ್ತಲ ಬೆಟ್ಟಗಳಲ್ಲಿ ವಾಸವಾಗಿದ್ದವು.

    ಆದ್ರೆ ಇತ್ತೀಚೆಗೆ ಬೆಟ್ಟಗಳಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಾಗಿರುವುದರಿಂದ ಹೊಲ, ಗದ್ದೆ, ಪೊದೆಗಳಲ್ಲಿ ತಮ್ಮ ಬದುಕು ಸವೆಸುತ್ತಿವೆ. ಸದ್ಯ ಅವುಗಳಿಗೆ ಆಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇವುಗಳಿಗೆ ಅರಣ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಬೇಕು ಅನ್ನೋದು ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ ಅಂತ ಪೊಲೀಸ್ ಇಲಾಖೆ ಉದ್ಯೋಗಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

    ದನ-ಕರುಗಳ ಜೊತೆಯಲ್ಲೇ ಕಾಲ ಕಳೆಯುವ ನವಿಲುಗಳು ಗ್ರಾಮದ ಜನರಿಗಂತೂ ತಮ್ಮ ಮನೆಯ ಪಕ್ಷಿ ಎನ್ನುವಂತಾಗಿದೆ. ಇವು ಎಲ್ಲಿ ಯಾರ ಹೊಲದಲ್ಲಿ ಹೋದ್ರು, ಯಾರೂ ಅವುಗಳಿಗೆ ತೊಂದರೆ ಮಾಡೋದಿಲ್ಲ. ಅವುಗಳ ರಕ್ಷಣೆಗೆ ಸದಾಕಾಲ ಸಿದ್ಧರಾಗಿರುತ್ತಾರೆ. ಹಾಗೊಮ್ಮ ಹೀಗೊಮ್ಮೆ ನವಿಲುಗಳನ್ನು ಬೇಟೆಯಾಡಲು ಬರುವ ಬೇಟೆಗಾರರಿಗೆ ಗ್ರಾಮಸ್ಥರು ಕಟ್ಟಿಹಾಕಿ ಗೂಸಾ ನೀಡಿ ಎಚ್ಚರಿಕೆ ಕೂಡ ನೀಡಿದ್ದಾರೆ. ಮಾತ್ರವಲ್ಲ ಇವನ್ನ ಬೇಟೆಯಾಡಲು ಬಂದವರನ್ನ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆಗಳು ಕೂಡಾ ಇವೆ. ಹಾಗಾಗಿ ಇಲ್ಲಿ ನವಿಲುಗಳ ಬೇಟೆಗೆಂದು ಬರುವ ಬೇಟೆಗಾರರಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸರಿಗಿಂತ ಗ್ರಾಮಸ್ಥರ ಭಯವೇ ಹೆಚ್ಚಾಗಿದೆ. ಬರ ಎದುರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಕೂಡ ಕಾಡು ಪ್ರಾಣಿಗಳಿಗಾಗಿ ನೀರಿನ ವ್ಯವಸ್ಥೆ ಹಾಗೂ ಆಹಾರದ ಪರ್ಯಾಯ ವ್ಯವಸ್ಥೆಗಳನ್ನ ಮಾಡುತ್ತಿದೆ ಅಂತ ಅರಣ್ಯಾಧಿಕಾರಿ ಚಕ್ರಪಾಣಿ ಹೇಳಿದ್ದಾರೆ.

    ಒಟ್ಟಿನಲ್ಲಿ ರಾಷ್ಟ್ರಪಕ್ಷಿ ನವಿಲಿಗೆ ರಕ್ಷಣೆ ಇಲ್ಲದಂತಾಗಿ, ಅನಾಥವಾಗಿ ತುತ್ತು ಅನ್ನ-ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವನತಿ ಅಂಚಿನಲ್ಲಿರುವ ನವಿಲುಗಳ ಸಂತತಿ ಉಳಿಸುವ ಜೊತೆಗೆ ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಹಾಗೂ ಸರ್ಕಾರ ಕ್ರಮ ತೆಗೆದುಕೊಂಡು ನವಿಲುಗಳು ಗರಿಬಿಚ್ಚಿ ಕುಣಿಯುವಂತೆ ಮಾಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗರಿ ಬಿಚ್ಚಿ ಕುಣಿದ ನವಿಲು: ವಿಡಿಯೋ

    ಗರಿ ಬಿಚ್ಚಿ ಕುಣಿದ ನವಿಲು: ವಿಡಿಯೋ

    ಚಿಕ್ಕಮಗಳೂರು: ರಾಷ್ಟ್ರಪಕ್ಷಿ ನವಿಲು ತನ್ನ ಗರಿ ಬಿಚ್ಚಿ ನೃತ್ಯ ಮಾಡಿರುವ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ಕಂಡುಬಂದಿದೆ.

    ನವಿಲು ಆಗಾಗ ತನ್ನ ಗರಿ ಬಿಚ್ಚಿ ನೃತ್ಯ ಮಾಡಿಕೊಂಡು ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಗ್ರಾಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಳೆದ ಎರಡು ವರ್ಷದ ಹಿಂದೆ ಗ್ರಾಮದ ಸೋಮಶೇಖರ್ ಕಾಡಿನಲ್ಲಿ ಶ್ವಾನಗಳ ಬಾಯಿಗೆ ತುತ್ತಾಗುತ್ತಿದ್ದ ನವಿಲುಗಳ ಮೊಟ್ಟೆಯನ್ನು ತಂದು ತಮ್ಮ ಮನೆಯ ಕೋಳಿಯ ಮೊಟ್ಟೆಯ ಜೊತೆ ನವಿಲಿನ ಮೊಟ್ಟೆ ಇಟ್ಟಿದ್ದರು.

    ನಂತರ ಕೋಳಿ ನವಿಲು ಮರಿಗೆ ಜನ್ಮ ನೀಡಿತ್ತು. ನಂತರ ನಾಡಿನ ಜನರೊಂದಿಗೆ ಬೆಳೆದ ನವಿಲು ಗ್ರಾಮದಲ್ಲೇ ತನ್ನ ಜೀವನ ಮುಂದುವರೆಸಿದೆ. ರೆಕ್ಕೆ ಬಿಚ್ಚಿ ನಾಟ್ಯವಾಡುತ್ತ ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಎಲ್ಲರ ಆಕರ್ಷಣೆಯಾಗಿದೆ.

    ನವಿಲು ನಾಟ್ಯವಾಡುತ್ತಿದ್ದರೆ ಇಡೀ ಗ್ರಾಮದ ಜನ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಹಲವು ಬಾರಿ ಸೋಮಶೇಖರ್ ನವಿಲನ್ನು ಕಾಡಿಗೆ ಬಿಟ್ಟು ಬಂದರು ಗ್ರಾಮವನ್ನು ತೊರೆಯದ ನವಿಲು ಮತ್ತೆ ವಾಪಾಸ್ ಗ್ರಾಮಕ್ಕೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=HaNd7CEO0aM&feature=youtu.be

  • ಹೆಸರಿಗಷ್ಟೇ ‘ರಿಸರ್ವ್ ಫಾರೆಸ್ಟ್’-ಒಳಗಡೆ ಲವರ್ಸ್ ಗಳ ಆಟ ತುಂಟಾಟ, ಪುಂಡರ ಪಾರ್ಟಿ ಬಲು ಜೋರು

    ಹೆಸರಿಗಷ್ಟೇ ‘ರಿಸರ್ವ್ ಫಾರೆಸ್ಟ್’-ಒಳಗಡೆ ಲವರ್ಸ್ ಗಳ ಆಟ ತುಂಟಾಟ, ಪುಂಡರ ಪಾರ್ಟಿ ಬಲು ಜೋರು

    ಬೆಂಗಳೂರು: ‘ರಿಸರ್ವ್ ಫಾರೆಸ್ಟ್’ (ರಕ್ಷಿತ ಅರಣ್ಯ ಪ್ರದೇಶ) ಅಂದರೆ ಕಾಡಿನೊಳಗೆ ಯಾರೂ ಪ್ರವೇಶಿಸುವಂತಿಲ್ಲ. ಆದರೆ ಇದು ಹೆಸರಿಗಷ್ಟೇ ರಿಸರ್ವ್ ಫಾರೆಸ್ಟ್. ಇಲ್ಲಿ ಎಲ್ಲಿ ಬೇಕಾದ್ರೂ ರಾಜಾರೋಷವಾಗಿ ಓಡಾಡಬಹುದು. ಕೆರೆ ಹಾಳು ಮಾಡಿದ ಬೆಂಗಳೂರು ಮಂದಿ, ಈಗ ಕಾಡು ಹಾಳು ಮಾಡಲು ಹೊರಟಿದ್ದಾರೆ.

    ಇದು ಬೆಂಗಳೂರಿನ ಹೆಸರಘಟ್ಟ ರಕ್ಷಿತಾರಣ್ಯ ಪ್ರದೇಶ. ಆದ್ರೆ ಈ ಕಾಡಿನೊಳಕ್ಕೆ ನೀವು ಆರಾಮಾಗಿ ಎಂಟ್ರಿ ಕೊಟ್ಟು ಎಲ್ಲಿ ಬೇಕಾದ್ರು ಓಡಾಡಿ ಬರಬಹುದು. ಅಷ್ಟೇ ಯಾಕೆ ಇಲ್ಲೇ ನೈಟ್ ಕ್ಯಾಂಪ್ ಹಾಕಿ ಪಾರ್ಟಿ ಕೂಡ ಮಾಡಬಹುದು. ಇಲ್ಲಿ ಯಾರೂ ಹೇಳೋರು ಇಲ್ಲ ಕೇಳೋರು ಇಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಯಾರ ಭಯವಿಲ್ಲದೇ ಪ್ರೇಮಿಗಳು ಓಡಾಡುತ್ತಾರೆ. ಎಲ್ಲೆಂದರಲ್ಲಿ ಪಾರ್ಟಿ ಮಾಡಿ ಎಣ್ಣೆ ಬಾಟಲ್ ಗಳನ್ನ ಎಸೆದು ಹೋಗಿದ್ದಾರೆ. ನವಿಲುಗಳು ಹೆಚ್ಚಾಗಿರುವ ಈ ಪ್ರದೇಶವನ್ನ ನವಿಲು ರಕ್ಷಿತಾರಣ್ಯ ಪ್ರದೇಶ ಅಂತ ಘೋಷಿಸಲಾಗಿದೆ. ಇಲ್ಲಿ ನಡೆಯುತ್ತೀರುವ ಈ ಅಕ್ರಮ ಚಟುವಟಿಕೆಗಳಿಂದಾಗಿ ನವಿಲುಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಇಷ್ಟೆಲ್ಲಾ ಆಗ್ತಿದ್ರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.

    ಹೆಸರಘಟ್ಟ ರಕ್ಷಿತಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಹೆಸರಘಟ್ಟ ಕೆರೆ ಇದೆ. ಹಾಗೆ ಪಕ್ಕಕ್ಕೆ ಕಣ್ಣುಹಾಯಿಸಿದ್ರೆ ಇಲ್ಲಿ ಪ್ರವೇಶ ಮಾಡುವುದು, ಕೆರೆಯಲ್ಲಿ ಬಟ್ಟೆ ಒಗೆಯುವುದು, ಮೀನು ಹಿಡಿಯುವುದು ನಿಷೇಧಿಸಲಾಗಿದೆ, ನಿಯಮ ಮೀರಿದ್ರೆ ಶಿಕ್ಷೆಗೆ ಗುರಿ ಪಡಿಸಲಾಗುತ್ತೆ ಅಂತ ಬರೆದಿರುವ ಬೋರ್ಡ್ ಹಾಕಲಾಗಿದೆ. ಎಲ್ಲ ನಿಬಂಧನೆಗಳು ಕೇವಲ ಬೋರ್ಡ್ ಗಷ್ಟೇ ಸೀಮಿತವಾಗಿದ್ದು ಇಲ್ಲಿ ರಾಜಾರೋಷವಾಗಿ ಮೀನು ಹಿಡಿಯುತ್ತಾರೆ, ಜಲಮಂಡಳಿಯಾಗಲೀ, ಅರಣ್ಯ ಇಲಾಖೆಯವರಾಗಲೀ ತಡೆಯೋ ಗೋಜಿಗೇ ಹೋಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಕೆರೆಯಲ್ಲಿ ಇಷ್ಟೆಲ್ಲಾ ಅಕ್ರಮ ಚಟುವಟಿಗೆಗಳು ನಡೆಯುತ್ತಿರುವುದರಿಂದ ವಿದೇಶದಿಂದ ಈ ಕೆರೆಗೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆ ಸಹ ಕಡಿಮೆಯಾಗುತ್ತಿದೆ. ಬೆಂಗಳೂರು ಮಂದಿಯ ಮೂಜು ಮಸ್ತಿಯಿಂದಾಗಿ ನವಿಲುಗಳ ಅಸ್ತಿತ್ವಕ್ಕೂ ಧಕ್ಕೆಯಾಗ್ತಿದೆ. ಈಗಲೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ರೆ ಮುಂದಿನ ದಿನ ರಕ್ಷಿತಾರಣ್ಯದ ಜೊತೆ ಕೆರೆಯೂ ನಾಶವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತನಿಂದ 20 ಅಡಿ ಆಳಕ್ಕೆ ಬಿದ್ದ ನವಿಲು ರಕ್ಷಣೆ!

    ರೈತನಿಂದ 20 ಅಡಿ ಆಳಕ್ಕೆ ಬಿದ್ದ ನವಿಲು ರಕ್ಷಣೆ!

    ಬೀದರ್: 20 ಅಡಿ ಆಳದ ತೆರೆದ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ರಾಷ್ಟ್ರ ಪಕ್ಷಿ ನವಿಲನ್ನು ಬೀದರ್ ತಾಲೂಕಿನ ಚಿಟ್ಟಾವಾಡಿಯ ರೈತರೊಬ್ಬರು ರಕ್ಷಣೆ ಮಾಡಿ ಮಾನವೀಯತೆ ತೋರಿಸಿದ್ದಾರೆ.

    ನವಿಲು ಕಣ್ಣು ಕಾಣದೆ ತೆರೆದ ಬಾವಿಗೆ ಬಿದ್ದಿದೆ. ಆಹಾರವಿಲ್ಲದೆ ಇಂದು ಮುಂಜಾನೆಯಿಂದ ಬಾವಿಯಲ್ಲಿ ಒದ್ದಾಡುತ್ತಿತ್ತು. ಬಾವಿಗೆ ಬಿದ್ದಿದ್ದ ರಾಷ್ಟ್ರ ಪಕ್ಷಿಯನ್ನು ರೈತ ಮಹಮ್ಮದ್ ಜಾಫರ್ ನೋಡಿದ್ದಾರೆ.

    ನಂತರ ಸ್ಥಳಿಯರಿಗೆ ಕರೆ ಮಾಡಿ, ಹಗ್ಗದ ಸಹಾಯದಿಂದ ಬಾವಿಯ ಕೆಳಗೆ ಇಳಿದಿದ್ದಾರೆ. ಬಳಿಕ ಬಾವಿಯಲ್ಲಿದ್ದ ನವಿಲನ್ನು ಹಗ್ಗದ ಸಹಾಯದಿಂದ ತನ್ನ ಸೊಂಟಕ್ಕೆ ಕಟ್ಟಿಕೊಂಡು ಮೇಲೆ ಎತ್ತಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ನವಿಲನ್ನು ರಕ್ಷಣೆ ಮಾಡಿ ರೈತ ಜಾಫರ್ ಪಶು ಇಲಾಖೆಯ ಅಧಿಕಾರಿಗಳ ಬಳಿಗೆ ತಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

  • ಗರಿ ಬಿಚ್ಚಿ ನರ್ತಿಸಿದ ಮಯೂರ – ವಿಡಿಯೋ ನೋಡಿ

    ಗರಿ ಬಿಚ್ಚಿ ನರ್ತಿಸಿದ ಮಯೂರ – ವಿಡಿಯೋ ನೋಡಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಎಲ್ಲಿ ನೋಡಿದರೂ ಹಚ್ಚ ಹಸುರಿನಿಂದ ಕಂಗೊಳಿಸುವ ಪರಿಸರ. ಇದರಿಂದಾಗಿ ಪ್ರಾಣಿ ಪಕ್ಷಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಈ ಖುಷಿಗೆ ನಮ್ಮ ರಾಷ್ಟ್ರ ಪಕ್ಷಿ ನವಿಲು ಗರಿ ಬಿಚ್ಚಿ ಮಾನಸಾರೆ ನರ್ತಿಸಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದೆ. ಗ್ರಾಮದ ನಿವಾಸಿ ಲೋಕೇಶ್ ಗೌಡ ಅವರ ಮನೆಯ ಮುಂದೆ ಜಾನುವಾರುಗಳ ಬಳಿ, ಗಂಡು ನವಿಲು ತನ್ನ ಸೊಬಗನ್ನ ತೋರಿದೆ.

    ಇನ್ನೂ ನವಿಲು ತನ್ನ ಸಂತಾನೋತ್ಪತ್ತಿ ಮಾಡಿಕೊಳ್ಳುವ ವೇಳೆ ಈ ರೀತಿಯಲ್ಲಿ ನರ್ತಿಸುವ ಕಾಲ ಇದಾಗಿದೆ. ಸರ್ವೆ ಸಾಮಾನ್ಯವಾಗಿ ಇಂತಹ ಅಪರೂಪದ ದೃಶ್ಯವನ್ನ ಅರಣ್ಯ ಪ್ರದೇಶದಲ್ಲಿ ಹಾಗೂ ಪ್ರಾಣಿ ಪಕ್ಷಿಗಳ ಸಂಗ್ರಹಾಲಯದಲ್ಲಿ ನೋಡಬಹುದು. ಆದರೆ ಕಾಡಿನಿಂದ ಗ್ರಾಮಕ್ಕೆ ಬಂದ ನವಿಲು ನೃತ್ಯ ಮಾಡಿದೆ. ಈ ಅಪರೂಪದ ದೃಶ್ಯ ಕಂಡ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.

  • ಮೀಸಲು ಅರಣ್ಯ ಪ್ರದೇಶದಲ್ಲಿ ಮಾಂಸಕ್ಕಾಗಿ ನವಿಲುಗಳ ಮಾರಣಹೋಮ

    ಮೀಸಲು ಅರಣ್ಯ ಪ್ರದೇಶದಲ್ಲಿ ಮಾಂಸಕ್ಕಾಗಿ ನವಿಲುಗಳ ಮಾರಣಹೋಮ

    ದಾವಣಗೆರೆ: ಮೀಸಲು ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷಿಗಳ ಮಾರಣಹೋಮ ನಡೆಯುತ್ತಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಗೋಪಗೊಂಡನಹಳ್ಳಿಯ ಸುತ್ತಮುತ್ತಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನವಿಲುಗಳು ಸಾವನ್ನಪ್ಪುತ್ತಿವೆ. ಜಗಳೂರು ಸುತ್ತಮುತ್ತಾ ನವಿಲು ಸಂತತಿ ಹೆಚ್ಚಿನ ಪ್ರಮಾಣದಲ್ಲಿದ್ದು, ಬೇಟೆಗಾರರು ಮಾಂಸಕ್ಕಾಗಿ ನವಿಲುಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಬೇಟೆಗಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಕ್ಷಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ತಿಂಗಳಿಂದ ನಿರಂತರವಾಗಿ ಅನುಮಾನಾಸ್ಪದ ರೀತಿಯಲ್ಲಿ ನವಿಲುಗಳು ಮೃತ ಪಡುತ್ತಿವೆ. ಒಂದು ತಿಂಗಳ ಹಿಂದೆ ಮೂರು ನವಿಲುಗಳು ಮೃತ ಪಟ್ಟಿದ್ದವು ಎಂದು ಪಕ್ಷಿ ಪ್ರಿಯರು ಮಾಹಿತಿ ನೀಡಿದ್ದಾರೆ.

  • ಬಿಜೆಪಿಯನ್ನು ಜಿರಳೆಗೆ ಹೋಲಿಸಿ ಟಾಂಗ್ ಕೊಟ್ಟ ಮಮತಾ ಬ್ಯಾನರ್ಜಿ

    ಬಿಜೆಪಿಯನ್ನು ಜಿರಳೆಗೆ ಹೋಲಿಸಿ ಟಾಂಗ್ ಕೊಟ್ಟ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಜಯಗಳಿಸಲು ಸಾಧ್ಯವೇ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ. ಮತ್ತೆ ಅಧಿಕಾರಕ್ಕೆ ಬಿಜೆಪಿ ಏರಲ್ಲ. ಬಿಜೆಪಿಯ ಹೇಳಿಕೆ ಹೇಗಿದೆ ಎಂದರೆ, ನವಿಲಿನ ಗರಿಗಳನ್ನು ಧರಿಸಿದ ಜಿರಳೆಯೊಂದು ನಾನು ನವಿಲು ಆಗಲಿದ್ದೇನೆ ಎನ್ನುವ ಕನಸನ್ನು ಕಂಡಂತೆ ಇದೆ ಎಂದು ವ್ಯಂಗ್ಯವಾಗಿ ಹೋಲಿಸಿ ಟಾಂಗ್ ಕೊಟ್ಟಿದ್ದಾರೆ.

    26 ಲಕ್ಷ ಮತದಾರರು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತ್ರಿಪುರಾದದಲ್ಲಿ ಬಿಜೆಪಿ ಜಯಗಳಿಸಿದ್ದರಿಂದ ಹಿನ್ನಡೆ ಆಗಿಲ್ಲ. ಸಿಪಿಎಂ ಪರವಾಗಿ ಮತದಾನವಾಗಿದ್ದರೂ 5% ಮತಗಳ ವ್ಯತ್ಯಾಸದಿಂದಾಗಿ ಬಿಜೆಪಿ ಗೆದ್ದಿದೆ ಎಂದರು.

    ತ್ರಿಪುರಾದಲ್ಲಿ ಗೆದ್ದಂತೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಮುಂದಿನ ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ಗುಜರಾತ್ ನಲ್ಲಿ ಈಗಾಗಲೇ ನೈತಿಕವಾಗಿ ಸೋತಿದೆ ಎಂದು ಹೇಳಿದರು.

    ಒಂದು ವೇಳೆ ರಾಹುಲ್ ಗಾಂಧಿ ನನ್ನ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರೆ ಫಲಿತಾಂಶ ಬೇರೆಯದ್ದೇ ಆಗಿರುತಿತ್ತು. ಕಾಂಗ್ರೆಸ್ 30, ಟಿಎಂಸಿ 14, ಇತರೆ ಪಕ್ಷಗಳ 16 ಮಂದಿಗೆ ಟಿಕೆಟ್ ನೀಡಬೇಕು ಎಂದು ನಾನು ಹೇಳಿದ್ದೆ. ನನ್ನ ಈ ಪ್ರಸ್ತಾಪನ್ನು ಕೈ ನಾಯಕರು ಒಪ್ಪಿಕೊಳ್ಳದ ಕಾರಣ ಈ ಫಲಿತಾಂಶ ಬಂದಿದೆ ಎಂದರು.

    ಕಾಂಗ್ರೆಸ್ ಕೇವಲ 1.5% ಮತಗಳನ್ನು ಪಡೆದಿದ್ದು `ಶೇಮ್’ ಎಂದರು. ಕೇಂದ್ರಿಯ ಪಡೆ ಮತ್ತು ಹಣ ಬಲವನ್ನು ಉಪಯೋಗಿಸಿ ಬಿಜೆಪಿ ಈ ಚುನಾವಣೆಯನ್ನು ಗೆದ್ದಿದೆ ಎಂದು ಮಮತಾ ದೂಷಿಸಿದರು.

    ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ ಬಳಿಕ ದೆಹಲಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಬಿಜೆಪಿಯ ಸುವರ್ಣ ಯುಗ ಆರಂಭವಾಗಿದ್ಯಾ ಎಂದು ಪ್ರಶ್ನೆ ಕೇಳಿದ್ದಕ್ಕೆ, ಪಶ್ಚಿಮ ಬಂಗಾಳ, ಕೇರಳ ಒಡಿಶಾದಲ್ಲಿ ಯಾವಾಗ ಕಮಲ ಅರಳುತ್ತದೋ ಆಗ ನಾನು ನಮ್ಮ ಪಕ್ಷದ ಸುವರ್ಣ ಯುಗವೆಂದು ಭಾವಿಸುತ್ತೇನೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: 2013ರಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತ್ರಿಪುರಾ ಗೆದ್ದಿದ್ದು ಹೇಗೆ?

  • ನವಿಲು ಬೇಟೆಯಾಡ್ತಿದ್ದವರನ್ನ ಅಟ್ಟಾಡಿಸಿ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ನವಿಲು ಬೇಟೆಯಾಡ್ತಿದ್ದವರನ್ನ ಅಟ್ಟಾಡಿಸಿ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ತುಮಕೂರು: ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೆ.ರಾಮಪುರದಲ್ಲಿ ನಡೆದಿದೆ.

    ಬಂಧಿತರು ಆಂಧ್ರದ ಕಂಬದೂರು ಗ್ರಾಮದವರಾಗಿದ್ದು, ನವಿಲುಗಳನ್ನು ಬೇಟೆಯಾಡಿ ಕೊಂದು ಜೋಳಿಗೆಯಲ್ಲಿ ಹೊತ್ತೊಯ್ಯತ್ತಿದ್ದರು. ಹನುಮನ ಬೆಟ್ಟ ನವಿಲು ಸಂರಕ್ಷಣಾ ಗುಡ್ಡದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಬೇಟೆಯಾಡಿದ್ದರು.

    ಇದನ್ನು ಗಮನಿಸಿದ ಕೆ. ರಾಮಪುರ ಗ್ರಾಮಸ್ಥರು ಬೇಟೆಗಾರರನ್ನು ಅಟ್ಟಾಡಿಸಿ ಹಿಡಿದು ವೈ.ಎನ್. ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.