Tag: Payal

  • ‘ನಿನ್ನಲ್ಲಿ ನಾ’ ಎನ್ನುತ್ತಾ ಬೋಲ್ಡ್ ಆಗಿ ಕಾಣಿಸಿಕೊಂಡ ಪಾಯಲ್

    ‘ನಿನ್ನಲ್ಲಿ ನಾ’ ಎನ್ನುತ್ತಾ ಬೋಲ್ಡ್ ಆಗಿ ಕಾಣಿಸಿಕೊಂಡ ಪಾಯಲ್

    ಆರ್​ಎಕ್ಸ್​ 100 ಸಿನಿಮಾ ಬಳಿಕ ನಿರ್ದೇಶಕ ಅಜಯ್ ಭೂಪತಿ ಆ್ಯಕ್ಷನ್​-ಕಟ್ ಹೇಳಿರುವ ‘ಮಂಗಳವಾರಂ’ (Mangalavaram) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 17ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಎರಡನೇ ಹಾಡು (Song) ಅನಾವರಣಗೊಂಡಿದೆ. ನಿನ್ನಲ್ಲಿ ನಾ ಎಂಬ ಸಾಹಿತ್ಯದ ಹಾಡಿಗೆ  ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರ್ಷಿಕಾ ದೇವನಾಥ್ ಧ್ವನಿಯಾಗಿದ್ದು, ಕಾಂತಾರ ಖ್ಯಾತಿಯ ಬಿ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ನಿನ್ನಲ್ಲಿ ನಾ ಮಧುರ ಗೀತೆಯಲ್ಲಿ ಪಾಯಲ್ ಬೋಲ್ಡ್ ಅಗಿ ಕಾಣಿಸಿಕೊಂಡಿದ್ದರು. ಮುದ್ದಾದ ಜೋಡಿ ನಡುವಿನ ರೋಮ್ಯಾಂಟಿಕ್ ಹಾಡು ಇದಾಗಿದೆ.

    ಟಾಲಿವುಡ್​ನಲ್ಲಿ ನಿರ್ದೇಶಕ ಅಜಯ್ ಭೂಪತಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಆರ್​ಎಕ್ಸ್ 100’ ಚಿತ್ರದಿಂದ ಅವರಿಗೆ ಅಂತಹ ಜನಪ್ರಿಯತೆ ಸಿಕ್ಕಿದೆ. ಈಗ ಅವರು ‘ಮಂಗಳವಾರಂ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಮಾತ್ರವಲ್ಲದೇ ದೇಶಾದ್ಯಂತ ಹವಾ ಮಾಡಲು ಹೊರಟಿದ್ದಾರೆ. ಸ್ವಾತಿ ಗುಣಪತಿ ಹಾಗೂ ಸುರೇಶ್ ವರ್ಮಾ ಅವರ ‘ಮುದ್ರಾ ಮೀಡಿಯಾ ವರ್ಕ್ಸ್’ ಮತ್ತು ಅಜಯ್ ಭೂಪತಿ ಒಡೆತನದ ‘ಎ ಕ್ರಿಯೇಟಿವ್ ವರ್ಕ್ಸ್’ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

    ಪಾಯಲ್ ರಜಪೂತ್ ಜೊತೆ ಶ್ರೀತೇಜ್, ಅಜಯ್ ಘೋಷ್, ಚೈತನ್ಯ ಕೃಷ್ಣ, ಲಕ್ಷ್ಮಣ್ ಸೇರಿದಂತೆ ಹಲವು ಕಲಾವಿದರು ‘ಮಂಗಳವಾರಂ’ ಸಿನಿಮಾದಲ್ಲಿ ನಟಿಸಿದ್ದಾರೆ. ದಶರಥಿ ಶಿವೇಂದ್ರ ಅವರ ಛಾಯಾಗ್ರಹಣ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಾಯಿಕುಮಾರ್ ಯಡವಲ್ಲಿ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದು ರಗಡ್​ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದೆ.  ಅಜನೀಶ್​ ಲೋಕನಾಥ್​ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

    ಇಷ್ಟು ವರ್ಷಗಳ ಕಾಲ ನಿರ್ದೇಶಕನಾಗಿ ಗಮನ ಸೆಳೆದಿದ್ದ ಅಜಯ್ ಭೂಪತಿ ಅವರು ‘ಮಂಗಳವಾರಂ’ ಸಿನಿಮಾದಿಂದ ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದಾರೆ. ಟೀಸರ್ ಮೂಲಕ ಗಮನಸೆಳೆದಿರುವ ಚಿತ್ರತಂಡ ಈಗ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ನೀಡುತ್ತಿದೆ. ನವೆಂಬರ್ 17ರಂದು ತೆಲುಗಿನ ಜೊತೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿ ‘ಮಂಗಳವಾರಂ’ ಬಿಡುಗಡೆ ಆಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ರಂಗದಲ್ಲಿ ಬೆಳೆಯೋಕೆ ಮಾಟ-ಮಂತ್ರ ಮಾಡಿಸ್ತಿದ್ದರಂತೆ ಕಂಗನಾ ರಣಾವತ್

    ಸಿನಿಮಾ ರಂಗದಲ್ಲಿ ಬೆಳೆಯೋಕೆ ಮಾಟ-ಮಂತ್ರ ಮಾಡಿಸ್ತಿದ್ದರಂತೆ ಕಂಗನಾ ರಣಾವತ್

    ದಿನದಿಂದ ದಿನಕ್ಕೆ ಕಂಗನಾ ರಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಸಾಕಷ್ಟು ಸದ್ದು ಮಾಡುತ್ತಿದೆ. ಒಂದೊಂದು ಸಲ ಆ ಶೋ ಸ್ಪರ್ಧಿಯಿಂದಲೋ ಅಥವಾ ಮತ್ತೊಂದು ಸಲ ಸ್ವತಃ ಕಂಗನಾ ಹಾಡುವ ಮಾತಿನಿಂದಲೂ ವಿವಾದವಂತೂ ಆಗುತ್ತದೆ. ಪ್ರತಿ ಬಾರಿಯೂ ಪೂನಂ ಪಾಂಡೆ ಒಂದಿಲ್ಲೊಂದು ಗೋಳು ತೋಡಿಕೊಂಡು ಸುದ್ದಿ ಆಗುತ್ತಿದ್ದರು. ಈ ಬಾರಿ ಖ್ಯಾತ ನಟಿ ಪಾಯಲ್ ಸರದಿ. ಅವರ ಬದುಕಿನಲ್ಲಿ ಆದ ಅಚ್ಚರಿಯ ಸುದ್ದಿಯೊಂದನ್ನು ಹೇಳಿ ಸ್ವತಃ ಕಂಗನಾ ರಣಾವತ್ ಗೆ ಬೆಚ್ಚಿ ಬೀಳಿಸಿದ್ದಾಳೆ. ಇದನ್ನೂ ಓದಿ : ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಈ ಶೋನಲ್ಲಿ ಪಾಯಲ್ ಎಲಿಮಿನೇಷನ್ ಹಂತ ತಲುಪಿದ್ದಾರೆ. ಹಾಗಾಗಿ ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಗೊತ್ತಿರದ ಸತ್ಯ ಸಂಗತಿಯೊಂದನ್ನು ತಿಳಿಸಿ ಎಂದು ಕಂಗನಾ ಕೇಳಿದರು. ಅದಕ್ಕೆ ಉತ್ತರವಾಗಿ ಪಾಯಲ್, ತಾವು ಮಾಟ-ಮಂತ್ರ ಮಾಡಿಸಿದ್ದನ್ನು ಬಹಿರಂಗಪಡಿಸಿದರು. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    “ನಾನು ಸಿನಿಮಾ ರಂಗದಲ್ಲಿ 15 ವರ್ಷಗಳಿಂದ ಇರುವೆ. ಇಲ್ಲಿ ಸೋಲು ಮತ್ತು ಗೆಲುವನ್ನೂ ಕಂಡಿರುವೆ. ಒಂದು ಹಂತದಲ್ಲಿ ನನ್ನ ವೃತ್ತಿ ಜೀವನ ಮುಳುಗತೊಡಗಿತ್ತು. ಆವಾಗ ನಾನು ಮಾಟ ಮಾಡಿಸಲು ಮುಂದಾದೆ. ಮುಂಬಯಿನಲ್ಲಿ ವಶೀಕರಣ ಮಾಡುವಂತಹ ವ್ಯಕ್ತಿಯನ್ನು ಸಂಪರ್ಕಿಸಿ ಒಬ್ಬ ನಿರ್ಮಾಪಕನ ಜತೆ ಕೆಲಸ ಮಾಡುವುದಕ್ಕಾಗಿ ನಾನು ವಶೀಕರಣ ಮಾಡಿದೆ’’ ಎಂದು ಹೇಳಿದರು ಪಾಯಲ್. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಇದೇ ಸಂದರ್ಭದಲ್ಲಿ ಕಂಗನಾ ರಣಾವತ್ ಕೂಡ ತಮ್ಮ ಜೀವನದಲ್ಲಿ ನಡೆದ ಬ್ಲ್ಯಾಕ್ ಮ್ಯಾಸಿಕ್ ವಿಷಯವೊಂದನ್ನು ಹಂಚಿಕೊಂಡರು. ‘ಕಂಗನಾ ರಣಾವತ್ ಕೂಡ ಬ್ಲ್ಯಾಕ್ ಮ್ಯಾಸಿಕ್ ಮೂಲಕ ಬಾಲಿವುಡ್ ನ ಅನೇಕರನ್ನು ವಶೀಕರಣ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ನನ್ನ ಬಾಯ್ ಫ್ರೆಂಡ್ ಕೂಡ ನನ್ನ ಮೇಲೆ ಇದೇ ರೀತಿ ಆರೋಪ ಮಾಡಿದ್ದ. 2016ರಲ್ಲಿ ನಾನೂ ಕೂಡ ಮಾಟ ಮಂತ್ರದ ಕಾರಣಕ್ಕಾಗಿ ಸಾಕಷ್ಟು ಸುದ್ದಿ ಆದೆ’ ಎಂದು ಹೇಳಿದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಕೊನೆಗೆ ಇದೆಲ್ಲವನ್ನೂ ಮಾಡಬೇಡಿ. ನಿಮಗೆ ಸೌಂದರ್ಯವಿದೆ. ಸೆಳೆಯುವಂತಹ ಶಕ್ತಿಯಿದೆ. ಬುದ್ಧಿವಂತರು, ಪ್ರತಿಭಾವಂತರು ಅದರ ಮೂಲಕ ಜನರನ್ನು ಗೆಲ್ಲಿರಿ. ಈ ಗೆಲುವು ಯಾವತ್ತಿಗೂ ಶಾಶ್ವತವಾಗಿ ಇರುತ್ತದೆ ಎಂದು ಪಾಯಲ್ ಗೆ ಬುದ್ದಿ ಹೇಳಿದರು ಕಂಗನಾ ರಣಾವತ್.