Tag: Pavithra Lokesh

  • ‘ಒಲವಿನ ನಿಲ್ದಾಣ’ದ ಮೂಲಕ ಮತ್ತೆ ಟಿವಿ ಪರದೆಗೆ ಮರಳಿದ ಆದಿ ಲೋಕೇಶ್

    ‘ಒಲವಿನ ನಿಲ್ದಾಣ’ದ ಮೂಲಕ ಮತ್ತೆ ಟಿವಿ ಪರದೆಗೆ ಮರಳಿದ ಆದಿ ಲೋಕೇಶ್

    ನ್ನಡದ ಸಿನಿಮಾರಂಗದಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದ ಆದಿ ಲೋಕೇಶ್ (Adi Lokesh) ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ತೆ ಟಿವಿ ಪರದೆಗೆ ಖಡಕ್ ವಿಲನ್ ಆದಿ ಲೋಕೇಶ್ ಅವರು ಮರಳಿದಿದ್ದಾರೆ. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

    ‘ಪೂಜಾರಿ’ (Poojari) ಸಿನಿಮಾದಲ್ಲಿ ನೀತುಗೆ ನಾಯಕನಾಗಿ ಆದಿ ಲೋಕೇಶ್ ನಟಿಸಿದ್ದರು. ಆದರೆ ಹೀರೋಗಿಂತ ಖಳನಟನ ಪಾತ್ರಗಳು ಅವರ ಕೈ ಹಿಡಿದಿತ್ತು. ಕನ್ನಡದ ಸಾಕಷ್ಟು ಸ್ಟಾರ್ ನಟರಿಗೆ ವಿಲನ್ ಆಗಿ ಆದಿ ಲೋಕೇಶ್ ಅಬ್ಬರಿಸಿದ್ದರು. ಕೊರೋನಾ ಬಳಿಕ ಗರುಡ, ಚಾಂಪಿಯನ್‌, ಪ್ರಭುತ್ವ, ಸೇರಿದಂತೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಮಿಂಚಿದ್ದರು. ಈಗ ‘ಒಲವಿನ ನಿಲ್ದಾಣ’ (Olavina Nildana) ಸೀರಿಯಲ್ ಮೂಲಕ ಪವಿತ್ರಾ ಲೋಕೇಶ್‌ ಸಹೋದರ, ಆದಿ ಟಿವಿ ಪರದೆಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಬಿಗ್‌ ಬಾಸ್‌ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ.

    ಸಿನಿಮಾದಲ್ಲಿ ಒಳ್ಳೆಯ ಅವಕಾಶವಿದ್ದರೂ ಈ ಸೀರಿಯಲ್‌ ಒಪ್ಪಿಕೊಂಡಿಡ್ಯಾಕೆ ಅಂತಾ ಆದಿ ಲೋಕೇಶ್‌ ಪಬ್ಲಿಕ್‌ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶ್ರುತಿ ನಾಯ್ಡು ಅವರು ನನ್ನ ಒಳ್ಳೆಯ ಸ್ನೇಹಿತೆ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಲು ಹೇಳಿದಾಗ ಖುಷಿಯಿಂದ ಒಪ್ಪಿಕೊಂಡೆ, ನನ್ನ ಪಾತ್ರ ಕೂಡ ಚೆನ್ನಾಗಿದೆ. ಡಿಫರೆಂಟ್‌ ಎಂದು ಎನಿಸಿದಕ್ಕೆ ಈ ಪಾತ್ರ ಮಾಡಲು ಒಪ್ಪಿಕೊಂಡೆ. ಶ್ರುತಿ ನಾಯ್ಡು ಅವರ ತಂಡ ಅದ್ಭುತವಾಗಿ ಕೆಲಸ ಮಾಡ್ತಿದ್ದಾರೆ. ಈ ಸೀರಿಯಲ್‌ನ ನನ್ನ ಮೊದಲ ಪ್ರೋಮೋ ನೋಡಿ ತುಂಬಾ ಇಷ್ಟ ಆಯ್ತು. ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಕೆಲಸ ಮಾಡಿ ತೋರಿಸಿದ್ದಾರೆ. ಅದರಲ್ಲಿ ಅವರ ಶ್ರಮ ಕಾಣ್ತಿದೆ ಎಂದು ಆದಿ ಲೋಕೇಶ್‌ ಹೇಳಿದ್ದಾರೆ. ಇದರಲ್ಲಿ ನನ್ನ ವಿಶೇಷ ಪಾತ್ರ, ಸೀರಿಯಲ್‌ ನೋಡಿ ನಿಮಗೆ ಅಚ್ಚರಿ ಮೂಡಿಸುತ್ತೆ. ತುಂಬಾ ಟ್ವಿಸ್ಟ್‌ ಇದೆ ಎಂದು ಆದಿ ಲೋಕೇಶ್‌ ಹೇಳಿದ್ದಾರೆ.

    ಶ್ರುತಿ ನಾಯ್ಡು (Shruti Naidu) ನಿರ್ಮಾಣದ ಸೀರಿಯಲ್ ‘ಒಲವಿನ ನಿಲ್ದಾಣ’ವು 300 ಎಪಿಸೋಡ್‌ಗಳನ್ನ ಪೂರೈಸಿದೆ. ತಾರಿಣಿ- ಸಿದ್ಧಾಂತ್ ಕಥೆ ಫ್ಯಾನ್ಸ್ ಖುಷಿ ಕೊಟ್ಟಿದೆ. ಈ ಕಥೆಯಲ್ಲಿ ಹೊಸ ಟ್ವಿಸ್ಟ್ ಕೊಡೊದಕ್ಕೆ ಆದಿ ಲೋಕೇಶ್ ಎಂಟ್ರಿಯಾಗಿದೆ. ಪ್ರೋಮೋ ಕೂಡ ರಿವೀಲ್ ಆಗಿದೆ. ಖಡಕ್ ಆಗಿ ಆದಿ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಪ್ರೋಮೊಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ನಟ ಆದಿ ರೋಲ್ ಜುಲೈ 20ರ ಸಂಜೆ 6ಕ್ಕೆ ಪ್ರಸಾರವಾಗಲಿದೆ.

    ಈ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಆದಿ ಲೋಕೇಶ್ ನಟಿಸುತ್ತಿದ್ದಾರೆ. ತಾರಿಣಿ- ಸಿದ್ಧಾಂತ್ ಬದುಕಿನಲ್ಲಿ ಏನೆಲ್ಲಾ ಟ್ವಿಸ್ಟ್ ಇರಲಿದೆ ಕಾದು ನೋಡಬೇಕಿದೆ. ಒಲವಿನ ನಿಲ್ದಾಣದಲ್ಲಿ ಅಮಿತಾ ಕುಲಾಲ್, ಅಕ್ಷಯ್ ನಾಯಕ್, ಮಂಡ್ಯ ರಮೇಶ್, ಅಶೋಕ್, ಪ್ರಥಮ ಪ್ರಸಾದ್ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking – ‘ಮತ್ತೆ ಮದುವೆ’ಯಾದ ನಟ ನರೇಶ್-ಪವಿತ್ರಾ ಲೋಕೇಶ್

    Breaking – ‘ಮತ್ತೆ ಮದುವೆ’ಯಾದ ನಟ ನರೇಶ್-ಪವಿತ್ರಾ ಲೋಕೇಶ್

    ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದ ನಟ ನಟ ನರೇಶ್ ವಿಕೆ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ‘ಮತ್ತೆ ಮದುವೆ’ (Matte Maduve) ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಂ. ಎಸ್. ರಾಜು (MS Raju) ಆಕ್ಷನ್ ಕಟ್ ಹೇಳಿದ್ದಾರೆ.

    ನರೇಶ್ ಜೊತೆ ಪವಿತ್ರಾ ಲೋಕೇಶ್ ಜೋಡಿಯಾಗಿ ನಟಿಸಿರುವ ‘ಮತ್ತೆ ಮದುವೆ’ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿತ್ತು. ಇದೀಗ ಬಿಡುಗಡೆಗೆ ರೆಡಿಯಾಗಿರುವ ಸಿನಿಮಾ ತಂಡ ಫಸ್ಟ್ ಲುಕ್ ಮೂಲಕ ಸಿನಿ ಪ್ರೇಕ್ಷಕರನ್ನು ಎದುರುಗೊಂಡಿದೆ.  ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಏಪ್ರಿಲ್ ಅಥವಾ ಮೇ ನಲ್ಲಿ ತೆರೆ ಕಾಣಲಿದೆ. ಇದನ್ನೂ ಓದಿ: ಮಗಳ ನಟನೆ ಬಗ್ಗೆ ತಂದೆ-ತಾಯಿಗೆ ಖುಷಿ ಇದ್ಯಾ? ಅಸಲಿ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ‘ಮತ್ತೆ ಮದುವೆ’ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

    ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಹಂಚಿಕೊಳ್ಳಲಿದೆ.

    ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ರಾಜು. ಅವರವರ ಪಾತ್ರಗಳನ್ನು ಅವರೇ ಮಾಡಿದ್ದಾರಂತೆ. ಅಲ್ಲದೇ, ನರೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಮತ್ತೆ ಮದುವೆ ಎಂದು ಹೆಸರಿಡಲಾಗಿದೆ.

    ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಮದುವೆ ಫೋಟೋ ರಿಲೀಸ್ ಆದ ಬೆನ್ನಲ್ಲೇ ಸದ್ದಿಲ್ಲದೇ ದುಬೈಗೆ (Dubai) ಹಾರಿದ್ದರು. ಕೆಲ ದಿನಗಳ ಕಾಲ (Honeymoon) ದುಬೈನಲ್ಲಿ ಈ ಜೋಡಿ ಕಳೆದಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಿನ್ನೆಯಷ್ಟೇ ಮದುವೆ (Marriage) ಆಗಿದ್ದೇವೆ ಎನ್ನುವ ಅರ್ಥದಲ್ಲಿ ವಿಡಿಯೋ ಶೇರ್ ಮಾಡಿದ್ದ ನರೇಶ್, ನಂತರ ಅವರು ದುಬೈನಲ್ಲಿ ಕಾಲ ಕಳೆದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದವು. ದುಬೈನ ಬೇರೆ ಬೇರೆ ಸ್ಥಳಗಳಲ್ಲಿ ಸೆರೆ ಹಿಡಿಯಲಾದ ಫೋಟೋಗಳು ಕೂಡ ಅವಾಗಿದ್ದವು.

  • ಪವಿತ್ರಾ ಲೋಕೇಶ್ ಗೆಳೆತನ : ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನರೇಶ್

    ಪವಿತ್ರಾ ಲೋಕೇಶ್ ಗೆಳೆತನ : ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನರೇಶ್

    ನ್ನಡದ ನಟಿ ಪವಿತ್ರಾ ಲೋಕೇಶ್ (Pavithra Lokesh) ವಿಷಯದಲ್ಲಿ ಮತ್ತೆ ಗರಂ ಆಗಿದ್ದಾರೆ ತೆಲುಗು ನಟ ನರೇಶ್ (Naresh). ‘ನಾವಿಬ್ಬರೂ ಏನಾದರೂ ಮಾಡ್ಕೊಳ್ತಿವಿ. ಅದನ್ನು ಕೇಳೋಕೆ ನೀವ್ಯಾರು?’ ಎಂದು ಸಾರ್ವಜನಿಕವಾಗಿಯೇ ಪ್ರಶ್ನೆ ಮಾಡಿದ್ದು, ತಮ್ಮ ಮತ್ತು ಪವಿತ್ರಾ ಲೋಕೇಶ್ ಸಂಬಂಧಕ್ಕೆ ಚ್ಯುತಿ ತರುತ್ತಿರುವವರ ಬಗ್ಗೆ ಪೊಲೀಸ್ (police) ಠಾಣೆ ಮೆಟ್ಟಿಲು ಏರಿದ್ದಾರೆ. ಕಾನೂನು ಮೂಲಕವೇ ಅವರಿಗೆಲ್ಲ ಉತ್ತರ ಕೊಡುವುದಾಗಿ ಅಬ್ಬರಿಸಿದ್ದಾರೆ.

    ಪವಿತ್ರಾ ಲೋಕೇಶ್ ಮತ್ತು ನರೇಶ್ ಬಗ್ಗೆ ಕೆಲವರು ರಸವತ್ತಾಗಿ ಕಥೆಗಳನ್ನು ಕಟ್ಟಿ ಹೇಳುತ್ತಿದ್ದಾರಂತೆ. ಕೆಟ್ಟದ್ದಾಗಿ ಟ್ರೋಲ್ ಮಾಡುತ್ತಿದ್ದಾರಂತೆ. ಅಲ್ಲದೇ, ಕೆಲವರು ಸುಳ್ಳು ಸುದ್ದಿಗಳನ್ನೂ ಪ್ರಕಟಿಸುತ್ತಿದ್ದಾರೆ. ಇದರಿಂದ ಬೇಸತ್ತು ಹೋಗಿರುವ ನರೇಶ್, ತಮ್ಮ ಮಾನಹಾನಿ ಮಾಡುವವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಪೊಲೀಸರಿಗೆ ಮೊರೆ ಹೋಗಿದ್ದಾರೆ. ಅವರ ವಿರುದ್ಧ ದೂರು (complaint) ಕೂಡ ನೀಡಿದ್ದಾರೆ.

    ನರೇಶ್ ಅವರ ಮಲ ತಂದೆ ಕೃಷ್ಣ ನಿಧನರಾದಾಗ ಪವಿತ್ರಾ ಮತ್ತು ನರೇಶ್ ದೂರದಿಂದ ಮಾಡಿದ ಕಣ್ ಸನ್ನೆಗಳು ಸಖತ್ ಟ್ರೋಲ್ ಆಗಿದ್ದವು. ತಂದೆಯ ಶವದ ಮುಂದೆ ಆ ರೀತಿಯಲ್ಲಿ ನಡೆದುಕೊಂಡಿದ್ದಕ್ಕಾಗಿ ಪವಿತ್ರಾ ಲೋಕೇಶ್ ಮೇಲೆ ಕೃಷ್ಣ ಕುಟುಂಬ ಅಸಮಾಧಾನ ವ್ಯಕ್ತ ಪಡಿಸಿತ್ತು. ಇದು ನರೇಶ್ ಕೋಪಕ್ಕೂ ಕಾರಣವಾಗಿತ್ತು. ಪವಿತ್ರಾ ಮೇಲೆ ಅವರ ಕುಟುಂಬ ಅಸಮಾಧಾನ ವ್ಯಕ್ತ ಪಡಿಸಲು ಕಾರಣ ಟ್ರೋಲ್ ಪೇಜ್ ಗಳು ಎನ್ನುವುದೇ ಈಗಿನ ದೂರಿಗೆ ಕಾರಣ ಎಂದು ಹೇಳಲಾಗುತ್ತಿದೆ.

    ನರೇಶ್ ಅವರ ಮಾನಹಾನಿ ಮಾಡುವುದಕ್ಕಾಗಿಯೇ ಕೆಲವರು ನೇಮಕವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರಿಗೆ ಯಾರು ಕುಮ್ಮಕ್ಕು ಕೊಡುತ್ತಿದ್ದಾರೆ ಎನ್ನುವುದು ನರೇಶ್ ಅವರಿಗೆ ಗೊತ್ತಿದೆಯಂತೆ. ಹಾಗಾಗಿ ಸಾಕ್ಷಿ ಸಮೇತವಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ನರೇಶ್.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಮ್ಯಾ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಗೈದ ನಟ ನರೇಶ್

    ರಮ್ಯಾ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಗೈದ ನಟ ನರೇಶ್

    ತೆಲುಗು ನಟ ನರೇಶ್ (Naresh) ಮತ್ತು ಪತ್ನಿ ರಮ್ಯಾ ರಘುಪತಿ (Ramya Raghupathi) ಗಲಾಟೆ ಬೂದಿ ಮುಚ್ಚಿದ ಕೆಂಡದಂತೆ ಆಗಾಗ್ಗೆ ನಿಗಿನಿಗಿಸುತ್ತದೆ. ಈವರೆಗೂ ಸುಮ್ಮನೆ ಇದ್ದ ನರೇಶ್, ಇದೀಗ ಏಕಾಏಕಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ತಮ್ಮ ಹೆಂಡತಿ ವಿಪರೀತ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಕೊಲ್ಲಲ್ಲು ಹಲವರು ನನ್ನ ಮನೆ ಸುತ್ತ ತಿರುಗುತ್ತಾರೆ. ರಮ್ಯಾಳಿಂದ ಆಗಿ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ. ಕೂಡಲೇ ನನಗೆ ಬಿಡುಗಡೆ ಕೊಡಿ ಎಂದು ಅವರು ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.

    ರಮ್ಯಾ ಮತ್ತು ನರೇಶ್ ಡಿವೋರ್ಸ್ (Divorced) ಕೇಸ್ ಕೋರ್ಟಿನಲ್ಲಿದೆ. ನರೇಶ್ ವಿಚ್ಚೇದನ ಕೊಡಲು ಒಪ್ಪಿದರೂ, ರಮ್ಯಾ ನಿರಾಕರಿಸುತ್ತಿ‍ದ್ದಾರೆ. ಮಗನ ಭವಿಷ್ಯದ ದೃಷ್ಟಿಯಿಂದ ಮತ್ತೆ ತಾವು ನರೇಶ್ ಜೊತೆ ಬದುಕು ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಪವಿತ್ರಾ ಲೋಕೇಶ್ ಜೊತೆ ಮದುವೆ ಆಗಲು ನರೇಶ್ ನನ್ನು ಬಿಡುವುದಿಲ್ಲ ಎಂದು ಮಾಧ್ಯಮಗಳ ಮುಂದೆಯೂ ಹೇಳಿಕೊಂಡಿದ್ದಾರೆ. ಡಿವೋರ್ಸ್ ಕೇಸ್ ಜಟಿಲವಾಗುತ್ತಿದ್ದಂತೆಯೇ ಮತ್ತೆ ನರೇಶ್ ಕೋರ್ಟ್ ಮುಂದೆ ನಿಂತಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ರಮ್ಯಾ ಈಗಾಗಲೇ ನರೇಶ್ ಮನೆ ಸೇರಿದ್ದಾರೆ. ಅದೇ ಮನೆಯಲ್ಲೇ ವಾಸ ಮಾಡುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ದೂರ ಆಗುವ ಪ್ರಶ್ನೆಯೇ ಇಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ಈ ಹಠವೇ ನರೇಶ್ ಗೆ ನುಂಗಲಾರದ ತುಪ್ಪವಾಗಿದೆ. ರಮ್ಯಾ ಅವರಿಂದ ದೂರವಾಗಿ ಪವಿತ್ರಾ ಲೋಕೇಶ್ ಜೊತೆ ಮದುವೆ ಆಗುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಅವರು ಹೊಸ ವರ್ಷದಂದು ಪವಿತ್ರಾಗೆ ಮುತ್ತು ಕೊಟ್ಟಿದ್ದ ವಿಡಿಯೋವನ್ನು ರಿಲೀಸ್ ಮಾಡಿದ್ದರು ಎಂದು ಹೇಳಲಾಗಿತ್ತು.

    ಈ ನಡೆಗೆ ವಿರೋಧವನ್ನೂ ವ್ಯಕ್ತ ಪಡಿಸಿದ್ದ ರಮ್ಯಾ, ಈ ವಿಡಿಯೋ ಆಚೆ ಬಂದ ನಂತರ ಮತ್ತಷ್ಟು ಗರಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ಇಬ್ಬರನ್ನೂ ಸುಖವಾಗಿ ಇರುವುದಕ್ಕೆ ಬಿಡುವುದಿಲ್ಲ ಎಂದು ಅವರು ಶಪಥ ಮಾಡಿದ್ದಾರೆ. ಹಾಗಾಗಿಯೇ ಸೀದಾ ನರೇಶ್ ಮನೆಗೆ ಬಂದು ರಮ್ಯಾ ಠಿಕಾಣಿ ಹೂಡಿದ್ದಾರೆ. ರಮ್ಯಾ ಮನೆಗೆ ಬರುತ್ತಿದ್ದಂತೆಯೇ ನರೇಶ್ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ನರೇಶ್ ಮನೆಯಲ್ಲೇ ರಮ್ಯಾ ವಾಸ್ತವ್ಯ: ಪವಿತ್ರಾ ಲೋಕೇಶ್ ನಿಂದ ಪತಿಯ ದೂರ ಮಾಡಲು ತಂತ್ರ

    ನಟ ನರೇಶ್ ಮನೆಯಲ್ಲೇ ರಮ್ಯಾ ವಾಸ್ತವ್ಯ: ಪವಿತ್ರಾ ಲೋಕೇಶ್ ನಿಂದ ಪತಿಯ ದೂರ ಮಾಡಲು ತಂತ್ರ

    ತೆಲುಗಿನ ಖ್ಯಾತ ನಟ ನರೇಶ್ (Naresh) ಮತ್ತು ಬೆಂಗಳೂರಿನ ರಮ್ಯಾ ದಾಂಪತ್ಯ ಜೀವನದ ರಾದ್ಧಾಂತ ಸ್ವಲ್ಪ ತಿಂಗಳ ಮಟ್ಟಿಗೆ ತಣ್ಣಗಾಗಿತ್ತು. ಬೆಂಗಳೂರಿನಲ್ಲಿ ಇಬ್ಬರೂ ಮಾಡಿದ ಆರೋಪ ಪ್ರತ್ಯಾರೋಪದ ನಂತರ ನರೇಶ್ ಮತ್ತು ಪವಿತ್ರಾ ಲೋಕೇಶ್ ಮೈಸೂರಿನ ಲಾಡ್ಜ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅಲ್ಲಿಂದ ಪ್ರಕರಣಕ್ಕೆ ಬೇರೆ ತಿರುವು ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ನರೇಶ್ ಮತ್ತು ಪವಿತ್ರಾ ಲೋಕೇಶ್ ಹೈದರಾಬಾದ್ಗೆ (Hyderabad) ಶಿಫ್ಟ್ ಆದರು.

    ಇತ್ತ ರಮ್ಯಾ (Ramya) ಅವರ ತಾಯಿಗೆ ಹುಷಾರಿಲ್ಲದ ಕಾರಣಕ್ಕಾಗಿ ಮತ್ತು ನರೇಶ್ ಈ ಎಲ್ಲ ಪ್ರಕರಣವನ್ನು ಕೋರ್ಟಿನಲ್ಲೇ ನೋಡಿಕೊಳ್ಳುತ್ತೇನೆ ಎಂದು ಪರಿಣಾಮ ಇಡೀ ಪ್ರಕರಣ ಕೆಲವು ತಿಂಗಳ ಮಟ್ಟಿಗೆ ತಣ್ಣಗಾಗಿತ್ತು. ಇಬ್ಬರೂ ತಮ್ಮ ಪಾಡಿಗೆ ತಾವು ಇದ್ದುಕೊಂಡು ಕೋರ್ಟ್ ನಲ್ಲಿ ಫೈಟ್ ಮಾಡುತ್ತಾರೆ ಎಂದುಕೊಳ್ಳುವಷ್ಟರಲ್ಲಿ ದಿಢೀರ್ ಅಂತ ನರೇಶ್ ಮನೆಯಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಆಗಿದೆಲ್ಲ ಸರಿ ಮಾಡಿ, ಗಂಡನ ಜೊತೆಯೇ ಇರುವುದಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

     

    ಇತ್ತ ಪವಿತ್ರಾ ಲೋಕೇಶ್ (Pavithra Lokesh) ಜೊತೆ ತೋಟದ ಮನೆಯಲ್ಲಿ ನರೇಶ್ ಇದ್ದಾರೆ ಎಂದು ಹೇಳಲಾಗುತ್ತಿದೆ. ರಮ್ಯಾ ಮನೆಗೆ ಬಂದ ಹಿನ್ನೆಲೆಯಲ್ಲಿ ನರೇಶ್ ಗೊಂದಲಕ್ಕೀಡಾಗಿದ್ದಾರೆ. ಅಲ್ಲದೇ, ಪವಿತ್ರಾ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ರಮ್ಯಾ ತಾಕೀತು ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮತ್ತೆ ಗಂಡನ ಜೊತೆ ಬದುಕು ಮಾಡುತ್ತೇನೆ ಎಂದು ನರೇಶ್ ಕುಟುಂಬಕ್ಕೆ ತಿಳಿಸಿದ್ದಾರೆ ಎನ್ನುವುದು ಸದ್ಯಕ್ಕಿರುವ ವರ್ತಮಾನ. ರಮ್ಯಾ ವಾಪಸ್ಸು ಮನೆಗೆ ಬರುತ್ತಿದ್ದಂತೆಯೇ ಪವಿತ್ರಾ ಕೂಡ ಗಲಿಬಿಲಿಗೊಂಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ : ಏನಿದು ತೆಲುಗು ಸಿನಿಮಾ ರಂಗದಲ್ಲಿ ಗಾಸಿಪ್

    ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ : ಏನಿದು ತೆಲುಗು ಸಿನಿಮಾ ರಂಗದಲ್ಲಿ ಗಾಸಿಪ್

    ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಒಂದೇ ಹೋಟೆಲ್ ನಲ್ಲಿ ಸಿಕ್ಕಿಹಾಕಿಕೊಂಡ ನಂತರ ಪವಿತ್ರಾ ಲೋಕೇಶ್ ಚಿತ್ರಣವೇ ಬದಲಾಗಿದೆ ಎನ್ನುವ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಹರಡಿದೆ. ತಮ್ಮಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ತಾವು ಬರೀ ಜಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದವರು ಮೈಸೂರು ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಪವಿತ್ರಾ ಮೇಲಿದ್ದ ಇಮೇಜ್ ಬದಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಪರಿಣಾಮ ಪವಿತ್ರಾ ಅವರನ್ನು ಹಲವು ಸಿನಿಮಾಗಳಿಂದ ಕೈ ಬಿಡಲಾಗುತ್ತಿದೆ ಅಂತೆ.

    ತೆಲುಗು ಮತ್ತು ತಮಿಳಿನ ಹಲವು ಸ್ಟಾರ್ ಸಿನಿಮಾಗಳಿಗೆ ಪವಿತ್ರಾ ಲೋಕೇಶ್ ತಾಯಿ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರಂತೆ. ಆದರೆ, ಈ ಪ್ರಕರಣದ ನಂತರ ಅವರನ್ನು ಕೈ ಬಿಡಲಾಗುತ್ತಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ತಾಯಿ ಪಾತ್ರಕ್ಕೆ ಅವರು ಆಯ್ಕೆಯಾಗಿದ್ದರಿಂದ ಹಾಗಾಗಿ ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನರೇಶ್, ರಮ್ಯಾ ಮತ್ತು ಪವಿತ್ರಾ ಲೋಕೇಶ್ ಪ್ರಕರಣ ಇದೀಗ ಬೆಂಗಳೂರಿನಿಂದ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್

    ಪ್ರಕರಣ ಬೆಂಗಳೂರಿನಿಂದ ಹೈದರಾಬಾದ್ ಗೆ ಶಿಫ್ಟ್ ಆಗುತ್ತಿದ್ದಂತೆಯೇ ರಮ್ಯಾ ಕೂಡ ಅಲ್ಲೊಂದು ಪತ್ರಿಕಾಗೋಷ್ಠಿ ಮಾಡಲು ಸಿದ್ಧತೆ ನಡೆಸಿದ್ದಾರೆ. ರಮ್ಯಾ ಏನಾದರೂ ಮಾಧ್ಯಮಗೋಷ್ಠಿ ಮಾಡಿದರೆ, ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಗಲಿದೆ. ದಿನಕ್ಕೊಂದು ರೀತಿಯಲ್ಲಿ ಘಟನೆಯು ತಿರುವುದು ಪಡೆದುಕೊಳ್ಳುತ್ತಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • Exclusive- ನನ್ನ ಜೊತೆ ಇರೋದು ನನ್ನದೇ ಒಡವೆ, ನರೇಶ್ ಪತ್ನಿ ರಮ್ಯಾದ್ದಲ್ಲ : ನಟಿ ಪವಿತ್ರಾ ಲೋಕೇಶ್

    Exclusive- ನನ್ನ ಜೊತೆ ಇರೋದು ನನ್ನದೇ ಒಡವೆ, ನರೇಶ್ ಪತ್ನಿ ರಮ್ಯಾದ್ದಲ್ಲ : ನಟಿ ಪವಿತ್ರಾ ಲೋಕೇಶ್

    ಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಸಂಬಂಧದ ಪ್ರಕರಣ ಹಲವು ರೂಪಗಳನ್ನು ಪಡೆದುಕೊಂಡಿದೆ. ಪವಿತ್ರಾಗಾಗಿ ತಮ್ಮ ಪತಿ ತಮಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ ನಂತರ, ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಪವಿತ್ರಾ ಕೊರಳಲ್ಲಿರುವ ಅನೇಕ ಒಡವೆಗಳು ತಮ್ಮವೇ ಎಂದೂ ರಮ್ಯಾ ಹೇಳಿಕೆ ನೀಡಿದ್ದರು. ಈ ಕುರಿತು ಪವಿತ್ರಾ ಲೋಕೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.

    ‘ಬೇರೆ ಯಾರದೋ ಒಡವೆಯನ್ನು ಹಾಕಿಕೊಂಡು ಮರೆಯುವಂತಹ ಗತಿ ನನಗೆ ಬಂದಿಲ್ಲ. ನನ್ನಲ್ಲಿಯೇ ಬಹಳಷ್ಟು ಒಡವೆಗಳಿವೆ. ನಾನು ಕಷ್ಟಪಟ್ಟು ಸಂಪಾದನೆ ಮಾಡಿದ ಒಡವೆಗಳು ಅವು. ನನ್ನ ತಾಯಿ ಕಾಲೇಜು ದಿನಗಳಲ್ಲಿ ನನಗೊಂದು ಚೈನ್ ಮತ್ತು ಉಂಗುರು ಕೊಟ್ಟಿದ್ದರು. ಆಮೇಲೆ ಸಂಪಾದನೆ ಮಾಡಿ ಸಾಕಷ್ಟು ಒಡವೆಗಳನ್ನು ಖರೀದಿಸಿದ್ದೇನೆ. ಅವುಗಳನ್ನು ನಾನೇ ಖರೀದಿಸಿದ್ದೇನೆ ಎನ್ನುವುದಕ್ಕೆ ನನ್ನ ಬಳಿ ರಸೀದಿ ಇದೆ’ ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ : Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

    ಒಬ್ಬರ ಒಡವೆ ಮತ್ತೊಬ್ಬರ ಒಡವೆ ರೀತಿಯಲ್ಲಿ ಇರಬಾರದು ಅಂತಿದೆಯಾ ಎಂದು ಪ್ರಶ್ನೆಯನ್ನೂ ಮಾಡಿರುವ ಪವಿತ್ರಾ ಲೋಕೇಶ್, “ಐಶ್ವರ್ಯ ರೈ ಹಾಕಿದ ಒಡವೆ ನನ್ನ ಬಳಿ ಇದ್ದರೆ, ಅದು ಅವರದ್ದು ಹೇಗೆ ಆಗುತ್ತದೆ? ನರೇಶ್ ಅವರಷ್ಟು ನಾನು ಶ್ರೀಮಂತ ಅಲ್ಲದೇ ಇರಬಹುದು. ಆದರೆ, ನೂರಾರು ಸಿನಿಮಾಗಳಲ್ಲಿ ನಟಿಸಿ ಸಂಪಾದಿಸಿದ್ದೇನೆ. ಅದರಿಂದಲೇ ಅನೇಕ ಒಡವೆಗಳನ್ನು ಖರೀದಿಸಿರುವೆ. ಕಂತಿನ ರೂಪದಲ್ಲಿ ಕೆಲವು ಒಡವೆಗಳನ್ನು ಖರೀದಿಸಿದ್ದೇನೆ’ ಎಂದಿದ್ದಾರೆ ಪವಿತ್ರಾ ಲೋಕೇಶ್.

    ರಮ್ಯಾ ಮಾಡುತ್ತಿರುವ ಎಲ್ಲ ಆರೋಪಗಳಲ್ಲೂ ಹುರುಳಿಲ್ಲ. ನನ್ನ ಹೆಸರನ್ನು ಅವರು ಹಾಳು ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರೆದರೆ ನಾನೂ ಕೂಡ ಕಾನೂನು ರೀತಿಯಲ್ಲಿ ಕ್ರಮ ತಗೆದುಕೊಳ್ಳಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ. ತಮ್ಮ ಕೌಟುಂಬಿಕ ಕಲಹದಲ್ಲಿ ತಮ್ಮನ್ನು ಎಳೆತಂದಿರುವುದಕ್ಕೆ ತುಂಬಾ ನೋವಾಗಿದೆ ಎಂದೂ ಪವಿತ್ರಾ ಮಾತನಾಡಿದ್ದಾರೆ.

    Live Tv

  • ನಟ ನರೇಶ್ ಆತ್ಮೀಯರಾಗಿದ್ದು ದುಡ್ಡಿನ ಕಾರಣಕ್ಕೆ ಅಲ್ಲ, ನಾನು ದುಡ್ಡಿನ ಹಿಂದೆ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ನಟ ನರೇಶ್ ಆತ್ಮೀಯರಾಗಿದ್ದು ದುಡ್ಡಿನ ಕಾರಣಕ್ಕೆ ಅಲ್ಲ, ನಾನು ದುಡ್ಡಿನ ಹಿಂದೆ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಹಿಂದೆ ಹೋಗಿದ್ದು ಕೇವಲ ದುಡ್ಡಿಗಾಗಿ ಎನ್ನುವ ಆಡಿಯೋವೊಂದು ಸಖತ್ ವೈರಲ್ ಆಗಿದೆ. ಈ ಮಾತುಗಳನ್ನು ಪವಿತ್ರಾ ಲೋಕೇಶ್ ಜೊತೆ 11 ವರ್ಷಗಳ ಕಾಲ ಬದುಕು ನಡೆಸಿರುವ ಸುಚೇಂದ್ರ ಪ್ರಸಾದ್ ಅವರೇ ಆಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಪಬ್ಲಿಕ್ ಟಿವಿ ನಟಿ ಪವಿತ್ರಾ ಲೋಕೇಶ್ ಅವರನ್ನು ಪ್ರಶ್ನಿಸಿದಾಗ, ಆ ಪ್ರಶ್ನೆಗೂ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ಇದನ್ನೂ ಓದಿ : Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

    ಸುಚೇಂದ್ರ ಪ್ರಸಾದ್ ಅವರು ಏನು ಮಾತನಾಡಿದ್ದಾರೆ ಅಂತ ನನಗಂತೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎನ್ನಲಾದ ಆಡಿಯೋದಲ್ಲಿ ನಾನು ದುಡ್ಡಿಗಾಗಿ ನರೇಶ್ ಅವರ ಜೊತೆ ಹೋಗಿದ್ದೇನೆ ಅಂತ ಅವರು ಹೇಳಿದ್ದರೆ, ನಾನು ಸುಚೇಂದ್ರ ಪ್ರಸಾದ್ ಅವರನ್ನು ಒಪ್ಪಿ ಹೋದಾಗ ಅವರ ಬಳಿ ಏನಿತ್ತು ಎನ್ನುವುದನ್ನು ಯೋಚಿಸಲಿ ಎಂದಿದ್ದಾರೆ ಪವಿತ್ರಾ ಲೋಕೇಶ್.

    ಸುಚೇಂದ್ರ ಪ್ರಸಾದ್ ಅವರನ್ನು ಇಷ್ಟಪಟ್ಟು, ಅವರೊಂದಿಗೆ ಬದುಕಬೇಕು ಎಂದು ಹೋದಾಗ ಸುಚೇಂದ್ರ ಪ್ರಸಾದ್ ಬಳಿ ಏನೂ ಇರಲಿಲ್ಲ. ನಾನು ದುಡ್ಡಿನ ಹಿಂದೆ ಹೋದವಳು ಅಂತಾಗಿದ್ದಾರೆ, ನಾನು ಅವರೊಂದಿಗೆ ಹನ್ನೊಂದು ವರ್ಷ ಬದುಕುತ್ತಲೂ ಇರಲಿಲ್ಲ. ಸುಚೇಂದ್ರ ಪ್ರಸಾದ್ ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ಓದಿಕೊಂಡಿದ್ದಾರೆ. ಶಾಂತ ಸ್ವಭಾವದ ಮನುಷ್ಯ ಅನ್ನುವ ಕಾರಣಕ್ಕಾಗಿ ನಾನು ಅವರೊಂದಿಗೆ ಇದ್ದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ಪವಿತ್ರಾ ಲೋಕೇಶ್.

    Live Tv

  • Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

    Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

    ತೆಲುಗು ನಟ ನರೇಶ್ ಅವರ ಜೊತೆ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರಾ? ಈ ಕುರಿತು ಕಳೆದೊಂದು ವಾರದಿಂದ ದೊಡ್ಡ ಚರ್ಚೆ ಆಗುತ್ತಿದೆ. ತೆಲುಗು ಮಾಧ್ಯಮಗಳಂತೂ ಎರಡು ವರ್ಷಗಳ ಹಿಂದೆಯೇ ಅವರು ಮದುವೆ ಆಗಿದ್ದಾರೆ ಎಂದು ಸುದ್ದಿ ಮಾಡಿದ್ದವು. ಈ ಕುರಿತು ನರೇಶ್ ಅವರ ಪತ್ನಿ ರಮ್ಯಾ ಕೂಡ ಹೇಳಿಕೆ ನೀಡಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಪವಿತ್ರಾ ಲೋಕೇಶ್ ಜೊತೆಗಿದ್ದ ಸುಚೇಂದ್ರ ಪ್ರಸಾದ್ ಕೂಡ ರಮ್ಯಾ ಅವರಿಗೆ ಅನ್ಯಾಯ ಆಗಬಾರದು ಎಂದಿದ್ದರು. ಈ ಕುರಿತು ಪವಿತ್ರಾ ಲೋಕೇಶ್ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

    ‘ನಾನು ಮತ್ತು ನರೇಶ್ ಅವರು ಪರಿಚಯವಾಗಿದ್ದು 4 ವರ್ಷಗಳ ಹಿಂದೆ. ಅವರು ನಾನು ಹ್ಯಾಪಿ ವೆಡ್ಡಿಂಗ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದೆವು. ಆಗ ನರೇಶ್ ಯಾರು ಅಂತಾನೇ ಗೊತ್ತಿರಲಿಲ್ಲ. ಎರಡನೇ ಸಿನಿಮಾ ಮಾಡುವಾಗ ಪರಿಚಯವಾದರು. ತೀರಾ ಸಲುಗೆ ಬೆಳೆಯಿತು. ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ನಾನೂ ಹಂಚಿಕೊಳ್ಳುತ್ತಿದೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಆತ್ಮಿಯತೆ ಬೆಳೆಯಿತು. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಅಂದರೆ, ಒಟ್ಟಿಗೆ ಓಡಾಡುವುದು ಸಹಜ. ಅದರ ಹೊರತಾಗಿ ಏನೂ ಇಲ್ಲ” ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ನಾನು ನೂರಾರು ಸಿನಿಮಾಗಳನ್ನು ಮಾಡಿರುವೆ. ಹಲವು ಕಲಾವಿದರ ಜೊತೆ ನಟಿಸಿರುವೆ. ಹಾಗಂತ ಎಲ್ಲರ ಜೊತೆಯೂ ನನಗೆ ಸಂಬಂಧವಿದೆ ಅಂದರೆ ಹೇಗೆ? ರಮ್ಯಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ನಾನು ಮತ್ತು ನರೇಶ್ ಏನು ಅಂತ ನಮ್ಮಿಬ್ಬರಿಗೆ ಗೊತ್ತು. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ ಪವಿತ್ರಾ ಲೋಕೇಶ್. ಸದ್ಯ ಆತ್ಮೀಯರಾಗಿದ್ದೇವೆ. ನಾಳೆಯ ಬಗ್ಗೆ ನಾನು ಹೇಗೆ ಮಾತನಾಡೋಕೆ ಆಗುತ್ತೆ? ಎಂದು ಹೇಳುವ ಮೂಲಕ ಮತ್ತೆ ಕುತೂಹಲ ಮೂಡಿಸಿದ್ದಾರೆ.

    ನರೇಶ್ ಅವರ ಬ್ಯಾನರ್ ನಲ್ಲೇ ಪವಿತ್ರಾ ಲೋಕೇಶ್ ಅವರು ಶಾರ್ಟ್ ಫಿಲ್ಮ್ ವೊಂದನ್ನು ನಿರ್ದೇಶನ ಮಾಡಿದ್ದಾರಂತೆ. ಹೀಗೆ ಒಟ್ಟಿಗೆ ಕೆಲಸ ಮಾಡುವಾಗ ಆತ್ಮೀಯತೆ ಬೆಳೆಯದೇ ಇರುತ್ತಾ ಎನ್ನುವುದು ಪವಿತ್ರಾ ಲೋಕೇಶ್ ಪ್ರಶ್ನೆ. ನರೇಶ್ ಮತ್ತು ತಮ್ಮ ಮಧ್ಯೆ ಕೇವಲ ಆತ್ಮೀಯತೆ ಎನ್ನುವುದಕ್ಕಿಂತ ಒಂದು ಹೆಜ್ಜೆ ಮುಂದಿನ ಆಪ್ತತೆಯೂ ಇದೆ ಎಂದೂ ಪವಿತ್ರಾ ಲೋಕೇಶ್ ಹೇಳಿದ್ದಾರೆ. ನರೇಶ್ ಮತ್ತು ತಮ್ಮ ಮದುವೆ ವಿಚಾರ ಸದ್ಯಕ್ಕೆ ಇಷ್ಟೆ. ಮುಂದೆ ಏನು ಅಂತ ನನಗಂತೂ ಗೊತ್ತಿಲ್ಲ ಎಂದಿದ್ದಾರೆ ಪವಿತ್ರಾ.

    Live Tv

  • ನಟಿ ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್ : ಪತ್ನಿ ರಮ್ಯಾ ಆರೋಪಕ್ಕೆ ನಟ ನರೇಶ್ ತಿರುಗೇಟು

    ನಟಿ ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್ : ಪತ್ನಿ ರಮ್ಯಾ ಆರೋಪಕ್ಕೆ ನಟ ನರೇಶ್ ತಿರುಗೇಟು

    ನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಆ ಕಾರಣಕ್ಕಾಗಿಯೇ ನನಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ನರೇಶ್ ಅವರಿಗೆ ಡಿವೋರ್ಸ್ ಸಿಕ್ಕ ನಂತರ ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ನರೇಶ್ ಅವರ ಪತ್ನಿ ರಮ್ಯಾ ಅವರು ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ನರೇಶ್, ‘ಪವಿತ್ರಾ ಲೋಕೇಶ್ ಮತ್ತು ನನ್ನ ನಡುವಿನ ಸಂಬಂಧಕ್ಕೆ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ. ನನ್ನ ವೆಲ್ ವಿಶರ್, ನನ್ನ ಬೆಸ್ಟ್ ಫ್ರೆಂಡ್’ ಎಂದು ಹೇಳಿದ್ದಾರೆ.

    ನನ್ನ ಹೆಸರನ್ನು ಹಾಳು ಮಾಡುವುದಕ್ಕಾಗಿ ಪವಿತ್ರಾ ಲೋಕೇಶ್ ಅವರ ಹೆಸರನ್ನು ರಮ್ಯಾ ಬಳಸಿಕೊಳ್ಳುತ್ತಿದ್ದಾರೆ ಎಂದು ನರೇಶ್ ಆರೋಪ ಮಾಡಿದ್ದಾರೆ. ಪವಿತ್ರಾ ಲೋಕೇಶ್ ತುಂಬಾ ಒಳ್ಳೆಯವರು. ನಮ್ಮಿಬ್ಬರ ಮಧ್ಯೆ ರಮ್ಯಾ ಹೇಳುವಂತಹ ಯಾವುದೇ ಸಂಬಂಧವಿಲ್ಲ. ಹೀಗೆ ನನ್ನ ಹೆಸರು ಹಾಳು ಮಾಡಿದರೆ, ಅವರಿಗೆ ಲಾಭ ಇರಬಹುದು. ಹಾಗಾಗಿ ಈ ರೀತಿ ಬೆಂಗಳೂರಿನಲ್ಲಿ ಕುಳಿತುಕೊಂಡು ನನ್ನ ಕುಟುಂಬದ ಹೆಸರನ್ನು ಹಾಳು ಮಾಡುತ್ತಿದ್ದಾರೆ’ ಎಂದಿದ್ದಾರೆ ನರೇಶ್. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ಪವಿತ್ರಾ ಲೋಕೇಶ್ ಮತ್ತು ನರೇಶ್ ಸಂಬಂಧದ ವಿಚಾರವಾಗಿ ಅವಹೇಳನಕಾರಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿರುವವರು ಕುರಿತು ಪವಿತ್ರಾ ಲೋಕೇಶ್ ಕೂಡ ಗರಂ ಆಗಿದ್ದು. ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಎರಡು ದಿನದ ಹಿಂದೆ ಮೈಸೂರಿಗೆ ಬಂದಿದ್ದ ಪವಿತ್ರಾ, ಮೈಸೂರು ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಇಂದಿನಿಂದ ತನಿಖೆ ನಡೆಸಿದ್ದಾರೆ.

    Live Tv