Tag: Pattanagere Shed

  • ದರ್ಶನ್ ಗ್ಯಾಂಗ್ ಕ್ರೌರ್ಯ ಮತ್ತಷ್ಟು ಬಯಲು- ಸ್ವಾಮಿಗೆ ಶೆಡ್‍ನಲ್ಲಿ ಊಟ ಕೊಟ್ಟು ಹಲ್ಲೆ

    ದರ್ಶನ್ ಗ್ಯಾಂಗ್ ಕ್ರೌರ್ಯ ಮತ್ತಷ್ಟು ಬಯಲು- ಸ್ವಾಮಿಗೆ ಶೆಡ್‍ನಲ್ಲಿ ಊಟ ಕೊಟ್ಟು ಹಲ್ಲೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದರ್ಶನ್ (Actor Darshan) & ಗ್ಯಾಂಗ್‍ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್‍ನ ಜೈಲುವಾಸ ಮತ್ತೆ 14 ದಿನಗಳ ಕಾಲ ಮುಂದುವರಿದಿದೆ. ಈ ಮಧ್ಯೆ ಕೊಲೆ ಕೇಸ್ ಸಂಬಂಧ ತನಿಖೆಯನ್ನ ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ.

    ಕೊಲೆ ಪ್ರಕರಣದಲ್ಲಿ ಆಳಕ್ಕಿಳಿದಷ್ಟು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ರೇಣುಕಾಸ್ವಾಮಿ ಶೆಡ್‍ಗೆ ಬಂದಿದ್ದು ಯಾವಾಗ..? ದರ್ಶನ್ ಶೆಡ್‍ಗೆ ಬರುವುದಕ್ಕೂ ಮುನ್ನ ಅಲ್ಲಿ ಏನೆಲ್ಲಾ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೂನ್ 8 ರಂದು ರೇಣುಕಾಸ್ವಾಮಿಯನ್ನ `ಡಿ’ ಗ್ಯಾಂಗ್‍ನವರು ಪಟ್ಟಣಗೆರೆ ಶೆಡ್‍ಗೆ ಕರೆತಂದು ಹಿಗ್ಗಾಮುಗ್ಗ ಥಳಿಸಿ ಹಲ್ಲೆ ಮಾಡಿದ್ರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ- ದರ್ಶನ್‍ಗೆ 40 ಲಕ್ಷ ಕೊಟ್ಟ ಮೋಹನ್ ರಾಜ್‍ಗೆ ಮತ್ತೆ ನೋಟಿಸ್

    ಮಾರಣಾಂತಿಕ ಹಲ್ಲೆಗೆ ಶೆಡ್‍ನಲ್ಲೇ ರೇಣುಕಾಸ್ವಾಮಿ (Renukaswamy) ಉಸಿರು ಚೆಲ್ಲಿದ್ದ. ಈ ವಿಚಾರವಾಗಿ ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಬಂದಿದ್ದ ರೇಣುಕಾಸ್ವಾಮಿ ಹಲ್ಲೆ ಮಾಡಿದ್ದ ಗ್ಯಾಂಗ್ ದರ್ಶನ್ ಎಂಟ್ರಿಯಾಗೋದಕ್ಕೂ ಮುಂಚೆ ಊಟ ಕೊಟ್ಟಿರೋದು ಬಯಲಾಗಿದೆ. ಸಂಜೆ 4:30 ರಿಂದ 5 ಗಂಟೆ ಆಸುಪಾಸಿನಲ್ಲಿ ರೇಣುಕಾಸ್ವಾಮಿಗೆ ಊಟ ನೀಡಲಾಗಿದ್ದು, ಸಾವು ಸಂಭವಿಸಿದ್ದು ಎಷ್ಟು ಗಂಟೆಗೆ ಎಂದು ತಿಳಿಯಲು ಮತ್ತೆ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

    ಹೊಟ್ಟೆ ಒಳಗಿನ ಊಟದ ಜೀರ್ಣ ಕ್ರಿಯೆ ಬಗ್ಗೆ ಸ್ಪಷ್ಟನೆ ತೆಗೆದುಕೊಳ್ಳಲು ಪೊಲೀಸರು ತೀರ್ಮಾನ ಮಾಡಿದ್ದಾರೆ. ಫಾರೆನ್ಸಿಕ್ ತಜ್ಞರು ನೀಡಿರೋ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸ್ವಲ್ಪ ಆಹಾರ ಇದ್ದದ್ದು ನಿಜ ಎಂದು ಹೇಳಿದ್ದಾರೆ.

  • ರೇಣುಕಾಸ್ವಾಮಿ ಹತ್ಯೆ ನಡೆದಿದ್ದ ಜಾಗ ಪಟ್ಟಣಗೆರೆ ಶೆಡ್‌ಗೆ ಬೀಗ!

    ರೇಣುಕಾಸ್ವಾಮಿ ಹತ್ಯೆ ನಡೆದಿದ್ದ ಜಾಗ ಪಟ್ಟಣಗೆರೆ ಶೆಡ್‌ಗೆ ಬೀಗ!

    ಬೆಂಗಳೂರು: ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ಬಳಿಕ ಶೆಡ್‌ಗೆ (Pattanagere Shed) ಬೀಗ ಬಿದ್ದಿದೆ. ಫೈನಾನ್ಸ್ ನಲ್ಲಿ ಹಣ ಕಟ್ಟದೇ ಸೀಜ್ ಆದ ವಾಹನಗಳನ್ನ (Seized Vehicles) ಬಿಡಿಸಿಕೊಳ್ಳಲು ನಿತ್ಯ ಜನ ಶೆಡ್‌ಗೆ ಬರ್ತಿದ್ದಾರೆ. ಆದ್ರೆ ವಾಹನಗಳನ್ನ ಬಿಡಿಸಿಕೊಳ್ಳಲಾಗದೇ ವಾಪಾಸ್ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದ ಜನ್ರನ್ನ ಬೆಚ್ಚಿಬೀಳಿಸಿದೆ. ಬೆಂಗಳೂರಿನ ಆರ್‌ಆರ್ ನಗರದ (Bengaluru RR Nagar) ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ʻದಾಸʼನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ – ಪೊಲೀಸರಿಂದ 2 ಹಲ್ಲೆ ವೀಡಿಯೋ ಸಂಗ್ರಹ!

    ಈ ಶೆಡ್‌ನ ಬಾಡಿಗೆಗೆ ಫೈನಾನ್ಸ್ ಕಂಪನಿಯ (Finance Company) ನಿರ್ವಹಣೆ ಮಾಡ್ತಿದ್ದು, ಫೈನಾನ್ಸ್ ನಲ್ಲಿ ವಾಹನಗಳನ್ನ ಖರೀದಿಸಿ, ಕಟ್ಟೋಕೆ ಆಗದಿದ್ದಾಗ, ಅಂತಹ ವಾಹನಗಳನ್ನ ಸೀಜ್ ಮಾಡಿ ಇದೇ ಶೆಡ್‌ನಲ್ಲಿ ತುಂಬಿಸಲಾಗುತ್ತೆ. ಇಲ್ಲಿ ಸೀಜ್ ಆಗಿರೋ ನೂರಾರು ಬೈಕ್‌ಗಳು, ಆಟೋ, ಕಾರು, ಲಾರಿ, ಇತರೆ ವಾಹನಗಳಿವೆ. ಇವುಗಳನ್ನ ಮಾಲೀಕರು ಹಣ ಕಟ್ಟಿ ತಮ್ಮ ವಾಹನಗಳನ್ನ ಬಿಡಿಸಿಕೊಂಡು ಹೋಗಲು ಶೆಡ್‌ಗೆ ಬರ್ತಿದ್ದಾರೆ. ಆದ್ರೆ ರೇಣುಕಸ್ವಾಮಿ ಕೊಲೆ ವಿಚಾರಣೆ ಹಾಗೂ ಸಾಕ್ಷ್ಯ ನಾಶ ಆಗಬಾರದೆಂದು ಪೊಲೀಸರು ಶೆಡ್‌ಗೆ ಬೀಗ ಹಾಕಿದ್ದಾರೆ. ಹೀಗಾಗಿ ಫೈನಾನ್ಸ್ ಸಿಬ್ಬಂದಿ ಇತ್ತ ತಲೆ ಹಾಕಿಲ್ಲ. ನಿತ್ಯ ತಮ್ಮ ವಾಹನಗಳನ್ನ ಬಿಡಿಸಿಕೊಂಡು ಹೋಗಲು ಬಂದ ಮಾಲೀಕರು ಖಾಲಿ ಕೈಯಲ್ಲಿ ವಾಪಾಸ್ ಹೋಗ್ತಿದ್ದಾರೆ.

    ಆಟೋ, ದ್ವಿಚಕ್ರ ವಾಹನಗಳಲ್ಲಿ ನಿತ್ಯ 15-20 ಜನ ಶೆಡ್‌ಗೆ ಬರ್ತಾರೆ. ಬ್ಯಾಂಕ್‌ನಲ್ಲಿ ಬಾಕಿಯಿರೋ ಹಣ ಕಟ್ಟಿ, ಇನ್ನೇನು ಬೈಕ್ ಬಿಡಿಸಿಕೊಂಡು ಬರೋಣ ಅಂತ ಎಲ್ಲ ದಾಖಲೆಗಳನ್ನ ಶೆಡ್ ಬಳಿ ತಂದ್ರೂ, ಸಿಬ್ಬಂದಿಯಿಲ್ಲದೇ ನಿರಾಸೆಯಿಂದ ವಾಪಾಸ್ ಆಗ್ತಿದ್ದಾರೆ.

    ನಾವು ನಮ್ಮ ವಸ್ತುವನ್ನ ಬಿಡಿಸಿಕೊಳ್ಳೊಕೆ ಹೀಗೆ ಎಷ್ಟು ದಿನ ಓಡಾಡಬೇಕು? ಅಂತ ವಾಹನದ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ – ಸಂತ್ರಸ್ತನ ವಿರುದ್ಧವೇ ಕೇಸ್‌ ದಾಖಲು