Tag: patna

  • ಕೊರೊನಾ ಟೆಸ್ಟ್ ವೇಳೆ ಎದ್ನೋ ಬಿದ್ನೋ ಎಂದು ಓಡಿದ ಪ್ರಯಾಣಿಕರು

    ಕೊರೊನಾ ಟೆಸ್ಟ್ ವೇಳೆ ಎದ್ನೋ ಬಿದ್ನೋ ಎಂದು ಓಡಿದ ಪ್ರಯಾಣಿಕರು

    ಪಾಟ್ನಾ: ಕೊರೊನಾ ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಹೊರಗೆ ಓಡಿಹೋದ ಘಟನೆ ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣದಲ್ಲಿನಡೆದಿದೆ.

    ರೈಲಿನಿಂದ ಇಳಿದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡುತ್ತಾರೆ ಅಂತಾ ಗೊತ್ತಾಗಿದ್ದೇ ತಡ ನಿಲ್ದಾಣದಿಂದ ಹೊರಗೆ ಹೋಗಲು ಮುಗಿಬಿದ್ದಿದ್ದಾರೆ. ಈ ಮಧ್ಯೆ ಆರೋಗ್ಯ ಸಿಬ್ಬಂದಿ ಕೆಲ ಪ್ರಯಾಣಿಕರನ್ನು ತಡೆದು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದಾಗ ಹಿಂದೇಟು ಹಾಕಿದ್ದಾರೆ. ರೈಲ್ವೆ ನಿಲ್ದಾಣದಿಂದ ಹೊರಗೆ ಓಡಿ ಹೋಗಿದ್ದಾರೆ.

    ಪ್ರಯಾಣಿಕರನ್ನು ನಾವು ತಡೆದಾಗ ಅವರು ವಾದ ಮಾಡಲು ಶುರು ಮಾಡಿದ್ರು. ಈ ಘಟನೆ ನಡೆದಾಗ ನಿಲ್ದಾಣದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಬಳಿಕ ಒಬ್ಬರು ಮಹಿಳಾ ಪೊಲೀಸ್ ಬಂದರು ಆದರೆ ಅವರೊಬ್ಬರೇ ಇದ್ದದ್ದರಿಂದ ಅಸಾಹಯಕರಾಗಿದ್ರು ಎಂದು ಸ್ಥಳೀಯ ಕೌನ್ಸಿಲರ್ ಜೈ ತಿವಾರಿ ಹೇಳಿದ್ದಾರೆ.

    ದೇಶದ ವಿವಿಧ ಭಾಗಗಳಿಂದ ಜನರು ಬಿಹಾರಕ್ಕೆ ವಾಪಸ್ಸಾಗುತ್ತಿದ್ದು, ಅವರನ್ನು ಸ್ಕ್ರೀನಿಂಗ್ ಮಾಡಲು ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ವ್ಯವೆಸ್ಥೆ ಮಾಡಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ:ಮಹಾ ವಲಸೆ – ಮುಂಬೈ, ದೆಹಲಿ ನಗರಗಳನ್ನ ತೊರೆಯುತ್ತಿರೋ ಪ್ರವಾಸಿ ಕಾರ್ಮಿಕರು

    ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಮುಂಬೈ, ಪುಣೆ, ದೆಹಲಿಯಿಂದ ಬರುವ ರೈಲುಗಳು ಪ್ರತಿದಿನ ಬಿಹಾರಕ್ಕೆ ಬರುತ್ತಿದೆ. ಈ ನಗರಗಳಲ್ಲಿ ಲಾಕ್‍ಡೌನ್‍ನಿಂದ ಹಾಗೂ ಉದ್ಯೋಗವಿಲ್ಲದ ಕಾರಣ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.

  • ಗಿಡ ಕಿತ್ತಳು ಎಂದು ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟರು

    ಗಿಡ ಕಿತ್ತಳು ಎಂದು ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟರು

    ಪಾಟ್ನಾ: ಆಟವಾಡುತ್ತಿದ್ದ ಬಾಲಕಿ ಮನೆಯಂಗಳದಲ್ಲಿದ್ದ ಗಿಡವನ್ನು ಕಿತ್ತುಳು ಎಂದು ಸಿಟ್ಟಿಗೆದ್ದ ಒಂದು ಕುಟುಂಬ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಬಾಲಕಿ 12 ವರ್ಷದವಳಾಗಿದ್ದಾಳೆ. ಸಿಖಂದರ್ ಯಾದವ್ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಈತ ಸಿವರಾಣ ಗ್ರಾಮದ ನಿವಾಸಿಯಾಗಿದ್ದಾನೆ.

    12 ವರ್ಷದ ಬಾಲಕಿ ಸಿಖಂದರ್ ಯಾದವ್ ಎನ್ನುವರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಆಕೆ ತಿಳಿಯದೆ ಮನೆಯ ಅಂಗಳದಲ್ಲಿದ್ದ ಒಂದು ಗಿಡವನ್ನು ಕಿತ್ತಿದ್ದಾಳೆ. ಇದನ್ನು ಗಮನಿಸಿದ ಸಿಖಂದರ್ ಮತ್ತು ಆತನ ಪತ್ನಿ, ಮಗಳು ಸೇರಿ ಬಾಲಕಿಗೆ ಹೊಡೆದು ಹಿಂಸೆ ಮಾಡಿದ್ದಾರೆ.

    ಬಾಲಕಿ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಸಿಖಂದರ್ ಯಾದವ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಮದುವೆಯಾಗಿ 5ದಿನಕ್ಕೆ ಪತ್ನಿ ಜೂಟ್- ಆಕೆಯೆ ಬೇಕು ಎಂದು ಹಠ ಹಿಡಿದ ಪತಿ

    ಮದುವೆಯಾಗಿ 5ದಿನಕ್ಕೆ ಪತ್ನಿ ಜೂಟ್- ಆಕೆಯೆ ಬೇಕು ಎಂದು ಹಠ ಹಿಡಿದ ಪತಿ

    ಪಾಟ್ನಾ: ಮದುವೆಯಾಗಿ 5ನೇ ದಿನಕ್ಕೆ ಯುವತಿ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಓಡಿ ಹೋಗಿದ್ದಾಳೆ. ಪತಿ ಮಾತ್ರ ನನಗೆ ನನ್ನ ಪತ್ನಿ ಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಗೋಪಾಲ್‍ಗಂಜ್‍ನಲ್ಲಿ ನಡೆದಿದೆ.

    ಯುವತಿ ತನ್ನ ಅತ್ತೆಯ ಮಗನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಮನೆಯವರಿಗೆ ಗೊತ್ತಿತ್ತು. ಆದರೆ ಇವರಿಬ್ಬರಿಗೆ ವಿವಾಹವಾಗಲು ಬಿಡಬಾರದು ಎಂಬ ಕಾರಣಕ್ಕೆ ಮನೆಯವರು ಬೇರೆ ಹುಡುಗನನ್ನು ನೋಡಿ ಮದುವೆ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದ ಪ್ರೇಮಿಗಳಿಬ್ಬರು ಓಡಿ ಹೋಗಿದ್ದರು.

    ಈ ವಿಚಾರವನ್ನು ತಿಳಿದ ಕುಟುಂಬಸ್ಥರು ಇಬ್ಬರ ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ನಂತರ ಹುಡುಗಿಗೆ ಈ ಮೊದಲು ನಿಶ್ಚಯವಾದ ಹುಡುಗನೊಂದಿಗೆ ವಿವಾಹವನ್ನು ಮಾಡಿದ್ದಾರೆ. ಆದರೆ ಮದುವೆಯಾಗಿ ಐದೇ ದಿನಕ್ಕೆ ಯುವತಿ ಮತ್ತೆ ತಾನು ಪ್ರೀತಿಸುತ್ತಿದ್ದ ಅತ್ತೆಯ ಮಗನೊಂದಿಗೆ ಓಡಿ ಹೋಗಿದ್ದಾಳೆ.

    ಪತ್ನಿಯಿಂದ ದೂರವಾದ ಪತಿ ನನಗೆ ನನ್ನ ಪತ್ನಿ ಬೇಕು ಎಂದು ಪಟ್ಟುಹಿಡಿದಿದ್ದಾನೆ. ಮದುವೆ ಐದೇ ದಿನಕ್ಕೆ ಓಡಿ ಹೋಗಿದ್ದಾಳೆ. ಆಕೆಯನ್ನು ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾನೆ.

  • 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ಳು!

    10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ಳು!

    – ದೇವರ ಉಡುಗೊರೆ ಎಂದ ಪತಿ

    ಪಾಟ್ನಾ: 10 ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ ಘಟನೆಬಿಹಾರದ ಮುಜಾಫರ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಶಾಂತಿ ದೇವಿ(20) ಮಗುವಿಗೆ ಜನ್ಮ ನೀಡಿದಾಕೆ. ಈಕೆ ಮಹಾಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 10 ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಳು. ಈ ವೇಳೆ ಆಕೆಗೆ ಪ್ರಸವ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಈ ಸಂಬಂಧ ಪರೀಕ್ಷಾ ಕೇಂದ್ರದ ಮುಖ್ಯಸ್ಥೆ ಮೀರಾ ಮಧುಮಿತ ಮಾತನಾಡಿ, ಕಾಲೇಜಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಅಂತೆಯೇ ಶುಕ್ರವಾರ ಶಾಂತಿ ದೇವಿ ಪರೀಕ್ಷೆ ಬರೆಯಲು ಬಂದಿದ್ದಳು. ಪರೀಕ್ಷೆ ಬರೆಯಲು ಕುಳಿತ 1 ಗಂಟೆಯ ನಂತರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಹೇಳಿದರು.

    ಇತ್ತ ಶಾಂತಿ ದೇವಿ ಪರಿಸ್ಥಿತಿ ಅರಿತ ಮೀರಾ ಅವರು ಕೂಡಲೇ ಕೇಂದ್ರ ಉಸ್ತುವಾರಿಗೆ ಮಾಹಿತಿ ರವಾನಿಸಿದ್ದಾರೆ. ಅಲ್ಲದೆ ಶಾಂತಿಯನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಲು ಅನುಮತಿ ಕೇಳಿದರು. ನಂತರ ಜಿಲ್ಲಾ ಶಿಕ್ಷಣ ಅಧಿಕಾರಿಗೂ ಈ ಬಗ್ಗೆ ಮಾಹಿತಿ ನೀಡಲಾಯಿತು. ಅವರ ಸೂಚನೆಗಳನ್ನು ಅನುಸರಿಸಿ, ಶಾಂತಿಯನ್ನು ಅಂಬುಲೆನ್ಸ್ ಮೂಲಕ ಸದರ್ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಆಕೆ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದಳು.

    ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಶಾಂತಿ ಆರೋಗ್ಯವಾಗಿದ್ದಾಳೆ. ನೋವು ಪ್ರಾರಂಭವಾಗುವ ಮೊದಲು ಆಕೆ ಟಿಕ್ ಮಾದರಿಯ ಪ್ರಶ್ನೆಗಳನ್ನು ಮುಗಿಸಿದ್ದಾಳೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಪತಿ ಬಿರ್ಜು ಸೆಹ್ನಿ ಹೇಳಿದ್ದಾರೆ.

    ಪರೀಕ್ಷೆಯ ಸಮಯದಲ್ಲಿ ದೇವರು ಮಗು ಕರುಣಿಸಿದ್ದಾನೆ. ಈ ಕಾರಣಕ್ಕಾಗಿ ಮಗುವಿಗೆ ‘ಇಮ್ತಿಹಾನ್’ ಎಂದು ಹೆಸರಿಡಲಾಗಿದೆ. ಶಾಂತು ಓದು ಮುಂದುವರಿಸಲಿದ್ದು, ಒಳ್ಳೆಯ ಉದ್ಯೀಗ ಗಿಟ್ಟಿಸಿಕೊಳ್ಳಲು ಬಯಸಿದ್ದಾಳೆ ಎಂದು ಬಿರ್ಜು ತಿಳಿಸಿದ್ದಾರೆ.

  • ಕರೆಂಟ್ ಬಿಲ್ ಹೆಚ್ಚು ಬರುತ್ತಿದೆ ಅಂತ ರೈತ ಆತ್ಮಹತ್ಯೆಗೆ ಶರಣು

    ಕರೆಂಟ್ ಬಿಲ್ ಹೆಚ್ಚು ಬರುತ್ತಿದೆ ಅಂತ ರೈತ ಆತ್ಮಹತ್ಯೆಗೆ ಶರಣು

    – ತಂದೆ ಸಾವಿನ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಗಳು

    ಪಾಟ್ನಾ: ಹೆಚ್ಚು ವಿದ್ಯುತ್ ಬಿಲ್ ಬರುತ್ತಿದೆ ಎಂದು ಖಿನ್ನತೆಗೆ ಒಳಗಾದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ತಂದೆ ಸಾವಿನಿಂದ ಮನನೊಂದ 14 ವರ್ಷದ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮೃತ ವ್ಯಕ್ತಿಗೆ 6 ಹೆಣ್ಣು ಮಕ್ಕಳಿದ್ದಾರೆ. ಇಬ್ಬರ ವಿವಾಹವಾಗಿದೆ, ನಾಲ್ವರು ಹೆಣ್ಣು ಮಕ್ಕಳು ಮನೆಯಲ್ಲಿದ್ದಾರೆ.


    ಹೆಣ್ಣುಮಕ್ಕಳ ವಿವಾಹದ ಬಗ್ಗೆ ಪತಿ ಚಿಂತಿಸುತ್ತಿದ್ದರು. ಹೆಚ್ಚು ವಿದ್ಯುತ್ ಬಿಲ್‍ನಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತವ್ಯಕ್ತಿಯ ಪತ್ನಿ ದಾರಿಗಾಂವ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

    ಮೃತ ರೈತರಿಗೆ ಇರುವ ಸ್ವಲ್ಪ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಸುತ್ತಿದ್ದರು. ಹೀಗಾಗಿ ವಿದ್ಯುತ್ ಪಂಪ್ ಸೆಟ್ ಅನ್ನು ಬಳಸುತ್ತಿದ್ದರು. 2010 ರಲ್ಲಿ ರೈತ ವಿದ್ಯುತ್ ಸಂಪರ್ಕವನ್ನು ತೆಗೆದುಕೊಂಡಿದ್ದಾರೆ. 2014ರಲ್ಲಿ 10,000 ರೂ., 2020ರಲ್ಲಿ 10,000 ರೂ. ಮತ್ತು ಫೆಬ್ರವರಿ ಮೊದಲ ವಾರದಲ್ಲಿ 5,000 ರೂ. ಹಣ ಡೆಪಾಸಿಟ್ ಮಾಡಿದ್ದರು. 23,000 ರೂ. ಬಾಕಿ ಉಳಿಸಿಕೊಂಡಿದ್ದರು. ಆದರೆ ಅವರ ಸಂಪರ್ಕ ಚಾಲನೆಯಲ್ಲಿದೆ. ಆದರೆ ಈ ಕಾರಣಕ್ಕಾಗಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ ಎಂದು ದಕ್ಷಿಣ ಬಿಹಾರ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (ಎಸ್‍ಬಿಪಿಡಿಸಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಮ್ ಕುಮಾರ್ ಪ್ರವೀಣ್ ಹೇಳಿದ್ದಾರೆ.

  • ಪರೀಕ್ಷೆ ಬರೆಯಲು ತೆರಳೋ ವೇಳೆ ಹೆರಿಗೆ ನೋವು- ಮಗುವಿಗೆ ಜನ್ಮ ನೀಡಿ ಎಕ್ಸಾಂ ಬರೆದ ಮಹಿಳೆ

    ಪರೀಕ್ಷೆ ಬರೆಯಲು ತೆರಳೋ ವೇಳೆ ಹೆರಿಗೆ ನೋವು- ಮಗುವಿಗೆ ಜನ್ಮ ನೀಡಿ ಎಕ್ಸಾಂ ಬರೆದ ಮಹಿಳೆ

    ಪಾಟ್ನಾ: ಮಹಿಳೆಯೊಬ್ಬಳು ನವಜಾತ ಶಿಶುವಿಗೆ ಜನ್ಮ ನೀಡಿದ ಬಳಿಕ ಕಾಲೇಜಿಗೆ ತಲುಪಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಬಿಹಾರದ ಮೋತಿಹರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

    ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುವುದಕ್ಕಾಗಿ ಜಿಲ್ಲೆಯ ಡಿಟಿಪಿಎಸ್ ಪರೀಕ್ಷಾ ಕೇಂದ್ರಕ್ಕೆ ತಲುಪುವ ವೇಳೆ ಮಾರ್ಗ ಮಧ್ಯೆ ಕಾಜಲ್‍ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಕೆಯ ಕುಟುಂಬ್ಥರು ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

    ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಕಾಜಲ್ ಸ್ವಲ್ಪ ಚೇತರಿಸಿಕೊಂಡ ನಂತರ ಪರೀಕ್ಷಾ ಕೇಂದ್ರಕ್ಕೆ ತಲುಪಿ ಪ್ರತ್ಯೇಕ ಕೊಠಡಿಯಲ್ಲಿ ಕುಳಿತು ವಿಜ್ಞಾನ ಪರೀಕ್ಷೆಯನ್ನು ಬರೆದಿದ್ದಾರೆ.

    ಕಾಜಲ್ ಬಾಲಾಕೋಟಿಯ ರಾಮ್‍ರೂಪ್ ಬಾಲ್‍ದೇವ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ ಘೋಡಶಾನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿಮುಯಾ ಗ್ರಾಮದ ನಿವಾಸಿ ಚುಂಚುನ್ ಯಾದವ್ ಎಂಬವರನ್ನು ವಿವಾಹವಾಗಿದ್ದರು. ಮದುವೆಯ ನಂತರ ವಿದ್ಯಾಭ್ಯಾಸ ಮುಂದುವರಿಸಿದ ಕಾಜಲ್, ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಪರೀಕ್ಷೆ ಬರೆದಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

    ಅಲ್ಲದೆ ಮಗುವನ್ನು ವೆಂಟಿಲೇಟರ್‌ನಲ್ಲಿಇರಿಸಿ ಕಾಜಲ್ ತನ್ನ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷೆ ಬರೆಯಲು ಕೇಂದ್ರ ಇನ್ಸ್‌ಪೆಕ್ಟರ್ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು ಎಂದು ಹೇಳಿದರು. ಸದ್ಯ ಮಹಿಳೆಗೆ ಓದಿನ ಬಗೆಗೆ ಇರುವ ಉತ್ಸಾಹವನ್ನು ಕಂಡು ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

  • ಹೋಟೆಲ್‍ನಲ್ಲಿ ದಂಪತಿ ನಿಗೂಢ ಸಾವು

    ಹೋಟೆಲ್‍ನಲ್ಲಿ ದಂಪತಿ ನಿಗೂಢ ಸಾವು

    ಪಾಟ್ನಾ: ಗುಂಡು ತಗುಲಿ ದಂಪತಿ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ಸೋಮವಾರ ನಡೆದಿದೆ. ತನಿಖೆ ವೇಳೆ ಮೃತಪಟ್ಟವರು ದಂಪತಿಯಾಗಿದ್ದು, ಪರೀಕ್ಷೆಗಾಗಿ ಮುಜಾಫರ್‍ಪುರ್‍ಗೆ ಬಂದಿದ್ದರು ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.

    ದಂಪತಿ ವಿಚಾರಿಸಲೆಂದು ಹೋಟೆಲ್ ಮ್ಯಾನೇಜರ್ ಚೋಟು ಕುಮಾರ್, ಕೋಣೆ ಬಳಿ ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ ದಂಪತಿ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಹಾಕಿ ಕೋಣೆ ಒಳಗೆ ಪ್ರವೇಶಿಸಿದಾಗ ತಲೆಗೆ ಬುಲೆಟ್ ತಗುಲಿ ದಂಪತಿ ಹಾಸಿಗೆ ಮೇಲೆ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ.

    ಘಟನೆ ಕುರಿತಂತೆ ವಿಚಾರಣೆ ನಡೆಸಲು ಎಫ್‍ಎಸ್‍ಎಲ್ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸತ್ಯ ಬಹಿರಂಗಗೊಳ್ಳಲಿದೆ ಎಂದು ಡಿಎಸ್‍ಪಿ ರಾಮ್ನಾರೇಶ್ ಪಾಸ್ವಾನ್ ತಿಳಿಸಿದ್ದಾರೆ.

  • ಮಾಜಿ ಪ್ರಿಯಕರನ ಕತ್ತು ಹಿಸುಕಿ ಕೊಂದ ಮಹಿಳೆ

    ಮಾಜಿ ಪ್ರಿಯಕರನ ಕತ್ತು ಹಿಸುಕಿ ಕೊಂದ ಮಹಿಳೆ

    ಪಾಟ್ನಾ: 34 ವರ್ಷದ ಮಹಿಳೆಯೊಬ್ಬಳು 21 ವರ್ಷದ ತನ್ನ ಮಾಜಿ ಪ್ರಿಯಕರನನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಮಹಿಳೆಯನ್ನು ಖುದೈಜಾ ಬೇಗಂ ಎಂದು ಗುರುತಿಸಲಾಗಿದ್ದು, ಗರಿಬ್ ಗಂಜ್ ಗ್ರಾಮದ ನಿವಾಸಿಯಾಗಿದ್ದಾಳೆ. ಆಕೆಯ ಪತಿ ಅಸ್ಸಾಂನಲ್ಲಿ ವಾಸವಾಗಿದ್ದು, ಈ ದಂಪತಿ ಎರಡು ಗಂಡು ಮಕ್ಕಳಿವೆ. ಇಬ್ಬರು ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ ಎಂದು ತಿಳಿಸಲಾಗಿದೆ.

    ಬೇಗಂ ಮಾಜಿ ಪ್ರಿಯಕರ ಮೊಹಮ್ಮದ್ ರಂಜಾನ್ ಮದ್ಯಪಾನ ಮಾಡಿ ಆಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಕೋಪಗೊಂಡ ಬೇಗಂ ಮದ್ಯ ರಾತ್ರಿ ಮಲಗಿರುವ ವೇಳೆ ಸ್ಕ್ರಾಫ್‍ನಿಂದ ಆತನ ಕತ್ತು ಹಿಸುಕಿ ಕೊಂದಿದ್ದಾಳೆ.

    ಬಳಿಕ ಮುಂಜಾನೆ ಗೌತಮ್ ಬುದ್ಧ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಚಾರವನ್ನೆಲ್ಲಾ ಪೊಲೀಸರಿಗೆ ವಿವರಿಸಿದ್ದಾಳೆ. ಹಾಗಾಗಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡರು. ಇದೀಗ ಮೃತನ ತಂದೆ ನವಿಜಾನ್(60) ಮಹಿಳೆ ವಿರುದ್ಧ ದೂರು ದಾಖಲಿಸಿದ್ದು, ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಲ್ಲದೆ ಮೃತನ ತಂದೆ, ಬೇಗಂ ತನ್ನ ಮಗನನ್ನು ಕೊಲ್ಲಲೆಂದು ಮನೆಗೆ ಕರೆಸಿಕೊಂಡಿದ್ದಾಳೆ. ಜೊತೆಗೆ ಆರು ತಿಂಗಳ ಹಿಂದೆ ತನ್ನ ಮಗನೊಂದಿಗೆ ಓಡಿಹೋಗಿದ್ದಳು. ಆದರೆ ಕುಟುಂಬದ ಒತ್ತಡದಿಂದ 5 ದಿನಗಳ ನಂತರ ಮನೆಗೆ ಮತ್ತೆ ಹಿಂದಿರುಗಿದ್ದಳು. ತನ್ನ ಮಗನೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುವ ಸಲುವಾಗಿ ಆಕೆ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.

  • ಪ್ರತಿನಿತ್ಯ ಚುಚ್ಚು ಮಾತು – ಅತ್ತೆಯ ಕಣ್ಣು ಕಿತ್ತು ಕೊಲೆಗೈದ ಸೊಸೆ

    ಪ್ರತಿನಿತ್ಯ ಚುಚ್ಚು ಮಾತು – ಅತ್ತೆಯ ಕಣ್ಣು ಕಿತ್ತು ಕೊಲೆಗೈದ ಸೊಸೆ

    – ಅತ್ತೆಯ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಸೊಸೆ

    ಪಾಟ್ನಾ: ಅತ್ತೆಗೆ ಚಾಕುವಿನಿಂದ ಇರಿದು ಕಣ್ಣು ಕಿತ್ತು ಕೊಲೆ ಮಾಡಿದ ಸೊಸೆ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಸಿರುವ ಘಟನೆ ಬಿಹಾರದ ಪಾಟ್ನಾ ಸಮೀಪದ ಪರ್ಸಾ ಬಜಾರ್ ಗ್ರಾಮದಲ್ಲಿ ನಡೆದಿದೆ.

    ಸೊಸೆಯಿಂದ ಹತ್ಯೆಗೊಳಗಾದ ಅತ್ತೆಯನ್ನು ಧರ್ಮಶೀಲ ದೇವಿ ಎಂದು ಗುರುತಿಸಲಾಗಿದೆ. ಅತ್ತೆಯನ್ನು ಹತ್ಯೆಗೈದ ಆರೋಪಿ ಸೊಸೆ ಲಲಿತಾ(33) ಆಗಿದ್ದಾಳೆ. ಮಗು ಇಲ್ಲ ಎಂದು ಮನಬಂದಂತೆ ಮಾತಾಡುತ್ತಿದ್ದ ಅತ್ತೆಯ ಮಾತಿನಿಂದ ಮನನೊಂದ ಸೊಸೆ ಈ ಕೃತ್ಯ ಎಸಗಿದ್ದಾಳೆ.

     

    ಅತ್ತೆ ಚುಚ್ಚು ಮಾತುಗಳಿಂದ ಪ್ರತಿನಿತ್ಯ ಸೊಸೆಗೆ ಕಿರುಕುಳವನ್ನು ನೀಡುತ್ತಿದ್ದಳು. ಮಗುವಾಗಿಲ್ಲ ಎಂಬ ಕೊರಗು ಲಲಿತಾಳಿಗೆ ಇತ್ತು. ಅತ್ತೆಯ ಮಾತುಗಳು ಇನ್ನಷ್ಟು ನೋವನ್ನುಂಟು ಮಾಡುತ್ತಿದ್ದವು. ಈ ಎಲ್ಲಾ ವಿಚಾರದಿಂದ ಮನನೊಂದ ಮಹಿಳೆ ಪತಿ ಮತ್ತು ಮಾವ ಇಲ್ಲದ ಸಮಯವನ್ನು ನೋಡಿಕೊಂಡು ಅತ್ತೆಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಳು.

    ಅತ್ತೆಗೆ ಚಾಕುವಿನಿಂದ ಇರಿದು, ಕಣ್ಣುಗಳನ್ನು ಕಿತ್ತು ಹೊರಗೆ ಎಳೆದು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಇದಾದ ಬಳಿಕ ಸುಮ್ಮನಾಗದ ಸೊಸೆ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ನೆರೆಹೊರೆಯವರು ಬಂದು ಆಕೆಯನ್ನು ರಕ್ಷಿಸಿದ್ದಾರೆ.

  • ಅತ್ಯಾಚಾರ ಎಸಗಿ ಮರದ ಕೊಂಬೆಯನ್ನು ಬಾಲಕಿ ಕಣ್ಣಿಗೆ ತುರುಕಿದ ಕಾಮುಕ!

    ಅತ್ಯಾಚಾರ ಎಸಗಿ ಮರದ ಕೊಂಬೆಯನ್ನು ಬಾಲಕಿ ಕಣ್ಣಿಗೆ ತುರುಕಿದ ಕಾಮುಕ!

    – ಕಣ್ಣು ಕಳೆದುಕೊಂಡ ಸಂತ್ರಸ್ತೆ
    – ಸಾವು-ಬದುಕಿನ ಮಧ್ಯೆ ಹೋರಾಟ

    ಪಾಟ್ನಾ: ವಿಶೇಷ ಚೇತನ ಹುಡುಗಿ ಮೇಲೆ ಅತ್ಯಾಚಾರ ನಡೆಸಿ, ಆಕೆಯ ಕಣ್ಣಿಗೆ ಮರದ ಕೊಂಬೆಯನ್ನು ತುರುಕಿರುವ ಆಘಾತಕಾರಿ ಘಟನೆ ಪಾಟ್ನಾದ ಮಧುಬಾನಿಯಲ್ಲಿ ನಡೆದಿದೆ.

    ಆತ್ಯಾಚಾರಕ್ಕೊಳಗಾದ ಹುಡುಗಿ 17 ವರ್ಷದವಳಾಗಿದ್ದಾಳೆ. ಕಾಮುಕರಿಂದ ಅತ್ಯಾಚಾರಕೊಳಗಾದ ಈಕೆ ತನ್ನ ಕಣ್ಣನ್ನು ಕಳದುಕೊಂಡು ಇದೀಗ ಸಾವು-ಬದುಕಿನ ಮಧ್ಯೆ ಹೋರಾಟವನ್ನು ನಡೆಸುತ್ತಿದ್ದಾಳೆ.

    ಹೊಲದಲ್ಲಿ ದನಗಳನ್ನು ಮೇಯಿಸುತ್ತಿದ್ದ ಹುಡುಗಿ ಇದ್ದ ಸ್ಥಳಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಹುಡುಗಿ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆಕೆಯನ್ನು ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

    ಅತ್ಯಾಚಾರ ಎಸಗಿದ ಆರೋಪಿ ಆಕೆಯನ್ನು ಗುರುತಿಸಲು ಸಾಧ್ಯವಾಗದಷ್ಟು ವಿಕಾರವಾಗಿ ಹಿಂಸೆ ಕೊಟ್ಟಿದ್ದಾನೆ. ಆಕೆಯ ಕಣ್ಣಿಗೆ ಮರದ ಕೊಂಬೆಯನ್ನು ತುರುಕಿದ್ದಾನೆ. ಈ ವೇಳೆ ಹುಡುಗಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಪಾರಾರಿಯಾಗಿದ್ದಾನೆ.

    ಇತ್ತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ಕಂಡವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆಗೆ ಚಿಕಿತ್ಸೆ ನೀಡಿದ ವೈದ್ಯರು ಆಕೆಯ ಸ್ಥಿತಿ ಗಂಭೀರವಾಗಿದ್ದು, ಹುಡುಗಿ ಒಂದು ಕಣ್ಣನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾಳೆ. ಇನ್ನೊಂದು ಕಣ್ಣಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

     ಹುಡುಗಿಯ ಅಂಗವೈಕಲ್ಯದ ಲಾಭವನ್ನು ಪಡೆದುಕೊಂಡ ದುಷ್ಕರ್ಮಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಾತ್ರವಲ್ಲದೆ ಅವಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ಹುಡುಗಿಯ ಸಹೋದರನ ಹೇಳಿಕೆಯ ಆಧಾರದ ಮೇಲೆ ಶಂಕಿತನನ್ನು ವಶಕ್ಕೆ ಪಡೆದಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಪ್ರೇಮ್ ಲಾಲ್ ಪಾಸ್ವಾನ್ ಹೇಳಿದ್ದಾರೆ.