Tag: patients

  • ದೇಶಭಕ್ತರ ವೇಷಭೂಷಣ ತೊಟ್ಟು ರೋಗಿಗಳ ಜೊತೆ ಗಣರಾಜ್ಯೋತ್ಸವ ಆಚರಿಸಿದ ವೈದ್ಯರು

    ದೇಶಭಕ್ತರ ವೇಷಭೂಷಣ ತೊಟ್ಟು ರೋಗಿಗಳ ಜೊತೆ ಗಣರಾಜ್ಯೋತ್ಸವ ಆಚರಿಸಿದ ವೈದ್ಯರು

    ಬೆಳಗಾವಿ: ಸಾಮಾನ್ಯವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರ ಧ್ವಜಾರೋಹಣದ ಮೂಲಕ ಗಣರಾಜ್ಯೋತ್ಸವ ಆಚರಣೆ ಮಾಡಿ ರಜೆ ಇರುವ ಕಾರಣ ತಮ್ಮ ಮನೆ ಮನೆಗಳಿಗೆ ತೆರಳುತ್ತಾರೆ. ಆದರೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಸ್ಪತ್ರೆಯಲ್ಲಿ ಈ ಬಾರಿ ವಿಶೇಷವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.

    ಇಲ್ಲಿನ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಗಣರಾಜ್ಯೋತ್ಸವದ ನಿಮಿತ್ತ ದೇಶಭಕ್ತರ ವೇಷಭೂಷಣ ತೊಟ್ಟು ಆಸ್ಪತ್ರೆಗೆ ಬರುವ ರೋಗಿಗಳಿಗೆ ಗಣರಾಜ್ಯೋತ್ಸವದ ಮಹತ್ವ ಸಾರುತ್ತಿದ್ದಾರೆ. ಮಹಿಳಾ ವೈದ್ಯರು ಹಾಗೂ ಸಿಬ್ಬಂದಿ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಭಾಯಿ, ಓಬವ್ವ ಸೇರಿದಂತೆ ವಿವಿಧ ಮಹಿಳಾ ಸಾಧಕರ ವೇಷಭೂಷಣ ತೊಟ್ಟು ಆಗಮಿಸಿದ್ದಾರೆ.

    ಇತ್ತ ಪುರುಷ ವೈದ್ಯರು ಹಾಗೂ ಸಿಬ್ಬಂದಿ ಮಂಗಲ್ ಪಾಂಡೆ, ಶಿವಾಜಿ, ಬಾಲಗಂಗಾಧರ ತಿಲಕ, ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿವಿಧ ಮಹಾನ್ ದೇಶಭಕ್ತರ ಉಡುಗೆ ತೊಟ್ಟು ಆಗಮಿಸಿ ವಿಶೇಷವಾಗಿ ಗಣರಾಜ್ಯೋತ್ಸವನ್ನು ಆಚರಿಸಿದ್ದಾರೆ. ಒಟ್ಟಿನಲ್ಲಿ ಕಾಟಾಚಾರಕ್ಕೆ ಧ್ವಜಾರೋಹಣ ಮಾಡಿ ಮನೆಗಳಿಗೆ ತೆರಳುವ ಅಧಿಕಾರಿಗಳಿಗೆ ನಿಜಕ್ಕೂ ಹುಕ್ಕೇರಿ ಸರ್ಕಾರಿ ವೈದ್ಯರು ಮಾದರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಸಾದ ಸೇವನೆ ಪ್ರಕರಣ: 101 ರೋಗಿಗಳ ಪೈಕಿ ಮೂವರ ಸ್ಥಿತಿ ಗಂಭೀರ-ಡಿಹೆಚ್‍ಓ

    ಪ್ರಸಾದ ಸೇವನೆ ಪ್ರಕರಣ: 101 ರೋಗಿಗಳ ಪೈಕಿ ಮೂವರ ಸ್ಥಿತಿ ಗಂಭೀರ-ಡಿಹೆಚ್‍ಓ

    ಮೈಸೂರು: ಮಾರಮ್ಮ ದೇವಾಲಯದ ಪ್ರಸಾದ ಸೇವನೆಯಿಂದಾಗಿ ಇದೂವರೆಗೂ ನಗರದಾದ್ಯಂತ 101 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಡಿಎಚ್‍ಓ) ಬಸವರಾಜ್ ತಿಳಿಸಿದ್ದಾರೆ.

    ನಗರದ ಕೆ.ಆರ್. ಆಸ್ಪತ್ರೆಯ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನಾದ್ಯಂತ ಇದುವರೆಗೂ ಒಟ್ಟು 101 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಆಸ್ಪತ್ರೆಗಳಿಂದ 75 ಮಂದಿಯನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಉಳಿದಂತೆ 26 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿಸಿದ್ದೇವೆ. ಇದರಲ್ಲಿನ 3 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

    ಮೀಸೆ ಮಾದಯ್ಯ ಎಂಬ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ನಾರಾಯಣ ಹೃದಯಾಲಯದ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಎಲ್ಲ ರೋಗಿಗಳು ಕ್ಷೇಮವಾಗಿದ್ದಾರೆ. ವಿಷ ಪ್ರಸಾದ ಸೇವನೆಯಿಂದಾಗಿ ಇದುವರೆಗೂ 14 ಮಂದಿ ಮೃತಪಟ್ಟಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.

    ಏನಿದು ಘಟನೆ?
    ಸುಲ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಗೋಪುರದ ಶಂಕುಸ್ಥಾಪನೆ ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದರು. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಕಂಡ ಸ್ಥಳೀಯರು 108 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು.

    ಪ್ರಸಾದದಲ್ಲಿ ಏನಿತ್ತು?
    ಪ್ರಸಾದದ ವರದಿ ಕುರಿತು ಪ್ರತಿಕ್ರಿಯಿಸಿದ್ದ ಐಜಿಪಿ ಶರತ್ ಚಂದ್ರ ಅವರು, ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಮಿಶ್ರಣ ಆಗಿದೆ ಎನ್ನುವ ವರದಿ ಬಂದಿದೆ. ಇದನ್ನು ಕೀಟನಾಶಕ್ಕೆ ಬಳಸುತ್ತಾರೆ. ಗಿಡಕ್ಕೆ ಹುಳು ಮತ್ತು ರೋಗ ಬಂದಾಗ ಈ ಕೀಟನಾಶಕವನ್ನು ಸಿಂಪಡಿಸಲಾಗುತ್ತದೆ. ಇದೇ ಕ್ರಿಮಿನಾಶಕವನ್ನು ಬೆರೆಸಿರುವುದು ಸ್ಪಷ್ಟವಾಗಿದೆ. ಈ ಕುರಿತು ಸದ್ಯಕ್ಕೆ ಅನುಮಾನ ಬಂದಂತಹ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಶ್ಯಕತೆಯಿಲ್ಲದಿದ್ದರೂ 10 ದಿನ ಐಸಿಯುವಿನಲ್ಲಿಟ್ಟರು- ಆಪರೇಷನ್ ವೇಳೆ ರೋಗಿ ಸಾವು

    ಅವಶ್ಯಕತೆಯಿಲ್ಲದಿದ್ದರೂ 10 ದಿನ ಐಸಿಯುವಿನಲ್ಲಿಟ್ಟರು- ಆಪರೇಷನ್ ವೇಳೆ ರೋಗಿ ಸಾವು

    – ಸಿದ್ದಗಂಗಾ ಮಠದ ಹೆಸರೇಳಿಕೊಂಡು ಬಡ ಜನರಿಂದ ಲಕ್ಷ ಲಕ್ಷ ಲೂಟಿ?

    ತುಮಕೂರು: ನಗರದಲ್ಲಿ ನೂತನವಾಗಿ ಆರಂಭವಾದ ಸಿದ್ದಗಂಗಾ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸಿದ್ದಗಂಗಾ ಮಠಕ್ಕೂ ಈ ಆಸ್ಪತ್ರೆಗೂ ಸಂಬಂಧವೇ ಇಲ್ಲದೇ ಇದ್ದರೂ ಮಠದ ಹೆಸರು ಹೇಳಿಕೊಂಡು ಬಡ ಜನರಿಂದ ಲಕ್ಷಲಕ್ಷ ಲೂಟಿ ಮಾಡಿ, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ಕಳೆದ 13 ದಿನದ ಹಿಂದೆ ಗೂಳೂರಿನ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷ ರೇಣುಕಪ್ಪಾಗೆ ಶುಗರ್ ನಿಂದಾಗಿ ಜನನಾಂಗದಲ್ಲಿ ಕೀವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿನಕ್ಕೆ 50 ಸಾವಿರ ರೂ. ಶುಲ್ಕ ಕಟ್ಟಿದರೆ ಮಾತ್ರ ಚಿಕಿತ್ಸೆ ನೀಡುತ್ತೀವಿ ಎಂದು ಆಡಳಿತ ಮಂಡಳಿ ತಾಕೀತು ಮಾಡಿ ದಾಖಲು ಮಾಡಿಕೊಂಡಿದೆ. ಅವಶ್ಯಕತೆ ಇಲ್ಲದೇ ಇದ್ದರೂ 10 ದಿನಗಳ ಕಾಲ ಐಸಿಯುನಲ್ಲಿ ಇರಿಸಿಕೊಂಡಿದ್ದರು. ಆದ್ರೆ ಶುಕ್ರವಾರದಂದು ಆಪರೇಷನ್ ಮಾಡುವಾಗ ರೋಗಿ ರೇಣುಕಪ್ಪಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ರೋಗಿ ಸಾವನಪ್ಪುತ್ತಿದ್ದಂತೆ ಆಪರೇಷನ್ ಮಾಡಿದ ವೈದ್ಯರು ಕಾಲ್ಕಿತ್ತಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತ ರೇಣುಕಪ್ಪಾ ಸಂಬಂಧಿಗಳು ಆರೋಪಿಸಿದ್ದಾರೆ. ಸುಮಾರು 7 ಲಕ್ಷ ರೂ. ಬಿಲ್ ಮಾಡಿ ನಮ್ಮನ್ನು ವಂಚಿಸಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಆಸ್ಪತ್ರೆಯ ಕಟ್ಟಡ ಮಾತ್ರ ಸಿದ್ದಗಂಗಾ ಮಠಕ್ಕೆ ಸಂಬಂಧಿಸಿದ್ದು, ಆದ್ರೆ ಆಡಳಿತ ಎಲ್ಲವೂ ಖಾಸಗಿ ವೈದ್ಯರದ್ದು. ಇದನ್ನೇ ಬಂಡವಾಳವಾಗಿಸಿಕೊಂಡು ಬಡ ರೋಗಿಗಳಿಗೆ ಹೆದರಿಸುತ್ತಾ ಇದ್ದಾರೆ ಅನ್ನೋದು ಸಾರ್ವಜನಿಕರ ಆರೋಪವಾಗಿದೆ. ಆಸ್ಪತ್ರೆ ಆರಂಭವಾಗಿ ಇನ್ನೂ ಒಂದು ವರ್ಷ ಪೂರೈಸುವುದರೊಳಗೆ 10ಕ್ಕೂ ಹೆಚ್ಚು ನಿರ್ಲಕ್ಷ್ಯದಸಾವಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಟ್ಟೆನೂ ತೆಗೆಯಲ್ಲ, ಸ್ಪಿರಿಟ್ಟೂ ಹಚ್ಚಲ್ಲ, ಡೈರೆಕ್ಟಾಗಿ ಇಂಜೆಕ್ಷನ್- ವಿಜಯಪುರದಲೊಬ್ಬ ವಿಚಿತ್ರ ಡಾಕ್ಟರ್

    ಬಟ್ಟೆನೂ ತೆಗೆಯಲ್ಲ, ಸ್ಪಿರಿಟ್ಟೂ ಹಚ್ಚಲ್ಲ, ಡೈರೆಕ್ಟಾಗಿ ಇಂಜೆಕ್ಷನ್- ವಿಜಯಪುರದಲೊಬ್ಬ ವಿಚಿತ್ರ ಡಾಕ್ಟರ್

    ವಿಜಯಪುರ: ಬಟ್ಟೆನೂ ತೆಗೆಯದೇ, ಸ್ಪಿರಿಟ್ ಕೂಡ ಹಚ್ಚದೇ ವೈದ್ಯರೊಬ್ಬರು ಡೈರೆಕ್ಟಾಗಿ ಇಂಜೆಕ್ಷನ್ ನೀಡಿ ರೋಗಿಗಳ ಜೀವನದಲ್ಲಿ ಚೆಲ್ಲಾಟವಾಡಿದ ಘಟನೆ ವಿಜಯಪುರದ ಸ್ಟೇಷನ್ ರಸ್ತೆಯ ಬಳಿ ನಡೆದಿದೆ.

    ಡಾ. ಸಚಿನ್ ವಿಚಿತ್ರ ವೈದ್ಯ. ಸಚಿನ್ ರೋಗಿಗಳ ಬಟ್ಟೆನೂ ತೆಗೆಯದೇ, ಸ್ಪಿರಿಟ್ ಕೂಡ ಹಚ್ಚದೇ ಡೈರೆಕ್ಟಾಗಿ ಬಟ್ಟೆ ಮೇಲಿಂದಾನೆ ನರ ಗುರುತಿಸಿ ಇಂಜೆಕ್ಷನ್ ನೀಡುತ್ತಿದ್ದಾನೆ. ವೈದ್ಯರು ಈ ರೀತಿ ಇಂಜೆಕ್ಷನ್ ನೀಡುತ್ತಿರುವುದನ್ನು ಗಮನಿಸಿದ ರೋಗಿಗಳು ಹೀಗೆ ಮಾಡಬೇಡಿ ಅಂತಾ ಹೇಳಿದ್ರು ಅವರ ಮಾತನ್ನು ಕೇಳುತ್ತಿಲ್ಲ.

    ಈ ಆಸ್ಪತ್ರೆಗೆ ಬರಲು ರೋಗಿಗಳು ಹೆದರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದಲೂ ಡಾ. ಸಚಿನ್ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೇ ಇನ್ಫೆಕ್ಷನ್ ಆಗುವುದಿಲ್ಲ ಎಂದು ರೋಗಿಗಳು ಕೇಳಿದ್ದರೆ ಇಲ್ಲ ಎಂದು ವೈದ್ಯ ಪ್ರತಿಕ್ರಿಯೆ ನೀಡುತ್ತಾರೆ.

    ಈ ಪ್ರಕರಣದ ಬಗ್ಗೆ ಮೈಸೂರಿನ ಕೆ. ಆರ್ ಆಸ್ಪತ್ರೆಯ ಡಾ. ಯೋಗೇಶ್ ಮಾತನಾಡಿ, ಬಟ್ಟೆ ತೆಗೆಯದೇ ಇಂಜೆಕ್ಷನ್ ಹಾಗೇ ನೀಡುವುದರಿಂದ ಬಟ್ಟೆಯಲ್ಲಿರುವ ಧೂಳು, ಬ್ಯಾಕ್ಟೀರಿಯಾ, ಸೋಂಕು ಎಲ್ಲ ದೇಹದೊಳಗೆ ಹೋಗುತ್ತದೆ. ಇದರಿಂದ ಆ ಜಾಗದಲ್ಲಿ ಪ್ಯಾರಲಿಸೀಸ್, ಒಬ್ಸೆಸ್ ಆಗುವ ಸಾಧ್ಯತೆಗಳಿವೆ. ಅಲ್ಲದೇ ಡೆಡ್ಲಿ ಇನ್ಫೆಕ್ಷನ್‍ಗಳಾದ ಸ್ಟೇಟನಸ್, ಗ್ಯಾಸ್ ಗ್ಯಾಂಗ್ರಿನ್ ಆದರೆ ಬದುಕುವುದು ಕಷ್ಟ ಎಂದು ಹೇಳಿದ್ದಾರೆ.

    ಇಂಜೆಕ್ಷನ್ ಅನ್ನು ಇದೇ ಜಾಗದಲ್ಲೇ ಕೊಡಬೇಕು ಎಂದು ಎಂಬಿಬಿಎಸ್ ನಲ್ಲಿ ಹೇಳಿಕೊಡುತ್ತಾರೆ. ಆ ನರಗಳಿಗೆ ಗಾಯಗಳಾಗಬಾರದು ಎಂದು ನರಗಳ ಮೇಲೆ ಇಂಜೆಕ್ಷನ್ ನೀಡಲಾಗುತ್ತದೆ. ಎಲ್ಲಿ ಆ ನರ ಓಡಾಡುತ್ತೆ ಆ ನರಗಳಿಗೆ ಇಂಜೆಕ್ಷನ್ ಕೊಡಿ ಎಂದು ಹೇಳಿಕೊಡಲಾಗುತ್ತದೆ ಎಂದು ಯೋಗೇಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಇಂಪ್ಯಾಕ್ಟ್:
    ವೈದ್ಯನ ಚೆಲ್ಲಾಟದ ವರದಿ ಪಬ್ಲಿಕ್ ಟಿವಿ ಪ್ರಸಾರ ಮಾಡುತ್ತಿದ್ದಂತೆಯೇ ವೈದ್ಯ ಸಚಿನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಎಚ್‍ಒ ರಾಜ್ ಕುಮಾರ್ ಭರವಸೆ ನೀಡಿದ್ದು, ಇಂದೇ ಈ ಕುರಿತು ಪರಿಶೀಲನೆಗೆ ತಂಡ ಕಳುಹಿಸೋದಾಗಿ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಖಾಸಗಿ ಆಸ್ಪತ್ರೆ ಬಂದ್ ಹಿನ್ನೆಲೆ: ಒಪಿಡಿ ಸೇವೆ ಸ್ಥಗಿತ

    ಖಾಸಗಿ ಆಸ್ಪತ್ರೆ ಬಂದ್ ಹಿನ್ನೆಲೆ: ಒಪಿಡಿ ಸೇವೆ ಸ್ಥಗಿತ

    ಬಳ್ಳಾರಿ: ದೇಶಾದ್ಯಂತ ಭಾರತೀಯ ವೈದ್ಯರು ಸಂಘದಿಂದ ನಡೆಯುತ್ತಿರುವ ಮುಷ್ಕರದ ಬಿಸಿ ಬಳ್ಳಾರಿಯಲ್ಲೂ ತಟ್ಟಿದ್ದು, ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಸ್ಥಗಿತಗೊಂಡಿದೆ.

    ಸಂಜೆ ಆರು ಗಂಟೆಯವರೆಗೆ ಸೇವೆ ಸ್ಥಗಿತಗೊಳ್ಳಲಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ತುರ್ತು ಸೇವೆ ಹಾಗೂ ಒಳರೋಗಿ ಸೇವೆ ಮುಂದುವರಿದಿದೆ. ಮುಷ್ಕರ್ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ವೈದ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಡಾ ರಾಮ್ ಪ್ರಸಾತ್ ಮನೋಹರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

    ಸರ್ಕಾರಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆ, ವಿಮ್ಸ್ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳಿಗೆ ರಜೆ ಹಾಕದಂತೆ ಸೂಚನೆ ನೀಡಲಾಗಿದ್ದು, ರೋಗಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡುವಂತೆ ವಿಮ್ಸ್ ಆಸ್ಪತ್ರೆಯ ಡಿಎಚ್‍ಓ ಹಾಗೂ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

    ಪ್ರತಿಭಟನೆ ಏಕೆ:
    ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಮಸೂದೆಯನ್ನು ಜಾರಿಗೆ ತರದಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘವು ಬಂದ್‍ಗೆ ಕರೆ ನೀಡಿದೆ.

    ಏನಿದು ಎನ್‍ಎಂಸಿ ಮಸೂದೆ?:
    ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರ ಹಾಗೂ ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ `ರಾಷ್ಟ್ರೀಯ ವೈದ್ಯಕೀಯ ಆಯೋಗ-2017′ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈಗಿರುವ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ವಿಸರ್ಜಿಸಿ ಅದರ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.

  • ಖಾಸಗಿ ಆಸ್ಪತ್ರೆಗಳು ಬಂದ್-ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳ ಅಲೆದಾಟ!

    ಖಾಸಗಿ ಆಸ್ಪತ್ರೆಗಳು ಬಂದ್-ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳ ಅಲೆದಾಟ!

    ಬಾಗಲಕೋಟೆ: ಜಿಲ್ಲೆಯ ಎಲ್ಲೆಡೆ ಖಾಸಗಿ ಆಸ್ಪತ್ರೆಗಳ ಬಂದ್ ಹಿನ್ನೆಲೆ ಕೆಲವು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.

    ಹಾವು ಕಡಿತಕ್ಕೆ ಒಳಗಾಗಿ ಸಿದ್ದಪ್ಪ ತುಪ್ಪದ ಎಂಬ ವ್ಯಕ್ತಿ ಸೂಕ್ತವಾದ ಚಿಕಿತ್ಸೆ ದೊರೆಯದ ಕಾರಣ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಸಿದ್ದಪ್ಪ ಎಂಬವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿ. ಹಾವಿನ ಕಡಿತಕ್ಕೆ ಒಳಗಾಗಿ, ಅವರನ್ನು ಸ್ಥಳೀಯ ಕಲ್ಲೂರು ಗ್ರಾಮ ಹಾಗೂ ರಾಮದುರ್ಗದಲ್ಲಿ ದಾಖಲಿಸಿದ್ದರು. ಆದರೆ ಅಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಖಾಸಗಿ ಆಸ್ಪತ್ರೆಗೆ ಸಾಗಿಸುವಂತೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸೂಚಿಸಿದರು.

    ಹಾಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಥಮಿಕ ಚಿಕಿತ್ಸೆ ಕೊಟ್ಟರೂ ವೆಂಟಿಲೇಟರ್ ಸೌಲಭ್ಯವಿಲ್ಲದೇ ರೋಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರೋಗಿಯ ಸಂಬಂಧಿಕರು ಆತಂಕದಲ್ಲಿದ್ದಾರೆ.

    ಪ್ರತಿಭಟನೆ ಏಕೆ:
    ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಮಸೂದೆಯನ್ನು ಜಾರಿಗೆ ತರದಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘವು ಬಂದ್‍ಗೆ ಕರೆ ನೀಡಿದೆ.

    ಏನಿದು ಎನ್‍ಎಂಸಿ ಮಸೂದೆ?:
    ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರ ಹಾಗೂ ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ರಾಷ್ಟ್ರೀಯ ವೈದ್ಯಕೀಯ ಆಯೋಗ-2017’ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈಗಿರುವ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ವಿಸರ್ಜಿಸಿ ಅದರ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.

  • 21 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾದ್ರೂ ಸೋರುವ ಕಟ್ಟಡದಲ್ಲೇ ಶಿಶು, ಬಾಣಂತಿಯರು!

    21 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾದ್ರೂ ಸೋರುವ ಕಟ್ಟಡದಲ್ಲೇ ಶಿಶು, ಬಾಣಂತಿಯರು!

    ಮಂಗಳೂರು: ನಗರದ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳು ಮಳೆಗಾಲದಲ್ಲಿ ಪಡುವ ದುಸ್ಥಿತಿ ಯಾರಿಗೂ ಬೇಡ.

    ಹಳೆ ಆಸ್ಪತ್ರೆ ಎದುರಲ್ಲೇ ಹೊಸ ಆಸ್ಪತ್ರೆ ಕಟ್ಟಡ ರೆಡಿಯಾಗಿದೆ. ಎಂಆರ್ ಪಿಎಲ್ ಸಹಯೋಗದಲ್ಲಿ 21 ಕೋಟಿ ವೆಚ್ಚದಲ್ಲಿ 290 ಹಾಸಿಗೆ ಸಾಮಥ್ರ್ಯದ ಆರು ಅಂತಸ್ತಿನ ಬೃಹತ್ ಆಸ್ಪತ್ರೆ ತಲೆಯೆತ್ತಿ ನಿಂತಿದೆ. ಕಟ್ಟಡದ ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿದೆ. ಆದರೆ ಇನ್ನು ಉದ್ಘಾಟನೆ ಭಾಗ್ಯ ಮಾತ್ರ ದೊರೆತಿಲ್ಲ. ಅಲ್ಲದೇ ಆಸ್ಪತ್ರೆಗೆ ಅಗತ್ಯವುಳ್ಳ ಸಾಮಾಗ್ರಿಗಳೂ ಪೂರೈಕೆಯಾಗಿಲ್ಲ. ಹೀಗಾಗಿ ಬಾಣಂತಿಯರು ಸೇರಿದಂತೆ ಈಗತಾನೆ ಹುಟ್ಟಿದ ಶಿಶುಗಳನ್ನು ಹಳೆ ಕಟ್ಟಡದ ನೆಲದಲ್ಲಿಯೇ ಹಾಸಿಗೆ ಹಾಸಿಕೊಂಡು ಮಲಗಿಸಿದ್ದಾರೆ.

    ಒಂದುಕಡೆ ಸೋರುವ ಕಟ್ಟಡ, ಮತೊಂದೆಡೆ ಮಳೆ ನೀರಿನ ಹೊಡೆತ, ಸೊಳ್ಳೆ ಕಡಿತ ಇವೆಲ್ಲವನ್ನೂ ಸಹಿಸಿಕೊಂಡು ಬಡ ರೋಗಿಗಳು ಕಾಲ ಕಳೆಯಬೇಕು. ಬಾಣಂತಿಯರಿಗೆ ಯಾವುದೇ ಕಾರಣಕ್ಕೂ ಮಳೆಯ ಹೊಡೆತ ತಾಗದಂತೆ ಜಾಗ್ರತೆ ವಹಿಸಬೇಕು. ಆದರೆ ಈ ಆಸ್ಪತ್ರೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೊಸ ಆಸ್ಪತ್ರೆ ಕಟ್ಟಡ ರೆಡಿಯಾಗಿದ್ರೂ, ಇನ್ನೂ ಸ್ಥಳಾಂತರ ಮಾಡಿಲ್ಲ.

    ಹಳೆಯ ಹಂಚಿನ ಕಟ್ಟಡದಲ್ಲಿ ಮಳೆಯ ಹೊಡೆತದ ಮಧ್ಯೆಯೇ ಬಡ ರೋಗಿಗಳನ್ನು ಸತಾಯಿಸುತ್ತಿದ್ದಾರೆ. ಹಳೆ ಕಟ್ಟಡದ ಒಂದು ಭಾಗದಲ್ಲಂತು ಮಳೆಗೆ ಅಡ್ಡಲಾಗಿ ಟರ್ಪಾಲ್ ಹೊದಿಕೆ ಹಾಕಿದ್ದು, ಒಳಭಾಗದಲ್ಲಿ ಬಾಣಂತಿಯರ ಶುಶ್ರೂಷೆ ಹೇಗಿರುತ್ತೋ ಗೊತ್ತಿಲ್ಲ. ಇದಲ್ಲದೆ ಸಿಸೇರಿಯನ್ ಆದವರೂ ಇದೇ ಶೀತ ಕಾರುವ ನೆಲದಲ್ಲಿ ದಿನ ದೂಡವ ಪರಿಸ್ಥತಿ ಎದುರಾಗಿದೆ.

  • ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಅಮಾನವೀಯ – ಹೀನಾಯ ಸ್ಥಿತಿಯಲ್ಲಿ ಮಾನಸಿಕ ರೋಗಿಯ ಬಂಧನ

    ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಅಮಾನವೀಯ – ಹೀನಾಯ ಸ್ಥಿತಿಯಲ್ಲಿ ಮಾನಸಿಕ ರೋಗಿಯ ಬಂಧನ

    ಮೈಸೂರು: ಇಬ್ಬರು ಮಾನಸಿಕ ರೋಗಿಗಳನ್ನ ಕೊಠಡಿಯಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ನಡೆದಿದೆ.

    ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ 2ನೇ ಮಹಡಿಯಲ್ಲಿಯ ಕೊಠಡಿಯಲ್ಲಿ ಇಬ್ಬರು ಮಾನಸಿಕ ರೋಗಿಗಳನ್ನು ಬಂಧನದಲ್ಲಿ ಇರಿಸಲಾಗಿದೆ. ಕೊಠಡಿಗಳು ಕೆಆರ್ ಆಸ್ಪತ್ರೆ ನಿರ್ವಹಣೆಗೆ ಒಳಪಟ್ಟಿದೆ.

    ಕೊಠಡಿಯಲ್ಲಿ ಕೂಡಿ ಹಾಕಿರುವ ಇಬ್ಬರು ಮಾನಸಿಕ ರೋಗಿಗಳಿಗೂ ಯಾವುದೇ ಶುಶ್ರೂಷೆಯನ್ನು ನೀಡಿಲ್ಲ. ಇನ್ನು ರೋಗಿಗಳಿಗೆ ಯಾರು ವಾರಸುದಾರರಿಲ್ಲದೆ ಇರುವುದರಿಂದ ಪ್ರಾಣಿಗಳಿಗಿಂತ ಹೀನವಾಗಿ ನೋಡಿಕೊಳ್ಳಲಾಗಿದೆ. ರೋಗಿಗಳು ಕುಳಿತಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿಕೊಂಡಿದ್ದು, ಸ್ಪಚ್ಚತೆ ಎಂಬುವುದು ಮರೀಚಿಕೆಯಾಗಿದೆ.

  • ಬೋರ್ ಆಯ್ತೆಂದು 100ಕ್ಕೂ ಹೆಚ್ಚು ರೋಗಿಗಳನ್ನ ಕೊಂದ ನರ್ಸ್!

    ಬೋರ್ ಆಯ್ತೆಂದು 100ಕ್ಕೂ ಹೆಚ್ಚು ರೋಗಿಗಳನ್ನ ಕೊಂದ ನರ್ಸ್!

    ಬರ್ಲಿನ್: ಜರ್ಮನಿಯ ನರ್ಸ್‍ವೊಬ್ಬ ಬೋರ್ ಆಯ್ತೆಂದು ಮಾರಣಾಂತಿಕ ಔಷಧಿ ಬಳಸಿ 106 ರೋಗಿಗಳ ಸಾವಿಗೆ ಕಾರಣನಾಗಿದ್ದಾನೆಂದು ಗುರುವಾರದಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈತ ಇನ್ನೂ ಹೆಚ್ಚಿನ ರೋಗಿಗಳನ್ನ ಹತ್ಯೆ ಮಾಡಿರಬಹುದು. ಇನ್ನೂ ಹಲವು ಶವಗಳ ಅಧ್ಯಯನ ಮಾಡಲಾಗ್ತಿದೆ ಎಂದು ಹೇಳಿದ್ದಾರೆ.

    41 ವರ್ಷದ ನೀಲ್ಸ್ ಹೋಗೆಲ್ ವಿರುದ್ಧ 2015ರಲ್ಲಿ 2 ಕೊಲೆ ಹಾಗೂ 4 ಕೊಲೆ ಯತ್ನ ಪ್ರಕರಣಗಳ ಆರೋಪ ಸಾಬೀತಾಗಿತ್ತು. ಇಲ್ಲಿನ ಬ್ರೆಮೆನ್‍ನ ಡೆಲ್ಮೆನ್‍ಹೋರ್ಸ್ಟ್  ಆಸ್ಪತ್ರೆಯಲ್ಲಿ ಈತ ತೀವ್ರ ನಿಗಾ ಘಟಕದಲ್ಲಿನ ರೋಗಿಗಳನ್ನ ಕೊಲೆ ಮಾಡಿದ್ದ.

    ಈ ಪ್ರಕರಣಗಳ ವಿಶ್ಲೇಷಣೆ ವೇಳೆ ಮತ್ತಷ್ಟು ಜನ ಕೊಲೆಯಾಗಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿವೆ. ಆಗಸ್ಟ್ ನಲ್ಲಿ ಹೋಗೆಲ್ 90ಕ್ಕೂ ಹೆಚ್ಚು ಇತರೆ ರೋಗಿಗಳನ್ನ ಕೊಂದಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಈತ 1999ರಿಂದ 2005ವರೆಗೆ 2 ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದು, ಗುರುವಾರದಂದು ಪೊಲೀಸರು ಈತನಿಂದಾದ ಇನ್ನೂ 16 ಸಾವಿನ ಬಗ್ಗೆ ಖಚಿತಪಡಿಸಿದ್ದಾರೆ. ಇನ್ನೂ 5 ಇತರೆ ಪ್ರಕರಣಗಳ ಬಗ್ಗೆ ಟಾಕ್ಸಿಕಾಲಜಿ ಅಧ್ಯಯನ ನಡೆಯುತ್ತಿದ್ದು, ಮತ್ತಷ್ಟು ಸಾವಿನ ಬಗ್ಗೆ ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ರೋಗಿಗಳಿಗೆ ಹೃದಯಾಘಾತ ಅಥವಾ ರಕ್ತಪರಿಚಲನೆಯ ಕುಸಿತ ಉಂಟಾಗಬಹುದಾದಂತಹ ಔಷಧಿ ಇಂಜೆಕ್ಟ್ ಮಾಡಿದ್ದನ್ನು ಹೋಗಲ್ ಒಪ್ಪಿಕೊಂಡಿದ್ದಾನೆ. ಈ ರೀತಿ ಮಾಡಿ ನಂತರ ಅವರನ್ನು ಬದುಕಿಸಲು ಪ್ರಯತ್ನ ಪಟ್ಟು, ಒಂದು ವೇಳೆ ಯಶಸ್ವಿಯಾದ್ರೆ ಜೀವ ಉಳಿಸಿದವನೆಂದು ಎಲ್ಲರ ಮುಂದೆ ಮಿಂಚಬಹುದು ಎನ್ನುವುದು ಈತನ ಆಲೋಚನೆಯಾಗಿತ್ತು. ಇನ್ನೂ ಕೆಲವೊಮ್ಮೆ ಈತ ಬೇಜಾರಿನಿಂದಾಗಿ ಈ ರೀತಿ ಮಾಡುತ್ತಿದ್ದ ಎಂದು ವರದಿಯಾಗಿದೆ.

    ಜರ್ಮನಿಯ ಇತಿಹಾಸದಲ್ಲೇ ಇದೊಂದು ಅಪರೂಪದ ಪ್ರಕರಣ. ಹೋಗಲ್ ಒಂದೇ ಮಾದರಿಯಲ್ಲಿ ರೋಗಿಗಳನ್ನ ಕೊಲ್ಲುತ್ತಿದ್ದ. ಅದರಲ್ಲೂ ಸಾವಿನ ಅಂಚಿನಲ್ಲಿದ್ದ ರೋಗಿಗಳನ್ನೇ ಬಲಿಪಶುಗಳನ್ನಾಗಿಸಿಕೊಳ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನಿಗೆ ಎಲ್ಲಾ ಪ್ರಕರಣಗಳೂ ನೆನಪಿಲ್ಲ. ಆದ್ರೆ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರೋಗಿಗಳು ಮತ್ತು ಆತನ ವರ್ತನೆ ಬಗ್ಗೆ ನೆನಪಿಸಿಕೊಳ್ಳುತ್ತಾನೆ ಎಂದು ಪ್ರಾಸಿಕ್ಯೂಟರ್ ಡೇನಿಯಲ್ ಹೇಳಿದ್ದಾರೆ.

    2005ರ ಜೂನ್‍ನಲ್ಲಿ ಹೋಗೆಲ್ ಡೆಲ್ಮೆನ್‍ಹೋಸ್ರ್ಟ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಇಂಜೆಕ್ಟ್ ಮಾಡುತ್ತಿದ್ದುದನ್ನು ಮಹಿಳಾ ನರ್ಸ್‍ವೊಬ್ಬರ ನೋಡಿದ ನಂತರ ಈತನ ಕೃತ್ಯ ಬೆಳಕಿಗೆ ಬಂದಿತ್ತು. ಆ ರೋಗಿ ಬದುಕುಳಿದಿದ್ದು, 2008ರ ಜೂನ್‍ನಲ್ಲಿ ಹೋಗೆಲ್‍ನನ್ನು ಬಂಧಿಸಲಾಗಿತ್ತು. ಕೊಲೆ ಯತ್ನದ ಹಲವು ಪ್ರಕರಣಗಳಲ್ಲಿ ಈತನಿಗೆ ಏಳೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

    ಈ ಬಗ್ಗೆ ಸುದ್ದಿಯಾದ ನಂತರ ಮಹಿಳೆಯೊಬ್ಬರು ತನ್ನ ತಾಯಿಯೂ ಈ ಕಿಲ್ಲರ್ ನರ್ಸ್‍ನ ಕೃತ್ಯಕ್ಕೆ ಬಲಿಯಾಗಿರಬಹುದು ಎಂಬ ಸಂಶಯದಿಂದ ಪೊಲೀಸರ ಮೊರೆ ಹೋಗಿದ್ದರು. ನಂತರ ಅಧಿಕಾರಿಗಳು ಹಲವು ರೋಗಿಗಳ ಶವಪರೀಕ್ಷೆ ನಡೆಸಿದ್ದು, ಐದು ಶವಗಳಲ್ಲಿ ವಿಷಕಾರಿ ಡ್ರಗ್ಸ್ ಅಂಶ ಪತ್ತೆಯಾಗಿತ್ತು.

    2015ರಲ್ಲಿ ಹೋಗೆಲ್‍ಗೆ ಜೀವಾವಧಿ ಶಿಕ್ಷೆ ವಿಧಿಸಲಾಯ್ತು. ಈ ವೇಳೆ ಈತ ಮತ್ತಷ್ಟು ರೋಗಿಗಳನ್ನ ಕೊಲೆ ಮಾಡಿರಬಹುದು ಎಂಬುದು ಸ್ಪಷ್ಟವಾಗಿತ್ತು. ಹಲವು ಶವಗಳನ್ನ ಅದಾಗಲೇ ಅಂತ್ಯಕ್ರಿಯೆ ಮಾಡಲಾಗಿದ್ದರಿಂದ ಈತನಿಂದ ಕೊಲೆಯಾದವರ ನಿರ್ದಿಷ್ಟ ಸಂಖ್ಯೆಯ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದರು.

  • ರೋಗಿಗಳಿಗೂ ತಟ್ಟಿದ ಮಳೆ ಎಫೆಕ್ಟ್- ಆಸ್ಪತ್ರೆ ಕೆಳಮಹಡಿ ಸಂಪೂರ್ಣ ಜಲಾವೃತ

    ರೋಗಿಗಳಿಗೂ ತಟ್ಟಿದ ಮಳೆ ಎಫೆಕ್ಟ್- ಆಸ್ಪತ್ರೆ ಕೆಳಮಹಡಿ ಸಂಪೂರ್ಣ ಜಲಾವೃತ

    – ಇನ್ನೂ ಎರಡು ದಿನ ಮಳೆ ಮುಂದುವರೆಯುವ ಸಾಧ್ಯತೆ

    ಬೆಂಗಳೂರು: ನಗರದಲ್ಲಿ ಮಳೆ ಎಫೆಕ್ಟ್ ರೋಗಿಗಳಿಗೂ ತಟ್ಟಿದೆ. ಎಚ್‍ಎಸ್‍ಆರ್ ಲೇಔಟ್ ನ ಗ್ರೀನ್ ವ್ಯೂ ಆಸ್ಪತ್ರೆ ಕೆಳಮಹಡಿ ಸಂಪೂರ್ಣ ಜಲಾವೃತವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

    ಆಸ್ಪತ್ರೆ ಕೆಳಮಹಡಿಯಲ್ಲಿ ಬೈಕ್ ಗಳು, ಆಕ್ಸಿಜನ್ ಸಿಲಿಂಡರ್‍ಗಳು ನೀರಿನಲ್ಲಿ ಮುಳುಗಿವೆ. ಗ್ರೀನ್ ವ್ಯೂ ಆಸ್ಪತ್ರೆಯ ಐಸಿಯುನಲ್ಲಿದ್ದ ಇಬ್ಬರು ರೋಗಿಗಳನ್ನ ಮಾರ್ವೆಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೆಳಮಹಡಿಯಲ್ಲಿದ್ದ ಡಯಾಲಿಸಿಸ್ ಸಂಪೂರ್ಣ ಜಲಾವೃತವಾಗಿದೆ. ಅಗ್ನಿಶಾಮಕ ವಾಹನದ ಸಹಾಯದಿಂದ ಆಸ್ಪತ್ರೆ ಸಿಬ್ಬಂದಿ ಕೆಳಮಹಡಿಯಿಂದ ನೀರನ್ನ ಹೊರಕಾಕುತ್ತಿದ್ದಾರೆ.

    ಇನ್ನೆರಡು ದಿನ ಮಳೆ: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ತಮಿಳುನಾಡು ಹಾಗೂ ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ರಾಜ್ಯದ ಕೆಲ ಭಾಗದಲ್ಲಿ ಮಾತ್ರ ಮಳೆಯಾಗತ್ತಿದೆ. ಬೆಂಗಳೂರು, ಮೈಸೂರು ,ಚಾಮರಾಜಪೇಟೆ ಭಾಗದಲ್ಲಿ ಮಾತ್ರ ಮಳೆಯಾಗುತ್ತಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಬೆಂಗಳೂರಿನ ಅರಾಧ್ಯನ ಲೇಔಟ್ ಹಾಗೂ ಈಜಿಪುರದಲ್ಲಿ ಮನೆಗೆ ನೀರು ನುಗ್ಗಿದೆ. ಕಾರು, ಬೈಕ್ ಜಲಾವೃತವಾಗಿವೆ. ಶಾಂತಿನಗರದ ಕೆಎಸ್‍ಆರ್‍ಟಿಸಿ ವಸತಿ ನಿಲಯ ಜಲಾವೃತವಾಗಿದೆ. ಎಚ್‍ಎಸ್‍ಆರ್ ಲೇಔಟ್ ನ ಏಳನೇ ಹಂತದಲ್ಲಿ ನೆರೆ ಬಂದಿರೋ ವಾತಾವರಣ ನಿರ್ಮಾಣವಾಗಿದೆ. ಮ್ಯಾನ್ ಹೋಲ್ ಗಳು ಓಪನ್ ಆಗಿ ರಸ್ತೆ ತುಂಬೆಲ್ಲಾ ಕೊಳಚೆ ನೀರು ಹರಿಯುತ್ತಿದೆ. ಜನ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಭೇಟಿ ನೀಡಿ ಜನರ ಅಹವಾಲು ಆಲಿಸಿ ನೀರನ್ನ ಹೊರಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಜೆಟ್ಟಿಂಗ್ ಮಷಿನ್ ತಂದು ನೀರನ್ನ ಹೊರಹಾಕುವಂತೆ ಸೂಚನೆ ನೀಡಲಾಗಿದೆ. ಈ ಪ್ರಮಾಣದಲ್ಲಿ ಮಳೆಯಾಗತ್ತೆ ಅಂತ ನಿರೀಕ್ಷಿಸಿರಲಿಲ್ಲ. ರಾತ್ರಿಯಿಂದಲೇ ಜನ ಕಂಪ್ಲೇಂಟ್ ಮಾಡೋಕೆ ಶುರುಮಾಡಿದ್ರು, ತಕ್ಷಣಕ್ಕೆ ಸ್ಪಂದಿಸುತ್ತಿದ್ದೇವೆ. ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಸೂಚಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ಬಹುತೇಕ ಕಡೆ ಇದೇ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸುವ ಕೆಲಸ ತಕ್ಷಣಕ್ಕೆ ಮಾಡ್ತೇವೆ ಅಂತ ಪಬ್ಲಿಕ್ ಟಿವಿಗೆ ಶಾಸಕ ಸತೀಶ್ ರೆಡ್ಡಿ ಹೇಳಿಕೆ ನೀಡಿದ್ರು.

    ಭಾರಿ ಮಳೆ ಹಿನ್ನಲೆಯಲ್ಲಿ ಮೇಯರ್ ಪದ್ಮಾವತಿ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ರಾತ್ರಿ ಇಡೀ ಭಾರಿ ಮಳೆಯಾಗಿದೆ. ಬಿಬಿಎಂಪಿಗೆ ಸಾಕಷ್ಟು ಕರೆಗಳು ಬರತ್ತಿವೆ. ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿದೆ. ನೀರು ನುಗ್ಗಿದ ಪ್ರದೇಶಗಳಲ್ಲಿ ಪಂಪ್ ಮೂಲಕ ನೀರನ್ನು ತೆರವು ಮಾಡುವ ಕೆಲಸವನ್ನು ನಮ್ಮ ಸಿಬ್ಬಂದಿ ಮಾಡಲಿದ್ದಾರೆ. ನಮ್ಮ ಒಂಭತ್ತು ತಂಡ ನೀರನ್ನು ಹೊರಹಾಕಲು ಸಿದ್ಧವಾಗಿದೆ ಎಂದು ಹೇಳಿದ್ರು. ಜೆಸಿ ರೋಡ್ ಕುಂಬಾರಗುಂಡಿಗೆ ಮೇಯರ್ ಪದ್ಮಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬೆಂಗಳೂರು ದಕ್ಷಿಣ ಭಾಗದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಬೆಳಗಿನ ಜಾವ 5ರ ವೇಳೆಗೆ 100 ಎಂಎಂ ಮಳೆಯಾಗಿದೆ. 64.5 ಎಂಎಂ ಮಳೆಯಾದರೆ ಅದನ್ನ ಭಾರೀ ಮಳೆ ಎಂದು ಪರಿಗಣಿಸಲಾಗುತ್ತದೆ. ಆದ್ರೆ ಬೆಂಗಳೂರಲ್ಲಿ ದಾಖಲೆಯ 100 ಎಂಎಂ ಗೂ ಹೆಚ್ಚು ಮಳೆಯಾಗಿದೆ. ಮಹದೇವಪುರ, ಕೆ.ಆರ್ ಪುರ, ಎಚ್‍ಎಸ್‍ಆರ್ ಲೇಔಟ್, ಬನ್ನೇರುಘಟ್ಟ ಭಾಗದಲ್ಲಿ 100 ಎಂಎಂ ಗೂ ಹೆಚ್ಚು ಮಳೆಯಾಗಿದೆ. ಬೆಂಗಳೂರು, ಮೈಸೂರು ರಾಮನಗರದಲ್ಲಿ ಹೆಚ್ಚು ಮಳೆಯಾಗಿದ್ದು, ನಿರೀಕ್ಷೆಗೂ ಮೀರಿದ ಮಳೆಗೆ ಬೆಂಗಳೂರು ಸಾಕ್ಷಿಯಾಗಿದೆ.